Thursday 24 October 2013


ಸೌಜನ್ಯ ಪ್ರಕರಣದಲ್ಲಿ ಮಾಧ್ಯಮಗಳ ನಡೆ ಸ್ಪಷ್ಟಗೊಳ್ಳಬೇಕಿದೆ...!

ಸೌಜನ್ಯ


ಸೌಜನ್ಯ.....ಈಗ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಡೀ ಕನರ್ಾಟಕದಲ್ಲಿ ಈ ಹುಡುಗಿ ಮನೆ ಮಾತಾಗಿ ಹೋಗಿದ್ದಾಳೆ. ಸತ್ತ ನಂತರ ಅದರಲ್ಲೂ ಮಣ್ಣು ಸೇರಿ ಒಂದು ವರ್ಷವಾದ ನಂತರ ಈಕೆ ಈ ಮಟ್ಟಿನ ಕ್ರಾಂತಿಗೆ ಕಾರಣಕತರ್ೆಯಾಗುತ್ತಾಳೆಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಇದೀಗ ಎಲ್ಲವೂ ಅಂದುಕೊಂಡದ್ದನ್ನು ಮೀರಿ ನಡೆಯುತ್ತಿದೆ. ಒಂದು ವಾರದ ಹಿಂದೆ ಅಂದರೆ ಅಕ್ಟೋಬರ್ 11, 2013ರ ಶುಕ್ರವಾರ ಸಂಜೆ 4.45ರವರೆಗೆ ಸೌಜನ್ಯ ಬಗ್ಗೆ ಯೋಚಿಸುವುದು ಬಿಡಿ, ರಾಜ್ಯದ ಮುಕ್ಕಾಲು ಪಾಲು ಜನತೆಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಆದರೆ ನಂತರ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಆಕೆಯ ಸಾವಿನ ಹಿಂದೆ ತಳುಕು ಹಾಕಿಕೊಂಡ ಘಟಾನುಘಟಿಗಳ ಹೆಸರು ಕೇಳಿ ಇಡೀ ರಾಜ್ಯವೇ ನಡುಗಿ ಹೋಯಿತು. ಯಾರಪ್ಪ ಈ ಹುಡುಗಿ ಆಂತ ಎಲ್ಲರೂ ವಿಚಾರಿಸ ತೊಡಗಿದರು. ಒಂದು ವರ್ಷದ ಹಿಂದೆ ನಡೆದ ಪ್ರಕರಣ ಈಗ್ಯಾಕೆ ಸದ್ದು ಮಾಡುತ್ತಿದೆ ಅಂತ ಅಶ್ಚರ್ಯಪಟ್ಟರು. ಈ ಮೂಲಕ ಸೌಜನ್ಯ ಮತ್ತೆ ಬಂದಿದ್ದಾಳೆ....ತನ್ನ ಸಾವಿನ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಯತ್ನಿಸುತ್ತಿದ್ದಾಳೆ...........................!

ಆಕೆಯ ಸಾವಿಗೆ ನ್ಯಾಯ ಸಿಗಬೇಕೆಂದು ಒಂದಷ್ಟು ಸಂಘಟನೆಗಳು ಬೀದಿಗಿಳಿದಿವೆ. ರಾಜ್ಯದ ಒಂದೇ ಒಂದು ಖಾಸಗಿ ವಾಹಿನಿ ಸೌಜನ್ಯ ಪರವಾಗಿ ಧ್ವನಿಯೆತ್ತಿದೆ. (ಈ ವಿಚಾರದಲ್ಲಿ ಉಳಿದೆಲ್ಲಾ ಮಾಧ್ಯಮಗಳು ಸತ್ತು ಮಲಗಿರಬೇಕು). ಈ ಒಂದು ಪ್ರಕರಣ ಸಾಕು, ರಾಜ್ಯದ ಸುದ್ದಿ ವಾಹಿನಿಗಳ ನಿಷ್ಪಕ್ಷಪಾತ ನಡೆಯನ್ನು ಜಗಜ್ಜಾಹಿರುಗೊಳಿಸಲು.....!
ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ...!

ಯಾರದ್ದೋ ಮನೆಯಲ್ಲಿ ಗಂಡ-ಹೆಂಡತಿ ಜಗಳವಾಡಿದರೆ ಮರುದಿನವೇ ಸ್ಟುಡಿಯೋಗೆ ತಂದು ಕೂರಿಸಿ ಜಗಳವನ್ನು ಇನ್ನಷ್ಟು ದೊಡ್ಡದು ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮಾಧ್ಯಮಗಳಿಗೆ ಸೌಜನ್ಯ ಪ್ರಕರಣ ಕಣ್ಣಿಗೆ ಬಿದ್ದಿಲ್ಲವೇ? ಅಥವಾ ಘಟಾನುಘಟಿಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿದೆಯೇ? ಬಹುಶಃ ದುರಂತ ಅಂದರೆ ಇದೇ ಇರಬೇಕು. ಅದರಲ್ಲೂ ಸೌಜನ್ಯ ಪರವಾಗಿ ಒಂದೇ ಒಂದು ಸುದ್ದಿಪ್ರಸಾರ ಮಾಡದ ಈ ವಾಹಿನಿಗಳು ಅದ್ಯಾರೋ ಈ ಬಗ್ಗೆ `ನಾವು ತಪ್ಪೇ ಮಾಡಿಲ್ಲ' ಅಂದ ತಕ್ಷಣ ಲೈವ್ ಕೊಟ್ಟು ಘಂಟೆಘಟ್ಟಲೇ ಕಿರುಚಾಡಿದ್ದು ಯಾಕೆ ಎನ್ನುವುದೇ ತಿಳಿಯುತ್ತಿಲ್ಲ. ಈ ಪ್ರಕರಣದಲ್ಲಿ ಆರೋಪ ಕೇಳಿ ಬರುತ್ತಿರುವ ವ್ಯಕ್ತಿಗಳ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ ನಿಜ. ಇಂದಿಗೂ ಅದೆಷ್ಟೋ ಮನೆಯ ದೇವರ ಫೋಟೋ ಇಡುವ ಜಾಗದಲ್ಲಿ `ಅವರ' ಫೋಟೋ ಇಟ್ಟು ಪೂಜಿಸುವವರಿದ್ದಾರೆ. ಅಷ್ಟೇ ಯಾಕೆ? ಸತ್ತು ಮಣ್ಣು ಸೇರಿದ ಸೌಜನ್ಯಳ ಮನೆಯಲ್ಲೂ ಆ ವ್ಯಕ್ತಿಯನ್ನು ಆರಾಧಿಸುತ್ತಿದ್ದರು. ಹೀಗಿರುವಾಗ ಏಕಾಏಕಿ ಬಂದು ಅಂಥವರ ಮೇಲೆ ಆರೋಪ ಹೊರಿಸುವ ಹಕೀಕತ್ತು ಯಾರಿಗೂ ಇರೋದಿಲ್ಲ ಎನ್ನುವುದನ್ನು ಪೇಯ್ಡ್ ಮೀಡಿಯಾಗಲು ಅರಿತುಕೊಳ್ಳಲಿ. ಸೌಜನ್ಯಳ ಕುಟುಂಬಿಕರು ಮಾಡುವ ಆರೋಪಗಳನ್ನು ಇಲ್ಲವೇ ಆರೋಪಿಗಳು ಎನ್ನುವ ವ್ಯಕ್ತಿಗಳನ್ನು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಲು ಸಾದ್ಯವಿಲ್ಲ ಅಂದುಕೊಳ್ಳೋಣ. ಆದರೆ ಆ ಮನೆಯವರ ನೈಜ ಯಾತನೆಗೆ ಸ್ಪಂದಿಸುವ ಮನಸ್ಸು ಕೂಡ ನಿಮ್ಮಲ್ಲಿಲ್ಲವೇ? ಈ ಮಧ್ಯೆ ನೇರ, ದಿಟ್ಟ, ನಿರಂತರ ಎನ್ನುವ ವಾಹಿನಿಯೊಂದು ಧರ್ಮಸ್ಥಳಕ್ಕೆ ವಿಶೇಷ ವರದಿಗಾರನೊಬ್ಬನನ್ನು ಕಳಿಸಿ ಇಲ್ಲಸಲ್ಲದ ವರದಿ ಬೇರೆ ಮಾಡಿದೆ. ಈ ವರದಿ ಗಮನಿಸಿದರೆ ಈ ವಾಹಿನಿಯನ್ನು ಧರ್ಮಸ್ಥಳದ ಘಟಾನುಘಟಿಗಳು ಕೊಂಡುಕೊಂಡಿದ್ದಾರೆಯೇ ಎಂಬ ಅನುಮಾನ ಕೂಡ ಕಾಡುತ್ತದೆ. ಉಪಕಾರ ಮಾಡಲು ಸಾದ್ಯವಾಗದಿದ್ದರೂ ಒಂಚೂರು ಅಪಕಾರವಾದರೂ ಮಾಡಿ ಬಿಡೋಣ ಅನ್ನೋದು ಇವರ ಉದ್ದೇಶವಿರಬೇಕು, ಪ್ರಸ್ತುತ ಕೇಳಿ ಬರುತ್ತಿರುವ ಸುದ್ದಿಯ ವಿಚಾರದಲ್ಲಿ ಎಲ್ಲಾ ವಾಹಿನಿಗಳ ವಾದ ಒಂದೇ `ಸೌಜನ್ಯ ಮನೆಯವರದ್ದು ಕೇವಲ ಆರೋಪ ಮಾತ್ರ' ಎನ್ನುವುದು. ಹಾಗಾದರೆ ನೊಂದವರ ಆರೋಪಗಳನ್ನು ಇಟ್ಟುಕೊಂಡು ಈ ವಾಹಿನಿಗಳು ಸುದ್ದಿ ಪ್ರಕಟಿಸಲೇ ಇಲ್ಲವೇ? ಸ್ಟುಡಿಯೋದಲ್ಲಿ ಕೂರಿಸಿ ಇನ್ನೊಬ್ಬರ ಮಾನ ಹಾನಿ ಮಾಡಿದ ಉದಾಹರಣೆಗಳೇ ಇಲ್ಲವೇ? ಖಂಡಿತಾ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಇವರುಗಳಿಗೆ ಸೌಜನ್ಯ ಮನೆಯವರ ಆರೋಪಗಳನ್ನು ಕೇಳುವಷ್ಟು ತಾಳ್ಮೆಯಿಲ್ಲ. ಇದ್ದರೂ ಒತ್ತಡ ಎಂಬ ಅಸ್ತ್ರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ ಅನ್ನಬಹುದು. ಸುದ್ದಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು. ಇದೇ ಕಾರಣಕ್ಕೆ ಚಾನೆಲ್ಗಳನ್ನು ಸ್ಥಾಪಿಸುವ ಅದರ ಹೆಸರಿನ ಅಡಿಗೆ ಒಂದಷ್ಟು  ಘೋಷ ವಾಕ್ಯಗಳನ್ನು ಕೂಡ ಇಟ್ಟುಕೊಂಡು ತಮ್ಮ ಸ್ವಾಮಿನಿಷ್ಟೆ ಪ್ರದಶರ್ಿಸುತ್ತಾರೆ. ಆದರೆ ಈ ರೀತಿಯ ವಿಚಾರಗಳಲ್ಲಿ ಇವರುಗಳ ಘೋಷವಾಕ್ಯಗಳು ಗಾಳಿಯಲ್ಲಿ ತೂರಿ ಹೋಗಿದ್ದೇ ಹೆಚ್ಚು. ಅಸಲಿಗೆ ಸೌಜನ್ಯ ಪ್ರಕರಣದಲ್ಲಿ ಸುದ್ದಿ ವಾಹಿನಿಗಳಷ್ಟೇ ಸುದ್ದಿ ಪತ್ರಿಕೆಗಳು ಕೂಡ ಸಮಾನ ತಪ್ಪಿತಸ್ಥರು. ಅದರಲ್ಲೂ ಮಂಗಳೂರಿನಲ್ಲಿ ಅತೀ ಹೆಚ್ಚು ಸಕ್ಯರ್ೂಲೇಶನ್ ಹೊಂದಿರುವ ಪತ್ರಿಕೆಯೊಂದು ಸೌಜನ್ಯ ಮನೆಯವರು ನಡೆಸಿದ ಪತ್ರಿಕಾಗೋಷ್ಠಿಯನ್ನೂ ಪ್ರಕಟಿಸದೆ ಅದ್ಯಾರದ್ದೋ ಕೈಯಲ್ಲಿ `ಭೇಷ್' ಅನಿಸಿಕೊಂಡಿದೆಯಂತೆ...! ಇದೇ ಪರಿಸ್ಥಿತಿ ರಾಜ್ಯದ ಬಹುತೇಕ ಪತ್ರಿಕೆಗಳದ್ದು.

ಇನ್ನು ಈ ಎಲ್ಲಾ ಆರೋಪಗಳನ್ನು ಯಥಾವಥ್ ಸುದ್ದಿ ಮಾಡಿದ ಟಿವಿ9 ವಾಹಿನಿಗೆ ಕೋಟರ್್ನಿಂದ ತಡೆಯಾಜ್ಷೆ ಬೇರೆ ತಂದಿದ್ದಾರೆ. ಈ ಮೂಲಕ ನಾವು ಕೂಡ ನಿತ್ಯಾನಂದ ಸ್ವಾಮಿಯ ಪಾಟರ್ಿ ಅನ್ನೋದನ್ನು ನಿರೂಪಿಸಿದ್ದಾರೆ(ಕಾಮಿ ಸ್ವಾಮಿ ನಿತ್ಯಾನಂದ ಕೂಡ ತನ್ನ ವಿರುದ್ದ ವರದಿ ಮಾಡದಂತೆ ತಡೆಯಾಜ್ಷೆ ತಂದಿದ್ದ). ಇನ್ನು ಟಿವಿ9 ಈ ಬಗ್ಗೆ ವರದಿ ಮಾಡಿದರೆ ಜಿಲ್ಲೆಯ ಮೂಲೆಮೂಲೆಯಲ್ಲಿ ಕರೆಂಟ್ ಕಟ್. ಬಹುಶಃ ದುರಂತ ಅಂದ್ರೆ ಇದೇ ಇರಬೇಕು. ಈಗೀಗ ಟಿವಿ ನೋಡದಂತೆ ಕರೆಂಟ್ ಕಟ್, ಕೇಬಲ್ ಕಟ್ ಎಂಬ ಕಸರತ್ತಿನ ಕೆಲಸಗಳು ಕೂಡ ಎಗ್ಗಿಲ್ಲದೇ ನಡೆಯುತ್ತಿದೆ. ಜನಾರ್ದನ ರೆಡ್ಡಿಯ ವಿಚಾರದಲ್ಲಿ ಹೀಗಾಗಿದ್ದನ್ನು ನೋಡಿದ್ದೆ. ಆದರೆ ನಮ್ಮ ಸೌಜನ್ಯ ವಿಚಾರದಲ್ಲೂ ಹೀಗಾಗ್ತಿರೋದು.......ಒಟ್ಟಿನಲ್ಲಿ ಎಲ್ಲರೂ ಅವರಿಗೆ `ಅಡ್ಡ' ಬೀಳುವವರೇ...! ಈ ಮಧ್ಯೆ ನಾವು-ನೀವು ಏನ್ ತಾನೇ ಮಾಡೋದಕ್ಕೆ ಸಾಧ್ಯ...? ಏನೇ ಆಗಲಿ...ಟಿವಿ9 ನವರ ಕೆಲಸಕ್ಕೆ ಶಹಭಾಸ್ ಗಿರಿ ಹೇಳಲೇ ಬೇಕು..ಬಿಡಿ....

ಅಪ್ಪಟ ಹಳ್ಳಿ ಸೊಗಡಿನ ಕುಟುಂಬ!
ಸೌಜನ್ಯ ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆ

ಪ್ರಕರಣ ಗಂಭೀರ ಸ್ವರೂಪಕ್ಕೆ ಹೋದ ನಂತರ ಅಂದರೆ ಮೊನ್ನೆ ಮೊನ್ನೆ ಆಕೆಯ ಮನೆಗೆ ಹೋಗಿದ್ದೆ. ಹಳ್ಳಿಗಾಡಿನ ಸೊಗಡನ್ನು ಉಳಿಸಿಕೊಂಡು ಬಾಳುತ್ತಿರುವ ಅಪ್ಪಟ ಗೌಡ ಮನೆತನ ಅವರದ್ದು. ಇಂದಿಗೂ ಅವರ ಮಗಳ ಪ್ರತಿಯೊಂದು ವಸ್ತುವನ್ನೂ ಜೋಪಾನವಾಗಿಟ್ಟಿದ್ದಾರೆ. ಅವಳು ಉಡುತ್ತಿದ್ದ ಬಟ್ಟೆ, ತೊಡುತ್ತಿದ್ದ ಬಲೆಗಳು...ಆಟವಾಡುತ್ತಿದ್ದ ಗೊಂಬೆಗಳು....ಹೀಗೆ ಎಲ್ಲವೂ ಸೌಜನ್ಯಳನ್ನು ಮತ್ತೆ ನೆನಪಿಸುವ ಹಾಗಿದೆ. ಈ ಮಧ್ಯೆ  ಮಗಳು ಮನೆಯವರಿಗೆ ಕೊನೆಯದಾಗಿ ಕೊಟ್ಟು ಹೋದ ಕಣ್ಣೀರು ಕೂಡ ಒಂಚೂರು ಬತ್ತಿಲ್ಲ....! ಬಿಟ್ಟು ಹೋದ ಮನೆ ಮಗಳ ಬಗ್ಗೆ ಮನೆಯ ಪ್ರತಿಯೊಬ್ಬರು ಹೇಳುವುದು ಒಂದೇ......ಚಿನ್ನದಂಥ ಹುಡುಗಿ ಕಣ್ರೀ ಆಕೆ. ಹೌದು, ಮನೆಯ ಪ್ರತಿಯೊಬ್ಬರೂ ಆಕೆಯ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕಣ್ಣಾಲಿಗಳು ಒದ್ದೆಯಾದವು. ಮಾಡದ ತಪ್ಪಿಗೆ ಬಲಿಯಾದ ಆ ಹೆಣ್ಣುಮಗಳ ಸಾವಿನಲ್ಲಿ ಕೇಕೆ ಹಾಕಿದ ವಿಧಿಯಾಟದ ಬಗ್ಗೆಯೇ ಇನ್ನಿಲ್ಲದ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮನೆಯವರ ದುಃಖದ ಮಧ್ಯೆ ನನ್ನದು ಕ್ಷಣಿಕ ಎಂದು ಸುಮ್ಮನಾದೆ.
ಅಪ್ಪಟ ಹಳ್ಳಿ ಸೊಗಡಿನ ಸೌಜನ್ಯ ಕುಟುಂಬ

ಸರಿ ಸುಮಾರು ಒಂದು ವರ್ಷದ ಹಿಂದೆ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ನಡೆಸಿದಾಗ ಹತ್ತರಲ್ಲಿ ಹನ್ನೊಂದು ಎಂಬಂತೆ ಒಂದೆರೆಡು ದಿನ ಸದ್ದು ಮಾಡಿ ಮಾನಸಿಕ ಅಸ್ವಸ್ಥನೊಬ್ಬ ಜೈಲು ಸೇರುವುದರೊಂದಿಗೆ ಪ್ರಕರಣ ಮುಚ್ಚಿ ಹೋಗಿತ್ತು.

