Sunday 20 May 2012

THANKS TO THIS SUNDAY..........!

THANKS TO THIS SUNDAY..........!

ಫ್ರೆಂಡ್ಸ್ ಬ್ಲಾಗ್ ಬರೆಯದೇ ತುಂಬಾ ದಿನಗಳೇ ಆದವು. ಎಕ್ಸಾಂನ ಒತ್ತಡದ ಮಧ್ಯೆ ನನ್ನ ಬರಹಕ್ಕೆ ಸಣ್ಣದೊಂದು ವಿರಾಮ ಕೊಟ್ಟಿದ್ದೆ. ಧ್ವನಿಯ ಬರಹಕ್ಕೆ ಮತ್ತೆ ಮುನ್ನುಡಿಯಿಡುತ್ತಿದ್ದೇನೆ.
ಪ್ರತೀ ಆದಿತ್ಯವಾರ ನನ್ನ ಜೀವನದಲ್ಲಿ ಜಸ್ಟ್ ರಿಲ್ಯಾಕ್ಸ್ ಆಗುವ ದಿನ.  ಕಳೆದು ಹೋದ ಒಂದು ವಾರವನ್ನು ಮತ್ತೆ ಮೆಲುಕು ಹಾಕುವ ದಿನ. ಅದೇ ಟೈಮ್ ವೇಸ್ಟ್ ಸಂಡೇ..ಅದೇ ಆಟ..ಅದೇ ಊಟ...
ಆದ್ರೆ ಈ ಬಾರಿಯ ಸಂಡೇ ಮಾತ್ರ ತುಂಬಾನೇ ಅಂದ್ರೆ ತುಂಬಾನೇ ವಿಶೇಷವಾಗಿತ್ತು.
ಸರಿಸುಮಾರು 12ವರ್ಷಗಳಾದವು ನಾನು ಆ ಸ್ಥಳಕ್ಕೆ ಹೋಗಿ. ಅಲ್ಲಿದ್ದವರ ಮುಖ ನೋಡಿಯೂ ಅಷ್ಟೇ ವರ್ಷಗಳಾಗಿತ್ತು. ತುಂಬಾ ಅಂದ್ರೆ ತುಂಬಾ ಬದಲಾಗಿತ್ತು ಆ ಊರು...ಬದಲಾಗಿತ್ತು ಅಲ್ಲಿನ ಜನಜೀವನ..ಬದಲಾಗಿತ್ತು ಅಲ್ಲಿನ ಜನರ ಜೀವನ ಪದ್ದತಿ..ಹೌದು ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಇದ್ದ ಯಾವ ಚಿತ್ರಣವೂ ಇಂದು ಅಲ್ಲಿಲ್ಲ. ಎಲ್ಲವೂ ಸ್ತಬ್ಧ..ಇಷ್ಟೆಲ್ಲಾ ಹೇಳ್ತಾ ಇರೋದು ಯಾವ ಸ್ಥಳದ ಬಗ್ಗೆ ಗೊತ್ತಾ?
ನನ್ನ ತಂದೆಯ ಊರಿನ ಬಗ್ಗೆ! ಹುಟ್ಟ್ಟಿದಾಕ್ಷಣ ಕಳೆದುಕೊಂಡ ಜೀವವೊಂದರ ತವರು ನೆಲದ ಬಗ್ಗೆ. ಬದುಕಿನ ಪ್ರತೀ ಕ್ಷಣವನ್ನೂ ಪಕ್ಕಾ ಸೆಂಟಿಮೆಂಟಲ್ ಆಗಿ ನೋಡುವ ನನಗೆ ಈ ಆದಿತ್ಯವಾರ ಅನ್ನೋದೇ ಒಂದು ಭಾವುಕ ದಿನ..ಭಾವುಕ ಕ್ಷಣ..ಎಲ್ಲವೂ ಆಗಿತ್ತು..
