Tuesday 24 April 2012

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

ಅಲ್ಲಿ ನೆರೆದಿದ್ದ ಯಾರೊಬ್ಬರಿಗೂ ಆತನ ಪರಿಚಯವೇ ಇರಲಿಲ್ಲ. ಆತ ಯಾರು? ಎಲ್ಲಿಂದ ಬಂದವನು? ಅನ್ನೋ ಯಾವ ಪ್ರಶ್ನೆಗೂ ಅಲ್ಲಿದ್ದ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಆದರೂ ಅಲ್ಲಿದ್ದ ಸಾವಿರಾರು ಮಂದಿ ಆತನ ಜೀವ ಉಳಿಸು ಅಂತ ದೇವರಲ್ಲಿ ಬೇಡ್ತಾ ಇದ್ರೂ. ಹೌದು. ಇದು ಮೊನ್ನೆಯಷ್ಟೇ ನನ್ನದೇ ಊರಿನ ಪಕ್ಕದಲ್ಲಿ ನಡೆದ ಒಂದು ಘಟನೆಯ ಥ್ರೀ ಲೈನ್ ಸ್ಟೋರಿ.
ಕೆಲಸ ಮಾಡ್ತಾ ಇದ್ದ ಕೂಲಿ ಕಾಮರ್ಿಕನೊಬ್ಬನ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಆತ ಅದರ ಅಡಿಯಲ್ಲಿ ಸಿಲುಕಿ ಬಿದ್ದಿದ್ದ. ಸರಿಸುಮಾರು ಏಳು ಘಂಟೆ ಪ್ರಯತ್ನ ಪಟ್ಟ ನಂತರ ಆ ಬಡ ಜೀವ ಬದುಕಿತು. ಆ ಏಳು ಘಂಟೆ ಅಲ್ಲಿ ನಡೆದ ಎಲ್ಲಾ ವಿದ್ಯಮಾನಗಳಿಗೂ ನಾನು ಸಾಕ್ಷಿಯಾಗಿದ್ದೆ. ಈ ವೇಳೆ ನನಗೆ ಅದೆಷ್ಟೋ ಮಾನವೀಯ ಸಂಬಂಧಗಳ ಪರಿಚಯವಾಯಿತು, ಕೆಲ ಜವಾಬ್ದಾರಿಗಳ ಪರಿಚಯವಾಯ್ತು ಇನ್ನೂ ಕೆಲ ಧೂರ್ತರ ಪರಿಚಯವಾಯ್ತು. ನಿಜಕ್ಕೂ ಆ ಏಳು ಘಂಟೆ ಮನುಷ್ಯನ ವಿಭಿನ್ನ ವರ್ತನೆಗಳ ನೇರ ದರ್ಶನ ನನಗೆ ಆಯಿತು ಅನ್ನೋದಂತೂ ಗ್ಯಾರಂಟಿ.
