Thursday 24 October 2013


ಸೌಜನ್ಯ ಪ್ರಕರಣದಲ್ಲಿ ಮಾಧ್ಯಮಗಳ ನಡೆ ಸ್ಪಷ್ಟಗೊಳ್ಳಬೇಕಿದೆ...!

ಸೌಜನ್ಯ


ಸೌಜನ್ಯ.....ಈಗ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡೀ ಕನರ್ಾಟಕದಲ್ಲಿ ಈ ಹುಡುಗಿ ಮನೆ ಮಾತಾಗಿ ಹೋಗಿದ್ದಾಳೆ. ಸತ್ತ ನಂತರ ಅದರಲ್ಲೂ ಮಣ್ಣು ಸೇರಿ ಒಂದು ವರ್ಷವಾದ ನಂತರ ಈಕೆ ಈ ಮಟ್ಟಿನ ಕ್ರಾಂತಿಗೆ ಕಾರಣಕತರ್ೆಯಾಗುತ್ತಾಳೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಇದೀಗ ಎಲ್ಲವೂ ಅಂದುಕೊಂಡದ್ದನ್ನು ಮೀರಿ ನಡೆಯುತ್ತಿದೆ. ಒಂದು ವಾರದ ಹಿಂದೆ ಅಂದರೆ ಅಕ್ಟೋಬರ್ 11, 2013ರ ಶುಕ್ರವಾರ ಸಂಜೆ 4.45ರವರೆಗೆ ಸೌಜನ್ಯ ಬಗ್ಗೆ ಯೋಚಿಸುವುದು ಬಿಡಿ, ರಾಜ್ಯದ ಮುಕ್ಕಾಲು ಪಾಲು ಜನತೆಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಆದರೆ ನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಆಕೆಯ ಸಾವಿನ ಹಿಂದೆ ತಳುಕು ಹಾಕಿಕೊಂಡ ಘಟಾನುಘಟಿಗಳ ಹೆಸರು ಕೇಳಿ ಇಡೀ ರಾಜ್ಯವೇ ನಡುಗಿ ಹೋಯಿತು. ಯಾರಪ್ಪ ಈ ಹುಡುಗಿ ಆಂತ ಎಲ್ಲರೂ ವಿಚಾರಿಸ ತೊಡಗಿದರು. ಒಂದು ವರ್ಷದ ಹಿಂದೆ ನಡೆದ ಪ್ರಕರಣ ಈಗ್ಯಾಕೆ ಸದ್ದು ಮಾಡುತ್ತಿದೆ ಅಂತ ಅಶ್ಚರ್ಯಪಟ್ಟರು. ಈ ಮೂಲಕ ಸೌಜನ್ಯ ಮತ್ತೆ ಬಂದಿದ್ದಾಳೆ....ತನ್ನ ಸಾವಿನ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಯತ್ನಿಸುತ್ತಿದ್ದಾಳೆ...........................!

ಆಕೆಯ ಸಾವಿಗೆ ನ್ಯಾಯ ಸಿಗಬೇಕೆಂದು ಒಂದಷ್ಟು ಸಂಘಟನೆಗಳು ಬೀದಿಗಿಳಿದಿವೆ. ರಾಜ್ಯದ ಒಂದೇ ಒಂದು ಖಾಸಗಿ ವಾಹಿನಿ ಸೌಜನ್ಯ ಪರವಾಗಿ ಧ್ವನಿಯೆತ್ತಿದೆ. (ಈ ವಿಚಾರದಲ್ಲಿ ಉಳಿದೆಲ್ಲಾ ಮಾಧ್ಯಮಗಳು ಸತ್ತು ಮಲಗಿರಬೇಕು). ಈ ಒಂದು ಪ್ರಕರಣ ಸಾಕು, ರಾಜ್ಯದ ಸುದ್ದಿ ವಾಹಿನಿಗಳ ನಿಷ್ಪಕ್ಷಪಾತ ನಡೆಯನ್ನು ಜಗಜ್ಜಾಹಿರುಗೊಳಿಸಲು.....!
ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ...!

