Tuesday, 20 November 2012

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....

ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
  ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!

                                                                                                                                ಧ್ವನಿ








Friday, 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ

Tuesday, 21 August 2012

`ಕಾಲದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

`ಕಾಲ'ದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

 

ತಾಯಿಯ ಹೊಟ್ಟೆಯಿಂದ ಭೂಮಿಗಿಳಿಯುವಾಗ ಸಣ್ಣದೊಂದು ಅಳುವಿನ ಜೊತೆಗೆ ಪುಕ್ಕಟೆಯಾಗಿ ಸಿಗುವುದು `ಮಗು ಎಂಬ ನಾಮಧೇಯವಷ್ಟೇ. ಆಸ್ಪತ್ರೆಯ ತೊಟ್ಟಿಲಲ್ಲಿ ಪಿಲಿ ಪಿಲಿ ಕಣ್ಣು ಬಿಡುತ್ತಾ ಅಮ್ಮನ ತೋಳ ತೆಕ್ಕೆಯ ಆಸರೆ ಬೇಡುತ್ತಿದ್ದರೆ ಅಲ್ಲಿ ನೆರೆದವರಿಗೆ ಅದೆಂಥದೋ ಪುಳಕ. ಹೆತ್ತ ತಾಯಿಗಂತೂ ಆ ಮಗುವಿನ ಆಳುವೇ ಸಾರ್ಥಕ ಎನಿಸುವಂಥ ಅನುಭವ. ಆದರೆ ಭೂಮಿಯ ಸ್ಪರ್ಶಕ್ಕೆ ಸಿಕ್ಕಿ ಕೆಲವೇ ಸೆಕೆಂಡ್ ಕಳೆದ ಮಗುವಿಗೆ ಜಗವೇ ನೂತನ....ಅಳು ಕಂಡು ನಗುವವರ ವ್ಯಕ್ತಿತ್ವ ವಿನೂತನ....ಹುಟ್ಟಿದ ಮಗುವಿನ ಅಳು ನಗುವಾಗಿ ಬದಲಾಗುವಾಗ ಅದಕ್ಕೊಂದು ಸ್ವಂತ ಹೆಸರಿನ ಆಸರೆ....ಮನೆಯವರೆಲ್ಲರ ಸ್ಪರ್ಶ....
ಸಣ್ಣ ವಯಸ್ಸಿನಲ್ಲೊಂದು ಇಂತಹ ಪ್ರೀತಿ, ಪ್ರತೀ ಮಗುವಿಗೂ ಸಿಗಬೇಕು. ಸಿಕ್ಕೇ ಸಿಗುತ್ತೆ ಕೂಡ...ಆದರೆ ಎಷ್ಟು ದಿನ?
ಆ ಮಗುವಿಗೂ ಕಾಲದ ಜವಾಬ್ದಾರಿಗೆ ಹೆಗಲು ಕೊಡುವ ಅನಿವಾರ್ಯತೆ ಬಂದೇ ಬರುತ್ತೆ ಅಲ್ವಾ?
ಹೌದು, ಬದಲಾವಣೆ ಜಗದ ನಿಯಮ..ಹುಟ್ಟು ಸಾವಿನ ಮಧ್ಯೆ ಕಂಡುಕೊಂಡ ಪ್ರತೀ ಹಾದಿಯಲ್ಲೂ ಜವಾಬ್ದಾರಿಯ ನೊಗ ಹೊತ್ತು ಸಾಗಬೇಕಾದದ್ದು ಅನಿವಾರ್ಯ....ಎಳೆಯ ವಯಸ್ಸಿನ ಆಟ, ತುಂಟಾಟಗಳು, ನಮ್ಮದೇ ಆದ ಜೀವನ, ಎಲ್ಲವೂ ದೂರ ಸರಿದು `ಜವಾಬ್ದಾರಿಯೆಂಬ ಹಣೆಪಟ್ಟಿ ಹೊತ್ತು ನಮ್ಮ ಹೆಗೆಲೇರುತ್ತದೆ.
ಇಂದೊಂಥರ ಅನ್ಯಗ್ರಹವನ್ನು ಪ್ರವೇಶಿಸಿದ ಹಾಗೆ...!
ಜೀವನ ಸುಗಮವಾಗಿರಲಿ ಎಂದು ಮುಂದಡಿಯಿಡುವ ಪ್ರತೀ ಜೀವವೂ ಬಯಸದೇ ಪಡೆದ ಭಾಗ್ಯ, ದೌಭರ್ಾಗ್ಯಗಳು ಎಷ್ಟು ಎನ್ನುವುದು ಕೇಳಿಯೂ ಕೇಳದಂತಿರುವ ದುರಂತ ಕಥಾನಕಗಳೇ ಸರಿ....
ಶಾಲಾ ದಿನಗಳಲ್ಲಿ ಜವಾಬ್ದಾರಿ ಅನ್ನುವುದನ್ನೇ ಮರೆತ ಅದೆಷ್ಟೋ ಗೆಳೆಯರ ಬಳಗ ನನ್ನ ಜೊತೆಯಲ್ಲಿತ್ತು. ಪ್ರತೀ ದಿನ, ಪ್ರತೀ ಕ್ಷಣ ಮನೋರಂಜನೆಯೊಂದನ್ನು ಬಿಟ್ಟರೆ ನನ್ನ ಗೆಳೆಯರ(ಒಂದು ವರ್ಗ) ಬಳಗಕ್ಕೆ ಕಾಲದ ಜೊತೆ ಬರುವ ಜವಾಬ್ದಾರಿಯ ಪರಿಚಯವೇ ಇರಲಿಲ್ಲ. ಆದರೆ ವಯಸ್ಸು 20 ದಾಟುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿದ್ದ ಶಾಲಾ ದಿನಗಳ ಗೆಳೆಯರು ಜವಾಬ್ದಾರಿಯ ಪರಿಚಯ ಮಾಡಿಸಿಕೊಂಡು ಒಂದು ಹಂತಕ್ಕೆ ಕುಟುಂಬದ ಬಂಡಿ ಎಳೆಯುವುದನ್ನು ಕಂಡಿದ್ದೇನೆ. ಆಗೆಲ್ಲಾ ಯೋಚಿಸಿದ್ದಿದೆ...
ನಿಜಕ್ಕೂ ಜವಾಬ್ದಾರಿ ಅಂದ್ರೆ ಇದೇನಾ?
ಹೌದೋ? ಅಲ್ವೋ? ನಂಗತ್ತೂ ಅಷ್ಟು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಶಾಲಾ ದಿನಗಳಲ್ಲಿ ಈ ಗೆಳೆಯರ ಬಳಗದ ವರ್ತನೆ ಕಂಡ ನಾನು ಇಂದು ಮಾತ್ರ ಮಾತೆತ್ತದೆ ಮೌನವಾಗಬೇಕಿದೆ. ಆ ದಿನಗಳಲ್ಲಿ ಶಿಕ್ಷಣದ ಸ್ಪರ್ಶ ಕಂಡರೆ ಬೆಚ್ಚಿ ಬೀಳುತ್ತಿದ್ದ ಈ ವರ್ಗ..ಇಂದು ಹೇಗೋ ಜವಾಬ್ದಾರಿಯ ಅರ್ಥವನ್ನು ಅಥರ್ೈಸಿ ಜೀವನ ಸಾಗಿಸುತ್ತಿದ್ದಾರೆ. ಕಾಲವೇ ಎಲ್ಲವನ್ನೂ ಕಲಿಸುತ್ತೆ ಅನ್ನೋದು ಬಹುಶಃ ಇದಕ್ಕೆ ಇರಬೇಕು...
ಏನೇ ಆದರೂ ಇಂಥವರಿಗೊಂದು ಸಲಾಂ ಮೀಸಲಿಡಲೇ ಬೇಕು. ನನ್ನ ಪ್ರಕಾರ ಸಾಧಕರಲ್ಲದಿದ್ದರು ಸಾಧಕರಿವರು!