ಸಾವಿರಾರು ಜನ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬದುಕಲಿ ಬಡ ಜೀವ ಅಂತ ಪ್ರಾರ್ಥನೆ ಮಾಡ್ತಾ ಇದ್ರೂ. ಆದರೆ ಇವರ್ಯಾರಿಗೂ ಆ ಜೀವದ ಪರಿಚಯಾನೇ ಇಲ್ಲ. ಆದರೆ ಅದೂ ಒಂದು ಜೀವ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಿತ್ತು. ದೂರದ ಊರಿಂದ ಕೂಲಿಗಾಗಿ ಇಲ್ಲಿ ಬರುವ ಈ ಜೀವಗಳಿಗೆ ರಕ್ಷಣೆ ಅನ್ನೋದು ಮರೀಚಿಕೆ. ರಾತ್ರೀ ಹಗಲು ಅನ್ನದೇ ಕೆಲಸ ಮಾಡೋವಾಗ ಪ್ರತೀ ಸಲಾನೂ ಯಮನ ಕುಣಿಕೆ ತನ್ನ ಆಟಕ್ಕೆ ಸಜ್ಜಾಗಿ ಕಾಯ್ತಾ ಇರುತ್ತೆ, ಸ್ವಲ್ಪ ತಪ್ಪಿದರೂ ಅಪಾಯ ಗ್ಯಾರಂಟಿ. ಮೊನ್ನೆ ಇಲ್ಲಾಗಿದ್ದೂ ಅದೇ. ಆದರೆ ಆ ಜೀವ ಭಯ ಪಡಲಿಲ್ಲ. ಈ ಊರಿನ ಭಾಷೆಯೇ ಗೊತ್ತಿಲ್ಲದ ಆ ಅಮಾಯಕನ ಕಣ್ಣುಗಳಲ್ಲಿ ನಾನು ಬದುಕಬಲ್ಲೇ ಎಂಬ ಸಣ್ಣದೊಂದು ಆತ್ಮವಿಶ್ವಾಸ ಇತ್ತು. ಅಲ್ಲಿದ್ದ ಅಷ್ಟೂ ಜನರ ಪ್ರಾರ್ಥನೆಯೂ ಆತನ ಜತೆಗಿತ್ತು. ಅಂತಿಮವಾಗಿ ಆತ ಬದುಕಿಯೂ ಬಿಟ್ಟ. ಆದರೆ ಅಲ್ಲಿ ನಾ ಕಂಡ ಕೆಲ ವಿದ್ಯಮಾನಗಳು ..........ಮಾನವೀಯ ಸಂಬಂಧಗಳು......
ಹಿಂದೆ ಇದೇ ಸ್ಥಳದಲ್ಲಿ ಒಂದು ಚಿತ್ರಮಂದಿರವಿತ್ತು. ಆಗೆಲ್ಲಾ ಸಾವಿರಾರು ಜನರಿಗೆ ಮನೋರಂಜನೆ ಒದಗಿಸಿತ್ತು ಈ ಚಿತ್ರಮಂದಿರ. ದಿನಂಪ್ರತಿ ಮೂರು ಪ್ರದರ್ಶನಕ್ಕಾಗಿ ಹೆಚ್ಚೆಂದರೆ ಜನ ಇಲ್ಲಿ ಸರಿಸುಮಾರು ರಾತ್ರಿ ಹತ್ತರ ತನಕ ಇರ್ತಾ ಇದ್ದರೋ ಏನೋ? ಆದರೆ ಮೊನ್ನೆ ಇದೇ ಜಾಗದಲ್ಲಿ ನಡೆದ ಘಟನೆಗೆ ಸಾವಿರಾರು ಜನ ಬೆಳಗ್ಗಿನ ಜಾವದವರೆಗೂ ಸಾಕ್ಷಿಯಾಗಿದ್ದರು. ಇಲ್ಲಿ ನೆರೆದಿದ್ದ ಕೆಲವರಿಗೆ ಇದೊಂದು ಮಾನವೀಯತೆ, ಇನ್ನು ಕೆಲವರಿಗೆ ಪ್ರತಿಷ್ಟೆ, ಮತ್ತೂ ಕೆಲವರಿಗೆ ಜವಾಬ್ದಾರಿ, ಇನ್ನು ಕೆಲವರಿಗೆ ಕರ್ತವ್ಯ! ಹೌದು ಅಲ್ಲಿದ್ದ ಎಲ್ಲರಲ್ಲೂ ಮಾನವೀಯತೆ ಅನ್ನೋದು ಇತ್ತೇ ಆದ್ರೂ ಒಬ್ಬೊಬ್ಬರಿಗೆ ಅದು ಒಂದೊಂದು ಥರ. ಅಲ್ಲಿ ಬಂದಿದ್ದ ನೂರಾರು ಪೊಲೀಸರಿಗೆ ಅದೊಂದು ಜವಾಬ್ದಾರಿ. ಇನ್ನು ಕೆಲ ಊರಿನ ಗೌರವಾನ್ವಿತ ವ್ಯಕ್ತಿಗಳಿಗೆ ಅದೊಂದು ಪ್ರತಿಷ್ಠೆ, ಎಲ್ಲವನ್ನೂ ಕಣ್ನಲ್ಲಿ ಕಣ್ಣಿಟ್ಟು ಶೂಟ್ ಮಾಡ್ತಾ ಇದ್ದ ಕೆಲ ಮಾಧ್ಯಮದವರಿಗೆ ಅದೊಂದು ಕರ್ತವ್ಯ, ಆದರೆ ಎಲ್ಲರಲ್ಲೂ ಆ ಜೀವ ಬದುಕಲಿ ಅನ್ನೋ ಸಣ್ಣದೊಂದು ಮಾನವೀಯತೆ ಮಾತ್ರ ಖಂಡಿತಾ ಇತ್ತು.