ಯಾರದ್ದೋ ಮನೆಯಲ್ಲಿ ಗಂಡ-ಹೆಂಡತಿ ಜಗಳವಾಡಿದರೆ ಮರುದಿನವೇ ಸ್ಟುಡಿಯೋಗೆ ತಂದು ಕೂರಿಸಿ ಜಗಳವನ್ನು ಇನ್ನಷ್ಟು ದೊಡ್ಡದು ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳಿಗೆ ಸೌಜನ್ಯ ಪ್ರಕರಣ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಘಟಾನುಘಟಿಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆಯೇ? ಬಹುಶಃ ದುರಂತ ಅಂದರೆ ಇದೇ ಇರಬೇಕು. ಅದರಲ್ಲೂ ಸೌಜನ್ಯ ಪರವಾಗಿ ಒಂದೇ ಒಂದು ಸುದ್ದಿಪ್ರಸಾರ ಮಾಡದ ಈ ವಾಹಿನಿಗಳು ಅದ್ಯಾರೋ ಈ ಬಗ್ಗೆ `ನಾವು ತಪ್ಪೇ ಮಾಡಿಲ್ಲ' ಅಂದ ತಕ್ಷಣ ಲೈವ್ ಕೊಟ್ಟು ಘಂಟೆಘಟ್ಟಲೇ ಕಿರುಚಾಡಿದ್ದು ಯಾಕೆ ಎನ್ನುವುದೇ ತಿಳಿಯುತ್ತಿಲ್ಲ. ಈ ಪ್ರಕರಣದಲ್ಲಿ ಆರೋಪ ಕೇಳಿ ಬರುತ್ತಿರುವ ವ್ಯಕ್ತಿಗಳ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ ನಿಜ. ಇಂದಿಗೂ ಅದೆಷ್ಟೋ ಮನೆಯ ದೇವರ ಫೋಟೋ ಇಡುವ ಜಾಗದಲ್ಲಿ `ಅವರ' ಫೋಟೋ ಇಟ್ಟು ಪೂಜಿಸುವವರಿದ್ದಾರೆ. ಅಷ್ಟೇ ಯಾಕೆ? ಸತ್ತು ಮಣ್ಣು ಸೇರಿದ ಸೌಜನ್ಯಳ ಮನೆಯಲ್ಲೂ ಆ ವ್ಯಕ್ತಿಯನ್ನು ಆರಾಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಬಂದು ಅಂಥವರ ಮೇಲೆ ಆರೋಪ ಹೊರಿಸುವ ಹಕೀಕತ್ತು ಯಾರಿಗೂ ಇರೋದಿಲ್ಲ ಎನ್ನುವುದನ್ನು ಪೇಯ್ಡ್ ಮೀಡಿಯಾಗಲು ಅರಿತುಕೊಳ್ಳಲಿ. ಸೌಜನ್ಯಳ ಕುಟುಂಬಿಕರು ಮಾಡುವ ಆರೋಪಗಳನ್ನು ಇಲ್ಲವೇ ಆರೋಪಿಗಳು ಎನ್ನುವ ವ್ಯಕ್ತಿಗಳನ್ನು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾದ್ಯವಿಲ್ಲ ಅಂದುಕೊಳ್ಳೋಣ. ಆದರೆ ಆ ಮನೆಯವರ ನೈಜ ಯಾತನೆಗೆ ಸ್ಪಂದಿಸುವ ಮನಸ್ಸು ಕೂಡ ನಿಮ್ಮಲ್ಲಿಲ್ಲವೇ? ಈ ಮಧ್ಯೆ ನೇರ, ದಿಟ್ಟ, ನಿರಂತರ ಎನ್ನುವ ವಾಹಿನಿಯೊಂದು ಧರ್ಮಸ್ಥಳಕ್ಕೆ ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ. ಈ ವರದಿ ಗಮನಿಸಿದರೆ ಈ ವಾಹಿನಿಯನ್ನು ಧರ್ಮಸ್ಥಳದ ಘಟಾನುಘಟಿಗಳು ಕೊಂಡುಕೊಂಡಿದ್ದಾರೆಯೇ ಎಂಬ ಅನುಮಾನ ಕೂಡ ಕಾಡುತ್ತದೆ. ಉಪಕಾರ ಮಾಡಲು ಸಾದ್ಯವಾಗದಿದ್ದರೂ ಒಂಚೂರು ಅಪಕಾರವಾದರೂ ಮಾಡಿ ಬಿಡೋಣ ಅನ್ನೋದು ಇವರ ಉದ್ದೇಶವಿರಬೇಕು, ಪ್ರಸ್ತುತ ಕೇಳಿ ಬರುತ್ತಿರುವ ಸುದ್ದಿಯ ವಿಚಾರದಲ್ಲಿ ಎಲ್ಲಾ ವಾಹಿನಿಗಳ ವಾದ ಒಂದೇ `ಸೌಜನ್ಯ ಮನೆಯವರದ್ದು ಕೇವಲ ಆರೋಪ ಮಾತ್ರ' ಎನ್ನುವುದು. ಹಾಗಾದರೆ ನೊಂದವರ ಆರೋಪಗಳನ್ನು ಇಟ್ಟುಕೊಂಡು ಈ ವಾಹಿನಿಗಳು ಸುದ್ದಿ ಪ್ರಕಟಿಸಲೇ ಇಲ್ಲವೇ? ಸ್ಟುಡಿಯೋದಲ್ಲಿ ಕೂರಿಸಿ ಇನ್ನೊಬ್ಬರ ಮಾನ ಹಾನಿ ಮಾಡಿದ ಉದಾಹರಣೆಗಳೇ ಇಲ್ಲವೇ? ಖಂಡಿತಾ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಇವರುಗಳಿಗೆ ಸೌಜನ್ಯ ಮನೆಯವರ ಆರೋಪಗಳನ್ನು ಕೇಳುವಷ್ಟು ತಾಳ್ಮೆಯಿಲ್ಲ. ಇದ್ದರೂ ಒತ್ತಡ ಎಂಬ ಅಸ್ತ್ರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ ಅನ್ನಬಹುದು. ಸುದ್ದಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು. ಇದೇ ಕಾರಣಕ್ಕೆ ಚಾನೆಲ್ಗಳನ್ನು ಸ್ಥಾಪಿಸುವ ಅದರ ಹೆಸರಿನ ಅಡಿಗೆ ಒಂದಷ್ಟು  ಘೋಷ ವಾಕ್ಯಗಳನ್ನು ಕೂಡ ಇಟ್ಟುಕೊಂಡು ತಮ್ಮ ಸ್ವಾಮಿನಿಷ್ಟೆ ಪ್ರದಶರ್ಿಸುತ್ತಾರೆ. ಆದರೆ ಈ ರೀತಿಯ ವಿಚಾರಗಳಲ್ಲಿ ಇವರುಗಳ ಘೋಷವಾಕ್ಯಗಳು ಗಾಳಿಯಲ್ಲಿ ತೂರಿ ಹೋಗಿದ್ದೇ ಹೆಚ್ಚು. ಅಸಲಿಗೆ ಸೌಜನ್ಯ ಪ್ರಕರಣದಲ್ಲಿ ಸುದ್ದಿ ವಾಹಿನಿಗಳಷ್ಟೇ ಸುದ್ದಿ ಪತ್ರಿಕೆಗಳು ಕೂಡ ಸಮಾನ ತಪ್ಪಿತಸ್ಥರು. ಅದರಲ್ಲೂ ಮಂಗಳೂರಿನಲ್ಲಿ ಅತೀ ಹೆಚ್ಚು ಸಕ್ಯರ್ೂಲೇಶನ್ ಹೊಂದಿರುವ ಪತ್ರಿಕೆಯೊಂದು ಸೌಜನ್ಯ ಮನೆಯವರು ನಡೆಸಿದ ಪತ್ರಿಕಾಗೋಷ್ಠಿಯನ್ನೂ ಪ್ರಕಟಿಸದೆ ಅದ್ಯಾರದ್ದೋ ಕೈಯಲ್ಲಿ `ಭೇಷ್' ಅನಿಸಿಕೊಂಡಿದೆಯಂತೆ...! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಪತ್ರಿಕೆಗಳದ್ದು.

ಇನ್ನು ಈ ಎಲ್ಲಾ ಆರೋಪಗಳನ್ನು ಯಥಾವಥ್ ಸುದ್ದಿ ಮಾಡಿದ ಟಿವಿ9 ವಾಹಿನಿಗೆ ಕೋಟರ್್ನಿಂದ ತಡೆಯಾಜ್ಷೆ ಬೇರೆ ತಂದಿದ್ದಾರೆ. ಈ ಮೂಲಕ ನಾವು ಕೂಡ ನಿತ್ಯಾನಂದ ಸ್ವಾಮಿಯ ಪಾಟರ್ಿ ಅನ್ನೋದನ್ನು ನಿರೂಪಿಸಿದ್ದಾರೆ(ಕಾಮಿ ಸ್ವಾಮಿ ನಿತ್ಯಾನಂದ ಕೂಡ ತನ್ನ ವಿರುದ್ದ ವರದಿ ಮಾಡದಂತೆ ತಡೆಯಾಜ್ಷೆ ತಂದಿದ್ದ). ಇನ್ನು ಟಿವಿ9 ಈ ಬಗ್ಗೆ ವರದಿ ಮಾಡಿದರೆ ಜಿಲ್ಲೆಯ ಮೂಲೆಮೂಲೆಯಲ್ಲಿ ಕರೆಂಟ್ ಕಟ್. ಬಹುಶಃ ದುರಂತ ಅಂದ್ರೆ ಇದೇ ಇರಬೇಕು. ಈಗೀಗ ಟಿವಿ ನೋಡದಂತೆ ಕರೆಂಟ್ ಕಟ್, ಕೇಬಲ್ ಕಟ್ ಎಂಬ ಕಸರತ್ತಿನ ಕೆಲಸಗಳು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಜನಾರ್ದನ ರೆಡ್ಡಿಯ ವಿಚಾರದಲ್ಲಿ ಹೀಗಾಗಿದ್ದನ್ನು ನೋಡಿದ್ದೆ. ಆದರೆ ನಮ್ಮ ಸೌಜನ್ಯ ವಿಚಾರದಲ್ಲೂ ಹೀಗಾಗ್ತಿರೋದು.......ಒಟ್ಟಿನಲ್ಲಿ ಎಲ್ಲರೂ ಅವರಿಗೆ `ಅಡ್ಡ' ಬೀಳುವವರೇ...! ಈ ಮಧ್ಯೆ ನಾವು-ನೀವು ಏನ್ ತಾನೇ ಮಾಡೋದಕ್ಕೆ ಸಾಧ್ಯ...? ಏನೇ ಆಗಲಿ...ಟಿವಿ9 ನವರ ಕೆಲಸಕ್ಕೆ ಶಹಭಾಸ್ ಗಿರಿ ಹೇಳಲೇ ಬೇಕು..ಬಿಡಿ....

