tag:blogger.com,1999:blog-41143986607556185562024-02-19T02:29:43.914-08:00dhwanilekhanadhwanihttp://www.blogger.com/profile/02264839456762759901noreply@blogger.comBlogger38125tag:blogger.com,1999:blog-4114398660755618556.post-299593517961338882016-10-27T07:32:00.001-07:002016-10-27T07:32:20.882-07:00<div dir="ltr" style="text-align: left;" trbidi="on">
<h2 style="text-align: left;">
<span style="color: yellow;">ಆ ಎರಡು ಗಂಟೆಯಲ್ಲಿ ಬಯಲಾಗಿತ್ತು `ಅವರ’ ಅಸಲಿಯತ್ತು!</span></h2>
<br />
ಭರತ್ ರಾಜ್<br />
ವರದಿಗಾರ, ಬಿಟಿವಿ ನ್ಯೂಸ್, ಮಂಗಳೂರು<br />
<br />
ಪತ್ರಕರ್ತನಾಗಿ ಆರು ವರ್ಷಗಳಲ್ಲಿ ಈವರೆಗೆ ಯಾರ ವಿರುದ್ದವೂ ಪೊಲೀಸ್ ಠಾಣೆಗೆ ದೂರು ಕೊಟ್ಟವನಲ್ಲ. ಸುದ್ದಿ ಮಾಡಲು ಹೋದಾಗ ಮತ್ತು ಸುದ್ದಿ ಮಾಡಿದ ನಂತರ ಅಷ್ಟೂ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದೆ. ಆದರೆ ಇವತ್ತು ಮಾತ್ರ ಅಂತಿಮವಾಗಿ `ಅವರ’ ವಿರುದ್ದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಕೊನೆಗೂ ಪೊಲೀಸರು ಕೂಡ ಪ್ರಕರಣ ದಾಖಲಿಸಿದ್ದಾರೆ. ಮುಂದಿನದ್ದು ಕಾನೂನು ಹೋರಾಟವಷ್ಟೇ. ಹೌದು, ನಿನ್ನೆ ಸೂರಲ್ಪಾಡಿ ಮಸೀದಿಯಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನನಗೆ ಮತ್ತು ನನ್ನ ಮಿತ್ರರಿಗೆ ದೂರು ನೀಡುವುದು ಅನಿವಾರ್ಯವಾಗಿತ್ತು. ಈ ಹಿಂದೆ ಎಲ್ಲಾ ಆತಂಕಗಳನ್ನು ಸಹಜ ಎಂಬಂತೆ ಎದುರಿಸಿದ್ದ ನನ್ನನ್ನು ಸೂರಲ್ಪಾಡಿ ಘಟನೆ ಮಾತ್ರ ಕೊನೆಗೂ ಪೊಲೀಸ್ ದೂರು ನೀಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದೆ.<br />
<br />
ಅಷ್ಟರ ಮಟ್ಟಿಗೆ ಘಟನೆಯ ಗಂಭೀರತೆ ನನ್ನನ್ನು ತಟ್ಟಿದೆ ಅಂದುಕೊಳ್ಳುತ್ತೇನೆ. ಅಷ್ಟಕ್ಕೂ ಆ ದಿನ ನಡೆದದ್ದು ಏನು ಅನ್ನೋದನ್ನು ಕೂಡ ವಿವರಿಸೋದು ಈಗ ಅನಿವಾರ್ಯ. ಯಾಕೆಂದರೆ ಈ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಒಂದಷ್ಟು ಜನ ಕೇಸು ಕೊಡೋ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಅದೆಲ್ಲಾ ಸಹಜ ಅನ್ನುವಂತೆಯೂ ಮಾತನಾಡಿದ್ದಾರೆ. ಆದರೆ ಈ ಹಿಂದೆ ಅದೆಷ್ಟೂ ಸಹಜತೆಗಳನ್ನ ಕಂಡಿದ್ದ ನನಗೆ ಸೂರಲ್ಪಾಡಿಯ ದಾಳಿ ಮಾತ್ರ ಸಹಜತೆಗಳನ್ನು ಮೀರಿ ಆತಂಕವನ್ನು ಹುಟ್ಟುಹಾಕಿದೆ. ಹೀಗಾಗಿ ನನಗೆ ಆ ಘಟನೆ ಅಷ್ಟು ಅಪಾಯಕಾರಿ ಅನಿಸಿದ್ದು ಯಾಕೆ ಅನ್ನೋದನ್ನು ವಿವರಿಸುತ್ತೇನೆ…<br />
<br />
ಪತ್ರಕರ್ತ ಅಂದ ಮೇಲೆ ಸುದ್ದಿಗಳು ಹರಸಿ ಬರೋದು ಸಾಮಾನ್ಯ. ಹೀಗೆ ಘಟನೆ ನಡೆದ ಮುನ್ನ ದಿನ ನಮ್ಮ ತಂಡಕ್ಕೂ ಸೂರಲ್ಪಾಡಿಯ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದ ಸುದ್ದಿ ಬಂದಿತ್ತು. ಸ್ವತಃ ಸಂತ್ರಸ್ಥರೇ ಮಾಧ್ಯಮ ಮಿತ್ರರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರಿಂದ ಸಂಪೂರ್ಣ ಮಾಹಿತಿ ಪಡೆದ ನಾವು ಘಟನೆಯ ಗಂಭೀರತೆಯ ಬಗ್ಗೆ ವಿವರಗಳನ್ನು ಪಡೆದುಕೊಂಡೆವು. ಈ ವೇಳೆ ಮೇಲ್ನೋಟಕ್ಕೆ ಅವರಿಗೆ ಅನ್ಯಾಯವಾಗಿರೋದು ಒಂದು ಹಂತಕ್ಕೆ ಸ್ಪಷ್ಟವಾಗಿ ಕಂಡಿತ್ತು. ಹೀಗಾಗಿ ನೊಂದವರ ಪರವಾಗಿ ಸುದ್ದಿ ಮಾಡೋದು ಪತ್ರಕರ್ತರಾಗಿ ನಮ್ಮ ಧರ್ಮ. ಹಾಗಂತ ನೊಂದವರ ಪರವಾಗಿ ನಿಲ್ಲೋ ಭರದಲ್ಲಿ ವಿರೋಧಿ ಬಣವನ್ನು ಆರೋಪಿಗಳೇ ಅಂತ ಪಕ್ಕಾ ಜಡ್ಜ್ ಮೆಂಟ್ ಕೊಡೋ ಪತ್ರಕರ್ತರಂತು ನಾವಲ್ಲ. ಹೀಗಾಗಿ ಸಂತ್ರಸ್ಥರು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸೋ ಎದುರು ಬಣದವರನ್ನು ಕೂಡ ಮಾತನಾಡಿಸಿ ಸುದ್ದಿಗೊಂದು ಸ್ಪಷ್ಟತೆ ಕೊಡೋದು ನಮ್ಮ ಉದ್ದೇಶ. ಈ ಹಿಂದೆಯೂ ನಾನು ಸೇರಿದಂತೆ ನನ್ನ ಜೊತೆಗಿರುವ ಅಷ್ಟೂ ಜನ ಮಾಧ್ಯಮ ಮಿತ್ರರು ಪತ್ರಕರ್ತರಾಗಿ ಒನ್ ಸೈಡ್ ಸುದ್ದಿ ಮಾಡಿಲ್ಲ. ಯಾವುದೇ ಸುದ್ದಿಯಿರಲಿ ಎರಡೂ ಕಡೆಯ ವಿಚಾರಗಳನ್ನು ಆಲಿಸಿ ಅಂತಿಮ ವಿಮರ್ಶೆಯ ನಂತರವೇ ಅಲ್ಲೊಂದು ಸಾಮಾಜಿಕ ಜವಾಬ್ದಾರಿಯ ವರದಿ ತಯಾರಾಗುತ್ತಿತ್ತು.<br />
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhoZ3I5O34vLFDidCAsDKjwAbSzt_eVJSYYLKMvfVesTSx5-gehELr-kq9DsN3grFj4XsMuH2IF3BAL0aCBVFLCMgB7tTKB1JOnKK0wf376ouWivW4FaEm6gjlE67aSaQM9Bd2b5iNMQjo/s1600/IMG-20160907-WA0000-1.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEhoZ3I5O34vLFDidCAsDKjwAbSzt_eVJSYYLKMvfVesTSx5-gehELr-kq9DsN3grFj4XsMuH2IF3BAL0aCBVFLCMgB7tTKB1JOnKK0wf376ouWivW4FaEm6gjlE67aSaQM9Bd2b5iNMQjo/s400/IMG-20160907-WA0000-1.jpg" width="400" /></a></div>
<br />
<br />
ಈ ಪ್ರಕರಣದಲ್ಲೂ ನಾವು ಯಥಾವತ್ ವಿರೋಧಿ ಬಣ ಅಂತ ಕರೆಸಿಕೊಳ್ಳೋ ಸೂರಲ್ಪಾಡಿ ಮಸೀದಿ ಆಡಳಿತದ ಸ್ಪಷ್ಟನೆ ಕೇಳಲು ಮುಂದಾದೆವು. ಹೀಗಾಗಿ ನಿನ್ನೆ ಬೆಳಿಗ್ಗೆ ಸರಿಯಾಗಿ 7.55ಕ್ಕೆ ಬಿಟಿವಿ ವರದಿಗಾರನಾದ ನಾನು, ನನ್ನ ಕ್ಯಾಮರಾಮ್ಯಾನ್ ನಾಗೇಶ್ ಪಡು, ಟಿವಿ9 ಕ್ಯಾಮಾರಮ್ಯಾನ್ ವಿಲ್ಫ್ರೆಡ್ ಡಿಸೋಜಾ ಮತ್ತು ಸುದ್ದಿ ಟಿವಿ ಪ್ರತಿನಿಧಿ ಇರ್ಷಾದ್ ಉಪ್ಪಿನಂಗಡಿ ಜೊತೆಗೆ ಸೂರಲ್ಪಾಡಿ ಮಸೀದಿಗೆ ತೆರಳಿದೆವು. ಬೆಳಿಗ್ಗೆ ಎಂಟು ಘಂಟೆಗೆ ಮದರಸ ಬಿಡುವ ಕಾರಣ ಅಷ್ಟು ಬೇಗನೇ ಅಲ್ಲಿಗೆ ತೆರಳೋದು ನಮಗೆ ಅನಿವಾರ್ಯವಾಗಿತ್ತು. ಅದರಲ್ಲೂ ಮದರಸದಲ್ಲಿ ಸಂತ್ರಸ್ಥರ ಮಕ್ಕಳಿಗೆ ಬಹಿಷ್ಕಾರ ಹಾಕಿರೋ ಕಾರಣದಿಂದ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಸುದ್ದಿ ಪ್ರಾಮುಖ್ಯತೆ ಪಡೆದಿತ್ತು. ಹೀಗಾಗಿ ಎಂಟು ಘಂಟೆಗೆ ಮದರಸ ಬಿಡುವ ದೃಶ್ಯಗಳನ್ನು ರಸ್ತೆಯಲ್ಲಿ ನಿಂತೇ ಚಿತ್ರೀಕರಿಸಿಕೊಂಡೆವು. ನಂತರ ಅಲ್ಲಿಂದ ನೇರವಾಗಿ ಮಸೀದಿ ಆವರಣಕ್ಕೆ ಹೋಗಿ ಅಲ್ಲೇ ಇದ್ದ ಮದರಸದ ಗುರುಗಳಲ್ಲಿ ನಮಗೆ ಬಂದ ಆರೋಪಗಳ ಬಗ್ಗೆ ವಿಚಾರಿಸಿದ್ದೇವೆ. ಈ ವೇಳೆ ಅವರು ಕೂಡ ನಮಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ, ತಾತ್ಕಾಲಿಕವಾಗಿ ದೂರುದಾರರ ಮಕ್ಕಳು ಮದರಸ ಮತ್ತು ಮಸೀದಿಗೆ ಬಾರದಂತೆ ಬಹಿಷ್ಕಾರ ಹಾಕಿರೋದರ ಬಗ್ಗೆ ತಿಳಿಸಿದರು. ಅಲ್ಲದೇ ಈ ಬಗ್ಗೆ ಇರೋ ವಿವಾದಗಳ ಬಗ್ಗೆಯೂ ಬೆಳಕು ಒಂದಷ್ಟು ಬೆಳಕು ಚೆಲ್ಲಿದರು. ಆದರೆ ಅಷ್ಟರಲ್ಲಾಗಲೇ ಸುಮಾರು ಹತ್ತು ಮಂದಿಯ ತಂಡವೊಂದು ಮಸೀದಿ ಆವರಣಕ್ಕೆ ನುಗ್ಗಿ ನಮ್ಮನ್ನ ಮಾತನಾಡೋಕು ಬಿಡದೇ ತೀರಾ ಕೆಳಮಟ್ಟದ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸೋಕೆ ಆರಂಭಿಸಿದ್ದಾರೆ. ಅಲ್ಲದೇ ನಮ್ಮ ಕೈಯ್ಯಲ್ಲಿದ್ದ ಚಾನೆಲ್ ಮೈಕ್ ಕಿತ್ತುಕೊಂಡು ಕ್ಯಾಮಾರದಲ್ಲಿದ್ದ ದೃಶ್ಯಗಳನ್ನು ಡಿಲೀಟ್ ಮಾಡೋದಕ್ಕೆ ಹೇಳಿ ಬೆದರಿಕೆ ಹಾಕಿದ್ದಾರೆ. ನಾವು ಪತ್ರಕರ್ತರು ಅಂತ ಗೊತ್ತಿದ್ದರೂ ನಮ್ಮಲ್ಲಿ ಮಾತನಾಡಲೂ ಬಿಡದೇ ಮಸೀದಿ ಆವರಣದಿಂದ ನಮ್ಮನ್ನು ಹೊರಗೆಳೆದುಕೊಂಡು ಬಂದಿದ್ದಾರೆ.<br />
<br />
ನಂತರ ನಮ್ಮ ಬಿಟಿವಿ ಕ್ಯಾಮಾರಮ್ಯಾನ್ ನಾಗೇಶ್ ಮತ್ತು ಸುದ್ದಿ ಟಿವಿಯ ಇರ್ಷಾದ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸುಮಾರು ಐವತ್ತು ಮಂದಿ ನಮ್ಮನ್ನು ಸುತ್ತುವರಿದ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ನಿಂದಿಸಿದ್ದಲ್ಲೇ ಕ್ಯಾಮಾರ ಕಿತ್ತುಕೊಂಡು ಕ್ಯಾಸೆಟ್ ಮತ್ತು ಮೆಮೋರಿ ಕಾರ್ಡ್ಗಳನ್ನು ಕಿತ್ತುಕೊಂಡಿದ್ದಾರೆ. ಈ ವೇಳೆ ವಿರೋಧಿಸಿದರೂ ಬಿಡದೇ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಒಡ್ಡಿದ ಆರೋಪಿಗಳು ನಾವು ಬಂದಿದ್ದ ಕಾರಿನ ಕೀಯನ್ನ ಕೂಡ ಕಿತ್ತುಕೊಂಡು ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ನಮ್ಮ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಅದ್ಯಾಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನಂತರ ಪಕ್ಕದ ರಸ್ತೆಗೆ ಬಂದು ಬೆಳಿಗ್ಗೆ ಸುಮಾರು 8.20ಕ್ಕೆ ಡಿಸಿಪಿ ಶಾಂತರಾಜು ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದೆ. ಹೀಗಾಗಿ ಘಟನೆಯ ಗಂಭೀರತೆ ಅರಿತ ಅವರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸುಮಾರು 8.30ರ ವೇಳೆಗೆ ಬಜಪೆ ಠಾಣಾಧಿಕಾರಿ ನಾಗರಾಜ್ ಅವರು ನನ್ನನ್ನು ಸಂಪರ್ಕಿಸಿ ಪೊಲೀಸ್ ಕಳಿಸಿರೋದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ದೂರದಲ್ಲೇ ನಿಂತು ಘಟನೆಯನ್ನು ಗಮನಿಸುತ್ತಿದ್ದ ನಾನು ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬಿದ್ದಿದ್ದೆ. ಉಗ್ರರ ಕೈಯ್ಯಲ್ಲಿ ಸಿಲುಕಿದ ಸಂತ್ರಸ್ಥರಂತೆ ನಮ್ಮ ತಂಡದ ಮೂವರು ಪತ್ರಕರ್ತರು ಅವರ ಕೈಯ್ಯಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು. ಇಷ್ಟಾಗಿದ್ದೇ ತಡ ಯಾರೋ ಮಸೀದಿಯ ಮೈಕ್ ನಲ್ಲಿ ಜಮಾತಿಗೆ ಸೇರಿದ ಎಲ್ಲರೂ ತಕ್ಷಣ ಮಸೀದಿ ಆವರಣಕ್ಕೆ ಬರುವಂತೆ ಘೋಷಣೆ ಮಾಡಿದ್ಧಾರೆ. ದುರಂತ ಅಂದ್ರೆ ಕೇವಲ ಧಾರ್ಮಿಕಪ್ರವಚನ ಮತ್ತು ಬಾಂಗ್ ನೀಡೋಕೆ ಬಳಕೆಯಾಗೋ ಮಸೀದಿಯ ಮೈಕ್ ನಿನ್ನೆಯ ಘಟನೆಯಲ್ಲಿ ನಮ್ಮ ವಿರುದ್ದ ಜನ ಸೇರಿಸಿ ದೌರ್ಜನ್ಯ ಎಸಗೋ ಅಸ್ತ್ರವಾಗಿದ್ದು ಮಾತ್ರ ನಿಜಕ್ಕೂ ದುರಂತ. ಹೀಗಾಗಿ ದೂರದಿಂದಲೇ ಎಲ್ಲವನ್ನು ಗಮನಿಸ್ತಾ ಇದ್ದ ನಾನು ಮಸೀದಿಯ ಮೈಕ್ ನಲ್ಲಿ ಮಾಡಿದ ಘೋಷಣೆಯನ್ನ ಕೇಳಿ ಇನ್ನಷ್ಟು ಆತಂಕಕ್ಕೊಳಗಾದೆ. ಹೀಗಿರೋವಾಗಲೇ ಮಸೀದಿ ಆವರಣಕ್ಕೆ ಜನರ ದಂಡೇ ಆಗಮಿಸ್ತಾ ಇತ್ತು. ನೋಡನೋಡುತ್ತಿದ್ದಂತೆ ನಮ್ಮ ಮೂವರು ಮಾಧ್ಯಮ ಮಿತ್ರರನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಸುತ್ತುವರಿದು ದೌರ್ಜನ್ಯ ಆರಂಭಿಸಿದ್ದರು. ಆದರೆ ಅಷ್ಟು ಜನರ ಮುಂದೆ ನಮ್ಮವರನ್ನ ಉಳಿಸುವಲ್ಲಿ ಅಸಹಾಯಕನಾಗಿದ್ದ ನನಗೆ ಪೊಲೀಸರು ಅಲ್ಲಿಗೆ ಬರುವವರೆಗೆ ಬೇರೆ ದಾರಿ ಕಾಣಲೇ ಇಲ್ಲ. ಹೀಗೆ ಸಮಯ 9 ಕಳೆದರೂ ಪೊಲೀಸರು ಬರಲೇ ಇಲ್ಲ. ಕೊನೆಗೆ ನಮ್ಮವರನ್ನು ಕಾರಿನೊಳಗೆ ನೂಕಿದ ರಾಕ್ಷಸರು ಕಾರಿಗೆ ಗುದ್ದಿ, ನಮ್ಮವರ ಮೇಲೆ ಹಲ್ಲೆ ನಡೆಸುತ್ತಾ, ಕ್ಯಾಮಾರದ ಮೆಮೋರಿ ಕಿತ್ತುಕೊಂಡು ಪುಡಿಗಟ್ಟಿದ್ರು. ಅಲ್ಲದೇ ಕ್ಯಾಮಾರಕ್ಕೂ ಹಾನಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಬರಲೇ ಇಲ್ಲ.<br />
<br />
ಕೊನೆಗೆ 9.20ರ ವೇಳೆಗೆ ಪಿಸಿಆರ್ ವಾಹನದಲ್ಲಿ ಇಬ್ಬರು ಪೊಲೀಸರು ಆಗಮಿಸಿದ್ರು. ಆದ್ರೆ ಈ ಇಬ್ಬರು ಪೊಲೀಸರ ಮಾತನ್ನೂ ಕೇಳದ ಜನ ಪೊಲೀಸರ ಎದುರೇ ನಮ್ಮವರನ್ನು ಬೆಂಕಿ ಹಾಕಿ ಸುಡೋದಾಗಿ ಬೊಬ್ಬಿಡುತ್ತಿದ್ದರು. ಅಲ್ಲದೇ ಕಟ್ಟಿ ಹಾಕಿ ಥಳಿಸೋದಾಗಿಯೂ ಏರು ಧ್ವನಿಯಲ್ಲೇ ಪೊಲೀಸರ ಎದುರೇ ಗುಡುಗಿದ್ದು ದುರಂತ. ಆದ್ರೆ ಇಷ್ಟಾದ್ರೂ ಪೊಲೀಸರಿಗೆ ಮಾತ್ರ ಅವ್ರನ್ನ ನಿಯಂತ್ರಿಸಿ ನಮ್ಮವರನ್ನು ಬಿಡಿಸೋದಕ್ಕೆ ಸಾಧ್ಯವಾಗಲೇ ಇಲ್ಲ. ಇಷ್ಟಾಗಿ 9.45ರ ವೇಳೆಗೆ ಬಜಪೆ ಎಸ್ಸೈ ಸತೀಶ್ ಕುಮಾರ್ ಸ್ಥಳಕ್ಕೆ ಬಂದ್ರು. ಈ ವೇಳೆ ನಾನು ಕೂಡ ಪೊಲೀಸ್ ಅಧಿಕಾರಿಯ ಆಗಮನದ ನಂತ್ರ ಸ್ಥಳಕ್ಕೆ ಬಂದೆ. ಈ ವೇಳೆ ಕೆಲ ಕಿಡಿಗೇಡಿಗಳು ನನ್ನನ್ನು ಸುತ್ತುವರಿದು ಹಲ್ಲೆಗೆ ಮುಂದಾದ್ರೂ. ಅದಾಗಲೇ ನಮ್ಮವರ ಮೊಬೈಲ್ ಕಿತ್ತುಕೊಂಡಿದ್ದ ರಾಕ್ಷಸರು ನನ್ನ ಮೊಬೈಲ್ ಕೂಡ ಕಿತ್ತುಕೊಳ್ಳೋಕೆ ಆರಂಭಿಸಿದ್ರು. ಆದ್ರೆ ಎಸ್ಸೈ ಸತೀಶ್ ಅವ್ರನ್ನ ತಡೆದು ನಮ್ಮವ್ರನ್ನ ಕೂಡ ಅವ್ರ ಬಂಧನದಿಂದ ಬಿಡಿಸಿದ್ರು. ಹೀಗಾದ್ರೂ ಅಲ್ಲಿದ್ದವ್ರು ಪೊಲೀಸರ ಮುಂದೆಯೇ ನಮ್ಮ ವಿರುದ್ದ ಅಬ್ಬರಿಸಿದ್ರು. ಮಸೀದಿಯ ಒಳಗೆ ಕರೆದುಕೊಂಡು ಹೋಗಿ ಬಹಿರಂಗ ಕ್ಷಮೆಯಾಚಿಸುವಂತೆ ಬೆದರಿಕೆ ಹಾಕಿದ್ರು. ದುರಂತ ಅಂದ್ರೆ ಮಸೀದಿಯಲ್ಲಿ ಬಾಂಗ್ ಕೊಡೋ ಮೈಕ್ ನಲ್ಲೇ ಇಡೀ ಊರಿಗೆ ಕೇಳುವಂತೆ ಪತ್ರಕರ್ತನಾದ ನಾನು ಕ್ಷಮೆ ಕೇಳಬೇಕು ಅನ್ನೋದು ಅವ್ರ ಆಗ್ರಹವಾಗಿತ್ತು. ಅಲ್ಲದೇ ನನ್ನ ಅಷ್ಟೂ ಕ್ಷಮಾಪನ ಹೇಳಿಕೆಯನ್ನ ಪತ್ರದಲ್ಲಿ ದಾಖಲಿಸಿ ಸಹಿ ಹಾಕೋದ್ರ ಜೊತೆಗೆ ಮೊಬೈಲ್ ಮುಂದೆಯೂ ಹೇಳಿಕೆ ನೀಡುವಂತೆ ಅಲ್ಲಿದ್ದ ಅಷ್ಟೂ ಜನ ಬೆದರಿಸಿದ್ರು. ಇಲ್ಲದೇ ಇದ್ರೆ ಇಲ್ಲಿಂದ ಹೊರ ಹೋಗೋದಕ್ಕೆ ಬಿಡೋದಿಲ್ಲ ಅನ್ನೋವಷ್ಟರ ಮಟ್ಟಿಗೆ ಅವ್ರ ದೌರ್ಜನ್ಯ ಬಂದು ನಿಂತಿತ್ತು. ಆದ್ರೆ ಈ ಎಲ್ಲಾ ಘಟನೆಗೆ ಸ್ವತಃ ಪೊಲೀಸ್ ಅಧಿಕಾರಿ ಕೂಡ ಸಾಕ್ಷಿಯಾಗಿದ್ದು ಮಾತ್ರ ದುರಂತ. ಹೀಗಾಗಿ ತಪ್ಪೇ ಮಾಡದ ನಾನು ಕ್ಷಮೆ ಕೇಳೋದಕ್ಕೆ ಒಪ್ಪಲಿಲ್ಲ. ಬೇಕಾದ್ರೆ ಶೂಟ್ ಮಾಡಿರೋ ಅಷ್ಟು ದೃಶ್ಯಗಳನ್ನ ಡಿಲೀಟ್ ಮಾಡಿ ಜೀವ ಉಳಿಸಿಕೊಳ್ಳೋದಕ್ಕೆ ಸಿದ್ದನಾದೆ. ಕೊನೆಗೆ ಪೊಲೀಸರಿಗೂ ನಮ್ಮನ್ನು ಅಲ್ಲಿಂದ ಹೊರಗೆ ಕರೆದುಕೊಂಡು ಹೋಗಲು ಅವ್ರು ಹೇಳೋ ಎಲ್ಲಾ ಮಾತಿಗೂ ತಲೆಯಾಡಿಸೋದು ಅನಿವಾರ್ಯವಾಗಿತ್ತು. ಅಕ್ಷರಶಃ ತಾಲಿಬಾನ್ ಮಾದರಿಯಲ್ಲಿ ಅವರು ಹೇಳಿದ್ದನ್ನು ನಮ್ಮ ಕೈಯ್ಯಲ್ಲಿ ಮಾಡಿಸಿ ನಮ್ಮನ್ನು ಅಲ್ಲಿಂದ ಬಿಟ್ಟು ಕಳಿಸಿದರು. ಆದ್ರೆ ತಪ್ಪೇ ಮಾಡದ ನಾವು ಮಾತ್ರ ಅವ್ರ ಬಳಿ ಕ್ಷಮೆ ಕೇಳದೇ ನಮ್ಮಲ್ಲಿದ್ದ ಶೂಟ್ ಮಾಡಿದ ದೃಶ್ಯಗಳನ್ನು ಡಿಲೀಟ್ ಮಾಡಲು ಒಪ್ಪಿಕೊಂಡೆವು. ಅಲ್ಲದೇ ಮಸೀದಿಯ ಸುದ್ದಿ ಕೂಡ ಟಿವಿಯಲ್ಲಿ ಬರಲೇ ಬಾರದು ಅಂತೆಲ್ಲಾ ಎಚ್ಚರಿಕೆ ನೀಡಿದ ಅವರು ಅದಕ್ಕೆಲ್ಲಾ ಒಪ್ಪಿಗೆ ಸೂಚಿಸಿದ ಮೇಲೆಯೇ ನಮ್ಮನ್ನ ಬಿಟ್ಟು ಕಳುಹಿಸಿದ್ದು…….ನಿಜಕ್ಕೂ ಅಲ್ಲಿ ನಾವು ಕಳೆದ ಆ ಎರಡು ಘಂಟೆಗಳು ಅತ್ಯಂತ ಭಯಾನಕ.<br />
<br />
ಉಗ್ರರ ಒತ್ತೆಯಾಳುಗಳಾಗಿ ಸಾವಿನ ಬಾಗಿಲು ತಟ್ಟಿ ಬಂದ ಅನುಭವ ನಮ್ಮದ್ದು. ಯಾಕೆಂದ್ರೆ ಅಲ್ಲಿದ್ದ ಒಬ್ಬೊಬ್ಬರದ್ದು ಒಂದೊಂಥರ ವರ್ತನೆ. ಒಬ್ಬರು ಹಲ್ಲೆ ನಡೆಸೋಕೆ ಬಂದ್ರೆ ಇನ್ನೊಬ್ಬರದ್ದು ಅವಾಚ್ಯ ಶಬ್ದಗಳ ನಿಂದನೆ. ಸುಡ್ತೀವಿ, ಕೊಲ್ತೀವಿ ಅನ್ನೋ ಮೂಲಕವೇ ಅಲ್ಲಿದ್ದ ಅಷ್ಟೂ ಜನ ಮಾನವೀಯತೆಯ ರೇಖೆಯನ್ನೇ ದಾಟಿ ಅತ್ಯುಗ್ರ ರೀತಿಯಲ್ಲಿ ದೌರ್ಜನ್ಯ ಎಸಗಿದ್ರು.<br />
<br />
ಹೀಗಾಗಿ ನನ್ನ ಪತ್ರಕರ್ತ ವೃತ್ತಿಯಲ್ಲಿ ನಿನ್ನೆಯ ಘಟನೆ ಅತ್ಯಂತ ಭಯಾನಕ ಅನುಭವ. ಮಾನವೀಯತೆಯ ಅರ್ಥವೇ ಗೊತ್ತಿಲ್ಲದ ಜನರ ನಮ್ಮನ್ನು ತೀರಾ ಕೀಳಾಗಿ ನಡೆಸಿಕೊಂಡರು. ತಮ್ಮ ಅಷ್ಟೂ ಆಗ್ರಹ, ಎಚ್ಚರಿಕೆಗಳನ್ನ ನಮ್ಮ ಮೇಲೇ ಹೇರುವ ಮೂಲಕ ಜೀವ ಭಯವನ್ನ ಒಡ್ಡಿದರು. ಹೀಗಾಗಿ ಇಷ್ಟೆಲ್ಲಾ ಆದ ಮೇಲೆಯೂ ಈ ದಾಳಿಯನ್ನು ಒಬ್ಬ ಪತ್ರಕರ್ತನಾಗಿ ತೀರಾ ಸಹಜ ಅಂತ ಕರೆಸಿಕೊಂಡು ಸುಮ್ಮನಾಗದು ಯಾಕೋ ಸರಿ ಕಾಣಲಿಲ್ಲ. ಅಲ್ಲದೇ ಭವಿಷ್ಯದ ದೃಷ್ಟಿಯಿಂದಲೂ ಅದು ಸರಿಯಲ್ಲ. ಹೀಗಾಗಿ ಪತ್ರಕರ್ತರಾಗಿ ನಾವೆಲ್ಲರೂ ಈ ಘಟನೆಯಲ್ಲಿ ತಪ್ಪಿತಸ್ಥರಲ್ಲ. ಕಾನೂನು ಬದ್ದವಾಗಿಯೇ ಹೇಳಿಕೆ ಪಡೆಯೋ ದೃಷ್ಟಿಯಿಂದ ಮಸೀದಿಗೆ ತೆರಳಿದ್ದೆವಷ್ಟೇ. ಹೀಗಿರುವಾಗ ನಮ್ಮ ಮೇಲೆ ನಡೆದ ದಾಳಿ ಪತ್ರಿಕಾಸ್ವಾತಂತ್ರ್ಯದ ಮೇಲೆ ನಡೆದ ದಾಳಿಯ ಜೊತೆಗೆ ಮಾನವೀಯತೆಯ ರೇಖೆಯನ್ನು ದಾಟಿ ದಾಖಲಾದ ಅಮಾನುಷ ದಾಳಿಯೂ ಹೌದು. ಆದ್ದರಿಂದ ಘಟನೆಯಲ್ಲಿ ಪಾಲುದಾರರು ಅಂತ ಕರೆಸಿಕೊಳ್ಳುವ ಅಷ್ಟೂ ಜನರಿಗೆ ಕಾನೂನಿನ ಪ್ರಕಾರ ಶಿಕ್ಷಯಾಗಲಿ ಅನ್ನೋದಷ್ಟೇ ನನ್ನ ಮತ್ತು ನಮ್ಮ ತಂಡದ ಆಗ್ರಹ. ಸಮಾಜಕ್ಕೆ ಎಲ್ಲವನ್ನ ತಿಳಿಸೋ ನಮ್ಮಂಥ ಪತ್ರಕರ್ತರನ್ನೇ ಈ ರೀತಿಯಾಗಿ ನಡೆಸಿಕೊಳ್ಳೋ ಸೂರಲ್ಪಾಡಿಯ `ಅವರ’ ಈ ಕೃತ್ಯವನ್ನು ನಾನಂತೂ ಒಪ್ಪೋದಕ್ಕೆ ಸಿದ್ದನಿಲ್ಲ. ಹೀಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಅಂಥವರ ವಿರುದ್ದ ನಾನು ಪೊಲೀಸ್ ದೂರು ಕೊಟ್ಟಿರೋದು ಸರಿ ಅಂದುಕೊಳ್ಳುತ್ತೇನೆ. ಹೋಂಸ್ಟೇ ದಾಳಿ, ಪಬ್ ದಾಳಿ ಮತ್ತು ಇನ್ನಿತರ ಅನೇಕ ಅಮಾನವೀಯ ದಾಳಿಗಳನ್ನು ಸುದ್ದಿ ಮಾಡಿದ ಪತ್ರಕರ್ತರಾದ ನಮ್ಮ ಮೇಲೆ ನಡೆದ ಈ ದಾಳಿ ನಿಜಕ್ಕೂ ಕರಾವಳಿಯ ಮತಾಂಧರ ಕ್ರೌರ್ಯಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ ಎನ್ನದೇ ಬೇರೆ ವಿಧಿಯಿಲ್ಲ. ಕೊನೆಯದಾಗಿ ನಾವು ಮಾಡಲು ಹೊರಟ ಸುದ್ದಿ ಪೂರ್ಣಗೊಂಡಿಲ್ಲ. ಅಲ್ಲದೇ ನಾವು ಈ ಸಾಮಾಜಿಕ ಬಹಿಷ್ಕಾರದ ಸುದ್ದಿಯ ವಿಚಾರದಲ್ಲಿ ಯಾರ ಮೇಲೂ ತಪ್ಪಿತಸ್ಥ ಅನ್ನೋ ಜಡ್ಜ್ ಮೆಂಟ್ ಕೂಡ ಕೊಟ್ಟಿಲ್ಲ. ಮಾಧ್ಯಮ ಅಂದ್ರೆ ನ್ಯಾಯಾಲಯ ಅಲ್ಲ ಅನ್ನೋ ಸಿದ್ದಾಂತಕ್ಕೆ ಬದ್ಧನಾದ ನನಗೆ ಸೂರಲ್ಪಾಡಿಯ ವರದಿ ಕೂಡ ಸಮಾಜದ ಮುಂದೆ ತೆರೆದಿಡೋ ವಾಸ್ತವತೆಯಷ್ಟೇ ವಿನಃ ನಾವೇ ಕೊಡೋ ತೀರ್ಪುಗಳಲ್ಲ. ಹೀಗಾಗಿ ಎರಡೂ ಕಡೆಯ ವಾದಗಳನ್ನು ಆಲಿಸಿ ಸುದ್ದಿ ಮಾಡುವ ನಮಗೆ ಎರಡೂ ಕಡೆಯ ಹೇಳಿಕೆಗಳೂ ಅತ್ಯಮೂಲ್ಯ. ಹೀಗಾಗಿ ನಮ್ಮ ಮೇಲೆ ನಡೆದ ದಾಳಿಯ ನಂತರವೂ ಸುದ್ದಿಯನ್ನು ಪೂರ್ಣಗೊಳಿಸುತ್ತೇವೆ. ಅದೂ ಮತ್ತೆ ಸೂರಲ್ಪಾಡಿಯ ಮಸೀದಿ ಆಡಳಿತದ ಹೇಳಿಕೆಯನ್ನು ದಾಖಲಿಸಿಯೇ……!</div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-67553655189223245032015-04-14T09:59:00.001-07:002015-04-14T09:59:24.013-07:00<div dir="ltr" style="text-align: left;" trbidi="on">
<h2 style="text-align: left;">
<b><span style="color: red;">ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅಂದಂಗಾಯ್ತು ತಾಳಿ ಕಿತ್ತು ಹಾಕೋ ಚಳುವಳಿ!</span></b></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhnTddONvLeXY6Ejtea2O8V_1V1Q0umJ80fjv1mBVaqGeuGPEEqLsUWXVFxcr2Hqivn_W4xDTYOKCaz6gyefNgSFFCWrke2bEugAFOvfWYinj4OWkaq5BLwFqdUPrO18VrWGHkK7qdkJSc/s1600/thali+new+1.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhnTddONvLeXY6Ejtea2O8V_1V1Q0umJ80fjv1mBVaqGeuGPEEqLsUWXVFxcr2Hqivn_W4xDTYOKCaz6gyefNgSFFCWrke2bEugAFOvfWYinj4OWkaq5BLwFqdUPrO18VrWGHkK7qdkJSc/s1600/thali+new+1.jpg" height="320" width="320" /></a></div>
<div>
<b><span style="color: red;"><br /></span></b></div>
ಭಾರತದ ದೇಶದಲ್ಲಿ ಮೂರ್ಖರ ಸಂಖ್ಯೆ ಹೆಚ್ಚಾಗುತ್ತಿದೆಯೋ ಅಥವಾ ಬುದ್ದಿವಂತರು ಅನಿಸಿಕೊಂಡವರು ದೊಡ್ಡ<br />
ಮಟ್ಟದಲ್ಲಿ ಬೆಳೆಯುತ್ತಿದ್ದಾರೋ ಗೊತ್ತಿಲ್ಲ. ಆದ್ರೆ ಪ್ರಗತಿಪರರು, ಬುದ್ದಿಜೀವಿಗಳು ಅನ್ನೋ ಹೆಸ್ರಿನಲ್ಲಿ ದೇಶದಲ್ಲಿ<br />
ಅರಾಜಕತೆ ಸೃಷ್ಟಿಸೋ ಪ್ರಯತ್ನವಂತೂ ಸದ್ದಿಲ್ಲದೇ ನಡೆಯುತ್ತಿದೆ ಅನ್ನೋದಂತೂ ಸ್ಪಷ್ಟ. ಇದರ ಸ್ಯಾಂಪಲ್ ಎಂಬಂತೆ<br />
ತಮಿಳುನಾಡಿನ ಸಂಘಟನೆಯೊಂದು ನೇರವಾಗಿ ಹೆಣ್ಣಿನ ತಾಳಿಗೆ ಕೈ ಹಾಕಿದೆ. ತಾಳಿ ಅನ್ನೋದು ಹೆಣ್ಮಕ್ಕಳ ದಾಸ್ಯದ<br />
ಸಂಕೇತ, ಇದ್ರಲ್ಲಿ ಹೆಣ್ಣನ್ನ ಗುಲಾಮಳಂತೆ ಕಾಣಲಾಗುತ್ತೆ ಅಂತ ವಾದ ಮಂಡಿಸಿದೆ. ಹೀಗಾಗಿಯೇ ತಾಳಿಯನ್ನ ಕಿತ್ತು<br />
ಹಾಕಿಸೋ ಮೂಲಕ ವಿವಾಹಿತ ಮಹಿಳೆಯನ್ನ ದಾಸ್ಯದಿಂದ ಮುಕ್ತವಾಗಿಸೋ ಪ್ರಯತ್ನ ಮುಕ್ತವಾಗಿ ನಡೀತಾ ಇದೆ!<br />
ಇದ್ರ ಮಧ್ಯೆ ಈ ತಾಳಿ ಸಂಸ್ಕೃತಿಯನ್ನ ಬ್ರಾಹ್ಮಣರು ಹೇರಿದ್ದು ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಇದನ್ನೆಲ್ಲಾ<br />
ನೋಡಿದ್ರೆ ಒಂದಂತೂ ಸತ್ಯ...ತಾಳಿ ಕೀಳೋ ಪ್ರತಿಭಟನೆಯಲ್ಲಿ ಹೆಣ್ಣು ದಾಸ್ಯದಿಂದ ಮುಕ್ತಳಾಗ್ತಾಳೆ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ದೇಶದಲ್ಲಿ ಆಳವಾಗಿ ಬೀಡು ಬಿಟ್ಟಿರೋ ಬ್ರಾಹ್ಮಣ್ಯವನ್ನ ವಿರೋಧಿಸೋ ಹಿಡನ್ ಅಜೆಂಡಾ ಅಡಗಿರೋದು ಸ್ಪಷ್ಟ. ಇದಕ್ಕಾಗಿ ಬ್ರಾಹ್ಮಣರನ್ನ ವಿರೋಧಿಸೋ ನೆಪದಲ್ಲಿ ಹೆಣ್ಣಿನ ತಾಳಿಗೆ ಕೈ ಹಾಕೋ ಕೆಲಸಕ್ಕೆ ಈ ಸಂಘಟನೆಗಳು ಇಳಿದು ಬಿಟ್ಟಿವೆ.<br />
<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhJ-f42TTwsSv2AKuMEchRMOSTCYc5gKEkpe5aFS-q2X_Ft4nuReMr-iFCpf8kOpZj1n9U1zNISczlzY-G3eIhH_gVV_ufFuiDRUSES5DveWUDqw2MeomYNakrkj7nfh-pn8ZWJkrQQv4s/s1600/thali+new+2.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhJ-f42TTwsSv2AKuMEchRMOSTCYc5gKEkpe5aFS-q2X_Ft4nuReMr-iFCpf8kOpZj1n9U1zNISczlzY-G3eIhH_gVV_ufFuiDRUSES5DveWUDqw2MeomYNakrkj7nfh-pn8ZWJkrQQv4s/s1600/thali+new+2.jpg" height="225" width="400" /></a></div>
<br />
ಇನ್ನು ನಾನು ಈ ಹಿಂದೆ ತಾಳಿಯ ಬಗ್ಗೆ ಪತ್ರಿಕೆಗಳಲ್ಲಿ ಓದಿದಂತೆ ಮತ್ತು ಇತರೆ ಮಾಧ್ಯಮಗಳ ಮೂಲಕ ತಿಳಿದು ಕೊಂಡಂತೆ, ಅಧ್ಯಯನಗಳ ಪ್ರಕಾರ, ಹಿಂದೂ ವಿವಾಹದ ವಿಧಿವಿಧಾನಗಳ ಬಗೆಗೆ ಸ್ಥೂಲವಾಗಿ ತಿಳಿಸುವ ವಾಲ್ಮೀಕಿ ರಾಮಾಯಣ, ವ್ಯಾಸ ಭಾರತದಲ್ಲಾಗಲೀ, ಗೃಹಸೂತ್ರ, ಮನುಸ್ಮೃತಿ, ಯಾಜ್ಞವಲ್ಕ ಮೊದಲಾದ ಗ್ರಂಥಗಳಲ್ಲಿ ತಾಳಿಯ ಬಗ್ಗೆ ಉಲ್ಲೇಖವಿಲ್ಲ. ಅಷ್ಟೇ ಏಕೆ, ಮಾಂಗಲ್ಯಂ ತಂತು ನಾನೇನ ...ಎಂದು ಹತ್ತು ಜನರ ಸಮಕ್ಷಮದಲ್ಲಿ ತಾಳಿ ಕಟ್ಟುವಾಗ ಹೇಳಲಾಗುವ ಈ ಮಂತ್ರವು ವೈದಿಕ ಮೂಲದ್ದಲ್ಲ! ತಾಳಿಯ ಪರಿಕಲ್ಪನೆ ಹುಟ್ಟಿದ ನಂತರ ಪುರೋಹಿತರಿಂದ ಸೃಷ್ಟಿಸಲ್ಪಟ್ಟ ಮಂತ್ರ ಎನ್ನುತ್ತಾರೆ ಸಂಶೋಧಕರು. ಮಾಂಗಲ್ಯಕ್ಕೆ ಈಗಿರುವ ಸ್ಥಾನ ಪ್ರಾಚೀನ ಕಾಲದಲ್ಲಿಯೂ ಇದ್ದಿದ್ದರೆ ಅಂದಿನ ಕೃತಿಗಳಲ್ಲಿ ಅದು ಪ್ರಸ್ತಾಪವಾಗಿರಬೇಕಿತ್ತು. ಅಲ್ಲವೇ? ಆದ್ರೆ ಅಲ್ಲೆಲ್ಲೂ ತಾಳಿಯ ಬಗ್ಗೆ ಉಲ್ಲೇಖಿಸಿಲ್ಲ ಅನ್ನೋದು ಈ ದೇಶದ ಮಾಧ್ಯಮಗಳು ಸ್ಪಷ್ಟವಾಗಿ ಈ ಹಿಂದೆಯೇ ಅದೆಷ್ಟೋ ಲೇಖನಗಳಲ್ಲಿ ಉಲ್ಲೇಖಿಸಿದೆ. ಹೀಗಿರೋವಾಗ ತಾಳಿ ಬ್ರಾಹ್ಮಣ್ಯದ ಸಂಕೇತ ಅನ್ನೋದು ಎಷ್ಟು ಸರಿ? ಒಂದು ವೇಳೆ ಬ್ರಾಹ್ಮಣ್ಯದ ಸಂಕೇತ ಅನ್ನೋದಾದ್ರೆ ತಾಳಿ ಕೀಳುವ ಮುನ್ನವೇ ಈ ಬಗ್ಗೆ ದಾಖಲೆಗಳನ್ನ ತೋರಿಸಬಹುದಲ್ಲವೇ? ಇನ್ನು ತಾಳಿ ಕೀಳೋ ಸಂಘಟನೆಗಳು ತಾಳಿಯಿಂದ ಹೆಣ್ಣಿನ ಮೇಲೆ ಆಗೋ ದೌರ್ಜನ್ಯಗಳನ್ನಾದ್ರೂ ತಿಳಿಸೋ ಕೆಲಸ ಮಾಡಿದ್ರೆ ಒಳ್ಳೆಯದು. ತಾಳಿ ಈ ದೇಶದ ಸಂಸ್ಕೃತಿ, ಹಿಂದೂ ಪದ್ದತಿ ಅನ್ನೋದಕ್ಕಿಂತಲೂ ಹೆಚ್ಚಾಗಿ ವಿವಾಹಿತ ಮಹಿಳೆಯನ್ನ ಗುರುತಿಸೋ ಒಂದು ವಿಧಿ ಬದ್ದ ವಿಧಾನ ಅಂತಾನೂ ಹೇಳಬಹುದು. ತಾಳಿ ಧರಿಸಿದ ಹೆಣ್ಮಗಳನ್ನ ಗೌರವದಿಂದ ಕಾಣೋ ವ್ಯಕ್ತಿತ್ವವೂ ಈ ದೇಶದಲ್ಲಿ ಬೆಳೆದು ಬಂದಿದೆ. ಆಕೆ ವಿವಾಹಿತೆ ಅನ್ನೋದನ್ನ ತಿಳಿಸೋ ತಾಳಿ ಹೆಣ್ಣಿಗೆ ಈ ದೇಶದಲ್ಲಿ ಗೌರವಯುತ ಬದುಕು ಕಟ್ಟಿಕೊಟ್ಟಿದೆ ಅನ್ನೋದು ನನ್ನ ಭಾವನೆ. ಆದ್ರೆ ಇದನ್ನ ವಿರೋಧಿಸಿ ಅದಕ್ಕೊಂದು ಕೆಟ್ಟ ಅರ್ಥ ಕಲ್ಪಿಸೋ ಈ ಸಂಘಟನೆಗಳಿಗೆ ತಾಳಿ ಕಿತ್ತು ಹಾಕೋ ಹೋರಾಟ ಮಹಾನ್ ಕಾರ್ಯವಾಗಿ ಕಂಡಿದ್ದು ಮಾತ್ರ ದುರಂತ...! ಈ ಸಂಘಟನೆಗಳು ವಿರೋಧಿಸೋ ಭರದಲ್ಲಿ ಹೆಣ್ಣಿನ ಅಪಮಾನ ಮಾಡುತ್ತಿವೆ ಅನ್ನೋದು ನನ್ನ ಅನಿಸಿಕೆ. ಈ ದೇಶದಲ್ಲಿ ಉದ್ದಾರ ಮಾಡೋದಕ್ಕೆ ಅದೆಷ್ಟೋ ಕೆಲಸಗಳಿವೆ. ಹೀಗಿದ್ರೂ ವೈದಿಕ ಸಂಸ್ಕೃತಿಯನ್ನ ವಿರೋಧಿಸೋ ನೆಪದಲ್ಲಿ ತಾಳಿಯನ್ನ ಕಿತ್ತೆಸೆಯೋ ಈ ಸಂಘಟನೆಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಇನ್ನು ಇವರ ವಿರೋಧಿಯಾಗಿ ಮಾತೆತ್ತಿದರೆ ಬ್ರಾಹ್ಮಣ್ಯದ ಪರ, ಸಂಘದ ಪರ, ಹಿಂದೂ ಪರ ಅನ್ನೋ ಹಣೆಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆದ್ರೆ ಈ ದೇಶದಲ್ಲಿ ಮಾಡಬೇಕಾಗಿರೋದನ್ನ ಬಿಟ್ಟು, ಅಶಾಂತಿ ಸೃಷ್ಟಿಸೋ ಕೆಲಸಕ್ಕೆ ಕೈ ಹಾಕೋ ಇವ್ರುಗಳನ್ನ ದೇಶದೊಳಗಿನ ಭಯೋತ್ಪಾದಕರು ಅಂದ್ರೂ ತಪ್ಪಿಲ್ಲ......ಇನ್ನು ಹಿಂದೂ ಸಂಸ್ಕೃತಿಯ ಬುಡಕ್ಕೆ ದಿನಕ್ಕೊಂದು ಕೊಡಲಿಯೇಟು ಹಾಕೋ ಇಂಥವ್ರು ಮುಸ್ಲಿಮರಲ್ಲಿ ಬೀಡು ಬಿಟ್ಟಿರೋ ಬುರ್ಖಾ ಸಂಸ್ಕೃತಿಯನ್ನೇಕೆ ವಿರೋಧಿಸ್ತಾ ಇಲ್ಲ? ಇದು ಕೂಡ ಹೆಣ್ಣಿನ ದಾಸ್ಯದ ಸಂಕೇತವಲ್ಲವೇ? ಇಲ್ಲಿ ಹೆಣ್ಣನ್ನ ಗುಲಾಮಳನ್ನಾಗಿಸೋ ಕೆಲಸ ನಡೆಯುತ್ತಿಲ್ಲವೇ? ಹಾಗಿದ್ರೆ ತಾಳಿ ಕಿತ್ತು ಹಾಕೋ ಚಳುವಳಿಯ ರೀತಿಯಲ್ಲಿ ಈ ಸಂಘಟನೆಗಳಿಗೆ ಬುರ್ಖಾ ಕಿತ್ತು ಹಾಕಿ ಅನ್ನೋ ಚಳುವಳಿ ಮಾಡೋ ತಾಕತ್ತಿದೆಯೇ?....ಖಂಡಿತಾ ಇಲ್ಲ. ಕಾರಣ ಇಷ್ಟೇ...ಈ ದೇಶದ ಸಂಸ್ಕೃತಿ ಅಂತ ಕರೆಸಿಕೊಳ್ಳೋ ವಿಚಾರಗಳನ್ನ ಬುಡ ಸಮೇತ ಕಿತ್ತು ಹಾಕೋದೊಂದೇ ಇವ್ರ ಉದ್ದೇಶ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjVOuaCcBfM8XY0viCnSBuvqhjx_ZDX8AsVwTFuSptDcOhn76pG8dbqRGiV2KVlVbTXZyYrB4Hj-ZpESqKOW_0jFLEAI_X2i9Y-Sc00f5XWgER7hgr6_sKUehffEmopYA39sufM3SOtD3w/s1600/thali.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjVOuaCcBfM8XY0viCnSBuvqhjx_ZDX8AsVwTFuSptDcOhn76pG8dbqRGiV2KVlVbTXZyYrB4Hj-ZpESqKOW_0jFLEAI_X2i9Y-Sc00f5XWgER7hgr6_sKUehffEmopYA39sufM3SOtD3w/s1600/thali.jpg" height="212" width="320" /></a></div>
<br />
ನನ್ನ ಪ್ರಕಾರ ಬ್ರಾಹ್ಮಣತ್ವ ಈ ದೇಶಕ್ಕೆ ಅಪಾಯಕಾರಿ ಅನ್ನೋದನ್ನ ಒಪ್ಪಿಕೊಳ್ಳುತ್ತೇನೆ. ಹಾಗಂತ ಈ ದೇಶದಲ್ಲಿ ಆಚರಣೆಯಲ್ಲಿರೋ ಎಲ್ಲಾ ಆಚಾರ-ವಿಚಾರಗಳು ಬ್ರಾಹ್ಮಣರ ಸ್ವತ್ತು ಅಂತ ವಾದಿಸೋದು ಸರಿಯಲ್ಲ. ಅಲ್ಲದೇ ಇದೇ ವಾದ ಮುಂದಿಟ್ಟುಕೊಂಡು ವೈವಾಹಿಕ ಜೀವನದ ಅತ್ಯಮೂಲ್ಯ ಸಂಕೇತ ಅನಿಸಿಕೊಂಡಿರೋ ತಾಳಿ ಕೀಳೋ ಇವ್ರದ್ದು ಮೂರ್ಖತನದ ಪರಮಾವಧಿಯಲ್ಲದೇ ಇನ್ನೇನು? ಇನ್ನು ಇಂದಿಗೂ ಈ ದೇಶದ ಅದೆಷ್ಟೋ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿವಾಹಿತ ಹೆಣ್ಮಕ್ಕಳು ತಾಳಿಯನ್ನ ಕಟ್ಟಿಕೊಳ್ತಾರೆ. ಹಾಗಿದ್ರೆ ಇವ್ರೆಲ್ಲರೂ ಬ್ರಾಹ್ಮಣರಿಂದ ಪ್ರೇರೇಪಣೆಗೆ ಒಳಗಾದ್ರೆ ಅನ್ನೋದನ್ನ ಚಳುವಳಿಗಾರರು ತಿಳಿಸಬೇಕು. ಅದಕ್ಕೂ ಮುಖ್ಯವಾಗಿ ತಾಳಿಯಿಂದ ಹೆಣ್ಣು ದಾಸ್ಯಕ್ಕೆ ಒಳಗಾಗ್ತಿದ್ದಾಳೆ ಅನ್ನೋದ್ರ ಬದಲು ಸಮಾಜದಲ್ಲಿ ಬೀಡು ಬಿಟ್ಟಿರೋ ವರದಕ್ಷಿಣೆ ಪಿಡುಗಿನ ವಿರುದ್ದ ಈ ಸಂಘಟನೆಗಳು ಧ್ವನಿಯೆತ್ತೋದು ಒಳಿತು. ವಿವಾಹಿತ ಹೆಣ್ಣಿನ ಮೇಲೆ ಈ ದೇಶದಲ್ಲಿ ಶೋಷಣೆ ಆಗ್ತಿದೆ ಎಂದಾದ್ರೆ ಅದು ಹೆಚ್ಚಾಗಿ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ವಿಚಾರವಾಗಿಯೇ ನಡೀತಾ ಇದೆ. ಅದು ಬಿಟ್ಟು ಎಲ್ಲೂ ತಾಳಿ ಕಟ್ಟಿದ ತಕ್ಷಣ ಹೆಣ್ಣು ಗುಲಾಮಳಾಗಿ ಬದಲಾಗೋದಿಲ್ಲ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgofFsa28yAmC6Hra09RiL7brY0GFafdtu6164eBkmptJexqA3by8yMNW5a6RXo4P4xlDsw6UOJ8cXr9zJYJVq-amCrcEUyPIIc-oWGERVWPsv4-MNxEuQjtXry_54jZU0A5CHo01bVvWM/s1600/thali+new.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgofFsa28yAmC6Hra09RiL7brY0GFafdtu6164eBkmptJexqA3by8yMNW5a6RXo4P4xlDsw6UOJ8cXr9zJYJVq-amCrcEUyPIIc-oWGERVWPsv4-MNxEuQjtXry_54jZU0A5CHo01bVvWM/s1600/thali+new.jpg" height="241" width="320" /></a></div>
<br />
ದುರಂತ ಅಂದ್ರೆ ತಾಳಿ ಕಟ್ಟದೇ, ತಮ್ಮದೇ ಆದ ಶೈಲಿಯಲ್ಲಿ ಮದುವೆಯಾಗೋ ಅದೆಷ್ಟೋ ಸಂಸಾರಗಳು ಹಾದಿ ತಪ್ಪಿದ ಉದಾಹರಣೆಗಳಿವೆ. ಹಾಗಂತ ಇಲ್ಲಿ ತಾಳಿ ಕಟ್ಟಿದ್ದರೆ ಸಂಸಾರ ಸರಿಯಾಗಿರ್ತಿತ್ತು ಅನ್ನೋದು ನನ್ನ ವಾದವಲ್ಲ. ಆದ್ರೆ ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಅನ್ನೋ ಎಡಬಿಡಂಗಿಗಳ ವರ್ತನೆ ಬಗ್ಗೆ ಅನಿಸಿಕೆಯಷ್ಟೇ. ಈ ದೇಶದಲ್ಲಿ ಅವ್ರವ್ರ ಆಚಾರ-ವಿಚಾರಗಳು ಅವ್ರವ್ರ ನಂಬಿಕೆಗೆ ಬಿಟ್ಟದ್ದು. ಅದನ್ನ ವಿರೋಧಿಸೋ ನೆಪದಲ್ಲಿ ಭಾವನೆಗಳಿಗೆ ಧಕ್ಕೆ ತರೋದು ಸರಿಯಲ್ಲ. ಬ್ರಾಹ್ಮಣರ ಆಚರಣೆ ಅಂತ ಕರೆಸಿಕೊಳ್ಳೋ ಸಾಕಷ್ಟು ವಿಚಾರಗಳಲ್ಲಿ ಗೊಂದಲಗಳಿವೆ. ಕೆಲವು ವಿಚಾರಗಳಲ್ಲಿ ಮನುಷ್ಯನ ಶೋಷಣೆಯೂ ನಡೀತಾ ಇದೆ. ಇನ್ನು ಕೆಲವು ವಿಚಾರಗಳಲ್ಲಿ ಮೂಢನಂಬಿಕೆಯನ್ನ ತುಂಬಿ ಜನ್ರನ್ನ ಅಜ್ನಾನಿಗಳನ್ನಾಗಿಸೋ ಕೆಲಸವೂ ನಡೀತಾ ಇದೆ. ಆದ್ರೆ ಎಲ್ಲಿ ದೇಶಕ್ಕೆ, ಜನ್ರಿಗೆ ಅಪಾಯ ಇದೆ ಅನ್ನೋದು ಅರಿವಾಗುತ್ತೋ ಅಂಥದ್ದನ್ನ ತಡೆಯೋದ್ರಲ್ಲಿ ಖಂಡಿತಾ ತಪ್ಪಿಲ್ಲ. ಹಾಗಂತ ತಾಳಿ ಕಟ್ಟಿಸಿಕೊಳ್ಳೋದೇ ಅಪಾಯ ಅನ್ನೋದಾದ್ರೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯೇ ಇಂಥದ್ದಕ್ಕೆ ಸೂಕ್ತ ಉತ್ತರ ನೀಡಬೇಕಿದೆ......</div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-27015398909129700112014-06-30T06:47:00.001-07:002014-06-30T06:47:38.759-07:00<div dir="ltr" style="text-align: left;" trbidi="on">
<h2 style="text-align: left;">
<i><span style="color: red;">ಮನಸ್ಸೆಲ್ಲಾ ಆವರಿಸಿದವನು ಶೂನ್ಯ ಬಿಟ್ಟು ಹೋದಾಗ...!</span></i></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgtbrW-MngNuViW8Dn0rY2t2ccKtzn7Uv6qenPmMnofEEMqwLz7DDcqBTe2z7pF1zwvW0LIjU6FTkZ-H0KEnNXuBmqgkAEfnBlnh9J77U_DfKyl75-S90PEWPL49FYqqFRiKwlsrmGTUXw/s1600/images+(2).jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgtbrW-MngNuViW8Dn0rY2t2ccKtzn7Uv6qenPmMnofEEMqwLz7DDcqBTe2z7pF1zwvW0LIjU6FTkZ-H0KEnNXuBmqgkAEfnBlnh9J77U_DfKyl75-S90PEWPL49FYqqFRiKwlsrmGTUXw/s1600/images+(2).jpg" height="274" width="400" /></a></div>
<div>
<i><span style="color: red;"><br /></span></i></div>
...............ಕಣ್ಣೀರ ಕೊಳದಲ್ಲಿ<br />
ಹುಟ್ಟಿರದ ದೋಣಿಯಲಿ<br />
ಏಕಾಂಗಿ ಕುಳಿತಿರಲು<br />
ನಕ್ಷತ್ರ ಅಳುತಿರಲು<br />
ಇರುಳಿನ ಗಾಳಿ ನರಳಿ<br />
ಗಾನದ ಗಾಯಕೆ ಮಾಯದ ನೋವಿದೆ<br />
ಪ್ರೀತಿಯ ಹೂವಿಗೆ ಆಳದ ಅಳಲಿದೆ..................!<br />
