ಹಾಗೇ ಸುಮ್ಮನೆ ಒಮ್ಮೆ `ವಿಶ್ವರೂಪಂ' ನೋಡಿ ಬನ್ನಿ
ತಮಿಳು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡದೆ ತುಂಬಾ ದಿನಗಳೇ ಆದವು. ಇಂದಿನ ಕನ್ನಡ ಸಿನಿಮಾಗಳ ಅಬ್ಬರದ ಮಧ್ಯೆ ಅವುಗಳನ್ನು ನೋಡುವುದರಲ್ಲೇ ಕಳೆದು ಹೋಗಿದ್ದೆ. ಆದರೆ ಇತ್ತೀಚಿಗೆ ನೋಡಿದ `ಎದೆಗಾರಿಕೆ ಬಿಟ್ಟರೆ ಬೇರ್ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. ಹಾಗಂತ ಭಾಷೆ ಬದಲಿಸಿ ಅನ್ಯ ಭಾಷೆಯ ಸಿನಿಮಾ ನೋಡೋಣವೆಂದರೆ ಪತ್ರಿಕಾ ವಿಮಶರ್ೆಗಳೇ ಸಿನಿಮಾ ಮಂದಿರಗಳಿಗೆ ಹೋಗದಂತೆ ತಡೆಯುತ್ತಿದ್ದವು. ಆದರೂ ಇಂದು ಶುಕ್ರವಾರ ಒಂದು ತಮಿಳು ಸಿನಿಮಾ ನೋಡಿಯೇ ಬಿಟ್ಟ. ಈ ಸಿನಿಮಾದ ಬಗ್ಗೆ ನನ್ನೊಳಗಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಣ್ಣದೊಂದು ಪ್ರಯತ್ನ ಇದಾಗಿತ್ತು. ಆ ಸಿನಿಮಾ ಬೇರಾವುದೂ ಅಲ್ಲ. ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿ ನಿಷೇಧದ ಮಧ್ಯೆ ಅಲ್ಲಲ್ಲಿ ಪ್ರದರ್ಶನ ಕಾಣುತ್ತಿರುವ `ವಿಶ್ವರೂಪಂ..!ಪತ್ರಿಕೆಯಲ್ಲಿ ಕೆಲಸ ಮಾಡುವ ಕಾರಣ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಏನದು ವಿಶ್ವರೂಪಂ ಎಂಬ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದೆ. ಅದರಲ್ಲೂ ಈ ಸಿನಿಮಾ ದೇಶದ ಭದ್ರತೆಗೆ ಸವಾಲೊಡ್ಡುತ್ತದೆ ಎಂಬ ವಿವಾದ ಎದ್ದ ಮೇಲಂತೂ ಸಿನಿಮಾದ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸತೊಡಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾತ್ರ ಆಗಲೇ ಇಲ್ಲ. ಆದರೆ ಯಾವಾಗ ನಟನೆಯಲ್ಲೇ ಅತೀ ಹೆಚ್ಚು ಪ್ರಶಸ್ತಿ ಪಡೆದ ನಟ ಕಮಲ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರೋ ಆಗಲೇ ಒಂದು ಹಂತಕ್ಕೆ ಸಿನಿಮಾವೊಂದು ಸೃಷ್ಟಿಸಿದ ನೈಜ ವಿವಾದದ ಬಗ್ಗೆ ಅರಿವಾಯಿತು. ಇಷ್ಟಾದ ಮೇಲೂ ಸಿನಿಮಾ ನೋಡದೆ ಹೋದರೆ ಸರಿ ಬರಲ್ಲ ಅಂತ ತಿಳಿದು, ಶುಕ್ರವಾರ ನಗರದ ಪ್ಲಾಟಿನಂ ಚಿತ್ರ ಮಂದಿರಕ್ಕೆ ಹೋಗಿದ್ದೆ. ಎರಡೂವರೆ ಘಂಟೆಯ ಸಿನಿಮಾದಲ್ಲಿ ತೋರಿಸಲಾದ ವಿವಾದವಾದರೂ ಏನಪ್ಪ ಅಂತ ಕಣ್ಣು ಮಿಟುಕಿಸದೆ ಗಮನಿಸಿದೆ. ಆದರೆ ನನ್ನ ಪ್ರಕಾರ ಸಿನಿಮಾದಲ್ಲಿ ಅಂತಹ ಯಾವುದೇ ವಿವಾದ ವೈಯಕ್ತಿಕವಾಗಿ ನನಗೆ ಕಂಡು ಬರಲಿಲ್ಲ.