ಅಪ್ಪಟ ಹಳ್ಳಿ ಸೊಗಡಿನ ಕುಟುಂಬ!
ಸೌಜನ್ಯ ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆ

ಪ್ರಕರಣ ಗಂಭೀರ ಸ್ವರೂಪಕ್ಕೆ ಹೋದ ನಂತರ ಅಂದರೆ ಮೊನ್ನೆ ಮೊನ್ನೆ ಆಕೆಯ ಮನೆಗೆ ಹೋಗಿದ್ದೆ. ಹಳ್ಳಿಗಾಡಿನ ಸೊಗಡನ್ನು ಉಳಿಸಿಕೊಂಡು ಬಾಳುತ್ತಿರುವ ಅಪ್ಪಟ ಗೌಡ ಮನೆತನ ಅವರದ್ದು. ಇಂದಿಗೂ ಅವರ ಮಗಳ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿಟ್ಟಿದ್ದಾರೆ. ಅವಳು ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆಗಳು....ಹೀಗೆ ಎಲ್ಲವೂ ಸೌಜನ್ಯಳನ್ನು ಮತ್ತೆ ನೆನಪಿಸುವ ಹಾಗಿದೆ. ಈ ಮಧ್ಯೆ  ಮಗಳು ಮನೆಯವರಿಗೆ ಕೊನೆಯದಾಗಿ ಕೊಟ್ಟು ಹೋದ ಕಣ್ಣೀರು ಕೂಡ ಒಂಚೂರು ಬತ್ತಿಲ್ಲ....! ಬಿಟ್ಟು ಹೋದ ಮನೆ ಮಗಳ ಬಗ್ಗೆ ಮನೆಯ ಪ್ರತಿಯೊಬ್ಬರು ಹೇಳುವುದು ಒಂದೇ......ಚಿನ್ನದಂಥ ಹುಡುಗಿ ಕಣ್ರೀ ಆಕೆ. ಹೌದು, ಮನೆಯ ಪ್ರತಿಯೊಬ್ಬರೂ ಆಕೆಯ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕಣ್ಣಾಲಿಗಳು ಒದ್ದೆಯಾದವು. ಮಾಡದ ತಪ್ಪಿಗೆ ಬಲಿಯಾದ ಆ ಹೆಣ್ಣುಮಗಳ ಸಾವಿನಲ್ಲಿ ಕೇಕೆ ಹಾಕಿದ ವಿಧಿಯಾಟದ ಬಗ್ಗೆಯೇ ಇನ್ನಿಲ್ಲದ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮನೆಯವರ ದುಃಖದ ಮಧ್ಯೆ ನನ್ನದು ಕ್ಷಣಿಕ ಎಂದು ಸುಮ್ಮನಾದೆ.
ಅಪ್ಪಟ ಹಳ್ಳಿ ಸೊಗಡಿನ ಸೌಜನ್ಯ ಕುಟುಂಬ

ಸರಿ ಸುಮಾರು ಒಂದು ವರ್ಷದ ಹಿಂದೆ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಒಂದೆರೆಡು ದಿನ ಸದ್ದು ಮಾಡಿ ಮಾನಸಿಕ ಅಸ್ವಸ್ಥನೊಬ್ಬ ಜೈಲು ಸೇರುವುದರೊಂದಿಗೆ ಪ್ರಕರಣ ಮುಚ್ಚಿ ಹೋಗಿತ್ತು.

ಈ ಮಧ್ಯೆ ಒಂದೆರೆಡು ಸಂಘಟನೆಗಳ ಹೋರಾಟಕ್ಕೆ ಮಣಿದು ಸಕರ್ಾರ ಯಾವುದಕ್ಕೂ ಇರಲಿ ಅಂತ ಸಿಐಡಿಗೂ ಒಪ್ಪಿಸಿತ್ತು. ಆದರೆ ನಮ್ಮದೇ ರಾಜ್ಯದ ಸಿಐಡಿಯಿಂದ ಯಾವ ಮಟ್ಟದ ನ್ಯಾಯ ನಿರೀಕ್ಷಿಸಲು ಸಾಧ್ಯ? ಒಟ್ಟಿನಲ್ಲಿ ಸೌಜನ್ಯ ಸಾವಿನ ಹಿಂದೆಯೇ ಪ್ರಕರಣ ಮುಚ್ಚಿ ಹೋದಾಗ, ಧರ್ಮಸ್ಥಳ-ಉಜಿರೆಯಲ್ಲಿ ನೆಲಕ್ಕುರುಳಿದ ಅಷ್ಟೋ ಹೆಣಗಳಲ್ಲಿ ಈಕೆಯದ್ದು ಕೂಡ ಒಂದು ಅಂತ ಒಂದಷ್ಟು ಪ್ರಜ್ಞಾವಂತರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಧರ್ಮಸ್ಥಳದ ಘಟಾನುಘಟಿಗಳ ಬಗ್ಗೆಯೇ ಆರೋಪಗಳು ಕೇಳಿ ಬಂದಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಅವರಿಂದ ಬಯಸಲು ಸಾದ್ಯವೇ?


2 comments:

  1. Soujanyalige nyaya sigali endu devaralli prarthisutteve.....

    ReplyDelete
  2. yes.............namma uddeshavu ade

    ReplyDelete