..................................ಇದು ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಸಾಹಿತ್ಯದಲ್ಲಿ ಮೂಡಿಬಂದಿರೋ ಸಿ.ಅಶ್ವಥ್ ಕಂಠದಲ್ಲಿ ಹೊರಹೊಮ್ಮಿರೋ ಪ್ರೇಯಸಿ ಪ್ರೀತಿಸಿ ಮರೆತೆಯಾ? ಎಂಬ ಹಾಡಿನ ಸಾಲುಗಳು. ಹಾಡುಗಳು ಅನ್ನೋದೇ ಹಾಗೆ ಬದುಕಿನ ಪ್ರತೀ ಹೆಜ್ಜೆಗಳನ್ನ ಅದ್ಯಾಗೋ ಕಣ್ಣಿಗೆ ಕಟ್ಟೋವಂತೆ ಕಟ್ಟಿ ಕೊಡುತ್ತೆ. ಇನ್ನು ಹಾಡುಗಳನ್ನ ಕೇಳೋವಾಗಲೂ ಅಷ್ಟೇ....ಬೇಜಾರಾಗಿದ್ದಾಗ ಸಾಹಿತ್ಯ ಇಷ್ಟ ಆದ್ರೆ, ಖುಷಿಯಾಗಿದ್ದಾಗ ಸಂಗೀತ ಇಷ್ಟ ಆಗುತ್ತೆ.....ಬದುಕಲ್ಲೂ ಅಷ್ಟೇ ಖುಷಿಯಲ್ಲಿದ್ದಾಗ ಎಲ್ರೂ ಇಷ್ಟ ಆಗ್ತಾರೆ...ಆದ್ರೆ ನೋವಾದಾಗ ಜಸ್ಟ್ ಹತ್ತಿರ ಅಂತ ಅನಿಸಿಕೊಂಡವ್ರು ಮಾತ್ರ ಇಷ್ಟ ಆಗ್ತಾರೆ. ನಾನಿವತ್ತು ಬರೀತಾ ಇರೋ ಲೇಖನ ನನ್ನ ಇಷ್ಟ-ಕಷ್ಟಗಳಿಗೆ ಸಂಬಂಧಪಟ್ಟದ್ದಲ್ಲ. ಬದಲಾಗಿ ನನ್ನನ್ನ ಇಷ್ಟ ಪಟ್ಟವರಿಗೆ ಸಂಬಂಧಿಸಿರೋದು.<br />
ಅವಳ ಹೆಸ್ರು ಕಾವ್ಯ(ಅನಿವಾರ್ಯ ಕಾರಣಗಳಿಂದ ಹೆಸರನ್ನ ಬದಲಿಸಿದ್ದೇನೆ). ಈ ಹುಡುಗಿ ನನ್ನ ಜೊತೆ ಹುಟ್ಟದೇ ಇದ್ರೂ ಬಾಯ್ತುಂಬ ಅಣ್ಣ ಅಂತ ಕರೀತ ತನ್ನ ಜೀವನದ ಬಗ್ಗೆ ಹೇಳ್ತಾ ಇದ್ಳು. ಸಂತೋಷ, ದುಃಖ, ನೋವು-ನಲಿವು ಎಲ್ಲವನ್ನೂ ಇಂಚಿಂಚೂ ನನ್ನ ಜೊತೆ ಅಪ್ಡೇಟ್ ಮಾಡ್ತಿದ್ಳು. ಹೀಗಿರೋವಾಗಲೇ ಮೊನ್ನೆ ಅದ್ಯಾಕೋ ಗೊತ್ತಿಲ್ಲ, ಈ ಪ್ರೀತಿ ಹಿಂಗ್ಯಾಕೆ ಮಾಡುತ್ತೆ? ಅಣ್ಣ ಅಂತ ಸಣ್ಣ ದನಿಯಲ್ಲಿ ಕೇಳಿ ಬಿಟ್ಟಿದ್ದಳು ಕಾವ್ಯ. ದುರಂತ ಅಂದ್ರೆ ಚೆಲ್ಲು ಚೆಲ್ಲು ಸ್ವಭಾವದ ನನ್ನ ತಂಗಿ ಪ್ರೀತಿ ಬಗ್ಗೆ ನನ್ನ ಜೊತೆ ಮಾತನಾಡಿದ್ದು ಆವತ್ತೆ ಮೊದಲು ಅಂದ್ಕೋತಿನಿ. ಹೀಗೆ ತನ್ನ ಪ್ರೀತಿ ಬಗ್ಗೆ, ತನಗೆ ಕೈಕೊಟ್ಟ ಹುಡುಗನ ಬಗ್ಗೆ ಎಲ್ಲವನ್ನೂ ಹೇಳಿಕೊಂಡು ಅತ್ತು ಬಿಟ್ಟಳು ಅವಳು.....! ಹುಡುಗೀರಾ ಕಣ್ಣೀರಿಗೆ ಕರಗಬಾರದು ಅಂತಾರೆ...ಹಾಗಾಗಿ Full alert ಆಗಿದ್ದ ನಾನು ಎಲ್ಲವನ್ನ ಸಾವಕಾಶವಾಗಿ ಕೇಳಿ ಒಂಚೂರು ಸಮಾಧಾನ ಮಾಡಿ ತಂಗಿಯ ಮನಸ್ಸಿನ ನೋವಿಗೆ ಒಂದು ಹಂತದ ಸಾಂತ್ವಾನ ನೀಡಿ ಬಿಟ್ಟೆ. ಆದ್ರೆ ಅದ್ಯಾಕೋ ಅವಳ ನೋವಿಗೆ ಪೂರ್ಣ ಪ್ರಮಾಣದ ಸಂತ್ವಾನ ನೀಡೋಕಂತೂ ನನ್ನಿಂದ ಆಗಲೇ ಇಲ್ಲ. ಹೀಗಾಗಿ ಇವತ್ತು ನಾನು ಒಂದು ಮುಗ್ಧ ಹೆಣ್ಣಿನ(?) ಮನಸ್ಸಿನಲ್ಲಿ ಪರಕಾಯ ಪ್ರವೇಶ ಮಾಡ್ತಾ ಇದೀನಿ...ಒಂದು ಮುಗ್ಧ ಪ್ರೀತಿ, ಶುದ್ದ ಪ್ರೀತಿ...ಹೇಗೆಲ್ಲಾ ಕಾಡುತ್ತೆ ಅನ್ನೋದನ್ನ ನನಗೆ ತಿಳಿದಂತೆ ಹೇಳ್ತೀನಿ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjAVwpRvI86S7FlUvfvYcAaBQdwi6fZqv5Swanb8amXtiC3p_cCUtuSjJXMfUOdSOC25Tp3hq8fJFvrVq8DNivkhJkLYqrbMGvDrck9Pw1WyzAUZrwFsBbcfKAXvvTrZw69yomQDUJeyKs/s1600/Dhedal.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEjAVwpRvI86S7FlUvfvYcAaBQdwi6fZqv5Swanb8amXtiC3p_cCUtuSjJXMfUOdSOC25Tp3hq8fJFvrVq8DNivkhJkLYqrbMGvDrck9Pw1WyzAUZrwFsBbcfKAXvvTrZw69yomQDUJeyKs/s1600/Dhedal.jpg" height="400" width="393" /></a></div>
<br />
<br />
"Love can't be explained but it can be expressed..!<br />
"ಅನ್ನೋ ಮಾತು ನೂರಕ್ಕೆ ಸತ್ಯ. ಇನ್ನು ಹುಡುಗೀರಾ ವಿಚಾರಕ್ಕೆ ಬಂದ್ರಂತೂ ಅವ್ರಲ್ಲಿ ಮುಗ್ಧತೆ ತುಂಬಿರೋ ಪ್ರೀತಿನೂ ಇರುತ್ತೆ..ಮೋಸ ಮಾಡೋ ನೂರೆಂಟು ಪ್ರೀತಿಗಳೂ ಇರುತ್ತೆ. ಆದ್ರೆ ಮುಗ್ಧತೆಯ ಪ್ರೀತಿ ಅದ್ರಲ್ಲೂ first time love ಅಂತಾರಲ್ಲ..ಅದಂತೂ ಹುಡುಗೀರಾ ಜೀವನದಲ್ಲಿ ಸಖತ್ ನೋವು ಕೊಡುತ್ತೆ. ಈ ಹುಡುಗೀರಿದಾರಲ್ಲ...ಅವ್ರು ತುಂಬಾನೆ ಪ್ರೀತಿ ಮಾಡೋದು ಅವ್ರ ಫಸ್ಟ್ ಲವ್ವನ್ನ...ಅದೊಂಥರಾ Innocent love ಕಣ್ರೀ...ಆದ್ರೆ ವಿಪರ್ಯಾಸ ಅಂದ್ರೆ ಈ First love ಇದ್ಯಲ್ಲ....ಅದು ಅವರಿಗೆ ಸಿಗೋದೇ ಇಲ್ಲ. ಸಿಕ್ಕೋ ಪ್ರೀತಿ ಮನಸಿನ ಪುಟಗಳಿಗೆ ಭಾರೀ ದೊಡ್ಡ ಗಾಯ ಮಾಡಿ ಹೋಗಿ ಬಿಡುತ್ತೆ. ಆದ್ರೆ ಈ ಪ್ರೀತಿ ಮಾತ್ರ ಜೀವನದ ಕೊನೆ ವರೆಗೆ ಉಳಿಯೋ ಒಂಥರಾ sweet pain...ಅದನ್ನ ಉಳಿಸಿಕೊಂಡು...ನೆನಪಿಸಿಕೊಂಡು ಬದುಕೋದಿದ್ಯಲ್ಲ...really super.....ಇನ್ನು ತನ್ನ first love ಕಳ್ಕೊಂಡ ಹುಡುಗಿ ಮತ್ತೆ ಲವ್ವೇ ಮಾಡೋದಿಲ್ಲ ಅಂತಲ್ಲ. second love ಮಾಡೋದ್ರಲ್ಲಿ ಹುಡುಗ್ರಿಗಿಂತ Fast ಈ ಹುಡುಗೀರು.....ಆದ್ರೂ ತನ್ನ ಫಸ್ಟ್<br />
ಲವರ್ ಅನಿಸಿಕೊಂಡ ಮಹಾನುಭಾವನನ್ನ ಮರೆಯೋದೇ ಇಲ್ಲ. ಅದೊಂಥರ First experience ಅಲ್ವಾ...? ಹಾಗಾಗಿ ಅದನ್ನ ಐತಿಹಾಸಿಕ ಹೆಜ್ಜೆ ಅನ್ನೋ ಥರ ಮನದ ಮರೆಯಲ್ಲಿ ಬಚ್ಚಿಟ್ಟಿರ್ತಾರೆ. ಇದಾಗಿ ಇವ್ರ ಲೈಫಲ್ಲಿ ಎಂಟ್ರಿ ಕೊಡೋ ಮತ್ತೊಬ್ಬ ಕೂಡ ಕೈಕೊಟ್ಟ ಅಂದ್ಕೊಳ್ಳಿ.....ಬೇಜಾರೇ ಇಲ್ಲ...ಅವನಿಲ್ದೇ ಇದ್ರೆ ಮತ್ತೊಬ್ಬ ಅಂತ ಹೋಗೋರೇ ಹೆಚ್ಚು......ಆದ್ರೆ ಫಸ್ಟ್ ಲವ್ ಮಾತ್ರ ಬೆಸ್ಟ್ ಲವ್ ಅಂತಾನೆ ಇರ್ತಾರೆ....<br />
ಅವನ ಜೊತೆ ಆಡಿರೋ ಜಗಳ, ಕಣ್ಣಂಚಿನ ನೋಟ, ಹಿತವಾದ ಸ್ಪರ್ಶ, ಒಟ್ಟಿಗೆ ಕೂತು ಹೆಣೆದ ಕನಸುಗಳು, ಒಟ್ಟಿಗೆ ಕೂತು ಕೇಳಿದ ಹಾಡುಗಳು, ನೋಡಿದ ಸಿನೆಮಾಗಳು, ಚೆಂದನೆಯ giftsಗಳು, ಒಟ್ಟಿಗೆ ಹೆಜ್ಜೆ ಹಾಕಿದ ಹಾದಿ, ಕೂತು ಹರಟಿದ ಹುಲ್ಲುಹಾಸಿನ ಪಾರ್ಕು..... ಅಥವಾ ಯಾವುದೋ ಒಂದು ಮಾಮೂಲಿ ಜಾಗ.....ಚಾಕೋಲೇಟ್ ತಿನ್ನೋವಾಗ ಮಾಡಿದ ಜಗಳ....ಸಮುದ್ರದ ದಂಡೆಯಲ್ಲಿ ಬೆನ್ನಿಗೆ ಬೆನ್ನಿಟ್ಟು ಕೂತ ಕ್ಷಣಗಳು...ಹೀಗೆ ಇಂಥಹ ಅದ್ಭುತ ಕ್ಷಣಗಳು ಅವ್ರನ್ನ ಕಾಡಿಸದೇ ಇರುತ್ತಾ...? ಎಸ್..... ನಾನು ಮೇಲೆ ಹೇಳಿರೋ ಕಾವ್ಯಾಳಿಗೂ ಆಗಿದ್ದು ಇದೆ...FIRST LOVE....BEST LOVE ಅನ್ನೋ ಹಾಗೆ.....ಅವೆಲ್ಲವನ್ನ ನೆನಪಿಸಿಕೊಂಡು ಕಣ್ಣೀರು ಹಾಕ್ತಾಳೆ.....ಬದುಕೇ ಬೇಡ ಅಂಥ ಸಣ್ಣ ವಯಸ್ಸಲ್ಲೇ ಫಿಲಾಸಫಿಯ ಮಾತುಗಳು....ಸಾಯ್ತೇನೆ ಅನ್ನೋ ಕ್ಷಣಿಕ ಡೈಲಾಗ್ ಗಳು......ಆದ್ರೆ ಏನ್ ಮಾಡೋದು ತಂಗಿ ಅಂತ ಸಾಂತ್ವಾನ ಹೇಳ್ಕೋಬೇಕಷ್ಟೇ.......ಆದ್ರೆ ಹುಡುಗೀರು ಸಖತ್ Fast ಅನ್ನೋದನ್ನ ನನ್ನ ತಂಗಿ ಕಾವ್ಯಾ ಕೂಡ ಸಾಬೀತು ಪಡಿಸಿದ್ದಾಳೆ ಅನ್ನೋದೇ ಖುಷಿ ಕೊಡೋ ವಿಚಾರ.....ಮೊದಲ ಪ್ರೀತಿ ಕೈಕೊಟ್ಟ ನಂತ್ರ ಒದ್ದೆಯಾಗಿದ್ದ ಕಣ್ಣಂಚಿನಲ್ಲಿ ಮತ್ತೊಂದು ಪ್ರೀತಿ ಮೂಡಿದೆ. ಕೈಕೊಟ್ಟವನ ನೆನಪುಗಳನ್ನ ಮೆಲುಕು ಹಾಕುತ್ತಳೇ ಲವ್ ಎಕ್ಸ್ ಪೀರಿಯನ್ಸ್ ಅನ್ನೋ ಅನುಭವದ ಮೇಲೆ ಮತ್ತೊಂದು ಪ್ರೀತಿಯತ್ತ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾವ್ಯ ಹೊರಳಿದ್ದಾಳೆ. ಹಾಗಂತ ಇದು ಕೂಡ ಶಾಶ್ವತ ಅಂತ ಹೇಳೋದಿಲ್ಲ. ಯಾಕೆಂದ್ರೆ ಕಾಲೇಜು ಜೀವನದಲ್ಲಿ ಎಲ್ಲರೂ ಹುಚ್ಚರೇ....ಹತ್ತಾರು ಕನಸಿನ ಹುಚ್ಚು ಹುಡುಗೀರು ಒಂದು ಕಡೆಯಾದ್ರೆ.........ದಿನಕ್ಕೊಂದು ಕನಸು ಕಾಣೋ ತಲೆ ಕೆಟ್ಟ ಹುಡುಗ್ರು ಇನ್ನೊಂದು ಕಡೆ....ಹಾಗಾಗಿ ನನ್ನ ತಂಗಿ ಕಾವ್ಯಾ ಕೂಡ ಮತ್ತೊಮ್ಮೆ ನನ್ನೆದುರಿಗೆ ಕಣ್ಣೀರು ಹಾಕ್ತಾಳೆ ಅನ್ನೋ ದೃಢವಾದ ನಂಬಿಕೆ ನನಗಂತೂ ಇದ್ದೇ ಇದೆ...! ದೇವರಾಣೆ ಹೇಳ್ತೀನಿ ನನ್ನ ನಂಬಿಕೆಯನ್ನ ನನ್ನ ತಂಗಿ ಯಾವತ್ತೂ ಸುಳ್ಳು ಮಾಡೋದೇ ಇಲ್ಲ ಬಿಡಿ......! ಆದ್ರೆ ಮುಂದಿನ ಸಲ ಅವಳ ಮನಸ್ಸು ಪ್ರೀತಿ ಕಳೆದುಕೊಂಡು ಅಳೋದಿಲ್ಲ.....ಅಳು ಏನಿದ್ರೂ ಕಣ್ಣಂಚಿನಲ್ಲಿ ನೀರಾಗಿ ಹರಿದು ಕ್ಷಣಿಕ ಅನಿಸಿ ಬಿಡುತ್ತೆ....ಹೀಗಾಗಿ ಈ ಪ್ರೀತಿ ಹಿಂಗ್ಯಾಕೆ ಅಂತ ಕಾವ್ಯಾ ಕೇಳಿದಾಗ ದೊಡ್ಡ ದೊಡ್ಡ ಫಿಲಾಸಫಿಯ ಮಾತುಗಳು ನನ್ನ ಬಾಯಿಯಿಂದ ಬರಲೇ ಇಲ್ಲ. ಅನುಭವ ಸಾಕಷ್ಟು ಕಲಿಸಿಕೊಟ್ಟಿರೋ ಕಾರಣ ಮೊದಲ ಪ್ರೀತಿ ಕಳೆದುಕೊಂಡ ನನ್ನ ತಂಗಿಯನ್ನ ಅಂದು ಹಾಗೇ ಸುಮ್ಮನೇ ಸಂತೈಸಿದ್ದೆ.............<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEib1dOj-6mGFXcbnXNL2cGluGk_78jrly0yh5ctB-6dfVR_5AkFEuyAJATuwz3ApzLRl6t6yMCqY8o2gFLcIyBj5lDRAtCANQBYJBrmKqLolmiSirvQuGHxosz-spW_CY3EayQ0qqAGXKE/s1600/images.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEib1dOj-6mGFXcbnXNL2cGluGk_78jrly0yh5ctB-6dfVR_5AkFEuyAJATuwz3ApzLRl6t6yMCqY8o2gFLcIyBj5lDRAtCANQBYJBrmKqLolmiSirvQuGHxosz-spW_CY3EayQ0qqAGXKE/s1600/images.jpg" height="400" width="333" /></a></div>
<br />
OK.......ಹುಡುಗೀಯರ ಮನಸ್ಸಿಗೆ ಪರಕಾಯ ಪ್ರವೇಶ ಮಾಡೋದು ನಿಜಕ್ಕೂ ಸಖತ್ ಕಷ್ಟದ ಕೆಲ್ಸ ಕಣ್ರೀ......<br />
<br />
ವಿ.ಸೂ: ಇಲ್ಲಿ ಪರಕಾಯ ಪ್ರವೇಶ ಮಾಡಿರೋ ಮನಸುಗಳು ಚೆಲ್ಲು ಚೆಲ್ಲು ಸ್ವಭಾವದ ಹುಡುಗಿಯರದ್ದು ಅನ್ನೋದು ನೆನಪಿರಲಿ....!<br />
<br />
ಎಚ್ಚರ: ಸೂಕ್ಷ್ಮ ಸ್ವಭಾವದ ಹುಡುಗೀರು ಮೊದಲ ಪ್ರೀತಿ ಕಳೆದು ಕೊಂಡಾಗ ಸಾಯಲೂ ಬಹುದು....ಸತ್ತವರೂ ಇದ್ದಾರೆ.....!<br />
<br />
<br /></div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-46164741913509644312014-05-18T02:21:00.002-07:002014-05-18T02:24:45.712-07:00<div dir="ltr" style="text-align: left;" trbidi="on">
<h2 style="text-align: left;">
<br /></h2>
<h2 style="text-align: left;">
<span style="color: yellow;"><i>ಮೋದಿ ಗೆಲುವು ಬಿಜೆಪಿ ಧ್ವಜದ ಜೊತೆ ಭಗವಾಧ್ವಜವನ್ನೂ ಬಲಗೊಳಿಸಿದೆಯೇ?</i></span></h2>
ನರೇಂದ್ರ ಮೋದಿಯೆಂಬ ವ್ಯ(ಶ)ಕ್ತಿಯನ್ನು ಬಿಜೆಪಿ ಚೆನ್ನಾಗಿಯೇ ಪ್ರಮೋಟ್ ಮಾಡಿದೆ. ಕಳೆದ ಸಪ್ಟೆಂಬರ್ ನಿಂದ ಚುನಾವಣೆ ಮುಗಿಯೋ ತನಕ ಬರೋಬ್ಬರಿ 250ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಮೋದಿಯೆಂಬ ಬಿಜೆಪಿಯ ಅಸ್ತ್ರವನ್ನ ಸಖತ್ತಾಗಿಯೇ ಬಳಸಿಕೊಳ್ಳಲಾಗಿದೆ. ವೇದಿಕೆ ಹತ್ತಿದರೆ ಸಾಕು ಮೇರಾ ಬಾಯಿಯೋ ಆರ್ ಬೆಹನೋ ಅನ್ನೋ ಮೋದಿಯ ಮಾತಿಗೆ ಇಡೀ ದೇಶವೇ ತಲೆ ದೂಗಿದೆ ಅನ್ನೋದನ್ನ ಫಲಿತಾಂಶ ಸಾಬೀತು ಪಡಿಸಿದೆ. ನರೇಂದ್ರ ಮೋದಿಯ ಈ ಗೆಲುವಿನಿಂದ ಈ ದೇಶ ಗುಜರಾತ್ ಆಗುತ್ತದೆ, ವೇಗವಾಗಿ ಅಭಿವೃದ್ದಿ ಹೊಂದುತ್ತೆ ಅನ್ನುವ ಕಲ್ಪನೆಗಿಂತಲೂ ಮಿಗಿಲಾಗಿ ಈ ದೇಶದಲ್ಲಿ ಮತ್ತೊಮ್ಮೆ ಸಂಘಪರಿವಾರ ಗಟ್ಟಿಯಾಗಿ ನೆಲೆ ಕಂಡು ಕೊಳ್ಳಲಿದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿ ಬಿಡಬಹುದು. ಹಿಂದುತ್ವದ ಪ್ರಯೋಗ ಶಾಲೆ ಅಂತಾನೆ ಕರೆಸಿಕೊಳ್ಳೋ ದಕ್ಷಿಣ ಕನ್ನಡದಲ್ಲಿ ಚುನಾವಣಾ ಮತ ಎಣಿಕೆ ಮುಗಿದ ತಕ್ಷಣ ಕೌಂಟಿಂಗ್ ಸೆಂಟರ್ ನ ಹೊರ ಭಾಗದಲ್ಲಿ ಮೊದಲಾಗಿ ರಾರಾಜಿಸಿದ್ದು ಇದೇ ಸಂಘಪರಿವಾರದ ಭಗವಾಧ್ವಜಗಳು! ಒಂದು ರಾಜಕೀಯ ಪಕ್ಷ ಗೆದ್ದರೆ ಸಾಕು ಅಲ್ಲಿ ರಾಜಕೀಯ ಪಕ್ಷದ ಬಾವುಟಗಳೇ ಕಾಣ ಸಿಗುತ್ತವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೋದಿ ಗೆಲುವಿನ ಖುಷಿಯನ್ನ ಹೆಚ್ಚಾಗಿ ಹಂಚಿಕೊಂಢಿದ್ದು ಇದೇ ಸಂಘಪರಿವಾರದ ಕಾರ್ಯಕರ್ತರು ಅನ್ನೋದನ್ನ ಮತ್ತೆ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕೂಡ ಇದೇ ಭಗವಾಧ್ವಜವನ್ನು ಹಿಡಿದು ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಪಟ್ಟದ್ದು ಕೂಡ ಗಮನಾರ್ಹ. ಅದರಲ್ಲೂ ಬಿಜೆಪಿ ನಮಗೆ ಮುಖ್ಯವಲ್ಲ, ಮೋದಿ ಗೆದ್ರೆ ಸಾಕು ಅಂತ ಸ್ವತಃ ಅದೆಷ್ಟೋ ಸಂಘದ ಹುಡುಗರು ಮಂಗಳೂರಿನ ಬೀದಿಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರು. ಇನ್ನು ಆರ್ ಎಸ್ ಎಸ್, ಬಜರಂಗದಳ, ವಿಎಚ್ ಪಿಯಂತಹ ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಬಿಜೆಪಿ ಪರವಾಗಿ ಸಾಕಷ್ಟು ಪ್ರಚಾರ ಕೂಡ ನಡಸಿದ್ದವು. ಹಾಗಂತ ಈ ಪ್ರಚಾರದ ಉದ್ದೇಶ ಬಿಜೆಪಿ ಗೆಲ್ಲಬೇಕು, ನಳಿನ್ ಕುಮಾರ್ ಜಯಭೇರಿ ಬಾರಿಸಬೇಕು ಅನ್ನೋದಲ್ಲ. ಬದಲಾಗಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಅನ್ನೋದಾಗಿತ್ತು. ಅದರಂತೆ ಮೋದಿ ಗೆದ್ದಿದ್ದಾರೆ. ಈ ಗೆಲುವಿನ ಖುಷಿಯನ್ನ ಬಿಜೆಪಿ ಬಾವುಟದ ಜೊತೆಗೆ ಸಂಘದ ಭಗವಾಧ್ವಜವೂ ಹಂಚಿಕೊಂಡಿದೆ ಅಂದ್ರೆ ತಪ್ಪಿಲ್ಲ.<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEibrIJPmmD41zlEvw8n4_kggNH_4h4O367flk-doKhVOU_K8uUiU06imkZB0L4McxSorICv4dZ-sEvGcXkMu6LC7I888KfyuUA9Qv8aQmL1W6WR4kvorom04bfuk8uETC-ONzfedeNQ_mo/s1600/10305055_384233121715058_4678656912994783262_n.jpg" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEibrIJPmmD41zlEvw8n4_kggNH_4h4O367flk-doKhVOU_K8uUiU06imkZB0L4McxSorICv4dZ-sEvGcXkMu6LC7I888KfyuUA9Qv8aQmL1W6WR4kvorom04bfuk8uETC-ONzfedeNQ_mo/s1600/10305055_384233121715058_4678656912994783262_n.jpg" height="400" width="276" /></a></td></tr>
<tr><td class="tr-caption" style="text-align: center;"><h4>
<i><span style="color: magenta;">ಭಗವಾಧ್ವಜ ಹಾರಿಸಿ ಬಿಜೆಪಿ ಕಚೇರಿಯಲ್ಲಿ ಗೆಲುವನ್ನ ಸಂಭ್ರಮಿಸಿದ ನಳಿನ್ ಕುಮಾರ್ ಕಟೀಲ್</span></i></h4>
</td></tr>
</tbody></table>
<br />
<h3 style="text-align: left;">
<span style="color: red;">ಅಷ್ಟಕ್ಕೂ ಮೋದಿ ಗೆಲುವಿನಿಂದ ಸಂಘಕ್ಕೇನು ಲಾಭ?</span></h3>
ಹೌದು, ನರೇಂದ್ರ ಮೋದಿ ಪ್ರಧಾನಿಯಾದ್ರೆ ಸಂಘ ಪರಿವಾರಕ್ಕೇನು ಲಾಭ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದ್ರೆ ಮೋದಿ ಬಿಜೆಪಿಯ ಕಾರ್ಯಕರ್ತ ಅಥವಾ ಸದಸ್ಯ ಅನ್ನೋದಕ್ಕಿಂತಲೂ ಹೆಚ್ಚಾಗಿ ಈ ಹಿಂದೆ ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಒಬ್ಬ ಕಟ್ಟರ್ ಹಿಂದುತ್ವವಾದಿ ಅನ್ನೋದನ್ನ ಒಪ್ಪಲೇ ಬೇಕು. ಇದೇ ಕಾರಣಕ್ಕೆ ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ, ಹಿಂದೂ ಸಂಸ್ಕೃತಿಯ ಬಗ್ಗೆ ಇತರೆ ರಾಜಕಾರಣಿಗಳಿಗಿಂತ ಸ್ವಲ್ಪ ಹೆಚ್ಚೇ ಗೊತ್ತು. ಹಾಗಾಗಿ ಹಿಂದೂ ಸಂಘಟನೆಗಳ, ಸಂಘಪರಿವಾರದ ಯುವಕರ ಉದ್ದೇಶಗಳನ್ನ ಮೋದಿ ಈಡೇರಿಸುತ್ತಾರೆ ಅನ್ನೋದು ಹಿಂದೂ ಸಂಘಟನೆಗಳಲ್ಲಿರೋ ಕಾರ್ಯಕರ್ತರ ಭಾವನೆ. ಇದೇ ಕಾರಣಕ್ಕೆ ಈ ದೇಶಕ್ಕೆ ಸೂಕ್ತವಾದ ಪ್ರಧಾನಿ ಬೇಕು ಅನ್ನೋದಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ರಕ್ಷಣೆಗೆ ಒಬ್ಬ ಕಟ್ಟರ್ ಹಿಂದೂವಾದಿ ಬೇಕಾಗಿದೆ ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆಗಳು ಬೀದಿಗಿಳಿದು ಮೋದಿ ಪರವಾಗಿ ಕೆಲಸ ಮಾಡಿವೆ. ಹಾಗಾಗಿಯೇ ಮೋದಿ ಗೆದ್ದಾಗ ಬಿಜೆಪಿ ಬಾವುಟದ ಜೊತೆಗೆ ಧೈರ್ಯವಾಗಿ ಭಗವಾದ್ವಜವೂ ರಾರಾಜಿಸಿದೆ.<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiNMHFfEKvcRW2CzGGjtqsEAit7kPf3p2_pJ5J6W3MoMI8koz-VcPbrOdriZl4mv2UX8CDdjj1Pflo0az3tN809uHNCmuYYs0mpAoXQ5ryQgscLXOQZDGSHRuun3uI_Bwfms5PtWpnsed4/s1600/vlcsnap-2014-05-16-21h38m26s8.png" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEiNMHFfEKvcRW2CzGGjtqsEAit7kPf3p2_pJ5J6W3MoMI8koz-VcPbrOdriZl4mv2UX8CDdjj1Pflo0az3tN809uHNCmuYYs0mpAoXQ5ryQgscLXOQZDGSHRuun3uI_Bwfms5PtWpnsed4/s1600/vlcsnap-2014-05-16-21h38m26s8.png" height="320" width="400" /></a></td></tr>
<tr><td class="tr-caption" style="text-align: center;"><span style="color: red;"><b><i>ಬೊಂದೆಲ್ ನ ಕೌಂಟಿಂಗ್ ಸೆಂಟರ್ ಬಳಿ ಬಿಜೆಪಿ ಗೆಲುವಿನ ನಂತರ ಬಿಜೆಪಿ ಧ್ವಜದೊಂದಿಗೆ ರಾರಾಜಿಸಿದ ಭಗವಾಧ್ವಜ</i></b></span></td></tr>
</tbody></table>
<br />
<h3 style="text-align: left;">
<b><i><span style="color: yellow;">ನಮಕ್ ಮೋದಿ ಬತ್ತ್ಂಡ ಯಾವು ಮಾರ್ರೆ....!(ನಮಗೆ ಮೋದಿ ಬಂದರೆ ಸಾಕು ಮಾರಾಯಾ..!)</span></i></b></h3>
ಈ ದೇಶದಲ್ಲಿ ಮೋದಿಯನ್ನ ಬಿಜೆಪಿ ಪ್ರಮೋಟ್ ಮಾಡಿದ ಕೆಲವೇ ತಿಂಗಳಲ್ಲಿ ಇಂಥದ್ದೊಂದು ಮಾತು ಮಂಗಳೂರಿನಲ್ಲಿ ಕೇಳಿ ಬರ ತೊಡಗಿತ್ತು. ನರೇಂದ್ರ ಮೋದಿ ಆರ್ ಎಸ್ ಎಸ್ ನ ಕಟ್ಟರ್ ಹಿಂಬಾಲಕ ಅನ್ನೋದು ಸಂಘದ ತಳಮಟ್ಟದ ಕಾರ್ಯಕರ್ತರಿಗೆ ತಿಳಿದದ್ದೇ ತಡ ಸಂಘದ ಶಾಖೆಗಳಲ್ಲೂ ಮೋದಿ ಪರವಾದ ಮಾತುಗಳು ಆರಂಭಗೊಂಡವು. ಮೋದಿಯನ್ನ ಗೆಲ್ಲಿಸಿದರೆ ಈ ದೇಶದಲ್ಲಿ ಹಿಂದುತ್ವವನ್ನ ಯಾವ ರೀತಿ ಬೆಳೆಸಬಹುದು ಅನ್ನೋ ಚರ್ಚೆಗಳು ಆರಂಭಗೊಂಡವು. ಈ ಎಲ್ಲಾ ಲೆಕ್ಕಾಚಾರಗಳಿಗೆ ಸಾಥ್ ನೀಡುವಂತೆ ನರೇಂದ್ರ ಮೋದಿಯವರ ಪ್ರತೀ ಭಾಷಣದಲ್ಲೂ ಹಿಂದುತ್ವ, ಹಿಂದೂ ಶಕ್ತಿ ಅನ್ನೋ ಮಾತುಗಳು ಕೂಡ ಜೋರಾಗಿಯೇ ಕೇಳಿ ಬಂದವು. ಹೀಗಾಗಿ ನಮ್ಮ ಯುವಕರಿಗೂ ಹಿಂದುತ್ವದ ರಕ್ಷಣೆಗೆ ಮೋದಿಯೇ ಸೂಕ್ತ ಅನ್ನೋದು ಸ್ಪಷ್ಟವಾಗಿ ಅರ್ಥವಾಗಿತ್ತು. ಹೀಗಾಗಿಯೇ ನರೇಂದ್ರ ಮೋದಿಯ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಶ್ರಮಿಸಿದೆ ಅನ್ನೋದಕ್ಕಿಂತ ಜಿಲ್ಲೆಯ ಸಂಘದ ಹುಡುಗರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅನ್ನೋದೆ ಮುಖ್ಯ. ಇನ್ನು ಜಿಲ್ಲೆಯ ಮೂಲೆ ಮೂಲೆಯಲ್ಲಿ ನಡೆದ ಹಿಂದೂ ಸಮಾಜೋತ್ಸವಗಳು ಕೂಡ ನರೇಂದ್ರ ಮೋದಿಯನ್ನ ಪರೋಕ್ಷವಾಗಿ ಪ್ರಧಾನಿ ಮಾಡಿ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿದ್ದವು. ಈ ದೇಶದಲ್ಲಿ ಈತನಕ ಯಾವ ಬಿಜೆಪಿ ಅಭ್ಯರ್ಥಿಗೂ ನೀಡದ ಭಾರೀ ಬೆಂಬಲವನ್ನ ಸಂಘದ ಹುಡುಗರು ಮೋದಿಗೆ ನೀಡಿದ್ದರು. ಹೋಂಸ್ಟೇ ಮತ್ತು ಪಬ್ ದಾಳಿಯ ವೇಳೆ ದ.ಕ ಜಿಲ್ಲೆಯ ಬಿಜೆಪಿ ಸಂಸದರು ಹಿಂದೂ ಯುವಕರ ಪರವಾಗಿ ನಿಲ್ಲಲಿಲ್ಲ. ಈ ಬಗ್ಗೆ ಸ್ವತಃ ಅದೆಷ್ಟೋ ಸಂಘಟನೆಯ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡಿದ್ದಾರೆ. ಹೀಗಿದ್ದರೂ ಈ ಬಾರಿ ಅದೇ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ರೆ ಎಲ್ಲೂ ಕೂಡ ನಳಿನ್ ಗಾಗಲೀ ಬಿಜೆಪಿಗಾಗಲೀ ಮತ ನೀಡಿ ಅನ್ನೋ ಮಾತುಗಳು ಇರಲೇ ಇಲ್ಲ. ಬದಲಾಗಿ ಅಲ್ಲೆಲ್ಲಾ ಗೋಚರಿಸಿದ್ದ ಜಸ್ಟ್ ನರೇಂದ್ರ ಮೋದಿ!<br />
<h3 style="text-align: left;">
<span style="color: magenta;"><b><i>ಮೋದಿ ಗೆಲುವು ಜಿಲ್ಲೆಯಲ್ಲಿ ಶಾಂತಿ ಕದಡಬಹುದೇ?</i></b></span></h3>
ಹೇಳಿ ಕೇಳಿ ಈಗ ಎಲ್ಲರ ಬಾಯಲ್ಲೂ ನಮೋ ನಮೋ. ಅದರಲ್ಲೂ ಮೊದಲೇ ಹೇಳಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಮೋದಿ ಗೆದ್ದಿದ್ದೇ ನಮ್ಮಿಂದ ಅನ್ನೋ ಅತ್ಯುತ್ಸಾಹದಲ್ಲಿದ್ದಾರೆ. ಆದ್ರೆ ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಜಿಲ್ಲೆಯ ಮಟ್ಟಿಗೆ ಬಹುದೊಡ್ಡ ಏಟು ಕೊಟ್ಟರೂ ಅಚ್ಚರಿಯಿಲ್ಲ. ಹಾಗಂತ ಇಲ್ಲಿ ಸಂಘದ ಹುಡುಗರೇ ಆಶಾಂತಿಯನ್ನ ಸೃಷ್ಟಿಸುತ್ತಾರೆ ಅಂತಾನೂ ಹೇಳೋಕಾಗೋಲ್ಲ. ಬದಲಾಗಿ ಸಂಘಟನೆಯ ಯುವಕರನ್ನ ಕೆಣಕಲು ಕಿಡಿಗೇಡಿಗಳು ಕೂಡ ಜಿಲ್ಲೆಯ ಶಾಂತಿಯನ್ನ ಕದಡಬಹುದು. ಇನ್ನು ಕೆಲ ಬಿಸಿ ರಕ್ತದ ಹಿಂದೂ ಸಂಘಟನೆಯ ಯುವಕರು ಕೂಡ ಮೋದಿ ಬೆನ್ನಿಗಿದ್ದಾರೆ ಎಂಬ ಹುಂಬ ಧೈರ್ಯದಲ್ಲಿ ಸುಖಾಸುಮ್ಮನೆ ತಗಾದೆ ತೆಗೆದರೂ ಅಚ್ಚರಿಯಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಜೊತೆಗೆ ಸಂಘಪರಿವಾರವೂ ಇನ್ನಷ್ಟು ಗಟ್ಟಿಗೊಂಡಿದೆ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ ಬಿಡಿ. ಈ ಮಧ್ಯೆ ನರೇಂದ್ರ ಮೋದಿಗೂ ಕೂಡ ತನ್ನ ಆಡಳಿತದ ಮಧ್ಯೆ ಸಂಘಪರಿವಾರವನ್ನ ಎದುರು ಹಾಕಿಕೊಳ್ಳೋದಕ್ಕೆ ಆಗೋಲ್ಲ. ಇದಕ್ಕೆ ಕಾರಣ ಆರ್ ಎಸ್ ಎಸ್ ಮೋದಿಯ ಮಾತೃ ಸಂಘಟನೆ. ಅಷ್ಟೇ ಅಲ್ಲದೇ ಈ ಮೊದಲೇ ಹೇಳಿದಂತೆ ನರೇಂದ್ರ ಮೋದಿಯ ಗೆಲುವಿನಲ್ಲಿ ಹೆಚ್ಚಿನ ಪಾತ್ರವನ್ನ ಸಂಘದ ಹುಡುಗರು ವಹಿಸಿಕೊಂಡಿದ್ದಾರೆ. ಹೀಗಿರೋವಾಗ ಹಿಂದೂಗಳಿಗಾಗಿ ನರೇಂದ್ರ ಮೋದಿ ಕೊಟ್ಟಿರೋ ಆಶ್ವಾಸನೆಗಳನ್ನ ಈಡೇರಿಸಲೇ ಬೇಕಿದೆ. ಅದರಲ್ಲೂ ಮುಖ್ಯವಾಗಿ ರಾಮ ಮಂದಿರ ಕಟ್ಟಿಯೇ ಸಿದ್ದ ಅಂದಿದ್ದ ಮೋದಿಗೆ ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ, ಅಸಲಿಗೆ ರಾಮ ಮಂದಿರ ವಿವಾದ ನ್ಯಾಯಾಲಯದ ಮೆಟ್ಟಿಲೇರಿರೋದ್ರಿಂದ ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ನರೇಂದ್ರ ಮೋದಿಯಾಗಲೀ ಕೈ ಯಾಡಿಸೋದು ಸಾಧ್ಯವಿಲ್ಲ. ಹೀಗಿದ್ದರೂ ಓಟ್ ಬ್ಯಾಂಕ್ ಗಾಗಿ ಮತ್ತದೇ ವಾಜಪೇಯಿ ಶೈಲಿಯನ್ನ ಯಥಾವತ್ ಅನುಕರಣೆ ಮಾಡಿರೋ ನರೇಂದ್ರ ಮೋದಿಯವರು ಈ ಭರವಸೆಯಲ್ಲಿ ಎಡವೋದು ಖಂಡಿತಾ. ಹೀಗಾಗಿ ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯ ನಡೆ ಸಂಘದ ಹುಡುಗರ ಅಸಮಾಧಾನಕ್ಕೆ ಕಾರಣವಾದರೂ ಆಚ್ಚರಿಯಿಲ್ಲ. ಯಾಕೆಂದರೆ ಆಡಳಿತ ವ್ಯವಸ್ಥೆಯಲ್ಲಿ ಧರ್ಮವನ್ನ ತಂದರೆ ಈ ದೇಶದ ಕಾನೂನು ಸುವ್ಯವಸ್ಥೆಯೇ ಬುಡಮೇಲಾಗಬಹುದು. ಹಾಗಾಗಿ ಎಲ್ಲವನ್ನೂ ಬಲ್ಲವರಾಗಿರೋ ಮೋದಿ ಈ ವಿಚಾರದಲ್ಲಿ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ಆದರೆ ಇದು ಸಂಘದ ಹುಡುಗರಲ್ಲಿ ಮೋದಿ ಬಗ್ಗೆ ಆಕ್ರೋಶ ಹೆಚ್ಚಿಸಬಹುದು. ಹೀಗಾಗಿ ದೇಶದಲ್ಲಿ ದೊಡ್ಡ ಮಟ್ಟದ ಅಲೆ ಸೃಷ್ಟಿಸಿ ಮೋದಿ ಗೆದ್ದಿದ್ದರೂ ಎಲ್ಲರನ್ನೂ ಸಂತೃಪ್ತ ಪಡಿಸಿ ಆಡಳಿತ ನಡೆಸೋದು ನರೇಂದ್ರ ಮೋದಿಯವರಿಗೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.<br />
<br />
<h2 style="text-align: left;">
<b><i><span style="color: red;">ಧ್ವನಿ......</span></i></b></h2>
<div>
<br /></div>
</div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-49942639062383720062013-10-24T05:46:00.002-07:002013-10-24T05:46:16.875-07:00<div dir="ltr" style="text-align: left;" trbidi="on">
<h2 style="text-align: left;">
<span style="color: yellow;"><br />ಸೌಜನ್ಯ ಪ್ರಕರಣದಲ್ಲಿ ಮಾಧ್ಯಮಗಳ ನಡೆ ಸ್ಪಷ್ಟಗೊಳ್ಳಬೇಕಿದೆ...!</span></h2>
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgJqdNo3u9rwoVc5srRCXtf_vG_nBz0-Ts_QlzfwfycuTv5X0hjfkS-EnigTfTc8ALEWvloeyGS-k75gdc8ou3fhF_X6JoFklGyk2OmHwA3GrN1UBInkqG91Jy2766E73Whx5xuZ1FigkU/s1600/Sowjanya-Photo2.jpg" imageanchor="1" style="margin-left: auto; margin-right: auto;"><img border="0" height="320" src="https://blogger.googleusercontent.com/img/b/R29vZ2xl/AVvXsEgJqdNo3u9rwoVc5srRCXtf_vG_nBz0-Ts_QlzfwfycuTv5X0hjfkS-EnigTfTc8ALEWvloeyGS-k75gdc8ou3fhF_X6JoFklGyk2OmHwA3GrN1UBInkqG91Jy2766E73Whx5xuZ1FigkU/s320/Sowjanya-Photo2.jpg" width="233" /></a></td></tr>
<tr><td class="tr-caption" style="text-align: center;"><span style="background-color: #f3f3f3; font-size: small; text-align: left;"><b><i><span style="color: magenta;">ಸೌಜನ್ಯ</span></i></b></span></td></tr>
</tbody></table>
<h3 style="text-align: left;">
<span style="color: red;"><br /></span><span style="color: red;">ಸೌಜನ್ಯ....</span>.ಈಗ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡೀ ಕನರ್ಾಟಕದಲ್ಲಿ ಈ ಹುಡುಗಿ ಮನೆ ಮಾತಾಗಿ ಹೋಗಿದ್ದಾಳೆ. ಸತ್ತ ನಂತರ ಅದರಲ್ಲೂ ಮಣ್ಣು ಸೇರಿ ಒಂದು ವರ್ಷವಾದ ನಂತರ ಈಕೆ ಈ ಮಟ್ಟಿನ ಕ್ರಾಂತಿಗೆ ಕಾರಣಕತರ್ೆಯಾಗುತ್ತಾಳೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಇದೀಗ ಎಲ್ಲವೂ ಅಂದುಕೊಂಡದ್ದನ್ನು ಮೀರಿ ನಡೆಯುತ್ತಿದೆ. ಒಂದು ವಾರದ ಹಿಂದೆ ಅಂದರೆ ಅಕ್ಟೋಬರ್ 11, 2013ರ ಶುಕ್ರವಾರ ಸಂಜೆ 4.45ರವರೆಗೆ ಸೌಜನ್ಯ ಬಗ್ಗೆ ಯೋಚಿಸುವುದು ಬಿಡಿ, ರಾಜ್ಯದ ಮುಕ್ಕಾಲು ಪಾಲು ಜನತೆಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಆದರೆ ನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಆಕೆಯ ಸಾವಿನ ಹಿಂದೆ ತಳುಕು ಹಾಕಿಕೊಂಡ ಘಟಾನುಘಟಿಗಳ ಹೆಸರು ಕೇಳಿ ಇಡೀ ರಾಜ್ಯವೇ ನಡುಗಿ ಹೋಯಿತು. ಯಾರಪ್ಪ ಈ ಹುಡುಗಿ ಆಂತ ಎಲ್ಲರೂ ವಿಚಾರಿಸ ತೊಡಗಿದರು. ಒಂದು ವರ್ಷದ ಹಿಂದೆ ನಡೆದ ಪ್ರಕರಣ ಈಗ್ಯಾಕೆ ಸದ್ದು ಮಾಡುತ್ತಿದೆ ಅಂತ ಅಶ್ಚರ್ಯಪಟ್ಟರು. ಈ ಮೂಲಕ ಸೌಜನ್ಯ ಮತ್ತೆ ಬಂದಿದ್ದಾಳೆ....ತನ್ನ ಸಾವಿನ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಯತ್ನಿಸುತ್ತಿದ್ದಾಳೆ...........................!</h3>
ಆಕೆಯ ಸಾವಿಗೆ ನ್ಯಾಯ ಸಿಗಬೇಕೆಂದು ಒಂದಷ್ಟು ಸಂಘಟನೆಗಳು ಬೀದಿಗಿಳಿದಿವೆ. ರಾಜ್ಯದ ಒಂದೇ ಒಂದು ಖಾಸಗಿ ವಾಹಿನಿ ಸೌಜನ್ಯ ಪರವಾಗಿ ಧ್ವನಿಯೆತ್ತಿದೆ. (ಈ ವಿಚಾರದಲ್ಲಿ ಉಳಿದೆಲ್ಲಾ ಮಾಧ್ಯಮಗಳು ಸತ್ತು ಮಲಗಿರಬೇಕು). ಈ ಒಂದು ಪ್ರಕರಣ ಸಾಕು, ರಾಜ್ಯದ ಸುದ್ದಿ ವಾಹಿನಿಗಳ ನಿಷ್ಪಕ್ಷಪಾತ ನಡೆಯನ್ನು ಜಗಜ್ಜಾಹಿರುಗೊಳಿಸಲು.....!<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjY2kzBZGJaJ_V_rMjxRkf7ZYz6ZRyOBuyX9VKSf4ktClGMujTTsZSoUQfBuHJt4VuQ9alhiY3NQL4uND8FXNnbaoK9d6quWtpsoSxebT99v9oAZtc4aiEdKQauAgyi8-fMcLugTQ9a6HE/s1600/1385177_657901747575937_606275623_n.jpg" imageanchor="1" style="margin-left: auto; margin-right: auto;"><img border="0" height="275" src="https://blogger.googleusercontent.com/img/b/R29vZ2xl/AVvXsEjY2kzBZGJaJ_V_rMjxRkf7ZYz6ZRyOBuyX9VKSf4ktClGMujTTsZSoUQfBuHJt4VuQ9alhiY3NQL4uND8FXNnbaoK9d6quWtpsoSxebT99v9oAZtc4aiEdKQauAgyi8-fMcLugTQ9a6HE/s400/1385177_657901747575937_606275623_n.jpg" width="400" /></a></td></tr>
<tr><td class="tr-caption" style="text-align: center;"><span style="font-size: small; text-align: left;"><span style="color: magenta;"><b>ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ...</b>!</span></span></td></tr>
</tbody></table>
<br />
ಯಾರದ್ದೋ ಮನೆಯಲ್ಲಿ ಗಂಡ-ಹೆಂಡತಿ ಜಗಳವಾಡಿದರೆ ಮರುದಿನವೇ ಸ್ಟುಡಿಯೋಗೆ ತಂದು ಕೂರಿಸಿ ಜಗಳವನ್ನು ಇನ್ನಷ್ಟು ದೊಡ್ಡದು ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳಿಗೆ ಸೌಜನ್ಯ ಪ್ರಕರಣ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಘಟಾನುಘಟಿಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆಯೇ? ಬಹುಶಃ ದುರಂತ ಅಂದರೆ ಇದೇ ಇರಬೇಕು. ಅದರಲ್ಲೂ ಸೌಜನ್ಯ ಪರವಾಗಿ ಒಂದೇ ಒಂದು ಸುದ್ದಿಪ್ರಸಾರ ಮಾಡದ ಈ ವಾಹಿನಿಗಳು ಅದ್ಯಾರೋ ಈ ಬಗ್ಗೆ `ನಾವು ತಪ್ಪೇ ಮಾಡಿಲ್ಲ' ಅಂದ ತಕ್ಷಣ ಲೈವ್ ಕೊಟ್ಟು ಘಂಟೆಘಟ್ಟಲೇ ಕಿರುಚಾಡಿದ್ದು ಯಾಕೆ ಎನ್ನುವುದೇ ತಿಳಿಯುತ್ತಿಲ್ಲ. ಈ ಪ್ರಕರಣದಲ್ಲಿ ಆರೋಪ ಕೇಳಿ ಬರುತ್ತಿರುವ ವ್ಯಕ್ತಿಗಳ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ ನಿಜ. ಇಂದಿಗೂ ಅದೆಷ್ಟೋ ಮನೆಯ ದೇವರ ಫೋಟೋ ಇಡುವ ಜಾಗದಲ್ಲಿ `ಅವರ' ಫೋಟೋ ಇಟ್ಟು ಪೂಜಿಸುವವರಿದ್ದಾರೆ. ಅಷ್ಟೇ ಯಾಕೆ? ಸತ್ತು ಮಣ್ಣು ಸೇರಿದ ಸೌಜನ್ಯಳ ಮನೆಯಲ್ಲೂ ಆ ವ್ಯಕ್ತಿಯನ್ನು ಆರಾಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಬಂದು ಅಂಥವರ ಮೇಲೆ ಆರೋಪ ಹೊರಿಸುವ ಹಕೀಕತ್ತು ಯಾರಿಗೂ ಇರೋದಿಲ್ಲ ಎನ್ನುವುದನ್ನು ಪೇಯ್ಡ್ ಮೀಡಿಯಾಗಲು ಅರಿತುಕೊಳ್ಳಲಿ. ಸೌಜನ್ಯಳ ಕುಟುಂಬಿಕರು ಮಾಡುವ ಆರೋಪಗಳನ್ನು ಇಲ್ಲವೇ ಆರೋಪಿಗಳು ಎನ್ನುವ ವ್ಯಕ್ತಿಗಳನ್ನು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾದ್ಯವಿಲ್ಲ ಅಂದುಕೊಳ್ಳೋಣ. ಆದರೆ ಆ ಮನೆಯವರ ನೈಜ ಯಾತನೆಗೆ ಸ್ಪಂದಿಸುವ ಮನಸ್ಸು ಕೂಡ ನಿಮ್ಮಲ್ಲಿಲ್ಲವೇ? ಈ ಮಧ್ಯೆ ನೇರ, ದಿಟ್ಟ, ನಿರಂತರ ಎನ್ನುವ ವಾಹಿನಿಯೊಂದು ಧರ್ಮಸ್ಥಳಕ್ಕೆ ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ. ಈ ವರದಿ ಗಮನಿಸಿದರೆ ಈ ವಾಹಿನಿಯನ್ನು ಧರ್ಮಸ್ಥಳದ ಘಟಾನುಘಟಿಗಳು ಕೊಂಡುಕೊಂಡಿದ್ದಾರೆಯೇ ಎಂಬ ಅನುಮಾನ ಕೂಡ ಕಾಡುತ್ತದೆ. ಉಪಕಾರ ಮಾಡಲು ಸಾದ್ಯವಾಗದಿದ್ದರೂ ಒಂಚೂರು ಅಪಕಾರವಾದರೂ ಮಾಡಿ ಬಿಡೋಣ ಅನ್ನೋದು ಇವರ ಉದ್ದೇಶವಿರಬೇಕು, ಪ್ರಸ್ತುತ ಕೇಳಿ ಬರುತ್ತಿರುವ ಸುದ್ದಿಯ ವಿಚಾರದಲ್ಲಿ ಎಲ್ಲಾ ವಾಹಿನಿಗಳ ವಾದ ಒಂದೇ `ಸೌಜನ್ಯ ಮನೆಯವರದ್ದು ಕೇವಲ ಆರೋಪ ಮಾತ್ರ' ಎನ್ನುವುದು. ಹಾಗಾದರೆ ನೊಂದವರ ಆರೋಪಗಳನ್ನು ಇಟ್ಟುಕೊಂಡು ಈ ವಾಹಿನಿಗಳು ಸುದ್ದಿ ಪ್ರಕಟಿಸಲೇ ಇಲ್ಲವೇ? ಸ್ಟುಡಿಯೋದಲ್ಲಿ ಕೂರಿಸಿ ಇನ್ನೊಬ್ಬರ ಮಾನ ಹಾನಿ ಮಾಡಿದ ಉದಾಹರಣೆಗಳೇ ಇಲ್ಲವೇ? ಖಂಡಿತಾ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಇವರುಗಳಿಗೆ ಸೌಜನ್ಯ ಮನೆಯವರ ಆರೋಪಗಳನ್ನು ಕೇಳುವಷ್ಟು ತಾಳ್ಮೆಯಿಲ್ಲ. ಇದ್ದರೂ ಒತ್ತಡ ಎಂಬ ಅಸ್ತ್ರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ ಅನ್ನಬಹುದು. ಸುದ್ದಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು. ಇದೇ ಕಾರಣಕ್ಕೆ ಚಾನೆಲ್ಗಳನ್ನು ಸ್ಥಾಪಿಸುವ ಅದರ ಹೆಸರಿನ ಅಡಿಗೆ ಒಂದಷ್ಟು ಘೋಷ ವಾಕ್ಯಗಳನ್ನು ಕೂಡ ಇಟ್ಟುಕೊಂಡು ತಮ್ಮ ಸ್ವಾಮಿನಿಷ್ಟೆ ಪ್ರದಶರ್ಿಸುತ್ತಾರೆ. ಆದರೆ ಈ ರೀತಿಯ ವಿಚಾರಗಳಲ್ಲಿ ಇವರುಗಳ ಘೋಷವಾಕ್ಯಗಳು ಗಾಳಿಯಲ್ಲಿ ತೂರಿ ಹೋಗಿದ್ದೇ ಹೆಚ್ಚು. ಅಸಲಿಗೆ ಸೌಜನ್ಯ ಪ್ರಕರಣದಲ್ಲಿ ಸುದ್ದಿ ವಾಹಿನಿಗಳಷ್ಟೇ ಸುದ್ದಿ ಪತ್ರಿಕೆಗಳು ಕೂಡ ಸಮಾನ ತಪ್ಪಿತಸ್ಥರು. ಅದರಲ್ಲೂ ಮಂಗಳೂರಿನಲ್ಲಿ ಅತೀ ಹೆಚ್ಚು ಸಕ್ಯರ್ೂಲೇಶನ್ ಹೊಂದಿರುವ ಪತ್ರಿಕೆಯೊಂದು ಸೌಜನ್ಯ ಮನೆಯವರು ನಡೆಸಿದ ಪತ್ರಿಕಾಗೋಷ್ಠಿಯನ್ನೂ ಪ್ರಕಟಿಸದೆ ಅದ್ಯಾರದ್ದೋ ಕೈಯಲ್ಲಿ `ಭೇಷ್' ಅನಿಸಿಕೊಂಡಿದೆಯಂತೆ...! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಪತ್ರಿಕೆಗಳದ್ದು.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh-ipnU3GqVBaCwx4cF0NvLC4eknFNC3kMyYioHywWcaXga6RtbVzmvZ8KxHxRpsa-0ewBOF_fMwVHpeEKFnFn1UbqZIN78qnYIQQ4AgHfQ7mMLdtC6qZPZz-TEyOyUt63slHmRLB62txQ/s1600/599612_684090108268628_1382268190_n.jpg" imageanchor="1" style="margin-left: 1em; margin-right: 1em;"><img border="0" height="258" src="https://blogger.googleusercontent.com/img/b/R29vZ2xl/AVvXsEh-ipnU3GqVBaCwx4cF0NvLC4eknFNC3kMyYioHywWcaXga6RtbVzmvZ8KxHxRpsa-0ewBOF_fMwVHpeEKFnFn1UbqZIN78qnYIQQ4AgHfQ7mMLdtC6qZPZz-TEyOyUt63slHmRLB62txQ/s400/599612_684090108268628_1382268190_n.jpg" width="400" /></a></div>