ಕಮಲ್ ಹಾಸನ್ ಒಬ್ಬ ಅಧ್ಬುತ ನಟ. ಇಡೀ ಭಾರತದಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದಾಖಲೆಯೂ ಕಮಲ್ ಮೇಲಿದೆ. ಇಂತಹ ಕಮಲ್ಹಾಸನ್ ತಾನೇ ದುಡ್ಡು ಹಾಕಿ, ನಿದರ್ೇಶಿಸಿ, ನಟಿಸಿ ಸಿನಿಮಾ ಮಾಡುತ್ತಾರೆಂದರೆ ಸಹಜವಾಗಿಯೇ ಕುತೂಹಲ ಇದ್ದದ್ದೇ. ಅದರಲ್ಲೂ ವಿಭಿನ್ನವಾದ ಶೀಷರ್ಿಕೆಯ ಮೂಲಕ ಪ್ರೇಕ್ಷಕನ ಮೆದುಳಿನ ಕದ ತಟ್ಟುವುದು ಕಮಲ್ `ಕಮಾಲ್. ಆದರೆ ಕಮಲ್ಹಾಸನ್ರ ವಿಶ್ವರೂಪಂ ಮಾತ್ರ ಪಕ್ಕಾ ವಿಭಿನ್ನ.
ಮುಸ್ಲಿಮರನ್ನು ಉಗ್ರರಂತೆ ಚಿತ್ರಿಸಲಾಗಿದೆ ಎನ್ನುವುದು ಈಗಿರುವ ವಿವಾದ. ಚಿತ್ರ ನೋಡುತ್ತಾ ಹೋದಂತೆ ಇಂತಹ ಅನುಭವ ಎಲ್ಲೂ ಆಗುವುದಿಲ್ಲ. ಕಮಲ್ ಹೇಳಿದಂತೆ ಎಲ್ಲವೂ ಅಪಘಾನಿಸ್ಥಾನದಲ್ಲಿ ನಡೆಯುವ ಟೆರರ್ ಸ್ಟೋರಿ ಅನ್ನುವುದು ಸ್ಪಷ್ಟ. ನಾವು ದಿನಬೆಳಗಾದರೆ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ನೋಡುವ ಅಂತರಾಷ್ಟ್ರೀಯ ಸುದ್ದಿಗಳೇ ಚಿತ್ರದ ಕೇಂದ್ರ ಬಿಂದು. ಒಬ್ಬ ಭಾರತೀಯ ನಟ ಕಮ್ ನಿದರ್ೆಶಕ ಅಪಘಾನಿಸ್ಥಾನದ ಉಗ್ರ ಜಗತ್ತಿನ ಸಂಪೂರ್ಣ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾನೆ ಎನ್ನುವುದು ಚಿತ್ರ ನೋಡಿದವರ ಗಮನಕ್ಕೆ ಬರುತ್ತದೆ. ನ್ಯಾಟೋ ಪಡೆಗಳು ಅಪಘಾನಿಸ್ಥಾನದ ಉಗ್ರ ಅಡಗುತಾಣಗಳ ಮೇಲೆ ನಡೆಸುವ ದಾಳಿಯನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಲಾಗಿದೆ. ಆದರೆ ಎಲ್ಲ್ಲೂ ಕೂಡ ಭಾರತೀಯ ಮುಸ್ಲಿಮರನ್ನು ಮಾತ್ರ ಉಗ್ರರಂತೆ ಚಿತ್ರಿಸಿಲ್ಲ ಎನ್ನುವುದು ಅಷ್ಟೇ ಸತ್ಯ.
