Tuesday 20 November 2012

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....

ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
  ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!

                                                                                                                                ಧ್ವನಿ








Friday 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