ಈ ದುರಂತ ನಡೆದ ಪಕ್ಕದಲ್ಲೇ ಕುಡುಕರ ಅಡ್ಡೆಯಾದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದಿತ್ತು. ಬಹುಶಃ ಕುಡುಕರಿಗೆ ಇದೊಂದು ಮನೋರಂಜನೆಯಾಗಿ ಕಂಡಿರಲೂ ಬಹುದು. ಯಾಕೆಂದರೆ ಹಾಗಿತ್ತು ಕೆಲವರ ವರ್ತನೆ.
ಆವತ್ತು ಸುಮಾರು ಏಳು ಘಂಟೆ ಎಲ್ಲವನ್ನೂ ಸ್ತಬ್ಧನಾಗಿ ವೀಕ್ಷಿಸಿದ ನಾನು ಮನೆಗೆ ಬಂದ ನಂತರ ಒಂದೆರೆಡು ಘಂಟೆ ಮೌನವಾಗಿ ಯೋಚನೆ ಮಾಡಿದೆ. ಈ ಜಗತ್ತು ಎಷ್ಟೇ ಕ್ರೂರಿ ಆದ್ರೂ ಇಲ್ಲಿ ಜನರಿಗೆ ತಮ್ಮದೇ ಆದ ಭಾವನ ಇದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮಾನವೀಯತೆ ಇದೆ. ಪತ್ರಿಕೆಯಲ್ಲೇ ಕೆಲಸ ಮಾಡುವವನಾದ ಕಾರಣ ವಾರಕ್ಕೆ ಹತ್ತಿಪ್ಪತ್ತು ಕ್ರೈಂ ಘಟನೆಗಳನ್ನು ನೋಡ್ತೇನೆ.  ವಾರಕ್ಕೆರೆಡಾದರೂ ಮರ್ಡರ್ ಇದ್ದೇ ಇರುತ್ತೆ. ಆಗೆಲ್ಲಾ ಯೋಚಿಸ್ತೇನೆ `ಈ ಜಗತ್ತು ಎಷ್ಟು ಕ್ರೂರಿ ಅಲ್ವಾ? ಅಂತ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಇವೆಲ್ಲದಕ್ಕೂ ಕಂಪ್ಲೀಟ್ ವಿರೋಧಿ ಅನ್ನೋ ಹಾಗಿತ್ತು. ಯಾವತ್ತೂ ಕಡು ಕೋಪಿಗಳಾಗಿರುವ ಪೊಲೀಸರು ಕೂಡ ಅಂದು ಮೌನವಾಗಿ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬಹುಶಃ ಇದನ್ನೆಲ್ಲಾ ನೋಡೋವಾಗ ನನಗೆ ಜಗತ್ತೇ ಬೇಡವಾಗಿದೆ, ನನಗೇ ಅಂತ ಯಾರೂ ಇಲ್ಲ. ಅನ್ನೋ ಜೀವ ಕೂಡ ಬದುಕೋಕೆ ಆಸೆ ಪಡುತ್ತೆ. ಹೌದು ಖಂಡಿತವಾಗಲೂ ಆಸೆ ಪಡುತ್ತೆ.
