Friday 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ

No comments:

Post a Comment