Thursday 29 March 2012

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಇತ್ತೀಚೆಗಷ್ಟೇ ಧಾಮರ್ಿಕ ಗುರು ರವಿಶಂಕರ್ ಗುರೂಜಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ವಿವಾದಾದ್ಮಕ ಹೇಳಿಕೆ ನೀಡಿದ್ದರು. ಒಂದು ಹಂತಕ್ಕೆ ಈ ಹೇಳಿಕೆ ಕೆಲ ಸಕರ್ಾರಿ ಅಭಿಯೋಜಕರ ಟೀಕೆಗೂ ಗುರಿಯಾಗಿತ್ತು. ಈ ರೀತಿಯ ಹೇಳಿಕೆ ನೀಡಿದ ರವಿಶಂಕರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಕೊಂಡ ಸಾಚಾತನವಾದರೂ ಏನು ಎನ್ನುವುದನ್ನು ಅರಿಯಬೇಕಿದೆ. ತಾನು ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದೇ ಇವರ ಈ ಹೇಳಿಕೆಗೆ ಕಾರಣವಾಗಿರಬಹುದು. ಸಕರ್ಾರಿ ಶಾಲೆಗಳು ಹಳ್ಳ ಹಿಡಿಯುತ್ತಿರುವ ಈ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಸರನ್ನು ರಾರಾಜಿಸುವಂತೆ ಮಾಡುವುದೇ ಇವರ ಉದ್ದೇಶವಾಗಿರಲೂ ಬಹುದು.
ಸಕರ್ಾರಿ ಶಾಲೆಗಳನ್ನು ದೂರುವ ಬದಲು ಖಾಸಗಿ ಮತ್ತು ಸಕರ್ಾರಿ ಶಿಕ್ಷಣ  ಸಂಸ್ಥೆಗಳ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಿ. ಸಕರ್ಾರಿ ಶಾಲೆಗಳಲ್ಲಿ ಕಲಿತು ಎಷ್ಟು ಮಂದಿ ನಕ್ಸಲರಾಗಿದ್ದಾರೋ ಗೊತ್ತಿಲ್ಲ. ಆದರೆ ಸಕರ್ಾರಿ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ದೇಶದ ಮೂಲೆಮೂಲೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದು ಸತ್ಯ. ಅಷ್ಟೇ ಯಾಕೆ? 1999ರಲ್ಲಿ ಇದೇ ರವಿಶಂಕರ್ ಗುರೂಜಿಯಿಂದ ಸ್ಥಾಪನೆಯಾದ ಶ್ರೀರವಿಶಂಕರ ವಿದ್ಯಾಮಂದಿರದಲ್ಲಿ ವಿದ್ಯಾಥರ್ಿಗಳಿಗೆ ಕಲಿಸುತ್ತಿರುವ ಎಲ್ಲಾ ಶಿಕ್ಷಕರು ಖಾಸಗಿ ಶಾಲೆಗಳಲ್ಲಿಯೇ ಕಲಿತವರೇ? ಇವರಲ್ಲಿ ಯಾರೊಬ್ಬರೂ ಸಕರ್ಾರಿ ಶಾಲೆಗಳಲ್ಲಿ ಕಲಿತಿಲ್ಲವೇ? ನೆನಪಿರಲಿ. ಹಿಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಸಕರ್ಾರಿ ಅಧೀನದಲ್ಲೇ ಇದ್ದವು. ಅಷ್ಟೇ ಯಾಕೆ? ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಪದ್ದತಿಗೆ ಮೂಲ ಸಕರ್ಾರಿ ಶಿಕ್ಷಣವೇ. ಈಗಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಬಸ್ ಒದಗಿಸಬಹುದು, ಆಧುನಿಕ ಶಿಕ್ಷಣ ಪದ್ದತಿ ಕಾರ್ಯಕತಗೊಳಿಸಬಹುದು, ಇಲ್ಲವೇ ಪ್ರಯೋಗಗಳ ಮೂಲಕ ಮಕ್ಕಳ ಬುದ್ದಿಮತ್ತೆ ಹೆಚ್ಚಿಸುವ ಕೆಲಸ ಮಾಡಬಹುದು. ಇವುಗಳಲ್ಲಿ ಮಾತ್ರ ಸಕರ್ಾರಿ ಮತ್ತು ಖಾಸಗಿ ಶಾಲೆಗಳಿಗೆ ವ್ಯತ್ಯಾಸ ಇರುವುದನ್ನು ಬಿಟ್ಟರೆ, ಬೇರ್ಯಾವ ವಿಧದಲ್ಲೂ ಇವುಗಳನ್ನು ವಿಭಜಿಸಿ ನೋಡುವಂತಿಲ್ಲ. ಒಂದು ವಿಧದಲ್ಲಿ ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಂದ ನಮ್ಮ ದೇಶಕ್ಕೆ ಎಳ್ಳಷ್ಟೂ ಲಾಭವಿಲ್ಲ. ಡಾಕ್ಟರ್, ಎಂಜಿನಿಯರ್ ಮಾಡಿಕೊಂಡು ವಿದೇಶದ ವಿಮಾನ ಹತ್ತುವವರೇ ನಮ್ಮಲ್ಲಿ ಹೆಚ್ಚಿದ್ದಾರೆ. ಆದರೆ ಸಕರ್ಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರು ಐಎಎಸ್, ಐಪಿಎಸ್ ಮಾಡಿಕೊಂಡೋ ಅಥವಾ ಇಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡೋ ದೇಶದಲ್ಲೇ ಉಳಿದು ದೇಶ ಸೇವೆ ಮಾಡುತ್ತಾರೆ. ಇದನ್ನು ಮೊದಲು ನಮ್ಮ ಧಾಮರ್ಿಕ ನಾಯಕರು ಅರಿತು ಕೊಳ್ಳಲಿ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾಥರ್ಿಗಳು ಬಾವಿಯೊಳಗಿನ ಕಪ್ಪೆ ಎನ್ನುವುದು ನೆನಪಿರಲಿ. ಇವರಿಗೆ ಅತಿಯಾಗಿ ವಿಧಿಸುವ ಇತಿಮಿತಿಗಳೇ ಇದಕ್ಕೆ ಕಾರಣ. ಆದರೆ ಸಕರ್ಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಒಂದು ರೀತಿ ಸ್ವಚ್ಚಂದ ಹಕ್ಕಿಗಳಿದ್ದಂತೆ. ಪುಸ್ತಕದ ವಿಚಾರಕ್ಕಿಂತ ಸಾಮಾನ್ಯ ಜ್ಞಾನವೇ ಇವರಲ್ಲಿ ಹೆಚ್ಚಿರುತ್ತದೆ. ಹಾಗಾಗಿಯೇ ಇಂದು ಬಹುತೇಕ ಆಡಳಿತಾತ್ಮಕ ಹುದ್ದೆಗಳಲ್ಲಿ ಸಕರ್ಾರಿ ಶಾಲೆಯಲ್ಲಿ ಕಲಿತವರೇ ಇರುವುದು. ಎಲ್ಲವನ್ನೂ ಶ್ರೀಮಂತಿಕೆಯ ಮೇಲೆ ಅಳೆಯುವ ಕೆಲವರಿಗೆ ಇದೆಲ್ಲಾ ಹೇಗೆ ತಾನೇ ಅರ್ಥವಾಗಬೇಕು.
ಇವರುಗಳ ದೃಷ್ಟಿಯಲ್ಲಿ ದೇಶದ ವಿಚಾರದಲ್ಲಿ ಮೂಗು ತೂರಿಸುವವರು ನಕ್ಸಲರು, ಉಗ್ರಗಾಮಿಗಳು! ಅದೇ ತಮ್ಮ ಸ್ವಹಿತಾಸಕ್ತಿಗಾಗಿ ಡಾಕ್ಟರ್, ಎಂಜಿನಿಯರ್ ಆಗುವವರು ಮಹಾ ಮೇಧಾವಿಗಳು. ಒಂದು ನೆನಪಿಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವವರು ತಮ್ಮ ಸ್ವಹಿತಾಸಕ್ತಿಯನ್ನೇ ಯೋಚಿಸುತ್ತಾರೆಯೇ ವಿನಃ ಅವರಿಗೆ ದೇಶದ ಬಗ್ಗೆಯಾಗಲೀ ಸಮಾಜದ ಬಗ್ಗೆಯಾಗಲೀ ಚಿಂತನೆಗಳಿರುವುದಿಲ್ಲ. ಎಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿರುವುದರ ಪರಿಣಾಮ ಇಂದು ನಿಧಾನವಾಗಿ ನಮಗೆ ಗೋಚರವಾಗುತ್ತಿದೆ. ಇದರ ಪರಿಣಾಮವಾಗಿಯೇ ಇಂದು ದೇಶ ಕಾಯಲು ಸೈನಿಕರಿಲ್ಲ, ಪೊಲೀಸ್ ಆಧಿಕಾರಿಯಾಗಲೂ ನಿಷ್ಠಾವಂತರಿಲ್ಲ. ಎಲ್ಲರಿಗೂ ಡಾಕ್ಟರ್, ಎಂಜಿಯರ್ಗಳೇ ಆಗಬೇಕು. ಈಗ ಹೇಳಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆಯೇ ಅಥವಾ ದೇಶದ ಉತ್ತಮ ಪ್ರಜೆಯನ್ನು ಸೃಷ್ಟಿಸುತ್ತಿದೆಯೇ

1 comment:

  1. ತುಂಬಾ ಚೆನ್ನಾಗಿದೆ.
    Shashidhar, Hospet
    shashi.com@gmail.com

    ReplyDelete