Monday, 1 April 2013

ಹಾಸ್ಟೆಲ್ ಯುವತಿಯರ ಸಾವಿನಲ್ಲಿ ಪೋಷಕರೂ ಪಾಲುದಾರರು!

ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಹೊರ ದೇಶ, ಹೊರ ರಾಜ್ಯ ಸೇರಿದಂತೆ ಸಮೀಪದ ಅದೆಷ್ಟೋ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುವ ಹೆಣ್ಮಕ್ಕಳ ದೊಡ್ಡ ದಂಡೇ ಇದೆ. ಆದರೆ ಇಂಥ ಒಂದು ಒಳ್ಳೆಯ ಉದ್ದೇಶವಿಟ್ಟು ಕೊಂಡು ಬರುವ ಈ ವರ್ಗ ಕೆಲವೊಮ್ಮೆ ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿವೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳು ಹತ್ತರಲ್ಲಿ ಒಂದು ಎಂಬಂತೆ ಮುಚ್ಚಿಹೋಗುತ್ತಿರುವುದು ವಿಪಯರ್ಾಸ. ಎಲ್ಲಿಂದಲೋ ಇಲ್ಲಿ ಬಂದು ಬದುಕಿಗೆ ಅಂತ್ಯ ಹಾಡುವವರ ಜೀವನದಲ್ಲಿ ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಗಳು ಕಾರಣವಾಗಿ ಕಂಡರೂ ಇಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳೇ ಎಲ್ಲವಕ್ಕೂ ಮೂಲ ಕಾರಣ ಎಂದರೆ ತಪ್ಪಿಲ್ಲ.
ಮನೆ ಬಿಟ್ಟು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯು ವವರು, ಇಲ್ಲಿನ ಸಾಫ್ಟ್ವೇರ್ ಸಂಸ್ಥೆ, ಮಾಲ್ ಇಲ್ಲವೇ ಯಾವು ದಾದರೂ ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ಗಲರ್್ಗಳಾಗಿ ದುಡಿ ಯುವವರ ವಾಸಸ್ಥಾನ ನಾಯಿಕೊಡೆಗಳಂತೆ ತಲೆಯೆತ್ತುವ ಪಿಜಿ ಸೆಂಟರ್ ಮತ್ತು ಹಾಸ್ಟೆಲ್ಗಳು. ಮೇಲ್ನೋಟಕ್ಕೆ ಇವೆಲ್ಲವೂ ಸುರಕ್ಷಿತ ತಾಣವಾಗಿ ಕಂಡರೂ ಇದರ ಒಳಗಿನ ಕಾಣದ ಲೋಕ ಮಾತ್ರ ತೀರಾ ಅಸಹ್ಯ ಹುಟ್ಟಿಸುತ್ತದೆ.
ಮಂಗಳೂರಿಗೆ ಬರುವ ಮುನ್ನ ತಮ್ಮ ತಮ್ಮ ಊರಿನಲ್ಲಿ ಸುಸಂಸ್ಕೃತರು, ಉತ್ತಮರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಯುವತಿಯರು ಇಲ್ಲಿ ಬಂದ ಒಂದೇ ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ವಿದ್ಯಮಾನಗಳು ನಡೆದಿವೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಷರಾ ಬರೆದು ಫೈಲ್ ಕ್ಲೋಸ್ ಮಾಡಿದ್ದೂ ಆಗಿದೆ. ಆದರೆ ಯಾರೊಬ್ಬರೂ ಈ ಎಲ್ಲಾ ಆತ್ಮಹತ್ಯೆಗಳ ಬೆನ್ನು ಬಿದ್ದಿಲ್ಲ ಎನ್ನುವುದು ವಿಪಯರ್ಾಸ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನವರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಶಿಕ್ಷಣ ಇಲ್ಲವೇ ಕೆಲಸ ಮಾಡಿ ಕೊಂಡಿದ್ದವರು. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ನೂರಾರು ಪಿಜಿಗಳು ಹತ್ತಾರು ಹಾಸ್ಟೆಲ್ಗಳಿವೆ. ಆದರೆ ಈ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ಗಳು ಅಧಿಕೃತ ಅಲ್ಲ ಎನ್ನುವುದು ಇಲ್ಲಿರುವ ಮತ್ತೊಂದು ಆಘಾತಕಾರಿ ಸಂಗತಿ! ಅದರಲ್ಲೂ ಹೆಚ್ಚಿನ ಪಿಜಿ ಸೆಂಟರ್ಗಳು ವಾಸದ ಮನೆಯ ಉದ್ದೇಶದಿಂದ ನಿಮರ್ಿಸಿ ಕೊಂಡವಾಗಿದ್ದು, ಇವಕ್ಕೆಲ್ಲಾ ಪಾಲಿಕೆ ಪಿಜಿ ಸೆಂಟರ್ ನಡೆಸಲು ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದರೂ ಒಂದಷ್ಟು ಕಾಲೇಜು ಹುಡುಗಿಯರನ್ನು ಇಲ್ಲವೇ ಕೆಲಸಕ್ಕೆ ಹೋಗುವ ಯುವತಿಯರನ್ನು ಒಟ್ಟು ಸೇರಿಸಿ ಪಿಜಿ ಹೆಸರಿನಲ್ಲಿ ಹಣ ಮಾಡುವವರ ದೊಡ್ಡ ದಂಡೇ ಇದೆ. ಈ ಪಿಜಿಗಳಲ್ಲಿ ಉಳಿದುಕೊಳ್ಳುವ ಹೆಣ್ಣುಮಕ್ಕಳು ರಾತ್ರಿ ಎಷ್ಟು ಗಂಟೆಗೆ ಬಂದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಉಳಿಸಿಕೊಂಡಿದ್ದ ಲೇಡಿಸ್ ಹಾಸ್ಟೆಲ್ಗಳು ಕೂಡ ಅವ್ಯವಸ್ಥೆಯ ಅಡ್ಡೆಯಾಗಿ ಬದಲಾಗುತ್ತಿದೆ. ಬರೋಬ್ಬರಿ 300 ಜನರಿಗೆ ಒಬ್ಬಳೇ ಒಬ್ಬ ವಾರ್ಡನ್ ಇರುವ ಹಾಸ್ಟೆಲ್ಗಳೂ ಇವೆ. ಒಂದು ವೇಳೆ ಇಲ್ಲಿನ ವಾರ್ಡನ್ ರಜೆ ಹಾಕಿ ಊರಿಗೆ ಹೋದರೆ ಕೇಳುವವರೇ ಇಲ್ಲ ಎಂಬಂಥ ಪರಿಸ್ಥಿತಿ. ಇನ್ನು ಇಲ್ಲಿನ ಯುವತಿಯರ ಹಾಜರಾತಿ, ಸಂದರ್ಶಕರ ದಾಖಲಾತಿ ಎಲ್ಲವೂ ಅಪ್ಡೇಟ್ ಆಗುವುದೇ ಇಲ್ಲ. ಒಬ್ಬ ಯುವತಿಗೆ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಶುಲ್ಕ ಪಡೆಯುವ ಈ ಖಾಸಗಿ ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎನ್ನುವುದು ಇಲ್ಲಿನ ದುರಂತ ಬದುಕು ಅನುಭವಿಸಿ ಬಂದವರ ಮಾತು. ಊರು ಬಿಟ್ಟು ಬಂದ ತಪ್ಪಿಗೆ ಅನಿವಾರ್ಯವಾಗಿ ಇಲ್ಲಿನ ನರಕಸದೃಶ ಬದುಕಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ.  
ಯುವತಿಯರು ದಾರಿ ತಪ್ಪಲು ಹಾಸ್ಟೆಲ್ ಮತ್ತು ಪಿಜಿಗಳ ಜೊತೆಗೆ ಅವರು ಕೆಲಸ ಮಾಡುವ ಕೇಂದ್ರಗಳು ಕೂಡ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದರಲ್ಲೂ ನಗರದ ಬಹುತೇಕ ಬಟ್ಟೆ ಅಂಗಡಿಗಳು, ನಗರದ ಪ್ರಮುಖ ಮಾಲ್ಗಳಲ್ಲಿನ ಖಾಸಗಿ ಸಂಸ್ಥೆಗಳು ಯುವತಿಯರನ್ನು ರಾತ್ರಿಯವರೆಗೂ ದುಡಿಸಿಕೊಳ್ಳುತ್ತದೆ. ಈ ಮಧ್ಯೆ ಈ ಯುವತಿಯರ ಪ್ರತೀದಿನದ ಚಲನವಲನಗಳ ಮೇಲೆ ಕಣ್ಣಿಡುವ ಪೋಲಿಗಳ ವರ್ಗದ ಕಾಟ ಬೇರೆ. ಕೆಲವೊಂದು ಯುವತಿಯರು ಇವುಗಳಿಗೆ ಕೇರ್ ಅನ್ನದೇ ತಮ್ಮ ಸೋಕಾಲ್ಡ್ `ಗೂಡು ಸೇರಿದರೆ, ಇನ್ನು ಕೆಲವರು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಈ ರೀತಿ ದಾರಿ ತಪ್ಪಿ ಆ ದಿನ ಬೇರೆಲ್ಲೋ ರಾತ್ರಿ ಕಳೆದರೂ  ಈ ಬಗ್ಗೆ ವಿಚಾರಿಸುವ ಗೋಜಿಗೆ ಯಾವೊಂದು ಹಾಸ್ಟೆಲ್ ಆಡಳಿತವೂ ಕೈ ಹಾಕುವುದಿಲ್ಲ. ಅಷ್ಟೇ ಯಾಕೆ? ಬಹುತೇಕ ಹಾಸ್ಟೆಲ್-ಪಿಜಿಗಳ ಆಡಳಿತದವರಲ್ಲಿ ಉಳಿದುಕೊಳ್ಳುವ ಯುವತಿಯರ ಮನೆ ವಿಳಾಸ ಇಲ್ಲವೇ ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ದಿನನಿತ್ಯ ಬರುವವರು ಒಂದು ದಿನ ಬಾರದಿದ್ದರೂ ಕೇಳುವ ಅಗತ್ಯತೆ ಪಿಜಿ ಸೆಂಟರ್ ಇಲ್ಲವೇ ಹಾಸ್ಟೆಲ್ ವಾರ್ಡನ್ಗಳಿಗೆ ಇಲ್ಲ ಎನ್ನುವುದೇ ದುರಂತ.
ಈ ರೀತಿ ದಾರಿ ತಪ್ಪುವ ಯುವತಿಯರು ಕೆಲ ತಿಂಗಳು ತಮಗೇ ಗೊತ್ತಿಲ್ಲದಂತೆ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಜ್ಞಾನೋದಯವಾಗುವುದು ಮಾತ್ರ ಹಲವು ತಿಂಗಳುಗಳೇ ಕಳೆದ ನಂತರ. ಹೀಗಾಗಿ ಬದುಕಿನ ಅಂತಿಮ ಕ್ಷಣ ಆತ್ಮಹತ್ಯೆಯ ರೂಪದಲ್ಲಿ ದುರಂತ ಅಂತ್ಯ ಕಾಣುತ್ತದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಎಲ್ಲೋ ಒಂದಿಬ್ಬರು ಸಾವಿಗೆ ಕಾರಣ ಕೊಟ್ಟುಹೋದರೆ, ನೂರರಲ್ಲಿ ತೊಂಬತ್ತು ಭಾಗದಷ್ಟು ಯುವತಿಯರು ಕಾರಣವನ್ನೇ ತಿಳಿಸದೆ ಇಹಲೋಕ ತ್ಯಜಿಸಿರುತ್ತಾರೆ. ಈ ಸಾವಿನ ದುಃಖ ತಡೆಯಲಾಗದೆ ಒಂದೇ ಸಮನೆ ಬೊಬ್ಬಿಡುವ ಈ ಹೆಣ್ಮಕ್ಕಳ ಕುಟುಂಬ ವರ್ಗವೂ ಸಾವಿನಲ್ಲಿ ಪಾಲುದಾರರು ಎಂಬುದು ನೆನಪಿರಲಿ. ವರ್ಷಗಟ್ಟಳೆ ಒಂಟಿಹೆಣ್ಣನ್ನು ಎಲ್ಲೋ ದೂರದಲ್ಲಿಟ್ಟು ಬೆಳೆಸಿದರೂ ಒಂದೇ ಒಂದು ಬಾರಿ ನೋಡಿಕೊಂಡು ಹೋಗುವ ಕನಿಷ್ಟ ಕಾಳಜಿಯೂ ಅವರಿಗಿರುವುದಿಲ್ಲ. ಹೀಗಾಗಿ ನಮಗೆ ಕೇಳುವವರೇ ಇಲ್ಲ ಅಂದುಕೊಂಡು ತಮ್ಮದೇ ಆದ ಸ್ವಾತಂತ್ರ್ಯ ಜೀವನ ನಡೆಸಿಕೊಂಡು ಯುವತಿಯರು ದಾರಿ ತಪ್ಪುವುದು ಸಾಮಾನ್ಯ ವಾಗಿದೆ. ಇಂದಿಗೂ ಬದುಕು ಕಳೆದುಕೊಳ್ಳುವ ಹೆಚ್ಚಿನ ಯುವತಿಯರು ಮುಗ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ  ಇದೇ ಮುಗ್ಧತೆ ದಾರಿ ತಪ್ಪಿದಾಗ ಮಾತ್ರ ಸಾವಿನಲ್ಲಿ ಅಂತ್ಯ ಕಾಣುತ್ತದೆ. ಈ ವೇಳೆ ಸಾವಿಗೆ ಕಾರಣವಾದ ಕಾಣದ ಕೈಗಳು ವಿಜೃಂಭಿಸಿ ಮರೆಯಾಗುತ್ತದೆ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದರೆ ತಪ್ಪಿಲ್ಲ.
ಧ್ವ

Sunday, 24 March 2013

ಕಾಣದ ಕಡಲಿಗೆ ಹಂಬಲಿಸಿದೆ ಮನ.... ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

ಕಾಣದ ಕಡಲಿಗೆ ಹಂಬಲಿಸಿದೆ ಮನ....