ನನ್ನ ತಂದೆಯ ಊರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರು. ಒಂದು ಕಾಲದಲ್ಲಿ ಸಂಪೂರ್ಣ ಹಳ್ಳಿಗಾಡು. ವಿಭಿನ್ನ ಜನಜೀವನ. ಆಡು ಭಾಷೆ ತುಳವೇ ಆದರೂ ಅಲ್ಲೂ ವಿಭಿನ್ನತೆ.   ರೈತಾಪಿ ವರ್ಗವನ್ನು ಗುರುತಿಸಬಹುದಾದ ಒಂದು ಸಣ್ಣ ಊರು. ನಾನಲ್ಲಿಗೆ ಕಾಲಿಟ್ಟು ಸರಿಸುಮಾರು ಹನ್ನೆರೆಡು ವರ್ಷಗಳೇ ಸಂದವು. ಆದರೆ ಈ ಬಾರಿ ಯಾಕೋ ಗೊತ್ತಿಲ್ಲ. ನನ್ನ ಮನಸ್ಸು ಅಲ್ಲಿಗೆ ಹೋಗಲೇ ಬೇಕು ಅಂತ ತುಡಿಯುತ್ತಿತ್ತು. ತುಡಿಯುವ ಮನಸ್ಸಿಗೆ ನಿರಾಸೆ ಮಾಡುವ ವ್ಯಕ್ತಿ ನಾನಲ್ಲ. ಬೈಕ್ ಏರಿ ಹೊರಟೇ ಬಿಟ್ಟೆ. ಆಗಲೇ ಅಲ್ಲಿನ ಬದಲಾದ ಚಿತ್ರಣದ ದರ್ಶನ ನನಗಾಗಿದ್ದು...
ಹಳ್ಳಿಗಳು ಎಂದಿಗೂ ಬದಲಾಗೋದಿಲ್ಲ ಅನ್ನುವವರಿದ್ದಾರೆ. ಆದ್ರೆ ಸಾಲೆತ್ತೂರು ಎಂಬ ಹಳ್ಳಿ ಸಣ್ಣ ಮಟ್ಟಿಗೆ ಬದಲಾಗಿದೆ. ಇಲ್ಲಿನ ಜನರ ಜೀವನ ವಿಧಾನ ಬದಲಾಗಿದೆ. ತಾಂತ್ರಿಕತೆ ಇಲ್ಲಿನ ಮನೆ ಹೊಕ್ಕಿದೆ. ಸಿಟಿ ಜನರ ಬದುಕಿನ 75%ದಷ್ಟನ್ನು ಇಲ್ಲಿನ ಜನ ಇಂದು ಅನುಸರಿಸುತ್ತಿದ್ದಾರೆ  ಮತ್ತು ಅನುಭವಿಸುತ್ತಿದ್ದಾರೆ! ಹಳ್ಳಿಗಳು ಉದ್ದಾರವಾಗುತ್ತಿಲ್ಲ ಎನ್ನುವವರಿಗೆ ಇದೊಂದು ಉತ್ತರ. ನಿಜಕ್ಕೂ ಇಲ್ಲಿನ ಜನರ ಜೀವನ ತುಂಬಾನೇ ಗ್ರೇಟ್.
ಆದರೂ ರೈತಾಪಿ ವರ್ಗ, ಉಳುವ ಭೂಮಿ, ಹಚ್ಚ ಹಸಿರಿನ ತೋಟ ಎಂಬ ಹಳ್ಳಿಗಾಡಿನ ಅಧ್ಬುತ ಸೊಗಡಿನ ಚಿತ್ರಣ ಮಾತ್ರ ಇಲ್ಲಿಲ್ಲ. ಈಗ ಎಲ್ಲವೂ ಹೈಫೈ. ನೇಗಿಲು ಹಿಡಿದು ಹೊಲದಲ್ಲಿ ದುಡಿಯುತ್ತಿದ್ದ ರೈತ ಇಂದು ಪ್ಯಾಂಟ್ ಶಟರ್್ ಏರಿಸಿಕೊಂಡು ಸಿಟಿಯತ್ತ ಮುಖಮಾಡಿದ್ದಾನೆ. ಉಳುವ ಭೂಮಿ ಹಚ್ಚ ಹಸಿರಿನ ಆಸರೆಯಿಲ್ಲದೆ ಪಾದಚಾರಿಗಳ ಸ್ವರ್ಗವಾಗಿ ಹೋಗಿದೆ! ಎಲ್ಲೋ ಒಂದೆರೆಡು ಅಡಕೆ ಮರಗಳಿದ್ದರೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ..ಇದನ್ನೆಲ್ಲಾ ನೋಡುವಾಗ ಕೊಂಚ ಬೇಸರವೂ ಆಯಿತು. ಆಗ ಮುಗ್ಧ ರೈತರನ್ನು ಮರಳು ಮಾಡಿದ ನಮ್ಮ ಮಾಡ್ರನ್ ಸಿಟಿ ಲೈಫ್ ಬಗ್ಗೆಯೇ ಅಸಹ್ಯ ಹುಟ್ಟಿತು. ಇವೆಲ್ಲದರ ಮಧ್ಯೆ ಹನ್ನೆರೆಡು ವರ್ಷಗಳ ನಂತರದ ಒಂದಷ್ಟು ಸೆಂಟಿಮೆಂಟ್ಗಳು ನೆನಪಾದವು...!