ಈ ಮಧ್ಯೆ ಒಂದೆರೆಡು ಸಂಘಟನೆಗಳ ಹೋರಾಟಕ್ಕೆ ಮಣಿದು ಸಕರ್ಾರ ಯಾವುದಕ್ಕೂ ಇರಲಿ ಅಂತ ಸಿಐಡಿಗೂ ಒಪ್ಪಿಸಿತ್ತು. ಆದರೆ ನಮ್ಮದೇ ರಾಜ್ಯದ ಸಿಐಡಿಯಿಂದ ಯಾವ ಮಟ್ಟದ ನ್ಯಾಯ ನಿರೀಕ್ಷಿಸಲು ಸಾಧ್ಯ? ಒಟ್ಟಿನಲ್ಲಿ ಸೌಜನ್ಯ ಸಾವಿನ ಹಿಂದೆಯೇ ಪ್ರಕರಣ ಮುಚ್ಚಿ ಹೋದಾಗ, ಧರ್ಮಸ್ಥಳ-ಉಜಿರೆಯಲ್ಲಿ ನೆಲಕ್ಕುರುಳಿದ ಅಷ್ಟೋ ಹೆಣಗಳಲ್ಲಿ ಈಕೆಯದ್ದು ಕೂಡ ಒಂದು ಅಂತ ಒಂದಷ್ಟು ಪ್ರಜ್ಞಾವಂತರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೆ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ಅದರಲ್ಲೂ ಧರ್ಮಸ್ಥಳದ ಘಟಾನುಘಟಿಗಳ ಬಗ್ಗೆಯೇ ಆರೋಪಗಳು ಕೇಳಿ ಬಂದಿದೆ. ಇದಕ್ಕೆಲ್ಲಾ ಸ್ಪಷ್ಟ ಉತ್ತರ ಅವರಿಂದ ಬಯಸಲು ಸಾದ್ಯವೇ?


Tuesday 6 August 2013


ಗೋಸಾಗಾಟ ಮತ್ತೆ ಗಲಭೆಗೆ ಹೇತುವಾಗಬೇಕೇ?
ಹಿಂದೂ-ಮುಸ್ಲಿಮರ ಮನಸ್ಥಿತಿ ಬದಲಾಗಬೇಕಿದೆ!


ಇಡೀ ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸಂಘರ್ಷಕ್ಕೆ ಕುಖ್ಯಾತಿ ಪಡೆದ ಪ್ರದೇಶ. ಇಲ್ಲಿ ನೀರಿಗಾಗಿ, ಭಾಷೆಗಾಗಿ ಹೋರಾಟ ಮಾಡುವವರಿಗಿಂತ ಧರ್ಮದ ವಿಚಾರದಲ್ಲಿ ಬೀದಿಗಿಳಿಯುವ ಬಹುದೊಡ್ಡ ವರ್ಗವೇ ಇದೆ. ಇಲ್ಲಿನ ಜನರು ತಮ್ಮ ತಮ್ಮ ಧರ್ಮಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡುವ ಕಾರಣ ಧರ್ಮ ನಿಂದನೆಯಂತಹ ವಿಚಾರಗಳು ಕೋಮು ಸಂಘರ್ಷಗಳಾಗಿ ಬದಲಾಗುತ್ತಿವೆ. ಈ ಹಿಂದೆ ಇಡೀ ಜಿಲ್ಲೆಯನ್ನೇ ಹೊತ್ತಿ ಉರಿಸುವ ಮೂಲಕ ಇತಿಹಾಸದ ಪುಟ ಸೇರಿರುವ ಪ್ರತೀ ಗಲಭೆಯಲ್ಲೂ ಇಲ್ಲಿನ ಜನರ ಜಾತಿ ಪ್ರೀತಿಯ ಛಾಯೆ ಎದ್ದು ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂಗಳ ಪಾಲಿಗೆ ಪವಿತ್ರವೆನಿಸಿರುವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದೇ ಜಿಲ್ಲೆಯಲ್ಲಿ ನಡೆಯುವ ಕೋಮು ಸಂಘರ್ಷಗಳಿಗೆ ಹೇತುವಾಗುತ್ತಿದೆ ಎನ್ನುವುದು ದುರಂತ.
ಅದರಲ್ಲೋ ಇತ್ತೀಚಿನ ದಿನಗಳಲ್ಲಿ ಗೋವುಗಳ ಅಕ್ರಮ ಸಾಗಾಟ ಮಿತಿಮೀರಿದೆ. ತಲವಾರು ತೋರಿಸಿ ದನ ಕಳವು ಮಾಡುವ ಹಂತಕ್ಕೆ ದುಷ್ಕಮರ್ಿಗಳು ಇಳಿದಿರುವುದು ನಿಜಕ್ಕೂ ದುರಂತ. ಮುಂದೊಂದು ದಿನ ಇಂತದ್ದೇ ಘಟನೆ ಮತ್ತೊಂದು ಗಲಭೆಗೆ ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ ಬಿಡಿ.

ಹಿಂದೂಗಳ ಪಾಲಿಗೆ ಅತೀ ಪವಿತ್ರವೆನಿಸಿರುವ ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಟೊಂಕಕಟ್ಟಿ ನಿಲ್ಲುತ್ತವೆ. ಧಾಮರ್ಿಕ ನಂಬಿಕೆಯ ಪ್ರತೀಕವೆನಿಸಿದ ಗೋವುಗಳ ರಕ್ಷಣೆಗೆ ನಿಲ್ಲುವುದು ಸಹಜವೇ ಅನ್ನೋಣ. ಆದರೆ ಮುಂದಾಗುವ ಅನಾಹುತಗಳು ಮಾತ್ರ ಅಸಹಜ ಎನ್ನುವುದು ಅರಿಯಬೇಕಾದ ವಿಚಾರ. ಒಂದು ಧರ್ಮಕ್ಕೆ ಪವಿತ್ರವೆನಿಸಿರುವ ಗೋವು ಇನ್ನೊಂದು ಧರ್ಮದ ಕೆಲವರಿಗೆ ಆಹಾರ ಪದ್ದತಿ ಎನಿಸಿಕೊಂಡಿದೆ. ಪರ-ವಿರೋಧಗಳ ನಡುವೆಯೂ ತಿಂಗಳಿಗೆ ಹೆಚ್ಚೆಂದರೂ ಆರೇಳು ಗೋಸಾಗಾಟದ ವಿದ್ಯಮಾನಗಳು ಬೆಳಕಿಗೆ ಬರುತ್ತಲೇ ಇವೆ. ಇಷ್ಟೆಲ್ಲಾ ಆದರೂ ನಮ್ಮ ಪೊಲೀಸ್ ಇಲಾಖೆ ಮಾತ್ರ ಬೆಚ್ಚಗೆ ಕೂತು ಚೆಂದ ನೋಡುತ್ತಿರುವುದು ವಿಪಯರ್ಾಸ. ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಇದರ ವಿರುದ್ದ ಮೊದಲಾಗಿಯೇ ಕ್ರಮ ಕೈಗೊಂಡು ಗಲಭೆಗೆ ಆಸ್ಪದ ನೀಡುವುದನ್ನು ತಪ್ಪಿಸಬಹುದು ಎಂಬ ಮಾತು ಶಾಂತಿಪ್ರಿಯರದ್ದು.
ಗೋವು ಹಿಂದೂಗಳ ಧಾಮರ್ಿಕ ನಂಬಿಕೆ, ಮುಸ್ಲಿಮರ ಆಹಾರ ವಸ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಕಳೆದ ಕೆಲ ದಿನಗಳಿಂದ ಕೋಮು ದಳ್ಳುರಿಗೆ ಕಾರಣವಾಗಬಹುದಾದ ಒಂದು ವಿಚಾರವಾಗಿ ಹೋಗಿದೆ. ಸಾಗಾಟಗಾರರ ಮತ್ತು ಹಿಂದೂ ಸಂಘಟನೆಗಳ ಮಧ್ಯೆ ನಡೆಯುವ ಸಣ್ಣಪುಟ್ಟ ಗಲಾಟೆಗಳಿಗೆ ಲೆಕ್ಕವಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪ್ರಕರಣದ ಫೈಲ್ ಕ್ಲೋಸ್ ಆಗುವಲ್ಲಿ ಮುಕ್ತಾಯವಾದರೆ ಇನ್ನು ಕೆಲವು ಕಡೆ ಎರಡು ಧರ್ಮಗಳ ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ. ಇಷ್ಟೆಲ್ಲಾ ಆದರೂ ಕರಾವಳಿಯ ಎರಡು ಧರ್ಮಗಳು ಈ ವಿಚಾರದ ಬಗ್ಗೆ ಅಷ್ಟು ಗಂಭೀರವಾಗಿ ಚಿಂತಿಸಿದಂತೆ ತೋರುತ್ತಿಲ್ಲ. ಇಲ್ಲಿ ಧಾಮರ್ಿಕ ನಂಬಿಕೆ, ಆಹಾರ ವಸ್ತು ಎನ್ನುವುದಕ್ಕಿಂತಲೂ ಕಲಹಕ್ಕೆ ಕಾರಣವಗುವ ವಿಚಾರ ಎನ್ನುವುದನ್ನಾದರೂ ಜಿಲ್ಲೆಯ ಜನತೆ ಗ್ರ್ಪ್ರಹಿಸಿಕೊಳ್ಳುವ ಅಗತ್ಯತೆ ಇದೆ.

ಎಲ್ಲಾ ಧರ್ಮದಲ್ಲೂ ದುರುಳರು ಇದ್ದೇ ಇರುತ್ತಾರೆ. ಅದರಲ್ಲೂ ಕೋಮು ದಳ್ಳುರಿಯ ಕಿಡಿ ಹಚ್ಚಿ ವಿಕೃತ ಆನಂದ ಪಡೆಯುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಆದರೆ ಇಂಥವರ ಮಧ್ಯೆ ಶಾಂತಿಪ್ರಿಯ ಹಿಂದೂ-ಮುಸ್ಲಿಮರ ಮನಸ್ಥಿತಿಯಲ್ಲಿ ಕೊಂಚ ಬದಲಾವಣೆ ಬೇಕಿದೆ. ಗೋಸಾಗಾಟದ ವಿಚಾರ ಬಂದಾಗ ಅದನ್ನು ತಡೆಯುವ ಸಣ್ಣ ಪ್ರಯತ್ನವನ್ನು ಜಿಲ್ಲೆಯ ಸಹೃದಯಿ ಮುಸಲ್ಮಾನ ಬಾಂಧವರು ಮಾಡಬೇಕಿದೆ. ಗೋವು ಆಹಾರ ವಸ್ತು ಎನ್ನುವುದಕ್ಕಿಂತಲೂ ಗಲಭೆಯ ವಸ್ತುವಾಗಿ ಹೋಗುತ್ತಿರುವಾಗ ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಮನಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ತರಬೇಕಾದ ಅಗತ್ಯತೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಪ್ರತಿಷ್ಟೆಯ ವಿಚಾರಕ್ಕಿಂತ, ಆಹಾರ ಪದ್ದತಿಯ ವಿವಾದಕ್ಕಿಂತ ಮುಖ್ಯವಾಗಿ ಶಾಂತಿ-ಸುವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ನಮ್ಮಿಂದಲೇ ಇದನ್ನೆಲ್ಲಾ ತಡೆಯಲು ಸಾಕಷ್ಟು ಅವಕಾಶಗಳಿರುವಾಗ ಪೊಲೀಸರ ತಲೆಗೆ ಕಟ್ಟಿ ಕೂರುವುದು ಅಷ್ಟು ಸಮಂಜಸವಲ್ಲ.

ಉಳಿದಂತೆ ಈ ವಿಚಾರದಲ್ಲಿ ಹಿಂದೂಗಳ ಮನಸ್ಥಿತಿಯಲ್ಲೂ ಕೊಂಚ ಬದಲಾವಣೆಯಾಗಬೇಕು. ಗೋಸಾಗಾಟ ನಡೆಯುತ್ತಿದೆ ಎಂದ ತಕ್ಷಣ ಮುಗಿಬಿದ್ದು ವಾಹನಗಳ ಬೆನ್ನುಬೀಳುವ ಬದಲು ಇಲಾಖೆಯ ಸಹಕಾರ ಪಡೆಯುವುದು ಉತ್ತಮ. ಕೆಲದಿನಗಳಲ್ಲಿ ಸಂಘಟನೆಯವರು ಇಲಾಖೆಗೆ ಸುದ್ದಿ ಮುಟ್ಟಿಸಿಯೇ ಮುಂದಡಿಯಿಡುತ್ತಿರುವುದು ಶ್ಲಾಘನೀಯವಾದರೂ ಒಂದೆರೆಡು ಕಡೆ ಆಕ್ರೋಶದ ಹಲ್ಲೆಗಳು ನಡೆದಿದೆ. ಪ್ರತೀ ಬಾರಿ ದಾಳಿಯೊಂದೇ ಪರಿಹಾರವಲ್ಲ. ದಾಳಿಗಳೇ ಮುಂದೆ ಗಲಭೆಗೆ ಕಾರಣವಾದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ. ಹೀಗಾಗಿ ಬೆನ್ನಟ್ಟಿ ದಾಳಿ ನಡೆಸಿ ಹಲ್ಲೆ ನಡೆಸುವುದು ಸಮಂಜಸವಲ್ಲ. ಅಲ್ಲದೇ ಶಾಂತಿಪ್ರಿಯ ಹಿಂದೂ ಧರ್ಮಕ್ಕೆ ಇಂತಹ ಘಟನೆಗಳು ತಕ್ಕುದಲ್ಲ ಎನ್ನುವುದು ನನ್ನ ಅಭಿಪ್ರಾಯ.
ನೆನಪಿರಲಿ, ಜಿಲ್ಲೆ ಕಂಡ ಪ್ರತೀ ಕೋಮುಗಲಭೆಯಲ್ಲೂ ಅಪಾರ ಸಾವು-ನೋವು ಸಂಭವಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಒಂದಷ್ಟೂ ಹಾನಿಯೂ ಆಗಿದೆ. ಇವೆಲ್ಲವಕ್ಕೂ ಸಾಕ್ಷಿಯಾಗಿದ್ದ ಕಡಲತಡಿ ಇಂದು ಒಂದು ಹಂತಕ್ಕೆ ಶಾಂತವಾಗಿದೆ ಎನ್ನುವುದೇ ನಿಟ್ಟುಸಿರು ಬಿಡುವ ವಿಚಾರ. ಇದೀಗ ಮತ್ತೆ ಗೋಸಾಗಾಟ ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡ ಎನ್ನುವುದೇ ಎಲ್ಲರ ಆಶಯ.

Tuesday 30 July 2013

ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? 

ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!