ನೀಲಾಕಾಶದ ಮಧ್ಯೆ ನನ್ನನ್ನವಳು ಕಾಯುತ್ತಿದ್ದಾಳೆ...!

 

ನವಿರಾದ ಬದುಕಿನ ಸುಶ್ರಾವ್ಯ ಹೆಜ್ಜೆ ಗುರುತು ಕಳೆದು ಹೋಗಿದೆ. ಆಕಾಶದಲ್ಲಿ ಚಂದ್ರನನ್ನು ಕಂಡು ಕಣ್ಣ ಬಿಂಬಗಳನ್ನು ಒಂದಾಗಿಸಿದ ಕ್ಷಣ ಎದೆಯೊಳಗೆ ಹೊತ್ತು ಗೊತ್ತಿಲ್ಲದೇ ಕಾಡುತ್ತಿದೆ. ದೇವಸ್ಥಾನದ ಮೆಟ್ಟಿಲ ತುದಿಯಲ್ಲಿ ಒಟ್ಟಾಗಿ ಇಟ್ಟ ಹೆಜ್ಜೆಗಳನ್ನು ಮರೆಯಲು ಮನಸ್ಸು ಒಪ್ಪುತ್ತಿಲ್ಲ. ಹಸಿರು ಪರಿಸರದ ಮಧ್ಯೆ ಗರಿ ಬಿಚ್ಚಿ ಕಳೆದ ಪ್ರತೀ ಕ್ಷಣದ ನೆನಪುಗಳೂ ಒತ್ತರಿಸಿ ಬರುತ್ತಿವೆ. ಆದರೇನೂ ಮಾಡುವುದು ...ದೂರವಾಗಿದ್ದಾಳೆ ಅವಳು....!
ವರ್ಷಗಳಿಂದ ಸುರಿಯದ ಕಣ್ಣೀರು ಇಂದು ಪ್ರತೀ ಕ್ಷಣವೂ ಕಟ್ಟೆಯೊಡೆದು ಧುಮ್ಮಿಕ್ಕುತ್ತಿದೆ. ಎಲ್ಲವೂ ನೆನಪುಗಳ ಮೆರವಣಿಗೆಯಲ್ಲಿ ಕಳೆದುಕೊಂಡ  ಆ ದಿನಗಳ ಸಣ್ಣದೊಂದು ಕುರುಹುಗಳಷ್ಟೇ....
ಒಂಟಿ ಜೀವದ ಒಬ್ಬಂಟಿ ಪಯಣದಲ್ಲಿ ಜಂಟಿಯಾದವಳು ಕಳೆದು ಹೋಗಿದ್ದಾಳೆ. ಆದರೆ ಅವಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲಾಗುತ್ತಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕಣ್ಣಿಗೆ ಕಾಣದ ಮನಸ್ಸು ಕೂಡ ಕಣ್ಣೀರು ಸುರಿಸಿದ ಅನುಭವ. ಹುಟ್ಟಿದಾಗಿನಿಂದ ಇದೇ ಮೊದಲ ಬಾರಿಯೋ ಎಂಬಂತೆ ಜೀವ ಕಳೆಯೇ ಇಲ್ಲದ ಬದುಕೊಂಡು ನನ್ನನ್ನು ಅಪ್ಪಿಕೊಂಡಿದೆ.  ಏನೇ ಆದರೂ ಈಗಿನ ಪ್ರತೀ ಕ್ಷಣ ನನ್ನ ಜೊತೆಯಾಗುತ್ತಿರುವುದು.....ಅಳು........ಅಳು.....ಅಳು........!
ನನಗ್ಯಾರೂ ಇಷ್ಟವಾಗದ ಎಲ್ಲರಿಗೂ ಇಷ್ಟವಾಗುವ ಒಬ್ಬಂಟಿ ಜೀವನ ನನ್ನದು. ಈ ಮದ್ಯೆ ಹೆತ್ತು-ಹೊತ್ತು ಬದುಕಲು ಕಲಿಸಿದ ತಾಯಿಯೆಂದರೆ ನನಗೆ ಪಂಚಪ್ರಾಣ. ಈ ಮಧ್ಯೆ ಹೆತ್ತಮ್ಮನ ಜೊತೆಗೆ ಜೀವನಕ್ಕೆ ಸ್ಫೂತರ್ಿಯಾದ ನನ್ನ ಪ್ರೀಮಾ ಅಕ್ಕ ಅಂದ್ರೆ ಇಷ್ಟ. ಇವರಿಬ್ಬರನ್ನು ಬಿಟ್ಟರೆ ಇನ್ಯಾರೂ ನನಗೆ ಅಷ್ಟು ಹತ್ತಿರವಲ್ಲ. ಆದರೆ ಸ್ವಭಾವತಃ ತೀರಾ ಸೆನ್ಸಿಟಿವ್ ಆದ ನನ್ನನ್ನು ಕಂಡರೆ ಎಲ್ಲರಿಗೂ ಇಷ್ಟ. ನನಗೂ ಇವರೆಲ್ಲರೂ ಇಷ್ಟವಾದರೂ ಅಮ್ಮ-ಅಕ್ಕನಷ್ಟು ಹತ್ತಿರವಲ್ಲ.
ನಿಧಾನಗತಿಯ ಬದುಕು, ಸಣ್ಣದೊಂದು ಆಸೆ, ಬಹುದೊಡ್ಡ ಉದ್ದೇಶ, ತೀರಾ ಸೆನ್ಸಿಟಿವ್ ಮನಸ್ಸು, ಈ ಮಧ್ಯೆ ಅರ್ಥ ಮಾಡಿಕೊಳ್ಳುವ ನನ್ನದೇ ಆದ ಜೀವಕ್ಕೆ ಮಾತ್ರ ಕೊರತೆ.. ಹೀಗೆ ಸಾಗುತ್ತಿದ್ದ ಜೀವನದ ಮಧ್ಯೆ ಸಿಕ್ಕವಳೇ ಪ್ರಮೀ. ನಗುವಿನಲ್ಲೇ ಇಷ್ಟವಾದವಳು, ಕಣ್ಣ ನೋಟಕ್ಕೆ ಮನಸ್ಸಿಗೆ ಹತ್ತಿರವಾಗಿದ್ದಳು, ತಡಮಾಡದೇ ಬದುಕು ಕಟ್ಟಿಕೊಳ್ಳುವ ನನ್ನದೊಂದು ಪುಟ್ಟ ಹಾದಿಯಲ್ಲಿ ಅವಳನ್ನು ಜೊತೆಯಾಗಿಸಿದೆ. ಸಿಕ್ಕ ಮೊದಲ ಕ್ಷಣದಲ್ಲೇ ತೀರಾ ಹೆಚ್ಚೇ ಎನಿಸುವಷ್ಟು ಇಷ್ಟವಾಗಿದ್ದಳು. ಬದುಕಿನ ಹಾದಿಯಲ್ಲಿ ಜೀವನದ ಕೊನೆಯವರೆಗೂ ಉಸಿರಾಗಿ ನಿಲ್ಲಲು ಇವಳೇ ಸೂಕ್ತ ಅಂದುಕೊಂಡು ಜೊತೆಯಾಗಿದ್ದೆ. ನನ್ನಷ್ಟೇ ಸೂಕ್ಷ್ಮ, ತೂಕ=ಎತ್ತರ ಎಲ್ಲದರಲ್ಲೂ ನನಗೆ ಫಫರ್ೆಕ್ಟ್ ಮ್ಯಾಚ್..! ಸಿಕ್ಕಾಗಲೆಲ್ಲಾ ಇವಳಿಂದ ಬಯಸಬಹುದಾದ ಇಷ್ಟವಾದ ಗಿಫ್ಟ್ ಮುಖದಲ್ಲಿ ಬೀಳುವ ಗುಳಿ ಕೆನ್ನೆಯ ನಗು ಮಾತ್ರ. ಯಾಕೋ ಗೊತ್ತಿಲ್ಲ ಹುಟ್ಟಿದ 22 ವರ್ಷದಲ್ಲಿ ಅಮ್ಮ- ಅಕ್ಕನ ನಂತರ ಪ್ರಮೀ ತುಂಬಾ ಇಷ್ಟವಾಗಿದ್ದಳು. ಪ್ರೀತಿ ಹೇಳಿಕೊಳ್ಳುವ ಸಣ್ಣದೊಂದು `ಪದ್ದತಿ' ಮುಗಿಸಿ ಒಂದೆರೆಡು ತಿಂಗಳಲ್ಲಿ ನಾವಿಬ್ಬರು ತುಂಬಾನೇ ಹತ್ತಿರವಾಗಿದ್ದೆವು. ಎಲ್ಲಾ ಪ್ರೇಮಿಗಳಂತೆ ದಿನದ ಮೂರು ಹೊತ್ತು ಫೋನ್ ಕಾಲ್ ಹರಟೆ, ವಾರಕ್ಕೆರೆಡು ಬಾರಿ ದೇವಸ್ಥಾನ.... ಹೀಗೆ ತಿರುಗಾಟ ನಮ್ಮಲ್ಲೂ ಇತ್ತು. ಪ್ರತೀ ಬಾರಿ ದೇವಸ್ಥಾನಕ್ಕೆ ಹೋದಾಗಲೂ ಇಬ್ಬರ ಹೆಸರಿನಲ್ಲೂ ಒಂದು ಕುಂಕುಮಾರ್ಚನೆ ಪರ್ಮನೆಂಟ್ ಎಂಬಂತಾಗಿತ್ತು. ಹೀಗಾಗಿಯೋ ಏನೋ ನಮ್ಮಿಬ್ಬರ ಹೆಸರು, ರಾಶಿ-ನಕ್ಷತ್ರ ಇಲ್ಲಿನ ಅರ್ಚಕರಿಗೆ ಅಪ್ಡೇಟ್ ಆಗಿತ್ತು. ಒಟ್ಟಿನಲ್ಲಿ ನಾವಿಬ್ಬರೂ ಈ ದೇವಸ್ಥಾನದ ಖಾಯಂ ಭಕ್ತರು ಎಂದರೆ ತಪ್ಪಿಲ್ಲ...!
ಪ್ರಮಿಯದ್ದು ನನಗಿಂತ ಎರಡು ವರ್ಷ ಸಣ್ಣ ವಯಸ್ಸು. ಹಾಗಾಗಿ ಕೆಲವೊಮ್ಮೆ ಮಕ್ಕಳಂತ ಸ್ವಭಾವ. ಬದುಕನ್ನು ಅಷ್ಟು ಸೀರಿಯಸ್ ಅಂದುಕೊಳ್ಳದಿದ್ದರೂ ಒಂದಷ್ಟು ಸೆನ್ಸಿಟಿವ್ ಆಗಿದ್ದವಳು ಪ್ರಮಿ. ಆದರೆ ಈಗ ಪ್ರಮಿ ದೂರವಾಗಿದ್ದಾಳೆ. ಕಾಣದ ಲೋಕಕ್ಕೆ ಒಬ್ಬಂಟಿ ಪಯಣಿಗಳಾಗಿ ಹೆಜ್ಜೆಯಿಟ್ಟಿದ್ದಾಳೆ. ಆದರೆ ದೂರವಾದಾಗ ಮಾತ್ರ ಕಾರಣ ಹೇಳದೆ ಮಾಯವಾಗಿದ್ದಾಳೆ. ತನ್ನ ಕೊನೆಯ ಭೇಟಿಯಲ್ಲಿ ಪ್ರಮಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ......ಎಲ್ಲವೂ ಒಂಟಿ ಪಯಣದಲ್ಲಿ ದೋಣಿ ಮುಳುಗಿದ ಅನುಭವ...
ದೂರವಾಗುವ ಮುನ್ನ ಕೊನೆಯದಾಗಿ ಮಾತಿಗೆ ಸಿಕ್ಕವಳು ಸ್ವಲ್ಪ ಹೆಚ್ಚೇ ಎನ್ನುವಂತೆ ನನ್ನ ಜೊತೆ ಬೆರೆತಿದ್ದಳು. ಜೀವನದಲ್ಲಿ ಎಲ್ಲವನ್ನೂ ಅಥರ್ೈಸಿಕೊಂಡದಂತೆ ನನ್ನ ಎದುರಿಗೆ ನಿಂತಿದ್ದಳು. ಒಂದು ಕ್ಷಣವೂ ಭಾವುಕಳಾಗದೆ ಮರುದಿನವೇ ನನ್ನ ಜೊತೆಗಿನ ಮಾತಿಗೆ ಶಾಶ್ವತ ಇತೀಶ್ರೀ ಹಾಡಿದ್ದಾಳೆ..
ಪ್ರಮೀ ಹೋದ ಬಳಿಕ ಅವಳು ದೂರವಾದ ಬಗ್ಗೆ ಸಾಕಷ್ಟು ಚಚರ್ೆ ನಡೆದಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಪ್ರಮಿಯನ್ನು ನಾನು ಚಚರ್ೆಯ ವಸ್ತುವಾಗಿ ಬಳಸುವುದಿಲ್ಲ. ಆ ಜೀವ ನನ್ನನ್ನು ಪ್ರತೀ ಕ್ಷಣವೂ ಕಣ್ಣ ಮೇಲೆ ಕಣ್ಣಿಟ್ಟು ಕಾಯುತ್ತಿರುತ್ತದೆ. ಇದು ಅವಳ ಮೇಲಿನ ಭಯವಲ್ಲ. ಬದಲಾಗಿ ಆಕೆಯ ಮೇಲೆ ನಾನಿಟ್ಟಿದ್ದ ಪ್ರೀತಿ. ನನ್ನ ಜೊತೆಯಾದ ನಂತರ ಪ್ರಮಿ ನನಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಕೊಟ್ಟದ್ದು....ಅಳಿಸಲಾಗದಷ್ಟು ಪ್ರೀತಿ ಮಾತ್ರ. ಪ್ರಮಿಯ ಮನಸ್ಸು ಕಾಣದ ಕಡಲಿಗೆ ಹಂಬಲಿಸಿ ದೂರವಾಗಿದೆ....ಎಲ್ಲೇ ಇದ್ದರೂ ನನ್ನವಳಾಗಿಯೇ ಇರು ಎಂದು ಆಶಿಸುತ್ತೇನೆ.............
ಧ್ವನಿ

Friday, 1 February 2013

ಹಾಗೇ ಸುಮ್ಮನೆ ಒಮ್ಮೆ `ವಿಶ್ವರೂಪಂ' ನೋಡಿ ಬನ್ನಿ

ತಮಿಳು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡದೆ ತುಂಬಾ ದಿನಗಳೇ ಆದವು. ಇಂದಿನ ಕನ್ನಡ ಸಿನಿಮಾಗಳ ಅಬ್ಬರದ ಮಧ್ಯೆ ಅವುಗಳನ್ನು ನೋಡುವುದರಲ್ಲೇ ಕಳೆದು ಹೋಗಿದ್ದೆ. ಆದರೆ ಇತ್ತೀಚಿಗೆ ನೋಡಿದ `ಎದೆಗಾರಿಕೆ ಬಿಟ್ಟರೆ ಬೇರ್ಯಾವ ಚಿತ್ರವೂ ಅಷ್ಟಾಗಿ ಹಿಡಿಸಲಿಲ್ಲ. ಹಾಗಂತ ಭಾಷೆ ಬದಲಿಸಿ ಅನ್ಯ ಭಾಷೆಯ ಸಿನಿಮಾ ನೋಡೋಣವೆಂದರೆ ಪತ್ರಿಕಾ ವಿಮಶರ್ೆಗಳೇ ಸಿನಿಮಾ ಮಂದಿರಗಳಿಗೆ ಹೋಗದಂತೆ ತಡೆಯುತ್ತಿದ್ದವು. ಆದರೂ  ಇಂದು ಶುಕ್ರವಾರ ಒಂದು ತಮಿಳು ಸಿನಿಮಾ ನೋಡಿಯೇ ಬಿಟ್ಟ. ಈ ಸಿನಿಮಾದ ಬಗ್ಗೆ ನನ್ನೊಳಗಿದ್ದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಪಡೆಯುವ ಸಣ್ಣದೊಂದು ಪ್ರಯತ್ನ ಇದಾಗಿತ್ತು. ಆ ಸಿನಿಮಾ ಬೇರಾವುದೂ ಅಲ್ಲ. ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿ ನಿಷೇಧದ ಮಧ್ಯೆ ಅಲ್ಲಲ್ಲಿ ಪ್ರದರ್ಶನ ಕಾಣುತ್ತಿರುವ `ವಿಶ್ವರೂಪಂ..!
ಪತ್ರಿಕೆಯಲ್ಲಿ ಕೆಲಸ ಮಾಡುವ ಕಾರಣ ಬಿಡುಗಡೆಗೂ ಮುನ್ನವೇ ಸಿನಿಮಾದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೆ. ಏನದು ವಿಶ್ವರೂಪಂ ಎಂಬ ಬಗ್ಗೆ ಗೂಗಲ್ನಲ್ಲಿ ಜಾಲಾಡಿದ್ದೆ. ಅದರಲ್ಲೂ ಈ ಸಿನಿಮಾ ದೇಶದ ಭದ್ರತೆಗೆ ಸವಾಲೊಡ್ಡುತ್ತದೆ ಎಂಬ ವಿವಾದ ಎದ್ದ ಮೇಲಂತೂ ಸಿನಿಮಾದ ಬಗ್ಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಯೋಚಿಸತೊಡಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾತ್ರ ಆಗಲೇ ಇಲ್ಲ. ಆದರೆ ಯಾವಾಗ ನಟನೆಯಲ್ಲೇ ಅತೀ ಹೆಚ್ಚು ಪ್ರಶಸ್ತಿ ಪಡೆದ ನಟ ಕಮಲ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರೋ ಆಗಲೇ ಒಂದು ಹಂತಕ್ಕೆ ಸಿನಿಮಾವೊಂದು ಸೃಷ್ಟಿಸಿದ ನೈಜ ವಿವಾದದ ಬಗ್ಗೆ ಅರಿವಾಯಿತು. ಇಷ್ಟಾದ ಮೇಲೂ ಸಿನಿಮಾ ನೋಡದೆ ಹೋದರೆ ಸರಿ ಬರಲ್ಲ ಅಂತ ತಿಳಿದು, ಶುಕ್ರವಾರ ನಗರದ ಪ್ಲಾಟಿನಂ ಚಿತ್ರ ಮಂದಿರಕ್ಕೆ ಹೋಗಿದ್ದೆ.   ಎರಡೂವರೆ ಘಂಟೆಯ ಸಿನಿಮಾದಲ್ಲಿ ತೋರಿಸಲಾದ ವಿವಾದವಾದರೂ ಏನಪ್ಪ ಅಂತ ಕಣ್ಣು ಮಿಟುಕಿಸದೆ ಗಮನಿಸಿದೆ. ಆದರೆ ನನ್ನ ಪ್ರಕಾರ ಸಿನಿಮಾದಲ್ಲಿ ಅಂತಹ ಯಾವುದೇ ವಿವಾದ ವೈಯಕ್ತಿಕವಾಗಿ ನನಗೆ ಕಂಡು ಬರಲಿಲ್ಲ.
ಕಮಲ್ ಹಾಸನ್ ಒಬ್ಬ ಅಧ್ಬುತ ನಟ. ಇಡೀ ಭಾರತದಲ್ಲೇ ನಟನೆಗಾಗಿ ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದಾಖಲೆಯೂ ಕಮಲ್ ಮೇಲಿದೆ. ಇಂತಹ ಕಮಲ್ಹಾಸನ್ ತಾನೇ ದುಡ್ಡು ಹಾಕಿ, ನಿದರ್ೇಶಿಸಿ, ನಟಿಸಿ ಸಿನಿಮಾ ಮಾಡುತ್ತಾರೆಂದರೆ ಸಹಜವಾಗಿಯೇ ಕುತೂಹಲ ಇದ್ದದ್ದೇ. ಅದರಲ್ಲೂ ವಿಭಿನ್ನವಾದ ಶೀಷರ್ಿಕೆಯ ಮೂಲಕ ಪ್ರೇಕ್ಷಕನ ಮೆದುಳಿನ ಕದ ತಟ್ಟುವುದು ಕಮಲ್ `ಕಮಾಲ್. ಆದರೆ ಕಮಲ್ಹಾಸನ್ರ ವಿಶ್ವರೂಪಂ ಮಾತ್ರ ಪಕ್ಕಾ ವಿಭಿನ್ನ.
ಮುಸ್ಲಿಮರನ್ನು ಉಗ್ರರಂತೆ ಚಿತ್ರಿಸಲಾಗಿದೆ ಎನ್ನುವುದು ಈಗಿರುವ ವಿವಾದ. ಚಿತ್ರ ನೋಡುತ್ತಾ ಹೋದಂತೆ ಇಂತಹ ಅನುಭವ ಎಲ್ಲೂ ಆಗುವುದಿಲ್ಲ. ಕಮಲ್ ಹೇಳಿದಂತೆ ಎಲ್ಲವೂ ಅಪಘಾನಿಸ್ಥಾನದಲ್ಲಿ ನಡೆಯುವ ಟೆರರ್ ಸ್ಟೋರಿ ಅನ್ನುವುದು ಸ್ಪಷ್ಟ. ನಾವು ದಿನಬೆಳಗಾದರೆ ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ನೋಡುವ ಅಂತರಾಷ್ಟ್ರೀಯ ಸುದ್ದಿಗಳೇ ಚಿತ್ರದ ಕೇಂದ್ರ ಬಿಂದು. ಒಬ್ಬ ಭಾರತೀಯ ನಟ ಕಮ್ ನಿದರ್ೆಶಕ ಅಪಘಾನಿಸ್ಥಾನದ ಉಗ್ರ ಜಗತ್ತಿನ ಸಂಪೂರ್ಣ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾನೆ ಎನ್ನುವುದು ಚಿತ್ರ ನೋಡಿದವರ ಗಮನಕ್ಕೆ ಬರುತ್ತದೆ. ನ್ಯಾಟೋ ಪಡೆಗಳು ಅಪಘಾನಿಸ್ಥಾನದ ಉಗ್ರ ಅಡಗುತಾಣಗಳ ಮೇಲೆ ನಡೆಸುವ ದಾಳಿಯನ್ನು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಸಲಾಗಿದೆ. ಆದರೆ ಎಲ್ಲ್ಲೂ ಕೂಡ ಭಾರತೀಯ ಮುಸ್ಲಿಮರನ್ನು ಮಾತ್ರ ಉಗ್ರರಂತೆ ಚಿತ್ರಿಸಿಲ್ಲ ಎನ್ನುವುದು ಅಷ್ಟೇ ಸತ್ಯ.
ಕಮಲ್ ಒಬ್ಬ ಅಪ್ರತಿಮ ನಟ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ  ಈತನಲ್ಲೂ ಓರ್ವ ಅಧ್ಬುತ ನಿದರ್ೇಶಕನಿ ದ್ದಾನೆ ಎನ್ನುವುದು ಮಾತ್ರ ವಿಶ್ವರೂಪಂನಲ್ಲಿ ಸಾಬೀತಾಗುತ್ತದೆ. ಇಡೀ ಚಿತ್ರ ಉಗ್ರರ ಸುತ್ತ ಗಿರಕಿ ಹೊಡೆದರೂ ಸಿನಿಮಾದಲ್ಲಿ ಭಾರತೀಯರಿಗೆ ಎಳ್ಳಷ್ಟೂ ನೋವು ತರುವ ಸನ್ನಿವೇಶಗಳನ್ನು ಕಮಲ್ ಸೃಷ್ಟಿಸಿಲ್ಲ. ಅಷ್ಟೇ ಯಾಕೆ ಸಿನಿಮಾದಲ್ಲಿ ತೋರಿಸಲಾದ ಸ್ಥಳಗಳು ಕೂಡ ಭಾರತದ್ದಲ್ಲ. (ಸಿನಿಮಾದಲ್ಲಿ ತೋರಿಸಲಾಗಿರುವಂತೆ)
95ಕೋಟಿ ಸುರಿದು ಕಮಲ್ ಸಿನಿಮಾ ಮಾಡಿದ್ದಾರೆ ಅಂದಾಗ ಕಮಲ್ ಬಗ್ಗೆ ಸಹಜವಾಗಿಯೇ ಅಭಿಮಾನವಿತ್ತು. ಈ ಅಭಿಮಾನ ಸಿನಿಮಾ ನೋಡಿದ ಮೇಲೆ ಇನ್ನಷ್ಟು ಹೆಚ್ಚಾಗಿದೆ. ನಟನೊಬ್ಬ ಸಿನಿಮಾದ ಮೇಲೆ ಈ ಮಟ್ಟಿನ ಭರವಸೆಯಿಟ್ಟು, ಇಂದಿನ ಲವ್ಸ್ಟೋರಿಗಳ ಮಧ್ಯೆ ಇಂತಹ ಸಿನಿಮಾ ನಿಮರ್ಿಸಿರುವುದು ನಿಜಕೂ ಗ್ರೇಟ್ ಅನಿಸದೆ ಇರದು. ಇಡೀ ಸಿನಿಮಾ ವೀಕ್ಷಿಸುವಾಗ ಕಮಲ್ ಹಣದ ವಿಚಾರದಲ್ಲಿ ರಾಜಿಯಾದಂತೆ ತೋರುತ್ತಿಲ್ಲ. ಕಮಲ್ ಎಂಟ್ರಿ ಕೊಟ್ಟಾಗ ಇಂದಿಗೂ ಮಂಗಳೂರಿನ ಥಿಯೇಟರ್ಗಳಲ್ಲೇ ವಿಶಿಲ್, ಚಪ್ಪಾಲೆ ಎಲ್ಲೆ ಮೀರುತ್ತಿದೆ ಎಂದರೆ ಊಹಿಸಿ...ಕಮಲ್ ಖದರ್ ಎಷ್ಟಿರಬೇಡ ಎನ್ನುವುದನ್ನು.
ಕೆಲ ಮುಸ್ಲಿಂ ಮುಖಂಡರು ಹೇಳುವಂತೆ `ವಿಶ್ವರೂಪಂ ದೇಶದ ಭದ್ರೆತೆಗೆ ಹಾನಿ ಮಾಡುವುದೇ ಆದರೆ ಶಾರುಖ್ ಖಾನ್ರ `ಮೈ ನೇಮ್ ಈಸ್ ಖಾನ್ ನಿಂದ ಇಡೀ ದೇಶವೇ ಹೊತ್ತಿ ಉರಿಯ ಬೇಕಿತ್ತು.,. ಆದರೆ ಎಲ್ಲೂ ಹಾಗಾಗಿಲ್ಲ. ಮೈ ನೇಮ್ ಈಸ್ ಖಾನ್ನಲ್ಲಿ ಶಾರುಕ್ ಪದೇ ಪದೇ ಬಳಸುವ `ಆ್ಯಮ್ ಖಾನ್, ಬಟ್ ನಾಟ್ ಟೆರರಿಸ್ಟ್ ಎಂಬ ಒಂದು ಪದವನ್ನೇ ಗಮನಿಸಿ. ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲು ಈ ಡೈಲಾಗ್ ಸಾಕಲ್ಲವೇ? ಆದರೆ ಆಗ ಮಾತ್ರ ಯಾರಿಗೂ ಚಿತ್ರದಲ್ಲಿ ವಿವಾದದ ವಸ್ತು ಕಾಣಲಿಲ್ಲ. ಮೈ ನೇಮ್ ಇಸ್ ಖಾನ್ ಗೆದ್ದಿತು.....!?
ವಿಶ್ವರೂಪಂನಲ್ಲಿ `ಅಲ್ಲಾ ಅಕ್ಬರ್, ದುವಾ ಎಂಬ ಕೆಲವೊಂದು ಮುಸ್ಲಿಂ ಶಬ್ದಗಳನ್ನು ಬಳಸಿದ್ದನ್ನು ಬಿಟ್ಟರೆ ಎಲ್ಲೂ ಮುಸ್ಲಿಂ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ ಎನ್ನುವುದು ನನ್ನ ವೈಯಕ್ತ್ತಿಕ ಅಭಿಪ್ರಾಯ. ಆದರೇನು ಮಾಡುವುದು ನಮ್ಮ ದೇಶದ ಹೊಲಸು ರಾಜಕೀಯದಲ್ಲಿ `ವಿಶ್ವರೂಪಂ ವಿರೂಪಗೊಳ್ಳುತ್ತಿದೆಯಷ್ಟೇ..
ನೆನಪಿರಲಿ, ಸಿನಿಮಾ ಎನ್ನುವುದು ಮನೋರಂಜನಾ ಮಾಧ್ಯಮ. ಈ ಮಾಧ್ಯಮದಲ್ಲಿ ಬೇಕೆಂದೇ ವಿವಾದಗಳನ್ನು ಸೃಷ್ಟಿಸುವವರಿದ್ದಾರೆ. ಕಾರಣ ಸಿನಿಮಾ ಗೆಲ್ಲಬೇಕು ಎನ್ನುವುದು. ಆದರೆ ಕಮಲ್ ಎಲ್ಲೂ ವಿವಾದ ಸೃಷ್ಟಿಸಿಲ್ಲ. ವಿವಾದ ಎನ್ನುವುದು ತಾನಾಗಿಯೇ ಹುಟ್ಟಿಕೊಂಡಿದೆ. 95 ಕೋಟಿ ಸುರಿದು ದೇಶದ ಮಹಾನ್ ಕಲಾವಿದನೊಬ್ಬ ತನ್ನ ಚಿತ್ರದಿಂದ ನಷ್ಟವಾಗಿದೆ ಎಂದು ಕಣ್ಣೀರಿಡುತ್ತಿದ್ದಾನೆಂದರೆ ಏನರ್ಥ? ಅಷ್ಟಕ್ಕೂ ಟೆರರಿಸಂ ಎಂಬ ವಸ್ತು ವಿಷಯದಲ್ಲಿ ಎಷ್ಟು ಸಿನಿಮಾಗಳು ಬಂದು ಹೋಗಿಲ್ಲ ಹೇಳಿ?
ಇನ್ನಾದರೂ ಸಿನಿಮಾಗಳನ್ನು ವೈಯಕ್ತಿಕ ಹಿತದೃಷ್ಟಿಯಿಂದ ನೋಡುವುದು ಬೇಡ. ಅಷ್ಟಕ್ಕೂ ವಿಶ್ವರೂಪಂ ಆ ಮಟ್ಟಿಗೆ ವಿವಾದ ಸೃಷ್ಟಿಸಿದ ಸಿನಿಮಾವೂ ಅಲ್ಲ. ನೆನೆಪಿರಲಿ, ಇದು ನನ್ನೊಬ್ಬನ ವೈಯಕ್ತಿಕ ಅಭಿಪ್ರಾಯವಾದರೂ  ಹಾಗೇ ಸುಮ್ಮನೆ ಸಿನಿಮಾ ನೋಡಿ ಬನ್ನಿ, ಮನೋರಂಜನೆ ಸಿಗದಿದ್ದರೂ ವಿಶ್ವರೂಪಂನಲ್ಲಿ ವಿವಾದವಿದೆಯೇ ಎಂಬ ಪ್ರಶ್ನೆಗೆ ಉತ್ತರವಾದರೂ ಸಿಗಬಹುದು.
                                                                                                                                                       ಧ್ವನಿ  

Tuesday, 20 November 2012

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಆಳೆತ್ತರದ ನೋವಿಗೆ ಉತ್ತರ ನೀಡೋದು ಕಣ್ಣೀರೊಂದೇ...!

ಹುಟ್ಟು ಸಾವಿನ ಮಧ್ಯೆ ಬದುಕು ಶೂನ್ಯ್ ಅಂದುಕೊಂಡವನು ನಾನು. ಜೀವನದ ಗತ ವಿದ್ಯಮಾನಗಳನ್ನು ನೆನೆದು ಪರಿತಪಿಸುವಷ್ಟು ಶ್ರೀಮಂತನಂತೂ ನಾನು ಅಲ್ಲವೇ ಅಲ್ಲ. ಆದರೂ ಶ್ರೀಮಂತಿಕೆಯೇ ನಳನಳಿಸುತ್ತಿದ್ದ್ ಪ್ರೀತಿ ತುಂಬಿದ ಮನಸ್ಸೊಂದು ದೂರವಾದಾಗ ಸುಮ್ಮನೆ ಅತ್ತಿದ್ದೆ..! ಕಣ್ಣು ನನ್ನ ಮಾತು ಕೇಳದೆ ಒದ್ದೆಯಾಗಿತ್ತು...! ಆ ಕ್ಷಣವನ್ನು ಅರ್ಥಯಿಸುವ ಮುನ್ನವೇ ದೂರವಾಗಿದ್ದಳು ಅವಳು....

ಭೂಮಿ ಆಕಾಶದ ನಡುವಿನ ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರೀತಿ ಎಂದರೆ ಏನು ಎಂದು ಅರಿಯುವ ಮುನ್ನವೇ ಹತ್ತಿರವಾಗಿದ್ದಳು. ಆದರೆ ಎಲ್ಲರಂತೆ ಕ್ಷಣಿಕ ಸುಖ ನೀಡಬಹುದು ಎನ್ನುವ ಕೆಲವೇ ಸೆಕೆಂಡುಗಳ ಗೆಳತಿಯಾಗಿಯಲ್ಲ...ಬದಲಾಗಿ ಜೀವನ ಪೂರ್ತಿ ಕಣ್ಣ ಬಿಂಬಗಳನ್ನು ಒಂದಾಗಿಸುತ್ತಾಳೆ ಎಂಬ ಜೀವನ ಕೊನೆಯಾಗುವವರೆಗಿನ ಸಖಿಯಾಗಿ...
ಆ ಕ್ಷಣವೇ ನನ್ನ ಜೀವನದ ಕನಸಿನ ಕನ್ಯೆಗೊಂದು ರೂಪ ಕೊಟ್ಟಿದ್ದೆ...ಮುಂದಿನ ಜೀವನದ ಬಗ್ಗೆ ಒಂದೇ ಸಮನೆ ಚಿಂತಿಸಿದ್ದೆ...ಸಾಧ್ಯ- ಅಸಾಧ್ಯತೆಗಳನ್ನು ನೆನೆದು ಅತ್ತಿದ್ದೆ..ನಕ್ಕಿದ್ದೆ..!
ಆದರೀಗ ಎಲ್ಲವೂ ಭ್ರಮಾಲೋಕದ ಒಂಟಿ ಪಯಣದಲ್ಲಿ ಕನಸಿನ ದೋಣಿ ಮುಳುಗಿದ ಪರಿಸ್ಥಿತಿ. ಎಲ್ಲವೂ ಮುಗಿದ್ ಮೇಲೆ ಜೀವನದ ಶೂನ್ಯ್ ವೇಳೆಯಲ್ಲಿ ಮುಳುಗೆದ್ದ್ ಅನುಭವ.
ಕಣ್ಣ ನೋಟಕ್ಕೆ ಬೋಲ್ಡ್ ಆಗುವವರ ಮಧ್ಯೆ, ಮೆಸೇಜ್ಗಳಲ್ಲಿ ತೇಲಿ ಹೋಗುವ ವರ್ಗದ ನಡುವೆ ತೀರಾ ವಿಭಿನ್ನ ಎನಿಸುವಂಥವಳು ಇವಳು....ಕೋಪದ ಪ್ರಶ್ನೆಗಳಿಗೆ ಇವಳಿಂದ ಬಯಸಬಹುದಾದ ಉತ್ತರ ಒಂದೇ..ಅದು ನಗು....!
ಎಲ್ಲವೂ ವಿಧಿ ಲಿಖಿತ ಎನ್ನುತ್ತಾ ವಿಧಿಯ ಆಟದ ಮಧ್ಯೆ ಈಗಷ್ಟೇ ಸಣ್ಣದೊಂದು ಬದುಕು ಕಟ್ಟಿಕೊಂಡಿದ್ದಾಳೆ. ನನ್ನ ಕಣ್ಣಿಗೆ ಮಗುವಾಗಿ ಕಂಡವಳು ತೊಟ್ಟಿಲು ತೂಗುವ್ ಹಂತಕ್ಕೆ ಬಂದಿದ್ದಾಳೆ. ಜೀವನದ ನೇರ ದಾರಿಯ ಮಧ್ಯೆ ಬಿದ್ದಿರುವ ಆಳೆತ್ತರದ ಮರಗಳನ್ನು ಎತ್ತಿ ಎಸೆದು ಮುಂದೆ ಸಾಗಬೇಕಾದ ಅನಿವಾರ್ಯತೆ ನನ್ನದಾದರೆ ತನ್ನ ದಾರಿಯ ಮಧ್ಯೆ ಬಿದ್ದಿರುವ ಮರದ ಎಲೆಗಳನ್ನು ಗುಡಿಸಿ ಸಾಗಬೇಕಾದ ಸಣ್ಣದೊಂದು ಪ್ರಯತ್ನ್ ನನ್ನವಳದ್ದು....
ವಿನಯಕ್ಕೆ ಉತ್ತರ....ಪ್ರೀತಿಗೆ ಅರ್ಥ....ಸ್ನೇಹಕ್ಕೆ ಸಾಕ್ಷಿ...ನಗುವಿಗೆ ಉದಾಹರಣೆ.....ಹೀಗೆ ನಾನರಿಯದ ಸಾಕಷ್ಟು ಪ್ರಶ್ನೆಗಳಿಗೆ ಸಾಲು ಸಾಲು ಉತ್ತರ ನೀಡದೆ ಜೀವನಕ್ಕೆ ಹತ್ತಿರವಾದ ಮುಗ್ಡ ಮನಸ್ಸಿನ ಹೆಣ್ಣಿವಳು...
ಪ್ರತೀ ಬಾರಿ ಜೀವ, ಜೀವನದ ಬಗ್ಗೆ ಚಿಂತಿಸುವ ನಾನು ಇಂದಿಗೂ ಕಳೆದು ಹೋದ ಜೀವಗಳನ್ನು ನೆನೆದು ಫೀಲ್ ಆಗಿದ್ದೇನೆ. ಈ ಎಲ್ಲಾ ನೋವುಗಳು ಜೀವನ ಪೂರ್ತಿ ಹೀಗೇ ಇರ್ಲಿ ಎನ್ನುವುದು ನನ್ನ ಆಸೆ....!
ಸಿಗದ ಪ್ರೀತಿಯ ಮಧ್ಯೆ, ಕಳೆದು ಹೋದ ಜೀವಗಳ ನಡುವೆ ನನಗೆ ಮರೆಯದ ಉಡುಗೊರೆ ಎಂದರೆ ಇಂಗ್ಲೀಷ್ ಭಾಷೆಯ `ಫೀಲ್' ಎಂಬ ಸಣ್ಣದೊಂದು ನೋವಷ್ಟೇ...
ನನ್ನ ಅದೆಷ್ಟೋ ಸಮಸ್ಯೆಗಳಿಗೆ ಸಾಂತ್ವನ ಎಂಬ ಒಂದೊಳ್ಳಯ ಮಾತು ನೀಡದ ಸಮಾಧಾನವನ್ನು ಒತ್ತರಿಸಿ ಬಂದ....`ಕಣ್ಣೀರು' ನೀಡಿದೆ...!
ಗೆಳೆಯರೇ, ಇದೊಂದು ಸುಮ್ಮನೆ ಕೂತಾಗ ಹುಟ್ಟಿಕೊಂಡ ಕಾಲ್ಪನಿಕ ಬರಹವಷ್ಟೇ....
  ಕೆಲವೊಮ್ಮೆ ಕಥೆಗಳೇ ಜೀವನವಾಗಬಹುದು ಅಲ್ಲವೇ....!

                                                                                                                                ಧ್ವನಿ








Friday, 9 November 2012

 ಗಡ್ಕರಿ ಹೇಳಿಕೆಗೆ ಎಬಿವಿಪಿ ಪ್ರತಿಭಟಿಸಿಲ್ಲ ಯಾಕೆ?

 

 ಕೆಲ ತಿಂಗಳ ಹಿಂದಷ್ಟೇ ಕನ್ನಡದ ಖ್ಯಾತ ದಿನಪತ್ರಿಕೆ ಪ್ರಜಾವಾಣಿಯ ಸಹಸಂಪಾದಕರಾದ  ದಿನೇಶ್ ಅಮೀನ್ ಮಟ್ಟುರವರ ವಿವೇಕಾನಂದರ ಕುರಿತಾದ ಲೇಖನ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದರಲ್ಲೂ ಎಬಿವಿಪಿ ಎಂಬ ರಾಜಕೀಯ ಪ್ರೇರಿತ ಸಂಘಟನೆಯೊಂದು  ಪತ್ರಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿತು. ಇವಿಷ್ಟೇ ಅಲ್ಲದೇ ಲೇಖಕ ಮಟ್ಟುರವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದ ಬಗ್ಗೆಯೂ ಸುದ್ದಿಯಾಗಿತ್ತು. ಅಷ್ಟಕ್ಕೂ ಅಂದು ದಿನೇಶ್ ಮಟ್ಟು ವಿವೇಕಾನಂದರ ಬಗ್ಗೆ ಎಲ್ಲೂ ಅವಹೇಳನಕಾರಿಯಾಗಿ ಬರೆದಿರಲಿಲ್ಲ. ಸ್ವತಃ ವಿವೇಕಾನಂದರು ಹೇಳಿದ ಮಾತುಗಳನ್ನೇ ಮತ್ತೆ ಪುನರುಚ್ಚರಿಸಿದ್ದರಷ್ಟೇ. ಆದರೆ ದೇಶಪ್ರೇಮದ ಹೆಸರಿನಲ್ಲಿ ಎಬಿವಿಪಿ ಮಾತ್ರ ದಾಂಧಲೆ ನಡೆಸಿ ಗಲಾಟೆ ಎಬ್ಬಿಸಿತು.
ಈ ಎಲ್ಲಾ ಘಟನೆಯನ್ನು ಮತ್ತೆ ನೆನಪಿಸಲು ಕಾರಣವಿದೆ. ಮೊನ್ನೆಯಷ್ಟೇ ಹಿಂದುತ್ವದ ಕಾಖರ್ಾನೆಯಾದ ಆರ್ಎಸ್ಎಸ್ ಗರಡಿಯಿಂದ ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ವಿವೇಕಾನಂದರ ಬಗ್ಗೆ ಕೀಳಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಈ ವೇಳೆ ದೇಶಪ್ರೇಮಿ ಸಂಘಟನೆ ಎಬಿವಿಪಿ ಮಾತ್ರ ಈ ಹೇಳಿಕೆಯ ವಿರುದ್ದವಾಗಿ ಒಂದೇ ಒಂದು ಪ್ರತಿಭಟನೆ ನಡೆಸಿಲ್ಲ. ಅಷ್ಟೇ ಯಾಕೆ? ಒಂದೇ ಒಂದು ಖಂಡನಾ ಹೇಳಿಕೆ ನೀಡುವ ದೇಶಪ್ರೇಮವೂ ಈ ಸಂಘಟನೆಯ ಪ್ರಮುಖರಲ್ಲಿ ಎದ್ದು ಕಾಣಲಿಲ್ಲ. ಅಂದು ದಿನೇಶ್ ಅಮೀನ್ ಮಟ್ಟುರವರು ಬರೆದ ನೈಜ ವಿಚಾರವನ್ನು ವಿರೋಧಿಸಿದ ಎಬಿವಿಪಿಗೆ ಗಡ್ಕರಿ ಹೇಳಿಕೆ ಕೀಳಾಗಿ ಕಾಣಲಿಲ್ಲವೇ? ದಾವೂದ್ನಂತಹ ಭೂಗತ ಪಾತಕಿಗೆ ಯುವಕರ ರೋಲ್ ಮಾಡೆಲ್ ವಿವೇಕಾನಂದರನ್ನು ಹೋಲಿಕೆ ಮಾಡಿದ್ದು ಗಡ್ಕರಿಯವರ ಕೀಳು ಹೇಳಿಕೆಯಲ್ಲವೇ? ಇವಿಷ್ಟರಲ್ಲೇ ಎಬಿವಿಪಿಯ ದೇಶಪ್ರೇಮದ ಬಗ್ಗೆ ಅನುಮಾನ ಮೂಡುವುದು ಸಹಜ.
ದಿನೇಶ್ ಅಮೀನ್ ಮಟ್ಟುರವರು ಬರೆದ ಲೇಖನಕ್ಕೆ ಸ್ವತಃ ವಿವೇಕಾನಂದರ ಆಶಯಗಳನ್ನು ಪ್ರಚಾರ ಪಡಿಸುವ ರಾಮಕೃಷ್ಣ ಮಠವೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ  ಎಬಿವಿಪಿ ಮಾತ್ರ ಈ ಲೇಖನಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿ ವಿವಾದ ಸೃಷ್ಟಿಸಿತ್ತು.  ಎಬಿವಿಪಿ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟಿಸಿದಾಗ  ವಿವೇಕಾನಂದರ ಅಭಿಮಾನಿ ವರ್ಗ, ಇವರನ್ನು ಜೀವನದಲ್ಲಿ ಮಾದರಿ ಎಂದು ಅಂದುಕೊಂಡಿದ್ದ ಕೆಲವರು ಇವರ ಪ್ರತಿಭಟನೆಗೆ ಹೆಮ್ಮೆ ಪಟ್ಟಿದ್ದರು. ಆದರೆ ಮೊನ್ನೆ ಗಡ್ಕರಿ ಎಂಬ ಕಟ್ಟಾ ಆರ್ಎಸ್ಎಸ್ಸಿಗನಿಂದ ವಿವೇಕಾನಂದರನ್ನು ಅವಮಾನಿಸುವ ಹೇಳಿಕೆ ಬಂದಾಗ ಎಬಿವಿಪಿ ಪ್ರತಿಭಟನೆ ನಡೆಸದೆ ಸುಮ್ಮನಿದ್ದದ್ದು ಈ ಸಂಘಟನೆಯ ಆಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ.
ವಿದ್ಯಾಥರ್ಿ ಸಂಘಟನೆಗಳೆಂದರೆ ಕೇವಲ ರಾಜಕೀಯ ಪಕ್ಷದ ಅಡಿಯಾಳುಗಳು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಆರೋಪಗಳಿವೆ. ಅದರಲ್ಲೂ ಎಬಿವಿಪಿ ಬಿಜೆಪಿಯ ಸಹ ಸಂಘಟನೆ ಎನ್ನುವುದನ್ನು ಹೇಳಬೇಕಿಲ್ಲ. ಆದರೆ ವಿವೇಕಾನಂದರ ಆಶಯಗಳಿಗೆ ಧಕ್ಕೆಯಾದಾಗ ಪಕ್ಷ ಬಿಟ್ಟು ಕೇವಲ ವೈಯಕ್ತಿಕವಾಗಿ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದರೆ ಎಬಿವಿಪಿಯ `ಸೋಕಾಲ್ಡ್ ಆಶಯಗಳಿಗೆ ಕಿಂಚಿತ್ತು ಬೆಲೆಯಾದರೂ ಇರುತ್ತಿತ್ತೋ ಏನೋ?
ಎಬಿವಿಪಿಯನ್ನು ಬಿಜೆಪಿ ಸಾಕಿ ಸಲಹುತ್ತಿದೆ ಎಂಬ ಮಾತ್ರಕ್ಕೆ ಗಡ್ಕರಿ ಹೇಳಿಕೆಯನ್ನು ಇವರಿಂದ ವಿರೋಧಿಸಲು ಆಗಲಿಲ್ಲ. ಆದರೆ ಇಂದಿಗೂ ಎಬಿವಿಪಿಯಂತಹ ಸಂಘಟನೆಯಲ್ಲಿ ವಿವೇಕಾನಂದರನ್ನು ರೋಲ್ ಮಾಡೆಲ್ ಅಂದುಕೊಂಡ ವಿದ್ಯಾಥರ್ಿಗಳ ದೊಡ್ಡ ವರ್ಗವೇ ಇದೆ ಎನ್ನುವುದು ನೆನಪಿರಲಿ. ವಿವೇಕಾನಂದರ ಬಗ್ಗೆ ಗಡ್ಕರಿ ಕೀಳಾಗಿ ಪ್ರತಿಕ್ರಿಯೆ ನೀಡಿದಾಗ ಈ ಮಹಾಪುರುಷನ ಅಭಿಮಾನಿಗಳು ಎನಿಸಿಕೊಂಡವರಿಗೆ ಸಾಕಷ್ಟು ನೋವಾಗಿದೆ. ಸ್ವತಃ ಬಿಜೆಪಿ ಮುಖಂಡರೇ ಗಡ್ಕರಿ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ ದೇಶಪ್ರೇಮದ ಹೆಸರಿನಲ್ಲಿ ಕಾಲೇಜ್ ಕ್ಯಾಂಪಸ್ನಲ್ಲಿ ವಿವೇಕಾನಂದರ ಭಾವಚಿತ್ರ ಇಟ್ಟು ಪೂಜಿಸುವ ಎಬಿವಿಪಿ ಮಾತ್ರ ಸ್ವತಃ ಆತ್ಮವಂಚನೆ ಮಾಡಿಕೊಂಡಿದೆ ಎಂದರೆ ಖಂಡಿತಾ ತಪ್ಪಿಲ್ಲ.
ಎಬಿವಿಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರಿದೆ. ದೇಶದ ಬಹುತೇಕ ಕಾಲೇಜ್ ಕ್ಯಾಂಪಸ್ನಲ್ಲಿ ಎಬಿವಿಪಿಯದ್ದೇ ಪ್ರಾಬಲ್ಯ. ಹೀಗಿದ್ದರೂ ಈ ಸಂಘಟನೆ ಮಾತ್ರ `ಎಲ್ಲಾ ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ ಎಂಬಂತೆ ವತರ್ಿಸುತ್ತಿದೆ. ಒಂದು ಪಕ್ಷದ ಹಿತಾಸಕ್ತಿಗಾಗಿ  ತನ್ನ ತನವನ್ನೇ ಬಲಿ ಕೊಡುತ್ತಿದೆ. ವಿದ್ಯಾಥರ್ಿ ಸಂಘಟನೆಯಾಗಿ ಹೋರಾಟ ನಡೆಸಬೇಕಾದ ಎಬಿವಿಪಿಗೆ ಇದು ಶೋಭೆಯಲ್ಲ. ಮುಂದಿನ ವಿದ್ಯಾಥರ್ಿ ವರ್ಗ ರಾಜಕೀಯ ರಹಿತವಾದ ಸಂಘಟನೆಯನ್ನು ಬಯಸಬೇಕು ಎನ್ನುವುದಾದರೆ ಎಬಿವಿಪಿಯಂತಹ ಸಂಘಟನೆಗಳು ಬಿಜೆಪಿ ಕಪಿಮುಷ್ಠಿಯಿಂದ ಹೊರ ಬರಬೇಕಿದೆ. ಹೀಗಾದರೆ ಮಾತ್ರ ರಾಜಕೀಯನ್ನು ವಿರೋಧಿಸುವ ವಿದ್ಯಾಥರ್ಿ ವರ್ಗ ಎಬಿವಿಪಿಯೊಂದಿಗೆ ಕೈ ಜೋಡಿಸಬಹುದು. ಒಂದು ಕಾಲದಲ್ಲಿ ಎಬಿವಿಪಿಯ ಹೋರಾಟಕ್ಕೆ ರಾಜ್ಯವೊಂದರ ಮುಖ್ಯಮಂತ್ರಿ ತನ್ನ ಸ್ಥಾನವನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಬಂದಿತ್ತು ಎಂಬ ಬಗ್ಗೆ ಓದಿದ್ದೆ. ಈ ಮಟ್ಟಿಗೆ ಪ್ರಬಲವಾಗಿದ್ದ  ವಿದ್ಯಾಥರ್ಿ ಸಂಘಟನೆಯೊಂದು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವತರ್ಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಪಕ್ಷ ಬಿಟ್ಟು ವೈಯಕ್ತಿಕ ನೆಲೆಯಲ್ಲಿ ಗಡ್ಕರಿ ಹೇಳಿಕೆಯನ್ನು ಎಬಿವಿಪಿ ಖಂಡಿಸಲಿ. ಗಡ್ಕರಿ ವಿರುದ್ದ ಪ್ರತಿಭಟಿಸಿ ಎನ್ನುವುದಷ್ಟೇ ನನ್ನ ಆಗ್ರಹವಲ್ಲ. ಬದಲಾಗಿ ವಿದ್ಯಾಥರ್ಿ ಸಂಘಟನೆಗಳು ರಾಜಕೀಯ ರಹಿತವಾಗಿ ವಿದ್ಯಾಥರ್ಿಗಳ  ಹಕ್ಕಿಗಾಗಿ ಹೋರಾಡಲಿ ಎಂಬ ಆಶಯವಷ್ಟೇ.
                                                                                                                                                               ಧ್ವನಿ

Tuesday, 21 August 2012

`ಕಾಲದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

`ಕಾಲ'ದ ಕರೆಗೆ ಕಿವಿಕೊಡುವ ಜವಾಬ್ದಾರಿಯೆಂಬ ಪುಟ!

 

ತಾಯಿಯ ಹೊಟ್ಟೆಯಿಂದ ಭೂಮಿಗಿಳಿಯುವಾಗ ಸಣ್ಣದೊಂದು ಅಳುವಿನ ಜೊತೆಗೆ ಪುಕ್ಕಟೆಯಾಗಿ ಸಿಗುವುದು `ಮಗು ಎಂಬ ನಾಮಧೇಯವಷ್ಟೇ. ಆಸ್ಪತ್ರೆಯ ತೊಟ್ಟಿಲಲ್ಲಿ ಪಿಲಿ ಪಿಲಿ ಕಣ್ಣು ಬಿಡುತ್ತಾ ಅಮ್ಮನ ತೋಳ ತೆಕ್ಕೆಯ ಆಸರೆ ಬೇಡುತ್ತಿದ್ದರೆ ಅಲ್ಲಿ ನೆರೆದವರಿಗೆ ಅದೆಂಥದೋ ಪುಳಕ. ಹೆತ್ತ ತಾಯಿಗಂತೂ ಆ ಮಗುವಿನ ಆಳುವೇ ಸಾರ್ಥಕ ಎನಿಸುವಂಥ ಅನುಭವ. ಆದರೆ ಭೂಮಿಯ ಸ್ಪರ್ಶಕ್ಕೆ ಸಿಕ್ಕಿ ಕೆಲವೇ ಸೆಕೆಂಡ್ ಕಳೆದ ಮಗುವಿಗೆ ಜಗವೇ ನೂತನ....ಅಳು ಕಂಡು ನಗುವವರ ವ್ಯಕ್ತಿತ್ವ ವಿನೂತನ....ಹುಟ್ಟಿದ ಮಗುವಿನ ಅಳು ನಗುವಾಗಿ ಬದಲಾಗುವಾಗ ಅದಕ್ಕೊಂದು ಸ್ವಂತ ಹೆಸರಿನ ಆಸರೆ....ಮನೆಯವರೆಲ್ಲರ ಸ್ಪರ್ಶ....
ಸಣ್ಣ ವಯಸ್ಸಿನಲ್ಲೊಂದು ಇಂತಹ ಪ್ರೀತಿ, ಪ್ರತೀ ಮಗುವಿಗೂ ಸಿಗಬೇಕು. ಸಿಕ್ಕೇ ಸಿಗುತ್ತೆ ಕೂಡ...ಆದರೆ ಎಷ್ಟು ದಿನ?
ಆ ಮಗುವಿಗೂ ಕಾಲದ ಜವಾಬ್ದಾರಿಗೆ ಹೆಗಲು ಕೊಡುವ ಅನಿವಾರ್ಯತೆ ಬಂದೇ ಬರುತ್ತೆ ಅಲ್ವಾ?
ಹೌದು, ಬದಲಾವಣೆ ಜಗದ ನಿಯಮ..ಹುಟ್ಟು ಸಾವಿನ ಮಧ್ಯೆ ಕಂಡುಕೊಂಡ ಪ್ರತೀ ಹಾದಿಯಲ್ಲೂ ಜವಾಬ್ದಾರಿಯ ನೊಗ ಹೊತ್ತು ಸಾಗಬೇಕಾದದ್ದು ಅನಿವಾರ್ಯ....ಎಳೆಯ ವಯಸ್ಸಿನ ಆಟ, ತುಂಟಾಟಗಳು, ನಮ್ಮದೇ ಆದ ಜೀವನ, ಎಲ್ಲವೂ ದೂರ ಸರಿದು `ಜವಾಬ್ದಾರಿಯೆಂಬ ಹಣೆಪಟ್ಟಿ ಹೊತ್ತು ನಮ್ಮ ಹೆಗೆಲೇರುತ್ತದೆ.
ಇಂದೊಂಥರ ಅನ್ಯಗ್ರಹವನ್ನು ಪ್ರವೇಶಿಸಿದ ಹಾಗೆ...!
ಜೀವನ ಸುಗಮವಾಗಿರಲಿ ಎಂದು ಮುಂದಡಿಯಿಡುವ ಪ್ರತೀ ಜೀವವೂ ಬಯಸದೇ ಪಡೆದ ಭಾಗ್ಯ, ದೌಭರ್ಾಗ್ಯಗಳು ಎಷ್ಟು ಎನ್ನುವುದು ಕೇಳಿಯೂ ಕೇಳದಂತಿರುವ ದುರಂತ ಕಥಾನಕಗಳೇ ಸರಿ....
ಶಾಲಾ ದಿನಗಳಲ್ಲಿ ಜವಾಬ್ದಾರಿ ಅನ್ನುವುದನ್ನೇ ಮರೆತ ಅದೆಷ್ಟೋ ಗೆಳೆಯರ ಬಳಗ ನನ್ನ ಜೊತೆಯಲ್ಲಿತ್ತು. ಪ್ರತೀ ದಿನ, ಪ್ರತೀ ಕ್ಷಣ ಮನೋರಂಜನೆಯೊಂದನ್ನು ಬಿಟ್ಟರೆ ನನ್ನ ಗೆಳೆಯರ(ಒಂದು ವರ್ಗ) ಬಳಗಕ್ಕೆ ಕಾಲದ ಜೊತೆ ಬರುವ ಜವಾಬ್ದಾರಿಯ ಪರಿಚಯವೇ ಇರಲಿಲ್ಲ. ಆದರೆ ವಯಸ್ಸು 20 ದಾಟುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿದ್ದ ಶಾಲಾ ದಿನಗಳ ಗೆಳೆಯರು ಜವಾಬ್ದಾರಿಯ ಪರಿಚಯ ಮಾಡಿಸಿಕೊಂಡು ಒಂದು ಹಂತಕ್ಕೆ ಕುಟುಂಬದ ಬಂಡಿ ಎಳೆಯುವುದನ್ನು ಕಂಡಿದ್ದೇನೆ. ಆಗೆಲ್ಲಾ ಯೋಚಿಸಿದ್ದಿದೆ...
ನಿಜಕ್ಕೂ ಜವಾಬ್ದಾರಿ ಅಂದ್ರೆ ಇದೇನಾ?
ಹೌದೋ? ಅಲ್ವೋ? ನಂಗತ್ತೂ ಅಷ್ಟು ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಶಾಲಾ ದಿನಗಳಲ್ಲಿ ಈ ಗೆಳೆಯರ ಬಳಗದ ವರ್ತನೆ ಕಂಡ ನಾನು ಇಂದು ಮಾತ್ರ ಮಾತೆತ್ತದೆ ಮೌನವಾಗಬೇಕಿದೆ. ಆ ದಿನಗಳಲ್ಲಿ ಶಿಕ್ಷಣದ ಸ್ಪರ್ಶ ಕಂಡರೆ ಬೆಚ್ಚಿ ಬೀಳುತ್ತಿದ್ದ ಈ ವರ್ಗ..ಇಂದು ಹೇಗೋ ಜವಾಬ್ದಾರಿಯ ಅರ್ಥವನ್ನು ಅಥರ್ೈಸಿ ಜೀವನ ಸಾಗಿಸುತ್ತಿದ್ದಾರೆ. ಕಾಲವೇ ಎಲ್ಲವನ್ನೂ ಕಲಿಸುತ್ತೆ ಅನ್ನೋದು ಬಹುಶಃ ಇದಕ್ಕೆ ಇರಬೇಕು...
ಏನೇ ಆದರೂ ಇಂಥವರಿಗೊಂದು ಸಲಾಂ ಮೀಸಲಿಡಲೇ ಬೇಕು. ನನ್ನ ಪ್ರಕಾರ ಸಾಧಕರಲ್ಲದಿದ್ದರು ಸಾಧಕರಿವರು!
ಪ್ರತೀ ಬಾರಿ ಬ್ಲಾಗ್ ಬರೆಯುವಾಗ ನನ್ನ ಚಿಂತನೆಗಳಿಗೆ ಕೆಲಸ ಕೊಡುವ ನಾನು ಈ ಬಾರಿ ಕಣ್ಣಿಗೆ ಬಿದ್ದ ನೈಜ ಪರಿಶ್ರಮದ ಬೆನ್ನು ಬಿದ್ದು ಬರೆದಿದ್ದೇನೆ. ಶಾಲಾ ದಿನಗಳಲ್ಲಿ ರೌಡಿಸಂ, ಗಲಾಟೆ, ಲವ್ ಎಂದು ಹುಚ್ಚರಂತೆ ಬೀದಿ ಸುತ್ತುತ್ತಿದ್ದ ನನ್ನ ಗೆಳೆಯರ ಬಳಗದ ಬಗ್ಗೆ(ಒಂದು ವರ್ಗ) ಬರೆಯಬೇಕೆನಿಸಿತು. ಆದರೆ ಈಗ ಮಾತ್ರ ಇವರ್ಯಾರೂ ಹಾಗಿಲ್ಲ. ಬದಲಾಗಿದ್ದಾರೆ...ಬದಲಾಗುತ್ತಿದ್ದಾರೆ...!
ಮೊದಲೇ ಹೇಳಿದ ಹಾಗೆ ಜವಾಬ್ದಾರಿಗಳನ್ನು ಅಥರ್ೈಸಿಕೊಂಡಿದ್ದಾರೆ. ಆ ದಿನಗಳಲ್ಲಿ ಇವರ ವರ್ತನೆಗೆ ಬೇಸರ ಪಟ್ಟುಕೊಂಡ ಜನರೂ ಇಂದು ತೃಪ್ತಿ ಪಟ್ಟುಕೊಳ್ಳಬೇಕು ಅನ್ನೋ ಹಾಗೆ ಜೀವನ ನಡೆಸುತ್ತಿದ್ದಾರೆ. 10ರಿಂದ 20 ಸಾವಿರ ಸಂಬಳ ಹಿಡಿಯದಿದ್ದರೂ ಸಾಮಾಜಿಕವಾಗಿ ಒಂದು ಹಂತಕ್ಕೆ ಗಟ್ಟಿಮುಟ್ಟು ಎನ್ನಬಹುದುದು.
ಫ್ರೆಂಡ್ಸ್, ಇಷ್ಟೆಲ್ಲಾ ಯಾಕೆ ಹೇಳಬೇಕೆನಿಸಿತು ಅಂದರೆ,,,
ಮೊನ್ನೆಯಷ್ಟೆ ನನ್ನೊಬ್ಬ ಆಕಾಲದ ಗೆಳೆಯ ಸಿಕ್ಕಿದ್ದ. ಅಂದು ಅವನಿದ್ದ ರೀತಿಗೂ ಇಂದು ಅವನಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದಿದ್ದ ಅಹಂಕಾರ, ಅರ್ಭಟ, ಮಾತೆತ್ತಿದರೆ ಸುಳಿಯುತ್ತಿದ್ದ ಕೋಪ ಇದ್ಯಾವುದೂ ಇಲ್ಲ. ಆಗೆಲ್ಲಾ ಇವರ ವರ್ತನೆ ಬದಲಾಗಲಿ ಎಂದು ಆಶಿಸುತ್ತಿದ್ದೆ. ಮುಂದೆ ಅದೇ ಗೆಳೆಯ ಜೀವನವನ್ನು ಈ ಮಟ್ಟಿಗೆ ಅಥರ್ೈಸಿಕೊಂಡು ಕಣ್ಣಿಗೆ ಬೀಳುತ್ತಾನೆ ಎಂಬ ಸಣ್ಣ ಊಹೆಯೂ ನನಗಿರಲಿಲ್ಲ. ಮಾತಿನಲ್ಲಿ ನಗುವಿನ ಸ್ಪರ್ಶ, ಗೌರವದ ಭಾವ, ಪ್ರೀತಿ ತುಂಬಿದ ಸ್ಪಷ್ಟ ನಿಲುವು....ಹಿಂದಿದ್ದ ವ್ಯಕ್ತಿತ್ವಕ್ಕೆ ಸಿಡಿಲು ಬಡಿದಂತೆ ಬದಲಾಗಿದ್ದ ನನ್ನ ಆತ್ಮೀಯ ಗೆಳೆಯ..!
ಇಂಥದ್ದೊಂದು ಬದಲಾವಣೆಗೆ ಕಾರಣನಾದ ಆ `ಕಾಲಕ್ಕೊಂದು ಥ್ಯಾಂಕ್ಸ್ ಹೇಳಲೇ ಬೇಕು.
ಫ್ರೆಂಡ್ಸ್, ಹಾಗಂತ ಬದಲಾವಣೆಯ ಪ್ರತೀ ಮಗ್ಗುಲನ್ನು ತಿರುವಿ ಹಾಕಿಕೊಂಡು ನೋಡುವ ಅಭ್ಯಾಸ ನನಗಿಲ್ಲ. ಒಬ್ಬನ ವ್ಯಕ್ತಿತ್ವ ನೋಡಿ ಗುಣಮಟ್ಟದ ಸಟರ್ಿಪಿಕೇಟ್ ಕೊಡುವ ಹಂತಕ್ಕೂ ನಾನು ಬೆಳೆದಿಲ್ಲ. ಆದರೆ ಎಲ್ಲೋ ಹಾಳಾಗಿ ಹೋಗುತ್ತಿದ್ದ ಹೊವೊಂದು ತುಂತುರು ಹನಿಗೆ ಮೈದಡವಿ ನಿಂತರೆ ಪೋಟೋ ಕ್ಲಿಕ್ಕಿಸಿ ಚೆಂದಗಾಣಿಸುವ ಅನ್ನೋ ಹವ್ಯಾಸವಷ್ಟೇ! ನನ್ನ ಹವ್ಯಾಸಗಳು ಕೆಲವರ ಪಾಲಿಗೆ ದುರಾಭ್ಯಾಸಗಳಾಗಿ ಕಂಡರೆ ನಾನು ಜವಾಬ್ದಾರನಲ್ಲ.
ಬದುಕಿನ ಪ್ರತೀ ಹಂತದಲ್ಲೂ ಎಡವಿ ಬೀಳುವ ವರ್ಗಕ್ಕಿಂತ, ಈ ಹಿಂದೆ ಎಡವಿ ಬಿದ್ದು ಈಗಷ್ಟೇ ಎದ್ದು ನಿಲ್ಲುತ್ತಿರುವ ನನ್ನ ಆ ಕಾಲದ ಗೆಳೆಯನ ವರ್ಗ ನನಗಿಷ್ಟ..
ಇವರು ಅಂದೆಲ್ಲಾ ಜೀವನದ ಪ್ರತೀ ಕ್ಷಣವನ್ನು ಇಂಚಿಂಚೂ ಎಂಜಾಯ್ ಮಾಡಿದ್ದಾರೆ...ಒಂದು ಕ್ಷಣವೂ ಭಾವುಕರಾಗದೆ ಸಣ್ಣ ವಯಸ್ಸಿನ ಸುಖವನ್ನು ಪ್ರತೀ ಕ್ಷಣವೂ ಅನುಭವಿಸಿದ್ದಾರೆ..ಜವಾಬ್ದಾರಿಯೆಂಬ ಕಾಲನ ಕರೆ ಬಂದಾಗ ನಿಯತ್ತಾಗಿ ಅದಕ್ಕೆ ಹೊಂದಿಕೊಂಡಿದ್ದಾರೆ.
ನಿಜಕ್ಕೂ ಈ ರೀತಿಯ ಜೀವನ ಗ್ರೇಟ್ ಅಲ್ವಾ?
ಫ್ರೆಂಡ್ಸ್, ಈ ಮೂಲಕ ಹೇಳುವುದಿಷ್ಟು...
ಯಾರೇ ಆಗಲಿ ವಯಸ್ಸಿನ ಒಂದು ಹಂತದವರಗೆ ಇರುವಷ್ಟು ದಿನಗಳನ್ನು ಎಂಜಾಯ್ ಮಾಡೋಣ, ನಕ್ಕು ನಲಿಯೋಣ, ಹೇಗಿದ್ದರೂ ಜವಾಬ್ದಾರಿಯೆಂಬ ಕಾಲನ ಕರೆಗೆ ಮತ್ತೆ ಕಿವಿಕೊಡಲೇ ಬೇಕಲ್ಲವೇ?
ನನ್ನ ಈ ಬ್ಲಾಗ್ ಬರಹದ ಉದ್ದೇಶವಿಷ್ಟೇ...ನನ್ನ ಶಾಲಾ ದಿನಗಳಲ್ಲಿ, ಕಾಲೇಜು ದಿನಗಳಲ್ಲಿ ನನ್ನ ಆ ಕಾಲದ ಗೆಳೆಯರ ಜೊತೆ ಸಂಭ್ರಮಿಸಿಲ್ಲ. ನಕ್ಕು ನಲಿದಿರಲಿಲ್ಲ...ಎಲ್ಲಕ್ಕೂ ಲಕ್ಷ್ಮಣ ರೇಖೆ ಎಳೆದು ಜೀವಿಸಿದ್ದೆ. ಆದರೆ ಈಗ ಆ ಕಾಲ ಮಿಂಚಿ ಹೋಗಿದೆ. ಇದೀಗ ಜವಾಬ್ದಾರಿಯ ಕಾಲ...ಇಂದು ಸಂಭ್ರಮಿಸಲು ಸಮಯದ ತಿಕ್ಕಾಟ, ಕೆಲಸ ಕಾರ್ಯಗಳ ಜಂಜಾಟ ಬ್ರೇಕ್ ಹಾಕುತ್ತಿದೆ...ಅಪ್ಪಿ ತಪ್ಪಿ ಎಲ್ಲೋ ಒಂದೆರೆಡು ರಜಾ ದಿನಗಳಲ್ಲಿ ಆ ದಿನಗಳ ಸಂಭ್ರಮ ಮರುಕಳಿಸುತ್ತದೆ. ಅದು ಬಿಟ್ಟರೆ ಮುಂದಿನ ಜೀವನದ ಭವಿಷ್ಯತ್ ಕಾಲದಲ್ಲಿ ಎಲ್ಲವೂ ನಿರ್ಧರಿತವಾಗುತ್ತದೆ ಎನ್ನಬಹುದು.
ಏನೇ ಆದರೂ ಜವಾಬ್ದಾರಿ ಮತ್ತು ಮಜಾ ಎಂಬ ಎರಡು ಶಬ್ದಕ್ಕೆ ಅಡ್ಡಗಾಲಿಡುವ `ಕಾಲ ಎಂಬ ಎರಡಕ್ಷರಕ್ಕೆ ದೊಡ್ಡದೊಂದು ಸಲಾಂ...

Wednesday, 1 August 2012

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ರಕ್ಷಾ ಬಂಧನದ ದಿನದಲ್ಲಿ ನನ್ನ ಅಕ್ಕನದ್ದೊಂದು ನೆನಪು

ಇವತ್ತು ರಕ್ಷಾ ಬಂದನ. ಸಹೋದರ-ಸಹೋದರಿಯರ ಸಂಬಂಧಕ್ಕೊಂದು ಗೌರವಯುತ ಅರ್ಥ ಕಲ್ಪಿಸಿದ ದಿನ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇಂಥದ್ದೊಂದು ಮಾನವೀಯ ಸಂಬಂಧ ಇದ್ದೇ ಇರುತ್ತದೆ. ಕೆಲವರ ಜೀವನದಲ್ಲಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ಸಂಬಂಧಗಳಾದರೆ, ಇನ್ನು ಕೆಲವರ ಜೀವನದಲ್ಲಿ ಹಾಗೇ ಸುಮ್ಮನೆ ಸಿಕ್ಕ ಸಂಬಂಧಗಳು. ರಕ್ಷಾ ಬಂಧನದ ಈ ದಿನದಲ್ಲಿ ನನ್ನ ಜೀವನದಲ್ಲಿ ಬಂದು ಹೋದ ಅಕ್ಕನ ಬಗ್ಗೆ ಒಂದಿಷ್ಟು....