ಫ್ರೆಂಡ್ಸ್, ನಾವೆಲ್ಲಾ ಹೆಚ್ಚಾಗಿ ಪ್ರವಾಸ ಹೋಗ್ತೀವಿ. ಎಲ್ಲೋ ದೂರದ ಊರಿಗೋ, ಕಾಣದ ಜಾಗಕ್ಕೋ ಅಥವಾ ತುಂಬಾನೇ ಗ್ರೇಟ್ ಅನಿಸಿಕೊಂಡ ದೇವರ ಸನ್ನಿಧಾನಕ್ಕೋ ಅಷ್ಟೇ. ಆದ್ರೆ ಒಮ್ಮೆ ಈ ಮೊದಲು ನೀವು ಹೋಗಿದ್ದ, ಈಗ ಹೋಗದೇ ತುಂಬಾನೇ ವರ್ಷಗಳಾದ, ನಿಮ್ಮ ಜೀವಕ್ಕೆ, ಜೀವನಕ್ಕೆ ತುಂಬಾ ಹತ್ತಿರವಾದ, ಹೋದ ತಕ್ಷಣ ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸ್ಥಳಗಳಿಗೊಮ್ಮೆ ಜಸ್ಟ್ ಹಾಗೇನೆ ಹೋಗಿ ಬನ್ನಿ. ಆದ್ರೆ ನೆನಪಿರಲಿ, ಇದೊಂದು ಪ್ರವಾಸ ಆಗಿರಬಾರದು. ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸಣ್ಣದೊಂದು ಪುಸ್ತಕವಾಗಿರಬೇಕು. ಆಗ ನಿಮ್ಮ ಹಾದಿಯಲ್ಲಿ ಒಂದೊಂದೇ ನೆನಪಿನ ಪುಟಗಳು ತೆರೆದುಕೊಳ್ಳುತ್ತವೆ. ಜೀವನದಲ್ಲಿ ತುಂಬಾನೇ ಎಂಜಾಯ್ ಮಾಡುವ ವ್ಯಕ್ತಿತ್ವ ನಿಮ್ಮದಾಗಿದ್ದರೂ ಆ ಕ್ಷಣ ಮಾತ್ರ ನೀವೊಬ್ಬ ಭಾವುಕ ಜೀವಿಯಾಗ್ತೀರ. ಹಿಂದಿನ ಕ್ಷಣಗಳನ್ನು ನೆನಪು ಮಾಡಿಕೊಳ್ತೀರಾ..ಈ ಸಂದರ್ಭ ನಿಮ್ಮ ಮೈಂಡ್ ಸ್ವಲ್ಪ ರಿಲ್ಯಾಕ್ಸ್ ಆದ್ರೂ ಆಗಬಹುದು. ತರಲೆ, ಹುಚ್ಚಾಟ, ಜಗಳ ಎಲ್ಲದಕ್ಕೂ ಆ ಒಂದು ದಿನ ಬ್ರೇಕ್ ಬೀಳಬಹುದು. ನಿಮ್ಮಲ್ಲೂ ಒಬ್ಬ ಸಣ್ಣ ಚಿಂತಕನೋ ಭಾವುಕ ಜೀವಿಯೋ ಹುಟ್ಟಬಹುದು.
ಏನೇ ಆದರೂ ಈ ಬಾರಿಯ ಆದಿತ್ಯವಾರ ನನಗಂತೂ ತುಂಬಾನೇ ಸ್ಪ್ಪೆಷಲ್ ಡೇ. ಬದುಕಿನ ಪ್ರತೀ ಕ್ಷಣದಲ್ಲೂ ``LIFE IS NOT EASY, SO I AM ALWAYS BUSY’ ಎನ್ನುವ ನಾನು ಈ ಸಂಡೇ ಮಾತ್ರ ಫ್ರೀಯಾಗಿದ್ದ. ಜಂಜಾಟಗಳಿಂದ ದೂರವಿದ್ದೆ. ಕಳೆದು ಹೋದ ನೆನಪಿನ ಬಳಿಗೆ ಹೋಗಿ ಜಸ್ಟ್ ರಿಲ್ಯಾಕ್ಸ್ ಆದೆ.
THANKS TO THIS SUNDAY..........!

No comments:

Post a Comment