ಪ್ರತೀ ಬಾರಿ ಬ್ಲಾಗ್ ಬರೆಯುವಾಗ ನನ್ನ ಚಿಂತನೆಗಳಿಗೆ ಕೆಲಸ ಕೊಡುವ ನಾನು ಈ ಬಾರಿ ಕಣ್ಣಿಗೆ ಬಿದ್ದ ನೈಜ ಪರಿಶ್ರಮದ ಬೆನ್ನು ಬಿದ್ದು ಬರೆದಿದ್ದೇನೆ. ಶಾಲಾ ದಿನಗಳಲ್ಲಿ ರೌಡಿಸಂ, ಗಲಾಟೆ, ಲವ್ ಎಂದು ಹುಚ್ಚರಂತೆ ಬೀದಿ ಸುತ್ತುತ್ತಿದ್ದ ನನ್ನ ಗೆಳೆಯರ ಬಳಗದ ಬಗ್ಗೆ(ಒಂದು ವರ್ಗ) ಬರೆಯಬೇಕೆನಿಸಿತು. ಆದರೆ ಈಗ ಮಾತ್ರ ಇವರ್ಯಾರೂ ಹಾಗಿಲ್ಲ. ಬದಲಾಗಿದ್ದಾರೆ...ಬದಲಾಗುತ್ತಿದ್ದಾರೆ...!
ಮೊದಲೇ ಹೇಳಿದ ಹಾಗೆ ಜವಾಬ್ದಾರಿಗಳನ್ನು ಅಥರ್ೈಸಿಕೊಂಡಿದ್ದಾರೆ. ಆ ದಿನಗಳಲ್ಲಿ ಇವರ ವರ್ತನೆಗೆ ಬೇಸರ ಪಟ್ಟುಕೊಂಡ ಜನರೂ ಇಂದು ತೃಪ್ತಿ ಪಟ್ಟುಕೊಳ್ಳಬೇಕು ಅನ್ನೋ ಹಾಗೆ ಜೀವನ ನಡೆಸುತ್ತಿದ್ದಾರೆ. 10ರಿಂದ 20 ಸಾವಿರ ಸಂಬಳ ಹಿಡಿಯದಿದ್ದರೂ ಸಾಮಾಜಿಕವಾಗಿ ಒಂದು ಹಂತಕ್ಕೆ ಗಟ್ಟಿಮುಟ್ಟು ಎನ್ನಬಹುದುದು.
ಫ್ರೆಂಡ್ಸ್, ಇಷ್ಟೆಲ್ಲಾ ಯಾಕೆ ಹೇಳಬೇಕೆನಿಸಿತು ಅಂದರೆ,,,
ಮೊನ್ನೆಯಷ್ಟೆ ನನ್ನೊಬ್ಬ ಆಕಾಲದ ಗೆಳೆಯ ಸಿಕ್ಕಿದ್ದ. ಅಂದು ಅವನಿದ್ದ ರೀತಿಗೂ ಇಂದು ಅವನಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿದ್ದ ಅಹಂಕಾರ, ಅರ್ಭಟ, ಮಾತೆತ್ತಿದರೆ ಸುಳಿಯುತ್ತಿದ್ದ ಕೋಪ ಇದ್ಯಾವುದೂ ಇಲ್ಲ. ಆಗೆಲ್ಲಾ ಇವರ ವರ್ತನೆ ಬದಲಾಗಲಿ ಎಂದು ಆಶಿಸುತ್ತಿದ್ದೆ. ಮುಂದೆ ಅದೇ ಗೆಳೆಯ ಜೀವನವನ್ನು ಈ ಮಟ್ಟಿಗೆ ಅಥರ್ೈಸಿಕೊಂಡು ಕಣ್ಣಿಗೆ ಬೀಳುತ್ತಾನೆ ಎಂಬ ಸಣ್ಣ ಊಹೆಯೂ ನನಗಿರಲಿಲ್ಲ. ಮಾತಿನಲ್ಲಿ ನಗುವಿನ ಸ್ಪರ್ಶ, ಗೌರವದ ಭಾವ, ಪ್ರೀತಿ ತುಂಬಿದ ಸ್ಪಷ್ಟ ನಿಲುವು....ಹಿಂದಿದ್ದ ವ್ಯಕ್ತಿತ್ವಕ್ಕೆ ಸಿಡಿಲು ಬಡಿದಂತೆ ಬದಲಾಗಿದ್ದ ನನ್ನ ಆತ್ಮೀಯ ಗೆಳೆಯ..!
ಇಂಥದ್ದೊಂದು ಬದಲಾವಣೆಗೆ ಕಾರಣನಾದ ಆ `ಕಾಲಕ್ಕೊಂದು ಥ್ಯಾಂಕ್ಸ್ ಹೇಳಲೇ ಬೇಕು.
ಫ್ರೆಂಡ್ಸ್, ಹಾಗಂತ ಬದಲಾವಣೆಯ ಪ್ರತೀ ಮಗ್ಗುಲನ್ನು ತಿರುವಿ ಹಾಕಿಕೊಂಡು ನೋಡುವ ಅಭ್ಯಾಸ ನನಗಿಲ್ಲ. ಒಬ್ಬನ ವ್ಯಕ್ತಿತ್ವ ನೋಡಿ ಗುಣಮಟ್ಟದ ಸಟರ್ಿಪಿಕೇಟ್ ಕೊಡುವ ಹಂತಕ್ಕೂ ನಾನು ಬೆಳೆದಿಲ್ಲ. ಆದರೆ ಎಲ್ಲೋ ಹಾಳಾಗಿ ಹೋಗುತ್ತಿದ್ದ ಹೊವೊಂದು ತುಂತುರು ಹನಿಗೆ ಮೈದಡವಿ ನಿಂತರೆ ಪೋಟೋ ಕ್ಲಿಕ್ಕಿಸಿ ಚೆಂದಗಾಣಿಸುವ ಅನ್ನೋ ಹವ್ಯಾಸವಷ್ಟೇ! ನನ್ನ ಹವ್ಯಾಸಗಳು ಕೆಲವರ ಪಾಲಿಗೆ ದುರಾಭ್ಯಾಸಗಳಾಗಿ ಕಂಡರೆ ನಾನು ಜವಾಬ್ದಾರನಲ್ಲ.
ಬದುಕಿನ ಪ್ರತೀ ಹಂತದಲ್ಲೂ ಎಡವಿ ಬೀಳುವ ವರ್ಗಕ್ಕಿಂತ, ಈ ಹಿಂದೆ ಎಡವಿ ಬಿದ್ದು ಈಗಷ್ಟೇ ಎದ್ದು ನಿಲ್ಲುತ್ತಿರುವ ನನ್ನ ಆ ಕಾಲದ ಗೆಳೆಯನ ವರ್ಗ ನನಗಿಷ್ಟ..
ಇವರು ಅಂದೆಲ್ಲಾ ಜೀವನದ ಪ್ರತೀ ಕ್ಷಣವನ್ನು ಇಂಚಿಂಚೂ ಎಂಜಾಯ್ ಮಾಡಿದ್ದಾರೆ...ಒಂದು ಕ್ಷಣವೂ ಭಾವುಕರಾಗದೆ ಸಣ್ಣ ವಯಸ್ಸಿನ ಸುಖವನ್ನು ಪ್ರತೀ ಕ್ಷಣವೂ ಅನುಭವಿಸಿದ್ದಾರೆ..ಜವಾಬ್ದಾರಿಯೆಂಬ ಕಾಲನ ಕರೆ ಬಂದಾಗ ನಿಯತ್ತಾಗಿ ಅದಕ್ಕೆ ಹೊಂದಿಕೊಂಡಿದ್ದಾರೆ.
ನಿಜಕ್ಕೂ ಈ ರೀತಿಯ ಜೀವನ ಗ್ರೇಟ್ ಅಲ್ವಾ?
ಫ್ರೆಂಡ್ಸ್, ಈ ಮೂಲಕ ಹೇಳುವುದಿಷ್ಟು...
ಯಾರೇ ಆಗಲಿ ವಯಸ್ಸಿನ ಒಂದು ಹಂತದವರಗೆ ಇರುವಷ್ಟು ದಿನಗಳನ್ನು ಎಂಜಾಯ್ ಮಾಡೋಣ, ನಕ್ಕು ನಲಿಯೋಣ, ಹೇಗಿದ್ದರೂ ಜವಾಬ್ದಾರಿಯೆಂಬ ಕಾಲನ ಕರೆಗೆ ಮತ್ತೆ ಕಿವಿಕೊಡಲೇ ಬೇಕಲ್ಲವೇ?
ನನ್ನ ಈ ಬ್ಲಾಗ್ ಬರಹದ ಉದ್ದೇಶವಿಷ್ಟೇ...ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ನನ್ನ ಆ ಕಾಲದ ಗೆಳೆಯರ ಜೊತೆ ಸಂಭ್ರಮಿಸಿಲ್ಲ. ನಕ್ಕು ನಲಿದಿರಲಿಲ್ಲ...ಎಲ್ಲಕ್ಕೂ ಲಕ್ಷ್ಮಣ ರೇಖೆ ಎಳೆದು ಜೀವಿಸಿದ್ದೆ. ಆದರೆ ಈಗ ಆ ಕಾಲ ಮಿಂಚಿ ಹೋಗಿದೆ. ಇದೀಗ ಜವಾಬ್ದಾರಿಯ ಕಾಲ...ಇಂದು ಸಂಭ್ರಮಿಸಲು ಸಮಯದ ತಿಕ್ಕಾಟ, ಕೆಲಸ ಕಾರ್ಯಗಳ ಜಂಜಾಟ ಬ್ರೇಕ್ ಹಾಕುತ್ತಿದೆ...ಅಪ್ಪಿ ತಪ್ಪಿ ಎಲ್ಲೋ ಒಂದೆರೆಡು ರಜಾ ದಿನಗಳಲ್ಲಿ ಆ ದಿನಗಳ ಸಂಭ್ರಮ ಮರುಕಳಿಸುತ್ತದೆ. ಅದು ಬಿಟ್ಟರೆ ಮುಂದಿನ ಜೀವನದ ಭವಿಷ್ಯತ್ ಕಾಲದಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎನ್ನಬಹುದು.
ಏನೇ ಆದರೂ ಜವಾಬ್ದಾರಿ ಮತ್ತು ಮಜಾ ಎಂಬ ಎರಡು ಶಬ್ದಕ್ಕೆ ಅಡ್ಡಗಾಲಿಡುವ `ಕಾಲ ಎಂಬ ಎರಡಕ್ಷರಕ್ಕೆ ದೊಡ್ಡದೊಂದು ಸಲಾಂ...

Wednesday, 1 August 2012

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ಇವತ್ತು ರಕ್ಷಾ ಬಂದನ. ಸಹೋದರ-ಸಹೋದರಿಯರ ಸಂಬಂಧಕ್ಕೊಂದು ಗೌರವಯುತ ಅರ್ಥ ಕಲ್ಪಿಸಿದ ದಿನ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಂಥದ್ದೊಂದು ಮಾನವೀಯ ಸಂಬಂಧ ಇದ್ದೇ ಇರುತ್ತದೆ. ಕೆಲವರ ಜೀವನದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ಸಂಬಂಧಗಳಾದರೆ, ಇನ್ನು ಕೆಲವರ ಜೀವನದಲ್ಲಿ ಹಾಗೇ ಸುಮ್ಮನೆ ಸಿಕ್ಕ ಸಂಬಂಧಗಳು. ರಕ್ಷಾ ಬಂಧನದ ಈ ದಿನದಲ್ಲಿ ನನ್ನ ಜೀವನದಲ್ಲಿ ಬಂದು ಹೋದ ಅಕ್ಕನ ಬಗ್ಗೆ ಒಂದಿಷ್ಟು....

ಪ್ರತೀ ಕ್ಷಣವೂ ನೆನಪಾಗುವ ಜೀವದ ಬಗ್ಗೆ ಒಂದಿಷ್ಟು....ಹೆತ್ತಮ್ಮನ ನಂತರ ಹೆಚ್ಚು ಇಷ್ಟ ಪಟ್ಟ ಜೀವದ ಬಗ್ಗೆ ಒಂದಿಷ್ಟು....
ಜೀವನ ಅನ್ನೋದು ನಿಜಕ್ಕೂ ವಿಚಿತ್ರ. ಜೀವನದ ಅನಿಶ್ಚಿತತೆಯ ಪಯಣದಲ್ಲಿ ಯಾರೆಲ್ಲಾ ಸಿಗ್ತಾರೆ ಅನ್ನೋದನ್ನು ಹೇಳೋದು ಅಷ್ಟು ಸುಲಭವಲ್ಲ. ಹಾಗೆ ಊಹಿಸಲೂ ಆಗದ ನನ್ನ ಜೀವನದ ತಿರುವಿನಲ್ಲಿ ಸಿಕ್ಕ ವ್ಯಕ್ತಿಯೇ ಒಬ್ಬರು ಅಕ್ಕ. ಸದಾ ಮುಗುಳ್ನಗು, ನನ್ನ ಹೆತ್ತ ತಾಯಿಯನ್ನೇ ಹೋಲುವ ಸ್ವಭಾವ, ಜೀವನದ ಪ್ರತೀ ಕ್ಷಣದಲ್ಲೂ ಅತೀ ಭಾವುಕ ಜೀವಿ, ಸ್ವಲ್ಪ ಧೈರ್ಯ, ಅತ್ಯಲ್ಪ ಕೋಪ, ಬದುಕಿನ ಪ್ರತೀ ಕ್ಷಣವನ್ನೂ ನೋವಿನಲ್ಲೂ ಸಂಭ್ರಮಿಸುವ ವ್ಯಕ್ತಿತ್ವ. ಎಲ್ಲರಿಗೂ ಇಷ್ಟವಾಗುವ ಸ್ವಭಾವ. ಇದು ನನ್ನ ಅಕ್ಕನ ಬಗ್ಗೆ ಎರಡೇ ತಿಂಗಳಲ್ಲಿ ತಿಳಿದುಕೊಂಡ ಸತ್ಯ.
ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಕಥೆ. ಹೆಜ್ಜೆ ಹೆಜ್ಜೆಗೂ ಕಷ್ಟ ಪಟ್ಟ ನಾನು ಕೆಲಸಕ್ಕೆಂದು ಬಂದು ಸೇರಿದ್ದು ಸಣ್ಣದೊಂದು ಸಂಸ್ಥೆಗೆ. ಆಗೆಲ್ಲಾ ಗೊತ್ತಿದ್ದದ್ದು ಒಂದೇ....ಬೆಳಿಗ್ಗಿನಿಂದ ಸಂಜೆಯವರೆಗೆ ನಿಯತ್ತಿನಿಂದ ದುಡಿಯವುದು. ಸಂಬಂಧಗಳು ಎನ್ನುವುದು ನನ್ನ ಪಾಲಿಗೆ ಅಷ್ಟಕ್ಕಷ್ಟೇ. ಅದರಲ್ಲೂ ಹೆಣ್ಣು ಜೀವಗಳ ಜೊತೆಗೆ ಬೆಳೆಯದ ನನಗೆ ಹೆಣ್ಮಕ್ಕಳನ್ನು ಕಂಡರೆ ಒಂದು ರೀತಿಯ ನಾಚಿಕೆ ಸ್ವಭಾವ. ಮಾತಿಗಿಳಿಯಲು ಸಣ್ಣದೊಂದು ಭಯ. ಕೆಲಸಕ್ಕೆ ಸೇರುವ ವೇಳೆ ಅಲ್ಲಿ ನನಗೆ ಮಾಲೀಕರಿಗಿಂತ ಮೊದಲು ಪರಿಚಯವಾದದ್ದೇ ಈ ಅಕ್ಕ. ಮೊದಲ ವಾರದ ಸಂಬಳವನ್ನು ನನ್ನ ಕೈಗಿಟ್ಟದ್ದೇ ಆ ಅಕ್ಕ...ಒಂದು ತಿಂಗಳು ಕಳೆಯುವವರಗೆ ಇವರನ್ನು ಹಿಂದೂ ಧಮರ್ೀ ಎಂದೇ ಅಂದುಕೊಂಡಿದ್ದೆ. ಅದರಲ್ಲೂ ಇವರು ಕ್ರೈಸ್ತ ಧಮರ್ೀ ಎಂದು ತಿಳಿದದ್ದು ಒಂದು ತಿಂಗಳ ನಂತರ. ಬಹುಶಃ ಅಲ್ಲಿಯ ತನಕ ಒಂದು ಹೆಣ್ಣಿನೊಂದಿಗೆ ನಿರ್ಭಯವಾಗಿ ಮಾತನಾಡುವ ತಾಕತ್ತು ನನಗಿರಲಿಲ್ಲ. ಆದರೆ ಒಂದೇ ತಿಂಗಳಲ್ಲಿ ನನ್ನ ಅಕ್ಕನ ಜೊತೆ ತುಂಬಾನೇ ಅಂದ್ರೆ ತುಂಬಾನೇ ಕ್ಲೋಸ್ ಆಗಿ ಬಿಟ್ಟಿದ್ದೆ. ಪ್ರತೀ ದಿನ ಒಂದರ್ಧ ಘಂಟೆ ನನ್ನ ಅಕ್ಕನ ಜೊತೆ ಮಾತನಾಡಲಿಲ್ಲ ಅಂದ್ರೆ ಏನೋ ಕಳೆದುಕೊಂಡ ಅನುಭವ...ಕೆಲಸಕ್ಕೆ ರಜೆ ಮಾಡಿದರೆ ಎಲ್ಲಿ ಅಕ್ಕನ ಜೊತೆ ಮಾತನಾಡೋದು ತಪ್ಪಿ ಹೋಗುತ್ತೋ ಅನ್ನೋ ಭಯ..ಹಾಗಾಗಿಯೋ ಏನೋ ಪ್ರತೀ ದಿನ ಕೆಲಸಕ್ಕೆ ಹಾಜರಾಗುತ್ತಿದ್ದೆ.
ಯಾರಲ್ಲಿಯೂ ಹೇಳಿಕೊಳ್ಳದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳಿಕೊಳ್ಳುತ್ತಿದ್ದೆ. ತೀರಾ ನೋವಾದಾಗ ಅವರ ಮುಂದೆ ಕಣ್ಣೀರು ಹಾಕಿದ್ದೂ ಇದೆ. ಅಲ್ಲಿಯ ತನಕ ನಾನು ಜೀವನದ ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರು ಹಾಕಿದ್ದಿಲ್ಲ. ಬಹುಶಃ ಅಂತಹ ಅವಕಾಶ, ಜೀವಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಸಿಗದೇ ಇರೋದು ಕೂಡ ಕಾರಣ ಇರಬಹುದು.
ನನ್ನ ಅಕ್ಕನೂ ಅಷ್ಟೇ ...ನನ್ನನ್ನು ಅವರ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಇಷ್ಟ ಪಡೋರು. ಜೀವನದ ಪ್ರತೀ ಕ್ಷಣಗಳನ್ನೂ ನನ್ನ ಹತ್ತಿರ ಹೇಳ್ತಾ ಇರೋರು.. ಆಗೆಲ್ಲಾ ನನ್ನ ಅಕ್ಕ ತುಂಬಾನೇ ಅಂದ್ರೆ ತುಂಬಾನೇ ಹತ್ತಿರ ಆಗ್ತಾ ಇದ್ರೂ....
ನಾನೂ ಅಷ್ಟೇ, ಅಮ್ಮನ ಹತ್ತಿರ ಹೇಲೋಕೆ ಆಗದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳ್ತಾ ಇದ್ದೆ. ಐದಾರು ತಿಂಗಳ ನಂತ ಅವರ ಮನೆಯಲ್ಲಿ ನಾನು ಒಬ್ಬನಂತಾದೆ...
ಗೊತ್ತು ಗುರಿಯಿಲ್ಲದ ನನ್ನ ಜೀವನಕ್ಕೆ `ನೀನ್ ಜಾಗ್ ಆಗಬೆಕು, ನೀನ್ ಹೀಗ್ ಆಗ್ಬೇಕು...ಅಂತ ಸ್ಪೂತರ್ಿ ತುಂಬಿದ್ದು ಇದೇ ಅಕ್ಕ, ಇವತ್ತಿಗೂ ನನ್ನ ತಂದೆ ತೀರಿ ಹೋದ ಮೇಲೆ ನನ್ನ ಅಪ್ಪನ ಕುಟುಂಬ ನಮ್ಮ ಹತ್ತಿರ ಬಂದಿಲ್ಲ. ನಮ್ಮ ಭವಿಷ್ಯ ಹೇಗಿದೆ ಅಂತ ಚಿಂತಿಸಿಲ್ಲ. ಆದ್ರೆ ನನ್ನ ಅಕ್ಕ ನನಗೆ ಸಂಬಂದವೇ ಇಲ್ಲದ ನನ್ನ ಆಕಸ್ಮಿಕ ಅಮ್ಮ ನನ್ನಲ್ಲೂ ಒಂದು ಕನಸು ತುಂಬಿದ್ರೂ...ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪೂತರ್ಿ ತುಂಬಿದ್ರು.
ನನ್ನ ಬರಹಕ್ಕೆ ಮೊದಲ ಓಗುಗಳಾಗಿದ್ದಳು ಅಕ್ಕ