ನಿನ್ನೆ ಅದ್ಯಾವುದೋ ಕೆಲಸದ ನಿಮಿತ್ತ ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ. ಈ ವೇಳೆ ಕೇಸರಿ ಪಂಚೆಯುಟ್ಟ, ಬಿಳಿ ಬಣ್ಣದ ಶರ್ಟ್ ತೊಟ್ಟ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಕಂಡು ಮಾತಿಗಿಳಿದರು. `ನನ್ನ ಪರಿಚಯ ಇದಿಯಾ ಸಾರ್? ಅಂತ ಆ ವ್ಯಕ್ತಿ ಕೇಳಿದಾಗ `ಯಾರಪ್ಪ ಇದು? ಅಂದುಕೊಂಡು ಅವರನ್ನು ತಿರಸ್ಕರಿಸಿ ಮುಂದೆ ಹೋಗಲು ಯತ್ನಿಸಿದೆ. ಆದರೆ ಆ ಆಸಾಮಿ ನನ್ನನ್ನು ಅಲ್ಲಿಂದ ಕಾಲ್ಕೀಲಲು ಬಿಡಲೇ ಇಲ್ಲ. ಮತ್ತದೇ ಪ್ರಶ್ನೆ `ನನ್ನ ಪರಿಚಯ ಇದೆಯಾ ಸಾರ್? ಎನ್ನುವುದು. ಈ ವೇಳೆ ಯಾರಪ್ಪ ಇವರು ಆಂತ ಸ್ವಲ್ಪ ಯೋಚನೆ ಮಾಡಲು ಆರಂಭಿಸಿದೆ. ಆದರೆ ಆ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗಲೇ ಇಲ್ಲ. ಆದರೂ ಆ ವ್ಯಕ್ತಿಯನ್ನು ಎಲ್ಲೋ ನೋಡಿದ, ಒಂದಷ್ಟು ಹೊತ್ತು ಮಾತನಾಡಿದ ನೆನಪುಗಳು ಮಾತ್ರ ಒಂದು ಹಂತಕ್ಕೆ ನನ್ನಲ್ಲಿತ್ತು....
ನಾನು ತಡವರಿಸಿದ್ದನ್ನು ಕಂಡ ಅವರು `ನಾನು ಸಾರ್ ಲಕ್ಷ್ಮಣ್...ಆವತ್ತು ನಿಮ್ಮ ಭವಿಷ್ಯ ಹೇಳಿದ್ನಲ್ಲಾ...! ಅಂತ ತನ್ನ ಪರಿಚಯ ಮಾಡಿಕೊಂಡರು. ಆಗಲೇ ಗೊತ್ತಾಗಿದ್ದು ನೋಡಿ....ಸರಿಸುಮಾರು ಒಂದು ವರ್ಷದ ಹಿಂದೆ ಈ ವ್ಯಕ್ತಿ ನನ್ನ ಒಂದಷ್ಟು ಭವಿಷ್ಯ ಹೇಳಿದ್ರು ಅನ್ನೋದು. ಇವರದ್ದು ಬೀದಿ ಸುತ್ತಿ ಮನೆ-ಮನೆಗೆ ಹೋಗಿ ಭವಿಷ್ಯ ಹೇಳುವ ಕಾಯಕ. ಹೀಗೇ ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಒಂದು ಹಣ ಕೊಡದಿದ್ರೂ ಪರವಾಗಿಲ್ಲ, ನಿಮ್ಮ ಭವಿಷ್ಯ ಹೇಳ್ತೀನಿ ಅಂದಿದ್ದ ಈ ಆಸಾಮಿ. ಕೊನೆಗೆ ಕಾಟ ತಡೆಯಲಾಗದೆ `ಆಯ್ತಪ್ಪ ಹೇಳು' ಅಂತ ಒಂದತ್ತು ನಿಮಿಷ ಅವರ ಜೊತೆ ಮಾತನಾಡಿದ್ದೆ (ಭವಿಷ್ಯ ಕೇಳಿದ್ದೆ)...!
ವರ್ತಮಾನದ ಮೇಲೆ ಮಾತ್ರ ಒಂದಷ್ಟು ನಂಬಿಕೆಯಿಟ್ಟ ನನಗೆ ಭವಿಷ್ಯದ ಬಗ್ಗೆಯಾಗಲೀ ಜ್ಯೋತಿಷ್ಯದ ಬಗ್ಗೆಯಾಗಲೀ ಅಷ್ಟಾಗಿ ನಂಬಿಕೆಯಿಲ್ಲ. ಆದರೂ ಆ ವ್ಯಕ್ತಿಯ ಕಿರಿಕಿರಿ ತಾಳದೆ ಅಂದು ಭವಿಷ್ಯ ಕೇಳಿದೆ. ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕೈ ನೋಡಿ ಭವಿಷ್ಯ ಹೇಳಲು ಆರಂಭಿಸಿದ ಅವರು, ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿದೆ. ನಿಮಗೆ ರಾಜಯೋಗ ಇದೆ. ನೀವು ಕೈಯಿಟ್ಟ ಎಲ್ಲಾ ಕೆಲಸಗಳೂ ಥಟ್ ಅಂತ ಮುಗಿದು ಹೋಗುತ್ತೆ....ಅಂತ ಹೇಳಿ ಐದೇ ನಿಮಿಷದಲ್ಲಿ ನನ್ನನ್ನು ರೈಲು ಹತ್ತಿಸಿಬಿಟ್ಟಿದ್ದ. ಆದರೆ ನನ್ನದು ಮಾತ್ರ ಒಮ್ಮೊಮ್ಮೆ ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುವ ಜಾಯಮಾನ. ಹಾಗಾಗಿ ಆ ಕೂಡಲೇ ಆತನ ಮಾತಿಗೆಲ್ಲಾ ಒಂದಷ್ಟು ಖಡಕ್ ಉತ್ತರ ಕೊಟ್ಟಿದ್ದೆ....ಸುಮ್ಮನೆ ರೈಲು ಹತ್ತಿಸುವ ಕೆಲಸ ಬೇಡ ಅಂತ ಒಂದು ರೇಂಜಿಗೆ ಆ ಜ್ಯೋತಿಷಿಗೆ ಬೈದು ಬಿಟ್ಟಿದ್ದೆ. ಸಾಕಪ್ಪ ನಿನ್ನ ಜ್ಯೋತಿಷ್ಯ ಇಲ್ಲಿಂದ ಜಾಗ ಖಾಲಿ ಮಾಡು ಅಂತಾನೂ ಹೇಳಿದ್ದೆ. ಆದರೆ ಅವರು ಮಾತ್ರ ಜಾಗ ಖಾಲಿ ಮಾಡುವ ಹಾಗೆ ಕಾಣಲಿಲ್ಲ. `ಸಾರ್, ಇಲ್ಲಿಯ ತನಕ ನಾನು ಹೇಳಿದ್ದು ನಿಮ್ಮ ಅದೃಷ್ಟದ ಬಗ್ಗೆ...ಮುಂದೆ ನಿಮ್ಮ ಜೀವನದಲ್ಲಿ ಆಗಬಹುದಾದ ದುರಾದೃಷ್ಟದ ಬಗ್ಗೆಯೂ ಹೇಳ್ತೀನಿ ಅಂದ......ಮಾತು ಮುಂದುವರೆಸಿದವನೇ.....ಮುಂದೆ ನಿಮ್ಮ ಜೀವನದಲ್ಲಿ ದೊಡ್ಡದೊಂದು ಅನಾಹುತ ಕಾದಿದೆ ಅಂದು ಬಿಟ್ಟ...ಮೊದಲನೆಯದು ಅಪಘಾತವಾದರೆ, ಎರಡನೆಯದು ನೀವು ಮಾಡುವ ವೃತ್ತಿಯದ್ದು ಎಂದು ಹೇಳಿದೆ..ಮೂರನೆಯದ್ದು ಏನಪ್ಪ? ಎಂದು ನಾನು ಕೂಡ ಕೇಳಿಯೇ ಬಿಟ್ಟೆ..ಆಗ ಆತ `ನಿಮ್ಮ ಜೀವನದಲ್ಲಿ ಪ್ರೀತಿಯ ವಿಚಾರದಲ್ಲಿ ಒಂದು ಸೋಲು ನಿಮ್ಮ ಬೆನ್ನು ಬೀಳಿಲಿದೆ. ಬದುಕಿನಲ್ಲಿ ನಿಮ್ಮ ಮೇಲೊಂದು ಬಹುದೊಡ್ಡ ಏಟು ಬೀಳಲಿದೆ. ಹಣ್ಣು ಮಗಳೊಬ್ಬಳ ವಿಚಾರದಲ್ಲಿ ಒಂದಷ್ಟು ದಿನ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ' ಅಂದು ಬಿಟ್ಟ. ಒಂದು ಮತ್ತು ಎರಡನೆಯದು ಓಕೆ....ಆದರೆ ಮೂರನೆಯದು ನನ್ನ ಜೀವನದಲ್ಲಿ ಸಾದ್ಯವೇ ಇಲ್ಲ ಅಂತ ಹೇಳಿಬಿಟ್ಟೆ. ಯಾಕೆಂದರೆ ಅಲ್ಲಿಯತನಕ ಪ್ರೀತಿ-ಪ್ರೇಮ, ಲವ್-ಗಿವ್ ಅಂತ ನನಗೆ ಏನೂ ಇರಲಿಲ್ಲ. ನನ್ನದೇನಿದ್ದರೂ ಒಬ್ಬಂಟಿ ಜೀವನ...ಹಾಗಾಗಿ ಈ ಬೀದಿ ಜ್ಯೋತಿಷಿಯ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿಯೋ ಏನೋ ನಿನ್ನೆ ಮಂಗಳೂರಿನ ರಸ್ತೆಯಲ್ಲಿ ಮುಗಿಬಿದ್ದು ಆತನೇ ಮಾತಿಗಿಳಿದರೂ `ಅವನ್ಯಾರು? ಎನ್ನುವುದು ನನ್ನ ಅರಿವಿಗೆ ಬರಲು ಒಂದಷ್ಟು ಹೊತ್ತು ಬೇಕಾದದ್ದು...!
ಹೀಗೆ ಮಂಗಳೂರಿನಲ್ಲಿ ಮಾತಿಗೆ ಸಿಕ್ಕ ಜ್ಯೋತಿಷಿ ಲಕ್ಷಣನ ಬಗ್ಗೆ ಅಷ್ಟೊತ್ತಿಗಾಗಲೇ ಎಲ್ಲವೂ ನೆನಪಾಗಿತ್ತು. ಆತ ಒಂದು ವರ್ಷದ ಹಿಂದೆ ಹೇಳಿದ್ದು, ಆನಂತರ ನನ್ನ ಜೀವನದಲ್ಲಿ ನಡೆದದ್ದು ಎಲ್ಲವೂ ಕಣ್ಣ ಮುಂದಿತ್ತು. ಹಾಗಾಗಿ ಇನ್ನು ಭವಿಷ್ಯದ ಪ್ರಶ್ನೆ ಬೇಡ ಅಂದುಕೊಂಡು ಜ್ಯೋತಿಷಿಯನ್ನೇ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಕೇಳಿದೆ. ಈಗ ಆತನ ಜೊತೆ ಮಾತನಾಡುವ ಸರದಿ ನನ್ನದು ಅಂದು ಕೊಂಡು `ಈಗ ನೀವು ನನ್ನ ಭವಿಷ್ಯ ಹೇಳುವುದು ಬೇಡ...ಸರಿಯಾಗಿ ಮೂರು ತಿಂಗಳ ಹಿಂದೆ ನನ್ನ ಜೀವನದಲ್ಲಿ ಏನಾಯಿತು? ಅಂತ ಹೇಳಿ ಅಂದು ಬಿಟ್ಟೆ. ಆಗ ತನ್ನ ಇನ್ನಿಲ್ಲದ ಕವಡೆ, ಜ್ಯೋತಿಷ್ಯದ ಒಂದಷ್ಟು ಪುಸ್ತಕ, ಅಸ್ತ್ರ ಎಲ್ಲವನ್ನೂ ನನ್ನೆದುರಿಗಿಟ್ಟವನೇ ಭೂತಕಾಲದ ವಿವರ ಬಹಿರಂಗಕ್ಕೆ ಇಳಿದುಬಿಟ್ಟ. `ಏನ್ ಸಾರ್, ನಿಮ್ಮ ಜೀವನದಲ್ಲಿ ಹೀಗೆಲ್ಲಾ ಆಗಿ ಹೋಯ್ತು! ನಾನವತ್ತು ಹೇಳಿದ ಹಾಗೆಯೇ ಆಯ್ತಲ್ಲ. ಹೆಣ್ಣು ಮಗಳ ವಿಚಾರದಲ್ಲಿ ನೀವು ಸುಖಾಸುಮ್ಮನೆ ತೊಂದರೆ ಅನುಭವಿಸುತ್ತೀರಿ ಅಂದಿದ್ದೆ. ಅದು ಸರಿಯಾಗಿಯೇ ಆಗಿದೆ ಅಲ್ವಾ ಸಾರ್. ಮೊದಲು ಎಲ್ಲರೂ ನಿಮ್ಮದೇ ತಪ್ಪು ಅಂದುಕೊಂಡಿದ್ರೂ ಆದ್ರೆ ಈಗ ಎಲ್ಲರಿಗೂ ನಿಮ್ಮ ಬಗ್ಗೆ ಗೊತ್ತಾಗಿದೆ ಅಲ್ವಾ? ಮೊದಲ ಪ್ರೀತಿ ನಿಮ್ಮ ವಿಚಾರದಲ್ಲಿ ಸೋತು ಹೋಯ್ತಲ್ಲ ಸಾರ್...! ಅಂದು ಬಿಟ್ಟ.....ಈ ಮಧ್ಯೆ ನಿಮಗೆ ಒಂದು ವಾಹನಪಘಾತವಾಗಿದೆ...ಮೊದಲು ಮಾಡ್ತಾ ಇದ್ದ ಕೆಲಸ ಕೂಡ ಈಗ ಇಲ್ವಲ್ಲಾ? ಬೇರೆ ಕಲಸದಲ್ಲಿದ್ದೀರಲ್ಲಾ.....ಅಂದ ಲಕ್ಷ್ಮಣ ಜ್ಯೋತಿಷಿ....
ಆಗ ನಾನು ನಿಜಕ್ಕೂ ಶಾಕ್ ಆದೆ....!ಜ್ಯೋತಿಷ್ಯ, ಭವಿಷ್ಯ ಯಾವುದನ್ನೂ ನಂಬದ ನಾನು ಕೂಡ ಆತನ ಮಾತಿಗೆ ಸೋತು ಶರಣಾಗಬೇಕಾಯಿತು. ಕಾರಣ ಇಷ್ಟೇ....ಆತ ತನ್ನ ಭೂತಕಾಲದ ಬಗ್ಗೆ ಹೇಳಿದ ಇಂಚಿಂಚೂ ವಿಷಯಗಳು ಕಳೆದ ಒಂದು ವರ್ಷ ನಡೆದ ಘಟನೆಗಳ ಜೆರಾಕ್ಸ್ ಕಾಪಿಯಂತಿದ್ದವು......! ಅದರಲ್ಲೂ ನಾನು ಯಾರಲ್ಲಿಯೂ ಹೇಳದ ವಿಚಾರಗಳೂ ಲಕ್ಷ್ಮಣದ ಬಾಯಿಯಿಂದ ಹಾಗೇ ಉದುರುತ್ತಿದ್ದವು.
ಆಗ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಹೈ-ಫೈ ಜೀವನ ನಡೆಸುವ ಸೋಕಾಲ್ಡ್ ಜ್ಯೋತಿಷಿಗಳ ಮಧ್ಯೆ ಲಕ್ಷ್ಮಣ್ನಂತಹ ಬೀದಿ ಸುತ್ತುವ ಜ್ಯೋತಿಷಿಗಳ ಭವಿಷ್ಯ ಎಷ್ಟು ಪವರ್ಫುಲ್ ಅನ್ನೋದು. ಕೆಲವೊಮ್ಮೆ ನಾವು ಇಂಥವರ ವೇಷ-ಭೂಷಣ, ಬದುಕುವ ರೀತಿಯನ್ನು ಕಂಡು ತಾತ್ಸರದಿಂದ ಕಾಣುತ್ತೇವೆ. ಆದರೆ ಬೀದಿ ಸುತ್ತಿ ಇವರು ಗಳಿಸಿಕೊಂಡ ಅತ್ಯಮೂಲ್ಯ ಜ್ಞಾಪಕಶಕ್ತಿ, ಇದ್ದಬದ್ದ ಪುಸ್ತಕ ಓದದೇ ಪಡೆದ ಒಂದಷ್ಟು ಭವಿಷ್ಯ ಹೇಳುವ ಗುಣ ನಿಜಕ್ಕೂ ಗ್ರೇಟ್ ಅನಿಸದೇ ಇರದು. ಅದರಲ್ಲೂ ಜ್ಯೋತಿಷ್ಯ ಬೇಕಾದ್ರೆ ಹೇಳ್ತೀನಿ...ಆದ್ರೆ ನಿಮ್ಮತ್ರ ಹಣ ಇಲ್ದೇ ಇದ್ರೆ ಪರ್ವಾಗಿಲ್ಲ ಎನ್ನುವ ಇವರ ಸ್ವಾಭಾವ....ಒಂದು ಹಂತಕ್ಕೆ ಅದಾಗಲೇ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿಹಾಕಿತ್ತು. ನನ್ನ ಜೀವನವನ್ನು ಇದ್ದಿದ್ದನ್ನು ಇದ್ದ ಹಾಗೆ ಕಟ್ಟಿಕೊಟ್ಟ ಲಕ್ಷ್ಮಣ್ರಂತಹ ಜ್ಯೋತಿಷಿಗಳ ಬಗ್ಗೆ ಅದ್ಯಾಕೋ ಒಂದಷ್ಟು ಗೌರವ ನನ್ನಲ್ಲೂ ಮೂಡಿದೆ. ಏನೇ ಆಗಲಿ ಭೂತ-ವರ್ತಮಾನ-ಭವಿಷ್ಯದ ನಡುವಿನ ಹಾದಿಯಲ್ಲಿ ಜ್ಯೋತಿಷ್ಯ ಎನ್ನುವುದು ಹೆಸರಿಗಷ್ಟೇ....ಬದುಕಿನಲ್ಲಿ ಇಂತದ್ದೇ ಆಗಬೇಕು ಅನ್ನುವುದಿದ್ದರೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ...ಅದಕ್ಕೆ ಇರಬೇಕು ಯೋಗರಾಜ್ ಭಟ್ಟರು `ಡ್ರಾಮಾ' ಚಿತ್ರದಲ್ಲಿ ಹೀಗೆ ಹೇಳಿದ್ದು......
ಪರ್ಪಂಚದಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ...ಅವನಿರದೇ ಹೋದರೂನೂ ತಿರುಗುತ್ತಪ್ಪ ಈ ಭೂಮಿ....
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡೋನಾ..? ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡೋನಾ....!
ಕೊನೆಗೆ ಲಕ್ಷ್ಮಣ್ ಜ್ಯೋತಿಷಿಯ ಮೊಬೈಲ್ ನಂಬರ್ ಪಡೆದು ಹೊರಟು ಬಿಟ್ಟೆ......ಆಗಲೂ ಅಷ್ಟೇ ಯಾವುದೇ ಪ್ರತಿಫಲ ಬಯಸದೇ `ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ, ಬದುಕಲ್ಲಿ ನೀವು ಗೆಲ್ತೀರಾ..! ಅಂದು ಬಿಟ್ಟ.......


Tuesday 23 April 2013

ಮನಸಿನಲ್ಲಿದ್ದ ಮೌನ ಮಾತಾದಾಗ.........!

 