<br />
ಇನ್ನು ಈ ಎಲ್ಲಾ ಆರೋಪಗಳನ್ನು ಯಥಾವಥ್ ಸುದ್ದಿ ಮಾಡಿದ ಟಿವಿ9 ವಾಹಿನಿಗೆ ಕೋಟರ್್ನಿಂದ ತಡೆಯಾಜ್ಷೆ ಬೇರೆ ತಂದಿದ್ದಾರೆ. ಈ ಮೂಲಕ ನಾವು ಕೂಡ ನಿತ್ಯಾನಂದ ಸ್ವಾಮಿಯ ಪಾಟರ್ಿ ಅನ್ನೋದನ್ನು ನಿರೂಪಿಸಿದ್ದಾರೆ(ಕಾಮಿ ಸ್ವಾಮಿ ನಿತ್ಯಾನಂದ ಕೂಡ ತನ್ನ ವಿರುದ್ದ ವರದಿ ಮಾಡದಂತೆ ತಡೆಯಾಜ್ಷೆ ತಂದಿದ್ದ). ಇನ್ನು ಟಿವಿ9 ಈ ಬಗ್ಗೆ ವರದಿ ಮಾಡಿದರೆ ಜಿಲ್ಲೆಯ ಮೂಲೆಮೂಲೆಯಲ್ಲಿ ಕರೆಂಟ್ ಕಟ್. ಬಹುಶಃ ದುರಂತ ಅಂದ್ರೆ ಇದೇ ಇರಬೇಕು. ಈಗೀಗ ಟಿವಿ ನೋಡದಂತೆ ಕರೆಂಟ್ ಕಟ್, ಕೇಬಲ್ ಕಟ್ ಎಂಬ ಕಸರತ್ತಿನ ಕೆಲಸಗಳು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಜನಾರ್ದನ ರೆಡ್ಡಿಯ ವಿಚಾರದಲ್ಲಿ ಹೀಗಾಗಿದ್ದನ್ನು ನೋಡಿದ್ದೆ. ಆದರೆ ನಮ್ಮ ಸೌಜನ್ಯ ವಿಚಾರದಲ್ಲೂ ಹೀಗಾಗ್ತಿರೋದು.......ಒಟ್ಟಿನಲ್ಲಿ ಎಲ್ಲರೂ ಅವರಿಗೆ `ಅಡ್ಡ' ಬೀಳುವವರೇ...! ಈ ಮಧ್ಯೆ ನಾವು-ನೀವು ಏನ್ ತಾನೇ ಮಾಡೋದಕ್ಕೆ ಸಾಧ್ಯ...? ಏನೇ ಆಗಲಿ...ಟಿವಿ9 ನವರ ಕೆಲಸಕ್ಕೆ ಶಹಭಾಸ್ ಗಿರಿ ಹೇಳಲೇ ಬೇಕು..ಬಿಡಿ....<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhPJumfyYSfbg3DcX0kf2gQ_NeiOerALeYhl1VQk2ybn8vpefv0JbIWz3qaFwoAkTRilmhUGo2VRBfNMDYLZ48GYrkUDmYedWA_sqF7UxBNJ5OzQutNECo_9fDUHjQbK2zGdoyA73N8vng/s1600/hqdefault.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEhPJumfyYSfbg3DcX0kf2gQ_NeiOerALeYhl1VQk2ybn8vpefv0JbIWz3qaFwoAkTRilmhUGo2VRBfNMDYLZ48GYrkUDmYedWA_sqF7UxBNJ5OzQutNECo_9fDUHjQbK2zGdoyA73N8vng/s400/hqdefault.jpg" width="400" /></a></div>
<br />
ಅಪ್ಪಟ ಹಳ್ಳಿ ಸೊಗಡಿನ ಕುಟುಂಬ!<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEg1OgEy5u0hfm2FVPQKvGZ4-w2O9mo1EsVHLDoxiOXKpos9DvduRUuWX21Gf7MvKEi1e4q1QSHbdZiP2S_nErxJHNiLQ8qGMjI-7S2uB6HlRd1CknbZqUE4QKkOquWIONW4yyy6ThuBA-c/s1600/sow.jpg" imageanchor="1" style="margin-left: auto; margin-right: auto;"><img border="0" height="400" src="https://blogger.googleusercontent.com/img/b/R29vZ2xl/AVvXsEg1OgEy5u0hfm2FVPQKvGZ4-w2O9mo1EsVHLDoxiOXKpos9DvduRUuWX21Gf7MvKEi1e4q1QSHbdZiP2S_nErxJHNiLQ8qGMjI-7S2uB6HlRd1CknbZqUE4QKkOquWIONW4yyy6ThuBA-c/s400/sow.jpg" width="300" /></a></td></tr>
<tr><td class="tr-caption" style="text-align: center;"><b style="background-color: #f3f3f3;"><span style="color: magenta;"><span style="font-size: small; text-align: left;">ಸೌಜನ್ಯ </span><span style="font-size: small; text-align: left;">ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆ</span></span></b></td></tr>
</tbody></table>
<br />
ಪ್ರಕರಣ ಗಂಭೀರ ಸ್ವರೂಪಕ್ಕೆ ಹೋದ ನಂತರ ಅಂದರೆ ಮೊನ್ನೆ ಮೊನ್ನೆ ಆಕೆಯ ಮನೆಗೆ ಹೋಗಿದ್ದೆ. ಹಳ್ಳಿಗಾಡಿನ ಸೊಗಡನ್ನು ಉಳಿಸಿಕೊಂಡು ಬಾಳುತ್ತಿರುವ ಅಪ್ಪಟ ಗೌಡ ಮನೆತನ ಅವರದ್ದು. ಇಂದಿಗೂ ಅವರ ಮಗಳ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿಟ್ಟಿದ್ದಾರೆ. ಅವಳು ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆಗಳು....ಹೀಗೆ ಎಲ್ಲವೂ ಸೌಜನ್ಯಳನ್ನು ಮತ್ತೆ ನೆನಪಿಸುವ ಹಾಗಿದೆ. ಈ ಮಧ್ಯೆ ಮಗಳು ಮನೆಯವರಿಗೆ ಕೊನೆಯದಾಗಿ ಕೊಟ್ಟು ಹೋದ ಕಣ್ಣೀರು ಕೂಡ ಒಂಚೂರು ಬತ್ತಿಲ್ಲ....! ಬಿಟ್ಟು ಹೋದ ಮನೆ ಮಗಳ ಬಗ್ಗೆ ಮನೆಯ ಪ್ರತಿಯೊಬ್ಬರು ಹೇಳುವುದು ಒಂದೇ......ಚಿನ್ನದಂಥ ಹುಡುಗಿ ಕಣ್ರೀ ಆಕೆ. ಹೌದು, ಮನೆಯ ಪ್ರತಿಯೊಬ್ಬರೂ ಆಕೆಯ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕಣ್ಣಾಲಿಗಳು ಒದ್ದೆಯಾದವು. ಮಾಡದ ತಪ್ಪಿಗೆ ಬಲಿಯಾದ ಆ ಹೆಣ್ಣುಮಗಳ ಸಾವಿನಲ್ಲಿ ಕೇಕೆ ಹಾಕಿದ ವಿಧಿಯಾಟದ ಬಗ್ಗೆಯೇ ಇನ್ನಿಲ್ಲದ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮನೆಯವರ ದುಃಖದ ಮಧ್ಯೆ ನನ್ನದು ಕ್ಷಣಿಕ ಎಂದು ಸುಮ್ಮನಾದೆ.<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhUDC2DmcE5Vm0PaqLLo0uuDtK9BO5UAbvRk6m3sfETFAMv8KRxIGDztZ3uQWi9WgVwPlbS8JQOFz750um7E49E45Hsdk2WlEs7fOKMut1vl5DYkhHN6ag50TUL6SpxTRory7Ir1J3Y-Pg/s1600/1384246_10200559256695571_491885376_n.jpg" imageanchor="1" style="margin-left: auto; margin-right: auto;"><img border="0" height="298" src="https://blogger.googleusercontent.com/img/b/R29vZ2xl/AVvXsEhUDC2DmcE5Vm0PaqLLo0uuDtK9BO5UAbvRk6m3sfETFAMv8KRxIGDztZ3uQWi9WgVwPlbS8JQOFz750um7E49E45Hsdk2WlEs7fOKMut1vl5DYkhHN6ag50TUL6SpxTRory7Ir1J3Y-Pg/s400/1384246_10200559256695571_491885376_n.jpg" width="400" /></a></td></tr>
<tr><td class="tr-caption" style="text-align: center;"><span style="color: magenta;"><b><span style="font-size: small; text-align: left;">ಅಪ್ಪಟ ಹಳ್ಳಿ ಸೊಗಡಿನ </span><span style="font-size: small; text-align: left;">ಸೌಜನ್ಯ </span><span style="font-size: small; text-align: left;">ಕುಟುಂಬ</span></b></span></td></tr>
</tbody></table>
<br />
ಸರಿ ಸುಮಾರು ಒಂದು ವರ್ಷದ ಹಿಂದೆ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಒಂದೆರೆಡು ದಿನ ಸದ್ದು ಮಾಡಿ ಮಾನಸಿಕ ಅಸ್ವಸ್ಥನೊಬ್ಬ ಜೈಲು ಸೇರುವುದರೊಂದಿಗೆ ಪ್ರಕರಣ ಮುಚ್ಚಿ ಹೋಗಿತ್ತು.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhVWgOJ1rE5LSTHArAPQMYyoF4Zv48AaWgSdQZH7KeTW0XTyo0ugkkwo3MCp4PTvj1nmG3NHwtw0Jau6hzY4DJcq-JlBD3kuk8opGKt-6v3ftYgSK39wjnrb_PaYcXK5-Yh8npfmC0AYu8/s1600/sow+1.jpg" imageanchor="1" style="margin-left: 1em; margin-right: 1em;"><img border="0" height="300" src="https://blogger.googleusercontent.com/img/b/R29vZ2xl/AVvXsEhVWgOJ1rE5LSTHArAPQMYyoF4Zv48AaWgSdQZH7KeTW0XTyo0ugkkwo3MCp4PTvj1nmG3NHwtw0Jau6hzY4DJcq-JlBD3kuk8opGKt-6v3ftYgSK39wjnrb_PaYcXK5-Yh8npfmC0AYu8/s400/sow+1.jpg" width="400" /></a></div>
<br />
ಈ ಮಧ್ಯೆ ಒಂದೆರೆಡು ಸಂಘಟನೆಗಳ ಹೋರಾಟಕ್ಕೆ ಮಣಿದು ಸಕರ್ಾರ ಯಾವುದಕ್ಕೂ ಇರಲಿ ಅಂತ ಸಿಐಡಿಗೂ ಒಪ್ಪಿಸಿತ್ತು. ಆದರೆ ನಮ್ಮದೇ ರಾಜ್ಯದ ಸಿಐಡಿಯಿಂದ ಯಾವ ಮಟ್ಟದ ನ್ಯಾಯ ನಿರೀಕ್ಷಿಸಲು ಸಾಧ್ಯ? ಒಟ್ಟಿನಲ್ಲಿ ಸೌಜನ್ಯ ಸಾವಿನ ಹಿಂದೆಯೇ ಪ್ರಕರಣ ಮುಚ್ಚಿ ಹೋದಾಗ, ಧರ್ಮಸ್ಥಳ-ಉಜಿರೆಯಲ್ಲಿ ನೆಲಕ್ಕುರುಳಿದ ಅಷ್ಟೋ ಹೆಣಗಳಲ್ಲಿ ಈಕೆಯದ್ದು ಕೂಡ ಒಂದು ಅಂತ ಒಂದಷ್ಟು ಪ್ರಜ್ಞಾವಂತರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಧರ್ಮಸ್ಥಳದ ಘಟಾನುಘಟಿಗಳ ಬಗ್ಗೆಯೇ ಆರೋಪಗಳು ಕೇಳಿ ಬಂದಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಅವರಿಂದ ಬಯಸಲು ಸಾದ್ಯವೇ?<br />
<br />
<br />
</div>
dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-91817552396003446792013-08-06T23:03:00.003-07:002013-08-06T23:03:40.764-07:00<div dir="ltr" style="text-align: left;" trbidi="on">
<br />
<h2 style="text-align: left;">
<span style="color: magenta;">ಗೋಸಾಗಾಟ ಮತ್ತೆ ಗಲಭೆಗೆ ಹೇತುವಾಗಬೇಕೇ?<br />ಹಿಂದೂ-ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ!</span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjvRxMeZipUmy59j8uI5TGidhXrqhHrNqQNUPpvVjLhuhYHnVvdxfOKh99qE3d_8thXqJuZowETVR7yO6OuxhXkFORsydL0hIlCaBrir0XQP1w8VtEconhImICqlvkYpPXbI_4m06Hfe6s/s1600/mangalore_communal_riots_20061211.jpg" imageanchor="1" style="margin-left: 1em; margin-right: 1em;"><img border="0" height="287" src="https://blogger.googleusercontent.com/img/b/R29vZ2xl/AVvXsEjvRxMeZipUmy59j8uI5TGidhXrqhHrNqQNUPpvVjLhuhYHnVvdxfOKh99qE3d_8thXqJuZowETVR7yO6OuxhXkFORsydL0hIlCaBrir0XQP1w8VtEconhImICqlvkYpPXbI_4m06Hfe6s/s400/mangalore_communal_riots_20061211.jpg" width="400" /></a></div>
<div>
<span style="color: magenta;"><br /></span></div>
ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷಕ್ಕೆ ಕುಖ್ಯಾತಿ ಪಡೆದ ಪ್ರದೇಶ. ಇಲ್ಲಿ ನೀರಿಗಾಗಿ, ಭಾಷೆಗಾಗಿ ಹೋರಾಟ ಮಾಡುವವರಿಗಿಂತ ಧರ್ಮದ ವಿಚಾರದಲ್ಲಿ ಬೀದಿಗಿಳಿಯುವ ಬಹುದೊಡ್ಡ ವರ್ಗವೇ ಇದೆ. ಇಲ್ಲಿನ ಜನರು ತಮ್ಮ ತಮ್ಮ ಧರ್ಮಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡುವ ಕಾರಣ ಧರ್ಮ ನಿಂದನೆಯಂತಹ ವಿಚಾರಗಳು ಕೋಮು ಸಂಘರ್ಷಗಳಾಗಿ ಬದಲಾಗುತ್ತಿವೆ. ಈ ಹಿಂದೆ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಸುವ ಮೂಲಕ ಇತಿಹಾಸದ ಪುಟ ಸೇರಿರುವ ಪ್ರತೀ ಗಲಭೆಯಲ್ಲೂ ಇಲ್ಲಿನ ಜನರ ಜಾತಿ ಪ್ರೀತಿಯ ಛಾಯೆ ಎದ್ದು ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳ ಪಾಲಿಗೆ ಪವಿತ್ರವೆನಿಸಿರುವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದೇ ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷಗಳಿಗೆ ಹೇತುವಾಗುತ್ತಿದೆ ಎನ್ನುವುದು ದುರಂತ.<br />
ಅದರಲ್ಲೋ ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಮಿತಿಮೀರಿದೆ. ತಲವಾರು ತೋರಿಸಿ ದನ ಕಳವು ಮಾಡುವ ಹಂತಕ್ಕೆ ದುಷ್ಕಮರ್ಿಗಳು ಇಳಿದಿರುವುದು ನಿಜಕ್ಕೂ ದುರಂತ. ಮುಂದೊಂದು ದಿನ ಇಂತದ್ದೇ ಘಟನೆ ಮತ್ತೊಂದು ಗಲಭೆಗೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ ಬಿಡಿ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiQR-pRCPyNd6JCsWNMuNqB2GdMNP7trjumr2D9c-_9oMK_-rKOC84aaW2G3BXO4q5XmHQoyDb3v4f2DsyEr2LsdTeLDU-9BppYktHX-kHw7Qr-bljKxwoV5Oerdfu7YNdej_EHUOIG4Pk/s1600/manga+1.jpg" imageanchor="1" style="margin-left: 1em; margin-right: 1em;"><img border="0" height="231" src="https://blogger.googleusercontent.com/img/b/R29vZ2xl/AVvXsEiQR-pRCPyNd6JCsWNMuNqB2GdMNP7trjumr2D9c-_9oMK_-rKOC84aaW2G3BXO4q5XmHQoyDb3v4f2DsyEr2LsdTeLDU-9BppYktHX-kHw7Qr-bljKxwoV5Oerdfu7YNdej_EHUOIG4Pk/s400/manga+1.jpg" width="400" /></a></div>
<br />
ಹಿಂದೂಗಳ ಪಾಲಿಗೆ ಅತೀ ಪವಿತ್ರವೆನಿಸಿರುವ ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಟೊಂಕಕಟ್ಟಿ ನಿಲ್ಲುತ್ತವೆ. ಧಾಮರ್ಿಕ ನಂಬಿಕೆಯ ಪ್ರತೀಕವೆನಿಸಿದ ಗೋವುಗಳ ರಕ್ಷಣೆಗೆ ನಿಲ್ಲುವುದು ಸಹಜವೇ ಅನ್ನೋಣ. ಆದರೆ ಮುಂದಾಗುವ ಅನಾಹುತಗಳು ಮಾತ್ರ ಅಸಹಜ ಎನ್ನುವುದು ಅರಿಯಬೇಕಾದ ವಿಚಾರ. ಒಂದು ಧರ್ಮಕ್ಕೆ ಪವಿತ್ರವೆನಿಸಿರುವ ಗೋವು ಇನ್ನೊಂದು ಧರ್ಮದ ಕೆಲವರಿಗೆ ಆಹಾರ ಪದ್ದತಿ ಎನಿಸಿಕೊಂಡಿದೆ. ಪರ-ವಿರೋಧಗಳ ನಡುವೆಯೂ ತಿಂಗಳಿಗೆ ಹೆಚ್ಚೆಂದರೂ ಆರೇಳು ಗೋಸಾಗಾಟದ ವಿದ್ಯಮಾನಗಳು ಬೆಳಕಿಗೆ ಬರುತ್ತಲೇ ಇವೆ. ಇಷ್ಟೆಲ್ಲಾ ಆದರೂ ನಮ್ಮ ಪೊಲೀಸ್ ಇಲಾಖೆ ಮಾತ್ರ ಬೆಚ್ಚಗೆ ಕೂತು ಚೆಂದ ನೋಡುತ್ತಿರುವುದು ವಿಪಯರ್ಾಸ. ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಇದರ ವಿರುದ್ದ ಮೊದಲಾಗಿಯೇ ಕ್ರಮ ಕೈಗೊಂಡು ಗಲಭೆಗೆ ಆಸ್ಪದ ನೀಡುವುದನ್ನು ತಪ್ಪಿಸಬಹುದು ಎಂಬ ಮಾತು ಶಾಂತಿಪ್ರಿಯರದ್ದು.<br />
ಗೋವು ಹಿಂದೂಗಳ ಧಾಮರ್ಿಕ ನಂಬಿಕೆ, ಮುಸ್ಲಿಮರ ಆಹಾರ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಕಳೆದ ಕೆಲ ದಿನಗಳಿಂದ ಕೋಮು ದಳ್ಳುರಿಗೆ ಕಾರಣವಾಗಬಹುದಾದ ಒಂದು ವಿಚಾರವಾಗಿ ಹೋಗಿದೆ. ಸಾಗಾಟಗಾರರ ಮತ್ತು ಹಿಂದೂ ಸಂಘಟನೆಗಳ ಮಧ್ಯೆ ನಡೆಯುವ ಸಣ್ಣಪುಟ್ಟ ಗಲಾಟೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪ್ರಕರಣದ ಫೈಲ್ ಕ್ಲೋಸ್ ಆಗುವಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಕಡೆ ಎರಡು ಧರ್ಮಗಳ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಇಷ್ಟೆಲ್ಲಾ ಆದರೂ ಕರಾವಳಿಯ ಎರಡು ಧರ್ಮಗಳು ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿ ಚಿಂತಿಸಿದಂತೆ ತೋರುತ್ತಿಲ್ಲ. ಇಲ್ಲಿ ಧಾಮರ್ಿಕ ನಂಬಿಕೆ, ಆಹಾರ ವಸ್ತು ಎನ್ನುವುದಕ್ಕಿಂತಲೂ ಕಲಹಕ್ಕೆ ಕಾರಣವಗುವ ವಿಚಾರ ಎನ್ನುವುದನ್ನಾದರೂ ಜಿಲ್ಲೆಯ ಜನತೆ ಗ್ರ್ಪ್ರಹಿಸಿಕೊಳ್ಳುವ ಅಗತ್ಯತೆ ಇದೆ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhlQOPCIIUvjz8_T8HxFTEBYTV1SQFHMaqCoF5mFJ02SrceLd59OUqbDilxzwtYQN9QrODcHu7vzMoRQeLtlX363OoclnJMp9pfzxomNmocq8UoSN7_aBl4txoZM9_3yfxEoHEcguvYHYU/s1600/manga+3.jpg" imageanchor="1" style="margin-left: 1em; margin-right: 1em;"><img border="0" height="257" src="https://blogger.googleusercontent.com/img/b/R29vZ2xl/AVvXsEhlQOPCIIUvjz8_T8HxFTEBYTV1SQFHMaqCoF5mFJ02SrceLd59OUqbDilxzwtYQN9QrODcHu7vzMoRQeLtlX363OoclnJMp9pfzxomNmocq8UoSN7_aBl4txoZM9_3yfxEoHEcguvYHYU/s400/manga+3.jpg" width="400" /></a></div>
<br />
ಎಲ್ಲಾ ಧರ್ಮದಲ್ಲೂ ದುರುಳರು ಇದ್ದೇ ಇರುತ್ತಾರೆ. ಅದರಲ್ಲೂ ಕೋಮು ದಳ್ಳುರಿಯ ಕಿಡಿ ಹಚ್ಚಿ ವಿಕೃತ ಆನಂದ ಪಡೆಯುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಆದರೆ ಇಂಥವರ ಮಧ್ಯೆ ಶಾಂತಿಪ್ರಿಯ ಹಿಂದೂ-ಮುಸ್ಲಿಮರ ಮನಸ್ಥಿತಿಯಲ್ಲಿ ಕೊಂಚ ಬದಲಾವಣೆ ಬೇಕಿದೆ. ಗೋಸಾಗಾಟದ ವಿಚಾರ ಬಂದಾಗ ಅದನ್ನು ತಡೆಯುವ ಸಣ್ಣ ಪ್ರಯತ್ನವನ್ನು ಜಿಲ್ಲೆಯ ಸಹೃದಯಿ ಮುಸಲ್ಮಾನ ಬಾಂಧವರು ಮಾಡಬೇಕಿದೆ. ಗೋವು ಆಹಾರ ವಸ್ತು ಎನ್ನುವುದಕ್ಕಿಂತಲೂ ಗಲಭೆಯ ವಸ್ತುವಾಗಿ ಹೋಗುತ್ತಿರುವಾಗ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅಗತ್ಯತೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಪ್ರತಿಷ್ಟೆಯ ವಿಚಾರಕ್ಕಿಂತ, ಆಹಾರ ಪದ್ದತಿಯ ವಿವಾದಕ್ಕಿಂತ ಮುಖ್ಯವಾಗಿ ಶಾಂತಿ-ಸುವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ನಮ್ಮಿಂದಲೇ ಇದನ್ನೆಲ್ಲಾ ತಡೆಯಲು ಸಾಕಷ್ಟು ಅವಕಾಶಗಳಿರುವಾಗ ಪೊಲೀಸರ ತಲೆಗೆ ಕಟ್ಟಿ ಕೂರುವುದು ಅಷ್ಟು ಸಮಂಜಸವಲ್ಲ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhdvl2oNnxWEUZzaL-vVBiVEN_j4Fsc6P3WU7010zRCxvIn9RUA-W2VgdfRVu-0myJw_8RBqpq66_udd9zpXE38UelcbCefvqV6n5BHcm0Wpe2q7A5aMMNUQXXwagRui1O6OURMpsdI4Sw/s1600/manga.jpg" imageanchor="1" style="margin-left: 1em; margin-right: 1em;"><img border="0" height="263" src="https://blogger.googleusercontent.com/img/b/R29vZ2xl/AVvXsEhdvl2oNnxWEUZzaL-vVBiVEN_j4Fsc6P3WU7010zRCxvIn9RUA-W2VgdfRVu-0myJw_8RBqpq66_udd9zpXE38UelcbCefvqV6n5BHcm0Wpe2q7A5aMMNUQXXwagRui1O6OURMpsdI4Sw/s400/manga.jpg" width="400" /></a></div>
<br />
ಉಳಿದಂತೆ ಈ ವಿಚಾರದಲ್ಲಿ ಹಿಂದೂಗಳ ಮನಸ್ಥಿತಿಯಲ್ಲೂ ಕೊಂಚ ಬದಲಾವಣೆಯಾಗಬೇಕು. ಗೋಸಾಗಾಟ ನಡೆಯುತ್ತಿದೆ ಎಂದ ತಕ್ಷಣ ಮುಗಿಬಿದ್ದು ವಾಹನಗಳ ಬೆನ್ನುಬೀಳುವ ಬದಲು ಇಲಾಖೆಯ ಸಹಕಾರ ಪಡೆಯುವುದು ಉತ್ತಮ. ಕೆಲದಿನಗಳಲ್ಲಿ ಸಂಘಟನೆಯವರು ಇಲಾಖೆಗೆ ಸುದ್ದಿ ಮುಟ್ಟಿಸಿಯೇ ಮುಂದಡಿಯಿಡುತ್ತಿರುವುದು ಶ್ಲಾಘನೀಯವಾದರೂ ಒಂದೆರೆಡು ಕಡೆ ಆಕ್ರೋಶದ ಹಲ್ಲೆಗಳು ನಡೆದಿದೆ. ಪ್ರತೀ ಬಾರಿ ದಾಳಿಯೊಂದೇ ಪರಿಹಾರವಲ್ಲ. ದಾಳಿಗಳೇ ಮುಂದೆ ಗಲಭೆಗೆ ಕಾರಣವಾದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಬೆನ್ನಟ್ಟಿ ದಾಳಿ ನಡೆಸಿ ಹಲ್ಲೆ ನಡೆಸುವುದು ಸಮಂಜಸವಲ್ಲ. ಅಲ್ಲದೇ ಶಾಂತಿಪ್ರಿಯ ಹಿಂದೂ ಧರ್ಮಕ್ಕೆ ಇಂತಹ ಘಟನೆಗಳು ತಕ್ಕುದಲ್ಲ ಎನ್ನುವುದು ನನ್ನ ಅಭಿಪ್ರಾಯ.<br />
ನೆನಪಿರಲಿ, ಜಿಲ್ಲೆ ಕಂಡ ಪ್ರತೀ ಕೋಮುಗಲಭೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಒಂದಷ್ಟೂ ಹಾನಿಯೂ ಆಗಿದೆ. ಇವೆಲ್ಲವಕ್ಕೂ ಸಾಕ್ಷಿಯಾಗಿದ್ದ ಕಡಲತಡಿ ಇಂದು ಒಂದು ಹಂತಕ್ಕೆ ಶಾಂತವಾಗಿದೆ ಎನ್ನುವುದೇ ನಿಟ್ಟುಸಿರು ಬಿಡುವ ವಿಚಾರ. ಇದೀಗ ಮತ್ತೆ ಗೋಸಾಗಾಟ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡ ಎನ್ನುವುದೇ ಎಲ್ಲರ ಆಶಯ.<br />
<br />
</div>
dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-61084189926380983832013-07-30T23:56:00.001-07:002013-07-31T00:00:58.303-07:00<div dir="ltr" style="text-align: left;" trbidi="on">
<h2 style="text-align: left;">
<i style="color: yellow;">ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? </i></h2>
<h2 style="text-align: left;">
<i style="color: yellow;">ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!</i></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgWObRht8aITP7-iIxZMAWXGEowNyg-VpT1ePKpXxe-NsUEeVty9NWaHZ0unua1OpTN1_Vjudn12vEGHPz8tMmZ08zfeb5V4ovwz4lkgcjoQLaiP-Pcpli1czdr-L4p9kYQYqsMJAziaFg/s1600/dram.jpg" imageanchor="1" style="margin-left: 1em; margin-right: 1em;"><img border="0" height="265" src="https://blogger.googleusercontent.com/img/b/R29vZ2xl/AVvXsEgWObRht8aITP7-iIxZMAWXGEowNyg-VpT1ePKpXxe-NsUEeVty9NWaHZ0unua1OpTN1_Vjudn12vEGHPz8tMmZ08zfeb5V4ovwz4lkgcjoQLaiP-Pcpli1czdr-L4p9kYQYqsMJAziaFg/s400/dram.jpg" width="400" /></a></div>
<div>
<span style="color: yellow;"><br /></span></div>
<b>ನಿನ್ನೆ </b>ಅದ್ಯಾವುದೋ ಕೆಲಸದ ನಿಮಿತ್ತ ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ. ಈ ವೇಳೆ ಕೇಸರಿ ಪಂಚೆಯುಟ್ಟ, ಬಿಳಿ ಬಣ್ಣದ ಶರ್ಟ್ ತೊಟ್ಟ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಕಂಡು ಮಾತಿಗಿಳಿದರು. `ನನ್ನ ಪರಿಚಯ ಇದಿಯಾ ಸಾರ್? ಅಂತ ಆ ವ್ಯಕ್ತಿ ಕೇಳಿದಾಗ `ಯಾರಪ್ಪ ಇದು? ಅಂದುಕೊಂಡು ಅವರನ್ನು ತಿರಸ್ಕರಿಸಿ ಮುಂದೆ ಹೋಗಲು ಯತ್ನಿಸಿದೆ. ಆದರೆ ಆ ಆಸಾಮಿ ನನ್ನನ್ನು ಅಲ್ಲಿಂದ ಕಾಲ್ಕೀಲಲು ಬಿಡಲೇ ಇಲ್ಲ. ಮತ್ತದೇ ಪ್ರಶ್ನೆ `ನನ್ನ ಪರಿಚಯ ಇದೆಯಾ ಸಾರ್? ಎನ್ನುವುದು. ಈ ವೇಳೆ ಯಾರಪ್ಪ ಇವರು ಆಂತ ಸ್ವಲ್ಪ ಯೋಚನೆ ಮಾಡಲು ಆರಂಭಿಸಿದೆ. ಆದರೆ ಆ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಆದರೂ ಆ ವ್ಯಕ್ತಿಯನ್ನು ಎಲ್ಲೋ ನೋಡಿದ, ಒಂದಷ್ಟು ಹೊತ್ತು ಮಾತನಾಡಿದ ನೆನಪುಗಳು ಮಾತ್ರ ಒಂದು ಹಂತಕ್ಕೆ ನನ್ನಲ್ಲಿತ್ತು....<br />
ನಾನು ತಡವರಿಸಿದ್ದನ್ನು ಕಂಡ ಅವರು `ನಾನು ಸಾರ್ ಲಕ್ಷ್ಮಣ್...ಆವತ್ತು ನಿಮ್ಮ ಭವಿಷ್ಯ ಹೇಳಿದ್ನಲ್ಲಾ...! ಅಂತ ತನ್ನ ಪರಿಚಯ ಮಾಡಿಕೊಂಡರು. ಆಗಲೇ ಗೊತ್ತಾಗಿದ್ದು ನೋಡಿ....ಸರಿಸುಮಾರು ಒಂದು ವರ್ಷದ ಹಿಂದೆ ಈ ವ್ಯಕ್ತಿ ನನ್ನ ಒಂದಷ್ಟು ಭವಿಷ್ಯ ಹೇಳಿದ್ರು ಅನ್ನೋದು. ಇವರದ್ದು ಬೀದಿ ಸುತ್ತಿ ಮನೆ-ಮನೆಗೆ ಹೋಗಿ ಭವಿಷ್ಯ ಹೇಳುವ ಕಾಯಕ. ಹೀಗೇ ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಂದು ಹಣ ಕೊಡದಿದ್ರೂ ಪರವಾಗಿಲ್ಲ, ನಿಮ್ಮ ಭವಿಷ್ಯ ಹೇಳ್ತೀನಿ ಅಂದಿದ್ದ ಈ ಆಸಾಮಿ. ಕೊನೆಗೆ ಕಾಟ ತಡೆಯಲಾಗದೆ `ಆಯ್ತಪ್ಪ ಹೇಳು' ಅಂತ ಒಂದತ್ತು ನಿಮಿಷ ಅವರ ಜೊತೆ ಮಾತನಾಡಿದ್ದೆ (ಭವಿಷ್ಯ ಕೇಳಿದ್ದೆ)...!<br />
ವರ್ತಮಾನದ ಮೇಲೆ ಮಾತ್ರ ಒಂದಷ್ಟು ನಂಬಿಕೆಯಿಟ್ಟ ನನಗೆ ಭವಿಷ್ಯದ ಬಗ್ಗೆಯಾಗಲೀ ಜ್ಯೋತಿಷ್ಯದ ಬಗ್ಗೆಯಾಗಲೀ ಅಷ್ಟಾಗಿ ನಂಬಿಕೆಯಿಲ್ಲ. ಆದರೂ ಆ ವ್ಯಕ್ತಿಯ ಕಿರಿಕಿರಿ ತಾಳದೆ ಅಂದು ಭವಿಷ್ಯ ಕೇಳಿದೆ. ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದ ಅವರು, ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿದೆ. ನಿಮಗೆ ರಾಜಯೋಗ ಇದೆ. ನೀವು ಕೈಯಿಟ್ಟ ಎಲ್ಲಾ ಕೆಲಸಗಳೂ ಥಟ್ ಅಂತ ಮುಗಿದು ಹೋಗುತ್ತೆ....ಅಂತ ಹೇಳಿ ಐದೇ ನಿಮಿಷದಲ್ಲಿ ನನ್ನನ್ನು ರೈಲು ಹತ್ತಿಸಿಬಿಟ್ಟಿದ್ದ. ಆದರೆ ನನ್ನದು ಮಾತ್ರ ಒಮ್ಮೊಮ್ಮೆ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುವ ಜಾಯಮಾನ. ಹಾಗಾಗಿ ಆ ಕೂಡಲೇ ಆತನ ಮಾತಿಗೆಲ್ಲಾ ಒಂದಷ್ಟು ಖಡಕ್ ಉತ್ತರ ಕೊಟ್ಟಿದ್ದೆ....ಸುಮ್ಮನೆ ರೈಲು ಹತ್ತಿಸುವ ಕೆಲಸ ಬೇಡ ಅಂತ ಒಂದು ರೇಂಜಿಗೆ ಆ ಜ್ಯೋತಿಷಿಗೆ ಬೈದು ಬಿಟ್ಟಿದ್ದೆ. ಸಾಕಪ್ಪ ನಿನ್ನ ಜ್ಯೋತಿಷ್ಯ ಇಲ್ಲಿಂದ ಜಾಗ ಖಾಲಿ ಮಾಡು ಅಂತಾನೂ ಹೇಳಿದ್ದೆ. ಆದರೆ ಅವರು ಮಾತ್ರ ಜಾಗ ಖಾಲಿ ಮಾಡುವ ಹಾಗೆ ಕಾಣಲಿಲ್ಲ. `ಸಾರ್, ಇಲ್ಲಿಯ ತನಕ ನಾನು ಹೇಳಿದ್ದು ನಿಮ್ಮ ಅದೃಷ್ಟದ ಬಗ್ಗೆ...ಮುಂದೆ ನಿಮ್ಮ ಜೀವನದಲ್ಲಿ ಆಗಬಹುದಾದ ದುರಾದೃಷ್ಟದ ಬಗ್ಗೆಯೂ ಹೇಳ್ತೀನಿ ಅಂದ......ಮಾತು ಮುಂದುವರೆಸಿದವನೇ.....ಮುಂದೆ ನಿಮ್ಮ ಜೀವನದಲ್ಲಿ ದೊಡ್ಡದೊಂದು ಅನಾಹುತ ಕಾದಿದೆ ಅಂದು ಬಿಟ್ಟ...ಮೊದಲನೆಯದು ಅಪಘಾತವಾದರೆ, ಎರಡನೆಯದು ನೀವು ಮಾಡುವ ವೃತ್ತಿಯದ್ದು ಎಂದು ಹೇಳಿದೆ..ಮೂರನೆಯದ್ದು ಏನಪ್ಪ? ಎಂದು ನಾನು ಕೂಡ ಕೇಳಿಯೇ ಬಿಟ್ಟೆ..ಆಗ ಆತ `ನಿಮ್ಮ ಜೀವನದಲ್ಲಿ ಪ್ರೀತಿಯ ವಿಚಾರದಲ್ಲಿ ಒಂದು ಸೋಲು ನಿಮ್ಮ ಬೆನ್ನು ಬೀಳಿಲಿದೆ. ಬದುಕಿನಲ್ಲಿ ನಿಮ್ಮ ಮೇಲೊಂದು ಬಹುದೊಡ್ಡ ಏಟು ಬೀಳಲಿದೆ. ಹಣ್ಣು ಮಗಳೊಬ್ಬಳ ವಿಚಾರದಲ್ಲಿ ಒಂದಷ್ಟು ದಿನ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ' ಅಂದು ಬಿಟ್ಟ. ಒಂದು ಮತ್ತು ಎರಡನೆಯದು ಓಕೆ....ಆದರೆ ಮೂರನೆಯದು ನನ್ನ ಜೀವನದಲ್ಲಿ ಸಾದ್ಯವೇ ಇಲ್ಲ ಅಂತ ಹೇಳಿಬಿಟ್ಟೆ. ಯಾಕೆಂದರೆ ಅಲ್ಲಿಯತನಕ ಪ್ರೀತಿ-ಪ್ರೇಮ, ಲವ್-ಗಿವ್ ಅಂತ ನನಗೆ ಏನೂ ಇರಲಿಲ್ಲ. ನನ್ನದೇನಿದ್ದರೂ ಒಬ್ಬಂಟಿ ಜೀವನ...ಹಾಗಾಗಿ ಈ ಬೀದಿ ಜ್ಯೋತಿಷಿಯ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೋ ಏನೋ ನಿನ್ನೆ ಮಂಗಳೂರಿನ ರಸ್ತೆಯಲ್ಲಿ ಮುಗಿಬಿದ್ದು ಆತನೇ ಮಾತಿಗಿಳಿದರೂ `ಅವನ್ಯಾರು? ಎನ್ನುವುದು ನನ್ನ ಅರಿವಿಗೆ ಬರಲು ಒಂದಷ್ಟು ಹೊತ್ತು ಬೇಕಾದದ್ದು...!<br />
ಹೀಗೆ ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಜ್ಯೋತಿಷಿ ಲಕ್ಷಣನ ಬಗ್ಗೆ ಅಷ್ಟೊತ್ತಿಗಾಗಲೇ ಎಲ್ಲವೂ ನೆನಪಾಗಿತ್ತು. ಆತ ಒಂದು ವರ್ಷದ ಹಿಂದೆ ಹೇಳಿದ್ದು, ಆನಂತರ ನನ್ನ ಜೀವನದಲ್ಲಿ ನಡೆದದ್ದು ಎಲ್ಲವೂ ಕಣ್ಣ ಮುಂದಿತ್ತು. ಹಾಗಾಗಿ ಇನ್ನು ಭವಿಷ್ಯದ ಪ್ರಶ್ನೆ ಬೇಡ ಅಂದುಕೊಂಡು ಜ್ಯೋತಿಷಿಯನ್ನೇ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಕೇಳಿದೆ. ಈಗ ಆತನ ಜೊತೆ ಮಾತನಾಡುವ ಸರದಿ ನನ್ನದು ಅಂದು ಕೊಂಡು `ಈಗ ನೀವು ನನ್ನ ಭವಿಷ್ಯ ಹೇಳುವುದು ಬೇಡ...ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ಜೀವನದಲ್ಲಿ ಏನಾಯಿತು? ಅಂತ ಹೇಳಿ ಅಂದು ಬಿಟ್ಟೆ. ಆಗ ತನ್ನ ಇನ್ನಿಲ್ಲದ ಕವಡೆ, ಜ್ಯೋತಿಷ್ಯದ ಒಂದಷ್ಟು ಪುಸ್ತಕ, ಅಸ್ತ್ರ ಎಲ್ಲವನ್ನೂ ನನ್ನೆದುರಿಗಿಟ್ಟವನೇ ಭೂತಕಾಲದ ವಿವರ ಬಹಿರಂಗಕ್ಕೆ ಇಳಿದುಬಿಟ್ಟ. `ಏನ್ ಸಾರ್, ನಿಮ್ಮ ಜೀವನದಲ್ಲಿ ಹೀಗೆಲ್ಲಾ ಆಗಿ ಹೋಯ್ತು! ನಾನವತ್ತು ಹೇಳಿದ ಹಾಗೆಯೇ ಆಯ್ತಲ್ಲ. ಹೆಣ್ಣು ಮಗಳ ವಿಚಾರದಲ್ಲಿ ನೀವು ಸುಖಾಸುಮ್ಮನೆ ತೊಂದರೆ ಅನುಭವಿಸುತ್ತೀರಿ ಅಂದಿದ್ದೆ. ಅದು ಸರಿಯಾಗಿಯೇ ಆಗಿದೆ ಅಲ್ವಾ ಸಾರ್. ಮೊದಲು ಎಲ್ಲರೂ ನಿಮ್ಮದೇ ತಪ್ಪು ಅಂದುಕೊಂಡಿದ್ರೂ ಆದ್ರೆ ಈಗ ಎಲ್ಲರಿಗೂ ನಿಮ್ಮ ಬಗ್ಗೆ ಗೊತ್ತಾಗಿದೆ ಅಲ್ವಾ? ಮೊದಲ ಪ್ರೀತಿ ನಿಮ್ಮ ವಿಚಾರದಲ್ಲಿ ಸೋತು ಹೋಯ್ತಲ್ಲ ಸಾರ್...! ಅಂದು ಬಿಟ್ಟ.....ಈ ಮಧ್ಯೆ ನಿಮಗೆ ಒಂದು ವಾಹನಪಘಾತವಾಗಿದೆ...ಮೊದಲು ಮಾಡ್ತಾ ಇದ್ದ ಕೆಲಸ ಕೂಡ ಈಗ ಇಲ್ವಲ್ಲಾ? ಬೇರೆ ಕಲಸದಲ್ಲಿದ್ದೀರಲ್ಲಾ.....ಅಂದ ಲಕ್ಷ್ಮಣ ಜ್ಯೋತಿಷಿ....<br />
ಆಗ ನಾನು ನಿಜಕ್ಕೂ ಶಾಕ್ ಆದೆ....!ಜ್ಯೋತಿಷ್ಯ, ಭವಿಷ್ಯ ಯಾವುದನ್ನೂ ನಂಬದ ನಾನು ಕೂಡ ಆತನ ಮಾತಿಗೆ ಸೋತು ಶರಣಾಗಬೇಕಾಯಿತು. ಕಾರಣ ಇಷ್ಟೇ....ಆತ ತನ್ನ ಭೂತಕಾಲದ ಬಗ್ಗೆ ಹೇಳಿದ ಇಂಚಿಂಚೂ ವಿಷಯಗಳು ಕಳೆದ ಒಂದು ವರ್ಷ ನಡೆದ ಘಟನೆಗಳ ಜೆರಾಕ್ಸ್ ಕಾಪಿಯಂತಿದ್ದವು......! ಅದರಲ್ಲೂ ನಾನು ಯಾರಲ್ಲಿಯೂ ಹೇಳದ ವಿಚಾರಗಳೂ ಲಕ್ಷ್ಮಣದ ಬಾಯಿಯಿಂದ ಹಾಗೇ ಉದುರುತ್ತಿದ್ದವು.<br />
ಆಗ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಹೈ-ಫೈ ಜೀವನ ನಡೆಸುವ ಸೋಕಾಲ್ಡ್ ಜ್ಯೋತಿಷಿಗಳ ಮಧ್ಯೆ ಲಕ್ಷ್ಮಣ್ನಂತಹ ಬೀದಿ ಸುತ್ತುವ ಜ್ಯೋತಿಷಿಗಳ ಭವಿಷ್ಯ ಎಷ್ಟು ಪವರ್ಫುಲ್ ಅನ್ನೋದು. ಕೆಲವೊಮ್ಮೆ ನಾವು ಇಂಥವರ ವೇಷ-ಭೂಷಣ, ಬದುಕುವ ರೀತಿಯನ್ನು ಕಂಡು ತಾತ್ಸರದಿಂದ ಕಾಣುತ್ತೇವೆ. ಆದರೆ ಬೀದಿ ಸುತ್ತಿ ಇವರು ಗಳಿಸಿಕೊಂಡ ಅತ್ಯಮೂಲ್ಯ ಜ್ಞಾಪಕಶಕ್ತಿ, ಇದ್ದಬದ್ದ ಪುಸ್ತಕ ಓದದೇ ಪಡೆದ ಒಂದಷ್ಟು ಭವಿಷ್ಯ ಹೇಳುವ ಗುಣ ನಿಜಕ್ಕೂ ಗ್ರೇಟ್ ಅನಿಸದೇ ಇರದು. ಅದರಲ್ಲೂ ಜ್ಯೋತಿಷ್ಯ ಬೇಕಾದ್ರೆ ಹೇಳ್ತೀನಿ...ಆದ್ರೆ ನಿಮ್ಮತ್ರ ಹಣ ಇಲ್ದೇ ಇದ್ರೆ ಪರ್ವಾಗಿಲ್ಲ ಎನ್ನುವ ಇವರ ಸ್ವಾಭಾವ....ಒಂದು ಹಂತಕ್ಕೆ ಅದಾಗಲೇ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು. ನನ್ನ ಜೀವನವನ್ನು ಇದ್ದಿದ್ದನ್ನು ಇದ್ದ ಹಾಗೆ ಕಟ್ಟಿಕೊಟ್ಟ ಲಕ್ಷ್ಮಣ್ರಂತಹ ಜ್ಯೋತಿಷಿಗಳ ಬಗ್ಗೆ ಅದ್ಯಾಕೋ ಒಂದಷ್ಟು ಗೌರವ ನನ್ನಲ್ಲೂ ಮೂಡಿದೆ. ಏನೇ ಆಗಲಿ ಭೂತ-ವರ್ತಮಾನ-ಭವಿಷ್ಯದ ನಡುವಿನ ಹಾದಿಯಲ್ಲಿ ಜ್ಯೋತಿಷ್ಯ ಎನ್ನುವುದು ಹೆಸರಿಗಷ್ಟೇ....ಬದುಕಿನಲ್ಲಿ ಇಂತದ್ದೇ ಆಗಬೇಕು ಅನ್ನುವುದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ...ಅದಕ್ಕೆ ಇರಬೇಕು ಯೋಗರಾಜ್ ಭಟ್ಟರು `ಡ್ರಾಮಾ' ಚಿತ್ರದಲ್ಲಿ ಹೀಗೆ ಹೇಳಿದ್ದು......<br />
ಪರ್ಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ...ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ....<br />
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!<br />
ಕೊನೆಗೆ ಲಕ್ಷ್ಮಣ್ ಜ್ಯೋತಿಷಿಯ ಮೊಬೈಲ್ ನಂಬರ್ ಪಡೆದು ಹೊರಟು ಬಿಟ್ಟೆ......ಆಗಲೂ ಅಷ್ಟೇ ಯಾವುದೇ ಪ್ರತಿಫಲ ಬಯಸದೇ `ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ, ಬದುಕಲ್ಲಿ ನೀವು ಗೆಲ್ತೀರಾ..! ಅಂದು ಬಿಟ್ಟ.......<br />
