Monday 26 March 2012

ಬೆಳಗುತ್ತಿದೆ ಮಾಧ್ಯಮ ಲೋಕ ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!


ಬೆಳಗುತ್ತಿದೆ ಮಾಧ್ಯಮ ಲೋಕ
ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!
ಹೌದು, ಮಾಧ್ಯಮ ಲೋಕ ಬೆಳಗುತ್ತಿದೆ. ಒಂದು ಕಾಲದಲ್ಲಿ ಪತ್ರಿಕೆಗಳನ್ನು ಬಿಟ್ಟರೆ ಜನರಿಗೆ ಸುದ್ದಿ ತಿಳಿದುಕೊಳ್ಳುವ ಸಾಧನ ಇನ್ನೊಂದಿರಲಿಲ್ಲ. ಅದರಲ್ಲೂ ಕನ್ನಡ ಮಾಧ್ಯಮ ವಲಯದಲ್ಲಿ ಸುದ್ದಿ ವಾಹಿನಿಗಳಿಗೆ ಬರವಿತ್ತು ಎಂದರೆ ಖಂಡಿತಾ ತಪ್ಪಿಲ್ಲ. ಸಕರ್ಾರಿ ಸ್ವಾಮ್ಯದ ದೂರದರ್ಶನವನ್ನು ಬಿಟ್ಟರೆ ಜನರ ಮನೋರಂಜನೆಗೆ ಆ ಕಾಲದಲ್ಲಿ ತುಂಬಾನೆ ಕೊರತೆಯಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಗಲ್ಲಿಗೊಂದರಂತೆ ಚಾನೆಲ್ಗಳು ಹುಟ್ಟಿಕೊಳ್ಳುತ್ತಿವೆ. ವಿನೂತನ ಪ್ರಯೋಗಗಳು ನಡೆಯುತ್ತಿವೆ. ಟಿಆರ್ಪಿಯ ಬಾಲ ಹಿಡಿದು `ನಾವೇನ್ ಬೇಕಾದ್ರೂ ಮಾಡ್ತೀವಿ ಅನ್ನೋ ಚಾನೆಲ್ಗಳೂ ಇವೆ.
ಕನ್ನಡ ಟೆಲಿವಿಷನ್ ಲೋಕದಲ್ಲಿ ಮೊಟ್ಟ ಮೊದಲನೆಯದಾಗಿ ಪ್ರಸಾರಗೊಂಡ ಧಾರವಾಹಿ `ಸಿಹಿಕಹಿ. ಎಚ್.ಎನ್.ಕೆ ಮೂತರ್ಿಯವರ ಸಾರಥ್ಯದಲ್ಲಿ ಬೆಂಗಳೂರು ದೂರದರ್ಶನ 1983ರಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಅಲ್ಲಿಂದ ಧಾರವಾಹಿಗಳ ಸಣ್ಣದೊಂದು ಪರ್ವ ಆರಂಭವಾಯಿತೇ ವಿನಃ, ಸುದ್ದಿ ಚಾನೆಲ್ಗಳನ್ನು ಸ್ಥಾಪಿಸುವ ಮನಸ್ಸನ್ನು ಯಾರೊಬ್ಬರೂ ಮಾಡಲಿಲ್ಲ. ತದನಂತರ ಹುಟ್ಟಿಕೊಂಡದ್ದೇ ತಮಿಳು ನಾಡಿನ ಕಲಾನಿಧಿ ಮಾರನ್ ಮಾಲಕತ್ವದ ಉದಯ ಟಿವಿ. ಈ ವಾಹಿನಿ ಕನ್ನಡ ಟೆಲಿವಿಷನ್ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿತ್ತು. ವಿನೂತನ ಪ್ರಯೋಗಗಳ ಮೂಲಕ ಟೆಲಿವಿಷನ್ ಲೋಕದಲ್ಲಿ ಖ್ಯಾತಿ ಗಳಿಸಿತ್ತು. ಮುಂದೆ ಇದೇ ವಾಹಿನಿ ಪ್ರಥಮ ಕನ್ನಡ ಸುದ್ದಿ ವಾಹಿನಿಯನ್ನೂ ತೆರೆಗೆ ತರುವ ಮೂಲಕ ಮಾಧ್ಯಮ ಲೋಕದಲ್ಲಿ ಹೊಸ ಭಾಷ್ಯ ಬರೆಯಿತು. ಆದರೆ ಈ ವಾಹಿನಿ ಸುದ್ದಿ ಜಗತ್ತಿನಲ್ಲಿ ತನ್ನದೇ ಆದ ಧ್ಯೇಯಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಅಷ್ಟಾಗಿ ಜನತೆ ಇದರತ್ತ ಆಕಷರ್ಿತರಾಗಲಿಲ್ಲ. ನಂತರ ವರ್ಷಗಳೇ ಕಳೆದರೂ ಟಿವಿ ಮಾದ್ಯಮ ಲೋಕ ಬೆಳಗುವ ಯಾವುದೇ ಸುಳಿವುಗಳು ಲಭ್ಯವಾಗಲಿಲ್ಲ. ಕೆಲ ವರ್ಷಗಳ ನಂತರ ತನ್ನದೇ ಆದ ಪತ್ರಕೋದ್ಯಮದ ಧ್ಯೇಯಗಳೊಂದಿಗೆ ಆರಂಭವಾದದ್ದು ಟಿವಿ9 ಎಂಬ ಕನ್ನಡ ಸುದ್ದಿವಾಹಿನಿ. ತನ್ನದೇ ಆದ ಸ್ಪಷ್ಟ ನಿಲುವಿನೊಂದಿಗೆ ಅನ್ಯರಾಜ್ಯದ ಒಡೆತನದಲ್ಲಿದ್ದರೂ ಕನ್ನಡ ಮಾದ್ಯಮ ಲೋಕದಲ್ಲಿ ಈ ವಾಹಿನಿ ಸಾಕಷ್ಟು ಸದ್ದು ಮಾಡಿತು. ಒಂದು ಹಂತಕ್ಕೆ ಇಡೀ ಭಾರತ ದೇಶದಲ್ಲೇ ಟಿಆರ್ಪಿ ಟಾಪರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಯಾವುದೇ ರಾಜಕೀಯ ವ್ಯಕ್ತಿಗಳ ಒಡೆತನದಲ್ಲಿ ಈ ವಾಹಿನಿ ಇಲ್ಲ ಎನ್ನುವುದೇ ಇದರ ಪ್ರಖ್ಯಾತಿಗೆ ಕಾರಣ ಎಂದರೂ ತಪ್ಪಿಲ್ಲ.
ಟಿವಿ9 ಕನ್ನಡ ವಾಹಿನಿ ಕನ್ನಡ ಸುದ್ದಿ ಲೋಕದಲ್ಲಿ ಮಾಡಿದ ಕ್ರಾಂತಿ, ಅಳವಡಿಸಿಕೊಂಡ ಅತ್ಯಧ್ಬುತ ತಂತ್ರಜ್ಞಾನಗಳು ದೇಶದ ಬಹುತೇಕ ಮಾದ್ಯಮ ದಿಗ್ಗಜರನ್ನು ಬೆರಗುಗೊಳಿಸಿತು. ಒಂದು ಕಾಲದಲ್ಲಿ ಕೇವಲ ಮನೋರಂಜನಾ ವಾಹಿನಿಗಳಿಗೆ ಮಾತ್ರ ಸೀಮಿತವಾಗಿದ್ದ ಕೆಲವೊಂದು ಕಂಪೆನಿಗಳು ಕನರ್ಾಟಕದಲ್ಲಿ ತನ್ನ ಸುದ್ದಿ ವಾಹಿನಿಗಳ ಸ್ಥಾಪನೆಗೆ ಇಳಿದವು. ಪರಿಣಾಮ ಸುವರ್ಣ ನ್ಯೂಸ್,   ಈ ಹಿಂದೆ ಶ್ರೀರಾಮುಲು ಒಡೆತನದಲ್ಲಿದ್ದ ಜನಶ್ರೀ, ಸಮಯ, ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್, ಇತ್ತೀಚೆಗಷ್ಟೇ ಹಿರಿಯ ಪತ್ರಕರ್ತ ರಂಗನಾಥ್ರವರ ಪಬ್ಲಿಕ್ ಟಿವಿಯೂ ಕೂಡ ಕನರ್ಾಟಕದಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದಿದೆ. ದಿನಕ್ಕೊಂದು ವಿಶೇಷತೆಗಳ ಜೊತೆಗೆ ಜನರ ಮುಂದೆ ಬರುವುದು ಈ ವಾಹಿನಿಗಳ ಉದ್ದೇಶವೇ ಆದರೂ ಜನರಿಗೆ 24*7 ಸುದ್ದಿ ನೀಡುವುದು ಇವುಗಳ ಕರ್ತವ್ಯ. ಒಂದು ಕಾಲದಲ್ಲಿ ದಿನದ ಹೆಚ್ಚಿನ ಸಮಯವನ್ನು ಟಿವಿ ಸೀರಿಯಲ್ಗಳನ್ನು ನೋಡಿಕೊಂಡು ಕಳೆಯುತ್ತಿದ್ದ ವೀಕ್ಷಕರ ಅಭಿರುಚಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಸುದ್ದಿವಾಹಿನಿಗಳು ಭಿತ್ತರಿಸುವ ಅರ್ಧಘಂಟೆಯ ಕಾರ್ಯಕ್ರಮಗಳೇ ಜನರ ಪಾಲಿನ ಟಿವಿ ಸೀರಿಯಲ್ಗಳಾಗಿದೆ. ಇಲ್ಲಿ ಟೀಕೆಯೂ ಇದೆ, ಬೆನ್ನು ತಟ್ಟುವ ಪ್ರೋತ್ಸಾಹವೂ ಇದೆ. ಇದಕ್ಕೇ ಹೇಳಿದ್ದು, ಮಾಧ್ಯಮ ಲೋಕ ಬೆಳಗುತ್ತಿದೆಯೆಂದು!

ಮಾರುಕಟ್ಟೆಗೆ ಬರುತ್ತಿದೆ ಎರಡು ರುಪಾಯಿ ಪತ್ರಿಕೆ!
ಸುದ್ದಿ ವಾಹಿನಿಗಳ ಟಿಆರ್ಪಿ ಸಮರದ ಮಧ್ಯೆ ಓದುಗರೇ ಜೀವಾಳವಾದ ಪತ್ರಿಕೆಗಳು ತನ್ನ ಪ್ರಸರಣ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಪತ್ರಿಕೆಗಳು ಅನಿವಾರ್ಯವಾಗಿ ದರ ಹೆಚ್ಚಳಕ್ಕೆ ಇಳಿದದ್ದೂ ಆಗಿದೆ. ಆದರೆ ಪತ್ರಿಕಾ ರಂಗದ ದರ ಸಮರದ ಮಧ್ಯೆಯೇ ಎರಡು ರುಪಾಯಿಗೆ ಕನ್ನಡದಲ್ಲೊಂದು ಪತ್ರಿಕೆ ಮಾರುಕಟ್ಟೆಗೆ ಬರಲು ಸಿದ್ದತೆ ನಡೆಸಿದೆ. ಈ ಪತ್ರಿಕೆಯ ಮುಂದೆ ತಮ್ಮ ಪತ್ರಿಕೆಗಳನ್ನು ಉಳಿಸುವುದಾದರೂ ಹೇಗೆ ಎಂಬ ಭಯ ಕೆಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಆರಂಭವಾಗಿದ್ದು, ಇದು ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಲಿದೆಯೇ ಎಂಬ ಮಾತು ಪತ್ರಿಕಾ ವಲಯದಲ್ಲಿ ಕೇಳಿ ಬಂದಿದೆ.