 ಹೆಸರು ಗಣೇಶ್......ಹಗಲಿನಲ್ಲಿ ಕೊರಿಯರ್ ಕೆಲಸ, ರಾತ್ರಿಯಾದರೆ ಪತ್ರಿಕಾ ಕಛೇರಿ, ಈ ಮಧ್ಯೆ ದೂರ ಶಿಕ್ಷಣದಲ್ಲಿ ಜರ್ನಲಿಸಂ. ಹೀಗೆ ಮೂರು ದೋಣಿಯ ಮೇಲೆ ಕಾಲಿಟ್ಟಿದ್ದ ನಾನು ಹೆಚ್ಚಿನ ಸಮಯ ಜನರೊಂದಿಗೆ ಬೆರೆಯುತ್ತಿದ್ದದ್ದು ಕೊರಿಯರ್ ಸಂಸ್ಥೆಯಲ್ಲಿ. ಇದೇ ಕೊರಿಯರ್ ಸಂಸ್ಥೆಯ ಪಕ್ಕದಲ್ಲೊಂದು ವಾಟರ್ ಫ್ಯೂರಿಫಯರ್ ಶಾಪ್ ಇತ್ತು. ಇಲ್ಲಿ ಮಾಕರ್ೆಟಿಂಗ್ ಕೆಲಸಕ್ಕೆ ಅಂತ ಪ್ರತೀ ದಿನ ಹುಡುಗಿಯರು ಬರ್ತಾ ಇದ್ದರು. ನಮ್ಮಲ್ಲೂ ಎಂಟತ್ತು ಹುಡುಗರಿದ್ದ ಕಾರಣ ಸಹಜವಾಗಿಯೇ ಅಲ್ಲಿನ ಹುಡುಗಿಯರಿಗೂ ಇಲ್ಲಿನ ಹುಡುಗರಿಗೂ ಮಾತು ಮುಂದುವರೆದಿತ್ತು. ಆದರೆ ನಾನು ಮಾತ್ರ ಯಾರಲ್ಲೂ ಅಷ್ಟಾಗಿ ಮಾತಾಡ್ತಾ ಇರಲಿಲ್ಲ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಹತ್ತರ ನಂತರ ನಮ್ಮ ಅಫೀಸ್ನಲ್ಲಿ ನಾನೊಬ್ಬನೇ ಇರುತ್ತಿದ್ದೆ. ತೀರಾ ಸೈಲೆಂಟ್ ಆದ ನನಗೆ ಒಂಟಿಯಾದಾಗ ಜೊತೆಯಾಗುತ್ತಿದ್ದದ್ದು ಪುಸ್ತಕಗಳು ಮಾತ್ರ. ಹೀಗೇ ಪುಸ್ತಕ ಓದ್ತಾ ಇದ್ದಾಗ ಪಕ್ಕದ ಸಂಸ್ಥೆಯ ಐದಾರು ಹುಡುಗಿಯರು ಬಂದು ನಮ್ಮ ಕೆಲಸದ ಬಗ್ಗೆ ಕೇಳಿದ್ರೂ....ಇಲ್ಲೇನ್ ಕೆಲಸ? ಏನ್ ಮಾಡ್ತೀರಾ? ಅಂತ ವಿಚಾರಿಸಿದ್ರೂ. ನಾನೂ ಕೂಡ ಅವರ ಕುತೂಹಲಕ್ಕೆ ನಿರಾಶೆ ಮಾಡದೆ ಎಲ್ಲವನ್ನೂ ಒಪ್ಪಿಸಿದೆ. ಇಷ್ಟೆಲ್ಲಾ ಮುಗಿದ ನಂತರ ಇವರಲ್ಲೊಬ್ಬಳು ನಾನು ಓದುತ್ತಿದ್ದ ಪುಸ್ತಕ ಪಡೆದುಕೊಂಡಳು. ಓದಿ ನಾಳೆ ಕೊಡ್ತೀನಿ ಅಂದಳು. ಪುಸ್ತಕವಾದ ಕಾರಣ ನಾನೂ ಕೊಟ್ಟು ಬಿಟ್ಟೆ. ಮರುದಿನ ನನ್ನ ಪುಸ್ತಕ ಹಿಂದಿರುಗಿಸಲು ಆಕೆ ಬಂದಳು. ಅವಳ ಜೊತೆಗೆ ಉಳಿದ ನಾಲ್ವರೂ ಇದ್ದರು. ಯಾಕೊ ಗೊತ್ತಿಲ್ಲ ಈ ಪುಸ್ತಕ ಪಡೆದ ಹುಡುಗಿಯರ ಮಧ್ಯೆ ನಿಂತಿದ್ದ ಗುಳಿ ಕೆನ್ನೆಯ ಹುಡುಗಿ ಮಾತ್ರ ಒಂದೇ ಸಮನೆ ಇಷ್ಟವಾಗಿದ್ದಳು. ಹಾಗಂತ ಅದು ಪ್ರೀತಿ ಅನ್ನುವ ಹಾಗಿರಲಿಲ್ಲ. ಜಸ್ಟ್ ಇಷ್ಟ ಅಷ್ಟೇ....!
ಹೀಗೆ ಪ್ರತಿ ನಿತ್ಯ ಇವರುಗಳ ಜೊತೆ ನನ್ನ ಮಾತುಕತೆ ಸಾಗುತ್ತಿತ್ತು. ಆದರೆ ಆ ಗುಳಿಕೆನ್ನೆಯ ಹುಡುಗಿಯೊಂದಿಗೆ ಮಾತ್ರ ನನ್ನ ಮಾತುಕತೆ ನಡೆದಿರಲಿಲ್ಲ. ಅವಳೊಂದಿಗೇನಿದ್ದರೂ ಜಸ್ಟ್ ನಗುವಷ್ಟೇ. ಹೀಗೇ ಸಾಗುತ್ತಿದ್ದ ದಿನಗಳ ಮಧ್ಯೆ ನನ್ನ ಜೊತೆ ಮಾತನಾಡುತ್ತಿದ್ದ ಹುಡುಗಿಯರಿಗಿಂತ ಸೈಲೆಂಟ್ ಹುಡುಗಿ ತುಂಬಾ ಇಷ್ಟವಾಗಿದ್ದಳು. ಬಹುಶಃ ಈ ವೇಳೆ ಇಷ್ಟ ಅನ್ನುವುದು ಒಂದು ಹಂತಕ್ಕೆ ಪ್ರೀತಿಯಾಗಿ ಬೆಳೆದಿತ್ತು ಅನ್ನಬಹುದೇನೋ? ಜೀವನದಲ್ಲಿ ಒಂದು ಹುಡುಗಿಯ ಮೇಲೆ ಮೂಡಿದ ಮೊದಲ ಪ್ರೀತಿ ಅದಾಗಿತ್ತು....!
ಇಷ್ಟೆಲ್ಲಾ ಅದ್ಮೇಲೆ ಪ್ರೀತಿ ವಿಚಾರ ಅವಳಿಗೆ ಹೇಳಿಬಿಡಬೇಕು ಅನಿಸ್ತು. ಆದರೆ ಅವಳ ಜೊತೆ ಯಾವಾಗಲೂ ಅವಳ ಗೆಳತಿಯರು ಇರ್ತಾ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಒಂದು ದಿನ ಹೇಗೋ ಅವಳ ಮೊಬೈಲ್ ನಂಬರ್ ಪಡೆದುಕೊಂಡೆ. ನಂಬರ್ ಪಡೆದ ಮೇಲೆ ಫೋನ್ ಮಾಡಿ ಪ್ರೀತಿಯ ಬಗ್ಗೆ ಹೇಳೋಣವೆಂದರೆ ಅದೇನೋ ಭಯ! ಯಾಕೆಂದರೆ ಅದು ನನ್ನ ಮೊದಲ ಪ್ರೀತಿ...ಫಸ್ಟ್ ಪ್ರಫೋಸಲ್ ಆಗಿತ್ತು....! ಅವತ್ತೊಂದಿನ ರಾತ್ರಿ ಗುಂಡಿಗೆ ಗಟ್ಟಿ ಮಾಡಿಕೊಂಡು ಅವಳಿಗೆ ಫೋನ್ ಮಾಡಿದೆ. ಆದರೆ ಭಯದಿಂದ ಬಾಯಲ್ಲಿ ಮಾತೇ ಉದುರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಎಂಬಂತೆ ಫೋನ್ ಎತ್ತಿದ ಕಾವ್ಯ...ಗಣೇಶ್ ಅಲ್ವಾ ಅಂತ ಕೇಳಿದ್ದಳು. ಫೋನ್ನಲ್ಲಿ ಇಂಥದ್ದೊಂದು ಮಾತು ಕೇಳಿ ಸಿಡಿಲು ಬಡಿದ ಅನುಭವ....! ಹೌದು...ಅಂತ ಮಾತು ಮುಂದುವರೆಸಿದ ನಾನು ಒಂದೆರಡು ನಿಮಿಷ ಕ್ಯಾಶುವಲ್ ಆಗಿ ಮಾತಿಗಿಳಿದೆ. ಆದ್ಯಾಕೊ ಸಮಯ ಓಡ್ತಾ ಇತ್ತು ಅನಿಸಿದಾಗ ಲವ್ ಪ್ರಪೋಸ್ ಮಾಡಿಯೇ ಬಿಟ್ಟಿದ್ದೆ. ಆದರೆ ಆವಾಗಲೇ ಗೊತ್ತಾಗಿದ್ದು, ಅವಳಿಗೂ ನಾನು ಈ ಹಿಂದೆಯೇ ಇಷ್ಟವಾಗಿದ್ದೆ ಅಂತ. ಅಲ್ಲಿಂದ ಮೌನಿ ಹೃದಯಗಳ ಪ್ರೀತಿಯ ಪಯಣ ಆರಂಭವಾಗಿತ್ತು.......
ಕಾವ್ಯ ಜಾತಿ, ಗುಣ, ಶಿಕ್ಷಣ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್. ಹೀಗಾಗಿಯೋ ಏನೋ ಪ್ರಮಿಯೊಂದಿಗೆ ಒಂದು ಬಾರಿಯೂ ನಾನು ಮಾತು ಮುರಿದಿರಲಿಲ್ಲ, ಜಗಳ ಕಾಯ್ದಿರಲಿಲ್ಲ. ಪ್ರಮಿಯದ್ದು ಮಂಗಳೂರಿನಿಂದ 60ಕಿ.ಮೀ ದೂರದ ಊರು. ನನ್ನಂತೆಯೇ ಶಿಕ್ಷಣ ಮತ್ತು ಕೆಲಸ ಅಂತ ಮಾಡಿಕೊಂಡು ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ಬೆಳಿಗ್ಗೆ 7ರಿಂದ 9 ಕಂಪ್ಯೂಟರ್ ಕ್ಲಾಸ್ಗೆ ಹೋದರೆ ಉಳಿದ ಸಮಯ ಅಂದರೆ ಸಂಜೆ ಐದರವರೆಗೆ ವಾಟರ್ ಫ್ಯೂರಿಫಯರ್ ಸಂಸ್ಥೆಯಲ್ಲಿ ಕೆಲಸ. ಈ ಮಧ್ಯೆ ಸಿಗುವ ಭಾನುವಾರದ ಬಿಡುವಿನಲ್ಲಿ ನಾವಿಬ್ಬರೂ ಮಂಗಳೂರಿನ ಪಾಕರ್್ ಬೀಚ್ಗಳಲ್ಲಿ ಸುತ್ತಾಡುತ್ತಿದ್ದೆವು. ಉಳಿದ ದಿನಗಳಲ್ಲಿ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ ಮುಂದುವರೆದಿತ್ತು. ಹಾಗಂತ ನಮ್ಮ ಸುತ್ತಾಟಗಳು ಪಾಕರ್್-ಬೀಚ್ಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ವಾರದಲ್ಲಿ ಎರಡು ದಿನ ಮಂಗಳೂರಿನ ದೇವಸ್ಥಾನವೊಂದಕ್ಕೆ ಖಾಯಂ ಭಕ್ತರಾಗಿದ್ದೆವು. ಇಲ್ಲಿ ಹೋದಾಗ ಇಬ್ಬರ ಹಸರಿನಲ್ಲೂ ಕುಂಕುಮಾರ್ಚನೆ ಮಾಡಿಸುವುದು ವಾಡಿಕೆ. ಹೀಗಾಗಿ ನಮ್ಮಿಬ್ಬರ ಹೆಸರು ನಕ್ಷತ್ರ ಎಲ್ಲವೂ ಇಲ್ಲಿನ ಅರ್ಚಕರ ಮೆದುಳಿನಲ್ಲಿ ಅಪ್ಡೇಟ್ ಆಗಿತ್ತು. ಹೀಗೆ ನಮ್ಮಿಬ್ಬರ ಪ್ರೀತಿ ಯಾವುದೇ ಅಡೆತಡೆ ಇಲ್ಲದೇ ಸಾಗಿತ್ತು. ಕಾವ್ಯಾಳದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಅವಳದ್ದು ಮಕ್ಕಳಂತ ಸ್ವಭಾವ. ತೀರಾ ಸೆನ್ಸಿಟಿವ್, ಅತೀ ಭಾವುಕ ಜೀವಿ. ತಾನು ಉಡುವ ಉಡುಗೆಯಲ್ಲೂ ಅಷ್ಟೇ, ಫಫರ್ೆಕ್ಟ್ ಮ್ಯಾಚಿಂಗ್ ಆಗಿರಬೇಕು. ನೀಲಿ ಆಕಾಶಕ್ಕೆ ಸಡ್ಡು ಹೊಡೆಯುವ ಬಣ್ಣದ ಚೂಡಿದಾರ ಹಾಕಿ, ತನ್ನ ನೀಲಕಾಯದ ಕೂದಲುಗಳಿಗೆ ಹೂ ಮುಡಿದು ಗುಳಿ ಕೆನ್ನೆಯ ನಗು ನಕ್ಕಳೆಂದರೆ ಸಾಕು ಕಾವ್ಯ ಸಖತ್ ಇಷ್ಟವಾಗುತ್ತಿದ್ದಳು. ಹೊಟೇಲ್ನಲ್ಲಿ ತಿಂಡಿ ತಿನ್ನುವಾಗಲೂ ಅವಳ ಮಕ್ಕಳಾಟಿಕೆಗೆ ಬ್ರೇಕ್ ಬೀಳುವುದಿಲ್ಲ. ಒಟ್ಟಿನಲ್ಲಿ ಸ್ವಭಾವತ ಕಾವ್ಯ ನನಗೆ ತುಂಬಾ ಇಷ್ಟವಾಗಿದ್ದಳು. ಹೀಗಾಗಿ ಜೀವನಕ್ಕೆ ಇವಳೇ ಸೂಕ್ತ ಅಂದುಕೊಂಡು ಆ ಜೀವಕ್ಕೆ ಒಂದಷ್ಟೂ ನೋವು ಕೊಡದೇ ಪ್ರೀತಿಸುತ್ತಿದ್ದೆ.
ಹೀಗೆ ಯಾವುದೆ ಅಡೆತಡೆ ಇಲ್ಲದ ನಮ್ಮ ಪ್ರೀತಿಗೆ ಸಣ್ಣದೊಂದು ಏಟು ಬಿದ್ದಿದ್ದು ಕಾವ್ಯ ಕೆಲಸ ಬಿಟ್ಟಾಗ. ಸರಿಯಾಗಿ ಸಂಬಳ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕಾವ್ಯ ತನ್ನ ಕೆಲಸ ಬಿಟ್ಟಿದ್ದಳು. ಅದೇ ನೋವಿನಲ್ಲಿ ನನ್ನ ಜೊತೆಗಿನ ಮಾತಿಗೂ ಸಣ್ಣ ಮಟ್ಟಿನ ವಿರಾಮ ಕೊಟ್ಟಿದ್ದಳು. ಆದರೆ ಇವಳನ್ನು ತೀರಾ ಹೆಚ್ಚಾಗಿ ಹಚ್ಚಿಕೊಂಡಿದ್ದ ನನಗೆ ಇವಳೊಂದಿಗೆ  ಒಂದು ದಿನ ಮಾತಿಗಿಳಿಯದಿದ್ದರೂ ಆಗುತ್ತಿರಲಿಲ್ಲ. ಹಾಗಾಗಿ ಅಂದು ಅವಳಿಗೆ ಒಂದೇ ಸಮನೆ ಕಾಲ್ ಮಾಡಿದ್ದೆ. ತುಂಬಾ ಹೊತ್ತಿನ ಬಳಿಕ ಫೋನ್ ಎತ್ತಿದ  ಕಾವ್ಯಳನ್ನು ಸಮಾಧಾನಪಡಿಸಿ, ಪಾಕರ್್ಗೆ ಕರೆದುಕೊಂಡು ಹೋದೆ. ಅಂದು ಮಾತ್ರ  ಕಾವ್ಯಳಲ್ಲಿ ಎಂದಿಗಿಂತಲೂ ಹೆಚ್ಚಿನ ಬದಲಾವಣೆ ಕಂಡಿತ್ತು. ಅದೇಗೋ ಅವಳ ಸಮಸ್ಯೆಯನ್ನು ತಿಳಿದುಕೊಂಡೆ. ಆಗಲೇ ಗೊತ್ತಾಗಿದ್ದು, ಕೆಲಸ ಬಿಟ್ಟ ನಂತರ  ಕಾವ್ಯಗೆ ಇಲ್ಲಿ ಹಣದ ಸಮಸ್ಯೆಯಾಗಿದೆ ಅನ್ನೋದು. ಹೀಗಿದ್ದರೂ ನನ್ನ ಬಳಿ ತನ್ನ ಸಮಸ್ಯೆಯನ್ನು ಮಾತ್ರ  ಕಾವ್ಯ ಅಲ್ಲಿಯತನಕ ಹೇಳಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಗೊತ್ತಾದ ನಂತರ ನಾನೇ  ಕಾವ್ಯಾಗೆ ಹಣ ಕೊಟ್ಟು ಬೇಸರ ಕಳೆಯಲಿ ಅಂತ ಒಂದೆರೆಡು ದಿನ ಊರಿಗೆ ಹೋಗಿ ಬಾ ಅಂತ ಕಳಿಸಿದೆ. ಮತ್ತೆ ಬಂದ ನಂತರ ಇಲ್ಲೊಂದು ಕೆಲಸ ಹುಡುಕಿದರಾಯಿತು ಅಂತ ಸಮಾಧಾನಿಸಿದೆ. ಹೀಗೆ ಮನಸ್ಸಿಲ್ಲದ ಮನಸ್ಸಿನಲಿ  ಕಾವ್ಯಳನ್ನು ಬಸ್ ಹತ್ತಿಸಿ ಬಿಟ್ಟೆ. ಊರಿಗೆ ಹೋದ  ಕಾವ್ಯ ಎರಡು ದಿನ ಮನೆಯವರೊಂದಿಗೆ ಕಳೆದು ಮರಳಿ ಮಂಗಳೂರಿಗೆ ಬಂದಿದ್ದಳು. ಆಗ ಅವಳ ಗೆಳತಿಯೊಬ್ಬಳು ಇಲ್ಲಿನ ಬಟ್ಟೆ ಅಂಗಡಿಯೊಂದರಲ್ಲಿ  ಕಾವ್ಯಗೆ ಕೆಲಸ ಹುಡುಕಿದ್ದಳು. ಊರಿಂದ ಬಂದವಳೇ ನನ್ನ ಬಳಿ ಅನುಮತಿ ಕೇಳಿ ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದಳು. ಬಟ್ಟೆ ಅಂಗಡಿ ಕೆಲಸ ನನಗೆ ಇಷ್ಟವಿಲ್ಲದಿದ್ದರೂ ಮತ್ತೆ  ಕಾವ್ಯ ಕೊರಗುವುದು ಬೇಡ ಎಂದು ಒಪ್ಪಿದ್ದೆ. ಮತ್ತೆ ಬೇಕಾದರೆ ಅವಳಿಗೆ ಹೊಂದಾಣಿಕೆಯಾಗುವ ಕೆಲಸವನ್ನು ನಾನೇ ಹುಡುಕುತ್ತೇನೆ ಅಂದುಕೊಂಡು ಸುಮ್ಮನಾಗಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ  ಕಾವ್ಯಳಲ್ಲಿ ಮತ್ತೆ ಹಿಂದಿನ ಉತ್ಸಾಹ ಮರುಕಳಿಸಿತ್ತು. ನನ್ನ ಪ್ರೀತಿಯ ಕಾವ್ಯ ಈ ಈ ಹಿಂದಿನಂತೆ ಮತ್ತೆ ನನ್ನ ಜೊತೆ ಬೆರೆತಿದ್ದಳು. ಬಟ್ಟೆ ಅಂಗಡಿಯಲ್ಲೂ ಕೆಲಸ ಸಾಗುತ್ತಿತ್ತು. ಹೀಗಿರುವಾಗ ಅದೊಂದು ಭಾನುವಾರ ನಾವಿಬ್ಬರೂ ಪಾಕರ್್ನಲ್ಲಿ ಜೊತೆಯಾಗಿದ್ದೆವು. ಈ ವೇಳೆ ತೀರಾ ಸೈಲೆಂಟಾಗಿದ್ದಳು  ಕಾವ್ಯ. ಮತ್ತೆ ಇವಳಿಗೇನಾಯ್ತಪ್ಪ ಅಂದುಕೊಂಡು ಕೇಳಿಯೇ ಬಿಟ್ಟೆ. ಬಾಯಿ ಬಿಡದ  ಕಾವ್ಯ ನಾನು ಸಾಕಷ್ಟು ಒತ್ತಾಯಪಡಿಸಿದ ನಂತರ ಹೇಳಿದಳು. ಇವಳು ನನಗೆ ಸಿಗುವ ಮುನ್ನ ನಗರದ ಕಾಫಿ ಡೇ ಒಂದರಲ್ಲಿ ಕೆಲಸಕ್ಕಿದ್ದಳು. ಆಗ ಅಲ್ಲಿನ ಸಿಬ್ಬಂದಿಯೋರ್ವ ತಂಗಿ ಮದುವೆಯ ಕಾರಣ ನೀಡಿ ಇವಳ 12 ಸಾವಿರದ ಚಿನ್ನದ ಸರ ಪಡೆದಿದ್ದ. ತೀರಾ ಪಾಪ-ಪುಣ್ಯದ ಲೆಕ್ಕಾಚಾರ ಹಾಕುವ  ಕಾವ್ಯ ಸ್ವಲ್ಪವೂ ಯೋಚಿಸದೆ ಸರವನ್ನು ಆತನ ಕೈಗಿಟ್ಟಿದ್ದಳು. ಆದರೆ ಈಗ ಆತ ನಾಪತ್ತೆಯಾಗಿದ್ದಾನೆ.  