ಫ್ರೆಂಡ್ಸ್, ನಾನು ಇಷ್ಟೆಲ್ಲಾ ಯಾಕ್ ಹೇಳ್ದೇ ಗೊತ್ತಾ? ನಮ್ಮಲ್ಲಿ ಸ್ವಲ್ಪ ನೋವಾದಾಗ, ತೊಂದರೆ ಬಂದಾಗ, ಅವಮಾನ ಆದಾಗ, ಕಷ್ಟ ಅನ್ನೋ ಬಿಸಿ ಸ್ವಲ್ಪ ತಟ್ಟಿದಾಗ ಅಷ್ಟೇ ಯಾಕೆ? ನಾವು ತುಂಬಾ ಇಷ್ಟ ಪಟ್ಟ ಜೀವವೊಂದು ದೂರ ಹೋದಾಗ ಆತ್ಮಹತ್ಯೆ ಎಂಬ ಜೀವನವನ್ನೇ ಅಂತ್ಯವನ್ನಾಗಿಸೋ ಕೆಟ್ಟ ಕೆಲಸಕ್ಕೆ ಕೈ ಹಾಕುವ ಅದೆಷ್ಟೂ ಜನರಿದ್ದಾರೆ. ಬಹುಶಃ ಇವರೆಲ್ಲರಿಗೂ ಈ ಘಟನೆ ಒಂದು ಪಾಠ, ಸಾಂತ್ವಾನ, ಧೈರ್ಯ ಇನ್ನೂ ಹೆಚ್ಚೆಂದರೆ ಜಗತ್ತು ವಿಶಾಲವಾಗಿದೆ, ನಾವಿನ್ನೂ ಬದುಕಬಹುದು ಅನ್ನೋ ಸ್ಪೂತರ್ಿ ಎನ್ನಬಹುದು. ಒಬ್ಬರ ಪ್ರೀತಿ ಸಿಗಲಿಲ್ಲ, ಈ ಜೀವನವೇ ಬೇಡ ಅಂದುಕೊಳ್ಳುವವರು ಒಮ್ಮೆ ರಸ್ತೆಯಲ್ಲಿ ಹೋಗೋ ವ್ಯಕ್ತಿಯನ್ನು, ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ನಿಲ್ಲಿಸಿ ಹೇಳಿ ನಾನ್ ಸಾಯ್ತೇನೆ ಅಂತ. ಆದರೆ ಆತ ಎಷ್ಟೆ ಕ್ರೂರಿ ಆಗಿದ್ರೂ ನಿಮ್ಮನ್ನು ಖಂಡಿತಾ ತಡಿದೇ ತಡೀತಾನೆ...ಯಾಕ್ ಗೊತ್ತಾ? ಅಲ್ಲೊಂದು ಸಣ್ಣ ಮಾನವೀಯತೆ ಕೆಲಸ ಮಾಡ್ತಾ ಇರುತ್ತೆ...ಆತ್ಮಹತ್ಯೆ ಅನ್ನೋದು ಜಸ್ಟ್ ಕೆಲವೇ ಕ್ಷಣಗಳ ಆತುರಾದ ನಿಧರ್ಾರವೇ ಹೊರತು, ಬೇರೇ ಏನೂ ಅಲ್ಲ.
ನೆನಪಿರಲಿ, ನಮಗಾಗಿ ಮಿಡಿಯುವ ಅದೆಷ್ಟೋ ಜೀವಗಳು ಈ ಭೂಮಿ ಮೇಲೆ ಇದ್ದೇ ಇರುತ್ತೆ. ಯಾರೋ ನಮ್ಮನ್ನು ದೂರ ಮಾಡಿದ್ರೂ ಅಂದತ ಎಲ್ಲರನ್ನೂ ದೂರ ಮಾಡೋ ಕೆಟ್ಟ ನಿಧರ್ಾರ ಖಂಡಿತಾ ಬೇಡ. ಎಲ್ಲರಿಗೂ ನಮ್ಮ ಅವಶ್ಯಕತೆ ಇದ್ದೇ ಇರುತ್ತೆ........ಜೀವನ ಅದೆಷ್ಟೋ ಮಾನವೀಯ ಸಂಬಂಧಗಳ ಬೆಸುಗೆ ಅನ್ನೋದು ಒಂದು ನಗ್ನ ಸತ್ಯ......!
ಧ್ವನಿ

2 comments: