Saturday 17 March 2012

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?
ಹೌದು, ಮನುಷ್ಯ ತುಂಬಾನೇ ಭಾವನಾತ್ಮಕ ಜೀವಿ ಅನ್ನುತ್ತಾರೆ ಕೆಲವರು. ಹೀಗೆನ್ನುವವರು ಕೂಡ ಮನುಷ್ಯರೇ. ಆದರೂ ಎಲ್ಲೋ ಕೆಲವೊಮ್ಮೆ ಮನುಷ್ಯನ ಭಾವನೆಗಳ ಸಂಬಂಧ ಹಳಿ ತಪ್ಪಿ ಬಿಡುತ್ತದೆ. ಸಂಬಂಧಗಳು ಇಷ್ಟ, ಕಷ್ಟಗಳ ಮಧ್ಯೆ ಸಿಲುಕಿ ಪುಟ್ಟ ಮನಸ್ಸಿಗೆ ನೋವು ಕೊಡುತ್ತದೆ. ಎಲ್ಲೋ ಒಂದೆರೆಡು ಜೀವಗಳು ಭಾವನೆಗಳನ್ನೇ ಜೀವನವನ್ನಾಗಿಸಲು ಹೋದರೆ ಸಮಾಜದ ಕೆಟ್ಟ ದೃಷ್ಟಿ ಕೋನ ಇಡೀ ಜೀವನವನ್ನೇ ಹಾಳು ಮಾಡಿದ್ದೂ ಇದೆ. ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟಿಗ ಶತಕಗಳ ಶತಕ ಹೊಡೆದಾಗ ಇಡೀ ದೇಶವೇ ಆತನ ಸಾಧನೆಗೆ ಸ್ಪಂದಿಸಿತು. ಕ್ರಿಕೆಟ್ ದೇವರಿಗೆ ಇನ್ನಿಲ್ಲದಂತೆ ಶುಭ ಕೋರಿತು. ಆದರೆ ನಮ್ಮಲ್ಲೇ ಇರುವ ಕೆಲ ಸಣ್ಣ ಪುಟ್ಟ ಸಾಧಕರುಗಳಿಗೆ ಇಂತಹ ಸ್ಪಂದನೆಗಳೇ ಸಿಗುತ್ತಿಲ್ಲ. ಭಾವನಾತ್ಮಕ ಜೀವಿ, ತೀರಾ ಸೆನ್ಸಿಟಿವ್ ಎನ್ನಬಹುದಾದ ಹೃದಯಗಳು ಪ್ರೀತಿ, ವಿಶ್ವಾಸ, ಮಾನವೀಯ ಸಂಬಂಧಗಳನ್ನು ಗಳಿಸಿಕೊಳ್ಳಲು ಹಾತೊರೆಯುತ್ತಿರುತ್ತವೆ. ಆದರೆ ತನ್ನದೇ ಕೆಲವೊಂದು ತಪ್ಪುಗಳು ಕೈ ಸೇರಿದ ಮಾನವೀಯ ಸಂಬಂಧಗಳನ್ನು ಕೂಡ ಬ್ರೇಕ್ ಮಾಡುತ್ತದೆ.  ಕೆಲವೊಂದು ಸಂಬಂಧಗಳೇ ಹಾಗೆ, ಅವುಗಳಿಗೆ ಜಾತಿ ಧರ್ಮದ ಹಂಗಿರುವುದಿಲ್ಲ.  ಕಟ್ಟರ್ ಸ್ವಧರ್ಮ ಹಿಂಬಾಲಕರೇ ಆಗಿದ್ದರೂ ನಮ್ಮ ಪಕ್ಕದ ಮನೆಯ ಪರಧಮರ್ೀಯರನ್ನು ಪ್ರೀತಿಯಿಂದ ಕಾಣುತ್ತೇವೆ, ಅವರೊಂದಿಗೆ ಬಿಡಿಸಲಾರದ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತೇವೆ. ಅಷ್ಟೇ ಯಾಕೆ ನಮ್ಮ ಜೊತೆ ಕೆಲಸ ಮಾಡುವ, ಕಲಿಯುವ ಯಾರೇ ಆಗಲಿ ನಮಗೆ ತುಂಬಾ ಹತ್ತಿರವಾದವರು ಯಾವ ಧರ್ಮದವರೇ ಆದರೂ ನಮ್ಮ ಸ್ವಧರ್ಮ ಸಂಬಂಧಕ್ಕೆ ಅಡ್ಡಿ ಬರುವುದಿಲ್ಲ. ನಮಗೆ ಸಿಗದ ವಸ್ತುಗಳನ್ನು ಯಾರು ಕೊಡುತ್ತಾರೋ ಅವರು ಮನುಷ್ಯನಿಗೆ ತುಂಬಾ ಹತ್ತಿರವಾಗುತ್ತಾರೆ. ಅದಕ್ಕೆ ಹೇಳಿದ್ದು, ಮನುಷ್ಯ ತುಂಬಾ ಭಾವನಾತ್ಮಕ ಜೀವಿ ಅಂತ. ಎಲ್ಲೋ ಒಂದೆರೆಡು ಸಲ ಆತ ಕೋಪಿಷ್ಟನಾಗಿ ವತರ್ಿಸಬಹುದು. ಆದರೆ ವರ್ತನೆಯನ್ನು ಕ್ಷಣಾರ್ಧದಲ್ಲೇ ತಿದ್ದುವವನು ಇದೇ ಭಾವ ಜೀವಿ! ನೆನಪಿರಲಿ ಪ್ರತೀ ವ್ಯಕ್ತಿಯ ವರ್ತನೆ ವಿಭಿನ್ನವಾಗಿರಬಹುದು. ಆದರೆ ಪ್ರೀತಿ, ವಿಶ್ವಾಸ, ಸಂಬಂಧ, ಮಾನವೀಯ ಮೌಲ್ಯಗಳ ಸರದಿ ಬಂದಾಗ ಎಂಥವರೂ ಒಂದು ಕ್ಷಣ ಯೋಚಿಸುತ್ತಾರೆ. ಇಷ್ಟೆಲ್ಲಾ ಹೇಳಿದ್ದು ಜಾತಿ ಸಂಘರ್ಷದ `ಮಯರ್ಾದ ಹತ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು.......!
ನಾಳೆ ಭಾನುವಾರ,
ವಾರದ ಬಿಡುವಿನ ದಿನದಲ್ಲಾದರೂ ಕಳೆದುಕೊಂಡ ಮಾನವೀಯ ಸಂಬಂಧಕ್ಕೆ ಒಂದು ಸಣ್ಣ ಫೋನಾಯಿಸಿ ಮಾತನಾಡಿ..... ಜಸ್ಟ್ ಮನಸ್ಸು ರಿಲೀಫ್ ಆದರೂ ಆಗಬಹುದು.
 

No comments:

Post a Comment