<br />
<br /></div>
dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-1599066378427730632013-04-23T10:22:00.001-07:002013-04-23T10:22:16.731-07:00<h2>
<span style="color: magenta;"><i><b>ಮನಸಿನಲ್ಲಿದ್ದ ಮೌನ ಮಾತಾದಾಗ.........!</b></i></span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj18ye7x1e4REYsrtqFYAxqc6_ecSU0QY4PsYoY_vLTGn5fN0NjXk7mfpdF9wVevbqlaHvl3mV92mddoNgb2i-3V3mrgDmtbGNnvGPmT2NQGa2dvFYYOdZsDLnqDkC8GneVA5dqVH_VY10/s1600/hands+touch.jpg" imageanchor="1" style="margin-left: 1em; margin-right: 1em;"><img border="0" height="265" src="https://blogger.googleusercontent.com/img/b/R29vZ2xl/AVvXsEj18ye7x1e4REYsrtqFYAxqc6_ecSU0QY4PsYoY_vLTGn5fN0NjXk7mfpdF9wVevbqlaHvl3mV92mddoNgb2i-3V3mrgDmtbGNnvGPmT2NQGa2dvFYYOdZsDLnqDkC8GneVA5dqVH_VY10/s400/hands+touch.jpg" width="400" /></a></div>
<h2>
<span style="color: magenta;"><i><b> </b></i></span></h2>
<b> </b>ಹೆಸರು ಗಣೇಶ್......ಹಗಲಿನಲ್ಲಿ ಕೊರಿಯರ್ ಕೆಲಸ, ರಾತ್ರಿಯಾದರೆ ಪತ್ರಿಕಾ ಕಛೇರಿ, ಈ ಮಧ್ಯೆ ದೂರ ಶಿಕ್ಷಣದಲ್ಲಿ ಜರ್ನಲಿಸಂ. ಹೀಗೆ ಮೂರು ದೋಣಿಯ ಮೇಲೆ ಕಾಲಿಟ್ಟಿದ್ದ ನಾನು ಹೆಚ್ಚಿನ ಸಮಯ ಜನರೊಂದಿಗೆ ಬೆರೆಯುತ್ತಿದ್ದದ್ದು ಕೊರಿಯರ್ ಸಂಸ್ಥೆಯಲ್ಲಿ. ಇದೇ ಕೊರಿಯರ್ ಸಂಸ್ಥೆಯ ಪಕ್ಕದಲ್ಲೊಂದು ವಾಟರ್ ಫ್ಯೂರಿಫಯರ್ ಶಾಪ್ ಇತ್ತು. ಇಲ್ಲಿ ಮಾಕರ್ೆಟಿಂಗ್ ಕೆಲಸಕ್ಕೆ ಅಂತ ಪ್ರತೀ ದಿನ ಹುಡುಗಿಯರು ಬರ್ತಾ ಇದ್ದರು. ನಮ್ಮಲ್ಲೂ ಎಂಟತ್ತು ಹುಡುಗರಿದ್ದ ಕಾರಣ ಸಹಜವಾಗಿಯೇ ಅಲ್ಲಿನ ಹುಡುಗಿಯರಿಗೂ ಇಲ್ಲಿನ ಹುಡುಗರಿಗೂ ಮಾತು ಮುಂದುವರೆದಿತ್ತು. ಆದರೆ ನಾನು ಮಾತ್ರ ಯಾರಲ್ಲೂ ಅಷ್ಟಾಗಿ ಮಾತಾಡ್ತಾ ಇರಲಿಲ್ಲ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಹತ್ತರ ನಂತರ ನಮ್ಮ ಅಫೀಸ್ನಲ್ಲಿ ನಾನೊಬ್ಬನೇ ಇರುತ್ತಿದ್ದೆ. ತೀರಾ ಸೈಲೆಂಟ್ ಆದ ನನಗೆ ಒಂಟಿಯಾದಾಗ ಜೊತೆಯಾಗುತ್ತಿದ್ದದ್ದು ಪುಸ್ತಕಗಳು ಮಾತ್ರ. ಹೀಗೇ ಪುಸ್ತಕ ಓದ್ತಾ ಇದ್ದಾಗ ಪಕ್ಕದ ಸಂಸ್ಥೆಯ ಐದಾರು ಹುಡುಗಿಯರು ಬಂದು ನಮ್ಮ ಕೆಲಸದ ಬಗ್ಗೆ ಕೇಳಿದ್ರೂ....ಇಲ್ಲೇನ್ ಕೆಲಸ? ಏನ್ ಮಾಡ್ತೀರಾ? ಅಂತ ವಿಚಾರಿಸಿದ್ರೂ. ನಾನೂ ಕೂಡ ಅವರ ಕುತೂಹಲಕ್ಕೆ ನಿರಾಶೆ ಮಾಡದೆ ಎಲ್ಲವನ್ನೂ ಒಪ್ಪಿಸಿದೆ. ಇಷ್ಟೆಲ್ಲಾ ಮುಗಿದ ನಂತರ ಇವರಲ್ಲೊಬ್ಬಳು ನಾನು ಓದುತ್ತಿದ್ದ ಪುಸ್ತಕ ಪಡೆದುಕೊಂಡಳು. ಓದಿ ನಾಳೆ ಕೊಡ್ತೀನಿ ಅಂದಳು. ಪುಸ್ತಕವಾದ ಕಾರಣ ನಾನೂ ಕೊಟ್ಟು ಬಿಟ್ಟೆ. ಮರುದಿನ ನನ್ನ ಪುಸ್ತಕ ಹಿಂದಿರುಗಿಸಲು ಆಕೆ ಬಂದಳು. ಅವಳ ಜೊತೆಗೆ ಉಳಿದ ನಾಲ್ವರೂ ಇದ್ದರು. ಯಾಕೊ ಗೊತ್ತಿಲ್ಲ ಈ ಪುಸ್ತಕ ಪಡೆದ ಹುಡುಗಿಯರ ಮಧ್ಯೆ ನಿಂತಿದ್ದ ಗುಳಿ ಕೆನ್ನೆಯ ಹುಡುಗಿ ಮಾತ್ರ ಒಂದೇ ಸಮನೆ ಇಷ್ಟವಾಗಿದ್ದಳು. ಹಾಗಂತ ಅದು ಪ್ರೀತಿ ಅನ್ನುವ ಹಾಗಿರಲಿಲ್ಲ. ಜಸ್ಟ್ ಇಷ್ಟ ಅಷ್ಟೇ....!<br />ಹೀಗೆ ಪ್ರತಿ ನಿತ್ಯ ಇವರುಗಳ ಜೊತೆ ನನ್ನ ಮಾತುಕತೆ ಸಾಗುತ್ತಿತ್ತು. ಆದರೆ ಆ ಗುಳಿಕೆನ್ನೆಯ ಹುಡುಗಿಯೊಂದಿಗೆ ಮಾತ್ರ ನನ್ನ ಮಾತುಕತೆ ನಡೆದಿರಲಿಲ್ಲ. ಅವಳೊಂದಿಗೇನಿದ್ದರೂ ಜಸ್ಟ್ ನಗುವಷ್ಟೇ. ಹೀಗೇ ಸಾಗುತ್ತಿದ್ದ ದಿನಗಳ ಮಧ್ಯೆ ನನ್ನ ಜೊತೆ ಮಾತನಾಡುತ್ತಿದ್ದ ಹುಡುಗಿಯರಿಗಿಂತ ಸೈಲೆಂಟ್ ಹುಡುಗಿ ತುಂಬಾ ಇಷ್ಟವಾಗಿದ್ದಳು. ಬಹುಶಃ ಈ ವೇಳೆ ಇಷ್ಟ ಅನ್ನುವುದು ಒಂದು ಹಂತಕ್ಕೆ ಪ್ರೀತಿಯಾಗಿ ಬೆಳೆದಿತ್ತು ಅನ್ನಬಹುದೇನೋ? ಜೀವನದಲ್ಲಿ ಒಂದು ಹುಡುಗಿಯ ಮೇಲೆ ಮೂಡಿದ ಮೊದಲ ಪ್ರೀತಿ ಅದಾಗಿತ್ತು....!<br />ಇಷ್ಟೆಲ್ಲಾ ಅದ್ಮೇಲೆ ಪ್ರೀತಿ ವಿಚಾರ ಅವಳಿಗೆ ಹೇಳಿಬಿಡಬೇಕು ಅನಿಸ್ತು. ಆದರೆ ಅವಳ ಜೊತೆ ಯಾವಾಗಲೂ ಅವಳ ಗೆಳತಿಯರು ಇರ್ತಾ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಒಂದು ದಿನ ಹೇಗೋ ಅವಳ ಮೊಬೈಲ್ ನಂಬರ್ ಪಡೆದುಕೊಂಡೆ. ನಂಬರ್ ಪಡೆದ ಮೇಲೆ ಫೋನ್ ಮಾಡಿ ಪ್ರೀತಿಯ ಬಗ್ಗೆ ಹೇಳೋಣವೆಂದರೆ ಅದೇನೋ ಭಯ! ಯಾಕೆಂದರೆ ಅದು ನನ್ನ ಮೊದಲ ಪ್ರೀತಿ...ಫಸ್ಟ್ ಪ್ರಫೋಸಲ್ ಆಗಿತ್ತು....! ಅವತ್ತೊಂದಿನ ರಾತ್ರಿ ಗುಂಡಿಗೆ ಗಟ್ಟಿ ಮಾಡಿಕೊಂಡು ಅವಳಿಗೆ ಫೋನ್ ಮಾಡಿದೆ. ಆದರೆ ಭಯದಿಂದ ಬಾಯಲ್ಲಿ ಮಾತೇ ಉದುರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಎಂಬಂತೆ ಫೋನ್ ಎತ್ತಿದ ಕಾವ್ಯ...ಗಣೇಶ್ ಅಲ್ವಾ ಅಂತ ಕೇಳಿದ್ದಳು. ಫೋನ್ನಲ್ಲಿ ಇಂಥದ್ದೊಂದು ಮಾತು ಕೇಳಿ ಸಿಡಿಲು ಬಡಿದ ಅನುಭವ....! ಹೌದು...ಅಂತ ಮಾತು ಮುಂದುವರೆಸಿದ ನಾನು ಒಂದೆರಡು ನಿಮಿಷ ಕ್ಯಾಶುವಲ್ ಆಗಿ ಮಾತಿಗಿಳಿದೆ. ಆದ್ಯಾಕೊ ಸಮಯ ಓಡ್ತಾ ಇತ್ತು ಅನಿಸಿದಾಗ ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದೆ. ಆದರೆ ಆವಾಗಲೇ ಗೊತ್ತಾಗಿದ್ದು, ಅವಳಿಗೂ ನಾನು ಈ ಹಿಂದೆಯೇ ಇಷ್ಟವಾಗಿದ್ದೆ ಅಂತ. ಅಲ್ಲಿಂದ ಮೌನಿ ಹೃದಯಗಳ ಪ್ರೀತಿಯ ಪಯಣ ಆರಂಭವಾಗಿತ್ತು.......<br />ಕಾವ್ಯ ಜಾತಿ, ಗುಣ, ಶಿಕ್ಷಣ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್. ಹೀಗಾಗಿಯೋ ಏನೋ ಪ್ರಮಿಯೊಂದಿಗೆ ಒಂದು ಬಾರಿಯೂ ನಾನು ಮಾತು ಮುರಿದಿರಲಿಲ್ಲ, ಜಗಳ ಕಾಯ್ದಿರಲಿಲ್ಲ. ಪ್ರಮಿಯದ್ದು ಮಂಗಳೂರಿನಿಂದ 60ಕಿ.ಮೀ ದೂರದ ಊರು. ನನ್ನಂತೆಯೇ ಶಿಕ್ಷಣ ಮತ್ತು ಕೆಲಸ ಅಂತ ಮಾಡಿಕೊಂಡು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಬೆಳಿಗ್ಗೆ 7ರಿಂದ 9 ಕಂಪ್ಯೂಟರ್ ಕ್ಲಾಸ್ಗೆ ಹೋದರೆ ಉಳಿದ ಸಮಯ ಅಂದರೆ ಸಂಜೆ ಐದರವರೆಗೆ ವಾಟರ್ ಫ್ಯೂರಿಫಯರ್ ಸಂಸ್ಥೆಯಲ್ಲಿ ಕೆಲಸ. ಈ ಮಧ್ಯೆ ಸಿಗುವ ಭಾನುವಾರದ ಬಿಡುವಿನಲ್ಲಿ ನಾವಿಬ್ಬರೂ ಮಂಗಳೂರಿನ ಪಾಕರ್್ ಬೀಚ್ಗಳಲ್ಲಿ ಸುತ್ತಾಡುತ್ತಿದ್ದೆವು. ಉಳಿದ ದಿನಗಳಲ್ಲಿ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ ಮುಂದುವರೆದಿತ್ತು. ಹಾಗಂತ ನಮ್ಮ ಸುತ್ತಾಟಗಳು ಪಾಕರ್್-ಬೀಚ್ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಾರದಲ್ಲಿ ಎರಡು ದಿನ ಮಂಗಳೂರಿನ ದೇವಸ್ಥಾನವೊಂದಕ್ಕೆ ಖಾಯಂ ಭಕ್ತರಾಗಿದ್ದೆವು. ಇಲ್ಲಿ ಹೋದಾಗ ಇಬ್ಬರ ಹಸರಿನಲ್ಲೂ ಕುಂಕುಮಾರ್ಚನೆ ಮಾಡಿಸುವುದು ವಾಡಿಕೆ. ಹೀಗಾಗಿ ನಮ್ಮಿಬ್ಬರ ಹೆಸರು ನಕ್ಷತ್ರ ಎಲ್ಲವೂ ಇಲ್ಲಿನ ಅರ್ಚಕರ ಮೆದುಳಿನಲ್ಲಿ ಅಪ್ಡೇಟ್ ಆಗಿತ್ತು. ಹೀಗೆ ನಮ್ಮಿಬ್ಬರ ಪ್ರೀತಿ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಕಾವ್ಯಾಳದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಅವಳದ್ದು ಮಕ್ಕಳಂತ ಸ್ವಭಾವ. ತೀರಾ ಸೆನ್ಸಿಟಿವ್, ಅತೀ ಭಾವುಕ ಜೀವಿ. ತಾನು ಉಡುವ ಉಡುಗೆಯಲ್ಲೂ ಅಷ್ಟೇ, ಫಫರ್ೆಕ್ಟ್ ಮ್ಯಾಚಿಂಗ್ ಆಗಿರಬೇಕು. ನೀಲಿ ಆಕಾಶಕ್ಕೆ ಸಡ್ಡು ಹೊಡೆಯುವ ಬಣ್ಣದ ಚೂಡಿದಾರ ಹಾಕಿ, ತನ್ನ ನೀಲಕಾಯದ ಕೂದಲುಗಳಿಗೆ ಹೂ ಮುಡಿದು ಗುಳಿ ಕೆನ್ನೆಯ ನಗು ನಕ್ಕಳೆಂದರೆ ಸಾಕು ಕಾವ್ಯ ಸಖತ್ ಇಷ್ಟವಾಗುತ್ತಿದ್ದಳು. ಹೊಟೇಲ್ನಲ್ಲಿ ತಿಂಡಿ ತಿನ್ನುವಾಗಲೂ ಅವಳ ಮಕ್ಕಳಾಟಿಕೆಗೆ ಬ್ರೇಕ್ ಬೀಳುವುದಿಲ್ಲ. ಒಟ್ಟಿನಲ್ಲಿ ಸ್ವಭಾವತ ಕಾವ್ಯ ನನಗೆ ತುಂಬಾ ಇಷ್ಟವಾಗಿದ್ದಳು. ಹೀಗಾಗಿ ಜೀವನಕ್ಕೆ ಇವಳೇ ಸೂಕ್ತ ಅಂದುಕೊಂಡು ಆ ಜೀವಕ್ಕೆ ಒಂದಷ್ಟೂ ನೋವು ಕೊಡದೇ ಪ್ರೀತಿಸುತ್ತಿದ್ದೆ. <br />ಹೀಗೆ ಯಾವುದೆ ಅಡೆತಡೆ ಇಲ್ಲದ ನಮ್ಮ ಪ್ರೀತಿಗೆ ಸಣ್ಣದೊಂದು ಏಟು ಬಿದ್ದಿದ್ದು ಕಾವ್ಯ ಕೆಲಸ ಬಿಟ್ಟಾಗ. ಸರಿಯಾಗಿ ಸಂಬಳ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕಾವ್ಯ ತನ್ನ ಕೆಲಸ ಬಿಟ್ಟಿದ್ದಳು. ಅದೇ ನೋವಿನಲ್ಲಿ ನನ್ನ ಜೊತೆಗಿನ ಮಾತಿಗೂ ಸಣ್ಣ ಮಟ್ಟಿನ ವಿರಾಮ ಕೊಟ್ಟಿದ್ದಳು. ಆದರೆ ಇವಳನ್ನು ತೀರಾ ಹೆಚ್ಚಾಗಿ ಹಚ್ಚಿಕೊಂಡಿದ್ದ ನನಗೆ ಇವಳೊಂದಿಗೆ ಒಂದು ದಿನ ಮಾತಿಗಿಳಿಯದಿದ್ದರೂ ಆಗುತ್ತಿರಲಿಲ್ಲ. ಹಾಗಾಗಿ ಅಂದು ಅವಳಿಗೆ ಒಂದೇ ಸಮನೆ ಕಾಲ್ ಮಾಡಿದ್ದೆ. ತುಂಬಾ ಹೊತ್ತಿನ ಬಳಿಕ ಫೋನ್ ಎತ್ತಿದ ಕಾವ್ಯಳನ್ನು ಸಮಾಧಾನಪಡಿಸಿ, ಪಾಕರ್್ಗೆ ಕರೆದುಕೊಂಡು ಹೋದೆ. ಅಂದು ಮಾತ್ರ ಕಾವ್ಯಳಲ್ಲಿ ಎಂದಿಗಿಂತಲೂ ಹೆಚ್ಚಿನ ಬದಲಾವಣೆ ಕಂಡಿತ್ತು. ಅದೇಗೋ ಅವಳ ಸಮಸ್ಯೆಯನ್ನು ತಿಳಿದುಕೊಂಡೆ. ಆಗಲೇ ಗೊತ್ತಾಗಿದ್ದು, ಕೆಲಸ ಬಿಟ್ಟ ನಂತರ ಕಾವ್ಯಗೆ ಇಲ್ಲಿ ಹಣದ ಸಮಸ್ಯೆಯಾಗಿದೆ ಅನ್ನೋದು. ಹೀಗಿದ್ದರೂ ನನ್ನ ಬಳಿ ತನ್ನ ಸಮಸ್ಯೆಯನ್ನು ಮಾತ್ರ ಕಾವ್ಯ ಅಲ್ಲಿಯತನಕ ಹೇಳಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಗೊತ್ತಾದ ನಂತರ ನಾನೇ ಕಾವ್ಯಾಗೆ ಹಣ ಕೊಟ್ಟು ಬೇಸರ ಕಳೆಯಲಿ ಅಂತ ಒಂದೆರೆಡು ದಿನ ಊರಿಗೆ ಹೋಗಿ ಬಾ ಅಂತ ಕಳಿಸಿದೆ. ಮತ್ತೆ ಬಂದ ನಂತರ ಇಲ್ಲೊಂದು ಕೆಲಸ ಹುಡುಕಿದರಾಯಿತು ಅಂತ ಸಮಾಧಾನಿಸಿದೆ. ಹೀಗೆ ಮನಸ್ಸಿಲ್ಲದ ಮನಸ್ಸಿನಲಿ ಕಾವ್ಯಳನ್ನು ಬಸ್ ಹತ್ತಿಸಿ ಬಿಟ್ಟೆ. ಊರಿಗೆ ಹೋದ ಕಾವ್ಯ ಎರಡು ದಿನ ಮನೆಯವರೊಂದಿಗೆ ಕಳೆದು ಮರಳಿ ಮಂಗಳೂರಿಗೆ ಬಂದಿದ್ದಳು. ಆಗ ಅವಳ ಗೆಳತಿಯೊಬ್ಬಳು ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ ಕಾವ್ಯಗೆ ಕೆಲಸ ಹುಡುಕಿದ್ದಳು. ಊರಿಂದ ಬಂದವಳೇ ನನ್ನ ಬಳಿ ಅನುಮತಿ ಕೇಳಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದಳು. ಬಟ್ಟೆ ಅಂಗಡಿ ಕೆಲಸ ನನಗೆ ಇಷ್ಟವಿಲ್ಲದಿದ್ದರೂ ಮತ್ತೆ ಕಾವ್ಯ ಕೊರಗುವುದು ಬೇಡ ಎಂದು ಒಪ್ಪಿದ್ದೆ. ಮತ್ತೆ ಬೇಕಾದರೆ ಅವಳಿಗೆ ಹೊಂದಾಣಿಕೆಯಾಗುವ ಕೆಲಸವನ್ನು ನಾನೇ ಹುಡುಕುತ್ತೇನೆ ಅಂದುಕೊಂಡು ಸುಮ್ಮನಾಗಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಕಾವ್ಯಳಲ್ಲಿ ಮತ್ತೆ ಹಿಂದಿನ ಉತ್ಸಾಹ ಮರುಕಳಿಸಿತ್ತು. ನನ್ನ ಪ್ರೀತಿಯ ಕಾವ್ಯ ಈ ಈ ಹಿಂದಿನಂತೆ ಮತ್ತೆ ನನ್ನ ಜೊತೆ ಬೆರೆತಿದ್ದಳು. ಬಟ್ಟೆ ಅಂಗಡಿಯಲ್ಲೂ ಕೆಲಸ ಸಾಗುತ್ತಿತ್ತು. ಹೀಗಿರುವಾಗ ಅದೊಂದು ಭಾನುವಾರ ನಾವಿಬ್ಬರೂ ಪಾಕರ್್ನಲ್ಲಿ ಜೊತೆಯಾಗಿದ್ದೆವು. ಈ ವೇಳೆ ತೀರಾ ಸೈಲೆಂಟಾಗಿದ್ದಳು ಕಾವ್ಯ. ಮತ್ತೆ ಇವಳಿಗೇನಾಯ್ತಪ್ಪ ಅಂದುಕೊಂಡು ಕೇಳಿಯೇ ಬಿಟ್ಟೆ. ಬಾಯಿ ಬಿಡದ ಕಾವ್ಯ ನಾನು ಸಾಕಷ್ಟು ಒತ್ತಾಯಪಡಿಸಿದ ನಂತರ ಹೇಳಿದಳು. ಇವಳು ನನಗೆ ಸಿಗುವ ಮುನ್ನ ನಗರದ ಕಾಫಿ ಡೇ ಒಂದರಲ್ಲಿ ಕೆಲಸಕ್ಕಿದ್ದಳು. ಆಗ ಅಲ್ಲಿನ ಸಿಬ್ಬಂದಿಯೋರ್ವ ತಂಗಿ ಮದುವೆಯ ಕಾರಣ ನೀಡಿ ಇವಳ 12 ಸಾವಿರದ ಚಿನ್ನದ ಸರ ಪಡೆದಿದ್ದ. ತೀರಾ ಪಾಪ-ಪುಣ್ಯದ ಲೆಕ್ಕಾಚಾರ ಹಾಕುವ ಕಾವ್ಯ ಸ್ವಲ್ಪವೂ ಯೋಚಿಸದೆ ಸರವನ್ನು ಆತನ ಕೈಗಿಟ್ಟಿದ್ದಳು. ಆದರೆ ಈಗ ಆತ ನಾಪತ್ತೆಯಾಗಿದ್ದಾನೆ. ಕಾವ್ಯ ಮನೆಯಲ್ಲಿ ಪ್ರತೀ ಬಾರಿ ಹೋದಾಗಲೂ ಚಿನ್ನದ ಸರ ಕೇಳ್ತಾರೆ. ಹೋದಾಗಲೆಲ್ಲಾ ಸರ ಹಾಸ್ಟೆಲ್ನಲ್ಲಿದೆ ಎಂದು ಹೇಳುತ್ತಿದ್ದ ಕಾವ್ಯಗೆ ಇನ್ನೊಮ್ಮೆ ಬರುವಾಗ ತರಲೇ ಬೇಕು ಎಂದು ಮನೆಯಲ್ಲಿ ಹೇಳಿದ್ದಾರೆ. ಫೋನ್ ಮಾಡಿದಾಗಲೂ ಮನೆಯಲ್ಲಿ ಸರದ ವಿಚಾರ ತೆಗೆಯುತ್ತಿದ್ದರು. ಹಾಗಾಗಿ ಇನ್ನು ನಾನು ಮನೆಗೆ ಹೋಗುವುದೇ ಇಲ್ಲ ಅಂತ ನನ್ನ ಬಳಿ ನೋವು ತೋಡಿಕೊಂಡಿದ್ದಳು. ಈ ವೇಳೆ ನನಗೆ ಏನು ಮಾಡುವುದೆಂದೇ ತೋಚಲಿಲ್ಲ. ಆದರೂ ಕಾವ್ಯಾಳನ್ನು ಸಮಾಧಾನಿಸಿ, ಸರ ಪಡೆದವನನ್ನು ಹುಡುಕುವ ಭರವಸೆ ನೀಡಿದೆ. ಅವನ ನಂಬರ್ ಪಡೆದು ಹುಡುಕುವ ಪ್ರಯತ್ನವನ್ನೂ ಮಾಡಿದೆ. ಆದರೆ ನಂಬರ್ ಸ್ವಿಚ್ ಆಫ್ ಆಗಿತ್ತು, ವಿಳಾಸ ಹುಡುಕೋಣವೆಂದರೆ ಸಿಮ್ ಕಾಡರ್್ಗೆ ಕೊಟ್ಟ ಅಡ್ರೆಸ್ ಕೂಡ ನಕಲಿಯಾಗಿತ್ತು. ಹಾಗಾಗಿ ನನ್ನ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ನಾನೇ ಒಂದೆರೆಡು ತಿಂಗಳು ಬಿಟ್ಟು ಸರ ತೆಗೆದುಕೊಡುವುದಾಗಿ ಹೇಳಿದೆ. ಆದರೆ ಕಾವ್ಯ ನನ್ನ ವಿಚಾರದಲ್ಲಿ, ಅದರಲ್ಲೂ ಹಣದ ವಿಚಾರದಲ್ಲಿ ತುಂಬಾ ರಿಸವರ್್ ಆಗಿದ್ದವಳು. ಹಾಗಾಗಿ ನನ್ನ ಬಳಿ ಸರ ಪಡೆಯುವುದು ಅವಳಿಗೆ ಇಷ್ಟವಿರಲಿಲ್ಲ. ಕೊನೆಗೆ ಅವಳೇ, ಪರವಾಗಿಲ್ಲ...ಅವನ ಫೋನ್ ಆನ್ ಆದ ನಂತರ ನೋಡಿದರಾಯಿತು ಅಂದಳು. ಮನೆಗೆ ಹೋಗ್ಬೇಕು ಅಂದಿದ್ದಕ್ಕೆ ಆಯ್ತು ಅಂದವಳೇ,,,,,ತನ್ನ ಗುಳಿ ಕೆನ್ನೆಯ ನಗು ಚೆಲ್ಲಿದಳು. ಆ ನಂತರ ತಿಂಗಳು ಕಳೆದರೂ ಕಾವ್ಯ ನನ್ನ ಬಳಿ ಸರದ ವಿಚಾರ ತೆಗೆಯಲೇ ಇಲ್ಲ. ಹಿಂದಿನಂತೆ ನಮ್ಮಿಬ್ಬರ ಪ್ರೀತಿ ಯಾವುದೆ ಅಡೆತಡೆ ಇಲ್ಲದೇ ಸಾಗಿತ್ತು. ದಿನಕಳೆದಂತೆ ನಾವಿಬ್ಬರೂ ತೀರಾ ಹತ್ತಿರವಾಗಿದ್ದೆವು. ಕಾವ್ಯ ನನ್ನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಳು.<br />ಒಂದು ತಿಂಗಳ ನಂತರ ಅದೊಂದು ದಿನ ಶನಿವಾರ. ಎಂದಿನಂತೆ ಕಾವ್ಯ ರಾತ್ರಿ ಕರೆ ಮಾಡಿದ್ದಳು. ಕರೆ ಮಾಡಿದವಳೇ ನಾಳೆ ಭಾನುವಾರ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ಪ್ರತೀ ಬಾರಿ ನಾನೇ ಕಾವ್ಯಳನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಕಾವ್ಯ ನನ್ನ ಬಳಿ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ನನಗೆ ಆಶ್ಚರ್ಯವಾದರೂ, ಕಾವ್ಯಳಿಗೆ ನಿರಾಶೆ ಮಾಡದ ನಾನು ಒಪ್ಪಿದ್ದೆ. ಮರುದಿನ ಭಾನುವಾರ ಬೆಳಿಗ್ಗೆ 8.30ಕ್ಕೆ ಅವಳ ಹಾಸ್ಟೆಲ್ ಬಳಿಗೆ ಹೋದೆ. ನಾನು ಕೊಟ್ಟ ನೀಲಿ ಕೆಂಪು ಬಣ್ಣದ ಚೂಡಿದಾರ ತೊಟ್ಟ ಕಾವ್ಯ ನನಗಾಗಿ ಕಾಯುತ್ತಿದ್ದಳು. ಆವತ್ತು ಎಂದಿಗಿಂತಲೂ ನನ್ನ ಕಣ್ಣಿಗೆ ಅಂದವಾಗಿ ಕಂಡಿದ್ದಳು ಕಾವ್ಯ. ಅಲ್ಲಿಂದ ನನ್ನ ಬೈಕ್ನಲ್ಲಿ ಕೂರಿಸಿ ನಮ್ಮಿಬ್ಬರ ಫೇವರೇಟ್ ದೇವಸ್ಥಾನದತ್ತ ಸಾಗಿದೆವು. ಇಲ್ಲೂ ಯಥಾವತ್ತಾಗಿ ಎಂದಿನಂತೆ ಇಬ್ಬರ ಹೆಸರಿನಲ್ಲೂ ಕುಂಕುಮಾರ್ಚನೆ ಮಾಡಿಕೊಂಡೆವು. ಹೀಗಿರುವಾಗಲೇ ಕಾವ್ಯಾಳ ವರ್ತನೆಯಲ್ಲಾದ ಸಣ್ಣದೊಂದು ಬದಲಾವಣೆ ನನಗೆ ಸಾಕಷ್ಟು ಆಶ್ಚರ್ಯ ತರಿಸಿತ್ತು. ಯಾವತ್ತೂ ನಾನು ಹೇಳಿದಂತೆ ದೇವಸ್ಥಾನದಲ್ಲಿ ವತರ್ಿಸುತ್ತಿದ್ದ ಕಾವ್ಯ ಅಂದು ಮಾತ್ರ ಸಾಕಷ್ಟು ಬದಲಾದಂತೆ ಕಂಡಳು. ದೇವರ ಮುಂದೆ ನಿಂತು ನೀವೇ ನನಗೆ ಕುಂಕುಮ ಇಡಿ ಅಂದಿದ್ದಳು ಕಾವ್ಯ! ನಿಜಕ್ಕೂ ಅಂದು ಆಶ್ಚರ್ಯ ಪಡುವ ಸರದಿ ನನ್ನದು. ಅಲ್ಲಿಯ ತನಕ ಕಾವ್ಯಾಳಿಂದ ಇಂಥದ್ದೊಂದು ಕೋರಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಕಾವ್ಯಾಳನ್ನು ತುಂಬಾ ಇಷ್ಟ ಪಡುವ ನಾನು, ಬಾಳ ಸಂಗಾತಿ ಎಂದೇ ಅಂದುಕೊಂಡಿದ್ದ ಕಾರಣ ಕುಂಕುಮ ಪಡೆದು ಅವಳ ಹಣೆಗಿಟ್ಟಿದ್ದೆ. ಆಗಲೂ ಅಷ್ಟೇ, ಭಾವುಕತೆ ತುಂಬಿದ ಗುಳಿಕೆನ್ನೆಯ ನಗುವೊಂದು ಅವಳಿಂದ ಹೊರಹೊಮ್ಮಿತ್ತು. ನಂತರ ಅಲ್ಲಿಂದ ಹೊರ ಬಂದವನೇ ಎಂದಿನಂತೆ ಕಾವ್ಯಾಳ ಬಳಿ ಹೊಟೇಲ್ಗೆ ಹೋಗೋಣವಾ ಅಂದೆ. ಪ್ರತೀ ಬಾರಿ ಇವಳಲ್ಲಿ ಈ ರೀತಿ ಕೇಳಿದರೆ ಬರುತ್ತಿದ್ದ ಉತ್ತರ ಬೇಡ ಎನ್ನುವುದು. ತುಂಬಾ ಸ್ವಾಭಿಮಾನಿಯಾದ ಕಾವ್ಯಾ ನನ್ನಲ್ಲಿ ಹಣ ಖಚರ್ು ಮಾಡಿಸುತ್ತಿರಲಿಲ್ಲ. ಆಗೆಲ್ಲಾ ನಾನೇ ಬಲವಂತದಿಂದ ಕರೆದೊಯ್ಯುತ್ತಿದ್ದೆ. ಆದರೆ ಅಂದು ಮಾತ್ರ ಸ್ವತಃ ಅವಳೇ ನನಗೆ ಜ್ಯೂಸ್ ಬೇಕು ಅಂತ ಕೇಳಿದ್ದಳು. ಅಲ್ಲಿಗೆ ಕಾವ್ಯಾಳ ವರ್ತನೆಯಲ್ಲಾದ ಎರಡನೆಯ ಬದಲಾವಣೆಯ ಅರಿವು ನನಗಾಯಿತು. ಹಾಗಾಗಿ ಅವಳೊಂದಿಗೆ ಅಲ್ಲೇ ಇದ್ದ ಹೊಟೇಲ್ಗೆ ಹೋದೆ. ಅಲ್ಲಿಯ ತನಕ ಕಾವ್ಯಾ ಯಾವತ್ತೂ ತನಗೆ ಇಷ್ಟವಾದ ತಿಂಡಿ ಕೇಳಿದವಳಲ್ಲ. ಆದರೆ ಅಂದು ಮಾತ್ರ ತನಗಿಷ್ಟದ ತಿಂಡಿ ಕೇಳಿದ್ದಳು. ತಿಂಡಿ ಬಂದ ತಕ್ಷಣ ಮೊದಲ ತುತ್ತು ನನ್ನ ಬಾಯಿಗಿಟ್ಟವಳೇ ತನ್ನ ಮಕ್ಕಳಾಟದ ನಗು ಚೆಲ್ಲಿದಳು. ಈ ತುತ್ತು ಇವಳಿಂದ ಪಡೆದ ಮೊದಲ ತುತ್ತಾಗಿತ್ತು. ನನ್ನಲ್ಲೂ ಒಂದು ಹಂತಕ್ಕೆ ಪ್ರೀತಿ ತುಂಬಿದ ನಗು ಹೊರ ಹೊಮ್ಮಿತ್ತು. ಇನ್ನು ಜ್ಯೂಸ್ ಬಂದಾಗಲೂ ಅರ್ಧ ಕುಡಿದು ಉಳಿದರ್ಧ ನೀವು ಕುಡಿಯಿರಿ ಅಂದಳು. ಅಂದು ಯಾಕೋ ಗೊತ್ತಿಲ್ಲ, ಹೆಚ್ಚು ಮಾತನಾಡುವ ನಾನು ಮಾತ್ರ ಸುಮ್ಮನಾಗಿದ್ದೆ. ಕಾವ್ಯಾಳ ಪ್ರೀತಿ ಕಂಡು ಅತೀ ಭಾವುಕನಾಗಿದ್ದೆ. ಅವಳ ಪ್ರತಿಯೊಂದು ಅಜ್ಞೆಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೆ. ಹೀಗೆ ತಿಂಡಿ ತಿಂದ ನಂತರ ಕಾವ್ಯಾಳನ್ನು ಅವಳ ಕೆಲಸಕ್ಕೆ ಬಿಟ್ಟು ಮನೆಗೆ ತೆರಳಿದೆ (ಬಟ್ಟೆ ಅಂಗಡಿಯಲ್ಲಿದ್ದ ಕಾರಣ ಕಾವ್ಯಾಗೆ ಭಾನುವಾರವೂ ಕೆಲಸವಿತ್ತು. ಎಲ್ಲೋ ಕೆಲವೊಮ್ಮೆ ರಜೆ ಹಾಕುತಿದ್ದಳು) ಅಂದು ಮಾತ್ರ ನಾನು ಸಾಕಷ್ಟು ಮೌನಿಯಾಗಿದ್ದೆ. ಯಾವತ್ತೂ ಅಷ್ಟು ಚಟುವಟಿಕೆಯಿಂದಿರದ ಕಾವ್ಯಾ ಮಾತ್ರ ಅಂದು ನನ್ನನ್ನು ಸ್ವಲ್ಪ ಹೆಚ್ಚೇ ಎನ್ನುವಂತೆ ಪ್ರೀತಿಸಿದ್ದಳು. <br />ಅಂದು ಮಧ್ಯಾಹ್ನವೂ ಅವಳ ಕಾಲ್ ಎಂದಿನಂತೆ ಬಂದಿತ್ತು. ರಾತ್ರಿಯೂ ಕಾಲ್ ಮಾಡಿ ಮುಕ್ಕಾಲು ಘಂಟೆ ಹರಟೆ ಹೊಡೆದಿದ್ದಳು. ಆವಾಗೆಲ್ಲಾ ಕಾವ್ಯಾಳ ವರ್ತನೆಯಲ್ಲಿ ಏನೋ ಒಂದು ಬದಲಾವಣೆಯಿತ್ತು. ಆದರೆ ತುಂಬಾ ಖುಷಿಯಾಗಿದ್ದ ಕಾರಣ ನಾನೂ ಪ್ರಶ್ನಿಸುವ ಗೋಜಿಗೆ ಕೈ ಹಾಕಲಿಲ್ಲ. ಅಲ್ಲಿಗೆ ಅದೊಂದು ಭಾನುವಾರ ನನ್ನ ಪಾಲಿಗೆ ವಿಶೇಷ ದಿನವಾಗಿ ಮುಗಿದು ಹೋಗಿತ್ತು. <br />ಮರುದಿನ ಸೋಮವಾರ ಸಮಯ ಸುಮಾರು 7.35. ನಾನಿನ್ನೂ ಎದ್ದಿರಲಿಲ್ಲ. ಅದಾಗಲೇ ಕಾವ್ಯಾಳ ಕರೆಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಅವಳಿಗಾಗಿಯೇ ಬೇರೊಂದು ರಿಂಗ್ಟೋನ್ ಇಟ್ಟಿದ್ದ ನಾನು ಅದನ್ನು ಕೇಳಿಯೇ ಎಚ್ಚರವಾಗಿದ್ದೆ. ಆಗಳೂ ನನಗೊಂದು ಆಶ್ಚರ್ಯ ಕಾದಿತ್ತು. ನಾವಿಬ್ಬರೂ ಪ್ರೀತಿಸಿದ ಇದೇ ಮೊದಲ ಬಾರಿಗೆ ಕಾವ್ಯ ಅಷ್ಟು ಬೆಳಿಗ್ಗೆ ಕಾಲ್ ಮಾಡಿದ್ದು. ಯಾಕೆಂದರೆ ಏಳರಿಂದ ಓಂಭತ್ತು ಗಂಟೆ ಅವಳ ಕಂಪ್ಯೂಟರ್ ಕ್ಲಾಸ್ ಸಮಯ. ಆಗೆಲ್ಲಾ ಕಾವ್ಯ ಯಾರಿಗೂ ಕಾಲ್ ಮಾಡೋದಿಲ್ಲ. ಆದರೆ ಅಂದು ಮಾತ್ರ ಅದು ಕಾವ್ಯಳದ್ದೇ ಕಾಲ್!<br />ಎದ್ದವನೇ ಫೋನ್ ಎತ್ತಿದೆ. ಗುಡ್ಮಾನರ್ಿಂಗ್ ಅಂದವಳೇ ಮಾತಿಗಿಳಿದಳು ಕಾವ್ಯ. ಏನಮ್ಮಾ ಇವತ್ತು ಕ್ಲಾಸ್ ಇಲ್ವಾ? ಅಂತ ಕೇಳಿದೆ. ಇವತ್ತು ನಾನು ಕ್ಲಾಸ್ ಮತ್ತು ಕೆಲಸಕ್ಕೆ ರಜೆ. ಗುರುವಾರ ನನ್ನ ಕಸೀನ್ ಮದುವೆ ಇದೆ, ಅದಕ್ಕೆ ಸೀರೆ ಖರೀದಿಸಲಿಕ್ಕೆ ಇದೆ ಅಂದಳು. ಗುರುವಾರ ಕಸೀನ್ ಮದುವೆ ಇದೆ ಎನ್ನುವುದನ್ನು ಈ ಮೊದಲೇ ನನಗೆ ತಿಳಿಸಿದ್ದ ಕಾರಣ ನಾನೂ ಆಗಿರಬಹುದು ಅಂದುಕೊಂಡೆ. ಸೀರೆ ಖರೀದಿಗೆ ನಾನೂ ಬರ್ತೀನಿ ಅಂದೆ. ಆಗ ಅವಳು, ಬೇಡ....ನೀವು ಮಧ್ಯಾಹ್ನ 1.30ಕ್ಕೆ ಹಾಸ್ಟೆಲ್ ಹತ್ತಿರ ಬನ್ನಿ ಸಿಗ್ತೀನಿ ಅಂದಳು. ಆಗಲೀ ಅಂದವನೇ ಯಾವ ಬಣ್ಣದ ಸೀರೆ ತೆಗಿತೀಯಾ ಅಂತ ಕೇಳಿದೆ. ಆಗ ಅವಳು ಕೊಟ್ಟ ಉತ್ತರ ನಿಜಕ್ಕೂ ನನಗೆ ಮತ್ತೊಂದು ಆಘಾತ ತಂದಿತ್ತು...! ಬಿಳಿ ಬಣ್ಣದ ಸೀರೆ ಅಂತ ಹೇಳಿದ್ದ ಪ್ರಮಿಯ ಉತ್ತರ ಕೇಳಿ ನನಗೆ ದಂಗು ಬಡಿದಿತ್ತು. ಬೇಡಮ್ಮಾ ಬಿಳಿ ಬಣ್ಣದ ಸೀರೆ ಒಳ್ಳೆಯದಲ್ಲ, ಬೇರೆ ತೆಗಿ ಅಂದೆ. ಓಕೆ ಆಯ್ತು, ಬೇರ ತೆಗೀತೀನಿ, ನಿಮ್ಮ ಇಷ್ಟಕ್ಕೆ ಯಾವತ್ತೂ ವಿರುದ್ದವಾಗಿ ಹೋಗೋಲ್ಲ ಅಂದಳು. ಎಲ್ಲದಕ್ಕೂ ಆಯಿತು ಅಂದ ನಾನು ಮಧ್ಯಾಹ್ನ ಸಿಗೋದಾಗಿ ಹೇಳಿದೆ. <br />ಹೀಗೆ ಅಂದಿನ ನನ್ನೆಲ್ಲಾ ನಿತ್ಯ ಕರ್ಮಗಳನ್ನು ಮುಗಿಸಿ 12 ಗಂಟೆಗೆ ಮನೆಯಿಂದ ಹೊರಟೆ. ಸುಮಾರು ಒಂದು ಗಂಟೆಯ ಹೊತ್ತಿಗೆಲ್ಲಾ ಕಾವ್ಯಾಳ ಹಾಸ್ಟೆಲ್ ತಲುಪಿದ್ದೆ. ತಲುಪಿದವನೇ ಅವಳಿಗೊಂದು ಕಾಲ್ ಕೊಟ್ಟೆ. ಆದರೆ ಕಾವ್ಯಾಳ ನಂಬರ್ ಸ್ವಿಚ್ ಆಫ್ ಆಗಿತ್ತು. ಎಲ್ಲೋ ಬ್ಯಾಟರಿ ಚಾಜರ್್ ಖಾಲಿಯಾಗರಬೇಕು ಅಂದುಕೊಂಡು ಸರಿಸುಮಾರು ಒಂದು ಘಂಟೆ ಅಲ್ಲೇ ಕಾದೆ. ಆದರೂ ಕಾವ್ಯ ಕಾಣಿಸಲಿಲ್ಲ. ಮತ್ತೆ ಕಾಲ್ ಮಾಡಿದಾಗಳೂ ಫೋನ್ ಸ್ವಿಚ್ ಆಫ್ ಆಗಿತ್ತು. ಆ ವೇಳೆಗಾಗಲೇ ಒಂದಷ್ಟು ಆತಂಕ ನನ್ನಲ್ಲಿ ಮನೆ ಮಾಡಿತ್ತು. ಯಾಕೆಂದರೆ ಅಲ್ಲಿಯವರೆಗೆ ಕಾವ್ಯ ಬರ ಹೇಳಿ ಕಾಯಿಸಿದವಲಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡವಳೂ ಅಲ್ಲ. ಹಾಗಾಗಿ 2.30ರ ವೇಳೆಗೆ ನೇರವಾಗಿ ಅವಳ ಹಾಸ್ಟೆಲ್ಗೆ ಹೋಗಿ ವಾರ್ಡನ್ ಬಳಿ ವಿಚಾರಿಸಿದೆ. ಆದರೆ ವಾರ್ಡನ್ ಕೊಟ್ಟ ಉತ್ತರ ನನ್ನನ್ನು ಇನ್ನಷ್ಟು ಆತಂಕಿತನನ್ನಾಗಿ ಮಾಡಿತ್ತು. ಬೆಳಿಗ್ಗೆ ಹೋದ ಕಾವ್ಯ ಇನ್ನೂ ಹಾಸ್ಟೆಲ್ಗೆ ಬಂದಿಲ್ಲ ಅಂದಿದ್ದರು ಅವರು. ಅಲ್ಲಿಂದ ಹೊರಟವನೇ ಕಾವ್ಯಳ ಎಲ್ಲಾ ಗೆಳೆತಿಯರಿಗೆ ಫೋನ್ ಮಾಡಿದೆ. ಆದರೆ ಯಾರಿಂದಲೂ ಇವಳ ಬಗ್ಗೆ ಸಮರ್ಪಕ ಉತ್ತರ ಮಾತ್ರ ದೊರೆಯಲಿಲ್ಲ. ಕಾವ್ಯ ಕೆಲಸ ಮಾಡುವಲ್ಲಿಗೆ ಹೋಗೋಣವೆಂದರೆ, ನಾನು ಕೆಲಸಕ್ಕೆ ಹೋಗೋದಿಲ್ಲ ಇವತ್ತು ರಜೆ ಅಂತ ಕಾವ್ಯ ಬೆಳಿಗ್ಗೆ ಫೋನ್ ಮಾಡಿದಾಗ ಹೇಳಿದ್ದಳು. ಹಾಗಾಗಿ ಮತ್ತೆ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಸುಮ್ಮನಾದೆ. ಹೀಗೆ ಸಂಜೆ ಆರರವರೆಗೂ ಇವಳಿಗಾಗಿ ಇಡೀ ಮಂಗಳೂರು ಸುತ್ತಿದ್ದೆ. ಆದರೆ ಕಾವ್ಯ ಮಾತ್ರ ಎಲ್ಲೂ ಸಿಗಲೇ ಇಲ್ಲ. ಸಂಜೆಯ ಹೊತ್ತಿಗಾಗಲೇ ಕಾವ್ಯ ಮೊಬೈಲ್ಗೆ ನೂರಕ್ಕೂ ಹೆಚ್ಚು ಕಾಲ್ ಮಾಡಿದ್ದೆ. ಆದರೆ ಉತ್ತರ ಮಾತ್ರ ಸ್ವಿಚ್ ಆಫ್. ಹುಡುಕಿ ಹುಡುಕಿ ಸುಸ್ತಾಗಿ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಪತ್ರಿಕೆಯ ಕೆಲಸಕ್ಕೆ ಹೋದೆ. ಇಲ್ಲೂ ಅಷ್ಟೇ, ಒಂಚೂರು ಕೆಲಸ ಮಾಡುವ ಮನಸ್ಸು ನನಗಿರಲಿಲ್ಲ. ರಾತ್ರಿ ಎಂಟು ಗಂಟೆಗೆ ಕಾವ್ಯ ರೂಮ್ಮೇಟ್ಗೆ ಕರೆ ಮಾಡಿದಾಗಲೂ ಅವಳು ಹಾಸ್ಟೆಲ್ಗೆ ಬಂದಿರಲಿಲ್ಲ. ಅಂದು ಹತ್ತು ಗಂಟೆಗೆಲ್ಲಾ ನನ್ನ ಅರ್ಧರ್ಧ ಕೆಲಸ ಮುಗಿಸಿ ಮನೆಗೆ ತೆರಳಿದ್ದೆ. ಊಟ ಮಾಡದೆ ಹಾಗೇ ಮಲಗಿದ ನನಗೆ ಕಾವ್ಯ ಎಲ್ಲಿ ಹೋಗಿರಬಹುದು ಎಂಬ ಚಿಂತೆ ಕಾಡುತ್ತಿತ್ತು. ಮಲಗಿದ್ದರೂ ನಿದ್ರೆ ಬಂದಿರಲಿಲ್ಲ. ಹೇಗೋ ಸೋಮವಾರ ಕಳೆದು ಮಂಗಳವಾರದ ಸೂರ್ಯ ಬಾನಿಗೆ ಬಂದಿದ್ದ. ಬೆಳಿಗ್ಗೆ ಎದ್ದವನೇ ಮತ್ತೆ ಕಾವ್ಯಳ ಮೊಬೈಲ್ಗೆ ಕಾಲ್ ಮಾಡಿದ್ದೆ. ಆಗಲೂ ಸ್ವಿಚ್ ಆಫ್. ಮತ್ತೆ ಅಲ್ಲಿಂದ ಓಂಭತ್ತು ಗಂಟೆಗೆ ಅವಳ ಕಂಪ್ಯೂಟರ್ ಕ್ಲಾಸ್ ಮತ್ತು ಕೆಲಸ ಮಾಡುವ ಬಟ್ಟೆ ಅಂಗಡಿಗೆ ಹೋದಾಗಲೂ ಕಾವ್ಯ ಸಿಗಲಿಲ್ಲ. ಹೀಗೇ ಹುಡುಕಾಟ ನಡೆಸಿ ಸಮಯ ಮಧ್ಯಾಹ್ನ 12 ದಾಟಿತ್ತು. ಆದರೆ ಕಾವ್ಯ ಮಾತ್ರ ಸಿಗಲೇ ಇಲ್ಲ. ಗೆಳತಿಯ ಮೂಲಕ ಕಾವ್ಯಾಳ ಮನೆಗೆ ಕಾಲ್ ಮಾಡಿಸಿ ಕೇಳಿದಾಗಲೂ ಅವಳು ಅಲ್ಲಿಲ್ಲ ಅನ್ನುವ ಉತ್ತರ ಬಂದಿತ್ತು. ಅಂದು ಮಾತ್ರ ನಾನು ಸಂಪೂರ್ಣ ಸೊರಗಿ ಹೋಗಿದ್ದೆ. ಒಂದು ದಿನವೂ ಅವಳ ಬಳಿ ಮಾತನಾಡದೇ ಇರುತ್ತಿರದ ನಾನು ಅಂದು ನಿಸ್ಸಾಯಕನಾಗಿ ಹೋದೆ, 4 ಗಂಟೆಗಲ್ಲಾ ನನ್ನ ಪತ್ರಿಕಾ ಕಛೇರಿಗೆ ಹೋಗಿ ಒಬ್ಬಂಟಿಯಾಗಿ ಒಂದು ಕೋಣೆಯಲ್ಲಿ ಟೇಬಲ್ಗೆ ತಲೆಯಿಟ್ಟು ಮಲಗಿದೆ. ಅವಳ ಯೋಚನೆಯಲ್ಲೇ ಒಂದು ಗಂಟೆ ಕಳೆದು ಹೋಗಿತ್ತು. ಮತ್ತೆ ಐದು ಘಂಟೆಗೆ ಕಾವ್ಯಾಳ ಮೊಬೈಲ್ಗೆ ಕಾಲ್ ಮಾಡೋಣ ಅಂದುಕೊಂಡು ಅವಳ ನಂಬರ್ ಡಯಲ್ ಮಾಡಿದೆ. ಏನಶ್ಚರ್ಯವೋ, ಅವಳ ಮೊಬೈಲ್ ರಿಂಗಣಿಸಿತು. ಅಂದು ಹೋದ ಜೀವ ಮತ್ತೆ ಬಂದಂತಾಗಿತ್ತು. ಕಾವ್ಯಾ ಬೇಗ ಫೋನ್ ಎತ್ತಮ್ಮ ಅಂದುಕೊಳ್ಳುತ್ತಿರುವಾಗಲೇ ಗಂಡಸಿನ ಧ್ವನಿಯೊಂದು ಫೋನ್ ಎತ್ತಿಕೊಂಡಿತು. ಒಮ್ಮೆಲೇ ಶಾಕ್ ಆಯಿತಾದರೂ ಸಾವರಿಸಿಕೊಂಡು ಹಲೋ ಅಂದಾಗ, ಅಘಾತಕಾರಿ ವಿಚಾರವೊಂದು ನನ್ನ ಪ್ರಜ್ಞೆ ತಪ್ಪಿಸಿದಂತಾಯಿತು. ಅಲ್ಲಿಂದ ಮಾತನಾಡಿದ ವ್ಯಕ್ತಿ ಪೊಲೀಸರಾಗಿದ್ದರು...! ಈ ಹುಡುಗಿ ನಿಮಗೆ ಗೊತ್ತಾ? ಇವಳ ಮನೆ ಎಲ್ಲಿ? ಹೆಸರೇನು? ಅಂತ ಕೇಳಿದರು. ಅದೆಲ್ಲಾ ಗೊತ್ತು ಸಾರ್, ಅವಳಿಗೆ ಏನಾಯ್ತು ಅಂತ ಕೇಳಿದೆ. ಆಗಲೇ ಗೊತ್ತಾಗಿದ್ದು, ಕಾವ್ಯ ತನ್ನ ಇಹಲೋಕದ ಪಯಣ ಮುಗಿಸಿದ್ದಾಳೆ ಅನ್ನುವುದು....!<br />ಇದರ ಜೊತೆಗೆ ನನ್ನೊಂದಿಗಿನ ಪ್ರೀತಿಗೂ ಕಾವ್ಯ ಶಾಶ್ವತ ಇತೀಶ್ರೀ ಹಾಡಿದ್ದಳು. ನಗರದ ಪಾಕರ್್ ಒಂದರಲ್ಲಿ ನಾನು ತೆಗೆಸಿಕೊಟ್ಟಿದ್ದ ಚೂಡಿದಾರದ ಶಾಲಿನಿಂದ ನೇಣು ಮುಗಿದು ಕಾವ್ಯ ತನ್ನ ಪಯಣ ಮುಗಿಸಿದ್ದಳು. ಎಲ್ಲವನ್ನೂ ಕೇಳಿದ ನನಗೆ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ. ಕಾರಣ ಹೇಳದೆ ಕಾವ್ಯ ದೂರವಾಗಿದ್ದಳು.<br />ಕಾವ್ಯ ದೂರವಾಗುವ ಮುನ್ನ ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಪ್ರೀತಿಗೆ ಅಂತಿಮ ಸ್ಪರ್ಶ ನೀಡುವಂತೆ ನನ್ನ ಕೈಯಿಂದಲೇ ಹಣೆಗೆ ಕುಂಕುಮ ಇರಿಸಿದ್ದಳು, ಬೆಳಿಗ್ಗಿನ ಉಪಹಾರವನ್ನೂ ನನ್ನ ಬಾಯಿಗಿಟ್ಟು ಹಂಚಿಕೊಂಡು ತಿಂದಿದ್ದಳು. ತನ್ನ ವರ್ತನೆಯಲ್ಲೇ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಡೆಯ ಕ್ಷಣಗಳನ್ನು ನನ್ನ ಜೊತೆ ಕಳೆದಿದ್ದಳು ಕಾವ್ಯ. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡವಳಂತೆ ನನ್ನ ಎದುರಿಗೆ ನಿಂತಿದ್ದಳು. ಆದರೆ ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ. ಸೀರೆ ಖರೀದಿಸುವಾಗಲೂ ಬಿಳಿ ಸೀರೆಯನ್ನೇ ಆಯ್ದುಕೊಂಡಿದ್ದ ಕಾವ್ಯಾ, ಆಗಲೇ ತನ್ನ ಬದುಕಿನ ಪುಟಗಳಿಗೆ ಇತೀಶ್ರೀ ಹಾಡುವ ನಿಧರ್ಾರಕ್ಕೆ ಬಂದಿದ್ದಳು ಎನ್ನುವುದು ನಂತರ ನನಗೆ ಸ್ಪಷ್ಟವಾಗಿತ್ತು. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಕಾವ್ಯ. ಆದರೆ ಈಗ ಕಾವ್ಯಾ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲಿ ಕಾವ್ಯಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......<br />ಕಾವ್ಯಾಳ ಸಾವಿಗೆ ಕಾರಣ ಹುಡುಕಿ ಹೊರಟಾಗ ಸಾಕಷ್ಟು ವಿಚಾರಗಳು ಚಚರ್ೆಯಾದವು. ಮರುದಿನ ಕಸೀನ್ ಮದುವೆಯಿದ್ದ ಕಾರಣ ಆಕೆಗೆ ಅದೊಂದು ಚಿನ್ನದ ಸರದ ಅವಶ್ಯಕತೆಯಿತ್ತು. ಹಾಗಾಗಿ ಅದಿಲ್ಲದೆ ಮನೆಗೆ ಹೋದರೆ ಮನೆಯವರು ಬೈಯುತ್ತಾರೆ ಎಂದು ಕಾವ್ಯಾ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸರ ಕಾವ್ಯಾಳ ಬದುಕು ಕಿತ್ತುಕೊಂಡಿತು........ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳ ಸಾವಿನ ಸುತ್ತ ಗಿರಕಿ ಹೊಡೆದಿವೆ. ಪೊಲೀಸರು ಅಸ್ವಾಭಾವಿಕ ಮರಣ ಅಂತ ಹೇಳಿ ಆತ್ಮಹತ್ಯೆ ಪ್ರಕರಣ ದಾಖಲಿಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ನನ್ನಿಂದ 60ಕಿ.ಮೀ ದೂರದ ಮಣ್ಣಿನಲ್ಲಿ ನಾನು ಪ್ರೀತಿಸುತ್ತಿದ್ದ ಜೀವವೊಂದು ಬೂದಿಯಾಗಿ ಹೋಗಿದೆ. ಕಾವ್ಯ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇವಳನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ಕಾವ್ಯ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ............. <br />ಈ ಕಥೆ ಕಾಲ್ಪನಿಕವಲ್ಲ. ಕೆಲ ತಿಂಗಳ ಹಿಂದಷ್ಟೇ ನನ್ನದೇ ಜೀವನದಲ್ಲಿ ನಡೆದ ನೈಜ ಘಟನೆ. ಆದರೆ ಕೆಲವೊಂದು ಕಾರಣಗಳಿಂದ ಇಲ್ಲಿರುವ ಹೆಸರುಗಳನ್ನು ಬದಲಾಯಿಸಿದ್ದೇನೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಯೆಂಬ ಬಹುದೊಡ್ಡ ನಿಧರ್ಾರ ತಳೆಯುವ ಅದೇ ರೀತಿ ಮಕ್ಕಳನ್ನು ಹಾಸ್ಟೆಲ್ನಲ್ಲಿಟ್ಟು ಬೆಳೆಸುವ ಪ್ರತಿಯೊಬ್ಬರಿಗೂ ಈ ಘಟನೆ ಪಾಠವಾಗಲಿ ಎಂಬ ಆಶಯದಿಂದ ಇದನ್ನು ಬರೆಯುತಿದ್ದೇನೆ. <br /><br />ಇಂತೀ ನಿಮ್ಮವ......<br />ಧ್ವನಿ....... dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-3047808434703282402013-04-01T05:27:00.003-07:002013-04-01T05:27:28.133-07:00<div dir="ltr" style="text-align: left;" trbidi="on">
<h2>
<span style="color: yellow;"><b>ಹಾಸ್ಟೆಲ್ ಯುವತಿಯರ ಸಾವಿನಲ್ಲಿ ಪೋಷಕರೂ ಪಾಲುದಾರರು!</b></span></h2>
ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಹೊರ ದೇಶ, ಹೊರ ರಾಜ್ಯ ಸೇರಿದಂತೆ ಸಮೀಪದ ಅದೆಷ್ಟೋ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುವ ಹೆಣ್ಮಕ್ಕಳ ದೊಡ್ಡ ದಂಡೇ ಇದೆ. ಆದರೆ ಇಂಥ ಒಂದು ಒಳ್ಳೆಯ ಉದ್ದೇಶವಿಟ್ಟು ಕೊಂಡು ಬರುವ ಈ ವರ್ಗ ಕೆಲವೊಮ್ಮೆ ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿವೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳು ಹತ್ತರಲ್ಲಿ ಒಂದು ಎಂಬಂತೆ ಮುಚ್ಚಿಹೋಗುತ್ತಿರುವುದು ವಿಪಯರ್ಾಸ. ಎಲ್ಲಿಂದಲೋ ಇಲ್ಲಿ ಬಂದು ಬದುಕಿಗೆ ಅಂತ್ಯ ಹಾಡುವವರ ಜೀವನದಲ್ಲಿ ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಗಳು ಕಾರಣವಾಗಿ ಕಂಡರೂ ಇಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳೇ ಎಲ್ಲವಕ್ಕೂ ಮೂಲ ಕಾರಣ ಎಂದರೆ ತಪ್ಪಿಲ್ಲ. <br />ಮನೆ ಬಿಟ್ಟು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯು ವವರು, ಇಲ್ಲಿನ ಸಾಫ್ಟ್ವೇರ್ ಸಂಸ್ಥೆ, ಮಾಲ್ ಇಲ್ಲವೇ ಯಾವು ದಾದರೂ ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ಗಲರ್್ಗಳಾಗಿ ದುಡಿ ಯುವವರ ವಾಸಸ್ಥಾನ ನಾಯಿಕೊಡೆಗಳಂತೆ ತಲೆಯೆತ್ತುವ ಪಿಜಿ ಸೆಂಟರ್ ಮತ್ತು ಹಾಸ್ಟೆಲ್ಗಳು. ಮೇಲ್ನೋಟಕ್ಕೆ ಇವೆಲ್ಲವೂ ಸುರಕ್ಷಿತ ತಾಣವಾಗಿ ಕಂಡರೂ ಇದರ ಒಳಗಿನ ಕಾಣದ ಲೋಕ ಮಾತ್ರ ತೀರಾ ಅಸಹ್ಯ ಹುಟ್ಟಿಸುತ್ತದೆ.<br />ಮಂಗಳೂರಿಗೆ ಬರುವ ಮುನ್ನ ತಮ್ಮ ತಮ್ಮ ಊರಿನಲ್ಲಿ ಸುಸಂಸ್ಕೃತರು, ಉತ್ತಮರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಯುವತಿಯರು ಇಲ್ಲಿ ಬಂದ ಒಂದೇ ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ವಿದ್ಯಮಾನಗಳು ನಡೆದಿವೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಷರಾ ಬರೆದು ಫೈಲ್ ಕ್ಲೋಸ್ ಮಾಡಿದ್ದೂ ಆಗಿದೆ. ಆದರೆ ಯಾರೊಬ್ಬರೂ ಈ ಎಲ್ಲಾ ಆತ್ಮಹತ್ಯೆಗಳ ಬೆನ್ನು ಬಿದ್ದಿಲ್ಲ ಎನ್ನುವುದು ವಿಪಯರ್ಾಸ.<br />ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನವರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಶಿಕ್ಷಣ ಇಲ್ಲವೇ ಕೆಲಸ ಮಾಡಿ ಕೊಂಡಿದ್ದವರು. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ನೂರಾರು ಪಿಜಿಗಳು ಹತ್ತಾರು ಹಾಸ್ಟೆಲ್ಗಳಿವೆ. ಆದರೆ ಈ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ಗಳು ಅಧಿಕೃತ ಅಲ್ಲ ಎನ್ನುವುದು ಇಲ್ಲಿರುವ ಮತ್ತೊಂದು ಆಘಾತಕಾರಿ ಸಂಗತಿ! ಅದರಲ್ಲೂ ಹೆಚ್ಚಿನ ಪಿಜಿ ಸೆಂಟರ್ಗಳು ವಾಸದ ಮನೆಯ ಉದ್ದೇಶದಿಂದ ನಿಮರ್ಿಸಿ ಕೊಂಡವಾಗಿದ್ದು, ಇವಕ್ಕೆಲ್ಲಾ ಪಾಲಿಕೆ ಪಿಜಿ ಸೆಂಟರ್ ನಡೆಸಲು ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದರೂ ಒಂದಷ್ಟು ಕಾಲೇಜು ಹುಡುಗಿಯರನ್ನು ಇಲ್ಲವೇ ಕೆಲಸಕ್ಕೆ ಹೋಗುವ ಯುವತಿಯರನ್ನು ಒಟ್ಟು ಸೇರಿಸಿ ಪಿಜಿ ಹೆಸರಿನಲ್ಲಿ ಹಣ ಮಾಡುವವರ ದೊಡ್ಡ ದಂಡೇ ಇದೆ. ಈ ಪಿಜಿಗಳಲ್ಲಿ ಉಳಿದುಕೊಳ್ಳುವ ಹೆಣ್ಣುಮಕ್ಕಳು ರಾತ್ರಿ ಎಷ್ಟು ಗಂಟೆಗೆ ಬಂದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಉಳಿಸಿಕೊಂಡಿದ್ದ ಲೇಡಿಸ್ ಹಾಸ್ಟೆಲ್ಗಳು ಕೂಡ ಅವ್ಯವಸ್ಥೆಯ ಅಡ್ಡೆಯಾಗಿ ಬದಲಾಗುತ್ತಿದೆ. ಬರೋಬ್ಬರಿ 300 ಜನರಿಗೆ ಒಬ್ಬಳೇ ಒಬ್ಬ ವಾರ್ಡನ್ ಇರುವ ಹಾಸ್ಟೆಲ್ಗಳೂ ಇವೆ. ಒಂದು ವೇಳೆ ಇಲ್ಲಿನ ವಾರ್ಡನ್ ರಜೆ ಹಾಕಿ ಊರಿಗೆ ಹೋದರೆ ಕೇಳುವವರೇ ಇಲ್ಲ ಎಂಬಂಥ ಪರಿಸ್ಥಿತಿ. ಇನ್ನು ಇಲ್ಲಿನ ಯುವತಿಯರ ಹಾಜರಾತಿ, ಸಂದರ್ಶಕರ ದಾಖಲಾತಿ ಎಲ್ಲವೂ ಅಪ್ಡೇಟ್ ಆಗುವುದೇ ಇಲ್ಲ. ಒಬ್ಬ ಯುವತಿಗೆ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಶುಲ್ಕ ಪಡೆಯುವ ಈ ಖಾಸಗಿ ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎನ್ನುವುದು ಇಲ್ಲಿನ ದುರಂತ ಬದುಕು ಅನುಭವಿಸಿ ಬಂದವರ ಮಾತು. ಊರು ಬಿಟ್ಟು ಬಂದ ತಪ್ಪಿಗೆ ಅನಿವಾರ್ಯವಾಗಿ ಇಲ್ಲಿನ ನರಕಸದೃಶ ಬದುಕಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ. <br />ಯುವತಿಯರು ದಾರಿ ತಪ್ಪಲು ಹಾಸ್ಟೆಲ್ ಮತ್ತು ಪಿಜಿಗಳ ಜೊತೆಗೆ ಅವರು ಕೆಲಸ ಮಾಡುವ ಕೇಂದ್ರಗಳು ಕೂಡ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದರಲ್ಲೂ ನಗರದ ಬಹುತೇಕ ಬಟ್ಟೆ ಅಂಗಡಿಗಳು, ನಗರದ ಪ್ರಮುಖ ಮಾಲ್ಗಳಲ್ಲಿನ ಖಾಸಗಿ ಸಂಸ್ಥೆಗಳು ಯುವತಿಯರನ್ನು ರಾತ್ರಿಯವರೆಗೂ ದುಡಿಸಿಕೊಳ್ಳುತ್ತದೆ. ಈ ಮಧ್ಯೆ ಈ ಯುವತಿಯರ ಪ್ರತೀದಿನದ ಚಲನವಲನಗಳ ಮೇಲೆ ಕಣ್ಣಿಡುವ ಪೋಲಿಗಳ ವರ್ಗದ ಕಾಟ ಬೇರೆ. ಕೆಲವೊಂದು ಯುವತಿಯರು ಇವುಗಳಿಗೆ ಕೇರ್ ಅನ್ನದೇ ತಮ್ಮ ಸೋಕಾಲ್ಡ್ `ಗೂಡು ಸೇರಿದರೆ, ಇನ್ನು ಕೆಲವರು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಈ ರೀತಿ ದಾರಿ ತಪ್ಪಿ ಆ ದಿನ ಬೇರೆಲ್ಲೋ ರಾತ್ರಿ ಕಳೆದರೂ ಈ ಬಗ್ಗೆ ವಿಚಾರಿಸುವ ಗೋಜಿಗೆ ಯಾವೊಂದು ಹಾಸ್ಟೆಲ್ ಆಡಳಿತವೂ ಕೈ ಹಾಕುವುದಿಲ್ಲ. ಅಷ್ಟೇ ಯಾಕೆ? ಬಹುತೇಕ ಹಾಸ್ಟೆಲ್-ಪಿಜಿಗಳ ಆಡಳಿತದವರಲ್ಲಿ ಉಳಿದುಕೊಳ್ಳುವ ಯುವತಿಯರ ಮನೆ ವಿಳಾಸ ಇಲ್ಲವೇ ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ದಿನನಿತ್ಯ ಬರುವವರು ಒಂದು ದಿನ ಬಾರದಿದ್ದರೂ ಕೇಳುವ ಅಗತ್ಯತೆ ಪಿಜಿ ಸೆಂಟರ್ ಇಲ್ಲವೇ ಹಾಸ್ಟೆಲ್ ವಾರ್ಡನ್ಗಳಿಗೆ ಇಲ್ಲ ಎನ್ನುವುದೇ ದುರಂತ. <br />ಈ ರೀತಿ ದಾರಿ ತಪ್ಪುವ ಯುವತಿಯರು ಕೆಲ ತಿಂಗಳು ತಮಗೇ ಗೊತ್ತಿಲ್ಲದಂತೆ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಜ್ಞಾನೋದಯವಾಗುವುದು ಮಾತ್ರ ಹಲವು ತಿಂಗಳುಗಳೇ ಕಳೆದ ನಂತರ. ಹೀಗಾಗಿ ಬದುಕಿನ ಅಂತಿಮ ಕ್ಷಣ ಆತ್ಮಹತ್ಯೆಯ ರೂಪದಲ್ಲಿ ದುರಂತ ಅಂತ್ಯ ಕಾಣುತ್ತದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಎಲ್ಲೋ ಒಂದಿಬ್ಬರು ಸಾವಿಗೆ ಕಾರಣ ಕೊಟ್ಟುಹೋದರೆ, ನೂರರಲ್ಲಿ ತೊಂಬತ್ತು ಭಾಗದಷ್ಟು ಯುವತಿಯರು ಕಾರಣವನ್ನೇ ತಿಳಿಸದೆ ಇಹಲೋಕ ತ್ಯಜಿಸಿರುತ್ತಾರೆ. ಈ ಸಾವಿನ ದುಃಖ ತಡೆಯಲಾಗದೆ ಒಂದೇ ಸಮನೆ ಬೊಬ್ಬಿಡುವ ಈ ಹೆಣ್ಮಕ್ಕಳ ಕುಟುಂಬ ವರ್ಗವೂ ಸಾವಿನಲ್ಲಿ ಪಾಲುದಾರರು ಎಂಬುದು ನೆನಪಿರಲಿ. ವರ್ಷಗಟ್ಟಳೆ ಒಂಟಿಹೆಣ್ಣನ್ನು ಎಲ್ಲೋ ದೂರದಲ್ಲಿಟ್ಟು ಬೆಳೆಸಿದರೂ ಒಂದೇ ಒಂದು ಬಾರಿ ನೋಡಿಕೊಂಡು ಹೋಗುವ ಕನಿಷ್ಟ ಕಾಳಜಿಯೂ ಅವರಿಗಿರುವುದಿಲ್ಲ. ಹೀಗಾಗಿ ನಮಗೆ ಕೇಳುವವರೇ ಇಲ್ಲ ಅಂದುಕೊಂಡು ತಮ್ಮದೇ ಆದ ಸ್ವಾತಂತ್ರ್ಯ ಜೀವನ ನಡೆಸಿಕೊಂಡು ಯುವತಿಯರು ದಾರಿ ತಪ್ಪುವುದು ಸಾಮಾನ್ಯ ವಾಗಿದೆ. ಇಂದಿಗೂ ಬದುಕು ಕಳೆದುಕೊಳ್ಳುವ ಹೆಚ್ಚಿನ ಯುವತಿಯರು ಮುಗ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಮುಗ್ಧತೆ ದಾರಿ ತಪ್ಪಿದಾಗ ಮಾತ್ರ ಸಾವಿನಲ್ಲಿ ಅಂತ್ಯ ಕಾಣುತ್ತದೆ. ಈ ವೇಳೆ ಸಾವಿಗೆ ಕಾರಣವಾದ ಕಾಣದ ಕೈಗಳು ವಿಜೃಂಭಿಸಿ ಮರೆಯಾಗುತ್ತದೆ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದರೆ ತಪ್ಪಿಲ್ಲ.<br />ಧ್ವ </div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-70015412202825196912013-03-24T23:54:00.001-07:002013-08-07T23:37:22.636-07:00ಕಾಣದ ಕಡಲಿಗೆ ಹಂಬಲಿಸಿದೆ ಮನ.... ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!<div dir="ltr" style="text-align: left;" trbidi="on">
<h2 style="text-align: left;">
<b><span style="color: red;">ಕಾಣದ ಕಡಲಿಗೆ ಹಂಬಲಿಸಿದೆ ಮನ....</span></b></h2>
<h2 style="text-align: left;">
<b><span style="color: red;">ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!</span></b></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgLAJjRWpw_nfThAzhmSasT_Tybthdrvo33-6QQHl4_2GfmPejXRWOzJq4oZXzL2eV-oVdPwCTuHDBfTAjnvUKH1OBHBDLu3u3W8OyhEyfaCiR0FzIWfEUY3BFIZ-VXLX7c7quVlP61w18/s1600/bahahga.jpg" imageanchor="1" style="margin-left: 1em; margin-right: 1em;"><img border="0" height="110" src="https://blogger.googleusercontent.com/img/b/R29vZ2xl/AVvXsEgLAJjRWpw_nfThAzhmSasT_Tybthdrvo33-6QQHl4_2GfmPejXRWOzJq4oZXzL2eV-oVdPwCTuHDBfTAjnvUKH1OBHBDLu3u3W8OyhEyfaCiR0FzIWfEUY3BFIZ-VXLX7c7quVlP61w18/s400/bahahga.jpg" width="400" /></a></div>
<h2 style="text-align: left;">
<b><span style="color: red;"> </span></b></h2>
<div style="text-align: left;">
ನವಿರಾದ ಬದುಕಿನ ಸುಶ್ರಾವ್ಯ ಹೆಜ್ಜೆ ಗುರುತು ಕಳೆದು ಹೋಗಿದೆ. ಆಕಾಶದಲ್ಲಿ ಚಂದ್ರನನ್ನು ಕಂಡು ಕಣ್ಣ ಬಿಂಬಗಳನ್ನು ಒಂದಾಗಿಸಿದ ಕ್ಷಣ ಎದೆಯೊಳಗೆ ಹೊತ್ತು ಗೊತ್ತಿಲ್ಲದೇ ಕಾಡುತ್ತಿದೆ. ದೇವಸ್ಥಾನದ ಮೆಟ್ಟಿಲ ತುದಿಯಲ್ಲಿ ಒಟ್ಟಾಗಿ ಇಟ್ಟ ಹೆಜ್ಜೆಗಳನ್ನು ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಹಸಿರು ಪರಿಸರದ ಮಧ್ಯೆ ಗರಿ ಬಿಚ್ಚಿ ಕಳೆದ ಪ್ರತೀ ಕ್ಷಣದ ನೆನಪುಗಳೂ ಒತ್ತರಿಸಿ ಬರುತ್ತಿವೆ. ಆದರೇನೂ ಮಾಡುವುದು ...ದೂರವಾಗಿದ್ದಾಳೆ ಅವಳು....!<br />
ವರ್ಷಗಳಿಂದ ಸುರಿಯದ ಕಣ್ಣೀರು ಇಂದು ಪ್ರತೀ ಕ್ಷಣವೂ ಕಟ್ಟೆಯೊಡೆದು ಧುಮ್ಮಿಕ್ಕುತ್ತಿದೆ. ಎಲ್ಲವೂ ನೆನಪುಗಳ ಮೆರವಣಿಗೆಯಲ್ಲಿ ಕಳೆದುಕೊಂಡ ಆ ದಿನಗಳ ಸಣ್ಣದೊಂದು ಕುರುಹುಗಳಷ್ಟೇ....<br />
ಒಂಟಿ ಜೀವದ ಒಬ್ಬಂಟಿ ಪಯಣದಲ್ಲಿ ಜಂಟಿಯಾದವಳು ಕಳೆದು ಹೋಗಿದ್ದಾಳೆ. ಆದರೆ ಅವಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲಾಗುತ್ತಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕಣ್ಣಿಗೆ ಕಾಣದ ಮನಸ್ಸು ಕೂಡ ಕಣ್ಣೀರು ಸುರಿಸಿದ ಅನುಭವ. ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಯೋ ಎಂಬಂತೆ ಜೀವ ಕಳೆಯೇ ಇಲ್ಲದ ಬದುಕೊಂಡು ನನ್ನನ್ನು ಅಪ್ಪಿಕೊಂಡಿದೆ. ಏನೇ ಆದರೂ ಈಗಿನ ಪ್ರತೀ ಕ್ಷಣ ನನ್ನ ಜೊತೆಯಾಗುತ್ತಿರುವುದು.....ಅಳು........ಅಳು.....ಅಳು........!<br />
ನನಗ್ಯಾರೂ ಇಷ್ಟವಾಗದ ಎಲ್ಲರಿಗೂ ಇಷ್ಟವಾಗುವ ಒಬ್ಬಂಟಿ ಜೀವನ ನನ್ನದು. ಈ ಮದ್ಯೆ ಹೆತ್ತು-ಹೊತ್ತು ಬದುಕಲು ಕಲಿಸಿದ ತಾಯಿಯೆಂದರೆ ನನಗೆ ಪಂಚಪ್ರಾಣ. ಈ ಮಧ್ಯೆ ಹೆತ್ತಮ್ಮನ ಜೊತೆಗೆ ಜೀವನಕ್ಕೆ ಸ್ಫೂತರ್ಿಯಾದ ನನ್ನ ಪ್ರೀಮಾ ಅಕ್ಕ ಅಂದ್ರೆ ಇಷ್ಟ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ನನಗೆ ಅಷ್ಟು ಹತ್ತಿರವಲ್ಲ. ಆದರೆ ಸ್ವಭಾವತಃ ತೀರಾ ಸೆನ್ಸಿಟಿವ್ ಆದ ನನ್ನನ್ನು ಕಂಡರೆ ಎಲ್ಲರಿಗೂ ಇಷ್ಟ. ನನಗೂ ಇವರೆಲ್ಲರೂ ಇಷ್ಟವಾದರೂ ಅಮ್ಮ-ಅಕ್ಕನಷ್ಟು ಹತ್ತಿರವಲ್ಲ. <br />
ನಿಧಾನಗತಿಯ ಬದುಕು, ಸಣ್ಣದೊಂದು ಆಸೆ, ಬಹುದೊಡ್ಡ ಉದ್ದೇಶ, ತೀರಾ ಸೆನ್ಸಿಟಿವ್ ಮನಸ್ಸು, ಈ ಮಧ್ಯೆ ಅರ್ಥ ಮಾಡಿಕೊಳ್ಳುವ ನನ್ನದೇ ಆದ ಜೀವಕ್ಕೆ ಮಾತ್ರ ಕೊರತೆ.. ಹೀಗೆ ಸಾಗುತ್ತಿದ್ದ ಜೀವನದ ಮಧ್ಯೆ ಸಿಕ್ಕವಳೇ ಪ್ರಮೀ. ನಗುವಿನಲ್ಲೇ ಇಷ್ಟವಾದವಳು, ಕಣ್ಣ ನೋಟಕ್ಕೆ ಮನಸ್ಸಿಗೆ ಹತ್ತಿರವಾಗಿದ್ದಳು, ತಡಮಾಡದೇ ಬದುಕು ಕಟ್ಟಿಕೊಳ್ಳುವ ನನ್ನದೊಂದು ಪುಟ್ಟ ಹಾದಿಯಲ್ಲಿ ಅವಳನ್ನು ಜೊತೆಯಾಗಿಸಿದೆ. ಸಿಕ್ಕ ಮೊದಲ ಕ್ಷಣದಲ್ಲೇ ತೀರಾ ಹೆಚ್ಚೇ ಎನಿಸುವಷ್ಟು ಇಷ್ಟವಾಗಿದ್ದಳು. ಬದುಕಿನ ಹಾದಿಯಲ್ಲಿ ಜೀವನದ ಕೊನೆಯವರೆಗೂ ಉಸಿರಾಗಿ ನಿಲ್ಲಲು ಇವಳೇ ಸೂಕ್ತ ಅಂದುಕೊಂಡು ಜೊತೆಯಾಗಿದ್ದೆ. ನನ್ನಷ್ಟೇ ಸೂಕ್ಷ್ಮ, ತೂಕ=ಎತ್ತರ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್..! ಸಿಕ್ಕಾಗಲೆಲ್ಲಾ ಇವಳಿಂದ ಬಯಸಬಹುದಾದ ಇಷ್ಟವಾದ ಗಿಫ್ಟ್ ಮುಖದಲ್ಲಿ ಬೀಳುವ ಗುಳಿ ಕೆನ್ನೆಯ ನಗು ಮಾತ್ರ. ಯಾಕೋ ಗೊತ್ತಿಲ್ಲ ಹುಟ್ಟಿದ 22 ವರ್ಷದಲ್ಲಿ ಅಮ್ಮ- ಅಕ್ಕನ ನಂತರ ಪ್ರಮೀ ತುಂಬಾ ಇಷ್ಟವಾಗಿದ್ದಳು. ಪ್ರೀತಿ ಹೇಳಿಕೊಳ್ಳುವ ಸಣ್ಣದೊಂದು `ಪದ್ದತಿ' ಮುಗಿಸಿ ಒಂದೆರೆಡು ತಿಂಗಳಲ್ಲಿ ನಾವಿಬ್ಬರು ತುಂಬಾನೇ ಹತ್ತಿರವಾಗಿದ್ದೆವು. ಎಲ್ಲಾ ಪ್ರೇಮಿಗಳಂತೆ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ, ವಾರಕ್ಕೆರೆಡು ಬಾರಿ ದೇವಸ್ಥಾನ.... ಹೀಗೆ ತಿರುಗಾಟ ನಮ್ಮಲ್ಲೂ ಇತ್ತು. ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಇಬ್ಬರ ಹೆಸರಿನಲ್ಲೂ ಒಂದು ಕುಂಕುಮಾರ್ಚನೆ ಪರ್ಮನೆಂಟ್ ಎಂಬಂತಾಗಿತ್ತು. ಹೀಗಾಗಿಯೋ ಏನೋ ನಮ್ಮಿಬ್ಬರ ಹೆಸರು, ರಾಶಿ-ನಕ್ಷತ್ರ ಇಲ್ಲಿನ ಅರ್ಚಕರಿಗೆ ಅಪ್ಡೇಟ್ ಆಗಿತ್ತು. ಒಟ್ಟಿನಲ್ಲಿ ನಾವಿಬ್ಬರೂ ಈ ದೇವಸ್ಥಾನದ ಖಾಯಂ ಭಕ್ತರು ಎಂದರೆ ತಪ್ಪಿಲ್ಲ...!<br />
ಪ್ರಮಿಯದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಕೆಲವೊಮ್ಮೆ ಮಕ್ಕಳಂತ ಸ್ವಭಾವ. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಪ್ರಮಿ. ಆದರೆ ಈಗ ಪ್ರಮಿ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲ್ಲಿ ಪ್ರಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......ಎಲ್ಲವೂ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ...<br />
ದೂರವಾಗುವ ಮುನ್ನ ಕೊನೆಯದಾಗಿ ಮಾತಿಗೆ ಸಿಕ್ಕವಳು ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡದಂತೆ ನನ್ನ ಎದುರಿಗೆ ನಿಂತಿದ್ದಳು. ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ..<br />
ಪ್ರಮೀ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪ್ರಮಿಯನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ನಂತರ ಪ್ರಮಿ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............<br />
ಧ್ವನಿ<br />
</div>
</div>
dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-89888136220224317062013-02-01T04:08:00.003-08:002013-02-01T04:08:43.986-08:00<div dir="ltr" style="text-align: left;" trbidi="on">
<h2 style="text-align: left;">
<span style="color: red;"><b>ಹಾಗೇ ಸುಮ್ಮನೆ ಒಮ್ಮೆ `ವಿಶ್ವರೂಪಂ' ನೋಡಿ ಬನ್ನಿ</b></span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiT4IVMM5scf3m7-B-kc2237-DTYyD01cHTpStkFRFUd8hKWz5hPQTQzMfndJznmXENoC7XCT0yWNzbh-jN8GxN2xg5AqncmHfUOHpfIZnKpt6ws7EQM2sOaTQQFb-hUKOsmTiqqsdmBrA/s1600/vishwa.jpg" imageanchor="1" style="margin-left: 1em; margin-right: 1em;"><img border="0" height="284" src="https://blogger.googleusercontent.com/img/b/R29vZ2xl/AVvXsEiT4IVMM5scf3m7-B-kc2237-DTYyD01cHTpStkFRFUd8hKWz5hPQTQzMfndJznmXENoC7XCT0yWNzbh-jN8GxN2xg5AqncmHfUOHpfIZnKpt6ws7EQM2sOaTQQFb-hUKOsmTiqqsdmBrA/s400/vishwa.jpg" width="400" /></a></div>
ತಮಿಳು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡದೆ ತುಂಬಾ ದಿನಗಳೇ ಆದವು. ಇಂದಿನ ಕನ್ನಡ ಸಿನಿಮಾಗಳ ಅಬ್ಬರದ ಮಧ್ಯೆ ಅವುಗಳನ್ನು ನೋಡುವುದರಲ್ಲೇ ಕಳೆದು ಹೋಗಿದ್ದೆ. ಆದರೆ ಇತ್ತೀಚಿಗೆ ನೋಡಿದ `ಎದೆಗಾರಿಕೆ ಬಿಟ್ಟರೆ ಬೇರ್ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. ಹಾಗಂತ ಭಾಷೆ ಬದಲಿಸಿ ಅನ್ಯ ಭಾಷೆಯ ಸಿನಿಮಾ ನೋಡೋಣವೆಂದರೆ ಪತ್ರಿಕಾ ವಿಮಶರ್ೆಗಳೇ ಸಿನಿಮಾ ಮಂದಿರಗಳಿಗೆ ಹೋಗದಂತೆ ತಡೆಯುತ್ತಿದ್ದವು. ಆದರೂ ಇಂದು ಶುಕ್ರವಾರ ಒಂದು ತಮಿಳು ಸಿನಿಮಾ ನೋಡಿಯೇ ಬಿಟ್ಟ. ಈ ಸಿನಿಮಾದ ಬಗ್ಗೆ ನನ್ನೊಳಗಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಣ್ಣದೊಂದು ಪ್ರಯತ್ನ ಇದಾಗಿತ್ತು. ಆ ಸಿನಿಮಾ ಬೇರಾವುದೂ ಅಲ್ಲ. ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿ ನಿಷೇಧದ ಮಧ್ಯೆ ಅಲ್ಲಲ್ಲಿ ಪ್ರದರ್ಶನ ಕಾಣುತ್ತಿರುವ `ವಿಶ್ವರೂಪಂ..!<br />ಪತ್ರಿಕೆಯಲ್ಲಿ ಕೆಲಸ ಮಾಡುವ ಕಾರಣ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಏನದು ವಿಶ್ವರೂಪಂ ಎಂಬ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದೆ. ಅದರಲ್ಲೂ ಈ ಸಿನಿಮಾ ದೇಶದ ಭದ್ರತೆಗೆ ಸವಾಲೊಡ್ಡುತ್ತದೆ ಎಂಬ ವಿವಾದ ಎದ್ದ ಮೇಲಂತೂ ಸಿನಿಮಾದ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸತೊಡಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾತ್ರ ಆಗಲೇ ಇಲ್ಲ. ಆದರೆ ಯಾವಾಗ ನಟನೆಯಲ್ಲೇ ಅತೀ ಹೆಚ್ಚು ಪ್ರಶಸ್ತಿ ಪಡೆದ ನಟ ಕಮಲ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರೋ ಆಗಲೇ ಒಂದು ಹಂತಕ್ಕೆ ಸಿನಿಮಾವೊಂದು ಸೃಷ್ಟಿಸಿದ ನೈಜ ವಿವಾದದ ಬಗ್ಗೆ ಅರಿವಾಯಿತು. ಇಷ್ಟಾದ ಮೇಲೂ ಸಿನಿಮಾ ನೋಡದೆ ಹೋದರೆ ಸರಿ ಬರಲ್ಲ ಅಂತ ತಿಳಿದು, ಶುಕ್ರವಾರ ನಗರದ ಪ್ಲಾಟಿನಂ ಚಿತ್ರ ಮಂದಿರಕ್ಕೆ ಹೋಗಿದ್ದೆ. ಎರಡೂವರೆ ಘಂಟೆಯ ಸಿನಿಮಾದಲ್ಲಿ ತೋರಿಸಲಾದ ವಿವಾದವಾದರೂ ಏನಪ್ಪ ಅಂತ ಕಣ್ಣು ಮಿಟುಕಿಸದೆ ಗಮನಿಸಿದೆ. ಆದರೆ ನನ್ನ ಪ್ರಕಾರ ಸಿನಿಮಾದಲ್ಲಿ ಅಂತಹ ಯಾವುದೇ ವಿವಾದ ವೈಯಕ್ತಿಕವಾಗಿ ನನಗೆ ಕಂಡು ಬರಲಿಲ್ಲ.<br />ಕಮಲ್ ಹಾಸನ್ ಒಬ್ಬ ಅಧ್ಬುತ ನಟ. ಇಡೀ ಭಾರತದಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದಾಖಲೆಯೂ ಕಮಲ್ ಮೇಲಿದೆ. ಇಂತಹ ಕಮಲ್ಹಾಸನ್ ತಾನೇ ದುಡ್ಡು ಹಾಕಿ, ನಿದರ್ೇಶಿಸಿ, ನಟಿಸಿ ಸಿನಿಮಾ ಮಾಡುತ್ತಾರೆಂದರೆ ಸಹಜವಾಗಿಯೇ ಕುತೂಹಲ ಇದ್ದದ್ದೇ. ಅದರಲ್ಲೂ ವಿಭಿನ್ನವಾದ ಶೀಷರ್ಿಕೆಯ ಮೂಲಕ ಪ್ರೇಕ್ಷಕನ ಮೆದುಳಿನ ಕದ ತಟ್ಟುವುದು ಕಮಲ್ `ಕಮಾಲ್. ಆದರೆ ಕಮಲ್ಹಾಸನ್ರ ವಿಶ್ವರೂಪಂ ಮಾತ್ರ ಪಕ್ಕಾ ವಿಭಿನ್ನ. <br />ಮುಸ್ಲಿಮರನ್ನು ಉಗ್ರರಂತೆ ಚಿತ್ರಿಸಲಾಗಿದೆ ಎನ್ನುವುದು ಈಗಿರುವ ವಿವಾದ. ಚಿತ್ರ ನೋಡುತ್ತಾ ಹೋದಂತೆ ಇಂತಹ ಅನುಭವ ಎಲ್ಲೂ ಆಗುವುದಿಲ್ಲ. ಕಮಲ್ ಹೇಳಿದಂತೆ ಎಲ್ಲವೂ ಅಪಘಾನಿಸ್ಥಾನದಲ್ಲಿ ನಡೆಯುವ ಟೆರರ್ ಸ್ಟೋರಿ ಅನ್ನುವುದು ಸ್ಪಷ್ಟ. ನಾವು ದಿನಬೆಳಗಾದರೆ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ನೋಡುವ ಅಂತರಾಷ್ಟ್ರೀಯ ಸುದ್ದಿಗಳೇ ಚಿತ್ರದ ಕೇಂದ್ರ ಬಿಂದು. ಒಬ್ಬ ಭಾರತೀಯ ನಟ ಕಮ್ ನಿದರ್ೆಶಕ ಅಪಘಾನಿಸ್ಥಾನದ ಉಗ್ರ ಜಗತ್ತಿನ ಸಂಪೂರ್ಣ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾನೆ ಎನ್ನುವುದು ಚಿತ್ರ ನೋಡಿದವರ ಗಮನಕ್ಕೆ ಬರುತ್ತದೆ. ನ್ಯಾಟೋ ಪಡೆಗಳು ಅಪಘಾನಿಸ್ಥಾನದ ಉಗ್ರ ಅಡಗುತಾಣಗಳ ಮೇಲೆ ನಡೆಸುವ ದಾಳಿಯನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಲಾಗಿದೆ. ಆದರೆ ಎಲ್ಲ್ಲೂ ಕೂಡ ಭಾರತೀಯ ಮುಸ್ಲಿಮರನ್ನು ಮಾತ್ರ ಉಗ್ರರಂತೆ ಚಿತ್ರಿಸಿಲ್ಲ ಎನ್ನುವುದು ಅಷ್ಟೇ ಸತ್ಯ. <br />ಕಮಲ್ ಒಬ್ಬ ಅಪ್ರತಿಮ ನಟ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈತನಲ್ಲೂ ಓರ್ವ ಅಧ್ಬುತ ನಿದರ್ೇಶಕನಿ ದ್ದಾನೆ ಎನ್ನುವುದು ಮಾತ್ರ ವಿಶ್ವರೂಪಂನಲ್ಲಿ ಸಾಬೀತಾಗುತ್ತದೆ. ಇಡೀ ಚಿತ್ರ ಉಗ್ರರ ಸುತ್ತ ಗಿರಕಿ ಹೊಡೆದರೂ ಸಿನಿಮಾದಲ್ಲಿ ಭಾರತೀಯರಿಗೆ ಎಳ್ಳಷ್ಟೂ ನೋವು ತರುವ ಸನ್ನಿವೇಶಗಳನ್ನು ಕಮಲ್ ಸೃಷ್ಟಿಸಿಲ್ಲ. ಅಷ್ಟೇ ಯಾಕೆ ಸಿನಿಮಾದಲ್ಲಿ ತೋರಿಸಲಾದ ಸ್ಥಳಗಳು ಕೂಡ ಭಾರತದ್ದಲ್ಲ. (ಸಿನಿಮಾದಲ್ಲಿ ತೋರಿಸಲಾಗಿರುವಂತೆ)<br />95ಕೋಟಿ ಸುರಿದು ಕಮಲ್ ಸಿನಿಮಾ ಮಾಡಿದ್ದಾರೆ ಅಂದಾಗ ಕಮಲ್ ಬಗ್ಗೆ ಸಹಜವಾಗಿಯೇ ಅಭಿಮಾನವಿತ್ತು. ಈ ಅಭಿಮಾನ ಸಿನಿಮಾ ನೋಡಿದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ನಟನೊಬ್ಬ ಸಿನಿಮಾದ ಮೇಲೆ ಈ ಮಟ್ಟಿನ ಭರವಸೆಯಿಟ್ಟು, ಇಂದಿನ ಲವ್ಸ್ಟೋರಿಗಳ ಮಧ್ಯೆ ಇಂತಹ ಸಿನಿಮಾ ನಿಮರ್ಿಸಿರುವುದು ನಿಜಕೂ ಗ್ರೇಟ್ ಅನಿಸದೆ ಇರದು. ಇಡೀ ಸಿನಿಮಾ ವೀಕ್ಷಿಸುವಾಗ ಕಮಲ್ ಹಣದ ವಿಚಾರದಲ್ಲಿ ರಾಜಿಯಾದಂತೆ ತೋರುತ್ತಿಲ್ಲ. ಕಮಲ್ ಎಂಟ್ರಿ ಕೊಟ್ಟಾಗ ಇಂದಿಗೂ ಮಂಗಳೂರಿನ ಥಿಯೇಟರ್ಗಳಲ್ಲೇ ವಿಶಿಲ್, ಚಪ್ಪಾಲೆ ಎಲ್ಲೆ ಮೀರುತ್ತಿದೆ ಎಂದರೆ ಊಹಿಸಿ...ಕಮಲ್ ಖದರ್ ಎಷ್ಟಿರಬೇಡ ಎನ್ನುವುದನ್ನು.<br />ಕೆಲ ಮುಸ್ಲಿಂ ಮುಖಂಡರು ಹೇಳುವಂತೆ `ವಿಶ್ವರೂಪಂ ದೇಶದ ಭದ್ರೆತೆಗೆ ಹಾನಿ ಮಾಡುವುದೇ ಆದರೆ ಶಾರುಖ್ ಖಾನ್ರ `ಮೈ ನೇಮ್ ಈಸ್ ಖಾನ್ ನಿಂದ ಇಡೀ ದೇಶವೇ ಹೊತ್ತಿ ಉರಿಯ ಬೇಕಿತ್ತು.,. ಆದರೆ ಎಲ್ಲೂ ಹಾಗಾಗಿಲ್ಲ. ಮೈ ನೇಮ್ ಈಸ್ ಖಾನ್ನಲ್ಲಿ ಶಾರುಕ್ ಪದೇ ಪದೇ ಬಳಸುವ `ಆ್ಯಮ್ ಖಾನ್, ಬಟ್ ನಾಟ್ ಟೆರರಿಸ್ಟ್ ಎಂಬ ಒಂದು ಪದವನ್ನೇ ಗಮನಿಸಿ. ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲು ಈ ಡೈಲಾಗ್ ಸಾಕಲ್ಲವೇ? ಆದರೆ ಆಗ ಮಾತ್ರ ಯಾರಿಗೂ ಚಿತ್ರದಲ್ಲಿ ವಿವಾದದ ವಸ್ತು ಕಾಣಲಿಲ್ಲ. ಮೈ ನೇಮ್ ಇಸ್ ಖಾನ್ ಗೆದ್ದಿತು.....!?<br />ವಿಶ್ವರೂಪಂನಲ್ಲಿ `ಅಲ್ಲಾ ಅಕ್ಬರ್, ದುವಾ ಎಂಬ ಕೆಲವೊಂದು ಮುಸ್ಲಿಂ ಶಬ್ದಗಳನ್ನು ಬಳಸಿದ್ದನ್ನು ಬಿಟ್ಟರೆ ಎಲ್ಲೂ ಮುಸ್ಲಿಂ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ ಎನ್ನುವುದು ನನ್ನ ವೈಯಕ್ತ್ತಿಕ ಅಭಿಪ್ರಾಯ. ಆದರೇನು ಮಾಡುವುದು ನಮ್ಮ ದೇಶದ ಹೊಲಸು ರಾಜಕೀಯದಲ್ಲಿ `ವಿಶ್ವರೂಪಂ ವಿರೂಪಗೊಳ್ಳುತ್ತಿದೆಯಷ್ಟೇ..<br />ನೆನಪಿರಲಿ, ಸಿನಿಮಾ ಎನ್ನುವುದು ಮನೋರಂಜನಾ ಮಾಧ್ಯಮ. ಈ ಮಾಧ್ಯಮದಲ್ಲಿ ಬೇಕೆಂದೇ ವಿವಾದಗಳನ್ನು ಸೃಷ್ಟಿಸುವವರಿದ್ದಾರೆ. ಕಾರಣ ಸಿನಿಮಾ ಗೆಲ್ಲಬೇಕು ಎನ್ನುವುದು. ಆದರೆ ಕಮಲ್ ಎಲ್ಲೂ ವಿವಾದ ಸೃಷ್ಟಿಸಿಲ್ಲ. ವಿವಾದ ಎನ್ನುವುದು ತಾನಾಗಿಯೇ ಹುಟ್ಟಿಕೊಂಡಿದೆ. 95 ಕೋಟಿ ಸುರಿದು ದೇಶದ ಮಹಾನ್ ಕಲಾವಿದನೊಬ್ಬ ತನ್ನ ಚಿತ್ರದಿಂದ ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದಾನೆಂದರೆ ಏನರ್ಥ? ಅಷ್ಟಕ್ಕೂ ಟೆರರಿಸಂ ಎಂಬ ವಸ್ತು ವಿಷಯದಲ್ಲಿ ಎಷ್ಟು ಸಿನಿಮಾಗಳು ಬಂದು ಹೋಗಿಲ್ಲ ಹೇಳಿ?<br />ಇನ್ನಾದರೂ ಸಿನಿಮಾಗಳನ್ನು ವೈಯಕ್ತಿಕ ಹಿತದೃಷ್ಟಿಯಿಂದ ನೋಡುವುದು ಬೇಡ. ಅಷ್ಟಕ್ಕೂ ವಿಶ್ವರೂಪಂ ಆ ಮಟ್ಟಿಗೆ ವಿವಾದ ಸೃಷ್ಟಿಸಿದ ಸಿನಿಮಾವೂ ಅಲ್ಲ. ನೆನೆಪಿರಲಿ, ಇದು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದರೂ ಹಾಗೇ ಸುಮ್ಮನೆ ಸಿನಿಮಾ ನೋಡಿ ಬನ್ನಿ, ಮನೋರಂಜನೆ ಸಿಗದಿದ್ದರೂ ವಿಶ್ವರೂಪಂನಲ್ಲಿ ವಿವಾದವಿದೆಯೇ ಎಂಬ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು. <br /><span style="color: blue;"><b> ಧ್ವನಿ </b></span></div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-29428704012009724392012-11-20T05:40:00.003-08:002013-08-07T23:36:26.903-07:00ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!<div dir="ltr" style="text-align: left;" trbidi="on">
<div style="text-align: left;">
<h2 style="text-align: left;">
<span style="color: yellow;">ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!</span></h2>
ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhh0WtiAJ5VCgFLdjPpcCpVJZOLXM3VAUbIMap3Ac4GOhUc3SXDZZSac_j3pIbsYN7b1sF8XdXrG6RGs50CpGyTlQE7EHGUcYfTKHDthFitJ360MFKKaYZJ9TIvMa8n1yYWol8GvDw4R3I/s1600/Love-failure-boy.jpg" imageanchor="1" style="margin-left: 1em; margin-right: 1em;"><img border="0" height="400" src="https://blogger.googleusercontent.com/img/b/R29vZ2xl/AVvXsEhh0WtiAJ5VCgFLdjPpcCpVJZOLXM3VAUbIMap3Ac4GOhUc3SXDZZSac_j3pIbsYN7b1sF8XdXrG6RGs50CpGyTlQE7EHGUcYfTKHDthFitJ360MFKKaYZJ9TIvMa8n1yYWol8GvDw4R3I/s400/Love-failure-boy.jpg" width="300" /></a></div>
<br />
ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...<br />
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!<br />
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.<br />
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!<br />
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....<br />
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...<br />
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!<br />
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...<br />
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!<br />
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....<br />
ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!<br />
<br />
ಧ್ವನಿ<br />
<br />
<br />
<br />
<br />
<br />
<br />
<br />
<br /></div>
dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-78856878161459979002012-11-09T08:31:00.000-08:002012-11-09T08:32:09.909-08:00<div dir="ltr" style="text-align: left;" trbidi="on">
<h2 style="text-align: left;">
<span style="color: red;"> ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?</span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhd7X6YFOR77T3_b22aWLsA2yZipsNPdUoUWPxyjwmT66qKxZjyuZZnGBoOyVVGEM8ZGVhrWhosiWJ7a6F_zTFydkc4fY8tsJIpPbA09p5128Y2KLPljjCOX-kM003I4-tgBICYqNE59-0/s1600/gadkari.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhd7X6YFOR77T3_b22aWLsA2yZipsNPdUoUWPxyjwmT66qKxZjyuZZnGBoOyVVGEM8ZGVhrWhosiWJ7a6F_zTFydkc4fY8tsJIpPbA09p5128Y2KLPljjCOX-kM003I4-tgBICYqNE59-0/s1600/gadkari.jpg" /></a></div>
<h2 style="text-align: left;">
</h2>
<div style="text-align: left;">
ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.</div>
<div style="text-align: left;">
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.<br />
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು. ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.<br />
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?<br />
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ. <br />
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ. <br />
ಧ್ವನಿ<br />
</div>
</div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-31109009608264812392012-08-21T05:38:00.001-07:002012-08-21T05:38:26.317-07:00`ಕಾಲದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!<h2 style="color: yellow;">
`ಕಾಲ'ದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!</h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEg0S0Y2LUFDuCz8vs4Xj83x4wXvZAseEkTMdnPjxd28C0zratg6x6UmZyucJCaZ4kKk2_RuzSuXcZTsIWwkmV7lFDryHFI-K431i6x0on9C_0fcah_GdgcNuCsTcKU9Jx1KS9qXWwmPI30/s1600/flowert.jpg" imageanchor="1" style="margin-left: 1em; margin-right: 1em;"><img border="0" height="400" src="https://blogger.googleusercontent.com/img/b/R29vZ2xl/AVvXsEg0S0Y2LUFDuCz8vs4Xj83x4wXvZAseEkTMdnPjxd28C0zratg6x6UmZyucJCaZ4kKk2_RuzSuXcZTsIWwkmV7lFDryHFI-K431i6x0on9C_0fcah_GdgcNuCsTcKU9Jx1KS9qXWwmPI30/s400/flowert.jpg" width="400" /></a></div>
<h2 style="color: yellow;">
</h2>
ತಾಯಿಯ ಹೊಟ್ಟೆಯಿಂದ ಭೂಮಿಗಿಳಿಯುವಾಗ ಸಣ್ಣದೊಂದು ಅಳುವಿನ ಜೊತೆಗೆ ಪುಕ್ಕಟೆಯಾಗಿ ಸಿಗುವುದು `ಮಗು ಎಂಬ ನಾಮಧೇಯವಷ್ಟೇ. ಆಸ್ಪತ್ರೆಯ ತೊಟ್ಟಿಲಲ್ಲಿ ಪಿಲಿ ಪಿಲಿ ಕಣ್ಣು ಬಿಡುತ್ತಾ ಅಮ್ಮನ ತೋಳ ತೆಕ್ಕೆಯ ಆಸರೆ ಬೇಡುತ್ತಿದ್ದರೆ ಅಲ್ಲಿ ನೆರೆದವರಿಗೆ ಅದೆಂಥದೋ ಪುಳಕ. ಹೆತ್ತ ತಾಯಿಗಂತೂ ಆ ಮಗುವಿನ ಆಳುವೇ ಸಾರ್ಥಕ ಎನಿಸುವಂಥ ಅನುಭವ. ಆದರೆ ಭೂಮಿಯ ಸ್ಪರ್ಶಕ್ಕೆ ಸಿಕ್ಕಿ ಕೆಲವೇ ಸೆಕೆಂಡ್ ಕಳೆದ ಮಗುವಿಗೆ ಜಗವೇ ನೂತನ....ಅಳು ಕಂಡು ನಗುವವರ ವ್ಯಕ್ತಿತ್ವ ವಿನೂತನ....ಹುಟ್ಟಿದ ಮಗುವಿನ ಅಳು ನಗುವಾಗಿ ಬದಲಾಗುವಾಗ ಅದಕ್ಕೊಂದು ಸ್ವಂತ ಹೆಸರಿನ ಆಸರೆ....ಮನೆಯವರೆಲ್ಲರ ಸ್ಪರ್ಶ....<br />
ಸಣ್ಣ ವಯಸ್ಸಿನಲ್ಲೊಂದು ಇಂತಹ ಪ್ರೀತಿ, ಪ್ರತೀ ಮಗುವಿಗೂ ಸಿಗಬೇಕು. ಸಿಕ್ಕೇ ಸಿಗುತ್ತೆ ಕೂಡ...ಆದರೆ ಎಷ್ಟು ದಿನ?<br />
ಆ ಮಗುವಿಗೂ ಕಾಲದ ಜವಾಬ್ದಾರಿಗೆ ಹೆಗಲು ಕೊಡುವ ಅನಿವಾರ್ಯತೆ ಬಂದೇ ಬರುತ್ತೆ ಅಲ್ವಾ?<br />
ಹೌದು, ಬದಲಾವಣೆ ಜಗದ ನಿಯಮ..ಹುಟ್ಟು ಸಾವಿನ ಮಧ್ಯೆ ಕಂಡುಕೊಂಡ ಪ್ರತೀ ಹಾದಿಯಲ್ಲೂ ಜವಾಬ್ದಾರಿಯ ನೊಗ ಹೊತ್ತು ಸಾಗಬೇಕಾದದ್ದು ಅನಿವಾರ್ಯ....ಎಳೆಯ ವಯಸ್ಸಿನ ಆಟ, ತುಂಟಾಟಗಳು, ನಮ್ಮದೇ ಆದ ಜೀವನ, ಎಲ್ಲವೂ ದೂರ ಸರಿದು `ಜವಾಬ್ದಾರಿಯೆಂಬ ಹಣೆಪಟ್ಟಿ ಹೊತ್ತು ನಮ್ಮ ಹೆಗೆಲೇರುತ್ತದೆ.<br />
ಇಂದೊಂಥರ ಅನ್ಯಗ್ರಹವನ್ನು ಪ್ರವೇಶಿಸಿದ ಹಾಗೆ...!<br />
ಜೀವನ ಸುಗಮವಾಗಿರಲಿ ಎಂದು ಮುಂದಡಿಯಿಡುವ ಪ್ರತೀ ಜೀವವೂ ಬಯಸದೇ ಪಡೆದ ಭಾಗ್ಯ, ದೌಭರ್ಾಗ್ಯಗಳು ಎಷ್ಟು ಎನ್ನುವುದು ಕೇಳಿಯೂ ಕೇಳದಂತಿರುವ ದುರಂತ ಕಥಾನಕಗಳೇ ಸರಿ....<br />
ಶಾಲಾ ದಿನಗಳಲ್ಲಿ ಜವಾಬ್ದಾರಿ ಅನ್ನುವುದನ್ನೇ ಮರೆತ ಅದೆಷ್ಟೋ ಗೆಳೆಯರ ಬಳಗ ನನ್ನ ಜೊತೆಯಲ್ಲಿತ್ತು. ಪ್ರತೀ ದಿನ, ಪ್ರತೀ ಕ್ಷಣ ಮನೋರಂಜನೆಯೊಂದನ್ನು ಬಿಟ್ಟರೆ ನನ್ನ ಗೆಳೆಯರ(ಒಂದು ವರ್ಗ) ಬಳಗಕ್ಕೆ ಕಾಲದ ಜೊತೆ ಬರುವ ಜವಾಬ್ದಾರಿಯ ಪರಿಚಯವೇ ಇರಲಿಲ್ಲ. ಆದರೆ ವಯಸ್ಸು 20 ದಾಟುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿದ್ದ ಶಾಲಾ ದಿನಗಳ ಗೆಳೆಯರು ಜವಾಬ್ದಾರಿಯ ಪರಿಚಯ ಮಾಡಿಸಿಕೊಂಡು ಒಂದು ಹಂತಕ್ಕೆ ಕುಟುಂಬದ ಬಂಡಿ ಎಳೆಯುವುದನ್ನು ಕಂಡಿದ್ದೇನೆ. ಆಗೆಲ್ಲಾ ಯೋಚಿಸಿದ್ದಿದೆ...<br />
ನಿಜಕ್ಕೂ ಜವಾಬ್ದಾರಿ ಅಂದ್ರೆ ಇದೇನಾ?<br />
ಹೌದೋ? ಅಲ್ವೋ? ನಂಗತ್ತೂ ಅಷ್ಟು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಶಾಲಾ ದಿನಗಳಲ್ಲಿ ಈ ಗೆಳೆಯರ ಬಳಗದ ವರ್ತನೆ ಕಂಡ ನಾನು ಇಂದು ಮಾತ್ರ ಮಾತೆತ್ತದೆ ಮೌನವಾಗಬೇಕಿದೆ. ಆ ದಿನಗಳಲ್ಲಿ ಶಿಕ್ಷಣದ ಸ್ಪರ್ಶ ಕಂಡರೆ ಬೆಚ್ಚಿ ಬೀಳುತ್ತಿದ್ದ ಈ ವರ್ಗ..ಇಂದು ಹೇಗೋ ಜವಾಬ್ದಾರಿಯ ಅರ್ಥವನ್ನು ಅಥರ್ೈಸಿ ಜೀವನ ಸಾಗಿಸುತ್ತಿದ್ದಾರೆ. ಕಾಲವೇ ಎಲ್ಲವನ್ನೂ ಕಲಿಸುತ್ತೆ ಅನ್ನೋದು ಬಹುಶಃ ಇದಕ್ಕೆ ಇರಬೇಕು...<br />
ಏನೇ ಆದರೂ ಇಂಥವರಿಗೊಂದು ಸಲಾಂ ಮೀಸಲಿಡಲೇ ಬೇಕು. ನನ್ನ ಪ್ರಕಾರ ಸಾಧಕರಲ್ಲದಿದ್ದರು ಸಾಧಕರಿವರು!<br />
ಪ್ರತೀ ಬಾರಿ ಬ್ಲಾಗ್ ಬರೆಯುವಾಗ ನನ್ನ ಚಿಂತನೆಗಳಿಗೆ ಕೆಲಸ ಕೊಡುವ ನಾನು ಈ ಬಾರಿ ಕಣ್ಣಿಗೆ ಬಿದ್ದ ನೈಜ ಪರಿಶ್ರಮದ ಬೆನ್ನು ಬಿದ್ದು ಬರೆದಿದ್ದೇನೆ. ಶಾಲಾ ದಿನಗಳಲ್ಲಿ ರೌಡಿಸಂ, ಗಲಾಟೆ, ಲವ್ ಎಂದು ಹುಚ್ಚರಂತೆ ಬೀದಿ ಸುತ್ತುತ್ತಿದ್ದ ನನ್ನ ಗೆಳೆಯರ ಬಳಗದ ಬಗ್ಗೆ(ಒಂದು ವರ್ಗ) ಬರೆಯಬೇಕೆನಿಸಿತು. ಆದರೆ ಈಗ ಮಾತ್ರ ಇವರ್ಯಾರೂ ಹಾಗಿಲ್ಲ. ಬದಲಾಗಿದ್ದಾರೆ...ಬದಲಾಗುತ್ತಿದ್ದಾರೆ...!<br />