ಕಮಲ್ ಒಬ್ಬ ಅಪ್ರತಿಮ ನಟ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈತನಲ್ಲೂ ಓರ್ವ ಅಧ್ಬುತ ನಿದರ್ೇಶಕನಿ ದ್ದಾನೆ ಎನ್ನುವುದು ಮಾತ್ರ ವಿಶ್ವರೂಪಂನಲ್ಲಿ ಸಾಬೀತಾಗುತ್ತದೆ. ಇಡೀ ಚಿತ್ರ ಉಗ್ರರ ಸುತ್ತ ಗಿರಕಿ ಹೊಡೆದರೂ ಸಿನಿಮಾದಲ್ಲಿ ಭಾರತೀಯರಿಗೆ ಎಳ್ಳಷ್ಟೂ ನೋವು ತರುವ ಸನ್ನಿವೇಶಗಳನ್ನು ಕಮಲ್ ಸೃಷ್ಟಿಸಿಲ್ಲ. ಅಷ್ಟೇ ಯಾಕೆ ಸಿನಿಮಾದಲ್ಲಿ ತೋರಿಸಲಾದ ಸ್ಥಳಗಳು ಕೂಡ ಭಾರತದ್ದಲ್ಲ. (ಸಿನಿಮಾದಲ್ಲಿ ತೋರಿಸಲಾಗಿರುವಂತೆ)
95ಕೋಟಿ ಸುರಿದು ಕಮಲ್ ಸಿನಿಮಾ ಮಾಡಿದ್ದಾರೆ ಅಂದಾಗ ಕಮಲ್ ಬಗ್ಗೆ ಸಹಜವಾಗಿಯೇ ಅಭಿಮಾನವಿತ್ತು. ಈ ಅಭಿಮಾನ ಸಿನಿಮಾ ನೋಡಿದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ನಟನೊಬ್ಬ ಸಿನಿಮಾದ ಮೇಲೆ ಈ ಮಟ್ಟಿನ ಭರವಸೆಯಿಟ್ಟು, ಇಂದಿನ ಲವ್ಸ್ಟೋರಿಗಳ ಮಧ್ಯೆ ಇಂತಹ ಸಿನಿಮಾ ನಿಮರ್ಿಸಿರುವುದು ನಿಜಕೂ ಗ್ರೇಟ್ ಅನಿಸದೆ ಇರದು. ಇಡೀ ಸಿನಿಮಾ ವೀಕ್ಷಿಸುವಾಗ ಕಮಲ್ ಹಣದ ವಿಚಾರದಲ್ಲಿ ರಾಜಿಯಾದಂತೆ ತೋರುತ್ತಿಲ್ಲ. ಕಮಲ್ ಎಂಟ್ರಿ ಕೊಟ್ಟಾಗ ಇಂದಿಗೂ ಮಂಗಳೂರಿನ ಥಿಯೇಟರ್ಗಳಲ್ಲೇ ವಿಶಿಲ್, ಚಪ್ಪಾಲೆ ಎಲ್ಲೆ ಮೀರುತ್ತಿದೆ ಎಂದರೆ ಊಹಿಸಿ...ಕಮಲ್ ಖದರ್ ಎಷ್ಟಿರಬೇಡ ಎನ್ನುವುದನ್ನು.
ಕೆಲ ಮುಸ್ಲಿಂ ಮುಖಂಡರು ಹೇಳುವಂತೆ `ವಿಶ್ವರೂಪಂ ದೇಶದ ಭದ್ರೆತೆಗೆ ಹಾನಿ ಮಾಡುವುದೇ ಆದರೆ ಶಾರುಖ್ ಖಾನ್ರ `ಮೈ ನೇಮ್ ಈಸ್ ಖಾನ್ ನಿಂದ ಇಡೀ ದೇಶವೇ ಹೊತ್ತಿ ಉರಿಯ ಬೇಕಿತ್ತು.,. ಆದರೆ ಎಲ್ಲೂ ಹಾಗಾಗಿಲ್ಲ. ಮೈ ನೇಮ್ ಈಸ್ ಖಾನ್ನಲ್ಲಿ ಶಾರುಕ್ ಪದೇ ಪದೇ ಬಳಸುವ `ಆ್ಯಮ್ ಖಾನ್, ಬಟ್ ನಾಟ್ ಟೆರರಿಸ್ಟ್ ಎಂಬ ಒಂದು ಪದವನ್ನೇ ಗಮನಿಸಿ. ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲು ಈ ಡೈಲಾಗ್ ಸಾಕಲ್ಲವೇ? ಆದರೆ ಆಗ ಮಾತ್ರ ಯಾರಿಗೂ ಚಿತ್ರದಲ್ಲಿ ವಿವಾದದ ವಸ್ತು ಕಾಣಲಿಲ್ಲ. ಮೈ ನೇಮ್ ಇಸ್ ಖಾನ್ ಗೆದ್ದಿತು.....!?