ಕಾವ್ಯ ಮನೆಯಲ್ಲಿ ಪ್ರತೀ ಬಾರಿ ಹೋದಾಗಲೂ ಚಿನ್ನದ ಸರ ಕೇಳ್ತಾರೆ. ಹೋದಾಗಲೆಲ್ಲಾ ಸರ ಹಾಸ್ಟೆಲ್ನಲ್ಲಿದೆ ಎಂದು ಹೇಳುತ್ತಿದ್ದ  ಕಾವ್ಯಗೆ ಇನ್ನೊಮ್ಮೆ ಬರುವಾಗ ತರಲೇ ಬೇಕು ಎಂದು ಮನೆಯಲ್ಲಿ ಹೇಳಿದ್ದಾರೆ. ಫೋನ್ ಮಾಡಿದಾಗಲೂ ಮನೆಯಲ್ಲಿ ಸರದ ವಿಚಾರ ತೆಗೆಯುತ್ತಿದ್ದರು. ಹಾಗಾಗಿ ಇನ್ನು ನಾನು ಮನೆಗೆ ಹೋಗುವುದೇ ಇಲ್ಲ ಅಂತ ನನ್ನ ಬಳಿ ನೋವು ತೋಡಿಕೊಂಡಿದ್ದಳು. ಈ ವೇಳೆ ನನಗೆ ಏನು ಮಾಡುವುದೆಂದೇ ತೋಚಲಿಲ್ಲ. ಆದರೂ ಕಾವ್ಯಾಳನ್ನು ಸಮಾಧಾನಿಸಿ, ಸರ ಪಡೆದವನನ್ನು ಹುಡುಕುವ ಭರವಸೆ ನೀಡಿದೆ. ಅವನ ನಂಬರ್ ಪಡೆದು ಹುಡುಕುವ ಪ್ರಯತ್ನವನ್ನೂ ಮಾಡಿದೆ. ಆದರೆ ನಂಬರ್ ಸ್ವಿಚ್ ಆಫ್ ಆಗಿತ್ತು, ವಿಳಾಸ ಹುಡುಕೋಣವೆಂದರೆ ಸಿಮ್ ಕಾಡರ್್ಗೆ ಕೊಟ್ಟ ಅಡ್ರೆಸ್ ಕೂಡ ನಕಲಿಯಾಗಿತ್ತು. ಹಾಗಾಗಿ ನನ್ನ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ನಾನೇ ಒಂದೆರೆಡು ತಿಂಗಳು ಬಿಟ್ಟು ಸರ ತೆಗೆದುಕೊಡುವುದಾಗಿ ಹೇಳಿದೆ. ಆದರೆ  ಕಾವ್ಯ ನನ್ನ ವಿಚಾರದಲ್ಲಿ, ಅದರಲ್ಲೂ ಹಣದ ವಿಚಾರದಲ್ಲಿ ತುಂಬಾ ರಿಸವರ್್ ಆಗಿದ್ದವಳು. ಹಾಗಾಗಿ ನನ್ನ ಬಳಿ ಸರ ಪಡೆಯುವುದು ಅವಳಿಗೆ ಇಷ್ಟವಿರಲಿಲ್ಲ. ಕೊನೆಗೆ ಅವಳೇ, ಪರವಾಗಿಲ್ಲ...ಅವನ ಫೋನ್ ಆನ್ ಆದ ನಂತರ ನೋಡಿದರಾಯಿತು ಅಂದಳು. ಮನೆಗೆ ಹೋಗ್ಬೇಕು ಅಂದಿದ್ದಕ್ಕೆ ಆಯ್ತು ಅಂದವಳೇ,,,,,ತನ್ನ ಗುಳಿ ಕೆನ್ನೆಯ ನಗು ಚೆಲ್ಲಿದಳು. ಆ ನಂತರ ತಿಂಗಳು ಕಳೆದರೂ ಕಾವ್ಯ ನನ್ನ ಬಳಿ ಸರದ ವಿಚಾರ ತೆಗೆಯಲೇ ಇಲ್ಲ. ಹಿಂದಿನಂತೆ ನಮ್ಮಿಬ್ಬರ ಪ್ರೀತಿ ಯಾವುದೆ ಅಡೆತಡೆ ಇಲ್ಲದೇ ಸಾಗಿತ್ತು. ದಿನಕಳೆದಂತೆ ನಾವಿಬ್ಬರೂ ತೀರಾ ಹತ್ತಿರವಾಗಿದ್ದೆವು.  ಕಾವ್ಯ ನನ್ನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಳು.
ಒಂದು ತಿಂಗಳ ನಂತರ ಅದೊಂದು ದಿನ ಶನಿವಾರ. ಎಂದಿನಂತೆ  ಕಾವ್ಯ ರಾತ್ರಿ ಕರೆ ಮಾಡಿದ್ದಳು. ಕರೆ ಮಾಡಿದವಳೇ ನಾಳೆ ಭಾನುವಾರ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ಪ್ರತೀ ಬಾರಿ ನಾನೇ ಕಾವ್ಯಳನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ  ಕಾವ್ಯ ನನ್ನ ಬಳಿ ದೇವಸ್ಥಾನಕ್ಕೆ ಹೋಗೋಣವಾ ಅಂದಿದ್ದಳು. ನನಗೆ ಆಶ್ಚರ್ಯವಾದರೂ,  ಕಾವ್ಯಳಿಗೆ ನಿರಾಶೆ ಮಾಡದ ನಾನು ಒಪ್ಪಿದ್ದೆ. ಮರುದಿನ ಭಾನುವಾರ ಬೆಳಿಗ್ಗೆ 8.30ಕ್ಕೆ ಅವಳ ಹಾಸ್ಟೆಲ್ ಬಳಿಗೆ ಹೋದೆ. ನಾನು ಕೊಟ್ಟ ನೀಲಿ ಕೆಂಪು ಬಣ್ಣದ ಚೂಡಿದಾರ ತೊಟ್ಟ ಕಾವ್ಯ ನನಗಾಗಿ ಕಾಯುತ್ತಿದ್ದಳು. ಆವತ್ತು ಎಂದಿಗಿಂತಲೂ ನನ್ನ ಕಣ್ಣಿಗೆ ಅಂದವಾಗಿ ಕಂಡಿದ್ದಳು  ಕಾವ್ಯ. ಅಲ್ಲಿಂದ ನನ್ನ ಬೈಕ್ನಲ್ಲಿ ಕೂರಿಸಿ ನಮ್ಮಿಬ್ಬರ ಫೇವರೇಟ್ ದೇವಸ್ಥಾನದತ್ತ ಸಾಗಿದೆವು. ಇಲ್ಲೂ ಯಥಾವತ್ತಾಗಿ ಎಂದಿನಂತೆ ಇಬ್ಬರ ಹೆಸರಿನಲ್ಲೂ ಕುಂಕುಮಾರ್ಚನೆ ಮಾಡಿಕೊಂಡೆವು. ಹೀಗಿರುವಾಗಲೇ ಕಾವ್ಯಾಳ ವರ್ತನೆಯಲ್ಲಾದ ಸಣ್ಣದೊಂದು ಬದಲಾವಣೆ ನನಗೆ ಸಾಕಷ್ಟು ಆಶ್ಚರ್ಯ ತರಿಸಿತ್ತು. ಯಾವತ್ತೂ ನಾನು ಹೇಳಿದಂತೆ ದೇವಸ್ಥಾನದಲ್ಲಿ ವತರ್ಿಸುತ್ತಿದ್ದ ಕಾವ್ಯ ಅಂದು ಮಾತ್ರ ಸಾಕಷ್ಟು ಬದಲಾದಂತೆ ಕಂಡಳು. ದೇವರ ಮುಂದೆ ನಿಂತು ನೀವೇ ನನಗೆ ಕುಂಕುಮ ಇಡಿ ಅಂದಿದ್ದಳು  ಕಾವ್ಯ! ನಿಜಕ್ಕೂ ಅಂದು ಆಶ್ಚರ್ಯ ಪಡುವ ಸರದಿ ನನ್ನದು. ಅಲ್ಲಿಯ ತನಕ ಕಾವ್ಯಾಳಿಂದ ಇಂಥದ್ದೊಂದು ಕೋರಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ಕಾವ್ಯಾಳನ್ನು ತುಂಬಾ ಇಷ್ಟ ಪಡುವ ನಾನು, ಬಾಳ ಸಂಗಾತಿ ಎಂದೇ ಅಂದುಕೊಂಡಿದ್ದ ಕಾರಣ ಕುಂಕುಮ ಪಡೆದು ಅವಳ ಹಣೆಗಿಟ್ಟಿದ್ದೆ. ಆಗಲೂ ಅಷ್ಟೇ, ಭಾವುಕತೆ ತುಂಬಿದ ಗುಳಿಕೆನ್ನೆಯ ನಗುವೊಂದು ಅವಳಿಂದ ಹೊರಹೊಮ್ಮಿತ್ತು. ನಂತರ ಅಲ್ಲಿಂದ ಹೊರ ಬಂದವನೇ ಎಂದಿನಂತೆ ಕಾವ್ಯಾಳ ಬಳಿ ಹೊಟೇಲ್ಗೆ ಹೋಗೋಣವಾ ಅಂದೆ. ಪ್ರತೀ ಬಾರಿ ಇವಳಲ್ಲಿ ಈ ರೀತಿ ಕೇಳಿದರೆ ಬರುತ್ತಿದ್ದ ಉತ್ತರ ಬೇಡ ಎನ್ನುವುದು. ತುಂಬಾ ಸ್ವಾಭಿಮಾನಿಯಾದ ಕಾವ್ಯಾ ನನ್ನಲ್ಲಿ ಹಣ ಖಚರ್ು ಮಾಡಿಸುತ್ತಿರಲಿಲ್ಲ. ಆಗೆಲ್ಲಾ ನಾನೇ ಬಲವಂತದಿಂದ ಕರೆದೊಯ್ಯುತ್ತಿದ್ದೆ. ಆದರೆ ಅಂದು ಮಾತ್ರ ಸ್ವತಃ ಅವಳೇ ನನಗೆ ಜ್ಯೂಸ್ ಬೇಕು ಅಂತ ಕೇಳಿದ್ದಳು. ಅಲ್ಲಿಗೆ ಕಾವ್ಯಾಳ ವರ್ತನೆಯಲ್ಲಾದ ಎರಡನೆಯ ಬದಲಾವಣೆಯ ಅರಿವು ನನಗಾಯಿತು. ಹಾಗಾಗಿ ಅವಳೊಂದಿಗೆ ಅಲ್ಲೇ ಇದ್ದ ಹೊಟೇಲ್ಗೆ ಹೋದೆ. ಅಲ್ಲಿಯ ತನಕ ಕಾವ್ಯಾ ಯಾವತ್ತೂ ತನಗೆ ಇಷ್ಟವಾದ ತಿಂಡಿ ಕೇಳಿದವಳಲ್ಲ. ಆದರೆ ಅಂದು ಮಾತ್ರ ತನಗಿಷ್ಟದ ತಿಂಡಿ ಕೇಳಿದ್ದಳು. ತಿಂಡಿ ಬಂದ ತಕ್ಷಣ ಮೊದಲ ತುತ್ತು ನನ್ನ ಬಾಯಿಗಿಟ್ಟವಳೇ ತನ್ನ ಮಕ್ಕಳಾಟದ ನಗು ಚೆಲ್ಲಿದಳು. ಈ ತುತ್ತು ಇವಳಿಂದ ಪಡೆದ ಮೊದಲ ತುತ್ತಾಗಿತ್ತು. ನನ್ನಲ್ಲೂ ಒಂದು ಹಂತಕ್ಕೆ ಪ್ರೀತಿ ತುಂಬಿದ ನಗು ಹೊರ ಹೊಮ್ಮಿತ್ತು. ಇನ್ನು ಜ್ಯೂಸ್ ಬಂದಾಗಲೂ ಅರ್ಧ ಕುಡಿದು ಉಳಿದರ್ಧ ನೀವು ಕುಡಿಯಿರಿ ಅಂದಳು. ಅಂದು ಯಾಕೋ ಗೊತ್ತಿಲ್ಲ, ಹೆಚ್ಚು ಮಾತನಾಡುವ ನಾನು ಮಾತ್ರ ಸುಮ್ಮನಾಗಿದ್ದೆ. ಕಾವ್ಯಾಳ ಪ್ರೀತಿ ಕಂಡು ಅತೀ ಭಾವುಕನಾಗಿದ್ದೆ. ಅವಳ ಪ್ರತಿಯೊಂದು ಅಜ್ಞೆಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದೆ. ಹೀಗೆ ತಿಂಡಿ ತಿಂದ ನಂತರ ಕಾವ್ಯಾಳನ್ನು ಅವಳ ಕೆಲಸಕ್ಕೆ ಬಿಟ್ಟು ಮನೆಗೆ ತೆರಳಿದೆ (ಬಟ್ಟೆ ಅಂಗಡಿಯಲ್ಲಿದ್ದ ಕಾರಣ ಕಾವ್ಯಾಗೆ ಭಾನುವಾರವೂ ಕೆಲಸವಿತ್ತು. ಎಲ್ಲೋ ಕೆಲವೊಮ್ಮೆ ರಜೆ ಹಾಕುತಿದ್ದಳು) ಅಂದು ಮಾತ್ರ ನಾನು ಸಾಕಷ್ಟು ಮೌನಿಯಾಗಿದ್ದೆ. ಯಾವತ್ತೂ ಅಷ್ಟು ಚಟುವಟಿಕೆಯಿಂದಿರದ ಕಾವ್ಯಾ ಮಾತ್ರ ಅಂದು ನನ್ನನ್ನು ಸ್ವಲ್ಪ ಹೆಚ್ಚೇ ಎನ್ನುವಂತೆ ಪ್ರೀತಿಸಿದ್ದಳು.
ಅಂದು ಮಧ್ಯಾಹ್ನವೂ ಅವಳ ಕಾಲ್ ಎಂದಿನಂತೆ ಬಂದಿತ್ತು. ರಾತ್ರಿಯೂ ಕಾಲ್ ಮಾಡಿ ಮುಕ್ಕಾಲು ಘಂಟೆ ಹರಟೆ ಹೊಡೆದಿದ್ದಳು. ಆವಾಗೆಲ್ಲಾ ಕಾವ್ಯಾಳ ವರ್ತನೆಯಲ್ಲಿ ಏನೋ ಒಂದು ಬದಲಾವಣೆಯಿತ್ತು. ಆದರೆ ತುಂಬಾ ಖುಷಿಯಾಗಿದ್ದ ಕಾರಣ ನಾನೂ ಪ್ರಶ್ನಿಸುವ ಗೋಜಿಗೆ ಕೈ ಹಾಕಲಿಲ್ಲ. ಅಲ್ಲಿಗೆ ಅದೊಂದು ಭಾನುವಾರ ನನ್ನ ಪಾಲಿಗೆ ವಿಶೇಷ ದಿನವಾಗಿ ಮುಗಿದು ಹೋಗಿತ್ತು.
ಮರುದಿನ ಸೋಮವಾರ ಸಮಯ ಸುಮಾರು 7.35. ನಾನಿನ್ನೂ ಎದ್ದಿರಲಿಲ್ಲ. ಅದಾಗಲೇ ಕಾವ್ಯಾಳ ಕರೆಗೆ ನನ್ನ ಫೋನ್ ರಿಂಗಣಿಸುತ್ತಿತ್ತು. ಅವಳಿಗಾಗಿಯೇ ಬೇರೊಂದು ರಿಂಗ್ಟೋನ್ ಇಟ್ಟಿದ್ದ ನಾನು ಅದನ್ನು ಕೇಳಿಯೇ ಎಚ್ಚರವಾಗಿದ್ದೆ. ಆಗಳೂ ನನಗೊಂದು ಆಶ್ಚರ್ಯ ಕಾದಿತ್ತು. ನಾವಿಬ್ಬರೂ ಪ್ರೀತಿಸಿದ ಇದೇ ಮೊದಲ ಬಾರಿಗೆ  ಕಾವ್ಯ ಅಷ್ಟು ಬೆಳಿಗ್ಗೆ ಕಾಲ್ ಮಾಡಿದ್ದು. ಯಾಕೆಂದರೆ ಏಳರಿಂದ ಓಂಭತ್ತು ಗಂಟೆ ಅವಳ ಕಂಪ್ಯೂಟರ್ ಕ್ಲಾಸ್ ಸಮಯ. ಆಗೆಲ್ಲಾ  ಕಾವ್ಯ ಯಾರಿಗೂ ಕಾಲ್ ಮಾಡೋದಿಲ್ಲ. ಆದರೆ ಅಂದು ಮಾತ್ರ ಅದು  ಕಾವ್ಯಳದ್ದೇ ಕಾಲ್!
ಎದ್ದವನೇ ಫೋನ್ ಎತ್ತಿದೆ. ಗುಡ್ಮಾನರ್ಿಂಗ್ ಅಂದವಳೇ ಮಾತಿಗಿಳಿದಳು ಕಾವ್ಯ. ಏನಮ್ಮಾ ಇವತ್ತು ಕ್ಲಾಸ್ ಇಲ್ವಾ? ಅಂತ ಕೇಳಿದೆ. ಇವತ್ತು ನಾನು ಕ್ಲಾಸ್ ಮತ್ತು ಕೆಲಸಕ್ಕೆ ರಜೆ. ಗುರುವಾರ ನನ್ನ ಕಸೀನ್ ಮದುವೆ ಇದೆ, ಅದಕ್ಕೆ ಸೀರೆ ಖರೀದಿಸಲಿಕ್ಕೆ ಇದೆ ಅಂದಳು. ಗುರುವಾರ ಕಸೀನ್ ಮದುವೆ ಇದೆ ಎನ್ನುವುದನ್ನು ಈ ಮೊದಲೇ ನನಗೆ ತಿಳಿಸಿದ್ದ ಕಾರಣ ನಾನೂ ಆಗಿರಬಹುದು ಅಂದುಕೊಂಡೆ. ಸೀರೆ ಖರೀದಿಗೆ ನಾನೂ ಬರ್ತೀನಿ ಅಂದೆ. ಆಗ ಅವಳು, ಬೇಡ....ನೀವು ಮಧ್ಯಾಹ್ನ 1.30ಕ್ಕೆ ಹಾಸ್ಟೆಲ್ ಹತ್ತಿರ ಬನ್ನಿ ಸಿಗ್ತೀನಿ ಅಂದಳು. ಆಗಲೀ ಅಂದವನೇ ಯಾವ ಬಣ್ಣದ ಸೀರೆ ತೆಗಿತೀಯಾ ಅಂತ ಕೇಳಿದೆ. ಆಗ ಅವಳು ಕೊಟ್ಟ ಉತ್ತರ ನಿಜಕ್ಕೂ ನನಗೆ ಮತ್ತೊಂದು ಆಘಾತ ತಂದಿತ್ತು...! ಬಿಳಿ ಬಣ್ಣದ ಸೀರೆ ಅಂತ ಹೇಳಿದ್ದ ಪ್ರಮಿಯ ಉತ್ತರ ಕೇಳಿ ನನಗೆ ದಂಗು ಬಡಿದಿತ್ತು. ಬೇಡಮ್ಮಾ ಬಿಳಿ ಬಣ್ಣದ ಸೀರೆ ಒಳ್ಳೆಯದಲ್ಲ, ಬೇರೆ ತೆಗಿ ಅಂದೆ. ಓಕೆ ಆಯ್ತು, ಬೇರ ತೆಗೀತೀನಿ, ನಿಮ್ಮ ಇಷ್ಟಕ್ಕೆ ಯಾವತ್ತೂ ವಿರುದ್ದವಾಗಿ ಹೋಗೋಲ್ಲ ಅಂದಳು. ಎಲ್ಲದಕ್ಕೂ ಆಯಿತು ಅಂದ ನಾನು ಮಧ್ಯಾಹ್ನ ಸಿಗೋದಾಗಿ ಹೇಳಿದೆ.
ಹೀಗೆ ಅಂದಿನ ನನ್ನೆಲ್ಲಾ ನಿತ್ಯ ಕರ್ಮಗಳನ್ನು ಮುಗಿಸಿ 12 ಗಂಟೆಗೆ ಮನೆಯಿಂದ ಹೊರಟೆ. ಸುಮಾರು ಒಂದು ಗಂಟೆಯ ಹೊತ್ತಿಗೆಲ್ಲಾ ಕಾವ್ಯಾಳ ಹಾಸ್ಟೆಲ್ ತಲುಪಿದ್ದೆ. ತಲುಪಿದವನೇ ಅವಳಿಗೊಂದು ಕಾಲ್ ಕೊಟ್ಟೆ. ಆದರೆ ಕಾವ್ಯಾಳ ನಂಬರ್ ಸ್ವಿಚ್ ಆಫ್ ಆಗಿತ್ತು. ಎಲ್ಲೋ ಬ್ಯಾಟರಿ ಚಾಜರ್್ ಖಾಲಿಯಾಗರಬೇಕು ಅಂದುಕೊಂಡು ಸರಿಸುಮಾರು ಒಂದು ಘಂಟೆ ಅಲ್ಲೇ ಕಾದೆ. ಆದರೂ ಕಾವ್ಯ ಕಾಣಿಸಲಿಲ್ಲ. ಮತ್ತೆ ಕಾಲ್ ಮಾಡಿದಾಗಳೂ ಫೋನ್ ಸ್ವಿಚ್ ಆಫ್ ಆಗಿತ್ತು. ಆ ವೇಳೆಗಾಗಲೇ ಒಂದಷ್ಟು ಆತಂಕ ನನ್ನಲ್ಲಿ ಮನೆ ಮಾಡಿತ್ತು. ಯಾಕೆಂದರೆ ಅಲ್ಲಿಯವರೆಗೆ  ಕಾವ್ಯ ಬರ ಹೇಳಿ ಕಾಯಿಸಿದವಲಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡವಳೂ ಅಲ್ಲ.  ಹಾಗಾಗಿ 2.30ರ ವೇಳೆಗೆ ನೇರವಾಗಿ ಅವಳ ಹಾಸ್ಟೆಲ್ಗೆ ಹೋಗಿ ವಾರ್ಡನ್ ಬಳಿ ವಿಚಾರಿಸಿದೆ. ಆದರೆ ವಾರ್ಡನ್ ಕೊಟ್ಟ ಉತ್ತರ ನನ್ನನ್ನು ಇನ್ನಷ್ಟು ಆತಂಕಿತನನ್ನಾಗಿ ಮಾಡಿತ್ತು. ಬೆಳಿಗ್ಗೆ ಹೋದ ಕಾವ್ಯ ಇನ್ನೂ ಹಾಸ್ಟೆಲ್ಗೆ ಬಂದಿಲ್ಲ ಅಂದಿದ್ದರು ಅವರು. ಅಲ್ಲಿಂದ ಹೊರಟವನೇ  ಕಾವ್ಯಳ ಎಲ್ಲಾ ಗೆಳೆತಿಯರಿಗೆ ಫೋನ್ ಮಾಡಿದೆ. ಆದರೆ ಯಾರಿಂದಲೂ ಇವಳ ಬಗ್ಗೆ ಸಮರ್ಪಕ ಉತ್ತರ ಮಾತ್ರ ದೊರೆಯಲಿಲ್ಲ.  ಕಾವ್ಯ ಕೆಲಸ ಮಾಡುವಲ್ಲಿಗೆ ಹೋಗೋಣವೆಂದರೆ, ನಾನು ಕೆಲಸಕ್ಕೆ ಹೋಗೋದಿಲ್ಲ ಇವತ್ತು ರಜೆ ಅಂತ  ಕಾವ್ಯ ಬೆಳಿಗ್ಗೆ ಫೋನ್ ಮಾಡಿದಾಗ ಹೇಳಿದ್ದಳು. ಹಾಗಾಗಿ ಮತ್ತೆ ಸಮಸ್ಯೆ ಸೃಷ್ಟಿಸುವುದು ಬೇಡ ಎಂದು ಸುಮ್ಮನಾದೆ. ಹೀಗೆ ಸಂಜೆ ಆರರವರೆಗೂ ಇವಳಿಗಾಗಿ ಇಡೀ ಮಂಗಳೂರು ಸುತ್ತಿದ್ದೆ. ಆದರೆ  ಕಾವ್ಯ ಮಾತ್ರ ಎಲ್ಲೂ ಸಿಗಲೇ ಇಲ್ಲ. ಸಂಜೆಯ ಹೊತ್ತಿಗಾಗಲೇ  ಕಾವ್ಯ ಮೊಬೈಲ್ಗೆ ನೂರಕ್ಕೂ ಹೆಚ್ಚು ಕಾಲ್ ಮಾಡಿದ್ದೆ. ಆದರೆ ಉತ್ತರ ಮಾತ್ರ ಸ್ವಿಚ್ ಆಫ್. ಹುಡುಕಿ ಹುಡುಕಿ ಸುಸ್ತಾಗಿ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಪತ್ರಿಕೆಯ ಕೆಲಸಕ್ಕೆ ಹೋದೆ. ಇಲ್ಲೂ ಅಷ್ಟೇ, ಒಂಚೂರು ಕೆಲಸ ಮಾಡುವ ಮನಸ್ಸು ನನಗಿರಲಿಲ್ಲ. ರಾತ್ರಿ ಎಂಟು ಗಂಟೆಗೆ  ಕಾವ್ಯ ರೂಮ್ಮೇಟ್ಗೆ ಕರೆ ಮಾಡಿದಾಗಲೂ ಅವಳು ಹಾಸ್ಟೆಲ್ಗೆ ಬಂದಿರಲಿಲ್ಲ. ಅಂದು ಹತ್ತು ಗಂಟೆಗೆಲ್ಲಾ ನನ್ನ ಅರ್ಧರ್ಧ ಕೆಲಸ ಮುಗಿಸಿ ಮನೆಗೆ ತೆರಳಿದ್ದೆ. ಊಟ ಮಾಡದೆ ಹಾಗೇ ಮಲಗಿದ ನನಗೆ  ಕಾವ್ಯ ಎಲ್ಲಿ ಹೋಗಿರಬಹುದು ಎಂಬ ಚಿಂತೆ ಕಾಡುತ್ತಿತ್ತು. ಮಲಗಿದ್ದರೂ ನಿದ್ರೆ ಬಂದಿರಲಿಲ್ಲ. ಹೇಗೋ ಸೋಮವಾರ ಕಳೆದು ಮಂಗಳವಾರದ ಸೂರ್ಯ ಬಾನಿಗೆ ಬಂದಿದ್ದ. ಬೆಳಿಗ್ಗೆ ಎದ್ದವನೇ ಮತ್ತೆ  ಕಾವ್ಯಳ ಮೊಬೈಲ್ಗೆ ಕಾಲ್ ಮಾಡಿದ್ದೆ. ಆಗಲೂ ಸ್ವಿಚ್ ಆಫ್. ಮತ್ತೆ ಅಲ್ಲಿಂದ ಓಂಭತ್ತು ಗಂಟೆಗೆ ಅವಳ ಕಂಪ್ಯೂಟರ್ ಕ್ಲಾಸ್ ಮತ್ತು ಕೆಲಸ ಮಾಡುವ ಬಟ್ಟೆ ಅಂಗಡಿಗೆ ಹೋದಾಗಲೂ  ಕಾವ್ಯ ಸಿಗಲಿಲ್ಲ. ಹೀಗೇ ಹುಡುಕಾಟ ನಡೆಸಿ ಸಮಯ ಮಧ್ಯಾಹ್ನ 12 ದಾಟಿತ್ತು. ಆದರೆ ಕಾವ್ಯ ಮಾತ್ರ ಸಿಗಲೇ ಇಲ್ಲ. ಗೆಳತಿಯ ಮೂಲಕ ಕಾವ್ಯಾಳ ಮನೆಗೆ ಕಾಲ್ ಮಾಡಿಸಿ ಕೇಳಿದಾಗಲೂ ಅವಳು ಅಲ್ಲಿಲ್ಲ ಅನ್ನುವ ಉತ್ತರ ಬಂದಿತ್ತು. ಅಂದು ಮಾತ್ರ ನಾನು ಸಂಪೂರ್ಣ ಸೊರಗಿ ಹೋಗಿದ್ದೆ. ಒಂದು ದಿನವೂ ಅವಳ ಬಳಿ ಮಾತನಾಡದೇ ಇರುತ್ತಿರದ ನಾನು ಅಂದು ನಿಸ್ಸಾಯಕನಾಗಿ ಹೋದೆ, 4 ಗಂಟೆಗಲ್ಲಾ ನನ್ನ ಪತ್ರಿಕಾ ಕಛೇರಿಗೆ ಹೋಗಿ ಒಬ್ಬಂಟಿಯಾಗಿ ಒಂದು ಕೋಣೆಯಲ್ಲಿ ಟೇಬಲ್ಗೆ ತಲೆಯಿಟ್ಟು ಮಲಗಿದೆ. ಅವಳ ಯೋಚನೆಯಲ್ಲೇ ಒಂದು ಗಂಟೆ ಕಳೆದು ಹೋಗಿತ್ತು. ಮತ್ತೆ ಐದು ಘಂಟೆಗೆ ಕಾವ್ಯಾಳ ಮೊಬೈಲ್ಗೆ ಕಾಲ್ ಮಾಡೋಣ ಅಂದುಕೊಂಡು ಅವಳ ನಂಬರ್ ಡಯಲ್ ಮಾಡಿದೆ. ಏನಶ್ಚರ್ಯವೋ, ಅವಳ ಮೊಬೈಲ್ ರಿಂಗಣಿಸಿತು. ಅಂದು ಹೋದ ಜೀವ ಮತ್ತೆ ಬಂದಂತಾಗಿತ್ತು. ಕಾವ್ಯಾ ಬೇಗ ಫೋನ್ ಎತ್ತಮ್ಮ ಅಂದುಕೊಳ್ಳುತ್ತಿರುವಾಗಲೇ ಗಂಡಸಿನ ಧ್ವನಿಯೊಂದು ಫೋನ್ ಎತ್ತಿಕೊಂಡಿತು. ಒಮ್ಮೆಲೇ ಶಾಕ್ ಆಯಿತಾದರೂ ಸಾವರಿಸಿಕೊಂಡು ಹಲೋ ಅಂದಾಗ, ಅಘಾತಕಾರಿ ವಿಚಾರವೊಂದು ನನ್ನ ಪ್ರಜ್ಞೆ ತಪ್ಪಿಸಿದಂತಾಯಿತು. ಅಲ್ಲಿಂದ ಮಾತನಾಡಿದ ವ್ಯಕ್ತಿ ಪೊಲೀಸರಾಗಿದ್ದರು...! ಈ ಹುಡುಗಿ ನಿಮಗೆ ಗೊತ್ತಾ? ಇವಳ ಮನೆ ಎಲ್ಲಿ? ಹೆಸರೇನು? ಅಂತ ಕೇಳಿದರು. ಅದೆಲ್ಲಾ ಗೊತ್ತು ಸಾರ್, ಅವಳಿಗೆ ಏನಾಯ್ತು ಅಂತ ಕೇಳಿದೆ. ಆಗಲೇ ಗೊತ್ತಾಗಿದ್ದು, ಕಾವ್ಯ ತನ್ನ ಇಹಲೋಕದ ಪಯಣ ಮುಗಿಸಿದ್ದಾಳೆ ಅನ್ನುವುದು....!
ಇದರ ಜೊತೆಗೆ ನನ್ನೊಂದಿಗಿನ ಪ್ರೀತಿಗೂ  ಕಾವ್ಯ ಶಾಶ್ವತ ಇತೀಶ್ರೀ ಹಾಡಿದ್ದಳು. ನಗರದ ಪಾಕರ್್ ಒಂದರಲ್ಲಿ ನಾನು ತೆಗೆಸಿಕೊಟ್ಟಿದ್ದ ಚೂಡಿದಾರದ ಶಾಲಿನಿಂದ ನೇಣು ಮುಗಿದು  ಕಾವ್ಯ ತನ್ನ ಪಯಣ ಮುಗಿಸಿದ್ದಳು. ಎಲ್ಲವನ್ನೂ ಕೇಳಿದ ನನಗೆ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ. ಕಾರಣ ಹೇಳದೆ ಕಾವ್ಯ ದೂರವಾಗಿದ್ದಳು.
ಕಾವ್ಯ ದೂರವಾಗುವ ಮುನ್ನ ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಪ್ರೀತಿಗೆ ಅಂತಿಮ ಸ್ಪರ್ಶ ನೀಡುವಂತೆ ನನ್ನ ಕೈಯಿಂದಲೇ ಹಣೆಗೆ ಕುಂಕುಮ ಇರಿಸಿದ್ದಳು, ಬೆಳಿಗ್ಗಿನ ಉಪಹಾರವನ್ನೂ ನನ್ನ ಬಾಯಿಗಿಟ್ಟು ಹಂಚಿಕೊಂಡು ತಿಂದಿದ್ದಳು. ತನ್ನ ವರ್ತನೆಯಲ್ಲೇ ಸಾಕಷ್ಟು ಬದಲಾವಣೆ ಮಾಡಿಕೊಂಡು ಕಡೆಯ ಕ್ಷಣಗಳನ್ನು ನನ್ನ ಜೊತೆ ಕಳೆದಿದ್ದಳು ಕಾವ್ಯ. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡವಳಂತೆ ನನ್ನ ಎದುರಿಗೆ ನಿಂತಿದ್ದಳು. ಆದರೆ ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ. ಸೀರೆ ಖರೀದಿಸುವಾಗಲೂ ಬಿಳಿ ಸೀರೆಯನ್ನೇ ಆಯ್ದುಕೊಂಡಿದ್ದ ಕಾವ್ಯಾ, ಆಗಲೇ ತನ್ನ ಬದುಕಿನ ಪುಟಗಳಿಗೆ ಇತೀಶ್ರೀ ಹಾಡುವ ನಿಧರ್ಾರಕ್ಕೆ ಬಂದಿದ್ದಳು ಎನ್ನುವುದು ನಂತರ ನನಗೆ ಸ್ಪಷ್ಟವಾಗಿತ್ತು. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಕಾವ್ಯ. ಆದರೆ ಈಗ ಕಾವ್ಯಾ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲಿ ಕಾವ್ಯಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......
ಕಾವ್ಯಾಳ ಸಾವಿಗೆ ಕಾರಣ ಹುಡುಕಿ ಹೊರಟಾಗ ಸಾಕಷ್ಟು ವಿಚಾರಗಳು ಚಚರ್ೆಯಾದವು. ಮರುದಿನ ಕಸೀನ್ ಮದುವೆಯಿದ್ದ ಕಾರಣ ಆಕೆಗೆ ಅದೊಂದು ಚಿನ್ನದ ಸರದ ಅವಶ್ಯಕತೆಯಿತ್ತು. ಹಾಗಾಗಿ ಅದಿಲ್ಲದೆ ಮನೆಗೆ ಹೋದರೆ ಮನೆಯವರು ಬೈಯುತ್ತಾರೆ ಎಂದು ಕಾವ್ಯಾ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸರ ಕಾವ್ಯಾಳ ಬದುಕು ಕಿತ್ತುಕೊಂಡಿತು........ಹೀಗೆ ಹತ್ತು ಹಲವು ಪ್ರಶ್ನೆಗಳು ಅವಳ ಸಾವಿನ ಸುತ್ತ ಗಿರಕಿ ಹೊಡೆದಿವೆ. ಪೊಲೀಸರು ಅಸ್ವಾಭಾವಿಕ ಮರಣ ಅಂತ ಹೇಳಿ ಆತ್ಮಹತ್ಯೆ ಪ್ರಕರಣ ದಾಖಲಿಸಿ ಫೈಲ್ ಕ್ಲೋಸ್ ಮಾಡಿದ್ದಾರೆ. ನನ್ನಿಂದ 60ಕಿ.ಮೀ ದೂರದ ಮಣ್ಣಿನಲ್ಲಿ ನಾನು ಪ್ರೀತಿಸುತ್ತಿದ್ದ ಜೀವವೊಂದು ಬೂದಿಯಾಗಿ ಹೋಗಿದೆ. ಕಾವ್ಯ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇವಳನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ಕಾವ್ಯ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಈ ಕಥೆ ಕಾಲ್ಪನಿಕವಲ್ಲ. ಕೆಲ ತಿಂಗಳ ಹಿಂದಷ್ಟೇ ನನ್ನದೇ ಜೀವನದಲ್ಲಿ ನಡೆದ ನೈಜ ಘಟನೆ. ಆದರೆ ಕೆಲವೊಂದು ಕಾರಣಗಳಿಂದ ಇಲ್ಲಿರುವ ಹೆಸರುಗಳನ್ನು ಬದಲಾಯಿಸಿದ್ದೇನೆ. ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಯೆಂಬ ಬಹುದೊಡ್ಡ ನಿಧರ್ಾರ ತಳೆಯುವ ಅದೇ ರೀತಿ ಮಕ್ಕಳನ್ನು ಹಾಸ್ಟೆಲ್ನಲ್ಲಿಟ್ಟು ಬೆಳೆಸುವ ಪ್ರತಿಯೊಬ್ಬರಿಗೂ ಈ ಘಟನೆ ಪಾಠವಾಗಲಿ ಎಂಬ ಆಶಯದಿಂದ ಇದನ್ನು ಬರೆಯುತಿದ್ದೇನೆ.