ಮೊದಲೇ ಹೇಳಿದ ಹಾಗೆ ಜವಾಬ್ದಾರಿಗಳನ್ನು ಅಥರ್ೈಸಿಕೊಂಡಿದ್ದಾರೆ. ಆ ದಿನಗಳಲ್ಲಿ ಇವರ ವರ್ತನೆಗೆ ಬೇಸರ ಪಟ್ಟುಕೊಂಡ ಜನರೂ ಇಂದು ತೃಪ್ತಿ ಪಟ್ಟುಕೊಳ್ಳಬೇಕು ಅನ್ನೋ ಹಾಗೆ ಜೀವನ ನಡೆಸುತ್ತಿದ್ದಾರೆ. 10ರಿಂದ 20 ಸಾವಿರ ಸಂಬಳ ಹಿಡಿಯದಿದ್ದರೂ ಸಾಮಾಜಿಕವಾಗಿ ಒಂದು ಹಂತಕ್ಕೆ ಗಟ್ಟಿಮುಟ್ಟು ಎನ್ನಬಹುದುದು.<br />
ಫ್ರೆಂಡ್ಸ್, ಇಷ್ಟೆಲ್ಲಾ ಯಾಕೆ ಹೇಳಬೇಕೆನಿಸಿತು ಅಂದರೆ,,,<br />
ಮೊನ್ನೆಯಷ್ಟೆ ನನ್ನೊಬ್ಬ ಆಕಾಲದ ಗೆಳೆಯ ಸಿಕ್ಕಿದ್ದ. ಅಂದು ಅವನಿದ್ದ ರೀತಿಗೂ ಇಂದು ಅವನಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿದ್ದ ಅಹಂಕಾರ, ಅರ್ಭಟ, ಮಾತೆತ್ತಿದರೆ ಸುಳಿಯುತ್ತಿದ್ದ ಕೋಪ ಇದ್ಯಾವುದೂ ಇಲ್ಲ. ಆಗೆಲ್ಲಾ ಇವರ ವರ್ತನೆ ಬದಲಾಗಲಿ ಎಂದು ಆಶಿಸುತ್ತಿದ್ದೆ. ಮುಂದೆ ಅದೇ ಗೆಳೆಯ ಜೀವನವನ್ನು ಈ ಮಟ್ಟಿಗೆ ಅಥರ್ೈಸಿಕೊಂಡು ಕಣ್ಣಿಗೆ ಬೀಳುತ್ತಾನೆ ಎಂಬ ಸಣ್ಣ ಊಹೆಯೂ ನನಗಿರಲಿಲ್ಲ. ಮಾತಿನಲ್ಲಿ ನಗುವಿನ ಸ್ಪರ್ಶ, ಗೌರವದ ಭಾವ, ಪ್ರೀತಿ ತುಂಬಿದ ಸ್ಪಷ್ಟ ನಿಲುವು....ಹಿಂದಿದ್ದ ವ್ಯಕ್ತಿತ್ವಕ್ಕೆ ಸಿಡಿಲು ಬಡಿದಂತೆ ಬದಲಾಗಿದ್ದ ನನ್ನ ಆತ್ಮೀಯ ಗೆಳೆಯ..!<br />
ಇಂಥದ್ದೊಂದು ಬದಲಾವಣೆಗೆ ಕಾರಣನಾದ ಆ `ಕಾಲಕ್ಕೊಂದು ಥ್ಯಾಂಕ್ಸ್ ಹೇಳಲೇ ಬೇಕು.<br />
ಫ್ರೆಂಡ್ಸ್, ಹಾಗಂತ ಬದಲಾವಣೆಯ ಪ್ರತೀ ಮಗ್ಗುಲನ್ನು ತಿರುವಿ ಹಾಕಿಕೊಂಡು ನೋಡುವ ಅಭ್ಯಾಸ ನನಗಿಲ್ಲ. ಒಬ್ಬನ ವ್ಯಕ್ತಿತ್ವ ನೋಡಿ ಗುಣಮಟ್ಟದ ಸಟರ್ಿಪಿಕೇಟ್ ಕೊಡುವ ಹಂತಕ್ಕೂ ನಾನು ಬೆಳೆದಿಲ್ಲ. ಆದರೆ ಎಲ್ಲೋ ಹಾಳಾಗಿ ಹೋಗುತ್ತಿದ್ದ ಹೊವೊಂದು ತುಂತುರು ಹನಿಗೆ ಮೈದಡವಿ ನಿಂತರೆ ಪೋಟೋ ಕ್ಲಿಕ್ಕಿಸಿ ಚೆಂದಗಾಣಿಸುವ ಅನ್ನೋ ಹವ್ಯಾಸವಷ್ಟೇ! ನನ್ನ ಹವ್ಯಾಸಗಳು ಕೆಲವರ ಪಾಲಿಗೆ ದುರಾಭ್ಯಾಸಗಳಾಗಿ ಕಂಡರೆ ನಾನು ಜವಾಬ್ದಾರನಲ್ಲ. <br />
ಬದುಕಿನ ಪ್ರತೀ ಹಂತದಲ್ಲೂ ಎಡವಿ ಬೀಳುವ ವರ್ಗಕ್ಕಿಂತ, ಈ ಹಿಂದೆ ಎಡವಿ ಬಿದ್ದು ಈಗಷ್ಟೇ ಎದ್ದು ನಿಲ್ಲುತ್ತಿರುವ ನನ್ನ ಆ ಕಾಲದ ಗೆಳೆಯನ ವರ್ಗ ನನಗಿಷ್ಟ..<br />
ಇವರು ಅಂದೆಲ್ಲಾ ಜೀವನದ ಪ್ರತೀ ಕ್ಷಣವನ್ನು ಇಂಚಿಂಚೂ ಎಂಜಾಯ್ ಮಾಡಿದ್ದಾರೆ...ಒಂದು ಕ್ಷಣವೂ ಭಾವುಕರಾಗದೆ ಸಣ್ಣ ವಯಸ್ಸಿನ ಸುಖವನ್ನು ಪ್ರತೀ ಕ್ಷಣವೂ ಅನುಭವಿಸಿದ್ದಾರೆ..ಜವಾಬ್ದಾರಿಯೆಂಬ ಕಾಲನ ಕರೆ ಬಂದಾಗ ನಿಯತ್ತಾಗಿ ಅದಕ್ಕೆ ಹೊಂದಿಕೊಂಡಿದ್ದಾರೆ.<br />
ನಿಜಕ್ಕೂ ಈ ರೀತಿಯ ಜೀವನ ಗ್ರೇಟ್ ಅಲ್ವಾ?<br />
ಫ್ರೆಂಡ್ಸ್, ಈ ಮೂಲಕ ಹೇಳುವುದಿಷ್ಟು...<br />
ಯಾರೇ ಆಗಲಿ ವಯಸ್ಸಿನ ಒಂದು ಹಂತದವರಗೆ ಇರುವಷ್ಟು ದಿನಗಳನ್ನು ಎಂಜಾಯ್ ಮಾಡೋಣ, ನಕ್ಕು ನಲಿಯೋಣ, ಹೇಗಿದ್ದರೂ ಜವಾಬ್ದಾರಿಯೆಂಬ ಕಾಲನ ಕರೆಗೆ ಮತ್ತೆ ಕಿವಿಕೊಡಲೇ ಬೇಕಲ್ಲವೇ?<br />
ನನ್ನ ಈ ಬ್ಲಾಗ್ ಬರಹದ ಉದ್ದೇಶವಿಷ್ಟೇ...ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ನನ್ನ ಆ ಕಾಲದ ಗೆಳೆಯರ ಜೊತೆ ಸಂಭ್ರಮಿಸಿಲ್ಲ. ನಕ್ಕು ನಲಿದಿರಲಿಲ್ಲ...ಎಲ್ಲಕ್ಕೂ ಲಕ್ಷ್ಮಣ ರೇಖೆ ಎಳೆದು ಜೀವಿಸಿದ್ದೆ. ಆದರೆ ಈಗ ಆ ಕಾಲ ಮಿಂಚಿ ಹೋಗಿದೆ. ಇದೀಗ ಜವಾಬ್ದಾರಿಯ ಕಾಲ...ಇಂದು ಸಂಭ್ರಮಿಸಲು ಸಮಯದ ತಿಕ್ಕಾಟ, ಕೆಲಸ ಕಾರ್ಯಗಳ ಜಂಜಾಟ ಬ್ರೇಕ್ ಹಾಕುತ್ತಿದೆ...ಅಪ್ಪಿ ತಪ್ಪಿ ಎಲ್ಲೋ ಒಂದೆರೆಡು ರಜಾ ದಿನಗಳಲ್ಲಿ ಆ ದಿನಗಳ ಸಂಭ್ರಮ ಮರುಕಳಿಸುತ್ತದೆ. ಅದು ಬಿಟ್ಟರೆ ಮುಂದಿನ ಜೀವನದ ಭವಿಷ್ಯತ್ ಕಾಲದಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎನ್ನಬಹುದು. <br />
ಏನೇ ಆದರೂ ಜವಾಬ್ದಾರಿ ಮತ್ತು ಮಜಾ ಎಂಬ ಎರಡು ಶಬ್ದಕ್ಕೆ ಅಡ್ಡಗಾಲಿಡುವ `ಕಾಲ ಎಂಬ ಎರಡಕ್ಷರಕ್ಕೆ ದೊಡ್ಡದೊಂದು ಸಲಾಂ... dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-2283510763518380772012-08-01T05:49:00.004-07:002012-08-01T20:12:38.497-07:00ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು<div dir="ltr" style="text-align: left;" trbidi="on">
<h2 style="color: red; text-align: left;">
ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು</h2>
<div style="text-align: left;">
ಇವತ್ತು ರಕ್ಷಾ ಬಂದನ. ಸಹೋದರ-ಸಹೋದರಿಯರ ಸಂಬಂಧಕ್ಕೊಂದು ಗೌರವಯುತ ಅರ್ಥ ಕಲ್ಪಿಸಿದ ದಿನ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಂಥದ್ದೊಂದು ಮಾನವೀಯ ಸಂಬಂಧ ಇದ್ದೇ ಇರುತ್ತದೆ. ಕೆಲವರ ಜೀವನದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ಸಂಬಂಧಗಳಾದರೆ, ಇನ್ನು ಕೆಲವರ ಜೀವನದಲ್ಲಿ ಹಾಗೇ ಸುಮ್ಮನೆ ಸಿಕ್ಕ ಸಂಬಂಧಗಳು. ರಕ್ಷಾ ಬಂಧನದ ಈ ದಿನದಲ್ಲಿ ನನ್ನ ಜೀವನದಲ್ಲಿ ಬಂದು ಹೋದ ಅಕ್ಕನ ಬಗ್ಗೆ ಒಂದಿಷ್ಟು....</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEh1EtSVsISd4UA0_WxJYOCRAqv1wyc9ZaLfv0alatVZcQ5yYomhhJe9WbjMIEJokQTO_ZOC66AGXnquSLDMJXMHX2xIufn0w74S5n8aduhsRLlhHSs9ddaf8kTTdKmTpECqbMvgec4-8_E/s1600/bha.JPG" imageanchor="1" style="margin-left: 1em; margin-right: 1em;"><img border="0" height="90" src="https://blogger.googleusercontent.com/img/b/R29vZ2xl/AVvXsEh1EtSVsISd4UA0_WxJYOCRAqv1wyc9ZaLfv0alatVZcQ5yYomhhJe9WbjMIEJokQTO_ZOC66AGXnquSLDMJXMHX2xIufn0w74S5n8aduhsRLlhHSs9ddaf8kTTdKmTpECqbMvgec4-8_E/s320/bha.JPG" width="320" /></a></div>
<div style="text-align: left;">
<br />
ಪ್ರತೀ ಕ್ಷಣವೂ ನೆನಪಾಗುವ ಜೀವದ ಬಗ್ಗೆ ಒಂದಿಷ್ಟು....ಹೆತ್ತಮ್ಮನ ನಂತರ ಹೆಚ್ಚು ಇಷ್ಟ ಪಟ್ಟ ಜೀವದ ಬಗ್ಗೆ ಒಂದಿಷ್ಟು....<br />
ಜೀವನ ಅನ್ನೋದು ನಿಜಕ್ಕೂ ವಿಚಿತ್ರ. ಜೀವನದ ಅನಿಶ್ಚಿತತೆಯ ಪಯಣದಲ್ಲಿ ಯಾರೆಲ್ಲಾ ಸಿಗ್ತಾರೆ ಅನ್ನೋದನ್ನು ಹೇಳೋದು ಅಷ್ಟು ಸುಲಭವಲ್ಲ. ಹಾಗೆ ಊಹಿಸಲೂ ಆಗದ ನನ್ನ ಜೀವನದ ತಿರುವಿನಲ್ಲಿ ಸಿಕ್ಕ ವ್ಯಕ್ತಿಯೇ ಒಬ್ಬರು ಅಕ್ಕ. ಸದಾ ಮುಗುಳ್ನಗು, ನನ್ನ ಹೆತ್ತ ತಾಯಿಯನ್ನೇ ಹೋಲುವ ಸ್ವಭಾವ, ಜೀವನದ ಪ್ರತೀ ಕ್ಷಣದಲ್ಲೂ ಅತೀ ಭಾವುಕ ಜೀವಿ, ಸ್ವಲ್ಪ ಧೈರ್ಯ, ಅತ್ಯಲ್ಪ ಕೋಪ, ಬದುಕಿನ ಪ್ರತೀ ಕ್ಷಣವನ್ನೂ ನೋವಿನಲ್ಲೂ ಸಂಭ್ರಮಿಸುವ ವ್ಯಕ್ತಿತ್ವ. ಎಲ್ಲರಿಗೂ ಇಷ್ಟವಾಗುವ ಸ್ವಭಾವ. ಇದು ನನ್ನ ಅಕ್ಕನ ಬಗ್ಗೆ ಎರಡೇ ತಿಂಗಳಲ್ಲಿ ತಿಳಿದುಕೊಂಡ ಸತ್ಯ.<br />
ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಕಥೆ. ಹೆಜ್ಜೆ ಹೆಜ್ಜೆಗೂ ಕಷ್ಟ ಪಟ್ಟ ನಾನು ಕೆಲಸಕ್ಕೆಂದು ಬಂದು ಸೇರಿದ್ದು ಸಣ್ಣದೊಂದು ಸಂಸ್ಥೆಗೆ. ಆಗೆಲ್ಲಾ ಗೊತ್ತಿದ್ದದ್ದು ಒಂದೇ....ಬೆಳಿಗ್ಗಿನಿಂದ ಸಂಜೆಯವರೆಗೆ ನಿಯತ್ತಿನಿಂದ ದುಡಿಯವುದು. ಸಂಬಂಧಗಳು ಎನ್ನುವುದು ನನ್ನ ಪಾಲಿಗೆ ಅಷ್ಟಕ್ಕಷ್ಟೇ. ಅದರಲ್ಲೂ ಹೆಣ್ಣು ಜೀವಗಳ ಜೊತೆಗೆ ಬೆಳೆಯದ ನನಗೆ ಹೆಣ್ಮಕ್ಕಳನ್ನು ಕಂಡರೆ ಒಂದು ರೀತಿಯ ನಾಚಿಕೆ ಸ್ವಭಾವ. ಮಾತಿಗಿಳಿಯಲು ಸಣ್ಣದೊಂದು ಭಯ. ಕೆಲಸಕ್ಕೆ ಸೇರುವ ವೇಳೆ ಅಲ್ಲಿ ನನಗೆ ಮಾಲೀಕರಿಗಿಂತ ಮೊದಲು ಪರಿಚಯವಾದದ್ದೇ ಈ ಅಕ್ಕ. ಮೊದಲ ವಾರದ ಸಂಬಳವನ್ನು ನನ್ನ ಕೈಗಿಟ್ಟದ್ದೇ ಆ ಅಕ್ಕ...ಒಂದು ತಿಂಗಳು ಕಳೆಯುವವರಗೆ ಇವರನ್ನು ಹಿಂದೂ ಧಮರ್ೀ ಎಂದೇ ಅಂದುಕೊಂಡಿದ್ದೆ. ಅದರಲ್ಲೂ ಇವರು ಕ್ರೈಸ್ತ ಧಮರ್ೀ ಎಂದು ತಿಳಿದದ್ದು ಒಂದು ತಿಂಗಳ ನಂತರ. ಬಹುಶಃ ಅಲ್ಲಿಯ ತನಕ ಒಂದು ಹೆಣ್ಣಿನೊಂದಿಗೆ ನಿರ್ಭಯವಾಗಿ ಮಾತನಾಡುವ ತಾಕತ್ತು ನನಗಿರಲಿಲ್ಲ. ಆದರೆ ಒಂದೇ ತಿಂಗಳಲ್ಲಿ ನನ್ನ ಅಕ್ಕನ ಜೊತೆ ತುಂಬಾನೇ ಅಂದ್ರೆ ತುಂಬಾನೇ ಕ್ಲೋಸ್ ಆಗಿ ಬಿಟ್ಟಿದ್ದೆ. ಪ್ರತೀ ದಿನ ಒಂದರ್ಧ ಘಂಟೆ ನನ್ನ ಅಕ್ಕನ ಜೊತೆ ಮಾತನಾಡಲಿಲ್ಲ ಅಂದ್ರೆ ಏನೋ ಕಳೆದುಕೊಂಡ ಅನುಭವ...ಕೆಲಸಕ್ಕೆ ರಜೆ ಮಾಡಿದರೆ ಎಲ್ಲಿ ಅಕ್ಕನ ಜೊತೆ ಮಾತನಾಡೋದು ತಪ್ಪಿ ಹೋಗುತ್ತೋ ಅನ್ನೋ ಭಯ..ಹಾಗಾಗಿಯೋ ಏನೋ ಪ್ರತೀ ದಿನ ಕೆಲಸಕ್ಕೆ ಹಾಜರಾಗುತ್ತಿದ್ದೆ. <br />
ಯಾರಲ್ಲಿಯೂ ಹೇಳಿಕೊಳ್ಳದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳಿಕೊಳ್ಳುತ್ತಿದ್ದೆ. ತೀರಾ ನೋವಾದಾಗ ಅವರ ಮುಂದೆ ಕಣ್ಣೀರು ಹಾಕಿದ್ದೂ ಇದೆ. ಅಲ್ಲಿಯ ತನಕ ನಾನು ಜೀವನದ ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರು ಹಾಕಿದ್ದಿಲ್ಲ. ಬಹುಶಃ ಅಂತಹ ಅವಕಾಶ, ಜೀವಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಸಿಗದೇ ಇರೋದು ಕೂಡ ಕಾರಣ ಇರಬಹುದು. <br />
ನನ್ನ ಅಕ್ಕನೂ ಅಷ್ಟೇ ...ನನ್ನನ್ನು ಅವರ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಇಷ್ಟ ಪಡೋರು. ಜೀವನದ ಪ್ರತೀ ಕ್ಷಣಗಳನ್ನೂ ನನ್ನ ಹತ್ತಿರ ಹೇಳ್ತಾ ಇರೋರು.. ಆಗೆಲ್ಲಾ ನನ್ನ ಅಕ್ಕ ತುಂಬಾನೇ ಅಂದ್ರೆ ತುಂಬಾನೇ ಹತ್ತಿರ ಆಗ್ತಾ ಇದ್ರೂ....<br />
ನಾನೂ ಅಷ್ಟೇ, ಅಮ್ಮನ ಹತ್ತಿರ ಹೇಲೋಕೆ ಆಗದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳ್ತಾ ಇದ್ದೆ. ಐದಾರು ತಿಂಗಳ ನಂತ ಅವರ ಮನೆಯಲ್ಲಿ ನಾನು ಒಬ್ಬನಂತಾದೆ...<br />
ಗೊತ್ತು ಗುರಿಯಿಲ್ಲದ ನನ್ನ ಜೀವನಕ್ಕೆ `ನೀನ್ ಜಾಗ್ ಆಗಬೆಕು, ನೀನ್ ಹೀಗ್ ಆಗ್ಬೇಕು...ಅಂತ ಸ್ಪೂತರ್ಿ ತುಂಬಿದ್ದು ಇದೇ ಅಕ್ಕ, ಇವತ್ತಿಗೂ ನನ್ನ ತಂದೆ ತೀರಿ ಹೋದ ಮೇಲೆ ನನ್ನ ಅಪ್ಪನ ಕುಟುಂಬ ನಮ್ಮ ಹತ್ತಿರ ಬಂದಿಲ್ಲ. ನಮ್ಮ ಭವಿಷ್ಯ ಹೇಗಿದೆ ಅಂತ ಚಿಂತಿಸಿಲ್ಲ. ಆದ್ರೆ ನನ್ನ ಅಕ್ಕ ನನಗೆ ಸಂಬಂದವೇ ಇಲ್ಲದ ನನ್ನ ಆಕಸ್ಮಿಕ ಅಮ್ಮ ನನ್ನಲ್ಲೂ ಒಂದು ಕನಸು ತುಂಬಿದ್ರೂ...ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪೂತರ್ಿ ತುಂಬಿದ್ರು. <br />
ನನ್ನ ಬರಹಕ್ಕೆ ಮೊದಲ ಓಗುಗಳಾಗಿದ್ದಳು ಅಕ್ಕ<br />
ಹಿಂದಿನಿಂದಲೂ ನನಗೆ ಬರವಣೆಗೆಯ ಹುಚ್ಚು...ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗ್ತಾ ಇದ್ದವು.. ಆರಂಭದ ದಿನಗಳಲ್ಲಿ ನನ್ನ ಬರಹಗಳು ಅಕ್ಕನನ್ನು ಮೆಚ್ಚಿಸುವ, ಅವಳನ್ನು ಇಷ್ಟ ಪಡಿಸುವ ಬರಹಗಳಾಗಿರುತ್ತಿದ್ದವು. ಪತ್ರಿಕೆಯಲ್ಲಿ ನನ್ನ ಬರಹ ಪ್ರಕಟಗೊಂಡರೆ ಸಾಕು...ಅಂಗಡಿಯಿಂದ ಪತ್ರಿಕೆ ತಂದು ಅವಳು ಬರುವ ಹೊತ್ತಿಗೆ ಟೇಬಲ್ ಮೇಲಿಟ್ಟು ದೂರದಿಂದ ಗಮನಿಸುತ್ತಿದ್ದೆ. ನನ್ನಕ್ಕ ನನ್ನ ಬರಹ ಓದ್ತಾರ ಅಂತ ಕಾತುರದಿಂದ ಕಾಯ್ತಾ ಇದ್ದೆ. ನನ್ನ ಪ್ರತೀ ಬರಹಗಳನ್ನು ನನ್ನ ಅಕ್ಕ ಓದ್ತಾ ಇದ್ದಳು. ಆದರೆ ಎಲ್ಲರಂತೆ ಶಹಬ್ಬಾಸ್ ಗಿರಿ ಕೊಡ್ತಾ ಇರಲಿಲ್ಲ. ಯಾಕ್ ಗೊತ್ತಾ?<br />
ಆಕೆಯ ಸ್ವಭಾವವೇ ಅಂತದ್ದು...ಇಷ್ಟ-ಕಷ್ಟ ಯಾವುದನ್ನೂ ತೀರಾ ಹೆಚ್ಚಾಗಿ ತೋರ್ಪಡಿಸುವುದಿಲ್ಲ. ಇಷ್ಟ ಅದರೂ ನಗು...ನೋವಾದರೂ ನಗು....ಆದರೂ ನನ್ನ ಬರಹಗಳು ಅಕ್ಕನಿಗೆ ಇಷ್ಟ ಆಗ್ತಾ ಇದ್ದವು. ಅವಳ ಕಣ್ಣುಗಳೇ ಎಲ್ಲವನ್ನೂ ನನಗೆ ಹೇಳ್ತಾ ಇತ್ತು. ನನ್ನ ಬರಹಗಳನ್ನು ಯಾರು ಒದದೇ ಇದ್ದರೂ ಪರವಾಗಿಲ್ಲ. ನನ್ನ ಅಕ್ಕ ಮಾತ್ರ ಓದಲೇ ಬೇಕು ಅನ್ನೋವಷ್ಟು ಸ್ವಾಥರ್ಿ ನಾನು. ಇದು ಅಹಂಕಾರವೋ....ಓವರ್ ಕಾನ್ಫಿಡೆನ್ಸೋ ಗೊತ್ತಿಲ್ಲ. ಆದರೆ ಪ್ರೀತಿ ತುಂಬಿದ ಅಕ್ಕನ ಸ್ಫೂತರ್ಿಗೆ ಮಾತ್ರ ನಾನ್ ಕಾಯ್ತಾ ಇದ್ದೆ.<br />
ಅಲ್ಲೀ ತನಕ ಇನ್ನೊಬ್ಬರಿಗೆ ಗಿಫ್ಟ್ ಕೊಟ್ಟು ನನಗೆ ಗೊತ್ತೇ ಇಲ್ಲ. ಅಕ್ಕನ ಹುಟ್ಟಿದ ಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿ. ಈ ಹಿಂದೆಯೆ ಕೂಡಿಟ್ಟಿದ್ದ ಸಾವಿರ ರೂಪಾಯಿ ಹಿಡಿದುಕೊಂಡು ಅದೊಂದು ಭಾನುವಾರ ಇಡೀ ಮಂಗಳೂರು ಸುತ್ತು ಹಾಕಿದ್ದೆ. ನಗರದ ಬಹುತೇಕ ಬಟ್ಟೆ ಮಳಿಗೆಗಳಿಗೆ ನುಗ್ಗಿ ಹೊರಬಂದಿದ್ದೆ. ಯಾಕ್ ಗೊತ್ತಾ? ನನ್ನ ಪ್ರೀತಿಯ ಅಕ್ಕನಿಗೆ ಚೂಡಿದಾರ ಉಡುಗೊರೆ ಕೊಡೋದಕ್ಕೆ. ಸುತ್ತಿ ಸುತ್ತಿ ಅಂತಿಮವಾಗಿ ಒಂದು ಶಾಪ್ನಲ್ಲಿ ನನ್ನ ಅಕ್ಕನಿಗೆ ಇಷ್ಟ ಆಗಬಹುದು ಅನ್ನೋ ಸಣ್ಣದೊಂದು ನಿರೀಕ್ಷೆಯಲ್ಲಿ ಹಸಿರು ಗುಲಾಬಿ ಬಣ್ಣ ಮಿಶ್ರಿತ ಚೂಡಿದಾರ ಖರೀದಿಸಿದೆ. ಅಲ್ಲಿಂದ ಮತ್ತೆ ಅಕ್ಕನಿಗೆ ಇಷ್ಟವಾಗುವ ರೀತಿಯ ಗ್ರೀಟಿಂಗ್ ಕಾಡರ್್ ತಲಾಷ್ಗೆ ನಿಂತೆ. ಇಲ್ಲೂ ಅಷ್ಟೇ, ನನ್ನ ಅಕ್ಕನ ಟೇಸ್ಟ್ಗೆ ಢಿಫರೆಂಟ್ ಆಗಿ ಕೊಡಬೇಕು ಅನ್ನೋ ನನ್ನ ಮನಸ್ಥಿತಿಗೆ ಹೊಂದುವ ಗ್ರೀಟಿಂಗ್ಸ್ ಸಿಗಲಿಲ್ಲ. ಕೊನೆಗೊಂದು ಆಗಬಹುದು ಅನ್ನೋ ಗೀಟಿಂಗ್ಸ್ ಕೈಗಿಟ್ಟು ಅಲ್ಲಿಂದ ಹೊರಟೆ....<br />
ಅಂದು ನಾನು ಆ ಎರಡು ವಸ್ತುವಿನ ಖರೀದಿಗೆ ವ್ಯಯಿಸಿದ್ದು ಬರೋಬ್ಬರಿ 4 ಗಂಟೆ 15 ನಿಮಿಷ...<br />
ಅಲ್ಲಿಯ ತನಕ ನನ್ನ ಬಟ್ಟೆ ಖರೀದಿಗೂ 15 ನಿಮಿಷಕ್ಕಿಂತ ಹೆಚ್ಚು ಸಮಯ ವ್ಯರ್ಥ ಮಾಡದ ಸ್ವಭಾವ ನಂದು. ಇನ್ನು ಮೂರು ದಿನ ಕಳೆದರೆ ಅಕ್ಕನ ಹುಟ್ಟಿದ ದಿನ...<br />
ಎಲ್ಲದರಲ್ಲೂ ವಿಭಿವನ್ನವಾಗಿ ಯೋಚನೆ ಮಾಡುವ ನಾನು ಕೆಲವೊಮ್ಮೆ ತುಂಬಾನೇ ಅಂದ್ರೆ ತುಂಬಾನೇ ಸ್ವಾಥರ್ಿ ಆಗ್ತೀನಿ. ಅಕ್ಕನ ಹುಟ್ಟಿದ ಹಬ್ಬದ ದಿನವೂ ನನ್ನ ಈ ಮನಸ್ಥಿತಿ ಬದಲಾಗಲಿಲ್ಲ.<br />
ಎಲ್ಲರಿಗಿಂತ ಮೊದಲು ನಾನೇ ವಿಶ್ ಮಾಡಬೇಕು, ಗಿಫ್ಟ್ ಕೊಡಬೆಕು ಅನ್ನೋ ಜಾಯಮಾನ. ರಾತ್ರಿ ಹನ್ನೆರೆಡು ಕಹೊಡೆದು ಸೆಕೆಂಡ್ ಕಳೆಯುವ ಮೊದಲೇ ಅಕ್ಕನ ಮೊಬೈಲ್ಗೆ ನನ್ನ ವಿಶಸ್ ತಲುಪಿಯಾಗಿತ್ತು. ಬಹುಶಃ ಅಂದಿನ ಮೊದಲ ಶುಭಾಶಯ ನನ್ನದೇ ಇರಬೇಕು...<br />
ಬೆಳಿಗ್ಗೆ ಗಿಫ್ಟ್ ಕೊಡುವಾಗಲೂ ನಾನೇ ಫಸ್ಟ್ ಆಗಿರಬೆಕು ಅನ್ನೋ ಸ್ವಭಾವ...ಅಂದು ಐದು ಘಂಟೆಗೆ ಎದ್ದು...ಸ್ನಾನ ಮಾಡಿ ಸರಿಯಾಗಿ 6.10ಕಕ್ಕೆ ಮಂಗಳೂರಿನಲ್ಲಿದ್ದೆ. ಅಲ್ಲಿಂದ ಅಕ್ಕನಿಗೊಂದು ಕಾಲ್ ಮಾಡಿದಾಗ ಅಕ್ಕ ಚಚರ್್ನಲ್ಲಿದ್ದರು. ಹಾಗಾಗಿ ಫೋನ್ ತೆಗೆಯೋಕೆ ಆಗಿಲ್ಲ. ಚಚರ್ಿಂದ ಅಕ್ಕ ಬರೋ ದಾರಿಯಲ್ಲಿ ನಿಂತು ನಾನು ತಂದ ಗಿಫ್ಟ್ ಅಕ್ಕನ ಕೈಗಿಟ್ಟಿದ್ದೆ. ಆ ಸಮಯದಲ್ಲಿ ಅಕ್ಕನ ನಗು ತುಂಬಿದ ಮುಖ ನೋಡೋದೇ ಒಂಥರಾ ಖುಷಿಯಾಗಿತ್ತು.<br />
ಇಷ್ಟೆಲ್ಲಾ ಆದ್ರೂ ನನ್ನ ಅಕ್ಕನಿಗೆ ಗಿಫ್ಟ್ ಖುಷಿಯಾಗರಬಹುದಾ? ಎಂಬ ಸಣ್ಣದೊಂದು ಭಯ! ಅಂದು ಇಡೀ ದಿನ ಅಕ್ಕನ ಫೋನ್ಗಾಗಿ ಕಾಯ್ತಾ ಇದ್ದೆ. ಆತ್ರಿ 8.35ಕ್ಕೆ ಸರಿಯಾಗಿ ಅಕ್ಕನ ಕಾಲ್ ಬಂತು. ಗಿಫ್ಟ್ ತುಂಬಾನೆ ಇಷ್ಟು ಆಯ್ತು ಅಂದರೂ ದ್ಯಾಟ್ ಡೇ ಐಯಮ್ ರಿಯಲಿ ವೆರಿ ಹ್ಯಾಪಿ....<br />
ಒನ್ನೊಬ್ಬರ ಖುಷಿಯಲ್ಲಿ ಸಂತೋಷ ಕಾಣುವ ಮತ್ತೊಂದು ಸ್ವಭಾವ ಅಂದಿನಿಂದ ಆರಂಭವಾಯಿತು. <br />
ಇಂದಿಗೂ ಆ ದಿನಗಳ ನನ್ನ ಮನಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲವೊಮ್ಮೆ ನನಗೊಬ್ಬಳು ಸ್ವಂತ ಅಕ್ಕ ಇರ್ಬಾದರ್ಿತ್ತಾ ಅಂತ ಕಣ್ಣೀರು ಹಾಕಿದ್ದೂ ಇದೆ.<br />
ಕೆಲವೊಮ್ಮೆ ನಮಗೆ ಇಷ್ಟವಾಗುವ ಸಂಬಂಧಗಳು ನಮ್ಮ ಮನಸ್ಥಿತಿಗೆ ತುಂಬಾನೇ ಹತ್ತಿರ ಆಗ್ತಾರೆ...<br />
ಅಂಥವರಲ್ಲಿ ನನ್ನ ಅಕ್ಕನೂ ಒಬ್ಬಳು...<br />
ರಕ್ಷಾ ಬಂಧನದ ಈ ದಿನ ಅಕ್ಕನ ಬಗ್ಗೆ ಒಂದಿಷ್ಟು ಹೇಳಬೇಕೆನಿಸಿತು....ಹೇಳಿದ್ದೀನಿ<br />
ಪ್ರತಿಯೊಬ್ಬರ ಜೀವನದಲ್ಲೂ ಇಂಥದ್ದೊಂದು ಸಂಬಂಧ ಇದ್ದಿರಬಹುದು ಅಲ್ವಾ?<br />
ಅಂತಿಮವಾಗಿ ರಕ್ಷಾ ಬಂಧನದ ಶುಭಾಶಯಗಳು.... </div>
<h2 style="text-align: left;">
<span style="color: yellow;">ಧ್ವನಿ</span></h2>
</div>dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-81533207008734018712012-05-20T10:30:00.002-07:002013-08-07T23:36:05.873-07:00THANKS TO THIS SUNDAY..........!<div dir="ltr" style="text-align: left;" trbidi="on">
<h2 style="color: yellow;">
THANKS TO THIS SUNDAY..........!</h2>
ಫ್ರೆಂಡ್ಸ್ ಬ್ಲಾಗ್ ಬರೆಯದೇ ತುಂಬಾ ದಿನಗಳೇ ಆದವು. ಎಕ್ಸಾಂನ ಒತ್ತಡದ ಮಧ್ಯೆ ನನ್ನ ಬರಹಕ್ಕೆ ಸಣ್ಣದೊಂದು ವಿರಾಮ ಕೊಟ್ಟಿದ್ದೆ. ಧ್ವನಿಯ ಬರಹಕ್ಕೆ ಮತ್ತೆ ಮುನ್ನುಡಿಯಿಡುತ್ತಿದ್ದೇನೆ.<br />
ಪ್ರತೀ ಆದಿತ್ಯವಾರ ನನ್ನ ಜೀವನದಲ್ಲಿ ಜಸ್ಟ್ ರಿಲ್ಯಾಕ್ಸ್ ಆಗುವ ದಿನ. ಕಳೆದು ಹೋದ ಒಂದು ವಾರವನ್ನು ಮತ್ತೆ ಮೆಲುಕು ಹಾಕುವ ದಿನ. ಅದೇ ಟೈಮ್ ವೇಸ್ಟ್ ಸಂಡೇ..ಅದೇ ಆಟ..ಅದೇ ಊಟ...<br />
ಆದ್ರೆ ಈ ಬಾರಿಯ ಸಂಡೇ ಮಾತ್ರ ತುಂಬಾನೇ ಅಂದ್ರೆ ತುಂಬಾನೇ ವಿಶೇಷವಾಗಿತ್ತು.<br />
ಸರಿಸುಮಾರು 12ವರ್ಷಗಳಾದವು ನಾನು ಆ ಸ್ಥಳಕ್ಕೆ ಹೋಗಿ. ಅಲ್ಲಿದ್ದವರ ಮುಖ ನೋಡಿಯೂ ಅಷ್ಟೇ ವರ್ಷಗಳಾಗಿತ್ತು. ತುಂಬಾ ಅಂದ್ರೆ ತುಂಬಾ ಬದಲಾಗಿತ್ತು ಆ ಊರು...ಬದಲಾಗಿತ್ತು ಅಲ್ಲಿನ ಜನಜೀವನ..ಬದಲಾಗಿತ್ತು ಅಲ್ಲಿನ ಜನರ ಜೀವನ ಪದ್ದತಿ..ಹೌದು ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಇದ್ದ ಯಾವ ಚಿತ್ರಣವೂ ಇಂದು ಅಲ್ಲಿಲ್ಲ. ಎಲ್ಲವೂ ಸ್ತಬ್ಧ..ಇಷ್ಟೆಲ್ಲಾ ಹೇಳ್ತಾ ಇರೋದು ಯಾವ ಸ್ಥಳದ ಬಗ್ಗೆ ಗೊತ್ತಾ? <br />
ನನ್ನ ತಂದೆಯ ಊರಿನ ಬಗ್ಗೆ! ಹುಟ್ಟ್ಟಿದಾಕ್ಷಣ ಕಳೆದುಕೊಂಡ ಜೀವವೊಂದರ ತವರು ನೆಲದ ಬಗ್ಗೆ. ಬದುಕಿನ ಪ್ರತೀ ಕ್ಷಣವನ್ನೂ ಪಕ್ಕಾ ಸೆಂಟಿಮೆಂಟಲ್ ಆಗಿ ನೋಡುವ ನನಗೆ ಈ ಆದಿತ್ಯವಾರ ಅನ್ನೋದೇ ಒಂದು ಭಾವುಕ ದಿನ..ಭಾವುಕ ಕ್ಷಣ..ಎಲ್ಲವೂ ಆಗಿತ್ತು.. <br />
ನನ್ನ ತಂದೆಯ ಊರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರು. ಒಂದು ಕಾಲದಲ್ಲಿ ಸಂಪೂರ್ಣ ಹಳ್ಳಿಗಾಡು. ವಿಭಿನ್ನ ಜನಜೀವನ. ಆಡು ಭಾಷೆ ತುಳವೇ ಆದರೂ ಅಲ್ಲೂ ವಿಭಿನ್ನತೆ. ರೈತಾಪಿ ವರ್ಗವನ್ನು ಗುರುತಿಸಬಹುದಾದ ಒಂದು ಸಣ್ಣ ಊರು. ನಾನಲ್ಲಿಗೆ ಕಾಲಿಟ್ಟು ಸರಿಸುಮಾರು ಹನ್ನೆರೆಡು ವರ್ಷಗಳೇ ಸಂದವು. ಆದರೆ ಈ ಬಾರಿ ಯಾಕೋ ಗೊತ್ತಿಲ್ಲ. ನನ್ನ ಮನಸ್ಸು ಅಲ್ಲಿಗೆ ಹೋಗಲೇ ಬೇಕು ಅಂತ ತುಡಿಯುತ್ತಿತ್ತು. ತುಡಿಯುವ ಮನಸ್ಸಿಗೆ ನಿರಾಸೆ ಮಾಡುವ ವ್ಯಕ್ತಿ ನಾನಲ್ಲ. ಬೈಕ್ ಏರಿ ಹೊರಟೇ ಬಿಟ್ಟೆ. ಆಗಲೇ ಅಲ್ಲಿನ ಬದಲಾದ ಚಿತ್ರಣದ ದರ್ಶನ ನನಗಾಗಿದ್ದು...<br />
ಹಳ್ಳಿಗಳು ಎಂದಿಗೂ ಬದಲಾಗೋದಿಲ್ಲ ಅನ್ನುವವರಿದ್ದಾರೆ. ಆದ್ರೆ ಸಾಲೆತ್ತೂರು ಎಂಬ ಹಳ್ಳಿ ಸಣ್ಣ ಮಟ್ಟಿಗೆ ಬದಲಾಗಿದೆ. ಇಲ್ಲಿನ ಜನರ ಜೀವನ ವಿಧಾನ ಬದಲಾಗಿದೆ. ತಾಂತ್ರಿಕತೆ ಇಲ್ಲಿನ ಮನೆ ಹೊಕ್ಕಿದೆ. ಸಿಟಿ ಜನರ ಬದುಕಿನ 75%ದಷ್ಟನ್ನು ಇಲ್ಲಿನ ಜನ ಇಂದು ಅನುಸರಿಸುತ್ತಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ! ಹಳ್ಳಿಗಳು ಉದ್ದಾರವಾಗುತ್ತಿಲ್ಲ ಎನ್ನುವವರಿಗೆ ಇದೊಂದು ಉತ್ತರ. ನಿಜಕ್ಕೂ ಇಲ್ಲಿನ ಜನರ ಜೀವನ ತುಂಬಾನೇ ಗ್ರೇಟ್.<br />
ಆದರೂ ರೈತಾಪಿ ವರ್ಗ, ಉಳುವ ಭೂಮಿ, ಹಚ್ಚ ಹಸಿರಿನ ತೋಟ ಎಂಬ ಹಳ್ಳಿಗಾಡಿನ ಅಧ್ಬುತ ಸೊಗಡಿನ ಚಿತ್ರಣ ಮಾತ್ರ ಇಲ್ಲಿಲ್ಲ. ಈಗ ಎಲ್ಲವೂ ಹೈಫೈ. ನೇಗಿಲು ಹಿಡಿದು ಹೊಲದಲ್ಲಿ ದುಡಿಯುತ್ತಿದ್ದ ರೈತ ಇಂದು ಪ್ಯಾಂಟ್ ಶಟರ್್ ಏರಿಸಿಕೊಂಡು ಸಿಟಿಯತ್ತ ಮುಖಮಾಡಿದ್ದಾನೆ. ಉಳುವ ಭೂಮಿ ಹಚ್ಚ ಹಸಿರಿನ ಆಸರೆಯಿಲ್ಲದೆ ಪಾದಚಾರಿಗಳ ಸ್ವರ್ಗವಾಗಿ ಹೋಗಿದೆ! ಎಲ್ಲೋ ಒಂದೆರೆಡು ಅಡಕೆ ಮರಗಳಿದ್ದರೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ..ಇದನ್ನೆಲ್ಲಾ ನೋಡುವಾಗ ಕೊಂಚ ಬೇಸರವೂ ಆಯಿತು. ಆಗ ಮುಗ್ಧ ರೈತರನ್ನು ಮರಳು ಮಾಡಿದ ನಮ್ಮ ಮಾಡ್ರನ್ ಸಿಟಿ ಲೈಫ್ ಬಗ್ಗೆಯೇ ಅಸಹ್ಯ ಹುಟ್ಟಿತು. ಇವೆಲ್ಲದರ ಮಧ್ಯೆ ಹನ್ನೆರೆಡು ವರ್ಷಗಳ ನಂತರದ ಒಂದಷ್ಟು ಸೆಂಟಿಮೆಂಟ್ಗಳು ನೆನಪಾದವು...!<br />
ಫ್ರೆಂಡ್ಸ್, ನಾವೆಲ್ಲಾ ಹೆಚ್ಚಾಗಿ ಪ್ರವಾಸ ಹೋಗ್ತೀವಿ. ಎಲ್ಲೋ ದೂರದ ಊರಿಗೋ, ಕಾಣದ ಜಾಗಕ್ಕೋ ಅಥವಾ ತುಂಬಾನೇ ಗ್ರೇಟ್ ಅನಿಸಿಕೊಂಡ ದೇವರ ಸನ್ನಿಧಾನಕ್ಕೋ ಅಷ್ಟೇ. ಆದ್ರೆ ಒಮ್ಮೆ ಈ ಮೊದಲು ನೀವು ಹೋಗಿದ್ದ, ಈಗ ಹೋಗದೇ ತುಂಬಾನೇ ವರ್ಷಗಳಾದ, ನಿಮ್ಮ ಜೀವಕ್ಕೆ, ಜೀವನಕ್ಕೆ ತುಂಬಾ ಹತ್ತಿರವಾದ, ಹೋದ ತಕ್ಷಣ ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸ್ಥಳಗಳಿಗೊಮ್ಮೆ ಜಸ್ಟ್ ಹಾಗೇನೆ ಹೋಗಿ ಬನ್ನಿ. ಆದ್ರೆ ನೆನಪಿರಲಿ, ಇದೊಂದು ಪ್ರವಾಸ ಆಗಿರಬಾರದು. ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸಣ್ಣದೊಂದು ಪುಸ್ತಕವಾಗಿರಬೇಕು. ಆಗ ನಿಮ್ಮ ಹಾದಿಯಲ್ಲಿ ಒಂದೊಂದೇ ನೆನಪಿನ ಪುಟಗಳು ತೆರೆದುಕೊಳ್ಳುತ್ತವೆ. ಜೀವನದಲ್ಲಿ ತುಂಬಾನೇ ಎಂಜಾಯ್ ಮಾಡುವ ವ್ಯಕ್ತಿತ್ವ ನಿಮ್ಮದಾಗಿದ್ದರೂ ಆ ಕ್ಷಣ ಮಾತ್ರ ನೀವೊಬ್ಬ ಭಾವುಕ ಜೀವಿಯಾಗ್ತೀರ. ಹಿಂದಿನ ಕ್ಷಣಗಳನ್ನು ನೆನಪು ಮಾಡಿಕೊಳ್ತೀರಾ..ಈ ಸಂದರ್ಭ ನಿಮ್ಮ ಮೈಂಡ್ ಸ್ವಲ್ಪ ರಿಲ್ಯಾಕ್ಸ್ ಆದ್ರೂ ಆಗಬಹುದು. ತರಲೆ, ಹುಚ್ಚಾಟ, ಜಗಳ ಎಲ್ಲದಕ್ಕೂ ಆ ಒಂದು ದಿನ ಬ್ರೇಕ್ ಬೀಳಬಹುದು. ನಿಮ್ಮಲ್ಲೂ ಒಬ್ಬ ಸಣ್ಣ ಚಿಂತಕನೋ ಭಾವುಕ ಜೀವಿಯೋ ಹುಟ್ಟಬಹುದು. <br />
ಏನೇ ಆದರೂ ಈ ಬಾರಿಯ ಆದಿತ್ಯವಾರ ನನಗಂತೂ ತುಂಬಾನೇ ಸ್ಪ್ಪೆಷಲ್ ಡೇ. ಬದುಕಿನ ಪ್ರತೀ ಕ್ಷಣದಲ್ಲೂ ``LIFE IS NOT EASY, SO I AM ALWAYS BUSY’ ಎನ್ನುವ ನಾನು ಈ ಸಂಡೇ ಮಾತ್ರ ಫ್ರೀಯಾಗಿದ್ದ. ಜಂಜಾಟಗಳಿಂದ ದೂರವಿದ್ದೆ. ಕಳೆದು ಹೋದ ನೆನಪಿನ ಬಳಿಗೆ ಹೋಗಿ ಜಸ್ಟ್ ರಿಲ್ಯಾಕ್ಸ್ ಆದೆ.<br />
THANKS TO THIS SUNDAY..........!<br />
<br /></div>
dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-14737284602945476582012-05-06T23:31:00.000-07:002012-05-06T23:37:17.272-07:00ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?<div dir="ltr" style="text-align: left;" trbidi="on">
<h3 class="singlePageTitle" style="color: red; text-align: left;">
ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ<span style="background-color: yellow;"></span>?</h3>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj8Ux6NHTgOI1LDu4mGUW1yWTMM9j2Q7HSq2aE41A2rWOC8tdOq04zJ9W1M-dWuQ2G81zlKCpvHq_-DF82kJHQfcMvwFvFSgO9f0Gtem79mxDn1T8FnYn6o026RvdeRJfiTG1xTmkJr4eE/s1600/Rc21KTJ3F4vIUqB.jpeg" imageanchor="1" style="margin-left: 1em; margin-right: 1em;"><img border="0" height="251" src="https://blogger.googleusercontent.com/img/b/R29vZ2xl/AVvXsEj8Ux6NHTgOI1LDu4mGUW1yWTMM9j2Q7HSq2aE41A2rWOC8tdOq04zJ9W1M-dWuQ2G81zlKCpvHq_-DF82kJHQfcMvwFvFSgO9f0Gtem79mxDn1T8FnYn6o026RvdeRJfiTG1xTmkJr4eE/s400/Rc21KTJ3F4vIUqB.jpeg" width="400" /></a></div>
<h2 class="singlePageTitle" style="color: red; text-align: left;">
<span class="postauthor"></span><span class="postdate"></span>
</h2>
<span class="postinfo"></span>
<br />
<div class="separator" style="clear: both; text-align: center;">
</div>
ಮೊನ್ನೆಯಷ್ಟೇ ಜಗತ್ತಿನ ಅತೀ ಶ್ರೀಮಂತ ದೇವಸ್ಥಾನ ಎನ್ನಲಾದ ತಿರುಪತಿಯಲ್ಲಿ ವಿವಾದವೊಂದು
ಸದ್ದು ಮಾಡಿತು. ಆಂಧ್ರದ ಮಾಜಿ ಮುಖ್ಯ ಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿಯ ಪುತ್ರ
ರಾಜಕೀಯ ಧುರೀಣ ಜಗನ್ಮೋಹನ್ ರೆಡ್ಡಿಯೇ ಈ ವಿವಾದದ ಕೇಂದ್ರ ಬಿಂದು. ಕ್ರೈಸ್ತ ಧರ್ಮೀಯ
ಜಗನ್ ತಿರುಪತಿ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕೆಲ ಕಟ್ಟುಕಟ್ಟಲೆಗಳನ್ನು ಪಾಲಿಸಿಲ್ಲ
ಎನ್ನುವುದೇ ಈಗಿರುವ ವಿವಾದ. ದೇವಸ್ಥಾನದ ಮೂಲಗಳ ಪ್ರಕಾರ ಅನ್ಯಧರ್ಮೀಯರು ತಿಮ್ಮಪ್ಪನ
ದರ್ಶನ ಪಡೆಯುವ ಮುನ್ನ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆಯಿದೆ, ಅಪಾರ ಭಕ್ತಿಯಿದೆ ಎಂದು
ಬರೆದುಕೊಟ್ಟು ಹೋಗಬೇಕೆಂತೆ! ಆದರೆ ಈ ಕಟ್ಟುಕಟ್ಟಲೆಗಳನ್ನು ಜಗನ್ ಪಾಲಿಸದೆ ವಿವಾದಕ್ಕೆ
ಗುರಿಯಾಗಿದ್ದಾರೆ. ಆದರೆ ಇಲ್ಲಿ ಜಗನ್ ವಿವಾದಕ್ಕಿಂತಲೂ ಹೆಚ್ಚಾಗಿ ಚಿಂತಿಸ ಬೇಕಾದ
ವಿಚಾರ ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ ಎನ್ನುವುದು. <br />
ನನ್ನ ಪ್ರಕಾರ ಮುಸ್ಲಿಮರ ಮಕ್ಕಾದಿಂದ ಹಿಡಿದು ಕ್ರೈಸ್ತರ ರೋಮ್ ಚರ್ಚಿನವರೆಗೆ ಎಲ್ಲರಿಗೂ
ಮುಕ್ತ ಪ್ರವೇಶವಿದೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದನ್ನು ಬಿಟ್ಟರೆ ದೇಶದ
ಬಹುತೇಕ ಚರ್ಚ್, ಮಸೀದಿಗಳಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ಯಾವುದೇ ರೀತಿಯ
ನಿರ್ಬಂಧವಿಲ್ಲ. ಈ ಮಾತನ್ನು ಆಯಾ ಧರ್ಮಗಳ ಧಾರ್ಮಿಕ ನಾಯಕರುಗಳೇ ಪುಷ್ಠೀಕರಿಸುತ್ತಾರೆ.
ಆದರೆ ಹಿಂದುಗಳ ಅತೀ ನಂಬಿಕೆಯ ಕ್ಷೇತ್ರವಾದ ತಿರುಪತಿಯಲ್ಲಿ ಮಾತ್ರ ಯಾಕೆ ಹೀಗೆ? ಅದು
ಕೂಡ ಲಿಖಿತವಾಗಿ ಬರೆದುಕೊಟ್ಟ ನಂತರವಷ್ಟೇ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕು
ಎನ್ನುವುದು ಎಷ್ಟು ಸರಿ? ಧರ್ಮ ಯಾವುದೇ ಆದರೂ ಕೆಲವರಿಗೆ ಬೇರೆ ಧರ್ಮದ ದೇವರಲ್ಲಿ ಅಪಾರ
ನಂಬಿಕೆ. ಈ ವೇಳೆ ಆ ದೇವರ ದರ್ಶನ ಪಡೆಯುವುದು ಸಾಮಾನ್ಯ. ಉದಾಹರಣೆಗೆ ಕ್ರೈಸ್ತರ
ಧಾರ್ಮಿಕ ಸ್ಥಳವಾದ ಕಾರ್ಕಳದ ಅತ್ತೂರು ಚರ್ಚ್ಗೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ
ಹಿಂದುಗಳ ಪಾಲು ಹೆಚ್ಚೇ ಎನ್ನಬಹುದು. ಇನ್ನು ಉಳ್ಳಾಲದ ಇತಿಹಾಸ ಪ್ರಸಿದ್ದ ದರ್ಗಾಕ್ಕೂ
ಹಿಂದುಗಳು ಭೇಟಿ ಕೊಡುತ್ತಾರೆ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಹಿಂದುಗಳ
ಶಬರಿಮಲೆಗೂ ಲಕ್ಷಾಂತರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಭೇಟಿ ಕೊಡುತ್ತಾರೆ. ಇಲ್ಲೂ
ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ತಿರುಪತಿಯಲ್ಲಿ ಈ ರೀತಿಯ ಕಟ್ಟುಕಟ್ಟಲೆಗಳನ್ನು
ರೂಪಿಸಲು ಕಾರಣ ಏನು ಎನ್ನುವುದೇ ತಿಳಿಯುತ್ತಿಲ್ಲ. <br />
ಹಿಂದೂ ಧರ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಪಡಿಸಬೇಕು, ನಮ್ಮ ಧರ್ಮ ಜಗತ್ತಿನಲ್ಲೇ
ಮಾದರಿ ಧರ್ಮವಾಗಬೇಕು ಎನ್ನುವ ನಮ್ಮಲ್ಲಿ ಇಂತಹ ಆಚರಣೆಗಳಿದ್ದರೆ ಹೇಗೆ ತಾನೆ ಹಿಂದು
ಧರ್ಮ ಜಗದ್ವಿಖ್ಯಾತವಾಗಲು ಸಾಧ್ಯ? ಹಿಂದು ಎನ್ನುವುದು ಧರ್ಮವಲ್ಲ, ಇದೊಂದು ಜೀವನ
ವಿಧಾನ. ನಮ್ಮ ಆಚರಣೆಗಳು ಕೂಡ ನಮ್ಮ ಜೀವನ ವಿಧಾನಗಳೇ. ಹೀಗಿರುವಾಗ ತಿರುಪತಿಯಲ್ಲಿ
ಆಚರಿಸಲ್ಪಡುತ್ತಿರುವ ಈ ಆಚರಣೆ ಹಿಂದೂ ವಿರೋಧಿಯಲ್ಲವೇ? ಈ ಬಗ್ಗೆ ಅಲ್ಲಿನ ಕೆಲವರು
ಅದೆಷ್ಟೋ ಕಾರಣಗಳನ್ನು ನೀಡಬಹುದು. ಅನ್ಯಧರ್ಮೀಯರು ನಮ್ಮ ಸಂಸ್ಕೃತಿ ಪಾಲಿಸುವುದಿಲ್ಲ,
ಅಶುದ್ದರಾಗಿ ದೇವಸ್ಥಾನ ಪ್ರವೇಶಿಸುತ್ತಾರೆ ಎನ್ನಬಹುದು. ಹಾಗೆಂದು ನಾವು
ತಿಮ್ಮಪ್ಪನನ್ನು ನಂಬುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟರೆ ಅನ್ಯಧರ್ಮೀಯರು
ಸಂಸ್ಕೃತಿ ಕಲಿಯುತ್ತಾರೆಯೇ? ಅಥವಾ ಪರಿಪೂರ್ಣ ಶುದ್ದರಾಗಿಯೇ ದೇವಸ್ಥಾನ ಪ್ರವೇಶಿಸಿದಂತಾ
ಗುತ್ತದೆಯೇ? ದೇವರ ಆರಾಧಕ ಕೇಂದ್ರಗಳು ಎಂದಿಗೂ ಇನ್ನೊಬ್ಬರ ಸ್ವತ್ತಲ್ಲ ಎನ್ನುವುದು
ನೆನಪಿರಲಿ. ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ
ಬರುತ್ತದೆ ಅನ್ನುವುದಾದರೆ ಇಂದಿಗೂ ನಮ್ಮ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಹಾಳುಗೆಡಹುವ
ಅದೆಷ್ಟೋ ವಿದ್ಯಮಾನಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯೇ ಅನಾಚಾರ
ನಡೆಸುತ್ತಿದೆ. ದೇವಸ್ಥಾನಗಳ ಜಗಳ ಬೀದಿಗೆ ಬಂದಿವೆ. ಅಷ್ಟೇ ಯಾಕೆ ವಿವಾದದ ಕೇಂದ್ರ
ಬಿಂದುವಾದ ತಿರುಪತಿಯಲ್ಲೇ ದೇವರ ದರ್ಶನದ ವಿಚಾರವಾಗಿ ಅದೆಷ್ಟೋ ಬಾರಿ ವಿವಾದಗಳೆದ್ದಿವೆ.
ಇಷ್ಟೆಲ್ಲಾ ಅನಾಚಾರಗಳು ದೇವಸ್ಥಾನದ ಅಂಗಳದಲ್ಲೇ ನಡೆದರೆ ದೇವಾಲಯದ ಪಾವಿತ್ರ್ಯತೆಗೆ
ಧಕ್ಕೆ ಬರುವುದಿಲ್ಲವೇ? ಒಂದು ವೇಳೆ ಇದರಿಂದ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ
ಅನ್ಯಧರ್ಮೀಯರ ಪ್ರವೇಶಕ್ಕೆ ತಿರುಪತಿಯಲ್ಲಿ ಅನುಸರಿಸುವ ನಿಯಮಗಳ ಬಗ್ಗೆ ನನ್ನ
ಸಹಮತವಿದೆ. <br />
ಇಂತಹ ಪದ್ದತಿ ತಿರುಪತಿಯಲ್ಲಿ ಮುಂದುವರೆದರೆ ವಿದೇಶಿಗರಿಗೆ ಜಗತ್ತಿನ ಅತೀ ಶ್ರೀಮಂತ
ದೇವಾಲಯವನ್ನು ನೋಡುವ ಅವಕಾಶವೇ ತಪ್ಪಿ ಹೋಗಬಹುದು. ಇದರಿಂದ ಮುಂದೆ ನಮ್ಮ
ಪ್ರವಾಸೋದ್ಯಮಕ್ಕೂ ಏಟು ಬೀಳಬಹುದು. ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ
ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು
ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್ನನ್ನು ನಂಬುತ್ತೇನೆ ಎಂದು ಬರೆದು
ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ
ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ. ಆದರೆ ಎಂದೂ ಅನ್ಯಧಮೀಯರ
ಪ್ರವೇಶವನ್ನು ಇವರು ನಿರ್ಬಂಧಿಸಿಲ್ಲ. ಬಹುಶಃ ಹೀಗಾಗಿಯೋ ಏನೋ ಜಗತ್ತಿನಲ್ಲೇ ಕ್ರೈಸ್ತ
ಧರ್ಮ ಅತೀ ದೊಡ್ಡ ಧರ್ಮವಾಗಿ ಬೆಳೆದಿರುವುದು. <br />
ಹಿಂದೂಗಳಿಗೆ ನಮ್ಮದೇ ಆದ ಕೆಲವೊಂದು ಆಚರಣೆಗಳು, ಧಾರ್ಮಿಕ ನಂಬಿಕೆಗಳು ಇದೇ
ಎನ್ನುವುದೇನೋ ಸರಿ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಇತರೆ ಧರ್ಮೀಯರ ದೇವಸ್ಥಾನ
ಪ್ರವೇಶಕ್ಕೆ ಲಿಖಿತ ಕಟ್ಟುಕಟ್ಟಲೆಗಳನ್ನು ವಿಧಿಸುವುದು ಸರಿಯಲ್ಲ. ಈಗಾಗಲೇ ತಿರುಪತಿ
ಎನ್ನುವುದು ಹಣದ ಹೊಳೆ ಹರಿಸುವ ಧಾರ್ಮಿಕ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ನಂಬಿಕೆ,
ಭಕ್ತಿ, ಪೂಜೆಗೆ ಜಾಗವಿರುವುದು ಕೆಲವೇ ಸಕೆಂಡ್ಗಳಷ್ಟೇ. ಹೀಗಿರುವಾಗ ತಿಮ್ಮಪ್ಪನ
ಸನ್ನಿಧಾನದಲ್ಲಿ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ದೇವರ ಹೆಸರು ಕೆಡಿಸುವುದು
ಎಷ್ಟು ಸರಿ? <br />
ಹಿಂದು ಎಂಬ ಜೀವನ ವಿಧಾನವನ್ನು ಅನ್ಯಧರ್ಮಿಯರು ಆಚರಿಸಲಿ ಎಂದು ನಾವು ಹೇಳುವುದಿಲ್ಲ.