ಹಿಂದಿನಿಂದಲೂ ನನಗೆ ಬರವಣೆಗೆಯ ಹುಚ್ಚು...ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗ್ತಾ ಇದ್ದವು.. ಆರಂಭದ ದಿನಗಳಲ್ಲಿ ನನ್ನ ಬರಹಗಳು ಅಕ್ಕನನ್ನು ಮೆಚ್ಚಿಸುವ, ಅವಳನ್ನು ಇಷ್ಟ ಪಡಿಸುವ ಬರಹಗಳಾಗಿರುತ್ತಿದ್ದವು. ಪತ್ರಿಕೆಯಲ್ಲಿ ನನ್ನ ಬರಹ ಪ್ರಕಟಗೊಂಡರೆ ಸಾಕು...ಅಂಗಡಿಯಿಂದ ಪತ್ರಿಕೆ ತಂದು ಅವಳು ಬರುವ ಹೊತ್ತಿಗೆ ಟೇಬಲ್ ಮೇಲಿಟ್ಟು ದೂರದಿಂದ ಗಮನಿಸುತ್ತಿದ್ದೆ. ನನ್ನಕ್ಕ ನನ್ನ ಬರಹ ಓದ್ತಾರ ಅಂತ ಕಾತುರದಿಂದ ಕಾಯ್ತಾ ಇದ್ದೆ. ನನ್ನ ಪ್ರತೀ ಬರಹಗಳನ್ನು ನನ್ನ ಅಕ್ಕ ಓದ್ತಾ ಇದ್ದಳು. ಆದರೆ ಎಲ್ಲರಂತೆ ಶಹಬ್ಬಾಸ್ ಗಿರಿ ಕೊಡ್ತಾ ಇರಲಿಲ್ಲ. ಯಾಕ್ ಗೊತ್ತಾ?
ಆಕೆಯ ಸ್ವಭಾವವೇ ಅಂತದ್ದು...ಇಷ್ಟ-ಕಷ್ಟ ಯಾವುದನ್ನೂ ತೀರಾ ಹೆಚ್ಚಾಗಿ ತೋರ್ಪಡಿಸುವುದಿಲ್ಲ. ಇಷ್ಟ ಅದರೂ ನಗು...ನೋವಾದರೂ ನಗು....ಆದರೂ ನನ್ನ ಬರಹಗಳು ಅಕ್ಕನಿಗೆ ಇಷ್ಟ ಆಗ್ತಾ ಇದ್ದವು. ಅವಳ ಕಣ್ಣುಗಳೇ ಎಲ್ಲವನ್ನೂ ನನಗೆ ಹೇಳ್ತಾ ಇತ್ತು. ನನ್ನ ಬರಹಗಳನ್ನು ಯಾರು ಒದದೇ ಇದ್ದರೂ ಪರವಾಗಿಲ್ಲ. ನನ್ನ ಅಕ್ಕ ಮಾತ್ರ ಓದಲೇ ಬೇಕು ಅನ್ನೋವಷ್ಟು ಸ್ವಾಥರ್ಿ ನಾನು. ಇದು ಅಹಂಕಾರವೋ....ಓವರ್ ಕಾನ್ಫಿಡೆನ್ಸೋ ಗೊತ್ತಿಲ್ಲ. ಆದರೆ ಪ್ರೀತಿ ತುಂಬಿದ ಅಕ್ಕನ ಸ್ಫೂತರ್ಿಗೆ ಮಾತ್ರ ನಾನ್ ಕಾಯ್ತಾ ಇದ್ದೆ.
ಅಲ್ಲೀ ತನಕ ಇನ್ನೊಬ್ಬರಿಗೆ ಗಿಫ್ಟ್ ಕೊಟ್ಟು ನನಗೆ ಗೊತ್ತೇ ಇಲ್ಲ. ಅಕ್ಕನ ಹುಟ್ಟಿದ ಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿ. ಈ ಹಿಂದೆಯೆ ಕೂಡಿಟ್ಟಿದ್ದ ಸಾವಿರ ರೂಪಾಯಿ ಹಿಡಿದುಕೊಂಡು ಅದೊಂದು ಭಾನುವಾರ ಇಡೀ ಮಂಗಳೂರು ಸುತ್ತು ಹಾಕಿದ್ದೆ. ನಗರದ ಬಹುತೇಕ ಬಟ್ಟೆ ಮಳಿಗೆಗಳಿಗೆ ನುಗ್ಗಿ ಹೊರಬಂದಿದ್ದೆ. ಯಾಕ್ ಗೊತ್ತಾ? ನನ್ನ ಪ್ರೀತಿಯ ಅಕ್ಕನಿಗೆ ಚೂಡಿದಾರ ಉಡುಗೊರೆ ಕೊಡೋದಕ್ಕೆ. ಸುತ್ತಿ ಸುತ್ತಿ ಅಂತಿಮವಾಗಿ ಒಂದು ಶಾಪ್ನಲ್ಲಿ ನನ್ನ ಅಕ್ಕನಿಗೆ ಇಷ್ಟ ಆಗಬಹುದು ಅನ್ನೋ ಸಣ್ಣದೊಂದು ನಿರೀಕ್ಷೆಯಲ್ಲಿ ಹಸಿರು ಗುಲಾಬಿ ಬಣ್ಣ ಮಿಶ್ರಿತ ಚೂಡಿದಾರ ಖರೀದಿಸಿದೆ. ಅಲ್ಲಿಂದ ಮತ್ತೆ ಅಕ್ಕನಿಗೆ ಇಷ್ಟವಾಗುವ ರೀತಿಯ ಗ್ರೀಟಿಂಗ್ ಕಾಡರ್್ ತಲಾಷ್ಗೆ ನಿಂತೆ. ಇಲ್ಲೂ ಅಷ್ಟೇ, ನನ್ನ ಅಕ್ಕನ ಟೇಸ್ಟ್ಗೆ ಢಿಫರೆಂಟ್ ಆಗಿ ಕೊಡಬೇಕು ಅನ್ನೋ ನನ್ನ ಮನಸ್ಥಿತಿಗೆ ಹೊಂದುವ ಗ್ರೀಟಿಂಗ್ಸ್ ಸಿಗಲಿಲ್ಲ. ಕೊನೆಗೊಂದು ಆಗಬಹುದು ಅನ್ನೋ ಗೀಟಿಂಗ್ಸ್ ಕೈಗಿಟ್ಟು ಅಲ್ಲಿಂದ ಹೊರಟೆ....
ಅಂದು ನಾನು ಆ ಎರಡು ವಸ್ತುವಿನ ಖರೀದಿಗೆ ವ್ಯಯಿಸಿದ್ದು ಬರೋಬ್ಬರಿ 4 ಗಂಟೆ 15 ನಿಮಿಷ...
ಅಲ್ಲಿಯ ತನಕ ನನ್ನ ಬಟ್ಟೆ ಖರೀದಿಗೂ 15 ನಿಮಿಷಕ್ಕಿಂತ ಹೆಚ್ಚು ಸಮಯ ವ್ಯರ್ಥ ಮಾಡದ ಸ್ವಭಾವ ನಂದು. ಇನ್ನು ಮೂರು ದಿನ ಕಳೆದರೆ ಅಕ್ಕನ ಹುಟ್ಟಿದ ದಿನ...
ಎಲ್ಲದರಲ್ಲೂ ವಿಭಿವನ್ನವಾಗಿ ಯೋಚನೆ ಮಾಡುವ ನಾನು ಕೆಲವೊಮ್ಮೆ ತುಂಬಾನೇ ಅಂದ್ರೆ ತುಂಬಾನೇ ಸ್ವಾಥರ್ಿ ಆಗ್ತೀನಿ. ಅಕ್ಕನ ಹುಟ್ಟಿದ ಹಬ್ಬದ ದಿನವೂ ನನ್ನ ಈ ಮನಸ್ಥಿತಿ ಬದಲಾಗಲಿಲ್ಲ.
ಎಲ್ಲರಿಗಿಂತ ಮೊದಲು ನಾನೇ ವಿಶ್ ಮಾಡಬೇಕು, ಗಿಫ್ಟ್ ಕೊಡಬೆಕು ಅನ್ನೋ ಜಾಯಮಾನ. ರಾತ್ರಿ ಹನ್ನೆರೆಡು ಕಹೊಡೆದು ಸೆಕೆಂಡ್ ಕಳೆಯುವ ಮೊದಲೇ ಅಕ್ಕನ ಮೊಬೈಲ್ಗೆ ನನ್ನ ವಿಶಸ್ ತಲುಪಿಯಾಗಿತ್ತು. ಬಹುಶಃ ಅಂದಿನ ಮೊದಲ ಶುಭಾಶಯ ನನ್ನದೇ ಇರಬೇಕು...
ಬೆಳಿಗ್ಗೆ ಗಿಫ್ಟ್ ಕೊಡುವಾಗಲೂ ನಾನೇ ಫಸ್ಟ್ ಆಗಿರಬೆಕು ಅನ್ನೋ ಸ್ವಭಾವ...ಅಂದು ಐದು ಘಂಟೆಗೆ ಎದ್ದು...ಸ್ನಾನ ಮಾಡಿ ಸರಿಯಾಗಿ 6.10ಕಕ್ಕೆ ಮಂಗಳೂರಿನಲ್ಲಿದ್ದೆ. ಅಲ್ಲಿಂದ ಅಕ್ಕನಿಗೊಂದು ಕಾಲ್ ಮಾಡಿದಾಗ ಅಕ್ಕ ಚಚರ್್ನಲ್ಲಿದ್ದರು. ಹಾಗಾಗಿ ಫೋನ್ ತೆಗೆಯೋಕೆ ಆಗಿಲ್ಲ. ಚಚರ್ಿಂದ ಅಕ್ಕ ಬರೋ ದಾರಿಯಲ್ಲಿ ನಿಂತು ನಾನು ತಂದ ಗಿಫ್ಟ್ ಅಕ್ಕನ ಕೈಗಿಟ್ಟಿದ್ದೆ. ಆ ಸಮಯದಲ್ಲಿ ಅಕ್ಕನ ನಗು ತುಂಬಿದ ಮುಖ ನೋಡೋದೇ ಒಂಥರಾ ಖುಷಿಯಾಗಿತ್ತು.
ಇಷ್ಟೆಲ್ಲಾ ಆದ್ರೂ ನನ್ನ ಅಕ್ಕನಿಗೆ ಗಿಫ್ಟ್ ಖುಷಿಯಾಗರಬಹುದಾ? ಎಂಬ ಸಣ್ಣದೊಂದು ಭಯ! ಅಂದು ಇಡೀ ದಿನ ಅಕ್ಕನ ಫೋನ್ಗಾಗಿ ಕಾಯ್ತಾ ಇದ್ದೆ. ಆತ್ರಿ 8.35ಕ್ಕೆ ಸರಿಯಾಗಿ ಅಕ್ಕನ ಕಾಲ್ ಬಂತು. ಗಿಫ್ಟ್ ತುಂಬಾನೆ ಇಷ್ಟು ಆಯ್ತು ಅಂದರೂ ದ್ಯಾಟ್ ಡೇ ಐಯಮ್ ರಿಯಲಿ ವೆರಿ ಹ್ಯಾಪಿ....
ಒನ್ನೊಬ್ಬರ ಖುಷಿಯಲ್ಲಿ ಸಂತೋಷ ಕಾಣುವ ಮತ್ತೊಂದು ಸ್ವಭಾವ ಅಂದಿನಿಂದ ಆರಂಭವಾಯಿತು.
ಇಂದಿಗೂ ಆ ದಿನಗಳ ನನ್ನ ಮನಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲವೊಮ್ಮೆ ನನಗೊಬ್ಬಳು ಸ್ವಂತ ಅಕ್ಕ ಇರ್ಬಾದರ್ಿತ್ತಾ ಅಂತ ಕಣ್ಣೀರು ಹಾಕಿದ್ದೂ ಇದೆ.
ಕೆಲವೊಮ್ಮೆ ನಮಗೆ ಇಷ್ಟವಾಗುವ ಸಂಬಂಧಗಳು ನಮ್ಮ ಮನಸ್ಥಿತಿಗೆ ತುಂಬಾನೇ ಹತ್ತಿರ ಆಗ್ತಾರೆ...
ಅಂಥವರಲ್ಲಿ ನನ್ನ ಅಕ್ಕನೂ ಒಬ್ಬಳು...
ರಕ್ಷಾ ಬಂಧನದ ಈ ದಿನ ಅಕ್ಕನ ಬಗ್ಗೆ ಒಂದಿಷ್ಟು ಹೇಳಬೇಕೆನಿಸಿತು....ಹೇಳಿದ್ದೀನಿ
ಪ್ರತಿಯೊಬ್ಬರ ಜೀವನದಲ್ಲೂ ಇಂಥದ್ದೊಂದು ಸಂಬಂಧ ಇದ್ದಿರಬಹುದು ಅಲ್ವಾ?
ಅಂತಿಮವಾಗಿ ರಕ್ಷಾ ಬಂಧನದ ಶುಭಾಶಯಗಳು....

                                                                                            ಧ್ವನಿ

Sunday, 20 May 2012

THANKS TO THIS SUNDAY..........!

THANKS TO THIS SUNDAY..........!

ಫ್ರೆಂಡ್ಸ್ ಬ್ಲಾಗ್ ಬರೆಯದೇ ತುಂಬಾ ದಿನಗಳೇ ಆದವು. ಎಕ್ಸಾಂನ ಒತ್ತಡದ ಮಧ್ಯೆ ನನ್ನ ಬರಹಕ್ಕೆ ಸಣ್ಣದೊಂದು ವಿರಾಮ ಕೊಟ್ಟಿದ್ದೆ. ಧ್ವನಿಯ ಬರಹಕ್ಕೆ ಮತ್ತೆ ಮುನ್ನುಡಿಯಿಡುತ್ತಿದ್ದೇನೆ.
ಪ್ರತೀ ಆದಿತ್ಯವಾರ ನನ್ನ ಜೀವನದಲ್ಲಿ ಜಸ್ಟ್ ರಿಲ್ಯಾಕ್ಸ್ ಆಗುವ ದಿನ.  ಕಳೆದು ಹೋದ ಒಂದು ವಾರವನ್ನು ಮತ್ತೆ ಮೆಲುಕು ಹಾಕುವ ದಿನ. ಅದೇ ಟೈಮ್ ವೇಸ್ಟ್ ಸಂಡೇ..ಅದೇ ಆಟ..ಅದೇ ಊಟ...
ಆದ್ರೆ ಈ ಬಾರಿಯ ಸಂಡೇ ಮಾತ್ರ ತುಂಬಾನೇ ಅಂದ್ರೆ ತುಂಬಾನೇ ವಿಶೇಷವಾಗಿತ್ತು.
ಸರಿಸುಮಾರು 12ವರ್ಷಗಳಾದವು ನಾನು ಆ ಸ್ಥಳಕ್ಕೆ ಹೋಗಿ. ಅಲ್ಲಿದ್ದವರ ಮುಖ ನೋಡಿಯೂ ಅಷ್ಟೇ ವರ್ಷಗಳಾಗಿತ್ತು. ತುಂಬಾ ಅಂದ್ರೆ ತುಂಬಾ ಬದಲಾಗಿತ್ತು ಆ ಊರು...ಬದಲಾಗಿತ್ತು ಅಲ್ಲಿನ ಜನಜೀವನ..ಬದಲಾಗಿತ್ತು ಅಲ್ಲಿನ ಜನರ ಜೀವನ ಪದ್ದತಿ..ಹೌದು ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಇದ್ದ ಯಾವ ಚಿತ್ರಣವೂ ಇಂದು ಅಲ್ಲಿಲ್ಲ. ಎಲ್ಲವೂ ಸ್ತಬ್ಧ..ಇಷ್ಟೆಲ್ಲಾ ಹೇಳ್ತಾ ಇರೋದು ಯಾವ ಸ್ಥಳದ ಬಗ್ಗೆ ಗೊತ್ತಾ?
ನನ್ನ ತಂದೆಯ ಊರಿನ ಬಗ್ಗೆ! ಹುಟ್ಟ್ಟಿದಾಕ್ಷಣ ಕಳೆದುಕೊಂಡ ಜೀವವೊಂದರ ತವರು ನೆಲದ ಬಗ್ಗೆ. ಬದುಕಿನ ಪ್ರತೀ ಕ್ಷಣವನ್ನೂ ಪಕ್ಕಾ ಸೆಂಟಿಮೆಂಟಲ್ ಆಗಿ ನೋಡುವ ನನಗೆ ಈ ಆದಿತ್ಯವಾರ ಅನ್ನೋದೇ ಒಂದು ಭಾವುಕ ದಿನ..ಭಾವುಕ ಕ್ಷಣ..ಎಲ್ಲವೂ ಆಗಿತ್ತು..
ನನ್ನ ತಂದೆಯ ಊರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸಾಲೆತ್ತೂರು. ಒಂದು ಕಾಲದಲ್ಲಿ ಸಂಪೂರ್ಣ ಹಳ್ಳಿಗಾಡು. ವಿಭಿನ್ನ ಜನಜೀವನ. ಆಡು ಭಾಷೆ ತುಳವೇ ಆದರೂ ಅಲ್ಲೂ ವಿಭಿನ್ನತೆ.   ರೈತಾಪಿ ವರ್ಗವನ್ನು ಗುರುತಿಸಬಹುದಾದ ಒಂದು ಸಣ್ಣ ಊರು. ನಾನಲ್ಲಿಗೆ ಕಾಲಿಟ್ಟು ಸರಿಸುಮಾರು ಹನ್ನೆರೆಡು ವರ್ಷಗಳೇ ಸಂದವು. ಆದರೆ ಈ ಬಾರಿ ಯಾಕೋ ಗೊತ್ತಿಲ್ಲ. ನನ್ನ ಮನಸ್ಸು ಅಲ್ಲಿಗೆ ಹೋಗಲೇ ಬೇಕು ಅಂತ ತುಡಿಯುತ್ತಿತ್ತು. ತುಡಿಯುವ ಮನಸ್ಸಿಗೆ ನಿರಾಸೆ ಮಾಡುವ ವ್ಯಕ್ತಿ ನಾನಲ್ಲ. ಬೈಕ್ ಏರಿ ಹೊರಟೇ ಬಿಟ್ಟೆ. ಆಗಲೇ ಅಲ್ಲಿನ ಬದಲಾದ ಚಿತ್ರಣದ ದರ್ಶನ ನನಗಾಗಿದ್ದು...
ಹಳ್ಳಿಗಳು ಎಂದಿಗೂ ಬದಲಾಗೋದಿಲ್ಲ ಅನ್ನುವವರಿದ್ದಾರೆ. ಆದ್ರೆ ಸಾಲೆತ್ತೂರು ಎಂಬ ಹಳ್ಳಿ ಸಣ್ಣ ಮಟ್ಟಿಗೆ ಬದಲಾಗಿದೆ. ಇಲ್ಲಿನ ಜನರ ಜೀವನ ವಿಧಾನ ಬದಲಾಗಿದೆ. ತಾಂತ್ರಿಕತೆ ಇಲ್ಲಿನ ಮನೆ ಹೊಕ್ಕಿದೆ. ಸಿಟಿ ಜನರ ಬದುಕಿನ 75%ದಷ್ಟನ್ನು ಇಲ್ಲಿನ ಜನ ಇಂದು ಅನುಸರಿಸುತ್ತಿದ್ದಾರೆ  ಮತ್ತು ಅನುಭವಿಸುತ್ತಿದ್ದಾರೆ! ಹಳ್ಳಿಗಳು ಉದ್ದಾರವಾಗುತ್ತಿಲ್ಲ ಎನ್ನುವವರಿಗೆ ಇದೊಂದು ಉತ್ತರ. ನಿಜಕ್ಕೂ ಇಲ್ಲಿನ ಜನರ ಜೀವನ ತುಂಬಾನೇ ಗ್ರೇಟ್.
ಆದರೂ ರೈತಾಪಿ ವರ್ಗ, ಉಳುವ ಭೂಮಿ, ಹಚ್ಚ ಹಸಿರಿನ ತೋಟ ಎಂಬ ಹಳ್ಳಿಗಾಡಿನ ಅಧ್ಬುತ ಸೊಗಡಿನ ಚಿತ್ರಣ ಮಾತ್ರ ಇಲ್ಲಿಲ್ಲ. ಈಗ ಎಲ್ಲವೂ ಹೈಫೈ. ನೇಗಿಲು ಹಿಡಿದು ಹೊಲದಲ್ಲಿ ದುಡಿಯುತ್ತಿದ್ದ ರೈತ ಇಂದು ಪ್ಯಾಂಟ್ ಶಟರ್್ ಏರಿಸಿಕೊಂಡು ಸಿಟಿಯತ್ತ ಮುಖಮಾಡಿದ್ದಾನೆ. ಉಳುವ ಭೂಮಿ ಹಚ್ಚ ಹಸಿರಿನ ಆಸರೆಯಿಲ್ಲದೆ ಪಾದಚಾರಿಗಳ ಸ್ವರ್ಗವಾಗಿ ಹೋಗಿದೆ! ಎಲ್ಲೋ ಒಂದೆರೆಡು ಅಡಕೆ ಮರಗಳಿದ್ದರೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ..ಇದನ್ನೆಲ್ಲಾ ನೋಡುವಾಗ ಕೊಂಚ ಬೇಸರವೂ ಆಯಿತು. ಆಗ ಮುಗ್ಧ ರೈತರನ್ನು ಮರಳು ಮಾಡಿದ ನಮ್ಮ ಮಾಡ್ರನ್ ಸಿಟಿ ಲೈಫ್ ಬಗ್ಗೆಯೇ ಅಸಹ್ಯ ಹುಟ್ಟಿತು. ಇವೆಲ್ಲದರ ಮಧ್ಯೆ ಹನ್ನೆರೆಡು ವರ್ಷಗಳ ನಂತರದ ಒಂದಷ್ಟು ಸೆಂಟಿಮೆಂಟ್ಗಳು ನೆನಪಾದವು...!
ಫ್ರೆಂಡ್ಸ್, ನಾವೆಲ್ಲಾ ಹೆಚ್ಚಾಗಿ ಪ್ರವಾಸ ಹೋಗ್ತೀವಿ. ಎಲ್ಲೋ ದೂರದ ಊರಿಗೋ, ಕಾಣದ ಜಾಗಕ್ಕೋ ಅಥವಾ ತುಂಬಾನೇ ಗ್ರೇಟ್ ಅನಿಸಿಕೊಂಡ ದೇವರ ಸನ್ನಿಧಾನಕ್ಕೋ ಅಷ್ಟೇ. ಆದ್ರೆ ಒಮ್ಮೆ ಈ ಮೊದಲು ನೀವು ಹೋಗಿದ್ದ, ಈಗ ಹೋಗದೇ ತುಂಬಾನೇ ವರ್ಷಗಳಾದ, ನಿಮ್ಮ ಜೀವಕ್ಕೆ, ಜೀವನಕ್ಕೆ ತುಂಬಾ ಹತ್ತಿರವಾದ, ಹೋದ ತಕ್ಷಣ ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸ್ಥಳಗಳಿಗೊಮ್ಮೆ ಜಸ್ಟ್ ಹಾಗೇನೆ ಹೋಗಿ ಬನ್ನಿ. ಆದ್ರೆ ನೆನಪಿರಲಿ, ಇದೊಂದು ಪ್ರವಾಸ ಆಗಿರಬಾರದು. ಜೀವನದ ಈ ಹಿಂದಿನ ಕ್ಷಣಗಳನ್ನು ನೆನಪಿಸುವ ಸಣ್ಣದೊಂದು ಪುಸ್ತಕವಾಗಿರಬೇಕು. ಆಗ ನಿಮ್ಮ ಹಾದಿಯಲ್ಲಿ ಒಂದೊಂದೇ ನೆನಪಿನ ಪುಟಗಳು ತೆರೆದುಕೊಳ್ಳುತ್ತವೆ. ಜೀವನದಲ್ಲಿ ತುಂಬಾನೇ ಎಂಜಾಯ್ ಮಾಡುವ ವ್ಯಕ್ತಿತ್ವ ನಿಮ್ಮದಾಗಿದ್ದರೂ ಆ ಕ್ಷಣ ಮಾತ್ರ ನೀವೊಬ್ಬ ಭಾವುಕ ಜೀವಿಯಾಗ್ತೀರ. ಹಿಂದಿನ ಕ್ಷಣಗಳನ್ನು ನೆನಪು ಮಾಡಿಕೊಳ್ತೀರಾ..ಈ ಸಂದರ್ಭ ನಿಮ್ಮ ಮೈಂಡ್ ಸ್ವಲ್ಪ ರಿಲ್ಯಾಕ್ಸ್ ಆದ್ರೂ ಆಗಬಹುದು. ತರಲೆ, ಹುಚ್ಚಾಟ, ಜಗಳ ಎಲ್ಲದಕ್ಕೂ ಆ ಒಂದು ದಿನ ಬ್ರೇಕ್ ಬೀಳಬಹುದು. ನಿಮ್ಮಲ್ಲೂ ಒಬ್ಬ ಸಣ್ಣ ಚಿಂತಕನೋ ಭಾವುಕ ಜೀವಿಯೋ ಹುಟ್ಟಬಹುದು.
ಏನೇ ಆದರೂ ಈ ಬಾರಿಯ ಆದಿತ್ಯವಾರ ನನಗಂತೂ ತುಂಬಾನೇ ಸ್ಪ್ಪೆಷಲ್ ಡೇ. ಬದುಕಿನ ಪ್ರತೀ ಕ್ಷಣದಲ್ಲೂ ``LIFE IS NOT EASY, SO I AM ALWAYS BUSY’ ಎನ್ನುವ ನಾನು ಈ ಸಂಡೇ ಮಾತ್ರ ಫ್ರೀಯಾಗಿದ್ದ. ಜಂಜಾಟಗಳಿಂದ ದೂರವಿದ್ದೆ. ಕಳೆದು ಹೋದ ನೆನಪಿನ ಬಳಿಗೆ ಹೋಗಿ ಜಸ್ಟ್ ರಿಲ್ಯಾಕ್ಸ್ ಆದೆ.
THANKS TO THIS SUNDAY..........!

Sunday, 6 May 2012

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?

ಅನ್ಯ ಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ?


ಮೊನ್ನೆಯಷ್ಟೇ ಜಗತ್ತಿನ ಅತೀ ಶ್ರೀಮಂತ ದೇವಸ್ಥಾನ ಎನ್ನಲಾದ ತಿರುಪತಿಯಲ್ಲಿ ವಿವಾದವೊಂದು ಸದ್ದು ಮಾಡಿತು. ಆಂಧ್ರದ ಮಾಜಿ ಮುಖ್ಯ ಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿಯ ಪುತ್ರ ರಾಜಕೀಯ ಧುರೀಣ ಜಗನ್‌ಮೋಹನ್ ರೆಡ್ಡಿಯೇ ಈ ವಿವಾದದ ಕೇಂದ್ರ ಬಿಂದು. ಕ್ರೈಸ್ತ ಧರ್ಮೀಯ ಜಗನ್ ತಿರುಪತಿ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕೆಲ ಕಟ್ಟುಕಟ್ಟಲೆಗಳನ್ನು ಪಾಲಿಸಿಲ್ಲ ಎನ್ನುವುದೇ ಈಗಿರುವ ವಿವಾದ. ದೇವಸ್ಥಾನದ ಮೂಲಗಳ ಪ್ರಕಾರ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯುವ ಮುನ್ನ ‘ನನಗೆ ತಿಮ್ಮಪ್ಪನ ಮೇಲೆ ನಂಬಿಕೆಯಿದೆ, ಅಪಾರ ಭಕ್ತಿಯಿದೆ ಎಂದು ಬರೆದುಕೊಟ್ಟು ಹೋಗಬೇಕೆಂತೆ! ಆದರೆ ಈ ಕಟ್ಟುಕಟ್ಟಲೆಗಳನ್ನು ಜಗನ್ ಪಾಲಿಸದೆ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ ಇಲ್ಲಿ ಜಗನ್ ವಿವಾದಕ್ಕಿಂತಲೂ ಹೆಚ್ಚಾಗಿ ಚಿಂತಿಸ ಬೇಕಾದ ವಿಚಾರ ಅನ್ಯಧರ್ಮೀಯರು ದೇವಸ್ಥಾನ ಪ್ರವೇಶಿಸುವುದು ತಪ್ಪಾ ಎನ್ನುವುದು.
ನನ್ನ ಪ್ರಕಾರ ಮುಸ್ಲಿಮರ ಮಕ್ಕಾದಿಂದ ಹಿಡಿದು ಕ್ರೈಸ್ತರ ರೋಮ್ ಚರ್ಚಿನವರೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಭದ್ರತೆಯ ದೃಷ್ಟಿಯಿಂದ ತಪಾಸಣೆ ನಡೆಸುವುದನ್ನು ಬಿಟ್ಟರೆ ದೇಶದ ಬಹುತೇಕ ಚರ್ಚ್, ಮಸೀದಿಗಳಲ್ಲಿ ಅನ್ಯಧರ್ಮೀಯರ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಈ ಮಾತನ್ನು ಆಯಾ ಧರ್ಮಗಳ ಧಾರ್ಮಿಕ ನಾಯಕರುಗಳೇ ಪುಷ್ಠೀಕರಿಸುತ್ತಾರೆ. ಆದರೆ ಹಿಂದುಗಳ ಅತೀ ನಂಬಿಕೆಯ ಕ್ಷೇತ್ರವಾದ ತಿರುಪತಿಯಲ್ಲಿ ಮಾತ್ರ ಯಾಕೆ ಹೀಗೆ? ಅದು ಕೂಡ ಲಿಖಿತವಾಗಿ ಬರೆದುಕೊಟ್ಟ ನಂತರವಷ್ಟೇ ಅನ್ಯಧರ್ಮೀಯರು ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವುದು ಎಷ್ಟು ಸರಿ? ಧರ್ಮ ಯಾವುದೇ ಆದರೂ ಕೆಲವರಿಗೆ ಬೇರೆ ಧರ್ಮದ ದೇವರಲ್ಲಿ ಅಪಾರ ನಂಬಿಕೆ. ಈ ವೇಳೆ ಆ ದೇವರ ದರ್ಶನ ಪಡೆಯುವುದು ಸಾಮಾನ್ಯ. ಉದಾಹರಣೆಗೆ ಕ್ರೈಸ್ತರ ಧಾರ್ಮಿಕ ಸ್ಥಳವಾದ ಕಾರ್ಕಳದ ಅತ್ತೂರು ಚರ್ಚ್‌ಗೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಹಿಂದುಗಳ ಪಾಲು ಹೆಚ್ಚೇ ಎನ್ನಬಹುದು. ಇನ್ನು ಉಳ್ಳಾಲದ ಇತಿಹಾಸ ಪ್ರಸಿದ್ದ ದರ್ಗಾಕ್ಕೂ ಹಿಂದುಗಳು ಭೇಟಿ ಕೊಡುತ್ತಾರೆ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಹಿಂದುಗಳ ಶಬರಿಮಲೆಗೂ ಲಕ್ಷಾಂತರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಭೇಟಿ ಕೊಡುತ್ತಾರೆ. ಇಲ್ಲೂ ಯಾವುದೇ ರೀತಿಯ ನಿರ್ಬಂಧವಿಲ್ಲ. ಆದರೆ ತಿರುಪತಿಯಲ್ಲಿ ಈ ರೀತಿಯ ಕಟ್ಟುಕಟ್ಟಲೆಗಳನ್ನು ರೂಪಿಸಲು ಕಾರಣ ಏನು ಎನ್ನುವುದೇ ತಿಳಿಯುತ್ತಿಲ್ಲ.
ಹಿಂದೂ ಧರ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಪಡಿಸಬೇಕು, ನಮ್ಮ ಧರ್ಮ ಜಗತ್ತಿನಲ್ಲೇ ಮಾದರಿ ಧರ್ಮವಾಗಬೇಕು ಎನ್ನುವ ನಮ್ಮಲ್ಲಿ ಇಂತಹ ಆಚರಣೆಗಳಿದ್ದರೆ ಹೇಗೆ ತಾನೆ ಹಿಂದು ಧರ್ಮ ಜಗದ್ವಿಖ್ಯಾತವಾಗಲು ಸಾಧ್ಯ? ಹಿಂದು ಎನ್ನುವುದು ಧರ್ಮವಲ್ಲ, ಇದೊಂದು ಜೀವನ ವಿಧಾನ. ನಮ್ಮ ಆಚರಣೆಗಳು ಕೂಡ ನಮ್ಮ ಜೀವನ ವಿಧಾನಗಳೇ. ಹೀಗಿರುವಾಗ ತಿರುಪತಿಯಲ್ಲಿ ಆಚರಿಸಲ್ಪಡುತ್ತಿರುವ ಈ ಆಚರಣೆ ಹಿಂದೂ ವಿರೋಧಿಯಲ್ಲವೇ? ಈ ಬಗ್ಗೆ ಅಲ್ಲಿನ ಕೆಲವರು ಅದೆಷ್ಟೋ ಕಾರಣಗಳನ್ನು