ಇಂತೀ ನಿಮ್ಮವ......
ಧ್ವನಿ.......

Monday 1 April 2013

ಹಾಸ್ಟೆಲ್ ಯುವತಿಯರ ಸಾವಿನಲ್ಲಿ ಪೋಷಕರೂ ಪಾಲುದಾರರು!

ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಹೊರ ದೇಶ, ಹೊರ ರಾಜ್ಯ ಸೇರಿದಂತೆ ಸಮೀಪದ ಅದೆಷ್ಟೋ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುವ ಹೆಣ್ಮಕ್ಕಳ ದೊಡ್ಡ ದಂಡೇ ಇದೆ. ಆದರೆ ಇಂಥ ಒಂದು ಒಳ್ಳೆಯ ಉದ್ದೇಶವಿಟ್ಟು ಕೊಂಡು ಬರುವ ಈ ವರ್ಗ ಕೆಲವೊಮ್ಮೆ ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿವೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳು ಹತ್ತರಲ್ಲಿ ಒಂದು ಎಂಬಂತೆ ಮುಚ್ಚಿಹೋಗುತ್ತಿರುವುದು ವಿಪಯರ್ಾಸ. ಎಲ್ಲಿಂದಲೋ ಇಲ್ಲಿ ಬಂದು ಬದುಕಿಗೆ ಅಂತ್ಯ ಹಾಡುವವರ ಜೀವನದಲ್ಲಿ ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಗಳು ಕಾರಣವಾಗಿ ಕಂಡರೂ ಇಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳೇ ಎಲ್ಲವಕ್ಕೂ ಮೂಲ ಕಾರಣ ಎಂದರೆ ತಪ್ಪಿಲ್ಲ.
ಮನೆ ಬಿಟ್ಟು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯು ವವರು, ಇಲ್ಲಿನ ಸಾಫ್ಟ್ವೇರ್ ಸಂಸ್ಥೆ, ಮಾಲ್ ಇಲ್ಲವೇ ಯಾವು ದಾದರೂ ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ಗಲರ್್ಗಳಾಗಿ ದುಡಿ ಯುವವರ ವಾಸಸ್ಥಾನ ನಾಯಿಕೊಡೆಗಳಂತೆ ತಲೆಯೆತ್ತುವ ಪಿಜಿ ಸೆಂಟರ್ ಮತ್ತು ಹಾಸ್ಟೆಲ್ಗಳು. ಮೇಲ್ನೋಟಕ್ಕೆ ಇವೆಲ್ಲವೂ ಸುರಕ್ಷಿತ ತಾಣವಾಗಿ ಕಂಡರೂ ಇದರ ಒಳಗಿನ ಕಾಣದ ಲೋಕ ಮಾತ್ರ ತೀರಾ ಅಸಹ್ಯ ಹುಟ್ಟಿಸುತ್ತದೆ.
ಮಂಗಳೂರಿಗೆ ಬರುವ ಮುನ್ನ ತಮ್ಮ ತಮ್ಮ ಊರಿನಲ್ಲಿ ಸುಸಂಸ್ಕೃತರು, ಉತ್ತಮರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಯುವತಿಯರು ಇಲ್ಲಿ ಬಂದ ಒಂದೇ ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ವಿದ್ಯಮಾನಗಳು ನಡೆದಿವೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಷರಾ ಬರೆದು ಫೈಲ್ ಕ್ಲೋಸ್ ಮಾಡಿದ್ದೂ ಆಗಿದೆ. ಆದರೆ ಯಾರೊಬ್ಬರೂ ಈ ಎಲ್ಲಾ ಆತ್ಮಹತ್ಯೆಗಳ ಬೆನ್ನು ಬಿದ್ದಿಲ್ಲ ಎನ್ನುವುದು ವಿಪಯರ್ಾಸ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನವರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಶಿಕ್ಷಣ ಇಲ್ಲವೇ ಕೆಲಸ ಮಾಡಿ ಕೊಂಡಿದ್ದವರು. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ನೂರಾರು ಪಿಜಿಗಳು ಹತ್ತಾರು ಹಾಸ್ಟೆಲ್ಗಳಿವೆ. ಆದರೆ ಈ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ಗಳು ಅಧಿಕೃತ ಅಲ್ಲ ಎನ್ನುವುದು ಇಲ್ಲಿರುವ ಮತ್ತೊಂದು ಆಘಾತಕಾರಿ ಸಂಗತಿ! ಅದರಲ್ಲೂ ಹೆಚ್ಚಿನ ಪಿಜಿ ಸೆಂಟರ್ಗಳು ವಾಸದ ಮನೆಯ ಉದ್ದೇಶದಿಂದ ನಿಮರ್ಿಸಿ ಕೊಂಡವಾಗಿದ್ದು, ಇವಕ್ಕೆಲ್ಲಾ ಪಾಲಿಕೆ ಪಿಜಿ ಸೆಂಟರ್ ನಡೆಸಲು ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದರೂ ಒಂದಷ್ಟು ಕಾಲೇಜು ಹುಡುಗಿಯರನ್ನು ಇಲ್ಲವೇ ಕೆಲಸಕ್ಕೆ ಹೋಗುವ ಯುವತಿಯರನ್ನು ಒಟ್ಟು ಸೇರಿಸಿ ಪಿಜಿ ಹೆಸರಿನಲ್ಲಿ ಹಣ ಮಾಡುವವರ ದೊಡ್ಡ ದಂಡೇ ಇದೆ. ಈ ಪಿಜಿಗಳಲ್ಲಿ ಉಳಿದುಕೊಳ್ಳುವ ಹೆಣ್ಣುಮಕ್ಕಳು ರಾತ್ರಿ ಎಷ್ಟು ಗಂಟೆಗೆ ಬಂದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಉಳಿಸಿಕೊಂಡಿದ್ದ ಲೇಡಿಸ್ ಹಾಸ್ಟೆಲ್ಗಳು ಕೂಡ ಅವ್ಯವಸ್ಥೆಯ ಅಡ್ಡೆಯಾಗಿ ಬದಲಾಗುತ್ತಿದೆ. ಬರೋಬ್ಬರಿ 300 ಜನರಿಗೆ ಒಬ್ಬಳೇ ಒಬ್ಬ ವಾರ್ಡನ್ ಇರುವ ಹಾಸ್ಟೆಲ್ಗಳೂ ಇವೆ. ಒಂದು ವೇಳೆ ಇಲ್ಲಿನ ವಾರ್ಡನ್ ರಜೆ ಹಾಕಿ ಊರಿಗೆ ಹೋದರೆ ಕೇಳುವವರೇ ಇಲ್ಲ ಎಂಬಂಥ ಪರಿಸ್ಥಿತಿ. ಇನ್ನು ಇಲ್ಲಿನ ಯುವತಿಯರ ಹಾಜರಾತಿ, ಸಂದರ್ಶಕರ ದಾಖಲಾತಿ ಎಲ್ಲವೂ ಅಪ್ಡೇಟ್ ಆಗುವುದೇ ಇಲ್ಲ. ಒಬ್ಬ ಯುವತಿಗೆ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಶುಲ್ಕ ಪಡೆಯುವ ಈ ಖಾಸಗಿ ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎನ್ನುವುದು ಇಲ್ಲಿನ ದುರಂತ ಬದುಕು ಅನುಭವಿಸಿ ಬಂದವರ ಮಾತು. ಊರು ಬಿಟ್ಟು ಬಂದ ತಪ್ಪಿಗೆ ಅನಿವಾರ್ಯವಾಗಿ ಇಲ್ಲಿನ ನರಕಸದೃಶ ಬದುಕಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ.  
ಯುವತಿಯರು ದಾರಿ ತಪ್ಪಲು ಹಾಸ್ಟೆಲ್ ಮತ್ತು ಪಿಜಿಗಳ ಜೊತೆಗೆ ಅವರು ಕೆಲಸ ಮಾಡುವ ಕೇಂದ್ರಗಳು ಕೂಡ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದರಲ್ಲೂ ನಗರದ ಬಹುತೇಕ ಬಟ್ಟೆ ಅಂಗಡಿಗಳು, ನಗರದ ಪ್ರಮುಖ ಮಾಲ್ಗಳಲ್ಲಿನ ಖಾಸಗಿ ಸಂಸ್ಥೆಗಳು ಯುವತಿಯರನ್ನು ರಾತ್ರಿಯವರೆಗೂ ದುಡಿಸಿಕೊಳ್ಳುತ್ತದೆ. ಈ ಮಧ್ಯೆ ಈ ಯುವತಿಯರ ಪ್ರತೀದಿನದ ಚಲನವಲನಗಳ ಮೇಲೆ ಕಣ್ಣಿಡುವ ಪೋಲಿಗಳ ವರ್ಗದ ಕಾಟ ಬೇರೆ. ಕೆಲವೊಂದು ಯುವತಿಯರು ಇವುಗಳಿಗೆ ಕೇರ್ ಅನ್ನದೇ ತಮ್ಮ ಸೋಕಾಲ್ಡ್ `ಗೂಡು ಸೇರಿದರೆ, ಇನ್ನು ಕೆಲವರು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಈ ರೀತಿ ದಾರಿ ತಪ್ಪಿ ಆ ದಿನ ಬೇರೆಲ್ಲೋ ರಾತ್ರಿ ಕಳೆದರೂ  ಈ ಬಗ್ಗೆ ವಿಚಾರಿಸುವ ಗೋಜಿಗೆ ಯಾವೊಂದು ಹಾಸ್ಟೆಲ್ ಆಡಳಿತವೂ ಕೈ ಹಾಕುವುದಿಲ್ಲ. ಅಷ್ಟೇ ಯಾಕೆ? ಬಹುತೇಕ ಹಾಸ್ಟೆಲ್-ಪಿಜಿಗಳ ಆಡಳಿತದವರಲ್ಲಿ ಉಳಿದುಕೊಳ್ಳುವ ಯುವತಿಯರ ಮನೆ ವಿಳಾಸ ಇಲ್ಲವೇ ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ದಿನನಿತ್ಯ ಬರುವವರು ಒಂದು ದಿನ ಬಾರದಿದ್ದರೂ ಕೇಳುವ ಅಗತ್ಯತೆ ಪಿಜಿ ಸೆಂಟರ್ ಇಲ್ಲವೇ ಹಾಸ್ಟೆಲ್ ವಾರ್ಡನ್ಗಳಿಗೆ ಇಲ್ಲ ಎನ್ನುವುದೇ ದುರಂತ.
ಈ ರೀತಿ ದಾರಿ ತಪ್ಪುವ ಯುವತಿಯರು ಕೆಲ ತಿಂಗಳು ತಮಗೇ ಗೊತ್ತಿಲ್ಲದಂತೆ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಜ್ಞಾನೋದಯವಾಗುವುದು ಮಾತ್ರ ಹಲವು ತಿಂಗಳುಗಳೇ ಕಳೆದ ನಂತರ. ಹೀಗಾಗಿ ಬದುಕಿನ ಅಂತಿಮ ಕ್ಷಣ ಆತ್ಮಹತ್ಯೆಯ ರೂಪದಲ್ಲಿ ದುರಂತ ಅಂತ್ಯ ಕಾಣುತ್ತದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಎಲ್ಲೋ ಒಂದಿಬ್ಬರು ಸಾವಿಗೆ ಕಾರಣ ಕೊಟ್ಟುಹೋದರೆ, ನೂರರಲ್ಲಿ ತೊಂಬತ್ತು ಭಾಗದಷ್ಟು ಯುವತಿಯರು ಕಾರಣವನ್ನೇ ತಿಳಿಸದೆ ಇಹಲೋಕ ತ್ಯಜಿಸಿರುತ್ತಾರೆ. ಈ ಸಾವಿನ ದುಃಖ ತಡೆಯಲಾಗದೆ ಒಂದೇ ಸಮನೆ ಬೊಬ್ಬಿಡುವ ಈ ಹೆಣ್ಮಕ್ಕಳ ಕುಟುಂಬ ವರ್ಗವೂ ಸಾವಿನಲ್ಲಿ ಪಾಲುದಾರರು ಎಂಬುದು ನೆನಪಿರಲಿ. ವರ್ಷಗಟ್ಟಳೆ ಒಂಟಿಹೆಣ್ಣನ್ನು ಎಲ್ಲೋ ದೂರದಲ್ಲಿಟ್ಟು ಬೆಳೆಸಿದರೂ ಒಂದೇ ಒಂದು ಬಾರಿ ನೋಡಿಕೊಂಡು ಹೋಗುವ ಕನಿಷ್ಟ ಕಾಳಜಿಯೂ ಅವರಿಗಿರುವುದಿಲ್ಲ. ಹೀಗಾಗಿ ನಮಗೆ ಕೇಳುವವರೇ ಇಲ್ಲ ಅಂದುಕೊಂಡು ತಮ್ಮದೇ ಆದ ಸ್ವಾತಂತ್ರ್ಯ ಜೀವನ ನಡೆಸಿಕೊಂಡು ಯುವತಿಯರು ದಾರಿ ತಪ್ಪುವುದು ಸಾಮಾನ್ಯ ವಾಗಿದೆ. ಇಂದಿಗೂ ಬದುಕು ಕಳೆದುಕೊಳ್ಳುವ ಹೆಚ್ಚಿನ ಯುವತಿಯರು ಮುಗ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ  ಇದೇ ಮುಗ್ಧತೆ ದಾರಿ ತಪ್ಪಿದಾಗ ಮಾತ್ರ ಸಾವಿನಲ್ಲಿ ಅಂತ್ಯ ಕಾಣುತ್ತದೆ. ಈ ವೇಳೆ ಸಾವಿಗೆ ಕಾರಣವಾದ ಕಾಣದ ಕೈಗಳು ವಿಜೃಂಭಿಸಿ ಮರೆಯಾಗುತ್ತದೆ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದರೆ ತಪ್ಪಿಲ್ಲ.
ಧ್ವ

Sunday 24 March 2013

ಕಾಣದ ಕಡಲಿಗೆ ಹಂಬಲಿಸಿದೆ ಮನ.... ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

ಕಾಣದ ಕಡಲಿಗೆ ಹಂಬಲಿಸಿದೆ ಮನ....

ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

 

ನವಿರಾದ ಬದುಕಿನ ಸುಶ್ರಾವ್ಯ ಹೆಜ್ಜೆ ಗುರುತು ಕಳೆದು ಹೋಗಿದೆ. ಆಕಾಶದಲ್ಲಿ ಚಂದ್ರನನ್ನು ಕಂಡು ಕಣ್ಣ ಬಿಂಬಗಳನ್ನು ಒಂದಾಗಿಸಿದ ಕ್ಷಣ ಎದೆಯೊಳಗೆ ಹೊತ್ತು ಗೊತ್ತಿಲ್ಲದೇ ಕಾಡುತ್ತಿದೆ. ದೇವಸ್ಥಾನದ ಮೆಟ್ಟಿಲ ತುದಿಯಲ್ಲಿ ಒಟ್ಟಾಗಿ ಇಟ್ಟ ಹೆಜ್ಜೆಗಳನ್ನು ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಹಸಿರು ಪರಿಸರದ ಮಧ್ಯೆ ಗರಿ ಬಿಚ್ಚಿ ಕಳೆದ ಪ್ರತೀ ಕ್ಷಣದ ನೆನಪುಗಳೂ ಒತ್ತರಿಸಿ ಬರುತ್ತಿವೆ. ಆದರೇನೂ ಮಾಡುವುದು ...ದೂರವಾಗಿದ್ದಾಳೆ ಅವಳು....!
ವರ್ಷಗಳಿಂದ ಸುರಿಯದ ಕಣ್ಣೀರು ಇಂದು ಪ್ರತೀ ಕ್ಷಣವೂ ಕಟ್ಟೆಯೊಡೆದು ಧುಮ್ಮಿಕ್ಕುತ್ತಿದೆ. ಎಲ್ಲವೂ ನೆನಪುಗಳ ಮೆರವಣಿಗೆಯಲ್ಲಿ ಕಳೆದುಕೊಂಡ  ಆ ದಿನಗಳ ಸಣ್ಣದೊಂದು ಕುರುಹುಗಳಷ್ಟೇ....
ಒಂಟಿ ಜೀವದ ಒಬ್ಬಂಟಿ ಪಯಣದಲ್ಲಿ ಜಂಟಿಯಾದವಳು ಕಳೆದು ಹೋಗಿದ್ದಾಳೆ. ಆದರೆ ಅವಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲಾಗುತ್ತಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕಣ್ಣಿಗೆ ಕಾಣದ ಮನಸ್ಸು ಕೂಡ ಕಣ್ಣೀರು ಸುರಿಸಿದ ಅನುಭವ. ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಯೋ ಎಂಬಂತೆ ಜೀವ ಕಳೆಯೇ ಇಲ್ಲದ ಬದುಕೊಂಡು ನನ್ನನ್ನು ಅಪ್ಪಿಕೊಂಡಿದೆ.  ಏನೇ ಆದರೂ ಈಗಿನ ಪ್ರತೀ ಕ್ಷಣ ನನ್ನ ಜೊತೆಯಾಗುತ್ತಿರುವುದು.....ಅಳು........ಅಳು.....ಅಳು........!
ನನಗ್ಯಾರೂ ಇಷ್ಟವಾಗದ ಎಲ್ಲರಿಗೂ ಇಷ್ಟವಾಗುವ ಒಬ್ಬಂಟಿ ಜೀವನ ನನ್ನದು. ಈ ಮದ್ಯೆ ಹೆತ್ತು-ಹೊತ್ತು ಬದುಕಲು ಕಲಿಸಿದ ತಾಯಿಯೆಂದರೆ ನನಗೆ ಪಂಚಪ್ರಾಣ. ಈ ಮಧ್ಯೆ ಹೆತ್ತಮ್ಮನ ಜೊತೆಗೆ ಜೀವನಕ್ಕೆ ಸ್ಫೂತರ್ಿಯಾದ ನನ್ನ ಪ್ರೀಮಾ ಅಕ್ಕ ಅಂದ್ರೆ ಇಷ್ಟ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ನನಗೆ ಅಷ್ಟು ಹತ್ತಿರವಲ್ಲ. ಆದರೆ ಸ್ವಭಾವತಃ ತೀರಾ ಸೆನ್ಸಿಟಿವ್ ಆದ ನನ್ನನ್ನು ಕಂಡರೆ ಎಲ್ಲರಿಗೂ ಇಷ್ಟ. ನನಗೂ ಇವರೆಲ್ಲರೂ ಇಷ್ಟವಾದರೂ ಅಮ್ಮ-ಅಕ್ಕನಷ್ಟು ಹತ್ತಿರವಲ್ಲ.
ನಿಧಾನಗತಿಯ ಬದುಕು, ಸಣ್ಣದೊಂದು ಆಸೆ, ಬಹುದೊಡ್ಡ ಉದ್ದೇಶ, ತೀರಾ ಸೆನ್ಸಿಟಿವ್ ಮನಸ್ಸು, ಈ ಮಧ್ಯೆ ಅರ್ಥ ಮಾಡಿಕೊಳ್ಳುವ ನನ್ನದೇ ಆದ ಜೀವಕ್ಕೆ ಮಾತ್ರ ಕೊರತೆ.. ಹೀಗೆ ಸಾಗುತ್ತಿದ್ದ ಜೀವನದ ಮಧ್ಯೆ ಸಿಕ್ಕವಳೇ ಪ್ರಮೀ. ನಗುವಿನಲ್ಲೇ ಇಷ್ಟವಾದವಳು, ಕಣ್ಣ ನೋಟಕ್ಕೆ ಮನಸ್ಸಿಗೆ ಹತ್ತಿರವಾಗಿದ್ದಳು, ತಡಮಾಡದೇ ಬದುಕು ಕಟ್ಟಿಕೊಳ್ಳುವ ನನ್ನದೊಂದು ಪುಟ್ಟ ಹಾದಿಯಲ್ಲಿ ಅವಳನ್ನು ಜೊತೆಯಾಗಿಸಿದೆ. ಸಿಕ್ಕ ಮೊದಲ ಕ್ಷಣದಲ್ಲೇ ತೀರಾ ಹೆಚ್ಚೇ ಎನಿಸುವಷ್ಟು ಇಷ್ಟವಾಗಿದ್ದಳು. ಬದುಕಿನ ಹಾದಿಯಲ್ಲಿ ಜೀವನದ ಕೊನೆಯವರೆಗೂ ಉಸಿರಾಗಿ ನಿಲ್ಲಲು ಇವಳೇ ಸೂಕ್ತ ಅಂದುಕೊಂಡು ಜೊತೆಯಾಗಿದ್ದೆ. ನನ್ನಷ್ಟೇ ಸೂಕ್ಷ್ಮ, ತೂಕ=ಎತ್ತರ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್..! ಸಿಕ್ಕಾಗಲೆಲ್ಲಾ ಇವಳಿಂದ ಬಯಸಬಹುದಾದ ಇಷ್ಟವಾದ ಗಿಫ್ಟ್ ಮುಖದಲ್ಲಿ ಬೀಳುವ ಗುಳಿ ಕೆನ್ನೆಯ ನಗು ಮಾತ್ರ. ಯಾಕೋ ಗೊತ್ತಿಲ್ಲ ಹುಟ್ಟಿದ 22 ವರ್ಷದಲ್ಲಿ ಅಮ್ಮ- ಅಕ್ಕನ ನಂತರ ಪ್ರಮೀ ತುಂಬಾ ಇಷ್ಟವಾಗಿದ್ದಳು. ಪ್ರೀತಿ ಹೇಳಿಕೊಳ್ಳುವ ಸಣ್ಣದೊಂದು `ಪದ್ದತಿ' ಮುಗಿಸಿ ಒಂದೆರೆಡು ತಿಂಗಳಲ್ಲಿ ನಾವಿಬ್ಬರು ತುಂಬಾನೇ ಹತ್ತಿರವಾಗಿದ್ದೆವು. ಎಲ್ಲಾ ಪ್ರೇಮಿಗಳಂತೆ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ, ವಾರಕ್ಕೆರೆಡು ಬಾರಿ ದೇವಸ್ಥಾನ.... ಹೀಗೆ ತಿರುಗಾಟ ನಮ್ಮಲ್ಲೂ ಇತ್ತು. ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಇಬ್ಬರ ಹೆಸರಿನಲ್ಲೂ ಒಂದು ಕುಂಕುಮಾರ್ಚನೆ ಪರ್ಮನೆಂಟ್ ಎಂಬಂತಾಗಿತ್ತು. ಹೀಗಾಗಿಯೋ ಏನೋ ನಮ್ಮಿಬ್ಬರ ಹೆಸರು, ರಾಶಿ-ನಕ್ಷತ್ರ ಇಲ್ಲಿನ ಅರ್ಚಕರಿಗೆ ಅಪ್ಡೇಟ್ ಆಗಿತ್ತು. ಒಟ್ಟಿನಲ್ಲಿ ನಾವಿಬ್ಬರೂ ಈ ದೇವಸ್ಥಾನದ ಖಾಯಂ ಭಕ್ತರು ಎಂದರೆ ತಪ್ಪಿಲ್ಲ...!
ಪ್ರಮಿಯದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಕೆಲವೊಮ್ಮೆ ಮಕ್ಕಳಂತ ಸ್ವಭಾವ. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಪ್ರಮಿ. ಆದರೆ ಈಗ ಪ್ರಮಿ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲ್ಲಿ ಪ್ರಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......ಎಲ್ಲವೂ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ...
ದೂರವಾಗುವ ಮುನ್ನ ಕೊನೆಯದಾಗಿ ಮಾತಿಗೆ ಸಿಕ್ಕವಳು ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡದಂತೆ ನನ್ನ ಎದುರಿಗೆ ನಿಂತಿದ್ದಳು. ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ..
ಪ್ರಮೀ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪ್ರಮಿಯನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ನಂತರ ಪ್ರಮಿ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಧ್ವನಿ