ಪ್ರತೀ ಕ್ಷಣವೂ ನೆನಪಾಗುವ ಜೀವದ ಬಗ್ಗೆ ಒಂದಿಷ್ಟು....ಹೆತ್ತಮ್ಮನ ನಂತರ ಹೆಚ್ಚು ಇಷ್ಟ ಪಟ್ಟ ಜೀವದ ಬಗ್ಗೆ ಒಂದಿಷ್ಟು....
ಜೀವನ ಅನ್ನೋದು ನಿಜಕ್ಕೂ ವಿಚಿತ್ರ. ಜೀವನದ ಅನಿಶ್ಚಿತತೆಯ ಪಯಣದಲ್ಲಿ ಯಾರೆಲ್ಲಾ ಸಿಗ್ತಾರೆ ಅನ್ನೋದನ್ನು ಹೇಳೋದು ಅಷ್ಟು ಸುಲಭವಲ್ಲ. ಹಾಗೆ ಊಹಿಸಲೂ ಆಗದ ನನ್ನ ಜೀವನದ ತಿರುವಿನಲ್ಲಿ ಸಿಕ್ಕ ವ್ಯಕ್ತಿಯೇ ಒಬ್ಬರು ಅಕ್ಕ. ಸದಾ ಮುಗುಳ್ನಗು, ನನ್ನ ಹೆತ್ತ ತಾಯಿಯನ್ನೇ ಹೋಲುವ ಸ್ವಭಾವ, ಜೀವನದ ಪ್ರತೀ ಕ್ಷಣದಲ್ಲೂ ಅತೀ ಭಾವುಕ ಜೀವಿ, ಸ್ವಲ್ಪ ಧೈರ್ಯ, ಅತ್ಯಲ್ಪ ಕೋಪ, ಬದುಕಿನ ಪ್ರತೀ ಕ್ಷಣವನ್ನೂ ನೋವಿನಲ್ಲೂ ಸಂಭ್ರಮಿಸುವ ವ್ಯಕ್ತಿತ್ವ. ಎಲ್ಲರಿಗೂ ಇಷ್ಟವಾಗುವ ಸ್ವಭಾವ. ಇದು ನನ್ನ ಅಕ್ಕನ ಬಗ್ಗೆ ಎರಡೇ ತಿಂಗಳಲ್ಲಿ ತಿಳಿದುಕೊಂಡ ಸತ್ಯ.
ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಕಥೆ. ಹೆಜ್ಜೆ ಹೆಜ್ಜೆಗೂ ಕಷ್ಟ ಪಟ್ಟ ನಾನು ಕೆಲಸಕ್ಕೆಂದು ಬಂದು ಸೇರಿದ್ದು ಸಣ್ಣದೊಂದು ಸಂಸ್ಥೆಗೆ. ಆಗೆಲ್ಲಾ ಗೊತ್ತಿದ್ದದ್ದು ಒಂದೇ....ಬೆಳಿಗ್ಗಿನಿಂದ ಸಂಜೆಯವರೆಗೆ ನಿಯತ್ತಿನಿಂದ ದುಡಿಯವುದು. ಸಂಬಂಧಗಳು ಎನ್ನುವುದು ನನ್ನ ಪಾಲಿಗೆ ಅಷ್ಟಕ್ಕಷ್ಟೇ. ಅದರಲ್ಲೂ ಹೆಣ್ಣು ಜೀವಗಳ ಜೊತೆಗೆ ಬೆಳೆಯದ ನನಗೆ ಹೆಣ್ಮಕ್ಕಳನ್ನು ಕಂಡರೆ ಒಂದು ರೀತಿಯ ನಾಚಿಕೆ ಸ್ವಭಾವ. ಮಾತಿಗಿಳಿಯಲು ಸಣ್ಣದೊಂದು ಭಯ. ಕೆಲಸಕ್ಕೆ ಸೇರುವ ವೇಳೆ ಅಲ್ಲಿ ನನಗೆ ಮಾಲೀಕರಿಗಿಂತ ಮೊದಲು ಪರಿಚಯವಾದದ್ದೇ ಈ ಅಕ್ಕ. ಮೊದಲ ವಾರದ ಸಂಬಳವನ್ನು ನನ್ನ ಕೈಗಿಟ್ಟದ್ದೇ ಆ ಅಕ್ಕ...ಒಂದು ತಿಂಗಳು ಕಳೆಯುವವರಗೆ ಇವರನ್ನು ಹಿಂದೂ ಧಮರ್ೀ ಎಂದೇ ಅಂದುಕೊಂಡಿದ್ದೆ. ಅದರಲ್ಲೂ ಇವರು ಕ್ರೈಸ್ತ ಧಮರ್ೀ ಎಂದು ತಿಳಿದದ್ದು ಒಂದು ತಿಂಗಳ ನಂತರ. ಬಹುಶಃ ಅಲ್ಲಿಯ ತನಕ ಒಂದು ಹೆಣ್ಣಿನೊಂದಿಗೆ ನಿರ್ಭಯವಾಗಿ ಮಾತನಾಡುವ ತಾಕತ್ತು ನನಗಿರಲಿಲ್ಲ. ಆದರೆ ಒಂದೇ ತಿಂಗಳಲ್ಲಿ ನನ್ನ ಅಕ್ಕನ ಜೊತೆ ತುಂಬಾನೇ ಅಂದ್ರೆ ತುಂಬಾನೇ ಕ್ಲೋಸ್ ಆಗಿ ಬಿಟ್ಟಿದ್ದೆ. ಪ್ರತೀ ದಿನ ಒಂದರ್ಧ ಘಂಟೆ ನನ್ನ ಅಕ್ಕನ ಜೊತೆ ಮಾತನಾಡಲಿಲ್ಲ ಅಂದ್ರೆ ಏನೋ ಕಳೆದುಕೊಂಡ ಅನುಭವ...ಕೆಲಸಕ್ಕೆ ರಜೆ ಮಾಡಿದರೆ ಎಲ್ಲಿ ಅಕ್ಕನ ಜೊತೆ ಮಾತನಾಡೋದು ತಪ್ಪಿ ಹೋಗುತ್ತೋ ಅನ್ನೋ ಭಯ..ಹಾಗಾಗಿಯೋ ಏನೋ ಪ್ರತೀ ದಿನ ಕೆಲಸಕ್ಕೆ ಹಾಜರಾಗುತ್ತಿದ್ದೆ.
ಯಾರಲ್ಲಿಯೂ ಹೇಳಿಕೊಳ್ಳದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳಿಕೊಳ್ಳುತ್ತಿದ್ದೆ. ತೀರಾ ನೋವಾದಾಗ ಅವರ ಮುಂದೆ ಕಣ್ಣೀರು ಹಾಕಿದ್ದೂ ಇದೆ. ಅಲ್ಲಿಯ ತನಕ ನಾನು ಜೀವನದ ಹಿಂದಿನ ಘಟನೆಗಳನ್ನು ನೆನೆದು ಕಣ್ಣೀರು ಹಾಕಿದ್ದಿಲ್ಲ. ಬಹುಶಃ ಅಂತಹ ಅವಕಾಶ, ಜೀವಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಸಿಗದೇ ಇರೋದು ಕೂಡ ಕಾರಣ ಇರಬಹುದು.
ನನ್ನ ಅಕ್ಕನೂ ಅಷ್ಟೇ ...ನನ್ನನ್ನು ಅವರ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಇಷ್ಟ ಪಡೋರು. ಜೀವನದ ಪ್ರತೀ ಕ್ಷಣಗಳನ್ನೂ ನನ್ನ ಹತ್ತಿರ ಹೇಳ್ತಾ ಇರೋರು.. ಆಗೆಲ್ಲಾ ನನ್ನ ಅಕ್ಕ ತುಂಬಾನೇ ಅಂದ್ರೆ ತುಂಬಾನೇ ಹತ್ತಿರ ಆಗ್ತಾ ಇದ್ರೂ....
ನಾನೂ ಅಷ್ಟೇ, ಅಮ್ಮನ ಹತ್ತಿರ ಹೇಲೋಕೆ ಆಗದ ವಿಚಾರಗಳನ್ನು ನನ್ನ ಪ್ರೀತಿಯ ಅಕ್ಕನ ಬಳಿ ಹೇಳ್ತಾ ಇದ್ದೆ. ಐದಾರು ತಿಂಗಳ ನಂತ ಅವರ ಮನೆಯಲ್ಲಿ ನಾನು ಒಬ್ಬನಂತಾದೆ...
ಗೊತ್ತು ಗುರಿಯಿಲ್ಲದ ನನ್ನ ಜೀವನಕ್ಕೆ `ನೀನ್ ಜಾಗ್ ಆಗಬೆಕು, ನೀನ್ ಹೀಗ್ ಆಗ್ಬೇಕು...ಅಂತ ಸ್ಪೂತರ್ಿ ತುಂಬಿದ್ದು ಇದೇ ಅಕ್ಕ, ಇವತ್ತಿಗೂ ನನ್ನ ತಂದೆ ತೀರಿ ಹೋದ ಮೇಲೆ ನನ್ನ ಅಪ್ಪನ ಕುಟುಂಬ ನಮ್ಮ ಹತ್ತಿರ ಬಂದಿಲ್ಲ. ನಮ್ಮ ಭವಿಷ್ಯ ಹೇಗಿದೆ ಅಂತ ಚಿಂತಿಸಿಲ್ಲ. ಆದ್ರೆ ನನ್ನ ಅಕ್ಕ ನನಗೆ ಸಂಬಂದವೇ ಇಲ್ಲದ ನನ್ನ ಆಕಸ್ಮಿಕ ಅಮ್ಮ ನನ್ನಲ್ಲೂ ಒಂದು ಕನಸು ತುಂಬಿದ್ರೂ...ನನ್ನ ಭವಿಷ್ಯದ ಬಗ್ಗೆ ನನಗೆ ಸ್ಪೂತರ್ಿ ತುಂಬಿದ್ರು.
ನನ್ನ ಬರಹಕ್ಕೆ ಮೊದಲ ಓಗುಗಳಾಗಿದ್ದಳು ಅಕ್ಕ
ಹಿಂದಿನಿಂದಲೂ ನನಗೆ ಬರವಣೆಗೆಯ ಹುಚ್ಚು...ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗ್ತಾ ಇದ್ದವು.. ಆರಂಭದ ದಿನಗಳಲ್ಲಿ ನನ್ನ ಬರಹಗಳು ಅಕ್ಕನನ್ನು ಮೆಚ್ಚಿಸುವ, ಅವಳನ್ನು ಇಷ್ಟ ಪಡಿಸುವ ಬರಹಗಳಾಗಿರುತ್ತಿದ್ದವು. ಪತ್ರಿಕೆಯಲ್ಲಿ ನನ್ನ ಬರಹ ಪ್ರಕಟಗೊಂಡರೆ ಸಾಕು...ಅಂಗಡಿಯಿಂದ ಪತ್ರಿಕೆ ತಂದು ಅವಳು ಬರುವ ಹೊತ್ತಿಗೆ ಟೇಬಲ್ ಮೇಲಿಟ್ಟು ದೂರದಿಂದ ಗಮನಿಸುತ್ತಿದ್ದೆ. ನನ್ನಕ್ಕ ನನ್ನ ಬರಹ ಓದ್ತಾರ ಅಂತ ಕಾತುರದಿಂದ ಕಾಯ್ತಾ ಇದ್ದೆ. ನನ್ನ ಪ್ರತೀ ಬರಹಗಳನ್ನು ನನ್ನ ಅಕ್ಕ ಓದ್ತಾ ಇದ್ದಳು. ಆದರೆ ಎಲ್ಲರಂತೆ ಶಹಬ್ಬಾಸ್ ಗಿರಿ ಕೊಡ್ತಾ ಇರಲಿಲ್ಲ. ಯಾಕ್ ಗೊತ್ತಾ?
ಆಕೆಯ ಸ್ವಭಾವವೇ ಅಂತದ್ದು...ಇಷ್ಟ-ಕಷ್ಟ ಯಾವುದನ್ನೂ ತೀರಾ ಹೆಚ್ಚಾಗಿ ತೋರ್ಪಡಿಸುವುದಿಲ್ಲ. ಇಷ್ಟ ಅದರೂ ನಗು...ನೋವಾದರೂ ನಗು....ಆದರೂ ನನ್ನ ಬರಹಗಳು ಅಕ್ಕನಿಗೆ ಇಷ್ಟ ಆಗ್ತಾ ಇದ್ದವು. ಅವಳ ಕಣ್ಣುಗಳೇ ಎಲ್ಲವನ್ನೂ ನನಗೆ ಹೇಳ್ತಾ ಇತ್ತು. ನನ್ನ ಬರಹಗಳನ್ನು ಯಾರು ಒದದೇ ಇದ್ದರೂ ಪರವಾಗಿಲ್ಲ. ನನ್ನ ಅಕ್ಕ ಮಾತ್ರ ಓದಲೇ ಬೇಕು ಅನ್ನೋವಷ್ಟು ಸ್ವಾಥರ್ಿ ನಾನು. ಇದು ಅಹಂಕಾರವೋ....ಓವರ್ ಕಾನ್ಫಿಡೆನ್ಸೋ ಗೊತ್ತಿಲ್ಲ. ಆದರೆ ಪ್ರೀತಿ ತುಂಬಿದ ಅಕ್ಕನ ಸ್ಫೂತರ್ಿಗೆ ಮಾತ್ರ ನಾನ್ ಕಾಯ್ತಾ ಇದ್ದೆ.
ಅಲ್ಲೀ ತನಕ ಇನ್ನೊಬ್ಬರಿಗೆ ಗಿಫ್ಟ್ ಕೊಟ್ಟು ನನಗೆ ಗೊತ್ತೇ ಇಲ್ಲ. ಅಕ್ಕನ ಹುಟ್ಟಿದ ಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿ. ಈ ಹಿಂದೆಯೆ ಕೂಡಿಟ್ಟಿದ್ದ ಸಾವಿರ ರೂಪಾಯಿ ಹಿಡಿದುಕೊಂಡು ಅದೊಂದು ಭಾನುವಾರ ಇಡೀ ಮಂಗಳೂರು ಸುತ್ತು ಹಾಕಿದ್ದೆ. ನಗರದ ಬಹುತೇಕ ಬಟ್ಟೆ ಮಳಿಗೆಗಳಿಗೆ ನುಗ್ಗಿ ಹೊರಬಂದಿದ್ದೆ. ಯಾಕ್ ಗೊತ್ತಾ? ನನ್ನ ಪ್ರೀತಿಯ ಅಕ್ಕನಿಗೆ ಚೂಡಿದಾರ ಉಡುಗೊರೆ ಕೊಡೋದಕ್ಕೆ. ಸುತ್ತಿ ಸುತ್ತಿ ಅಂತಿಮವಾಗಿ ಒಂದು ಶಾಪ್ನಲ್ಲಿ ನನ್ನ ಅಕ್ಕನಿಗೆ ಇಷ್ಟ ಆಗಬಹುದು ಅನ್ನೋ ಸಣ್ಣದೊಂದು ನಿರೀಕ್ಷೆಯಲ್ಲಿ ಹಸಿರು ಗುಲಾಬಿ ಬಣ್ಣ ಮಿಶ್ರಿತ ಚೂಡಿದಾರ ಖರೀದಿಸಿದೆ. ಅಲ್ಲಿಂದ ಮತ್ತೆ ಅಕ್ಕನಿಗೆ ಇಷ್ಟವಾಗುವ ರೀತಿಯ ಗ್ರೀಟಿಂಗ್ ಕಾಡರ್್ ತಲಾಷ್ಗೆ ನಿಂತೆ. ಇಲ್ಲೂ ಅಷ್ಟೇ, ನನ್ನ ಅಕ್ಕನ ಟೇಸ್ಟ್ಗೆ ಢಿಫರೆಂಟ್ ಆಗಿ ಕೊಡಬೇಕು ಅನ್ನೋ ನನ್ನ ಮನಸ್ಥಿತಿಗೆ ಹೊಂದುವ ಗ್ರೀಟಿಂಗ್ಸ್ ಸಿಗಲಿಲ್ಲ. ಕೊನೆಗೊಂದು ಆಗಬಹುದು ಅನ್ನೋ ಗೀಟಿಂಗ್ಸ್ ಕೈಗಿಟ್ಟು ಅಲ್ಲಿಂದ ಹೊರಟೆ....
ಅಂದು ನಾನು ಆ ಎರಡು ವಸ್ತುವಿನ ಖರೀದಿಗೆ ವ್ಯಯಿಸಿದ್ದು ಬರೋಬ್ಬರಿ 4 ಗಂಟೆ 15 ನಿಮಿಷ...
ಅಲ್ಲಿಯ ತನಕ ನನ್ನ ಬಟ್ಟೆ ಖರೀದಿಗೂ 15 ನಿಮಿಷಕ್ಕಿಂತ ಹೆಚ್ಚು ಸಮಯ ವ್ಯರ್ಥ ಮಾಡದ ಸ್ವಭಾವ ನಂದು. ಇನ್ನು ಮೂರು ದಿನ ಕಳೆದರೆ ಅಕ್ಕನ ಹುಟ್ಟಿದ ದಿನ...
ಎಲ್ಲದರಲ್ಲೂ ವಿಭಿವನ್ನವಾಗಿ ಯೋಚನೆ ಮಾಡುವ ನಾನು ಕೆಲವೊಮ್ಮೆ ತುಂಬಾನೇ ಅಂದ್ರೆ ತುಂಬಾನೇ ಸ್ವಾಥರ್ಿ ಆಗ್ತೀನಿ. ಅಕ್ಕನ ಹುಟ್ಟಿದ ಹಬ್ಬದ ದಿನವೂ ನನ್ನ ಈ ಮನಸ್ಥಿತಿ ಬದಲಾಗಲಿಲ್ಲ.
ಎಲ್ಲರಿಗಿಂತ ಮೊದಲು ನಾನೇ ವಿಶ್ ಮಾಡಬೇಕು, ಗಿಫ್ಟ್ ಕೊಡಬೆಕು ಅನ್ನೋ ಜಾಯಮಾನ. ರಾತ್ರಿ ಹನ್ನೆರೆಡು ಕಹೊಡೆದು ಸೆಕೆಂಡ್ ಕಳೆಯುವ ಮೊದಲೇ ಅಕ್ಕನ ಮೊಬೈಲ್ಗೆ ನನ್ನ ವಿಶಸ್ ತಲುಪಿಯಾಗಿತ್ತು. ಬಹುಶಃ ಅಂದಿನ ಮೊದಲ ಶುಭಾಶಯ ನನ್ನದೇ ಇರಬೇಕು...
ಬೆಳಿಗ್ಗೆ ಗಿಫ್ಟ್ ಕೊಡುವಾಗಲೂ ನಾನೇ ಫಸ್ಟ್ ಆಗಿರಬೆಕು ಅನ್ನೋ ಸ್ವಭಾವ...ಅಂದು ಐದು ಘಂಟೆಗೆ ಎದ್ದು...ಸ್ನಾನ ಮಾಡಿ ಸರಿಯಾಗಿ 6.10ಕಕ್ಕೆ ಮಂಗಳೂರಿನಲ್ಲಿದ್ದೆ. ಅಲ್ಲಿಂದ ಅಕ್ಕನಿಗೊಂದು ಕಾಲ್ ಮಾಡಿದಾಗ ಅಕ್ಕ ಚಚರ್್ನಲ್ಲಿದ್ದರು. ಹಾಗಾಗಿ ಫೋನ್ ತೆಗೆಯೋಕೆ ಆಗಿಲ್ಲ. ಚಚರ್ಿಂದ ಅಕ್ಕ ಬರೋ ದಾರಿಯಲ್ಲಿ ನಿಂತು ನಾನು ತಂದ ಗಿಫ್ಟ್ ಅಕ್ಕನ ಕೈಗಿಟ್ಟಿದ್ದೆ. ಆ ಸಮಯದಲ್ಲಿ ಅಕ್ಕನ ನಗು ತುಂಬಿದ ಮುಖ ನೋಡೋದೇ ಒಂಥರಾ ಖುಷಿಯಾಗಿತ್ತು.
ಇಷ್ಟೆಲ್ಲಾ ಆದ್ರೂ ನನ್ನ ಅಕ್ಕನಿಗೆ ಗಿಫ್ಟ್ ಖುಷಿಯಾಗರಬಹುದಾ? ಎಂಬ ಸಣ್ಣದೊಂದು ಭಯ! ಅಂದು ಇಡೀ ದಿನ ಅಕ್ಕನ ಫೋನ್ಗಾಗಿ ಕಾಯ್ತಾ ಇದ್ದೆ. ಆತ್ರಿ 8.35ಕ್ಕೆ ಸರಿಯಾಗಿ ಅಕ್ಕನ ಕಾಲ್ ಬಂತು. ಗಿಫ್ಟ್ ತುಂಬಾನೆ ಇಷ್ಟು ಆಯ್ತು ಅಂದರೂ ದ್ಯಾಟ್ ಡೇ ಐಯಮ್ ರಿಯಲಿ ವೆರಿ ಹ್ಯಾಪಿ....
ಒನ್ನೊಬ್ಬರ ಖುಷಿಯಲ್ಲಿ ಸಂತೋಷ ಕಾಣುವ ಮತ್ತೊಂದು ಸ್ವಭಾವ ಅಂದಿನಿಂದ ಆರಂಭವಾಯಿತು.
ಇಂದಿಗೂ ಆ ದಿನಗಳ ನನ್ನ ಮನಸ್ಥಿತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲವೊಮ್ಮೆ ನನಗೊಬ್ಬಳು ಸ್ವಂತ ಅಕ್ಕ ಇರ್ಬಾದರ್ಿತ್ತಾ ಅಂತ ಕಣ್ಣೀರು ಹಾಕಿದ್ದೂ ಇದೆ.
ಕೆಲವೊಮ್ಮೆ ನಮಗೆ ಇಷ್ಟವಾಗುವ ಸಂಬಂಧಗಳು ನಮ್ಮ ಮನಸ್ಥಿತಿಗೆ ತುಂಬಾನೇ ಹತ್ತಿರ ಆಗ್ತಾರೆ...
ಅಂಥವರಲ್ಲಿ ನನ್ನ ಅಕ್ಕನೂ ಒಬ್ಬಳು...
ರಕ್ಷಾ ಬಂಧನದ ಈ ದಿನ ಅಕ್ಕನ ಬಗ್ಗೆ ಒಂದಿಷ್ಟು ಹೇಳಬೇಕೆನಿಸಿತು....ಹೇಳಿದ್ದೀನಿ
ಪ್ರತಿಯೊಬ್ಬರ ಜೀವನದಲ್ಲೂ ಇಂಥದ್ದೊಂದು ಸಂಬಂಧ ಇದ್ದಿರಬಹುದು ಅಲ್ವಾ?
ಅಂತಿಮವಾಗಿ ರಕ್ಷಾ ಬಂಧನದ ಶುಭಾಶಯಗಳು....

                                                                                            ಧ್ವನಿ