ಅವರಾಗಿಯೇ ಇಷ್ಟಪಟ್ಟರೆ ವಿರೋಧಿಸುವವರೂ ಹಿಂದುಗಳಲ್ಲ. ಹೀಗಿರುವಾಗ ತಿರುಪತಿಯ
ಘಟನೆಯನ್ನು ಹಿಂದುಗಳು ಖಂಡಿಸಲೇ ಬೇಕು. ರಾಮನಿಗೆ ರಾಮಮಂದಿರ ಕಟ್ಟಿ, ಜಗತ್ತಿಗೇ ಹಿಂದೂ
ಧರ್ಮದ ಬಗ್ಗೆ ಸಾರಿ ಹೇಳಲು ಹೊರಟ ನಮಗೆ ಇಂಥ ಆಚರಣೆಗಳ ಅವಶ್ಯಕತೆ ಖಂಡಿತಾ ಇಲ್ಲ.<br />
<h3 style="text-align: center;">
<span style="color: yellow;">ಧ್ವನಿ </span></h3>
</div>dhwanihttp://www.blogger.com/profile/02264839456762759901noreply@blogger.com1tag:blogger.com,1999:blog-4114398660755618556.post-11326242741108780632012-05-02T10:49:00.001-07:002012-05-02T10:49:09.111-07:00ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?<div dir="ltr" style="text-align: left;" trbidi="on">
<h2 style="text-align: left;">
<span style="color: red;">ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?</span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhNQKJRgTTJFkMgKhYYB76xK_F-dvM5Tkjz7gFOQG42Mu6p-qYUhkAmp17NxQ4fUA5jXx62gYQs5QZNb6EMelmLelssIY5_R2Mnombm_WNrpZjEUYxJPdGYxmKkxS1b7ENNQ2-7w3D7ckg/s1600/labour.jpg" imageanchor="1" style="margin-left: 1em; margin-right: 1em;"><img border="0" height="262" src="https://blogger.googleusercontent.com/img/b/R29vZ2xl/AVvXsEhNQKJRgTTJFkMgKhYYB76xK_F-dvM5Tkjz7gFOQG42Mu6p-qYUhkAmp17NxQ4fUA5jXx62gYQs5QZNb6EMelmLelssIY5_R2Mnombm_WNrpZjEUYxJPdGYxmKkxS1b7ENNQ2-7w3D7ckg/s400/labour.jpg" width="400" /></a></div>
<h2 style="text-align: left;">
<span style="color: red;"> </span></h2>
<div style="text-align: left;">
ಕಾಮರ್ಿಕರ ಹಕ್ಕುಗಳನ್ನು ಎಚ್ಚರಗೊಳಿಸಿದ, ಕಾಮರ್ಿ ಕರಿಗೂ ಒಂದು ಆಚರಣೆಯನ್ನು ಕಲ್ಪಿಸಿಕೊಟ್ಟ ದಿನವೆಂದರೆ ಅದು ಕಾಮರ್ಿಕ ದಿನ. ಬಹುಶಃ ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿ ಕಾಮರ್ಿಕ ದಿನದ ಆಚರಣೆ ನಡೆದೇ ನಡೆಯು ತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಮರ್ಿಕ ದಿನವೆಂ ಬುದು ನೈಜ ಶ್ರಮಿಕ ವರ್ಗದಿಂದ ದೂರವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಕಾಮರ್ಿಕ ದಿನದಂದು ಇರುವ ಸಕರ್ಾರಿ ರಜಾ ದಿನಗಳ ಬಿಡುವು ಕೂಡ ಮೈ ಬಗ್ಗಿಸಿ ದುಡಿಯುವ ಶ್ರಮಿಕ ವರ್ಗಕ್ಕೆ ಸಿಗುತ್ತಿಲ್ಲ. ಬದಲಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕಾಲ ಮೇಲೆ ಕಾಲು ಹಾಕಿ ದಿನಕ್ಕೆ ಇಂತಿಷ್ಟೇ ಎಂದು ಕೆಲಸ ಮಾಡುವ ಒಂದು ಐಶಾ ರಾಮಿ ವರ್ಗ ಮೇ ದಿನದ ಮಜಾ ಅನುಭವಿಸುತ್ತಿದೆ. ಇದು ಇಂದು ನಿನ್ನೆಯ ವಿಚಾರವಲ್ಲ. ಸರಿಸುಮಾರು ವರ್ಷಗಳಿಂದ ನೈಜ ಶ್ರಮಿಕ ವರ್ಗ ಮೇ ದಿನದ ಅಂದರೆ ತನ್ನದೇ ದಿನದ ಆಚರಣೆಯಿಂದ ವಂಚಿತವಾಗುತ್ತಿದೆ. <br />ದಿನಕ್ಕೆ ಎಂಟು ಘಂಟೆ ಕೆಲಸಕ್ಕೆ ಆಗ್ರಹಿಸಿ ಆರಂಭ ವಾದ ಶ್ರಮಿಕ ವರ್ಗದ ಹೋರಾಟಕ್ಕೆ ಮೇ ದಿನ(ಕಾಮರ್ಿಕ ದಿನ) ಒಂದು ದಿನವಷ್ಟೇ. ಈ ದಿನದಲ್ಲಾದರೂ ಕಾಮರ್ಿ ಕರು ತಮ್ಮ ನಿತ್ಯದ ಹೋರಾಟದ ಬದುಕನ್ನು ಬದಿಗಿಟ್ಟು ತನ್ನ ಭವಿಷ್ಯದ ಬಗ್ಗೆ ಚಿಂತಿಸಲಿ ಎನ್ನುವುದೇ ಈ ದಿನದ ಆಶಯ. ಆದರೆ ಈ ಆಶಯಗಳೇ ಇಂದು ಸಾಕಾರಗೊಳ್ಳು ತ್ತಿಲ್ಲ. ವರ್ಷಪೂತರ್ಿ ದುಡಿಯುವ ಕಾಮರ್ಿಕ ವರ್ಗ ಈ ದಿನವೂ ಬೆವರಿಳಿಸಿ ದುಡಿಯಬೇಕಾದ ಅನಿವಾರ್ಯತೆ ಒದ ಗಿದೆ. ಅನ್ನ ಹಾಕುವ ಒಡೆಯನ ಆಜ್ಞೆಗಳನ್ನು ಮೀರಿ ಮೇ ದಿನದ ನೆಪದಲ್ಲಿ ರಜಾ ಹಾಕಿದರೆ ಪ್ರತೀ ದಿನವೂ ಮೇ ದಿನವಾಗುವುದರಲ್ಲ್ಲಿ ಸಂದೇಹವಿಲ್ಲ. ಶ್ರಮಿಕ ವರ್ಗದ ಮೇಲೆ ಇಂತಹ ಅದೆಷ್ಟೋ ದೌರ್ಜನ್ಯಗಳು ಧನಿಕರಿಂದ ನಡೆಯು ತ್ತಲೇ ಇದೆ. ಎಂಟು ಘಂಟೆ ಕೆಲಸ ಮಾಡಬೇಕಾದ ಕಾಮರ್ಿಕ ಹತ್ತರಿಂದ ಹದಿನೈದು ಘಂಟೆ ದುಡಿಯುವುದೂ ಇದೆ. <br />ಇದನ್ನು ವಿರೋಧಿಸಿದರೆ ಮುಂದಿನ ಭವಿಷ್ಯವೇ ಕತ್ತಲಾಗು ವುದು ನಿಶ್ಚಿತ. ಇನ್ನು ಕಾಮರ್ಿಕರಿಗೆ ದೊರಕಬೇಕಾದ ಸವ ಲತ್ತುಗಳು ಎನ್ನುವುದು ಮರೀಚಿಕೆಯೇ ಸರಿ. ಪಿಎಫ್, ಇಎಸ್ ಐನಂತಹ ಬಡ ಶ್ರಮಿಕ ವರ್ಗದ ಆಸರೆ ಯೋಜನೆಗಳು ಇಂದು ಎಷ್ಟು ಮಂದಿ ಕಾಮರ್ಿಕರಿಗೆ ಸಿಗುತ್ತಿದೆ? ಇಂತಹ ಯೋಜನೆಗಳ ಲಾಭ ಪಡೆಯುವುದು ತಿಂಗಳಿಗೆ 60-70ಸಾವಿರ ಸಂಬಳ ಪಡೆಯುವ ಉದ್ಯೋಗಿಗಳೇ ಹೊರತು ದಿನಪೂತರ್ಿ ಬಿಸಿಲಿನ ಬೇಗೆಗೆ ಬೆವರಿಳಿಸಿ ದುಡಿಯುವ ಕಾಮರ್ಿಕರಲ್ಲ. ಮೊನ್ನೆ ಯಷ್ಟೇ ಫೇಸ್ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಇದೇ ಕಾಮರ್ಿಕ ದಿನದ ಶುಭಾಶಯದ ಗ್ರೀಟಿಂಗ್ಸ್ ಒಂದು ನನ್ನನ್ನು ಚಿಂತನೆಗೆ ಹಚ್ಚಿತು. ಸೂಟು-ಬೂಟು ಹಾಕಿಕೊಂಡ ವ್ಯಕ್ತಿಯೊಬ್ಬ ಬಡ ಕಾಮರ್ಿಕನೊಬ್ಬನ ಬೆನ್ನ ಮೇಲೆ ನಿಂತು ಕಾಮರ್ಿಕ ದಿನದ ಶುಭಾಶಯ ಕೋರುವ ಬ್ಯಾನರ್ ಹಾಕುವ ಚಿತ್ರವದು. ಈ ಚಿತ್ರವೇ ಸೂಚಿಸುವಂತೆ ಇಂದಿಗೂ ಕಾಮರ್ಿಕ ವರ್ಗವನ್ನು ಎಷ್ಟು ಕೀಳಾಗಿ ಕಾಣಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಆದರೆ ನಮ್ಮ ಕೆಲ ಫೇಸ್ಬುಕ್ ಪ್ರಿಯರಿಗೆ ಇದರ ನೈಜ ಅರ್ಥವನ್ನು ತಿಳಿದುಕೊಳ್ಳುವ ಸಾವಧಾನವಂತು ಇಲ್ಲವೇ ಇಲ್ಲ. ಒಂದೇ ಸಮನೆ ಕಮೆಂಟ್ಸ್ಗಳ ಮೇಲೆ ಕಮೆಂಟ್ಸ್, ಲೈಕ್ಗಳ ಮೇಲೆ ಲೈಕ್! ನಿಜಕ್ಕೂ ವಿಪಯರ್ಾಸ ಅಂದ್ರೆ ಇದೇ ಇರಬೇಕು. <br />ಲವರ್ಸ್ ಡೇ, ಫ್ರೆಂಡ್ಶಿಪ್ ಡೇ, ಮದರ್ಸ್ ಡೇಗಳಂತೆ ಶ್ರಮಿಕ ವರ್ಗದ ಕಾಮರ್ಿಕ ದಿನವೂ ಐಶಾರಾಮಿ ಜನರ ಮಜಾ ಉಡಾಯಿ ಸುವ, ಶುಭಾಶಯ ಕೋರುವ ದಿನವಾಗಿ ಬದಲಾಗುತ್ತಿದೆ. ಯಾವ ಉದ್ದೇಶಗಳ ಈಡೇರಿಕೆಗಾಗಿ ಈ ದಿನವನ್ನು ಆಚರ ಣೆಗೆ ತರಲಾಯಿತೋ ಅದು ಇಂದು ಈಡೇರುತ್ತಿಲ್ಲ. ಈ ದಿನವಾ ದರೂ ಸ್ವಲ್ಪ ಬಿಡುವು ಮಾಡಿಕೊಳ್ಳಬೇಕಾದ ಬಡ ಶ್ರಮಿಕ ವರ್ಗ ಚಾಚೂ ತಪ್ಪದೇ ಬೆವರಿಳಿಸುತ್ತಿದೆ. ಆದರೆ ತಿಂಗಳಿಗೆ ಸಾವಿರಾರು ರುಪಾಯಿ ಎಣಿಸುವ ಉದ್ಯೋಗಿಗಳು ಮಾತ್ರ ಮೇ ದಿನದ ಹೆಸರಿನಲ್ಲಿ ರಜಾದ ಮಜಾ ಅನುಭವಿಸಿ ಪಾಕರ್್, ಬೀಚ್ ಸುತ್ತುತ್ತಿದ್ದಾರೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಮೇ ದಿನ ಐಶಾರಾಮಿ ಜನರ ಸ್ವತ್ತಾಗಿ ಹೋದರೂ ಪರವಾಗಿಲ್ಲ. ಯಾಕೆಂದರೆ ಅಲ್ಲಿನ ಪ್ರತೀ ಶ್ರಮಿಕ ವರ್ಗವು ಒಂದು ಹಂತಕ್ಕೆ ಐಶಾರಾಮಿಗಳೇ. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿನ ಶ್ರಮಿಕ ವರ್ಗಕ್ಕೆ ಐಶಾರಾಮ ಎನ್ನುವುದು ಕೇವಲ ಕನಸು ಮಾತ್ರ. ಹೀಗಿರುವಾಗ ತಮ್ಮ ಹಕ್ಕುಗಳನ್ನು ಪ್ರತಿಪಾದಿ ಸಲು ಇರುವ ಏಕೈಕ ದಿನವೂ ಕಾಮರ್ಿಕರಿಂದ ಕಳೆದು ಹೋಗು ತ್ತಿರುವುದು ವಿಪಯರ್ಾಸ. ಬಹುಶಃ ಇಂತಹ ವಿದ್ಯಮಾನ ಭಾರ ತದಲ್ಲಿ ಮಾತ್ರ ಘಟಿಸಲು ಸಾಧ್ಯ!<br />ಕಾಮರ್ಿಕರ ಹೋರಾಟಕ್ಕೆ ಧ್ವನಿಯಾಗಿ ಅದೆಷ್ಟೋ ಸಂಘ ಟನೆಗಳಿದ್ದರೂ ಅದು ತನ್ನ ನೈಜ ಉದ್ದೇಶಕ್ಕಾಗಿ ಹೋರಾಡು ತ್ತಿಲ್ಲ. ಬದಲಾಗಿ ತನ್ನ ಎಡಪಂಥೀಯ ಧೋರಣೆಗಳ ಅನುಷ್ಠಾ ನಕ್ಕಾಗಿಯೇ ಶ್ರಮಿಸುತ್ತಿದೆ. ಈ ಹಿಂದೆ ಕೇರಳ, ಪಶ್ಚಿಮ ಬಂಗಾಳ ದಂತಹ ರಾಜ್ಯಗಳಲ್ಲಿ ಕಾಮರ್ಿಕರ ಹಿತಾಸಕ್ತಿಯ ರಕ್ಷಣೆಗೆ ಹೋರಾಟಗಳು ನಡೆಯುತ್ತಿತ್ತಾದರೂ ಅದು ಸಾಕಾರಗೊಳ್ಳು ತ್ತಿರಲಿಲ್ಲ. ಹೋರಾಟಗಳು ಬಂದ್, ಗಲಾಟೆ, ಪ್ರತಿಭಟನೆಗ ಳಲ್ಲೇ ಕಳೆದು ಹೋಗುತ್ತಿದ್ದವು. ಇಂದಿಗೂ ಕೆಲ ರಾಜ್ಯಗಳಲ್ಲಿ ಈ ಚಿತ್ರಣ ಬದಲಾಗಿಲ್ಲ. ಇನ್ನು ನಮ್ಮ ಸಕರ್ಾರ ಕಾಮರ್ಿಕರಿ ಗಾಗಿ ರೂಪಿಸುವ ಯೋಜನೆಗಳಂತೂ ಹಳ್ಳ ಹಿಡಿಯುತ್ತಿವೆ. ಏನೇ ಮಾಡಿದರೂ ಭಾರತದಂತ ರಾಷ್ಟ್ರದಲ್ಲಿ ಕಾಮರ್ಿಕ ವರ್ಗ ಎನ್ನುವುದು ಮೇಲೆ ಬರುವುದು ಕನಸಿನ ಮಾತೇ ಸರಿ. ತಂತ್ರ ಜ್ಞಾನಗಳು ಕಾಮರ್ಿಕರ ಕೆಲಸವನ್ನು ಕಿತ್ತುಕೊಳ್ಳುವ ಈ ದಿನಗ ಳಲ್ಲಿ ಶ್ರೀಮಂತ ವರ್ಗವೂ ಬಡ ಶ್ರಮಿಕನ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎನ್ನುವುದು ಅಷ್ಟೇ ಸತ್ಯ.<br /> </div>
</div>dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-75280345301035387742012-05-01T10:58:00.002-07:002012-05-01T11:00:51.437-07:00ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ<h2 style="color: yellow;">
ಪ್ರತೀ ಮನುಷ್ಯನೂ ತನ್ನ ಮನಸ್ಥಿತಿಯ ಮೇಲೆ ಸವಾರಿ ಮಾಡ್ತಾನೆ</h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjRxpc0LZHDlILEk_Haa_PiZLYA_cNRLmWd0VP7_ZSmIuFGKSEq3duB2K79lJyMClM2ejOE8roQ0gt6ioeIYNF3IcnuWC-_CZ7R26vE-PeJUpmeobyEYR0o_67IAUGMtKroJ8E_p85oAcI/s1600/bullet-gun-blood-murder-640x480.jpg" imageanchor="1" style="margin-left: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEjRxpc0LZHDlILEk_Haa_PiZLYA_cNRLmWd0VP7_ZSmIuFGKSEq3duB2K79lJyMClM2ejOE8roQ0gt6ioeIYNF3IcnuWC-_CZ7R26vE-PeJUpmeobyEYR0o_67IAUGMtKroJ8E_p85oAcI/s320/bullet-gun-blood-murder-640x480.jpg" width="320" /></a></div>
ನಾನು ಪತ್ರಿಕೆಯಲ್ಲಿ ಕೆಲಸ ಮಾಡುವವನು. ಅದರಲ್ಲೂ ನಮ್ಮ ಪತ್ರಿಕೆಯಲ್ಲಿ ಕ್ರೈಂ ಸುದ್ದಿಗಳಿಗೆ ಮೊದಲ ಆದ್ಯತೆ. ಹೆಚ್ಚೆಂದರೆ ವಾರಕ್ಕೆ ಎರಡು ಮರ್ಡರ್ ಕಥಾನಕವಾದ್ರೂ ನಮ್ಮ ಪತ್ರಿಕೆಯಲ್ಲಿ ಲೀಡ್ ಆಗುತ್ತೆ. ಪತ್ರಿಕೆಯ ಕೆಲಸಕ್ಕೆ ಸೇರಿದಾಗ ಇಂತಹ ನ್ಯೂಸ್ಗಳನ್ನು ಎಡಿಟ್ ಮಾಡೋಕೆ ಅಂತ ಕುಳಿತರೇನೆ ಒಮ್ಮೆ ಬೆಚ್ಚಿ ಬೀಳ್ತಿದ್ದೆ. ಯಾಕೆಂದರೆ ಕೆಲವೊಂದು ಕೊಲೆಗಳೇ ಅಷ್ಟು ಭಯಾನಕವಾಗಿರುತ್ತೆ. ಆದ್ರೆ ಅನುಭವ ಮನುಷ್ಯನನ್ನೇ ಬದಲಾಯಿಸುತ್ತೆ ಅನ್ನೋ ಹಾಗೆ, ಒಂದೇ ತಿಂಗಳಲ್ಲಿ ನಾನು ಇಂತಹ ಕ್ರೈಂ ಸುದ್ದಿಗಳಿಗೆ ಹೊಂದಿಕೊಂಡು ಬಿಟ್ಟಿದ್ದೆ. ಆದ್ರೂ ಕೊಲೆಗಾರ ಎಷ್ಟು ಕ್ರೂರಿ ಅಲ್ವಾ ಅನ್ನೋದು ನಾನು ಪ್ರತೀ ರಿಪೋಟರ್್ಗಳನ್ನು ತಿರುವಿ ಹಾಕಿದಾಗ ನನಗೆ ಸ್ಪಷ್ಟವಾಗ್ತಾ ಇತ್ತು. <br />
ಸುಮಾರು ವರ್ಷಗಳ ಹಿಂದೆ ಮನೆಯಲ್ಲಿ ಕ್ರೈಂ ಸ್ಟೋರಿ ನೋಡ್ತಾ ಇದ್ದೆ. ಆಗ ಅಲ್ಲೊಂದು ಬೆಚ್ಚಿ ಬೀಳಿಸುವ ಮರ್ಡರ್ ಮಿಸ್ಟರಿ ಪ್ರತ್ಯಕ್ಷವಾಯಿತು. ಚಿಕ್ಕಂದಿನಲ್ಲಿ ಸಹಜವಾಗಿಯೇ ಕುತೂಹಲ ಇದ್ದದ್ದೇ. ಆದರೆ ಅದನ್ನು ನೋಡಿ ಮಲಗಿದ್ದ ನಾನು ಮಧ್ಯರಾತ್ರಿ ಹನ್ನೆರಡು ಘಂಟೆಗೆ ಬೆಚ್ಚಿ ಬಿದ್ದಿದ್ದೆ. ಯಾಕೆಂದರೆ ಹಾಗಿತ್ತು ಆ ಕೊಲೆ! ಆವಾಗಿಂದ ಕೊಲೆಗಾರ ಎಷ್ಟು ಕ್ರೂರಿಯಲ್ವಾ ಅಂತ ನನ್ನಲ್ಲೇ ನಾನು ಪ್ರಶ್ನೆ ಮಾಡ್ತೇನೆ. ಅದೆಷ್ಟೋ ಮಂದಿ ಸಿಗದ ಪ್ರೀತಿಗಾಗಿ, ಮಾನವೀಯ ಸಂಬಂಧಕ್ಕಾಗಿ, ಭಾವನೆಗಳನ್ನು ಹಂಚಿಕೊಳ್ಳುವ ಜೀವಕ್ಕಾಗಿ ಕಾಯ್ತಾ ಇರ್ತಾರೆ. ಆದ್ರೆ ಕೆಲ ಹಂತಕರಿಗೆ ಇದೆಲ್ಲಾ ಬೇಡವಾ? ಅಥವಾ ಇವೆಲ್ಲವನ್ನ ಅನುಭವಿಸಿದ ನಂತರವೇ ಅವರೊಳಗಿನ ಹಂತಕ ಜಾಗೃತನಾಗ್ತಾನಾ? ಕೆಲವೊಂದು ಕೊಲೆಯ ಹಿಂದಿನ ಪುಟಗಳನ್ನು ಬಿಚ್ಚಿಟ್ಟರೆ ಇಂತಹ ಸಾಧ್ಯತೆಗಳು ನಿಚ್ಚಳಲವಾಗಿರುತ್ತೆ.<br />
ನಮ್ಮೂರಲ್ಲಿ ಒಂದು ಪದ್ದತಿಯಿದೆ. ಪತ್ತನಾಜೆ ಎಂಬ ದಿನ ಜಾಗಕ್ಕೆ ರಕ್ತ ಕೊಡುವ ನೆಪದಲ್ಲಿ ಕೋಳಿಗಳನ್ನು ಕೊಯ್ಯಲಾಗುತ್ತೆ. ಇದು ಹಿಂದಿನಿಂದಲೂ ತುಳುನಾಡಿನಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ನಮ್ಮ ಮನೆಯಲ್ಲೂ ಈ ಸಂಪ್ರದಾಯ ಯಥಾವತ್ತಾಗಿ ನಡೀತಾ ಇತ್ತು. ಆಗೆಲ್ಲಾ ನಾವು ಚಿಕ್ಕವರಾಗಿದ್ದ ಕಾರಣ ಪಕ್ಕದ ಮನೆಯವರು ಬಂದು ಕೋಳಿಯ ಕತ್ತು ಕಡಿದು ರಕ್ತ ಅಪರ್ಿಸ್ತಾ ಇದ್ರೂ. ನಾನು ಅದನ್ನು ನೋಡಿ ಬೆಳದಿದ್ದೆನೆ ವಿನಃ ಅದರ ಪ್ರಯೋಗವನ್ನು ನಾನು ಮಾಡಿರಲಿಲ್ಲ. ಆದ್ರೆ ನಾನು ದೊಡ್ಡವನಾದ ಮೇಲೆ ನೆರೆಮನೆಯವರನ್ನು ಕರೆಯೋದು ಬೇಡವೆಂದು ನನ್ನ ಅಜ್ಜಿ ನನ್ನಿಂದಲೇ ಕೋಳಿಯ ಕತ್ತು ಕುಯ್ಯಲು ಹೇಳಿದರು. ಅಂದು ಹೇಗೋ ಕೈ ನಡುಗುತ್ತಾ ಒಲ್ಲದ ಮನಸ್ಸಿನಿಂದ ಕೆಲಸ ಮುಗಿಸಿದೆ. ಆದರೆ ಅದೇ ಕೊನೆ ಅಂದಿನಿಂದ ನಮ್ಮ ಮನೆಯಲ್ಲಿ ಅಂತಹ ಸಂಪ್ರದಾಯಕ್ಕೆ ನಾನಾಗಿಯೇ ತಾತ್ಕಾಲಿಕ ಅನ್ನೋ ಹಾಗೆ ಬ್ರೇಕ್ ಹಾಕಿದ್ದೇನೆ. ಯಾಕೋ ಗೊತ್ತಿಲ್ಲ? ಹಿಂಸೆಗೂ ನನಗೂ ಮಾರುದ್ದ ದೂರ. ಪ್ರೀತಿ ವಿಚಾರದಲ್ಲಿ, ಒಬ್ಬರನ್ನು ತುಂಬಾ ಹಚ್ಚಿಕೊಳ್ಳೋದರಲ್ಲಿ ತುಂಬಾ ಅಂದ್ರೆ ತುಂಬಾ ಹತ್ತಿರ. ಆಗೆಲ್ಲಾ ನಾನು ಒಂದು ವಿಚಾರವನ್ನು ಪದೇ ಪದೇ ಯೋಚನೆ ಮಾಡ್ತೇನೆ. ಮನುಷ್ಯತ್ವದ ಪರಿಚಯವೇ ಇಲ್ಲದ ರೀತಿಯಲ್ಲಿ ಕೊಲೆ ಮಾಡುವ ಹಂತಕನ ಮನಸ್ಥಿತಿ ಹೇಗಿರಬೇಡ ಅಂತ. ಆದ್ರೂ ಹಂತಕ ಗ್ರೇಟ್! ಆತ ಆತನ ಮನಸ್ಥಿತಿಯೇ ಮೇಲೆಯೇ ಸವಾರಿ ಮಾಡ್ತಾನೆ. ಒಂದು ಜೀವವನ್ನು ಅನಾಮತ್ತಾಗಿ ಕೊಂದು ಬಿಡುವ ತಾಕತ್ತು ಹಂತಕನಲ್ಲಿ ಜಾಗೃತವಾಗೋದು ಯಾವಾಗ ಅನ್ನೋದು ಕೂಡ ಅಷ್ಟು ಸುಲಭವಾಗಿ ಹೇಳೋಕೆ ಬರೋದಿಲ್ಲ. <br />
ಮೊನ್ನೆ ಮೊನ್ನೆ ಜೀ ಟಿವಿಯಲ್ಲಿ ಜೋಗಿ ಸಿನಿಮಾ ನೋಡಿದೆ. ಬಹುಶಃ ಈ ಸಿನಿಮಾವನ್ನು ನಾನು ನೋಡ್ತಾ ಇರೋದು ಹತ್ತನೇ ಬಾರಿ ಇರಬಹುದೋ ಏನೋ? ಸೆಂಟಿಮೆಂಟ್ಗಳಿಗೆ ತೀರಾ ಹೆಚ್ಚೇ ಎನ್ನುವಷ್ಟು ಬೆಲೆ ಕೊಡುವ ನನಗೆ ಈ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ಆದರೆ ಇಲ್ಲೂ ಮಚ್ಚು-ಲಾಂಗುಗಳ ಆರ್ಭಟ ನೋಡಿದಾಗ ಪಾತಕ ಲೋಕದ ಭಯಾನಕತೆಯ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸ್ತೇನೆ. ಹಿಂದೊಮ್ಮೆ ನನ್ನ ತೀರಾ ಹತ್ತಿರದ ಹಿತೈಷಿ ಎನ್ನಬಹುದಾದ ವ್ಯಕ್ತಿಯೊಬ್ಬರು ಅಗ್ನಿ ಶ್ರೀಧರ್ ಎಂಬ ಅಂಡರ್ವಲ್ಡರ್್ ಲೇಖಕನ `ಎದೆಗಾರಿಕೆ ಎಂಬ ಪುಸ್ತಕ ಕೊಟ್ಟಿದ್ರೂ. ಕ್ರೈಂ ಅಂದ್ರೇನೆ ಅಷ್ಟಕ್ಕಷ್ಟೇ ಅಂತಿದ್ದ ನಾನು ಅಂದು ಮಾತ್ರ ಒಂದೇ ಉಸಿರಿಗೆ ಆ ಪುಸ್ತಕ ಓದಿ ಮುಗಿಸಿದೆ. ಯಾಕೆಂದರೆ ಎಲ್ಲೂ ನಿಲ್ಲಿಸೋಕೆ ಅವಕಾಶವೇ ಕೊಡದ ಹಾಗೆ ಅಗ್ನಿ ತಮ್ಮ ಕೈ ಚಳಕವನ್ನು ಈ ಪುಸ್ತಕದ ಪ್ರತೀ ಪುಟದಲ್ಲೂ ತೋರಿಸಿದ್ದಾರೆ. ಮುಂದೆ ಈ ಪುಸ್ತಕ ಸಿನಿಮಾ ಆಗುತ್ತೆ ಅನ್ನೋ ಸುದ್ದಿ ಇದೆ. ಅದೇ ಲಾಸ್ಟ್........ಆನಂತರ ನಾನು ಪಾತಕ ಲೋಕದ ಮಿಸ್ಟರಿಯನ್ನು ಓದಲೇ ಇಲ್ಲ.....<br />
ಪಕ್ಕಾ ಸೆಂಟಿಮೆಂಟಲ್ ಆದ ನಾನು ಓದುವ ಪುಸ್ತಕಗಳು ಕೂಡ ಹಾಗೆ ಇರುತ್ತೆ. ಅಷ್ಟೇ ಯಾಕೆ ನನ್ನ ಮೊಬೈಲ್ನಲ್ಲಿರೋ ಸಾಂಗ್, ನಾನಿಷ್ಟ ಪಡೋ ಫಿಲ್ಮ್ ಎಲ್ಲಾನೂ ಪಕ್ಕಾ ಎಮೋಷನಲ್. ಆದ್ರೆ ಕೆಲವೊಮ್ಮೆ ತೀರಾ ಧೀರ್ಘವಾಗಿ ಯೋಚನೆ ಮಾಡೋದು ಮಾತ್ರ ಕ್ರೈಂ ಘಟನೆಗಳ ಬಗ್ಗೆ. ಅದರಲ್ಲೂ ಕೊಲೆಗಾರನ ಮನಸ್ಥಿತಿಯ ಬಗ್ಗೆ........<br />
ಮನುಷ್ಯ ಹುಟ್ಟೋವಾಗ ಅಳ್ತಾನೆ ಹುಟ್ತಾನೆ....ಹೋಗೋವಾಗ ಬೇರೆಯವರನ್ನು ಅಳಿಸ್ತಾ ಹೋಗ್ತಾನೆ. ಅದರ ಮಧ್ಯೆ ತಾನೂ ನಗ್ತಾ...ತನ್ನ ಸುತ್ತಲಿನವರನ್ನೂ ನಗಿಸ್ತಾ ಇದ್ರೆ ಅದೇ ಜೀವನ ಅನ್ನೋದು ನಾನು ಕಂಡು ಕೊಂಡ ಸತ್ಯ. ಆದರೆ ನಿರಂತರ ಕೊಲೆಗಳಲ್ಲೇ ಕಾಲ ಕಳೆಯುವವರಿಗೆ ನಗು ಅನ್ನೋದೆ ಗೊತ್ತಿಲ್ವಾ? ಇವರ ಮನಸ್ಥಿತಿ ಇಷ್ಟು ಕ್ರೂರವಾಗಲು ಕಾರಣವಾದರೂ ಏನಿರಬಹುದು? ಬಹುಶಃ ಇದೊಂದು ಉತ್ತರವಿಲ್ಲದ ಪ್ರಶ್ನೆ ಅನ್ನಬಹುದೇನೋ?<br />
ಫ್ರೆಂಡ್ಸ್, ಇಷ್ಟೆಲ್ಲಾ ಹೇಳೋದಕ್ಕೂ ಕಾರಣ ಇದೆ....<br />
ಒಮ್ಮೆ ಒಂಟಿಯಾಗಿ ಕೂತ್ಕೊಂಡು ಯೋಚಿಸಿ. ಆಗ ನಿಮಗೆ ಯಾರೂ ಕಾಣಿಸೋದಿಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನೀವೊಬ್ಬರೇ ಉತ್ತರ ಆಗ್ತೀರಾ. ಅಲ್ಲದೇ ಜೀವನದ ಪ್ರತೀ ಹೆಜ್ಜೆಯನ್ನು ಟೈಮ್ ಟು ಟೈಮ್ ವಾಚ್ ಮಾಡುವವನು ಆ ದೇವರು ಒಬ್ಬನೇ. ಅದೂ ಕೂಡ ನಮ್ಮ ನಂಬಿಕೆಯಷ್ಟೇ. ಹೀಗಾದ್ರೂ ನಾವು ಜೀವನದಲ್ಲಿ ಒಂದಲ್ಲ ಒಂದು ತಪ್ಪು ಮಾಡೇ ಮಾಡ್ತೀವಿ.. ಕ್ಷಮಿಸಿ...ಒಂದಲ್ಲ ನೂರಾರು ತಪ್ಪುಗಳು......ನಾವೆಷ್ಟೇ ತಪ್ಪು ಮಾಡಬಾರದು ಅಂದ್ಕೊಂಡಿದ್ರೂ ತಪ್ಪು ಮಾಡೇ ಮಾಡ್ತೀವಿ...ನಮ್ಮ ಮನಸ್ಸಿಗೆ ವಿರುದ್ದವಾಗಿ ಹೋಗ್ತೀವಿ....ಕೆಲವರನ್ನು ವಿರೋಧಿಸ್ತೀವಿ....ಇನ್ನು ಕೆಲವರನ್ನ ಇಷ್ಟ ಪಡ್ತೀವಿ.......ಬಟ್ ಇದಕ್ಕೆಲ್ಲಾ ಫುಲ್ಸ್ಟಾಪ್ ಅನ್ನೋದು ಇಲ್ಲ ಎನ್ನುವುದು ನೆನಪಿರಲಿ.<br />
ಜಸ್ಟ್ ಯೋಚನೆ ಮಾಡಿ...<br />
ನಮ್ಮ ಮನಸ್ಥಿತಿಗೆ ವಿರುದ್ದವಾಗಿ ನಾವ್ ಏನೆಲ್ಲಾ ಮಾಡಿಲ್ಲ ಅಂತ....<br />
ಕೆಲವೊಮ್ಮೆ ಎಲ್ಲವೂ ಅನಿವಾರ್ಯ....ಜಸ್ಟ್ ಯೋಚಿಸಿ<br />
ಧ್ವನಿdhwanihttp://www.blogger.com/profile/02264839456762759901noreply@blogger.com1tag:blogger.com,1999:blog-4114398660755618556.post-87286287195157468942012-04-24T10:30:00.002-07:002012-04-24T10:30:17.901-07:00`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!<div dir="ltr" style="text-align: left;" trbidi="on">
<h2 style="color: magenta; text-align: left;">
`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!</h2>
<div style="text-align: left;">
ಅಲ್ಲಿ ನೆರೆದಿದ್ದ ಯಾರೊಬ್ಬರಿಗೂ ಆತನ ಪರಿಚಯವೇ ಇರಲಿಲ್ಲ. ಆತ ಯಾರು? ಎಲ್ಲಿಂದ ಬಂದವನು? ಅನ್ನೋ ಯಾವ ಪ್ರಶ್ನೆಗೂ ಅಲ್ಲಿದ್ದ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಆದರೂ ಅಲ್ಲಿದ್ದ ಸಾವಿರಾರು ಮಂದಿ ಆತನ ಜೀವ ಉಳಿಸು ಅಂತ ದೇವರಲ್ಲಿ ಬೇಡ್ತಾ ಇದ್ರೂ. ಹೌದು. ಇದು ಮೊನ್ನೆಯಷ್ಟೇ ನನ್ನದೇ ಊರಿನ ಪಕ್ಕದಲ್ಲಿ ನಡೆದ ಒಂದು ಘಟನೆಯ ಥ್ರೀ ಲೈನ್ ಸ್ಟೋರಿ. <br />ಕೆಲಸ ಮಾಡ್ತಾ ಇದ್ದ ಕೂಲಿ ಕಾಮರ್ಿಕನೊಬ್ಬನ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಆತ ಅದರ ಅಡಿಯಲ್ಲಿ ಸಿಲುಕಿ ಬಿದ್ದಿದ್ದ. ಸರಿಸುಮಾರು ಏಳು ಘಂಟೆ ಪ್ರಯತ್ನ ಪಟ್ಟ ನಂತರ ಆ ಬಡ ಜೀವ ಬದುಕಿತು. ಆ ಏಳು ಘಂಟೆ ಅಲ್ಲಿ ನಡೆದ ಎಲ್ಲಾ ವಿದ್ಯಮಾನಗಳಿಗೂ ನಾನು ಸಾಕ್ಷಿಯಾಗಿದ್ದೆ. ಈ ವೇಳೆ ನನಗೆ ಅದೆಷ್ಟೋ ಮಾನವೀಯ ಸಂಬಂಧಗಳ ಪರಿಚಯವಾಯಿತು, ಕೆಲ ಜವಾಬ್ದಾರಿಗಳ ಪರಿಚಯವಾಯ್ತು ಇನ್ನೂ ಕೆಲ ಧೂರ್ತರ ಪರಿಚಯವಾಯ್ತು. ನಿಜಕ್ಕೂ ಆ ಏಳು ಘಂಟೆ ಮನುಷ್ಯನ ವಿಭಿನ್ನ ವರ್ತನೆಗಳ ನೇರ ದರ್ಶನ ನನಗೆ ಆಯಿತು ಅನ್ನೋದಂತೂ ಗ್ಯಾರಂಟಿ.<br />ಸಾವಿರಾರು ಜನ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬದುಕಲಿ ಬಡ ಜೀವ ಅಂತ ಪ್ರಾರ್ಥನೆ ಮಾಡ್ತಾ ಇದ್ರೂ. ಆದರೆ ಇವರ್ಯಾರಿಗೂ ಆ ಜೀವದ ಪರಿಚಯಾನೇ ಇಲ್ಲ. ಆದರೆ ಅದೂ ಒಂದು ಜೀವ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಿತ್ತು. ದೂರದ ಊರಿಂದ ಕೂಲಿಗಾಗಿ ಇಲ್ಲಿ ಬರುವ ಈ ಜೀವಗಳಿಗೆ ರಕ್ಷಣೆ ಅನ್ನೋದು ಮರೀಚಿಕೆ. ರಾತ್ರೀ ಹಗಲು ಅನ್ನದೇ ಕೆಲಸ ಮಾಡೋವಾಗ ಪ್ರತೀ ಸಲಾನೂ ಯಮನ ಕುಣಿಕೆ ತನ್ನ ಆಟಕ್ಕೆ ಸಜ್ಜಾಗಿ ಕಾಯ್ತಾ ಇರುತ್ತೆ, ಸ್ವಲ್ಪ ತಪ್ಪಿದರೂ ಅಪಾಯ ಗ್ಯಾರಂಟಿ. ಮೊನ್ನೆ ಇಲ್ಲಾಗಿದ್ದೂ ಅದೇ. ಆದರೆ ಆ ಜೀವ ಭಯ ಪಡಲಿಲ್ಲ. ಈ ಊರಿನ ಭಾಷೆಯೇ ಗೊತ್ತಿಲ್ಲದ ಆ ಅಮಾಯಕನ ಕಣ್ಣುಗಳಲ್ಲಿ ನಾನು ಬದುಕಬಲ್ಲೇ ಎಂಬ ಸಣ್ಣದೊಂದು ಆತ್ಮವಿಶ್ವಾಸ ಇತ್ತು. ಅಲ್ಲಿದ್ದ ಅಷ್ಟೂ ಜನರ ಪ್ರಾರ್ಥನೆಯೂ ಆತನ ಜತೆಗಿತ್ತು. ಅಂತಿಮವಾಗಿ ಆತ ಬದುಕಿಯೂ ಬಿಟ್ಟ. ಆದರೆ ಅಲ್ಲಿ ನಾ ಕಂಡ ಕೆಲ ವಿದ್ಯಮಾನಗಳು ..........ಮಾನವೀಯ ಸಂಬಂಧಗಳು......<br />ಹಿಂದೆ ಇದೇ ಸ್ಥಳದಲ್ಲಿ ಒಂದು ಚಿತ್ರಮಂದಿರವಿತ್ತು. ಆಗೆಲ್ಲಾ ಸಾವಿರಾರು ಜನರಿಗೆ ಮನೋರಂಜನೆ ಒದಗಿಸಿತ್ತು ಈ ಚಿತ್ರಮಂದಿರ. ದಿನಂಪ್ರತಿ ಮೂರು ಪ್ರದರ್ಶನಕ್ಕಾಗಿ ಹೆಚ್ಚೆಂದರೆ ಜನ ಇಲ್ಲಿ ಸರಿಸುಮಾರು ರಾತ್ರಿ ಹತ್ತರ ತನಕ ಇರ್ತಾ ಇದ್ದರೋ ಏನೋ? ಆದರೆ ಮೊನ್ನೆ ಇದೇ ಜಾಗದಲ್ಲಿ ನಡೆದ ಘಟನೆಗೆ ಸಾವಿರಾರು ಜನ ಬೆಳಗ್ಗಿನ ಜಾವದವರೆಗೂ ಸಾಕ್ಷಿಯಾಗಿದ್ದರು. ಇಲ್ಲಿ ನೆರೆದಿದ್ದ ಕೆಲವರಿಗೆ ಇದೊಂದು ಮಾನವೀಯತೆ, ಇನ್ನು ಕೆಲವರಿಗೆ ಪ್ರತಿಷ್ಟೆ, ಮತ್ತೂ ಕೆಲವರಿಗೆ ಜವಾಬ್ದಾರಿ, ಇನ್ನು ಕೆಲವರಿಗೆ ಕರ್ತವ್ಯ! ಹೌದು ಅಲ್ಲಿದ್ದ ಎಲ್ಲರಲ್ಲೂ ಮಾನವೀಯತೆ ಅನ್ನೋದು ಇತ್ತೇ ಆದ್ರೂ ಒಬ್ಬೊಬ್ಬರಿಗೆ ಅದು ಒಂದೊಂದು ಥರ. ಅಲ್ಲಿ ಬಂದಿದ್ದ ನೂರಾರು ಪೊಲೀಸರಿಗೆ ಅದೊಂದು ಜವಾಬ್ದಾರಿ. ಇನ್ನು ಕೆಲ ಊರಿನ ಗೌರವಾನ್ವಿತ ವ್ಯಕ್ತಿಗಳಿಗೆ ಅದೊಂದು ಪ್ರತಿಷ್ಠೆ, ಎಲ್ಲವನ್ನೂ ಕಣ್ನಲ್ಲಿ ಕಣ್ಣಿಟ್ಟು ಶೂಟ್ ಮಾಡ್ತಾ ಇದ್ದ ಕೆಲ ಮಾಧ್ಯಮದವರಿಗೆ ಅದೊಂದು ಕರ್ತವ್ಯ, ಆದರೆ ಎಲ್ಲರಲ್ಲೂ ಆ ಜೀವ ಬದುಕಲಿ ಅನ್ನೋ ಸಣ್ಣದೊಂದು ಮಾನವೀಯತೆ ಮಾತ್ರ ಖಂಡಿತಾ ಇತ್ತು. <br />ಈ ದುರಂತ ನಡೆದ ಪಕ್ಕದಲ್ಲೇ ಕುಡುಕರ ಅಡ್ಡೆಯಾದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದಿತ್ತು. ಬಹುಶಃ ಕುಡುಕರಿಗೆ ಇದೊಂದು ಮನೋರಂಜನೆಯಾಗಿ ಕಂಡಿರಲೂ ಬಹುದು. ಯಾಕೆಂದರೆ ಹಾಗಿತ್ತು ಕೆಲವರ ವರ್ತನೆ. <br />ಆವತ್ತು ಸುಮಾರು ಏಳು ಘಂಟೆ ಎಲ್ಲವನ್ನೂ ಸ್ತಬ್ಧನಾಗಿ ವೀಕ್ಷಿಸಿದ ನಾನು ಮನೆಗೆ ಬಂದ ನಂತರ ಒಂದೆರೆಡು ಘಂಟೆ ಮೌನವಾಗಿ ಯೋಚನೆ ಮಾಡಿದೆ. ಈ ಜಗತ್ತು ಎಷ್ಟೇ ಕ್ರೂರಿ ಆದ್ರೂ ಇಲ್ಲಿ ಜನರಿಗೆ ತಮ್ಮದೇ ಆದ ಭಾವನ ಇದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮಾನವೀಯತೆ ಇದೆ. ಪತ್ರಿಕೆಯಲ್ಲೇ ಕೆಲಸ ಮಾಡುವವನಾದ ಕಾರಣ ವಾರಕ್ಕೆ ಹತ್ತಿಪ್ಪತ್ತು ಕ್ರೈಂ ಘಟನೆಗಳನ್ನು ನೋಡ್ತೇನೆ. ವಾರಕ್ಕೆರೆಡಾದರೂ ಮರ್ಡರ್ ಇದ್ದೇ ಇರುತ್ತೆ. ಆಗೆಲ್ಲಾ ಯೋಚಿಸ್ತೇನೆ `ಈ ಜಗತ್ತು ಎಷ್ಟು ಕ್ರೂರಿ ಅಲ್ವಾ? ಅಂತ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಇವೆಲ್ಲದಕ್ಕೂ ಕಂಪ್ಲೀಟ್ ವಿರೋಧಿ ಅನ್ನೋ ಹಾಗಿತ್ತು. ಯಾವತ್ತೂ ಕಡು ಕೋಪಿಗಳಾಗಿರುವ ಪೊಲೀಸರು ಕೂಡ ಅಂದು ಮೌನವಾಗಿ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬಹುಶಃ ಇದನ್ನೆಲ್ಲಾ ನೋಡೋವಾಗ ನನಗೆ ಜಗತ್ತೇ ಬೇಡವಾಗಿದೆ, ನನಗೇ ಅಂತ ಯಾರೂ ಇಲ್ಲ. ಅನ್ನೋ ಜೀವ ಕೂಡ ಬದುಕೋಕೆ ಆಸೆ ಪಡುತ್ತೆ. ಹೌದು ಖಂಡಿತವಾಗಲೂ ಆಸೆ ಪಡುತ್ತೆ. <br />ಫ್ರೆಂಡ್ಸ್, ನಾನು ಇಷ್ಟೆಲ್ಲಾ ಯಾಕ್ ಹೇಳ್ದೇ ಗೊತ್ತಾ? ನಮ್ಮಲ್ಲಿ ಸ್ವಲ್ಪ ನೋವಾದಾಗ, ತೊಂದರೆ ಬಂದಾಗ, ಅವಮಾನ ಆದಾಗ, ಕಷ್ಟ ಅನ್ನೋ ಬಿಸಿ ಸ್ವಲ್ಪ ತಟ್ಟಿದಾಗ ಅಷ್ಟೇ ಯಾಕೆ? ನಾವು ತುಂಬಾ ಇಷ್ಟ ಪಟ್ಟ ಜೀವವೊಂದು ದೂರ ಹೋದಾಗ ಆತ್ಮಹತ್ಯೆ ಎಂಬ ಜೀವನವನ್ನೇ ಅಂತ್ಯವನ್ನಾಗಿಸೋ ಕೆಟ್ಟ ಕೆಲಸಕ್ಕೆ ಕೈ ಹಾಕುವ ಅದೆಷ್ಟೂ ಜನರಿದ್ದಾರೆ. ಬಹುಶಃ ಇವರೆಲ್ಲರಿಗೂ ಈ ಘಟನೆ ಒಂದು ಪಾಠ, ಸಾಂತ್ವಾನ, ಧೈರ್ಯ ಇನ್ನೂ ಹೆಚ್ಚೆಂದರೆ ಜಗತ್ತು ವಿಶಾಲವಾಗಿದೆ, ನಾವಿನ್ನೂ ಬದುಕಬಹುದು ಅನ್ನೋ ಸ್ಪೂತರ್ಿ ಎನ್ನಬಹುದು. ಒಬ್ಬರ ಪ್ರೀತಿ ಸಿಗಲಿಲ್ಲ, ಈ ಜೀವನವೇ ಬೇಡ ಅಂದುಕೊಳ್ಳುವವರು ಒಮ್ಮೆ ರಸ್ತೆಯಲ್ಲಿ ಹೋಗೋ ವ್ಯಕ್ತಿಯನ್ನು, ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ನಿಲ್ಲಿಸಿ ಹೇಳಿ ನಾನ್ ಸಾಯ್ತೇನೆ ಅಂತ. ಆದರೆ ಆತ ಎಷ್ಟೆ ಕ್ರೂರಿ ಆಗಿದ್ರೂ ನಿಮ್ಮನ್ನು ಖಂಡಿತಾ ತಡಿದೇ ತಡೀತಾನೆ...ಯಾಕ್ ಗೊತ್ತಾ? ಅಲ್ಲೊಂದು ಸಣ್ಣ ಮಾನವೀಯತೆ ಕೆಲಸ ಮಾಡ್ತಾ ಇರುತ್ತೆ...ಆತ್ಮಹತ್ಯೆ ಅನ್ನೋದು ಜಸ್ಟ್ ಕೆಲವೇ ಕ್ಷಣಗಳ ಆತುರಾದ ನಿಧರ್ಾರವೇ ಹೊರತು, ಬೇರೇ ಏನೂ ಅಲ್ಲ. <br />ನೆನಪಿರಲಿ, ನಮಗಾಗಿ ಮಿಡಿಯುವ ಅದೆಷ್ಟೋ ಜೀವಗಳು ಈ ಭೂಮಿ ಮೇಲೆ ಇದ್ದೇ ಇರುತ್ತೆ. ಯಾರೋ ನಮ್ಮನ್ನು ದೂರ ಮಾಡಿದ್ರೂ ಅಂದತ ಎಲ್ಲರನ್ನೂ ದೂರ ಮಾಡೋ ಕೆಟ್ಟ ನಿಧರ್ಾರ ಖಂಡಿತಾ ಬೇಡ. ಎಲ್ಲರಿಗೂ ನಮ್ಮ ಅವಶ್ಯಕತೆ ಇದ್ದೇ ಇರುತ್ತೆ........ಜೀವನ ಅದೆಷ್ಟೋ ಮಾನವೀಯ ಸಂಬಂಧಗಳ ಬೆಸುಗೆ ಅನ್ನೋದು ಒಂದು ನಗ್ನ ಸತ್ಯ......!<br />ಧ್ವನಿ </div>
</div>dhwanihttp://www.blogger.com/profile/02264839456762759901noreply@blogger.com2tag:blogger.com,1999:blog-4114398660755618556.post-62241467594268311012012-04-20T05:45:00.000-07:002012-04-27T20:07:32.193-07:00ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?<div dir="ltr" style="text-align: left;" trbidi="on">
<h2 style="color: red;">
ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?</h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhBInub8-7J1IYqwLXWh_3orQnmNVY0SkU-TAb4ilF49YorOIyAF3b0yVC66wH9w0Ftbki5qIH9_81aiKFL647gIkFRUIuR9PPVYunRAhyH8r4fge3HRCASyNUw3cNqJkJVcE7CiG0exTk/s1600/real_love-normal5.4.jpg" imageanchor="1" style="margin-left: 1em; margin-right: 1em;"><img border="0" height="256" src="https://blogger.googleusercontent.com/img/b/R29vZ2xl/AVvXsEhBInub8-7J1IYqwLXWh_3orQnmNVY0SkU-TAb4ilF49YorOIyAF3b0yVC66wH9w0Ftbki5qIH9_81aiKFL647gIkFRUIuR9PPVYunRAhyH8r4fge3HRCASyNUw3cNqJkJVcE7CiG0exTk/s320/real_love-normal5.4.jpg" width="320" /></a></div>
<h2 style="color: red;">
</h2>
ಮೊನ್ನೆ ರವಿಬೆಳಗೆರೆಯವರ `ಅಮ್ಮ ಸಿಕ್ಕಿದ್ಲು ಪುಸ್ತಕ ಓದ್ತಾ ಕುಳಿತಿದ್ದೆ. ಬಹುಶಃ ಆ ವ್ಯಕ್ತಿಯ ಬರಹ ನಿಜಕ್ಕೂ ಗ್ರೇಟ್ ಅಂತ ಅನಿಸೋದೇ ಸೈಲಂಟಾಗಿ ಓದಿಸ್ತಾ ಹೋದಾಗ. ಬೆಳಗೆರೆ ಜನ ಸರಿಯಿಲ್ಲ ಅಂತಾರೆ ಕೆಲವರು. ಇದು ಸತ್ಯಾನೂ ಆಗಿರಬಹುದು, ಸುಳ್ಳೂ ಆಗಿರಬಹುದು. ಆದರೆ ಆ ವ್ಯಕ್ತಿಯ ಬರಹಗಳಲ್ಲಿ ಅಂತಹ ಸಣ್ಣದೊಂದು ಸುಳಿವು ಕೂಡ ಸಿಗೋದಿಲ್ಲ. `ಅಮ್ಮ ಸಿಕ್ಕಿದ್ಲು ಇದಕ್ಕೊಂದು ಸಣ್ಣ ಉದಾಹರಣೆ.<br />
ಅವರೇ ಹೇಳಿದಂತೆ ನೀವು ಪ್ರೀತಿಯನ್ನು ಕಳೆದುಕೊಂಡವರಾಗಿದ್ದರೆ ಈ ಪುಸ್ತಕವನ್ನು ಒಮ್ಮೆ ಒದಲೇ ಬೇಕು. ಅದರಲ್ಲೂ ಅಮ್ಮ ಅಥವಾ ಅಮ್ಮ ಅನ್ನುವ ಸಂಬಂಧದ ಪ್ರೀತಿ ಸಿಗಲೇ ಇಲ್ಲ ಅಂದ್ರೆ ಅಥವಾ ಸಿಕ್ಕಿದರೂ ಕಳೆದುಕೊಂಡಿದ್ದರೆ ಖಂಡಿತಾ ಒಮ್ಮೆ ಓದಿ...ಯಾಕೆಂದರೆ ನಿಜಕ್ಕೂ ಈ ಪುಸ್ತಕ ಪಕ್ಕಾ ಸೆಂಟಿಮೆಂಟಲ್. <br />
ಕೆಲ ದಿನಗಳ ಹಿಂದೆ ಇದೇ ಬ್ಲಾಗಿನಲ್ಲಿ ಅಮ್ಮ ಎನ್ನುವ ಸಂಬಂಧದ ಮಧ್ಯೆ ಮತ್ತೊಂದು ಅಮ್ಮ ಅನ್ನುವ ಒಂದು ವಿಚಾರವನ್ನು ಬರೆದಿದ್ದೆ. ಕೆಲವೊಮ್ಮೆ ನಾವು ತುಂಬಾ ಸ್ವಾಥರ್ಿಗಳಾಗ್ತೀವಿ. ಹೆತ್ತ ತಾಯಿ ಹತ್ತಿರ ಇದ್ರೂ ಯಾರ್ಯಾರನ್ನೋ ಇಷ್ಟ ಪಡ್ತೀವಿ. ಅದೆಷ್ಟೋ ಹೆಣ್ಣು ಮಕ್ಕಳು ಹೆತ್ತವರು ಇದ್ದರೂ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗ್ತಾರೆ. ಹುಡುಗ ಒಳ್ಳೆವನಾಗಿದ್ರೆ ಪರ್ವಾಗಿಲ್ಲ. ಇಲ್ಲಾಂದ್ರೆ ಖಂಡಿತಾ ಹುಡುಗಿ ಪಶ್ಚಾತ್ತಾಪ ಪಡೋದಂತೂ ಗ್ಯಾರಂಟಿ..<br />
ಕೆಲವರಿಗೆ ಪ್ರೀತಿ ಅಂದ್ರೆ ಹದಿ ಹರೆಯದ ವಯಸ್ಸಲ್ಲಿ ಬರುವ ಸಣ್ಣ ಆಕರ್ಷಣೆಯಷ್ಟೇ. ಇನ್ನು ಕೆಲವರಿಗೆ ಪ್ರೀತಿ ಅಂದ್ರೆ ಜೀವ, ಜೀವನ ಇನ್ನೂ ಹೆಚ್ಚು ಅಂದ್ರೆ ಉಸಿರು. ಬಹುಶಃ ಇಂದಿಗೂ ಪ್ರೀತಿಗೋಸ್ಕರ ಈ ಜಗತ್ತನ್ನೇ ಬಿಟ್ಟು ಹೋಗುವವರು ಇದ್ದಾರೆ ಎಂದರೆ ಅದು ಅಂಥವರೇ. ಇವರ ಪ್ರೀತಿ ನೈಜ ಪ್ರೀತಿ. ಎಲ್ಲೂ ಕಲ್ಮಶಗಳೇ ಇರೋದಿಲ್ಲ. ಒಂದು ವೇಳೆ ಈ ಪ್ರೀತೀಲಿ ಅಪ್ಪಿ ತಪ್ಪಿ ಯಾರಾದರೂ ಒಬ್ಬರು ಕೈ ಬಿಟ್ಟರೆ ಅಲ್ಲೊಂದು ದುರಂತ ಖಂಡಿತಾ. ನಿಜವಾಗಲೂ ನಾನಿವತ್ತು ಬರೆಯೋಕೆ ಬಂದಿದ್ದು ಪ್ರೀತಿ ಬಗ್ಗೆ ಅಲ್ವೇ ಅಲ್ಲ. ನನ್ನ ಜೀವನದಲ್ಲಿ ಕಂಡ ತ್ಯಾಗ ಮತ್ತು ನಂಬಿಕೆಗಳ ಬಗ್ಗೆ.........<br />