Friday 1 February 2013

ಹಾಗೇ ಸುಮ್ಮನೆ ಒಮ್ಮೆ `ವಿಶ್ವರೂಪಂ' ನೋಡಿ ಬನ್ನಿ

ತಮಿಳು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡದೆ ತುಂಬಾ ದಿನಗಳೇ ಆದವು. ಇಂದಿನ ಕನ್ನಡ ಸಿನಿಮಾಗಳ ಅಬ್ಬರದ ಮಧ್ಯೆ ಅವುಗಳನ್ನು ನೋಡುವುದರಲ್ಲೇ ಕಳೆದು ಹೋಗಿದ್ದೆ. ಆದರೆ ಇತ್ತೀಚಿಗೆ ನೋಡಿದ `ಎದೆಗಾರಿಕೆ ಬಿಟ್ಟರೆ ಬೇರ್ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. ಹಾಗಂತ ಭಾಷೆ ಬದಲಿಸಿ ಅನ್ಯ ಭಾಷೆಯ ಸಿನಿಮಾ ನೋಡೋಣವೆಂದರೆ ಪತ್ರಿಕಾ ವಿಮಶರ್ೆಗಳೇ ಸಿನಿಮಾ ಮಂದಿರಗಳಿಗೆ ಹೋಗದಂತೆ ತಡೆಯುತ್ತಿದ್ದವು. ಆದರೂ  ಇಂದು ಶುಕ್ರವಾರ ಒಂದು ತಮಿಳು ಸಿನಿಮಾ ನೋಡಿಯೇ ಬಿಟ್ಟ. ಈ ಸಿನಿಮಾದ ಬಗ್ಗೆ ನನ್ನೊಳಗಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಣ್ಣದೊಂದು ಪ್ರಯತ್ನ ಇದಾಗಿತ್ತು. ಆ ಸಿನಿಮಾ ಬೇರಾವುದೂ ಅಲ್ಲ. ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿ ನಿಷೇಧದ ಮಧ್ಯೆ ಅಲ್ಲಲ್ಲಿ ಪ್ರದರ್ಶನ ಕಾಣುತ್ತಿರುವ `ವಿಶ್ವರೂಪಂ..!
ಪತ್ರಿಕೆಯಲ್ಲಿ ಕೆಲಸ ಮಾಡುವ ಕಾರಣ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಏನದು ವಿಶ್ವರೂಪಂ ಎಂಬ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದೆ. ಅದರಲ್ಲೂ ಈ ಸಿನಿಮಾ ದೇಶದ ಭದ್ರತೆಗೆ ಸವಾಲೊಡ್ಡುತ್ತದೆ ಎಂಬ ವಿವಾದ ಎದ್ದ ಮೇಲಂತೂ ಸಿನಿಮಾದ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸತೊಡಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾತ್ರ ಆಗಲೇ ಇಲ್ಲ. ಆದರೆ ಯಾವಾಗ ನಟನೆಯಲ್ಲೇ ಅತೀ ಹೆಚ್ಚು ಪ್ರಶಸ್ತಿ ಪಡೆದ ನಟ ಕಮಲ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರೋ ಆಗಲೇ ಒಂದು ಹಂತಕ್ಕೆ ಸಿನಿಮಾವೊಂದು ಸೃಷ್ಟಿಸಿದ ನೈಜ ವಿವಾದದ ಬಗ್ಗೆ ಅರಿವಾಯಿತು. ಇಷ್ಟಾದ ಮೇಲೂ ಸಿನಿಮಾ ನೋಡದೆ ಹೋದರೆ ಸರಿ ಬರಲ್ಲ ಅಂತ ತಿಳಿದು, ಶುಕ್ರವಾರ ನಗರದ ಪ್ಲಾಟಿನಂ ಚಿತ್ರ ಮಂದಿರಕ್ಕೆ ಹೋಗಿದ್ದೆ.   ಎರಡೂವರೆ ಘಂಟೆಯ ಸಿನಿಮಾದಲ್ಲಿ ತೋರಿಸಲಾದ ವಿವಾದವಾದರೂ ಏನಪ್ಪ ಅಂತ ಕಣ್ಣು ಮಿಟುಕಿಸದೆ ಗಮನಿಸಿದೆ. ಆದರೆ ನನ್ನ ಪ್ರಕಾರ ಸಿನಿಮಾದಲ್ಲಿ ಅಂತಹ ಯಾವುದೇ ವಿವಾದ ವೈಯಕ್ತಿಕವಾಗಿ ನನಗೆ ಕಂಡು ಬರಲಿಲ್ಲ.
ಕಮಲ್ ಹಾಸನ್ ಒಬ್ಬ ಅಧ್ಬುತ ನಟ. ಇಡೀ ಭಾರತದಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದಾಖಲೆಯೂ ಕಮಲ್ ಮೇಲಿದೆ. ಇಂತಹ ಕಮಲ್ಹಾಸನ್ ತಾನೇ ದುಡ್ಡು ಹಾಕಿ, ನಿದರ್ೇಶಿಸಿ, ನಟಿಸಿ ಸಿನಿಮಾ ಮಾಡುತ್ತಾರೆಂದರೆ ಸಹಜವಾಗಿಯೇ ಕುತೂಹಲ ಇದ್ದದ್ದೇ. ಅದರಲ್ಲೂ ವಿಭಿನ್ನವಾದ ಶೀಷರ್ಿಕೆಯ ಮೂಲಕ ಪ್ರೇಕ್ಷಕನ ಮೆದುಳಿನ ಕದ ತಟ್ಟುವುದು ಕಮಲ್ `ಕಮಾಲ್. ಆದರೆ ಕಮಲ್ಹಾಸನ್ರ ವಿಶ್ವರೂಪಂ ಮಾತ್ರ ಪಕ್ಕಾ ವಿಭಿನ್ನ.
ಮುಸ್ಲಿಮರನ್ನು ಉಗ್ರರಂತೆ ಚಿತ್ರಿಸಲಾಗಿದೆ ಎನ್ನುವುದು ಈಗಿರುವ ವಿವಾದ. ಚಿತ್ರ ನೋಡುತ್ತಾ ಹೋದಂತೆ ಇಂತಹ ಅನುಭವ ಎಲ್ಲೂ ಆಗುವುದಿಲ್ಲ. ಕಮಲ್ ಹೇಳಿದಂತೆ ಎಲ್ಲವೂ ಅಪಘಾನಿಸ್ಥಾನದಲ್ಲಿ ನಡೆಯುವ ಟೆರರ್ ಸ್ಟೋರಿ ಅನ್ನುವುದು ಸ್ಪಷ್ಟ. ನಾವು ದಿನಬೆಳಗಾದರೆ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ನೋಡುವ ಅಂತರಾಷ್ಟ್ರೀಯ ಸುದ್ದಿಗಳೇ ಚಿತ್ರದ ಕೇಂದ್ರ ಬಿಂದು. ಒಬ್ಬ ಭಾರತೀಯ ನಟ ಕಮ್ ನಿದರ್ೆಶಕ ಅಪಘಾನಿಸ್ಥಾನದ ಉಗ್ರ ಜಗತ್ತಿನ ಸಂಪೂರ್ಣ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾನೆ ಎನ್ನುವುದು ಚಿತ್ರ ನೋಡಿದವರ ಗಮನಕ್ಕೆ ಬರುತ್ತದೆ. ನ್ಯಾಟೋ ಪಡೆಗಳು ಅಪಘಾನಿಸ್ಥಾನದ ಉಗ್ರ ಅಡಗುತಾಣಗಳ ಮೇಲೆ ನಡೆಸುವ ದಾಳಿಯನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಲಾಗಿದೆ. ಆದರೆ ಎಲ್ಲ್ಲೂ ಕೂಡ ಭಾರತೀಯ ಮುಸ್ಲಿಮರನ್ನು ಮಾತ್ರ ಉಗ್ರರಂತೆ ಚಿತ್ರಿಸಿಲ್ಲ ಎನ್ನುವುದು ಅಷ್ಟೇ ಸತ್ಯ.
ಕಮಲ್ ಒಬ್ಬ ಅಪ್ರತಿಮ ನಟ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ  ಈತನಲ್ಲೂ ಓರ್ವ ಅಧ್ಬುತ ನಿದರ್ೇಶಕನಿ ದ್ದಾನೆ ಎನ್ನುವುದು ಮಾತ್ರ ವಿಶ್ವರೂಪಂನಲ್ಲಿ ಸಾಬೀತಾಗುತ್ತದೆ. ಇಡೀ ಚಿತ್ರ ಉಗ್ರರ ಸುತ್ತ ಗಿರಕಿ ಹೊಡೆದರೂ ಸಿನಿಮಾದಲ್ಲಿ ಭಾರತೀಯರಿಗೆ ಎಳ್ಳಷ್ಟೂ ನೋವು ತರುವ ಸನ್ನಿವೇಶಗಳನ್ನು ಕಮಲ್ ಸೃಷ್ಟಿಸಿಲ್ಲ. ಅಷ್ಟೇ ಯಾಕೆ ಸಿನಿಮಾದಲ್ಲಿ ತೋರಿಸಲಾದ ಸ್ಥಳಗಳು ಕೂಡ ಭಾರತದ್ದಲ್ಲ. (ಸಿನಿಮಾದಲ್ಲಿ ತೋರಿಸಲಾಗಿರುವಂತೆ)
95ಕೋಟಿ ಸುರಿದು ಕಮಲ್ ಸಿನಿಮಾ ಮಾಡಿದ್ದಾರೆ ಅಂದಾಗ ಕಮಲ್ ಬಗ್ಗೆ ಸಹಜವಾಗಿಯೇ ಅಭಿಮಾನವಿತ್ತು. ಈ ಅಭಿಮಾನ ಸಿನಿಮಾ ನೋಡಿದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ನಟನೊಬ್ಬ ಸಿನಿಮಾದ ಮೇಲೆ ಈ ಮಟ್ಟಿನ ಭರವಸೆಯಿಟ್ಟು, ಇಂದಿನ ಲವ್ಸ್ಟೋರಿಗಳ ಮಧ್ಯೆ ಇಂತಹ ಸಿನಿಮಾ ನಿಮರ್ಿಸಿರುವುದು ನಿಜಕೂ ಗ್ರೇಟ್ ಅನಿಸದೆ ಇರದು. ಇಡೀ ಸಿನಿಮಾ ವೀಕ್ಷಿಸುವಾಗ ಕಮಲ್ ಹಣದ ವಿಚಾರದಲ್ಲಿ ರಾಜಿಯಾದಂತೆ ತೋರುತ್ತಿಲ್ಲ. ಕಮಲ್ ಎಂಟ್ರಿ ಕೊಟ್ಟಾಗ ಇಂದಿಗೂ ಮಂಗಳೂರಿನ ಥಿಯೇಟರ್ಗಳಲ್ಲೇ ವಿಶಿಲ್, ಚಪ್ಪಾಲೆ ಎಲ್ಲೆ ಮೀರುತ್ತಿದೆ ಎಂದರೆ ಊಹಿಸಿ...ಕಮಲ್ ಖದರ್ ಎಷ್ಟಿರಬೇಡ ಎನ್ನುವುದನ್ನು.
ಕೆಲ ಮುಸ್ಲಿಂ ಮುಖಂಡರು ಹೇಳುವಂತೆ `ವಿಶ್ವರೂಪಂ ದೇಶದ ಭದ್ರೆತೆಗೆ ಹಾನಿ ಮಾಡುವುದೇ ಆದರೆ ಶಾರುಖ್ ಖಾನ್ರ `ಮೈ ನೇಮ್ ಈಸ್ ಖಾನ್ ನಿಂದ ಇಡೀ ದೇಶವೇ ಹೊತ್ತಿ ಉರಿಯ ಬೇಕಿತ್ತು.,. ಆದರೆ ಎಲ್ಲೂ ಹಾಗಾಗಿಲ್ಲ. ಮೈ ನೇಮ್ ಈಸ್ ಖಾನ್ನಲ್ಲಿ ಶಾರುಕ್ ಪದೇ ಪದೇ ಬಳಸುವ `ಆ್ಯಮ್ ಖಾನ್, ಬಟ್ ನಾಟ್ ಟೆರರಿಸ್ಟ್ ಎಂಬ ಒಂದು ಪದವನ್ನೇ ಗಮನಿಸಿ. ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲು ಈ ಡೈಲಾಗ್ ಸಾಕಲ್ಲವೇ? ಆದರೆ ಆಗ ಮಾತ್ರ ಯಾರಿಗೂ ಚಿತ್ರದಲ್ಲಿ ವಿವಾದದ ವಸ್ತು ಕಾಣಲಿಲ್ಲ. ಮೈ ನೇಮ್ ಇಸ್ ಖಾನ್ ಗೆದ್ದಿತು.....!?
ವಿಶ್ವರೂಪಂನಲ್ಲಿ `ಅಲ್ಲಾ ಅಕ್ಬರ್, ದುವಾ ಎಂಬ ಕೆಲವೊಂದು ಮುಸ್ಲಿಂ ಶಬ್ದಗಳನ್ನು ಬಳಸಿದ್ದನ್ನು ಬಿಟ್ಟರೆ ಎಲ್ಲೂ ಮುಸ್ಲಿಂ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ ಎನ್ನುವುದು ನನ್ನ ವೈಯಕ್ತ್ತಿಕ ಅಭಿಪ್ರಾಯ. ಆದರೇನು ಮಾಡುವುದು ನಮ್ಮ ದೇಶದ ಹೊಲಸು ರಾಜಕೀಯದಲ್ಲಿ `ವಿಶ್ವರೂಪಂ ವಿರೂಪಗೊಳ್ಳುತ್ತಿದೆಯಷ್ಟೇ..
ನೆನಪಿರಲಿ, ಸಿನಿಮಾ ಎನ್ನುವುದು ಮನೋರಂಜನಾ ಮಾಧ್ಯಮ. ಈ ಮಾಧ್ಯಮದಲ್ಲಿ ಬೇಕೆಂದೇ ವಿವಾದಗಳನ್ನು ಸೃಷ್ಟಿಸುವವರಿದ್ದಾರೆ. ಕಾರಣ ಸಿನಿಮಾ ಗೆಲ್ಲಬೇಕು ಎನ್ನುವುದು. ಆದರೆ ಕಮಲ್ ಎಲ್ಲೂ ವಿವಾದ ಸೃಷ್ಟಿಸಿಲ್ಲ. ವಿವಾದ ಎನ್ನುವುದು ತಾನಾಗಿಯೇ ಹುಟ್ಟಿಕೊಂಡಿದೆ. 95 ಕೋಟಿ ಸುರಿದು ದೇಶದ ಮಹಾನ್ ಕಲಾವಿದನೊಬ್ಬ ತನ್ನ ಚಿತ್ರದಿಂದ ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದಾನೆಂದರೆ ಏನರ್ಥ? ಅಷ್ಟಕ್ಕೂ ಟೆರರಿಸಂ ಎಂಬ ವಸ್ತು ವಿಷಯದಲ್ಲಿ ಎಷ್ಟು ಸಿನಿಮಾಗಳು ಬಂದು ಹೋಗಿಲ್ಲ ಹೇಳಿ?
ಇನ್ನಾದರೂ ಸಿನಿಮಾಗಳನ್ನು ವೈಯಕ್ತಿಕ ಹಿತದೃಷ್ಟಿಯಿಂದ ನೋಡುವುದು ಬೇಡ. ಅಷ್ಟಕ್ಕೂ ವಿಶ್ವರೂಪಂ ಆ ಮಟ್ಟಿಗೆ ವಿವಾದ ಸೃಷ್ಟಿಸಿದ ಸಿನಿಮಾವೂ ಅಲ್ಲ. ನೆನೆಪಿರಲಿ, ಇದು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದರೂ  ಹಾಗೇ ಸುಮ್ಮನೆ ಸಿನಿಮಾ ನೋಡಿ ಬನ್ನಿ, ಮನೋರಂಜನೆ ಸಿಗದಿದ್ದರೂ ವಿಶ್ವರೂಪಂನಲ್ಲಿ ವಿವಾದವಿದೆಯೇ ಎಂಬ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು.
                                                                                                                                                       ಧ್ವನಿ