ನೀಡಬಹುದು. ಅನ್ಯಧರ್ಮೀಯರು ನಮ್ಮ ಸಂಸ್ಕೃತಿ ಪಾಲಿಸುವುದಿಲ್ಲ, ಅಶುದ್ದರಾಗಿ ದೇವಸ್ಥಾನ ಪ್ರವೇಶಿಸುತ್ತಾರೆ ಎನ್ನಬಹುದು. ಹಾಗೆಂದು ನಾವು ತಿಮ್ಮಪ್ಪನನ್ನು ನಂಬುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟರೆ ಅನ್ಯಧರ್ಮೀಯರು ಸಂಸ್ಕೃತಿ ಕಲಿಯುತ್ತಾರೆಯೇ? ಅಥವಾ ಪರಿಪೂರ್ಣ ಶುದ್ದರಾಗಿಯೇ ದೇವಸ್ಥಾನ ಪ್ರವೇಶಿಸಿದಂತಾ ಗುತ್ತದೆಯೇ? ದೇವರ ಆರಾಧಕ ಕೇಂದ್ರಗಳು ಎಂದಿಗೂ ಇನ್ನೊಬ್ಬರ ಸ್ವತ್ತಲ್ಲ ಎನ್ನುವುದು ನೆನಪಿರಲಿ. ಅನ್ಯಧರ್ಮೀಯರು ಪ್ರವೇಶಿಸಿದ ತಕ್ಷಣ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಅನ್ನುವುದಾದರೆ ಇಂದಿಗೂ ನಮ್ಮ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಹಾಳುಗೆಡಹುವ ಅದೆಷ್ಟೋ ವಿದ್ಯಮಾನಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯೇ ಅನಾಚಾರ ನಡೆಸುತ್ತಿದೆ. ದೇವಸ್ಥಾನಗಳ ಜಗಳ ಬೀದಿಗೆ ಬಂದಿವೆ. ಅಷ್ಟೇ ಯಾಕೆ ವಿವಾದದ ಕೇಂದ್ರ ಬಿಂದುವಾದ ತಿರುಪತಿಯಲ್ಲೇ ದೇವರ ದರ್ಶನದ ವಿಚಾರವಾಗಿ ಅದೆಷ್ಟೋ ಬಾರಿ ವಿವಾದಗಳೆದ್ದಿವೆ. ಇಷ್ಟೆಲ್ಲಾ ಅನಾಚಾರಗಳು ದೇವಸ್ಥಾನದ ಅಂಗಳದಲ್ಲೇ ನಡೆದರೆ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುವುದಿಲ್ಲವೇ? ಒಂದು ವೇಳೆ ಇದರಿಂದ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಅನ್ಯಧರ್ಮೀಯರ ಪ್ರವೇಶಕ್ಕೆ ತಿರುಪತಿಯಲ್ಲಿ ಅನುಸರಿಸುವ ನಿಯಮಗಳ ಬಗ್ಗೆ ನನ್ನ ಸಹಮತವಿದೆ.
ಇಂತಹ ಪದ್ದತಿ ತಿರುಪತಿಯಲ್ಲಿ ಮುಂದುವರೆದರೆ ವಿದೇಶಿಗರಿಗೆ ಜಗತ್ತಿನ ಅತೀ ಶ್ರೀಮಂತ ದೇವಾಲಯವನ್ನು ನೋಡುವ ಅವಕಾಶವೇ ತಪ್ಪಿ ಹೋಗಬಹುದು. ಇದರಿಂದ ಮುಂದೆ ನಮ್ಮ ಪ್ರವಾಸೋದ್ಯಮಕ್ಕೂ ಏಟು ಬೀಳಬಹುದು. ಒಂದು ವೇಳೆ ಕ್ರೈಸ್ತರಾಗಲಿ, ಮುಸ್ಲಿಮರಾಗಲಿ ಅವರ ಧಾರ್ಮಿಕ ಕೇಂದ್ರವನ್ನು ಪ್ರವೇಶಿಸುವ ಮುನ್ನ ಹಿಂದುಗಳು ಲಿಖಿತವಾಗಿ ‘ನಾನು ಏಸುವನ್ನು ನಂಬುತ್ತೇನೆ, ಅಪಾರ ಭಕ್ತಿಯಿದೆ ‘ನಾನು ಅಲ್ಲಾಹ್‌ನನ್ನು ನಂಬುತ್ತೇನೆ ಎಂದು ಬರೆದು ಕೊಡಿ ಎಂದರೆ ಏನಾಗಬೇಡ? ಒಮ್ಮೆ ಯೋಚಿಸಿ, ನಮ್ಮ ಹಿಂದೂ ಸಂಘಟನೆಗಳು ಇದಕ್ಕೆ ಮತಾಂತರದ ಹಣೆಪಟ್ಟಿ ಕಟ್ಟಿ ಗಲಾಟೆ ಎಬ್ಬಿಸುವುದಂತೂ ಗ್ಯಾರಂಟಿ. ಆದರೆ ಎಂದೂ ಅನ್ಯಧಮೀಯರ ಪ್ರವೇಶವನ್ನು ಇವರು ನಿರ್ಬಂಧಿಸಿಲ್ಲ. ಬಹುಶಃ ಹೀಗಾಗಿಯೋ ಏನೋ ಜಗತ್ತಿನಲ್ಲೇ ಕ್ರೈಸ್ತ ಧರ್ಮ ಅತೀ ದೊಡ್ಡ ಧರ್ಮವಾಗಿ ಬೆಳೆದಿರುವುದು.
ಹಿಂದೂಗಳಿಗೆ ನಮ್ಮದೇ ಆದ ಕೆಲವೊಂದು ಆಚರಣೆಗಳು, ಧಾರ್ಮಿಕ ನಂಬಿಕೆಗಳು ಇದೇ ಎನ್ನುವುದೇನೋ ಸರಿ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಇತರೆ ಧರ್ಮೀಯರ ದೇವಸ್ಥಾನ ಪ್ರವೇಶಕ್ಕೆ ಲಿಖಿತ ಕಟ್ಟುಕಟ್ಟಲೆಗಳನ್ನು ವಿಧಿಸುವುದು ಸರಿಯಲ್ಲ. ಈಗಾಗಲೇ ತಿರುಪತಿ ಎನ್ನುವುದು ಹಣದ ಹೊಳೆ ಹರಿಸುವ ಧಾರ್ಮಿಕ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ನಂಬಿಕೆ, ಭಕ್ತಿ, ಪೂಜೆಗೆ ಜಾಗವಿರುವುದು ಕೆಲವೇ ಸಕೆಂಡ್‌ಗಳಷ್ಟೇ. ಹೀಗಿರುವಾಗ ತಿಮ್ಮಪ್ಪನ ಸನ್ನಿಧಾನದಲ್ಲಿ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ದೇವರ ಹೆಸರು ಕೆಡಿಸುವುದು ಎಷ್ಟು ಸರಿ?
ಹಿಂದು ಎಂಬ ಜೀವನ ವಿಧಾನವನ್ನು ಅನ್ಯಧರ್ಮಿಯರು ಆಚರಿಸಲಿ ಎಂದು ನಾವು ಹೇಳುವುದಿಲ್ಲ. ಅವರಾಗಿಯೇ ಇಷ್ಟಪಟ್ಟರೆ ವಿರೋಧಿಸುವವರೂ ಹಿಂದುಗಳಲ್ಲ. ಹೀಗಿರುವಾಗ ತಿರುಪತಿಯ ಘಟನೆಯನ್ನು ಹಿಂದುಗಳು ಖಂಡಿಸಲೇ ಬೇಕು. ರಾಮನಿಗೆ ರಾಮಮಂದಿರ ಕಟ್ಟಿ, ಜಗತ್ತಿಗೇ ಹಿಂದೂ ಧರ್ಮದ ಬಗ್ಗೆ ಸಾರಿ ಹೇಳಲು ಹೊರಟ ನಮಗೆ ಇಂಥ ಆಚರಣೆಗಳ ಅವಶ್ಯಕತೆ ಖಂಡಿತಾ ಇಲ್ಲ.

ಧ್ವನಿ

Wednesday, 2 May 2012

ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?

ಕಾಮರ್ಿಕ ದಿನವೂ ಐಶಾರಾಮಿ ಜನರ ಆಚರಣೆಯಾಗುತ್ತಿದೆಯೇ?

 

ಕಾಮರ್ಿಕರ ಹಕ್ಕುಗಳನ್ನು ಎಚ್ಚರಗೊಳಿಸಿದ, ಕಾಮರ್ಿ ಕರಿಗೂ ಒಂದು ಆಚರಣೆಯನ್ನು ಕಲ್ಪಿಸಿಕೊಟ್ಟ ದಿನವೆಂದರೆ ಅದು ಕಾಮರ್ಿಕ ದಿನ. ಬಹುಶಃ ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿ ಕಾಮರ್ಿಕ ದಿನದ ಆಚರಣೆ ನಡೆದೇ ನಡೆಯು ತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಮರ್ಿಕ ದಿನವೆಂ ಬುದು ನೈಜ ಶ್ರಮಿಕ ವರ್ಗದಿಂದ ದೂರವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ. ಕಾಮರ್ಿಕ ದಿನದಂದು   ಇರುವ ಸಕರ್ಾರಿ ರಜಾ ದಿನಗಳ ಬಿಡುವು ಕೂಡ ಮೈ ಬಗ್ಗಿಸಿ ದುಡಿಯುವ ಶ್ರಮಿಕ ವರ್ಗಕ್ಕೆ ಸಿಗುತ್ತಿಲ್ಲ. ಬದಲಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕಾಲ ಮೇಲೆ ಕಾಲು ಹಾಕಿ ದಿನಕ್ಕೆ ಇಂತಿಷ್ಟೇ ಎಂದು ಕೆಲಸ ಮಾಡುವ ಒಂದು ಐಶಾ ರಾಮಿ ವರ್ಗ ಮೇ ದಿನದ ಮಜಾ ಅನುಭವಿಸುತ್ತಿದೆ. ಇದು ಇಂದು ನಿನ್ನೆಯ ವಿಚಾರವಲ್ಲ. ಸರಿಸುಮಾರು ವರ್ಷಗಳಿಂದ ನೈಜ ಶ್ರಮಿಕ ವರ್ಗ ಮೇ ದಿನದ ಅಂದರೆ ತನ್ನದೇ ದಿನದ ಆಚರಣೆಯಿಂದ ವಂಚಿತವಾಗುತ್ತಿದೆ.
ದಿನಕ್ಕೆ ಎಂಟು ಘಂಟೆ ಕೆಲಸಕ್ಕೆ ಆಗ್ರಹಿಸಿ ಆರಂಭ ವಾದ ಶ್ರಮಿಕ ವರ್ಗದ ಹೋರಾಟಕ್ಕೆ ಮೇ ದಿನ(ಕಾಮರ್ಿಕ ದಿನ) ಒಂದು ದಿನವಷ್ಟೇ. ಈ ದಿನದಲ್ಲಾದರೂ ಕಾಮರ್ಿ ಕರು ತಮ್ಮ ನಿತ್ಯದ ಹೋರಾಟದ ಬದುಕನ್ನು ಬದಿಗಿಟ್ಟು ತನ್ನ ಭವಿಷ್ಯದ ಬಗ್ಗೆ ಚಿಂತಿಸಲಿ ಎನ್ನುವುದೇ ಈ ದಿನದ ಆಶಯ. ಆದರೆ ಈ ಆಶಯಗಳೇ ಇಂದು ಸಾಕಾರಗೊಳ್ಳು ತ್ತಿಲ್ಲ. ವರ್ಷಪೂತರ್ಿ ದುಡಿಯುವ ಕಾಮರ್ಿಕ ವರ್ಗ ಈ ದಿನವೂ ಬೆವರಿಳಿಸಿ ದುಡಿಯಬೇಕಾದ ಅನಿವಾರ್ಯತೆ ಒದ ಗಿದೆ. ಅನ್ನ ಹಾಕುವ ಒಡೆಯನ ಆಜ್ಞೆಗಳನ್ನು ಮೀರಿ ಮೇ ದಿನದ ನೆಪದಲ್ಲಿ ರಜಾ ಹಾಕಿದರೆ ಪ್ರತೀ ದಿನವೂ ಮೇ ದಿನವಾಗುವುದರಲ್ಲ್ಲಿ ಸಂದೇಹವಿಲ್ಲ. ಶ್ರಮಿಕ ವರ್ಗದ ಮೇಲೆ ಇಂತಹ ಅದೆಷ್ಟೋ ದೌರ್ಜನ್ಯಗಳು ಧನಿಕರಿಂದ ನಡೆಯು ತ್ತಲೇ ಇದೆ. ಎಂಟು ಘಂಟೆ ಕೆಲಸ ಮಾಡಬೇಕಾದ ಕಾಮರ್ಿಕ ಹತ್ತರಿಂದ ಹದಿನೈದು ಘಂಟೆ ದುಡಿಯುವುದೂ ಇದೆ. 
ಇದನ್ನು ವಿರೋಧಿಸಿದರೆ ಮುಂದಿನ ಭವಿಷ್ಯವೇ ಕತ್ತಲಾಗು ವುದು ನಿಶ್ಚಿತ. ಇನ್ನು ಕಾಮರ್ಿಕರಿಗೆ ದೊರಕಬೇಕಾದ ಸವ ಲತ್ತುಗಳು ಎನ್ನುವುದು ಮರೀಚಿಕೆಯೇ ಸರಿ. ಪಿಎಫ್, ಇಎಸ್ ಐನಂತಹ ಬಡ ಶ್ರಮಿಕ ವರ್ಗದ ಆಸರೆ ಯೋಜನೆಗಳು ಇಂದು ಎಷ್ಟು ಮಂದಿ ಕಾಮರ್ಿಕರಿಗೆ ಸಿಗುತ್ತಿದೆ? ಇಂತಹ ಯೋಜನೆಗಳ ಲಾಭ ಪಡೆಯುವುದು ತಿಂಗಳಿಗೆ 60-70ಸಾವಿರ ಸಂಬಳ ಪಡೆಯುವ ಉದ್ಯೋಗಿಗಳೇ ಹೊರತು ದಿನಪೂತರ್ಿ ಬಿಸಿಲಿನ ಬೇಗೆಗೆ ಬೆವರಿಳಿಸಿ ದುಡಿಯುವ ಕಾಮರ್ಿಕರಲ್ಲ. ಮೊನ್ನೆ ಯಷ್ಟೇ ಫೇಸ್ಬುಕ್ ಎಂಬ ಸಾಮಾಜಿಕ ತಾಣದಲ್ಲಿ ಇದೇ  ಕಾಮರ್ಿಕ ದಿನದ ಶುಭಾಶಯದ ಗ್ರೀಟಿಂಗ್ಸ್ ಒಂದು ನನ್ನನ್ನು ಚಿಂತನೆಗೆ ಹಚ್ಚಿತು. ಸೂಟು-ಬೂಟು ಹಾಕಿಕೊಂಡ ವ್ಯಕ್ತಿಯೊಬ್ಬ ಬಡ ಕಾಮರ್ಿಕನೊಬ್ಬನ ಬೆನ್ನ ಮೇಲೆ ನಿಂತು ಕಾಮರ್ಿಕ ದಿನದ ಶುಭಾಶಯ ಕೋರುವ ಬ್ಯಾನರ್ ಹಾಕುವ ಚಿತ್ರವದು. ಈ ಚಿತ್ರವೇ ಸೂಚಿಸುವಂತೆ ಇಂದಿಗೂ ಕಾಮರ್ಿಕ ವರ್ಗವನ್ನು ಎಷ್ಟು ಕೀಳಾಗಿ ಕಾಣಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಆದರೆ ನಮ್ಮ ಕೆಲ ಫೇಸ್ಬುಕ್ ಪ್ರಿಯರಿಗೆ ಇದರ ನೈಜ ಅರ್ಥವನ್ನು ತಿಳಿದುಕೊಳ್ಳುವ ಸಾವಧಾನವಂತು ಇಲ್ಲವೇ ಇಲ್ಲ. ಒಂದೇ ಸಮನೆ ಕಮೆಂಟ್ಸ್ಗಳ ಮೇಲೆ ಕಮೆಂಟ್ಸ್, ಲೈಕ್ಗಳ ಮೇಲೆ ಲೈಕ್! ನಿಜಕ್ಕೂ ವಿಪಯರ್ಾಸ ಅಂದ್ರೆ ಇದೇ ಇರಬೇಕು.
ಲವರ್ಸ್ ಡೇ, ಫ್ರೆಂಡ್ಶಿಪ್ ಡೇ, ಮದರ್ಸ್ ಡೇಗಳಂತೆ ಶ್ರಮಿಕ ವರ್ಗದ ಕಾಮರ್ಿಕ ದಿನವೂ ಐಶಾರಾಮಿ ಜನರ ಮಜಾ ಉಡಾಯಿ ಸುವ, ಶುಭಾಶಯ ಕೋರುವ ದಿನವಾಗಿ ಬದಲಾಗುತ್ತಿದೆ. ಯಾವ ಉದ್ದೇಶಗಳ ಈಡೇರಿಕೆಗಾಗಿ ಈ ದಿನವನ್ನು ಆಚರ ಣೆಗೆ ತರಲಾಯಿತೋ ಅದು ಇಂದು ಈಡೇರುತ್ತಿಲ್ಲ. ಈ ದಿನವಾ ದರೂ ಸ್ವಲ್ಪ ಬಿಡುವು ಮಾಡಿಕೊಳ್ಳಬೇಕಾದ ಬಡ ಶ್ರಮಿಕ ವರ್ಗ ಚಾಚೂ ತಪ್ಪದೇ ಬೆವರಿಳಿಸುತ್ತಿದೆ. ಆದರೆ ತಿಂಗಳಿಗೆ ಸಾವಿರಾರು ರುಪಾಯಿ ಎಣಿಸುವ ಉದ್ಯೋಗಿಗಳು ಮಾತ್ರ ಮೇ ದಿನದ ಹೆಸರಿನಲ್ಲಿ ರಜಾದ ಮಜಾ ಅನುಭವಿಸಿ ಪಾಕರ್್, ಬೀಚ್ ಸುತ್ತುತ್ತಿದ್ದಾರೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಮೇ ದಿನ ಐಶಾರಾಮಿ ಜನರ ಸ್ವತ್ತಾಗಿ ಹೋದರೂ ಪರವಾಗಿಲ್ಲ. ಯಾಕೆಂದರೆ ಅಲ್ಲಿನ ಪ್ರತೀ ಶ್ರಮಿಕ ವರ್ಗವು ಒಂದು ಹಂತಕ್ಕೆ ಐಶಾರಾಮಿಗಳೇ. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿನ ಶ್ರಮಿಕ ವರ್ಗಕ್ಕೆ ಐಶಾರಾಮ ಎನ್ನುವುದು ಕೇವಲ ಕನಸು ಮಾತ್ರ. ಹೀಗಿರುವಾಗ ತಮ್ಮ ಹಕ್ಕುಗಳನ್ನು ಪ್ರತಿಪಾದಿ ಸಲು ಇರುವ ಏಕೈಕ ದಿನವೂ ಕಾಮರ್ಿಕರಿಂದ ಕಳೆದು ಹೋಗು ತ್ತಿರುವುದು ವಿಪಯರ್ಾಸ. ಬಹುಶಃ ಇಂತಹ ವಿದ್ಯಮಾನ ಭಾರ ತದಲ್ಲಿ ಮಾತ್ರ ಘಟಿಸಲು ಸಾಧ್ಯ!
ಕಾಮರ್ಿಕರ ಹೋರಾಟಕ್ಕೆ ಧ್ವನಿಯಾಗಿ ಅದೆಷ್ಟೋ ಸಂಘ ಟನೆಗಳಿದ್ದರೂ ಅದು ತನ್ನ ನೈಜ ಉದ್ದೇಶಕ್ಕಾಗಿ ಹೋರಾಡು ತ್ತಿಲ್ಲ. ಬದಲಾಗಿ ತನ್ನ ಎಡಪಂಥೀಯ ಧೋರಣೆಗಳ ಅನುಷ್ಠಾ ನಕ್ಕಾಗಿಯೇ ಶ್ರಮಿಸುತ್ತಿದೆ. ಈ ಹಿಂದೆ ಕೇರಳ, ಪಶ್ಚಿಮ ಬಂಗಾಳ ದಂತಹ ರಾಜ್ಯಗಳಲ್ಲಿ ಕಾಮರ್ಿಕರ ಹಿತಾಸಕ್ತಿಯ ರಕ್ಷಣೆಗೆ ಹೋರಾಟಗಳು ನಡೆಯುತ್ತಿತ್ತಾದರೂ ಅದು ಸಾಕಾರಗೊಳ್ಳು ತ್ತಿರಲಿಲ್ಲ. ಹೋರಾಟಗಳು ಬಂದ್, ಗಲಾಟೆ, ಪ್ರತಿಭಟನೆಗ ಳಲ್ಲೇ ಕಳೆದು ಹೋಗುತ್ತಿದ್ದವು. ಇಂದಿಗೂ ಕೆಲ ರಾಜ್ಯಗಳಲ್ಲಿ ಈ ಚಿತ್ರಣ ಬದಲಾಗಿಲ್ಲ. ಇನ್ನು ನಮ್ಮ ಸಕರ್ಾರ ಕಾಮರ್ಿಕರಿ ಗಾಗಿ ರೂಪಿಸುವ ಯೋಜನೆಗಳಂತೂ ಹಳ್ಳ ಹಿಡಿಯುತ್ತಿವೆ. ಏನೇ ಮಾಡಿದರೂ ಭಾರತದಂತ ರಾಷ್ಟ್ರದಲ್ಲಿ ಕಾಮರ್ಿಕ ವರ್ಗ ಎನ್ನುವುದು ಮೇಲೆ ಬರುವುದು ಕನಸಿನ ಮಾತೇ ಸರಿ. ತಂತ್ರ ಜ್ಞಾನಗಳು ಕಾಮರ್ಿಕರ ಕೆಲಸವನ್ನು ಕಿತ್ತುಕೊಳ್ಳುವ ಈ ದಿನಗ ಳಲ್ಲಿ ಶ್ರೀಮಂತ ವರ್ಗವೂ ಬಡ ಶ್ರಮಿಕನ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದೆ ಎನ್ನುವುದು ಅಷ್ಟೇ ಸತ್ಯ.