ತ್ಯಾಗ ಅಂದ್ರೆ ಏನು? ನಂಬಿಕೆ ಅಂದ್ರೆ ಏನು? ಮುಂಗಾರು ಮಳೆಯಲ್ಲಿ ಗಣೇಶ ತನ್ನ ಹುಡುಗಿಯನ್ನು ಇನ್ನೊಬ್ಬನಿಗೆ ಬಿಟ್ಟು ಕೊಟ್ಟಿದ್ದು ತ್ಯಾಗಾನಾ? ಆಕೆಯ ತಂದೆ ತಾಯಿ ಈತನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿದ್ದು ನಿಂಬಿಕೇನಾ? ಹೌದು, ಒಂದರ್ಥದಲ್ಲಿ ಇವೆರಡೇ ನಂಬಿಕೆ, ತ್ಯಾಗ. ಇಲ್ಲೊಂಥರ ಖುಷೀನೂ ಇದೆ. ದುಃಖಾನೂ ಇದೆ. ಬಹುಶಃ ಸಿನಿಮಾದ ಜನಗಳಿಗೂ ಈ ಟ್ರಿಕ್ಸ್ ತುಂಬಾನೇ ಉಪಯೋಗ ಆಗಿದೆ ಅನ್ನಬಹುದು. ಮೊನ್ನೆ ತಾನೆ ನನ್ನೊಬ್ಬ ಗೆಳೆಯ ತನ್ನ ಹುಡುಗೀನಾ ಇನ್ನೊಬ್ಬ ಲವ್ ಮಾಡ್ತಾ ಇದಾನೆ ಅಂದ. ಅದಕ್ಕೋಸ್ಕರ ನಾನವಳನ್ನು ಲವ್ ಮಾಡೋದನ್ನೇ ಬಿಟ್ ಬಿಟ್ಟೆ ಅಂದ. ಆಗ ನನಗೆ ಅವನ ಮೇಲೆ ತುಂಬಾ ಗೌರವ, ಖುಷಿ ಎಲ್ಲಾನೂ ಆಯ್ತು. ಯಾಕ್ ಗೊತ್ತಾ? ತನ್ನ ಪ್ರೀತಿನ ತ್ಯಾಗ ಮಾಡಿದ ಅಂತ. ಆದರೆ ಇಲ್ಲಿರೋ ವಿಷಯಾನೇ ಬೇರೆ. ಅವಳಿಗೂ ಅದು ನಾಲ್ಕನೇ ಲವ್, ಇವನಿಗೆ ಇದು ಆರನೇ ಲವ್. ಹೀಗಿರೋವಾಗ ಇವರಿಬ್ಬರ ಪ್ರೀತಿಗೆ ಹೇಗೆ ತಾನೇ ತ್ಯಾಗ ಅನ್ನೋ ಟ್ಯಾಗ್ಲೈನ್ ಕಟ್ಟೋಕೆ ಆಗುತ್ತೇ. ನೀವೇ ಹೇಳಿ? ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೇನೆ ಇವೆ. ಕೆಲವೊಮ್ಮೆ ಹುಡುಗ ಪಕ್ಕಾ ಸೆಂಟಿಮೆಂಟೋ, ಸೆನ್ಸಿಟಿವೋ ಆಗಿರ್ತಾನೆ. ಆದರೆ ಹುಡುಗಿ ಹಾಗಲ್ಲ. ಅವಳು ಇವನಿಗೆ ಪುಲ್ ಅಪೋಝಿಟ್. ಇವನಿಗೆ ಅವಳೇ ಪ್ರಪಂಚ ಆದ್ರೆ ಅವಳಿಗೆ ಇವನಂಥ ಅದೆಷ್ಟೋ ಪ್ರಪಂಚ! ಅದೆಷ್ಟೋ ಹುಡುಗರು. ತಪ್ಪು ತಿಳ್ಕೋಬೇಡಿ ಇಲ್ಲಿ ಹುಡುಗರು ಏನೂ ಕಮ್ಮಿ ಇಲ್ಲ. ತನ್ನ ಹುಡುಗೀನಾ ಹುಡುಗ ಎಷ್ಟೇ ಪುಟ್ಟ, ಚಿನ್ನ ಅಂತ ಕರೆದರೂ ಅದು ಜಸ್ಟ್ ಒಂದು ತಿಂಗಳು, ಅಬ್ಬಬ್ಬಾ ಅಂದ್ರೆ ಒಂದು ವರ್ಷ ಅಷ್ಟೇ. ಮತ್ತೆ ಎಲ್ಲಾ ಚಿನ್ನಾನೂ ಕಾಗೆ ಬಂಗಾರನೇ ಬಿಡಿ.<br />
ಯಾವತ್ತೂ ಸೆಂಟಿಮೆಂಟ್, ತಾಯಿ, ಅಕ್ಕ ಅನ್ನೋ ಸಂಬಂಧಗಳ ಬಗ್ಗೆ ಬರೆಯೋ ನಾನು ಇವತ್ತು ಜೋಡಿಗಳ ಪ್ರೀತಿಯ ಬಗ್ಗೆ ಬರೆಯೋಕೆ ಕಾರಣ ಇದೆ. ಮೊನ್ನೆಯಷ್ಟೆ ಕುಂದಾಪುರದಲ್ಲಿ ಒಂದು ಘಟನೆ ನಡೀತು. ಮನೆಯವರು ಒಪ್ಪಲಾರರು ಅನ್ನೋ ಕಾರಣಕ್ಕೆ ಎರಡು ಜೋಡಿ ಈ ಜಗತ್ತನ್ನೇ ಬಿಟ್ಟು ದೂರ ಹೊರಟು ಹೋದವು. ಅವರು ಮಾಡಿದ್ದು ತ್ಯಾಗ. ಅವರಲ್ಲಿದ್ದಿದ್ದು ನಂಬಿಕೆ. ಯಾಕಂತ ಹೇಳ್ಬೇಕ? ಅವರಿಗೂ ಜಗತ್ತಲ್ಲಿ ಬದುಕೋಕೆ ಅದೆಷ್ಟೋ ಚಾಯ್ಸ್ಗಳಿದ್ದವು. ಎಲ್ಲರನ್ನೂ ಧಿಕ್ಕರಿಸಿ ಓಡಿ ಹೋಗ್ಬಹುದಿತ್ತು. ಆದರೆ ಅವರು ಹಾಗ್ ಮಾಡಲಿಲ್ಲ. ಜಗತ್ತಿಗೋಸ್ಕರ, ಮಾನವೀಯ ಸಂಬಂಧಕ್ಕೋಸ್ಕರ, ಅಷ್ಟೇ ಯಾಕೆ ಒಂದು ಸಣ್ಣ ಮಯರ್ಾದೆಗೋಸ್ಕರ ಪ್ರೀತೀನೇ ತ್ಯಾಗ ಮಾಡಿದ್ರೂ. ಇನ್ನು ಇವರ ಸಾವಿನಲ್ಲಿ ನಂಬಿಕೆಯ ಪಾಲೂ ಅಷ್ಟೇ ಇದೆ. ಸಾವಲ್ಲೂ ಇಬ್ಬರನ್ನಿಬ್ಬರೂ ನಂಬಿದ್ರೂ. ಸಾವಿನಲ್ಲೂ ಒಂದಾದರೂ. ಪ್ರೇಮಿಗಳು ಸತ್ತರೂ ನಂಬಿಕೆ ಸಾಯಲಿಲ್ಲ. ಎಂಥಾ ಹ್ಯಾಪಿ ಎಂಡಿಂಗ್ ಅಲ್ವಾ? ಹೌದು ಓಡಿ ಹೋಗಿ ಮದುವೆ ಆಗೋದಕ್ಕಿಂತ, ಎಲ್ಲರಿಂದಲೂ ಒಂದು ಪ್ರೀತಿಗೆ ವಿರೋಧ ಕಟ್ಟಿಸಿಕೊಳ್ಳೋದಕ್ಕಿಂತ ಇದು ನಿಜಕ್ಕೂ ಒಂದು ಹ್ಯಾಪಿ ಎಂಡಿಂಗೇ!<br />
ಎಲ್ಲರೂ ಒಂದು ನೆನಪಲ್ಲಿಟ್ಟುಕೊಳ್ಳಬೇಕು. ಪ್ರೀತಿ ವಯಸ್ಸಿನ ಒಂದು ಹಂತದವರೆಗೆ ಜಸ್ಟ್ ಆಕರ್ಷಣೆ, ನಂತರ ಮಾನಸಿಕ ವೇದನೆ, ಅನಂತರ ಕೆಲವೊಂದು ಪ್ರಶ್ನೆ, ಇನ್ನು ಕೆಲವೊಮ್ಮೆ ಪ್ರಶ್ನೆಗಳೇ ಇಲ್ಲದ ಉತ್ತರ. ಅಂತಿಮವಾಗಿ ಅದೊಂದು ಜವಾಬ್ದಾರಿ. ಇವೆಲ್ಲವನ್ನೂ ಮೀರಿ ಬರೋದು ಅಷ್ಟು ಸುಲಭಾನೂ ಅಲ್ಲ. ಇಂದಿಗೂ ತಾಜ್ಮಹಲ್ ಪ್ರೀತಿಯ ಸಂಕೇತ ಆಗಿದ್ರೂ ಅದರ ಹಿಂದಿನ ಸ್ಟೋರಿ ಮಾತ್ರ ಇದು ಹೇಗೆ ಪ್ರೀತಿಗೆ ಸಂಕೇತವಾಯಿತು ಅಂಥ ಪ್ರಶ್ನಿಸುವ ಹಾಗೆ ಮಾಡುತ್ತೆ...ಯಾಕಂದ್ರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ಗಾಗಿ ಕಟ್ಟಿಸಿದ ಈ ಮಹಲ್ ಯಾವತ್ತೂ ಪ್ರೀತಿಗೆ ಸಂಕೇತ ಆಗೋದಕ್ಕೆ ಸಾಧ್ಯಾನೆ ಇಲ್ಲ. ಅಷ್ಟಕ್ಕೂ ಮುಮ್ತಾಜ್ ಈತನ ಮೊದಲನೇ ಪತ್ನಿ ಕೂಡ ಅಲ್ಲ. ಹೀಗಾದರೆ ತಾಜ್ಮಹಲ್ ಹೇಗೆ ತಾನೆ ಪ್ರೇಮದ ಸಂಕೇತ ಆಗುತ್ತೆ? ಆದರೆ ನಮ್ಮಲ್ಲಿ ಇತಿಹಾಸ ನೋಡೋದಕ್ಕಿಂತ ಸೌಂದರ್ಯ ನೋಡುವವರೇ ಹೆಚ್ಚಿದ್ದಾರೆ. ಆಗ ವಿಧಾನ ಸೌಧನೂ ಪ್ರೇಮಕ್ಕೆ ಸಂಕೇತ ಆಗಬಹುದು. ಜಸ್ಟ್ ಲವ್, ಟೈಮ್ ಪಾಸ್ ಲವ್ ಅನ್ನೋದರ ಮಧ್ಯೆ ಎಲ್ಲೋ ಒಂದು ಕಡೆ ರಿಯಲ್ ಲವ್ ಕೂಡ ಇರುತ್ತೆ. ಅಲ್ಲೆಲ್ಲಾ ತ್ಯಾಗ, ನಂಬಿಕೆ, ಪ್ರೀತಿ ಸದ್ದಿಲ್ಲದೇ ಕೆಲಸ ಮಾಡುತ್ತೆ ಕೂಡ....<br />
ನೆನಪಿರಲಿ, ಲವ್ ಫ್ಯಾಶನ್ ಅಲ್ಲ. ಅದೊಂದು ಪವಿತ್ರ ಬಂಧ.......ಜಸ್ಟ್ ಒಂದು ದಿನಾನಾ ದರೂ ನಿಮ್ಮ ಪ್ರೀತಿಯನ್ನು ಪವಿತ್ರವಾಗಿ ಪ್ರೀತಿಸಿ.....ಒನ್ ಟೈಮ್ ನಿಮಗೂ ಗೊತ್ತಾಗಬಹುದು. ನೈಜ ಪ್ರೀತಿಲೀ ಇಷ್ಟೊಂದು ಸುಖ ಇದೆಯಾ ಅಂತ..........! </div>dhwanihttp://www.blogger.com/profile/02264839456762759901noreply@blogger.com7tag:blogger.com,1999:blog-4114398660755618556.post-55389005996573839952012-04-19T11:18:00.002-07:002012-04-19T11:18:51.964-07:00ವಿದೇಶಿ ಉದ್ಯೋಗ ಎಷ್ಟು ಸೇಫ್?<div dir="ltr" style="text-align: left;" trbidi="on"><h2 style="color: yellow; font-weight: normal; text-align: left;">ವಿದೇಶಿ ಉದ್ಯೋಗ ಎಷ್ಟು ಸೇಫ್?</h2><div style="text-align: left;">ಹೌದು, ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಪ್ರಶ್ನೆಯನ್ನು ಕೇಳುವ ಸಂದರ್ಭ ಬಂದಿದೆ. ಒಂದು ಕಾಲದಲ್ಲಿ ವಿದೇಶಿ ಉದ್ಯೋಗವೆಂದರೆ ಅದು ಭಾರತೀಯರ ಪಾಲಿಗೆ ಹೂವಿನ ಹಾಸಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗ ಹಾಗಿಲ್ಲ. ವಿದೇಶಕ್ಕೆ ಹೋದವರೆಲ್ಲರೂ ಅಲ್ಲಿ ಒಂದೊಳ್ಳೆ ಕೆಲಸ ಹಿಡಿದು ಬದುಕುತ್ತಿದ್ದಾರೆ, ನೆಮ್ಮದಿಯ ಜೀವನ ನಡೆಸಿ ಇಲ್ಲಿರುವ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದಾರೆ ಎಂದು ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇಂದಿನ ತಾಂತ್ರಿಕ ಯುಗದಲ್ಲಿ ವಿದೇಶಿ ಉದ್ಯೋಗದ ಚಿತ್ರಣವೇ ಬದಲಾಗಿದೆ. ವಿದೇಶದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ, ತಮ್ಮ ಆತಂಕದ ಜೀವನದ ಬಗ್ಗೆ ಈಗಾಗಲೇ ಅನೇಕ ಮಂದಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆದರೂ ಭಾರತೀಯರಿಗೆ ಅದರಲ್ಲೂ ಹೆಚ್ಚಾಗಿ ಮಂಗಳೂರಿಗರಿಗೆ ವಿದೇಶಿ ಉದ್ಯೋಗದ ಮೋಹ ಬಿಟ್ಟು ಹೋಗಿಲ್ಲ. ಬಹಳ ವರ್ಷಗಳ ಹಿಂದೆ ವಿದೇಶಿ ಉದ್ಯೋಗ ಎನ್ನುವ ಕಲ್ಪನೆ ಹಣ ಸಂಪಾದಿಸುವ ದೊಡ್ಡ ಹುದ್ದೆ ಎನ್ನುವಂತಾಗಿತ್ತು. ಆದರೆ ಇತ್ತೀಚೆಗೆ ಈ ಪರಿಕಲ್ಪನೆಯೇ ಬದಲಾಗಿದೆ.<br />
ಭಾರತದಂತಹ ರಾಷ್ಟದಲ್ಲೇ ತಾಂತ್ರಿಕತೆ ಸಾಕಷ್ಟು ಮುಂದುವರೆದಿದೆ. ಮನುಷ್ಯ ಮಾಡುವ ಹೆಚ್ಚಿನ ಕೆಲಸಗಳನ್ನು ಇಂದು ಯಂತ್ರಗಳು ನಿರ್ವಹಿಸುತ್ತಿವೆ. ಹಾಗಾಗಿಯೇ ಇಲ್ಲಿ ಇಂದು ಕೂಲಿಯಾಳುಗಳಿಗೆ ಅಷ್ಟಾಗಿ ಕೆಲಸವಿಲ್ಲ. ಇದು ಮುಂದುವರೆಯುತ್ತಿರುವ ರಾಷ್ಟ್ರ ಭಾರತದ ಚಿತ್ರಣ. ಹೀಗಿರುವಾಗ ಈಗಾಗಲೇ ಮುಂದುವರೆದ ಸೌದಿ ಅರೇಬಿಯಾ, ಕತಾರ್ ಮುಂತಾದ ರಾಷ್ಟ್ರಗಳಲ್ಲಿ ಮನುಷ್ಯ ತನ್ನ ಕೈಯಿಂದ ಮಾಡಬಹುದಾದ ಕೆಲಸಗಳು ಇರಬಹುದೇ? ಇದ್ದರೂ ಅವು ಯಾವ ರೀತಿಯ ಕೆಲಸಗಳಾಗಿರಬಹುದು? ಎಲ್ಲವನ್ನೂ ಯಂತ್ರದ ಕೈಗೆ ಕೊಟ್ಟು ಅಂದ ನೋಡುವ ವಿದೇಶಿಗರ ಕಣ್ಣಲ್ಲಿ ಭಾರತೀಯರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಇನ್ನು ಸೌದಿಯಂತಹ ಐಶಾರಮಿ ದೇಶದಲ್ಲಿ ಇಲ್ಲಿನ ಜನತೆಗೆ ಮೈಬಗ್ಗಿಸಿ ಕೆಲಸ ಮಾಡುವುದು ಗೊತ್ತಿಲ್ಲ. ಯಂತ್ರಗಳು ಮಾಡುವುದನ್ನು ಯಂತ್ರಗಳಿಂದ ಮಾಡಿಸಿದರೆ, ಅವುಗಳಿಂದ ಆಗದ ಕೆಲಸಗಳನ್ನು ವಿದೇಶಿ ಡಾಲರ್ನ ಆಸೆ ಹೊತ್ತು ಹೋಗುವ ನಮ್ಮವರಿಂದ ಮಾಡಿಸುತ್ತಾರೆ. <br />
ಇನ್ನು ನಮಗೆ ಬೇಕೇಂದಾಗ ಹೋಗಿ, ಬೇಡವೆಂದಾಗ ಹಿಂದೆ ಬರಲು ಅದು ನಮ್ಮ ದೇಶವೂ ಅಲ್ಲ. ಅಲ್ಲಿನ ನಿಯಮಗಳಿಗೆ ಕಟ್ಟುಬಿದ್ದು ಅನಿವಾರ್ಯವಾಗಿಯಾದರೂ ಇಂತಿಷ್ಟೇ ವರ್ಷ ಎಂದು ನಾವು ಅಲ್ಲಿ ಸೆಣೆಸಾಡಲೇ ಬೇಕು. ನಮ್ಮ ವಿದೇಶಿ ಉದ್ಯೋಗದ ಕಲ್ಪನೆಗೂ ಉತ್ತರಕನರ್ಾಟಕದ ಮಂದಿಯ ಮಂಗಳೂರು ನಂಟಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮಂಗಳೂರಿಗರು ಮಾಡಲಾಗದ ಕೆಲಸಕ್ಕೆ ಅಂದರೆ ಕಟ್ಟಡ ನಿಮರ್ಾಣ ಕೆಲಸಕ್ಕೆ ಇಲ್ಲಿಗೆ ಬರುವವರೇ ಉತ್ತರ ಕನರ್ಾಟಕದ ಮಂದಿ. ಅವರ ಪಾಲಿಗೆ ನಮ್ಮ ಮಂಗಳೂರೇ ವಿದೇಶ ಇದ್ದ ಹಾಗೆ. ಆದರೆ ಮಂಗಳೂರಿನ ಕೆಲವರಿಗೆ ವಿದೇಶಿ ಉದ್ಯೋಗದ ವ್ಯಾಮೋಹ. ಈಗ ಊಹಿಸಿ. ನೈಜ ವಿದೇಶಿ ಉದ್ಯೋಗದ ಕಲ್ಪನೆ ಜೀತ ಪದ್ದತಿಗೆ ಸಮನಾಗಿರಲು ಸಾಧ್ಯವಿಲ್ಲವೇ? <br />
ಹಾಗಂತ ವಿದೇಶದ ವಿಮಾನ ಹತ್ತುವ ಎಲ್ಲರೂ ಅಲ್ಲಿ ಜೀತ ಮಾಡಿಯೇ ಬದುಕುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ನೂರರಲ್ಲಿ ಹತ್ತು ಶೇಖಡಾ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಬಹುಶಃ ಇವರಿಗೆಲ್ಲಾ ಇವರ ಶಿಕ್ಷಣ ಅಲ್ಲಿ ಉತ್ತಮ ಉದ್ಯೋಗ ದೊರಕಿಸಿ ಕೊಟ್ಟ್ಟಿರಬಹುದು. ಆದರೆ ಹೆಚ್ಚಿನವರು ಅಲ್ಲಿ ಬದುಕುತ್ತಿರುವುದು ಜೀತದಾಳುಗಳಾಗಿಯೇ. ನಮ್ಮೂರಿನಲ್ಲಾದರೆ ನಾವು ಮಾಡುವ ಕೆಲಸ ಇತರರಿಗೆ ಗೊತ್ತಾಗಬಹುದು. ಆದರೆ ವಿದೇಶದಲ್ಲಿ ಮಾಡುವ ಕೆಲಸ ಏನು ಎಂಬುದು ನಮಗೆ ಹೇಗೆ ತಾನೇ ತಿಳಿಯಲು ಸಾಧ್ಯ? ಉದಾಹರಣೆಗೆ ಇನ್ಪೋಸಿಸ್ನಂತಹ ಉತ್ತಮ ಸಂಸ್ಥೆಯನ್ನೆ ತೆಗೆದುಕೊಳ್ಳೋಣ. ಇದೊಂದು ಕೋಟೆಯಿದ್ದಂತೆ. ಅಪ್ಪಿ ತಪ್ಪಿಯೂ ಸಂಬಂಧ ಪಡದವರಿಗೆ ಇದರೊಳಗೆ ಪ್ರವೇಶವೇ ಇಲ್ಲ. ಇಲ್ಲಿ ಕೆಲಸ ಮಾಡುವುದೆಂದರೇನೆ ದೊಡ್ಡ ಪ್ರತಿಷ್ಟೆ ಇದ್ದ ಹಾಗೆ. ಮಂಗಳೂರಿನವನೇ ಇಲ್ಲಿ ಕೆಲಸ ಮಾಡಿದರೂ ಆತನ ಹುದ್ದೆ ಯಾವುದಿರಬಹುದೆಂದು ತಿಳಿಯಲು ನಮ್ಮಿಂದ ಸಾಧ್ಯವೇ ಇಲ್ಲ. ಅದೇ ರೀತಿ ವಿದೇಶಿ ಉದ್ಯೋಗ. ಅಲ್ಲಿನ ಕೋಟೆಯಲ್ಲಿ ನಾವೇನೆ ಕೆಲಸ ಮಾಡಿದರೂ ಅದು ಹೊರಜಗತ್ತಿಗೆ ಗೊತ್ತೇ ಆಗುವುದಿಲ್ಲ. ನಮ್ಮವರು ಅಲ್ಲಿ ಕಸ ಗುಡಿಸಿದರೂ ವಿದೇಶಿ ಉದ್ಯೋಗ ಎಂದು ಹೆಮ್ಮೆ ಪಟ್ಟುಕೊಳ್ಳುವವರು ನಾವು. ಅನೇಕ ಕಷ್ಟ, ತೊಡರುಗಳಿದ್ದರೂ ಇಂದಿಗೂ ವಿದೇಶಿ ಉದ್ಯೋಗದ ಮೇಲೆ ಕೆಲವರಿಗೆ ಎಲ್ಲಿಲ್ಲದ ವ್ಯಾಮೋಹ. ಈ ವ್ಯಾಮೋಹಕ್ಕೆ ಕೊನೆಯೆಂದು? <br />
ಧ್ವನಿ </div></div>dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-47386413366958692152012-04-16T11:11:00.000-07:002012-04-16T11:11:29.726-07:00ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!<div dir="ltr" style="text-align: left;" trbidi="on"><h2 style="color: red; font-weight: normal; text-align: left;"><b>ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!</b></h2><div style="text-align: left;">ಫ್ರೆಂಡ್ಸ್, ಆವತ್ತೊಮ್ಮೆ ನಾನು ನನಗೊಬ್ಬ ಗುರು ಇದಾರೆ ಅಂತ ಹೇಳಿದ್ದೆ. ಅವರು ಪಕ್ಕಾ ಪ್ರೋಫೆಶನಲ್ ಅಲ್ಲ ಅಂತಾನೂ ಹೇಳಿದ್ದೆ. ಅವರ ಬಗ್ಗೆ ಹೇಳೋಕೆ ಇನ್ನೂ ಇದೆ. ಆ ವ್ಯಕ್ತಿ ನನ್ನ ಪಾಲಿಗೆ ಜೀವನದ ಕೆಲವೊಂದು ಮಹತ್ವದ ಘಟ್ಟಗಳನ್ನು ಪರಿಚಯಿಸಿದ ಮಹಾಶಯ. ಸ್ವಲ್ಪ ಎಡಪಂಥೀಯ ಧೋರಣೆಗಳೇ ಆ ಮನುಷ್ಯನಿಗೆ ಜೀವಾಳ. ಹಾಗಂತ ತೀರಾ ಕಮ್ಯುನಿಷ್ಟ್ ಅಂತಾನೂ ಹೇಳೋಕಾಗಲ್ಲ. ಆದರೆ ಆ ವ್ಯಕ್ತಿಯ ಕೆಲವೊಂದು ಮಾತುಗಳು ಮಾತ್ರ ಯಾವ ಕಮ್ಯುನಿಷ್ಟ್ ಸಿದ್ದಾಂತದ ಪ್ರತಿಪಾದಕನಿಗೂ ಕಮ್ಮಿ ಇಲ್ಲ. ಅಪ್ಪಿ ತಪ್ಪಿ ನಾವೇನಾದ್ರೂ ಅವರ ಜೊತೆ ಮಾನವೀಯ ಸಂಬಂಧದ ಬಗ್ಗೆ ಕೇಳಿದೆವು ಅಂತ ಇಟ್ಕೊಳ್ಳಿ. ಇವರ ಬಾಯಿಯಿಂದ ಬರೋ ಮಾತು ಒಮ್ಮೊಮ್ಮೆ ಇಷ್ಟ ಆದ್ರೂ ಕೆಲವೊಮ್ಮೆ ಕೇಳೋಕೆ ತುಂಬಾ ಕಷ್ಟ ಆಗುತ್ತೆ. ಇನ್ನು ಇವರಿಗೂ ನನಗೂ ಅಷ್ಟಕ್ಕಷ್ಟೇ. ಆದ್ರೂ ನನ್ನ ಪಾಲಿಗೆ ಇವರು ಗುರು!<br />
ಇವರ ಜೊತೆ ತುಂಬಾ ಸಲ ಜಗಳ ಮಾಡಿದೀನಿ, ಇವರ ಮಾತಿಗೆ ಎದುರು ಮಾತಾಡಿದೀನಿ, ಅಷ್ಟೇ ಯಾಕೆ ಒಂದ್ಸಲ ಇವರ ಎಲ್ಲಾ ಸಿದ್ದಾಂತಗಳನ್ನು, ಧೋರಣೆಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದೀನಿ ಕೂಡ. ಆದ್ರೆ ಈ ಮೊದಲೇ ಹೇಳಿದ ಹಾಗೆ ಸ್ವಲ್ಪ ಲೇಟಾಗಿ ಈ ವ್ಯಕ್ತಿಯ ಪ್ರತೀ ಮಾತನ್ನು ಒಬ್ಬನೇ ಕೂತು ಯೋಚನೆ ಮಾಡಿದ್ದೀನಿ. ಆಗೆಲ್ಲಾ ಇವರ ಮಾತು ಒಂದು ಹಂತಕ್ಕೆ ಸರಿ ಅನಿಸೋದು. ದೈನಂದಿನ ಜೀವನದಲ್ಲಿ ನಾನು ಈ ವ್ಯಕ್ತಿಯನ್ನು ತುಂಬಾ ಅಂದ್ರೆ ತುಂಬಾ ದ್ವೇಷಿಸ್ತಾ ಇದ್ದೆ. ಇವರ ಮಾತಿಗೆ ಎಷ್ಟು ಚಚರ್ೆ ಮಾಡೋಕೆ ಆಗುತ್ತೋ ಅಷ್ಟು ಚಚರ್ೆ ಮಾಡ್ತಾ ಇದ್ದೆ. ಆದ್ರೆ ರಾತ್ರಿ ಮಲಗೋವಾಗ ದುಶ್ಮನ್ಗಳೂ ಹತ್ತಿರ ಆಗ್ತಾರೆ ಅನ್ನೋ ಹಾಗೆ ಇವರ ಮಾತು ಮತ್ತೆ ಮತ್ತೆ ಕಾಡ್ತಾ ಇತ್ತು. ನನ್ನ ವಯಸ್ಸಿನ ಎರಡರಷ್ಟು ವಯಸ್ಸು ಈ ವ್ಯಕ್ತಿಗಾಗಿತ್ತು. ಆದರೆ ವೈವಾಹಿಕ ಬಂಧನದ ಹಳ್ಳಕ್ಕೆ ಮಾತ್ರ ಇವರು ಬೀಳಲಿಲ್ಲ. ಈ ಬಗ್ಗೆ ಕೇಳಿದ್ರೆ ಸಂಸಾರಿಕ ಜೀವನದ ನೈಜ ಆಶಯ ಏನೂ ಅನ್ನೋದನ್ನು ಯಾವ ಕಟ್ಟರ್ ಸಂಸಾರಿಯೂ ವಿವರಿಸದಷ್ಟು ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿ ವಿವರಿಸ್ತಾರೆ. ನಮ್ಮಲ್ಲಿ ಸಂಸಾರ ಜೀವನದ ನೈಜ ಆಶಯ ಯಾರಿಗೂ ಗೊತ್ತಿಲ್ಲ, ಹಾಗಾಗಿ ನಾನು ಮದುವೆ ಆಗಿಲ್ಲ ಅಂತ ಹೇಳ್ತಾರೆ. ನಾವೇನಾದ್ರೂ ಮಧ್ಯೆ ಬಾಯಿ ಹಾಕಿದ್ರೆ ಆ ವ್ಯಕ್ತಿಯೊಂದಿಗೆ ಯುದ್ದ ಗೆದ್ದು ಬರೋದು ಅಷ್ಟು ಸಲೀಸಲ್ಲ ಬಿಡಿ. <br />
ಅದೆಷ್ಟೂ ಸಲ ಬೆಳ್ಳಂಬೆಳಿಗ್ಗೆ ಇವರನ್ನು ಮಾತಿನಲ್ಲಿ ಸೋಲಿಸಬೇಕು ಅಂತಾನೆ ಸಿದ್ದವಾಗಿ ಬರ್ತಾ ಇದ್ದೆ. ಆದರೆ ಅದು ಅಷ್ಟು ಸುಲಭ ಅಲ್ಲ ಅನ್ನೋದು ಮತ್ತೆ ಗೊತ್ತಾಗ್ತಾ ಇತ್ತು! ಇಷ್ಟೆಲ್ಲಾ ಮಾತೋಡೋ ಈ ವ್ಯಕ್ತಿ ಡಿಗ್ರಿ ಬಿಡಿ ಪಿಯುಸಿನೂ ಮಾಡಿಲ್ಲ. ಆದ್ರೆ ಯಾವ ಪ್ರೋಫೇಸರ್ಗೂ ಇರದ ತಲೆ ಈ ವ್ಯಕ್ತಿಗಿತ್ತೂ! ಬೆಳಿಗ್ಗಿನ ಪತ್ರಿಕೆ ಓದ್ತಾ ಇವರು ಕೋಡೋ ಅದೆಷ್ಟೋ ವರ್ಷಗಳ ಹಿಂದಿನ ಉದಾಹರಣೆಗಳನ್ನ ನೋಡ್ತಾ ಇದ್ರೆ ಇಪ್ಪತ್ತು ವರ್ಷಗಳ ಹಿಂದಿನ ಸುದ್ದಿ ಪತ್ರಿಕೆಯೇ ಕಣ್ಣ ಮುಂದೆ ಪ್ರತ್ಯಕ್ಷ ಆದ ಹಾಗೆ ಅನಿಸ್ತ್ತಾ ಇತ್ತು. ಲೆಕ್ಕಾಚಾರದಲ್ಲಿ, ಮೆಮೋರಿ ಪವರ್ನಲ್ಲಿ ಈ ವ್ಯಕ್ತಿ ತುಂಬಾನೇ ಪಕ್ಕಾ. ಒಮ್ಮೊಮ್ಮೆ ಇವರ ಮಾತು ಕೇಳ್ತಾ ಇದ್ರೆ ಇವರ್ ಯಾಕ್ ಇಷ್ಟು ಸಣ್ಣ ವ್ಯಕ್ತಿ ಆದ್ರೂ ಅಂತ ಅನಿಸುತ್ತೆ. ಇಂಥ ಬುಧ್ದಿವಂತಿಕೆ ಯಾಕ್ ಇವರನ್ನು ಎತ್ತರಕ್ಕೆ ಏರಿಸಲಿಲ್ಲ ಅಂತ ಅನಿಸುತ್ತೆ...ಆದರೆ ಅದಕ್ಕೂ ಈ ವ್ಯಕ್ತಿಯಲ್ಲೇ ಉತ್ತರ ಇದೆ...<br />
ತಾನು ಬುದ್ದಿವಂತ, ಸಿದ್ದಾಂತವಾದಿ, ಎಡಪಂಥೀಯ ಅನ್ನೋ ಥರ ಈ ವ್ಯಕ್ತಿಯ ವರ್ತನೆ ಇರಲಿಲ್ಲ. ಆದರೆ ಇವರ ತನ್ನ ಮಾತುಗಳಿಂದಲೇ ಎಲ್ಲರಿಗೂ ದುಶ್ಮನ್ ಆಗ್ತಾ ಇದ್ರೂ! ಇನ್ನೊಬ್ಬರ ತಪ್ಪನ್ನು ಮುಖಕ್ಕೆ `ಪಟಾರ್! ಅಂತ ಒಡೆದ ಹಾಗೆ ಹೆಳ್ತಾ ಇದ್ರೂ...ಇದು ಸಹಜವಾಗಿಯೇ ಎಲ್ಲರಿಗೂ ಕೋಪ ತರಿಸುತ್ತೆ. ಬಹುಶಃ ನನಗೂ ಇವರ ಮೇಲೆ ಹೆಚ್ಚು ಕೋಪ ತರಿಸಿದ್ದು ಇದೇ ಇರಬೇಕು. ಇನ್ನು ಇವರಿಗೆ ಸೆಂಟಿಮೆಂಟ್ ಅಂದ್ರೇನೇ ಆಗೋದಿಲ್ಲ. ಆ ಬಗ್ಗೆ ನಾವೇನಾದ್ರೂ ಮಾತಿಗಿಳಿದರೆ ಪ್ರೀತಿ ಬಗ್ಗೆ ಒಂದ್ ಸಿನಿಮಾನೇ ತೆಗೆದು ಬಿಡಬಹುದು ಅಂತ ಕಥೆ ಹೇಳ್ತಾರೆ! ಈ ವ್ಯಕ್ತಿ ಒಂಥರಾ ವಿಚಿತ್ರ. ಇವರ ಕೌಟುಂಬಿಕ ಹಿನ್ನೆಲೆಯೇ ಒಮ್ಮೆಗೆ ಆಶ್ಚರ್ಯ ಹುಟ್ಟಿಸುತ್ತೆ. ಅವರು ಜೀವನದಲ್ಲಿ ಯಾರನ್ನೂ ಪ್ರೀತಿಸಲಿಲ್ವ್ವಂತೆ, ಪ್ರೀತಿಸಿದ್ದು ಅವರ ತಾಯಿ ಒಬ್ಬರನ್ನೇ, ಇನ್ನು ಕಣ್ಣೀರು ಹಾಕಿದ್ದು ಕೂಡ ಆ ತಾಯಿ ತೀರಿ ಕೊಂಡಗಳೇ ಅನ್ನೋದು ಅವರ ಮಾತು. ಕೆಲವೊಮ್ಮೆ ತೀರಾ ಸೆನ್ಸಿಟಿವ್ ಅನಿಸಿಬಿಡ್ತಾರೆ,...ತುಂಬಾ ಹತ್ತಿರ ಆಗ್ತಾರೆ...ನಮ್ಮ ಎಲ್ಲಾ ನೋವನ್ನೂ ಇವರ ಜೊತೆ ಹೇಳ್ಬೇಕು ಅನಿಸುತ್ತೆ...ಗೊತ್ತಿದ್ದೋ ಗೊತ್ತಿಲ್ದೇನೋ ಕೆಲವೊಮ್ಮೆ ಈ ವ್ಯಕ್ತಿ ಜೊತೆ ತೀರಾ ಪರ್ಸನಲ್ ವಿಚಾರಗಳನ್ನು ಶೇರ್ ಮಾಡಿದ್ದೀನಿ..ಆದ್ರೂ ಅವರು ನನ್ನ ಪಾಲಿಗೆ ದುಶ್ಮನ್! <br />
ಯಾಕೆ ಅವರು ನನ್ನ ಪಾಲಿಗೆ ದುಶ್ಮನ್ ಆದ್ರೂ ಅಂತ ಯೋಚನೆ ಮಾಡಿದ್ರೆ ಉತ್ತರ ಸಿಗೋದೇ ಇಲ್ಲ. ಬಹುಶಃ ಆ ವ್ಯಕ್ತಿ ಯಾರ ಹಿತವನ್ನು ಬಯಸದೇ ಇರೋದೇ ಇದಕ್ಕೆ ಕಾರಣವಾ? ಅಥವಾ ಎಲ್ಲರ ತಪ್ಪನ್ನು ಎತ್ತಿ ಹಿಡಿಯೋದೇ ಇದಕ್ಕೆ ಕಾರಣವಾ? ಇದ್ರೂ ಇರಬಹುದು ಅಲ್ವಾ?<br />
ಆದ್ರೆ ಒಂದಂತೂ ಸತ್ಯ. ನಾವೆಲ್ಲಾ ಇನ್ನೊಬ್ಬರೂ ತಪ್ಪು ಮಾಡಿದ್ರೂ ಅವರ ಎದುರಲ್ಲೇ ಹೇಳೋದಕ್ಕೆ ಹೋಗೋದಿಲ್ಲ. ಕಾರಣ ನಮ್ಮ ಸ್ವಾರ್ಥ ಇರಬಹುದು, ಅಥವಾ ಅವರ ಭಯ ಇರಬಹುದು, ಅಥವಾ ಸಂಬಂಧ ಹಾಳ್ ಮಾಡೋದು ಬೇಡ ಅನ್ನೋ ಮನಸ್ಥಿತಿ ಇರಬಹುದು. ಆದ್ರೆ ಈ ವ್ಯಕ್ತಿ ಅದಕ್ಕೂ ಉತ್ತರ ಆಗ್ತಾರೆ. ಇವರು ಯಾವತ್ತಿದ್ರೂ ಏಕಾಂಗಿ...ತಪ್ಪನ್ನು ಎತ್ತಿ ಹಿಡಿಯೋ ವ್ಯಕ್ತಿ..ಇಲ್ಲಿ ಎಲ್ಲರೊಂದಿಗೂ ದ್ವೇಷ ಕಟ್ಟಿಕೊಳ್ಳುವ ವ್ಯಕ್ತಿತ್ವ...ಕೆಲವೊಮ್ಮೆ ಇವರ ವ್ಯಕ್ತಿತ್ವ ನನಗೆ ತುಂಬಾನೇ ಅಂದ್ರೆ ತುಂಬಾನೇ ಇಷ್ಟ ಆಗಿದೆ....ಕೆಲವೊಮ್ಮೆ ನಾವಿಬ್ಬರೂ ಅಜನ್ಮ ದುಶ್ಮನ್ಗಳಾಗರ್ತೀವಿ...! ಆದ್ರೆ ಒಂದಂತೂ ಸತ್ಯ...ಈ ವ್ಯಕ್ತಿಯಿಂದ ನಾನು ಜೀವನದಲ್ಲಿ ಕಲಿತುಕೊಂಡ ಪಾಠ ಇದೆಯಲ್ಲ...ಬಹುಶಃ ಅದು ಯಾವ ಡಿಗ್ರೀನಲ್ಲೂ ಕಲಿಸೋಕೆ ಸಾಧ್ಯನೇ ಇಲ್ಲ.....<br />
</div></div>dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-13581323760922687712012-04-14T10:33:00.002-07:002012-04-14T10:33:39.790-07:00ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!<div dir="ltr" style="text-align: left;" trbidi="on"><h2 style="text-align: left;"><span style="color: yellow;">ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!</span></h2><div style="text-align: left;">ಫ್ರೆಂಡ್ಸ್ ನಿಜಕ್ಕೂ ನಾನು ಈ ಬ್ಲಾಗ್ ಆರಂಭಿಸಿದ್ದು ಹವ್ಯಾಸಕ್ಕಾಗಿಯಲ್ಲ, ಬದಲಾಗಿ ನನ್ನ ಮನಸ್ಸು ಯಾರ ಜೊತೇನೂ ಹೇಳಿಕೊಳ್ಳಲಾಗದ ವಿಚಾರಗಳನ್ನು ಈ ಮೂಲಕವಾದರೂ ವ್ಯಕ್ತಪಡಿಸೋಣ ಅಂತ. ಈಗಾಗಲೇ ಒಂದು ಹಂತಕ್ಕೆ ಕೆಲವೊಂದು ವಿಚಾರಗಳನ್ನು ಗೊತ್ತಿದ್ದೋ ಗೊತ್ತಿಲ್ಲದೇನೋ ಈ ಬ್ಲಾಗ್ನಲ್ಲಿ ದಾಖಲಿಸಿದ್ದೇನೆ. ಕೆಲವೊಮ್ಮೆ ಬರೀತಾ ಹೋದಂತೆ ನಾನ್ ಏನ್ ಬರೀತಾ ಇದೀನಿ ಅನ್ನೋದು ಕೂಡ ನನಗೆ ಗೊತ್ತಾಗೋದಿಲ್ಲ. ಎಲ್ಲಾ ಬರೆದು ಮುಗಿಸಿದ ಮೇಲೆ ಸುಮ್ನೆ ಒಮ್ಮೆ ಓದಿದರೆ ಇಷ್ಟೆಲ್ಲಾ ಬರೆದ್ನಾ ಅನಿಸಿ ಬಿಡುತ್ತೆ. ಕೆಲವೊಮ್ಮೆ ತೀರಾ ಖಾಸಗಿ ವಿಚಾರಗಳನ್ನು, ಯಾವುದನ್ನು ಬರೆಯ ಬಾರದು ಅಂದ್ಕೊಂಡಿರ್ತೀನೋ ಅದನ್ನು....ಒಟ್ಟಾರೆ ಎಲ್ಲನೂ ಈ ಬ್ಲಾಗ್ನಲ್ಲಿ ಗೀಚಿದ್ದೀನಿ..<br />
ಈ ಜೀವನ ಅಂದ್ರೇನೆ ಹಾಗೆ..ಉತ್ತರವೇ ಇಲ್ಲದ ಪ್ರಶ್ನೆ..ಹಿಂದೆ ನನಗೂ ತುಂಬಾ ಆಸೆಗಳಿತ್ತು..ಆಕಾಂಕ್ಷೆಗಳಿತ್ತು, ಏನಾದರೂ ಸಾಧಿಸಬೇಕು ಅನ್ನೋ ಛಲ ಇತ್ತು..ಈಗಲೂ ಇದೆ. ಆದರೆ ಎಲ್ಲೋ ಒಂದು ಸಣ್ಣ ನೋವು ಆಗಾಗ ಬಿಡದೇ ಕಾಡುತ್ತೆ. ಬಹುಶಃ ಜೀವನ ಅಂದ್ರೆ ಇದೇ ಇರಬೇಕು. ಸಮಸ್ಯೆ ಮನುಷ್ಯನಿಗೆ ಸಾಮಾನ್ಯ ಅಂತಾರೆ, ಆದರೆ ನನ್ನ ವಿಚಾರದಲ್ಲಿ ನನ್ನ ನೋವು ಸಮಸ್ಯೇನೇ ಅಲ್ಲ...ಜಸ್ಟ್ ಒನ್ ಫೀಲ್ ಅಷ್ಟೇ...<br />
ಆದರೆ ಆ ಫೀಲ್ ಅಂತಾರಲ್ಲ..ಅದೇ ಕಣ್ರೀ ತುಂಬಾ ಅಂದ್ರೆ ತುಂಬಾ ನೋವ್ ಕೊಡ್ತಾ ಇರೋದು. ಒಂದ್ ವರ್ಷ ಪ್ರೀತಿಯಿಂದ ನನ್ನ ಮೊಬೈಲ್ನ ಕದ ತಟ್ಟುತ್ತಿದ್ದ ಎಸ್ಎಮ್ಎಸ್ ಅಕಸ್ಮತ್ತಾಗಿ ನಿಂತ್ ಹೋದರೆ ಏನಾಗ್ಬೇಡ? ಏನಿಲ್ಲ...ಜಸ್ಟ್ ನೋವಷ್ಟೇ..!<br />
ಕೆಲವೊಬ್ಬರ ಜೀವನ ನಮಗೆ ಮಾದರಿ, ಇನ್ನು ಕೆಲವರದ್ದು ವ್ಯಕ್ತಿತ್ವ...ನನಗೂ ಕೆಲವರು ಮಾದರಿ..ಯಾವ ರೀತಿ ಅಂತ ಮಾತ್ರ ಗೊತ್ತಾಗ್ತಾ ಇಲ್ಲ. ಒಂದು ತುಂಬು ಕುಟುಂಬದಲ್ಲಿ ದಿನಪೂತರ್ಿ ನಗು, ತಮಾಷೆ, ಒಟ್ಟಿಗೆ ಕೆಲಸ, ಹರಟೆ ಎಲ್ಲಾ ಇರುತ್ತೆ. ಇದೆಲ್ಲದರ ಪರಿಚಯಾನೇ ಇಲ್ದೇ ಇರೋವನಿಗೆ ಇವೆಲ್ಲಾನೂ ಸಿಕ್ಕಿ ಬಿಡುತ್ತೆ.. ಆದ್ರೆ ಎಷ್ಟು ದಿನ? ಜಸ್ಟ್ ಒಂದು ವರ್ಷ..ಮತ್ತೆ ಅದೇ ಏಕಾಂಗಿತನ..ಒಬ್ಬಂಟಿತನ...ಒಬ್ಬನೇ ಕೂತಾಗ ಕಣ್ಣಲ್ಲಿ ಒಂದ್ ಹನಿ ನೀರು...ಇನ್ನರ್ ಫೀಲಿಂಗ್ ಅಂದ್ರೆ ಇದೇನಾ? ಇದ್ರೂ ಇರಬಹುದು. <br />
ನಿಮ್ಮನ್ನು ಒಬ್ಬರು ತುಂಬಾ ಇಷ್ಟ ಪಡ್ತಾರೆ. ಅವರ ಎಲ್ಲಾ ವಿಚಾರಗಳನ್ನೂ ನಿಮ್ ಜೊತೆ ಶೇರ್ ಮಾಡ್ತಾರೆ. ಅವರ ಬತರ್್ ಡೇಗೆ ಏನಿಲ್ಲಾ ಅಂದರೂ ಒಂದ್ ವಾರ ಮೊದಲೇ ನೀವು ಗಿಫ್ಟ್ ಕೊಡೋಕೆ ಪ್ಲಾನ್ ಮಾಡ್ತೀರಾ. ನೀವ್ ಮಾಡಿದ್ದೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾನಂತೂ ಮಾಡಿದ್ದೀನಿ....<br />
ಫಸ್ಟ್ ವಿಶಸ್, ಬೆಸ್ಟ್ ವಿಶಸ್ ಅನ್ನೋ ಹಾಗೆ ಬೆಳಿಗ್ಗೆ ಏಳು ಘಂಟೇಗೇನೆ ವಿಶ್ ಮಾಡಿದ್ದೀನಿ...ಆದ್ರೆ ಎಷ್ಟು ವರ್ಷ? ಜಸ್ಟ್ ಒನ್.........! ಇನ್ನೊಂದು ವರ್ಷ ಅದೇ ದಿನ, ಅದೇ ಸಮಯ....ಈ ಮನಸ್ಸಿಗೆ ಆ ಅವಕಾಶನೇ ಸಿಗೋದಿಲ್ಲ ಅಂದ್ರೆ....ಜಸ್ಟ್ ಫೀಲ್ ಇಟ್...ಆದರೆ ತುಂಬಾ ಸೆನ್ಸಿಟಿವ್ ಮನಸ್ಸುಗಳಿಗೆ ಮಾತ್ರ ಅನ್ನೋದು ನೆನಪಿರಲಿ. ಯಾಕೆಂದರೆ ಇಷ್ಟ ಪಟ್ಟವರನ್ನು ಮರೆತು ಹೋಗುವ ಜೀವಗಳಿಗೆ ಈ ತರ ಫೀಲ್ ಆಗೋದಿಲ್ಲ. ಆ ಜೀವವೇ ನಮ್ಮ ಜೀವನ ಅಂದುಕೊಳ್ಳುವ ಜೀವಕ್ಕೆ ಮಾತ್ರ ಈ ಥರ ಫೀಲ್ ಆಗೋದು. ಒನ್ ಟೈಮ್ ನನಗೆ ನನ್ನದೇ ಪ್ರಪಂಚ. ಶಾಲೆ ಬಿಟ್ಟರೆ ಮನೆ...ಮನೆ ಬಿಟ್ಟರೆ ಶಾಲೆ..ಈ ಮಧ್ಯೆ ಸಿಗ್ತಾ ಇದ್ದ ಒಂದೆರೆಡು ಫ್ರೆಂಡ್ಸ್. ಫ್ರೆಂಡ್ಸ್ ಜೊತೆ ಸೇರಿ ಒಂದರ್ಧ ಘಂಟೆ ಖುಷಿಯಾಗಿ ನಗೋದನ್ನು ಬಿಟ್ಟರೆ ಬೇರೆ ಎಲ್ಲೂ ನನಗೆ ನಗೋ ಅವಕಾಶಗಳೇ ಸಿಗ್ತಾ ಇರಲಿಲ್ಲ. ಚೆನ್ನಾಗಿ ಓದ್ತಾ ಇದ್ದೆ. ಇಡೀ ಕ್ಲಾಸ್ಗೇ ನಾನೇ ಫಸ್ಟ್....ಆದರೆ ಖುಷಿಯಾಗಿರೋದ್ರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್....<br />
ಸಂಬಂಧಗಳು ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಒಂದು ರೀತಿ ಬಾವಿಯೊಳಗಿರೋ ಕಪ್ಪೆ ಥರ ನನ್ನ ಜೀವನ. ಯಾರ್ ಜೊತೇಲೂ ಬೆರೀತಾ ಇರಲಿಲ್ಲ. ಯಾರ್ ಜೊತೇನೂ ಹೆಚ್ಚು ಮಾತಿಲ್ಲ. ನನ್ನಷ್ಟಕ್ಕೆ ನಾನು. ಇನ್ನೊಬ್ಬರ ಸಮಸ್ಯೆನಲ್ಲೂ ಪಾಲು ತೆಗೆದುಕೊಳ್ಳದಷ್ಟು ಸ್ವಾಥರ್ಿ ನಾನು! ಒಂದು ದೊಡ್ಡ ಗುಂಪು ಕಟ್ಟಿಕೊಂಡು ಇದ್ರೆ ಎಲ್ಲಿ ನನ್ನ ಶಿಕ್ಷಣಕ್ಕೆ ತೊಂದರೆ ಆಗುತ್ತೋ ಅನ್ನೋ ಜಾಯಮಾನ ನನ್ನದು. ಇನ್ನು ಶಾಲೆಯಲ್ಲೂ ಅಷ್ಟೇ. ಎಲ್ಲರ ಥರ ಡ್ಯಾನ್ಸ್, ಸ್ಪೋಟ್ಸರ್್ ನನಗೆ ಆಗಿ ಬರೋದೇ ಇಲ್ಲ. ನಂದೇನಿದ್ದರೂ ಕ್ವಿಜ್, ಪ್ರಬಂಧ....ಅಷ್ಟೇ..ಇಲ್ಲೂ ಅಷ್ಟೇ...ಗೆದ್ದಾಗ ಒಬ್ಬನೇ ಖುಷಿ ಪಡ್ತಾ ಇದ್ದೆ..ಸೋತಾಗಲೂ ಒಬ್ಬನೇ ಫೀಲ್ ಆಗ್ತಾ ಇದ್ದೆ...ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳೋದು ಹೇಗೆ ಅಂತಾನೆ ಗೊತ್ತಿಲ್ಲ. ಒಂಥರಾ ವಿಚಿತ್ರ ಕ್ಯಾರೆಕ್ಟರ್ ನನ್ನದು. ಸರಿಯಾಗಿ ನಮ್ಮ ಶಾಲೆಯ ಹತ್ತಿರ ಫೋಸ್ಟ್ ಡಬ್ಬ ಎಲ್ಲಿದೆ ಅನ್ನೋದು ಕೂಡ ನನಗೆ ಗೊತ್ತೇ ಇರಲಿಲ್ಲ. ನನ್ನ ಜೀವನದ ಬಗ್ಗೆ ಇನ್ನೂ ಹೇಳ್ತೀನಿ....ಆದ್ರೆ ಒಂದೇ ಸಲ ಬೇಡ....ನಿಮಗೂ ಕೇಳಿಸಿಕೊಳ್ಳೋಕೆ ಕಷ್ಟ ಆಗಬಹುದು....<br />
ಧ್ವನಿ </div></div>dhwanihttp://www.blogger.com/profile/02264839456762759901noreply@blogger.com0tag:blogger.com,1999:blog-4114398660755618556.post-27661229319644982662012-04-08T10:31:00.000-07:002012-04-27T20:07:20.123-07:00ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!<div dir="ltr" style="text-align: left;" trbidi="on">
<br />
<h2 style="text-align: left;">
<span style="color: red;">ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!</span></h2>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhIy1kwvoOI-ysVYtNcAqSg-34wR9Iw5e0eXFIuV_IR_AK6xjD8x9gerJwj13o-SGE_4J-56WQyNNpk6QQhW6qjHl7lGDeYe_J8hxXadn3KQ4Pc7SuEHv52EcitGUlsxv-NU6FOvp7l5Q4/s1600/spring.jpg" imageanchor="1" style="margin-left: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEhIy1kwvoOI-ysVYtNcAqSg-34wR9Iw5e0eXFIuV_IR_AK6xjD8x9gerJwj13o-SGE_4J-56WQyNNpk6QQhW6qjHl7lGDeYe_J8hxXadn3KQ4Pc7SuEHv52EcitGUlsxv-NU6FOvp7l5Q4/s1600/spring.jpg" /></a></div>
<div>
<span style="color: red;"><br />
</span></div>
ನನ್ನನ್ನು ಹೆತ್ತವಳು, ಸಾಕಿದವಳು, ಬಿದ್ದಾಗ ಎತ್ತಿದವಳು, ನನ್ನನ್ನು ಸಮಾಜದಲ್ಲಿ ಒಂದು ಹಂತಕ್ಕೆ ತಂದು ನಿಲ್ಲಿಸಿದವಳು....ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಎಲ್ಲರಿಂದಲೂ ಬರುವ ಉತ್ತರ ಅಮ್ಮ.. ಆ ಸಂಬಂಧವೇ ಹಾಗೆ. ತನ್ನ ಕರುಳ ಕುಡಿಗಾಗಿ ಮಿಡಿಯುತ್ತೆ...ಹಾತೊರೆಯುತ್ತೆ.. ಜೀವನದ ಪ್ರತೀ ಕ್ಷಣದಲ್ಲೂ ತನ್ನ ಜೀವದ ಬಗ್ಗೆಯೇ ಚಿಂತಿಸುತ್ತೆ. ನನ್ನ ಅಮ್ಮನೂ ಹಾಗೆ. ಯಾರಿಗೂ ಸಿಗದ ಅಮ್ಮ..ನನಗೆ ಮಾತ್ರ ಸಿಕ್ಕ ಅಮ್ಮ. ಆಕೆ ಬಂಗಾರ ತೊಟ್ಟವಳಲ್ಲ. ಆದರೂ ಆಕೆ ಬಂಗಾರ. ಆಕೆ ಎಂದೂ ಸುಖವನ್ನು ಬಯಸಿದವಲಲ್ಲ. ಆದರೂ ಆಕೆ ಕಷ್ಟವನ್ನು ತೋರ್ಪಡಿಸಲಿಲ್ಲ. ಣಠಣಣಚಿಟಟಥಿ ಅವಳೇ ಬೇರೆ ಅವಳ ಸ್ಟೈಲೇ ಬೇರೆ..<br />
ಇದು ತನ್ನನ್ನು ಹೆತ್ತ ಅಮ್ಮನ ಬಗ್ಗೆ ಎಲ್ಲರೂ ಮನಸ್ಸಲ್ಲಿ ಅಂದುಕೊಳ್ಳುವ ಮಾತು. ಯಾಕೆಂದರೆ ತಾಯಿಯ ಮಹತ್ವವೇ ಅಂತದ್ದು. ಆಕೆಯನ್ನು ಮೀರಿಸುವವಳು ಇನ್ನೊಬ್ಬರು ಸಿಗಲಾರರು. ಆಕೆಯಷ್ಟು ಪ್ರೀತಿ ಅದು ಮರೀಚಿಕೆಯೇ ಸರಿ. ಒಂದು ಹಂತದವರೆಗೆ ಈ ಮೇಲಿನ ಪ್ರತೀ ವಿಚಾರದಲ್ಲಿ ನನ್ನ ಜೀವನ ಸ್ವಲ್ಪವೂ ವ್ಯತ್ಯಾಸ ಕಾಣಲಿಲ್ಲ. ಎಲ್ಲರಂತೆ ನನ್ನ ಅಮ್ಮ....ಆದರೆ<br />
ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!<br />
ಆಶ್ಚರ್ಯವಾಯಿತಾ? ಹೌದು...ನನ್ನ ಅಮ್ಮನ ಮಧ್ಯೆ ಮತ್ತೊಂದು ಅಮ್ಮ..ಇನ್ನೊಂದು ಪ್ರೀತಿ...ಒಂದಷ್ಟು ಕಾಳಜಿ...ಜಸ್ಟ್ ಇಷ್ಟ-ಕಷ್ಟ, ಅಲ್ಪ-ಸ್ವಲ್ಪ ಭಾವನೆಗಳ ವಿನಿಮಯ....ಇದೆಲ್ಲಾ ಅಮ್ಮನನ್ನು ಬಿಟ್ಟರೆ ಯಾರ ಜೊತೆ ತಾನೇ ಮಾಡೋಕೆ ಸಾಧ್ಯ? ನೀವೇ ಹೇಳಿ. ಹೌದು, ಅಮ್ಮ ಬಿಟ್ಟರೆ ಬೇರೆ ಯಾರ ಜೊತೇಲೂ ಇದು ಸಾಧ್ಯಾನೇ ಇಲ್ಲ...ಹಾಗಾದರೆ ಅಮ್ಮನ ಬದಲು ಸಿಕ್ಕ ಇಂತಹ ಮತ್ತೊಂದು ಸಂಬಂಧ ಅಮ್ಮ ಆಗೋಕಾಗಲ್ವ? ಇನ್ನೊಂದು ಅಮ್ಮ ಜೀವನದಲ್ಲಿ ಇಲ್ವಾ? ಇಂತಹ ಪ್ರಶ್ನೆ ನನ್ನ ಮನಸ್ಸಿನ ಆಳಕ್ಕೆ ಇಳಿದು ಅಂತಿಮವಾಗಿ ಕಣ್ನೀರಿನ ಸಮುದ್ರವಾಗಿ ಹರಿದು ಹೋಯ್ತು....ಆದರೂ ಇಲ್ಲೀ ತನಕ ಇನ್ನೊಂದು ಸಂಬಂಧ ಅಮ್ಮ ಆಗಲೇ ಇಲ್ಲ...ಯಾಕೆ ಹೀಗೆ? ಯೋಚನೆ ಮಾಡ್ತಾನೇ ಇದೀನಿ...<br />
ಕೆಲವೊಮ್ಮೆ ಈ ಸಂಬಂಧ ನನ್ನ ಹೆತ್ತ ಅಮ್ಮನಿಗಿಂತಲೂ ಹೆಚ್ಚಾ ಅಂತ ಅನಿಸಿದ್ದೂ ಇದೆ..,ಇನ್ನು ಕೆಲವೊಮ್ಮೆ ನನ್ನ ಹೆತ್ತಮ್ಮನ ಮುಂದೆ ಈ ಮತ್ತೊಂದು ಅಮ್ಮ ಯಾವತ್ತೂ ಅಮ್ಮ ಆಗೋಕೇ ಸಾಧ್ಯಾನೇ ಇಲ್ಲ ಅಂತ ಅನಿಸಿದ್ದೂ ಇದೆ....ಆದರೆ ಭಾವನೆಗಳು ಬಿಡೋದಿಲ್ಲ....ಮನಸ್ಸಿನ ಆಳಕ್ಕೆ ಜಿಗಿದು ಕೊರೆಯೋಕೆ ಫ್ರಾರಂಭಿಸಿದೆ...ಮತ್ತೊಂದು ಅಮ್ಮ ಪ್ರತೀ ಸಲಾನೂ ನೆನಪಾಗ್ತಾಳೆ. ಹತ್ತಿರ ಇಲ್ಲ ಅಂತ ಯೋಚನೆ ಮಾಡೋಕು ಸಾಧ್ಯ ಆಗ್ತಾ ಇಲ್ಲ. ಈ ಜೀವ ಒಂಟಿ ಆದ್ರೆ ಒಂದು ಹತ್ತೇ ನಿಮಿಷದಲ್ಲಿ ಈ ಕಣ್ಣು ಒದ್ದೆ ಆಗುತ್ತೆ...ಆ ಅಮ್ಮನ ನೆನಪಾಗುತ್ತೆ...ಇದು ಜಸ್ಟ್ ಸೆಂಟಿಮೆಂಟಾ ಅಂತ ನನ್ನನ್ನು ನಾನೇ ಕೇಳಿದ್ದೂ ಇದೆ...<br />
ಇದೇ ಬ್ಲಾಗ್ನಲ್ಲಿ ಹಿಂದೊಮ್ಮೆ ಮಾನವೀಯ ಸಂಬಂಧಗಳ ಬಗ್ಗೆ ಬರೆದಿದ್ದೆ. ಒಂಟಿಯಾದಾಗ ಆ ಮತ್ತೊಂದು ಅಮ್ಮ ಮಾನವೀಯ ಸಂಬಂಧಾನಾ? ಅಂತ ಪ್ರಶ್ನೆ ಮಾಡಿಕೊಂಡಿದ್ದೆ. ಆದರೆ ಆ ಮತ್ತೊಂದು ಅಮ್ಮ ಈ ಪ್ರಶ್ನೆಗೆ ಉತ್ತರವಾಗಲೇ ಇಲ್ಲ. ಒಮ್ಮೊಮ್ಮೆ ತೀರಾ ನೆನಪಾಗ್ತಾಳೆ ಆ ಮತ್ತೊಂದು ಅಮ್ಮ...ಕೆಲವೊಮ್ಮೆ ಹತ್ತಿರ ಇರೋ ಅಮ್ಮಾನೇ ತುಂಬಾ ಹತ್ತಿರ ಆಗ್ತಾಳೆ....ಒಂಟಿಯಾದಾಗ ಮಾತ್ರ ಆ ಮತ್ತೊಂದು ಅಮ್ಮ ಬಿಡದೇ ಕಾಡ್ತಾಳೆ...ಯಾಕ್ ಹೀಗೆ...ಉತ್ತರ ಸಿಗ್ತಾ ಇಲ್ಲ.<br />
ಸೆನ್ಸಿಟಿವ್, ಸೆಂಟಿಮೆಂಟ್, ತುಂಬಾ ಹಚ್ಕೋಳ್ಳೋದು ಅಂದ್ರೆ ಇದೇನಾ? ಒಂದು ವೇಳೆ ಇದೇ ಹಾಗಿದ್ರೆ ಆ ಮತ್ತೊಂದು ಅಮ್ಮ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯವಾ? ಇಲ್ಲ...ಖಂಡಿತಾ ಇಲ್ಲ...ಆಕೆ ಯಾವತ್ತೂ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯಾನೆ ಇಲ್ಲ. ಆದರೂ...................<br />
ಧ್ವನಿ</div>dhwanihttp://www.blogger.com/profile/02264839456762759901noreply@blogger.com5