ಸುದ್ದಿ ಚಾನೆಲ್ಗಳು ವೈಭವೋಪೇತವಾಗಿ ಕಂಡರೂ ಪತ್ರಿಕೆಗಳ ಮುಂದೆ ಅದರ ಸಾಧನೆ ನಗಣ್ಯವೇ. ಸುದ್ದಿ ಚಾನೆಲ್ಗಳ ನಿರ್ವಹಣಾ ವೆಚ್ಚಕ್ಕಿಂತಲೂ ಹೆಚ್ಚಿನ ಖಚರ್ು ಪತ್ರಿಕೆಗಳನ್ನು ಉಳಿಸಿ ಬೆಳೆಸಲು ಬೇಕು ಎಂದರೆ ನಂಬಲೇ ಬೇಕು. ಇದರ ಮಧ್ಯೆ ಪತ್ರಿಕೆಗಳ ದರ ಸಮರ ಪತ್ರಿಕಾ ರಂಗದ ದೊಡ್ಡ ಸಮಸ್ಯೆಗಳಲ್ಲೊಂದು. ಒಂದು ಕಾಲದಲ್ಲಿ ಬೆರಳಣೆಕೆಯಷ್ಟಿದ್ದ ಪತ್ರಿಕೆಗಳ ಸಂಖ್ಯೆ ಇಂದು ಒಂದೇ ಸಮನೆ ಏರ ತೊಡಗಿದೆ. ಈ ಮಧ್ಯೆ ಕನ್ನಡದಲ್ಲೊಂದು ಪತ್ರಿಕೆ ನೂತನ ದರ ಸಮರಕ್ಕೆ ಸಜ್ಜಾಗಿದೆ. ಈ ಮೂಲಕ ದೊಡ್ಡ ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ಬರಲಿದೆಯೇ ಎಂಬ ಬಗ್ಗೆ ಪತ್ರಿಕಾ ವಲಯದಲ್ಲಿ ಬಿಸಿಬಿಸಿ ಚಚರ್ೆಗಳು ನಡೆಯುತ್ತಿವೆ. ಹದಿನಾರು ಪುಟಗಳನ್ನು ಕಲರ್ಫುಲ್ ಆಗಿ ಹೊರತರುವ ಯೋಜನೆಯೊಂದಿಗೆ ವಿಆರ್ಎಲ್ ಸಮೂಹದ ವಿಜಯ್ಸಂಕೇಶ್ವರ ಸಂಪೂರ್ಭ ಸಿದ್ದತೆ ನಡೆಸಿದ್ದಾರೆ. ಮುಂದಿನ ಎಪ್ರಿಲ್ಗೆ ಈ ಪತ್ರಿಕೆ ಕೈ ಸೇರುವುದು ನಿಶ್ಚಿತ!

ಎಲ್ಲರೂ ಇಂಗ್ಲೀಷ್ ಮೀಡಿಯಮ್! ಮುಂದಾ?
ಪ್ರತೀ ನಿಮಿಷಕ್ಕೂ ಬದಲಾವಣೆ ಕಂಡುಕೊಳ್ಳುವ ಈ ಸಮಾಜದಲ್ಲಿ ಶೈಕ್ಷಣಿಕವಾಗಿಯೂ ಬದಲಾವಣೆಗಳಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದರಿಂದ ನಮ್ಮ ಕನ್ನಡ ಪತ್ರಿಕೆಗಳಿಗೆ ಏಟು ಬೀಳುವುದಂತೂ ಗ್ಯಾರಂಟಿ! ಮುಂದೆ ಹತ್ತು ವರ್ಷ ಕಳೆದರೆ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಒಂದೇ ಸಮನೆ ಇಳಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಇಂದಿನ ಕನ್ನಡ ಪತ್ರಿಕೆಗಳ ಸಕ್ಯರ್ೂಲೇಶನ್ ಜಾಗವನ್ನು ಮುಂದೆ ಇಂಗ್ಲೀಷ್ ಪತ್ರಿಕೆಗಳು ಆಕ್ರಮಿಸಿದರೆ ಅಚ್ಚರಿ ಪಡಬೇಕಿಲ್ಲ. ಇಂಗ್ಲೀಷ್ ಮಾಧ್ಯಮದ ಅಬ್ಬರಕ್ಕೆ ಕನ್ನಡ ಮಾಧ್ಯಮ ಶಾಲೆಗಳೇ ಬಾಗಿಲು ಮುಚ್ಚುತ್ತಿದೆ. ಹೀಗಿರುವಾಗ ಮಂದಿನ ಪೀಳಿಗೆ ಕನ್ನಡ ಪತ್ರಿಕೆಗಳನ್ನು ಓದುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ. ಈಗಿನ ಎಲ್ಕೆಜಿ ಮಕ್ಕಳ ಕೈಯಲ್ಲೇ ಹಿಂದು, ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ರಾರಾಜಿಸುತ್ತಿರುವಾಗ ಮುಂದೆ ಕನ್ನಡ ಪತ್ರಿಕೆಗಳ ಉಳಿವು ಸಾಧ್ಯಾನಾ? ನೆನಪಿರಲಿ, ಇದು ಕನ್ನಡ ಪತ್ರಿಕೆಗಳಿಗೆ ಮಾತ್ರವಲ್ಲ. ಕನ್ನಡದ ಇಲೆಕ್ಟ್ರಾನಿಕ್ ಮೀಡಿಯಾಗಳಿಗೂ...!


ಪತ್ರಿಕೋದ್ಯಮಕ್ಕೆ ವಿಪುಲ ಅವಕಾಶ
ಇಂದು ಪತ್ರಕೋದ್ಯಮ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿಯೇ ಪತ್ರಿಕೋದ್ಯಮ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚಿದೆ. ಇವರ ಮುಖ್ಯ ಉದ್ದೇಶ ಪತ್ರಿಕೆಗಳನ್ನು ಸೇರುವುದು ಎನ್ನುವುದಕ್ಕಿಂತ ಸುದ್ದಿ ವಾಹಿನಿಗಳು ಎನ್ನುವುದು ಅಷ್ಟೇ ಸತ್ಯ. ಕೈಯಲ್ಲೊಂದು ಮೈಕ್ ಹಿಡಿದು ಬೀದಿಗಿಳಿದರೆ ನಮ್ಮ ಘನತೆ ಹೆಚ್ಚುತ್ತದೆ ಅಂದುಕೊಳ್ಳುವವರ ಸಂಖ್ಯೆ ಇದರಲ್ಲಿ ಸ್ವಲ್ಪ ಹೆಚ್ಚೇ ಇದೆ. ಇಂದು ಸಿನಿಮಾ ನಟರಷ್ಟೇ ಖ್ಯಾತಿ, ಹೆಸರನ್ನು ಸುದ್ದಿ ವಾಹಿನಿಗಳ ಆ್ಯಂಕರ್ಗಳು ಪಡೆದುಕೊಂಡಿರುತ್ತಾರೆ. ಹಾಗಾಗಿ ನೈಜ ಪತ್ರಿಕೋದ್ಯಮದ ಉದ್ದೇಶಗಳೇ ಇಲ್ಲದೆ ಕೆಲಸ ಗಿಟ್ಟಿಸಿಕೊಳ್ಳಲು ಈ ವಿಭಾಗವನ್ನು ಆರಿಸಿಕೊಳ್ಳುವವರೂ ಇದ್ದಾರೆ. ಏನೇ ಆದರೂ ಇಂದು ಮಾದ್ಯಮ ರಂಗ ಬೆಳೆಯುತ್ತಿದೆ ಎನ್ನುವುದು ಅಷ್ಟೇ ಸತ್ಯ.

No comments:

Post a Comment