ವಿಶ್ವರೂಪಂನಲ್ಲಿ `ಅಲ್ಲಾ ಅಕ್ಬರ್, ದುವಾ ಎಂಬ ಕೆಲವೊಂದು ಮುಸ್ಲಿಂ ಶಬ್ದಗಳನ್ನು ಬಳಸಿದ್ದನ್ನು ಬಿಟ್ಟರೆ ಎಲ್ಲೂ ಮುಸ್ಲಿಂ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ ಎನ್ನುವುದು ನನ್ನ ವೈಯಕ್ತ್ತಿಕ ಅಭಿಪ್ರಾಯ. ಆದರೇನು ಮಾಡುವುದು ನಮ್ಮ ದೇಶದ ಹೊಲಸು ರಾಜಕೀಯದಲ್ಲಿ `ವಿಶ್ವರೂಪಂ ವಿರೂಪಗೊಳ್ಳುತ್ತಿದೆಯಷ್ಟೇ..
ನೆನಪಿರಲಿ, ಸಿನಿಮಾ ಎನ್ನುವುದು ಮನೋರಂಜನಾ ಮಾಧ್ಯಮ. ಈ ಮಾಧ್ಯಮದಲ್ಲಿ ಬೇಕೆಂದೇ ವಿವಾದಗಳನ್ನು ಸೃಷ್ಟಿಸುವವರಿದ್ದಾರೆ. ಕಾರಣ ಸಿನಿಮಾ ಗೆಲ್ಲಬೇಕು ಎನ್ನುವುದು. ಆದರೆ ಕಮಲ್ ಎಲ್ಲೂ ವಿವಾದ ಸೃಷ್ಟಿಸಿಲ್ಲ. ವಿವಾದ ಎನ್ನುವುದು ತಾನಾಗಿಯೇ ಹುಟ್ಟಿಕೊಂಡಿದೆ. 95 ಕೋಟಿ ಸುರಿದು ದೇಶದ ಮಹಾನ್ ಕಲಾವಿದನೊಬ್ಬ ತನ್ನ ಚಿತ್ರದಿಂದ ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದಾನೆಂದರೆ ಏನರ್ಥ? ಅಷ್ಟಕ್ಕೂ ಟೆರರಿಸಂ ಎಂಬ ವಸ್ತು ವಿಷಯದಲ್ಲಿ ಎಷ್ಟು ಸಿನಿಮಾಗಳು ಬಂದು ಹೋಗಿಲ್ಲ ಹೇಳಿ?
ಇನ್ನಾದರೂ ಸಿನಿಮಾಗಳನ್ನು ವೈಯಕ್ತಿಕ ಹಿತದೃಷ್ಟಿಯಿಂದ ನೋಡುವುದು ಬೇಡ. ಅಷ್ಟಕ್ಕೂ ವಿಶ್ವರೂಪಂ ಆ ಮಟ್ಟಿಗೆ ವಿವಾದ ಸೃಷ್ಟಿಸಿದ ಸಿನಿಮಾವೂ ಅಲ್ಲ. ನೆನೆಪಿರಲಿ, ಇದು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದರೂ ಹಾಗೇ ಸುಮ್ಮನೆ ಸಿನಿಮಾ ನೋಡಿ ಬನ್ನಿ, ಮನೋರಂಜನೆ ಸಿಗದಿದ್ದರೂ ವಿಶ್ವರೂಪಂನಲ್ಲಿ ವಿವಾದವಿದೆಯೇ ಎಂಬ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು.
ಧ್ವನಿ