Monday 1 April 2013

ಹಾಸ್ಟೆಲ್ ಯುವತಿಯರ ಸಾವಿನಲ್ಲಿ ಪೋಷಕರೂ ಪಾಲುದಾರರು!

ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಂಗಳೂರಿಗೆ ಹೊರ ದೇಶ, ಹೊರ ರಾಜ್ಯ ಸೇರಿದಂತೆ ಸಮೀಪದ ಅದೆಷ್ಟೋ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುವ ಹೆಣ್ಮಕ್ಕಳ ದೊಡ್ಡ ದಂಡೇ ಇದೆ. ಆದರೆ ಇಂಥ ಒಂದು ಒಳ್ಳೆಯ ಉದ್ದೇಶವಿಟ್ಟು ಕೊಂಡು ಬರುವ ಈ ವರ್ಗ ಕೆಲವೊಮ್ಮೆ ತಮ್ಮ ಜೀವನಕ್ಕೆ ಇತಿಶ್ರೀ ಹಾಡಿದ ಘಟನೆಗಳೂ ಮಂಗಳೂರಿನ ಇತಿಹಾಸದಲ್ಲಿ ದಾಖಲಾಗಿವೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳು ಹತ್ತರಲ್ಲಿ ಒಂದು ಎಂಬಂತೆ ಮುಚ್ಚಿಹೋಗುತ್ತಿರುವುದು ವಿಪಯರ್ಾಸ. ಎಲ್ಲಿಂದಲೋ ಇಲ್ಲಿ ಬಂದು ಬದುಕಿಗೆ ಅಂತ್ಯ ಹಾಡುವವರ ಜೀವನದಲ್ಲಿ ಮೇಲ್ನೋಟಕ್ಕೆ ವೈಯಕ್ತಿಕ ಸಮಸ್ಯೆಗಳು ಕಾರಣವಾಗಿ ಕಂಡರೂ ಇಲ್ಲಿನ ಕೆಲವೊಂದು ಗಂಭೀರ ಸಮಸ್ಯೆಗಳೇ ಎಲ್ಲವಕ್ಕೂ ಮೂಲ ಕಾರಣ ಎಂದರೆ ತಪ್ಪಿಲ್ಲ.
ಮನೆ ಬಿಟ್ಟು ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯು ವವರು, ಇಲ್ಲಿನ ಸಾಫ್ಟ್ವೇರ್ ಸಂಸ್ಥೆ, ಮಾಲ್ ಇಲ್ಲವೇ ಯಾವು ದಾದರೂ ಬಟ್ಟೆ ಅಂಗಡಿಗಳಲ್ಲಿ ಸೇಲ್ಸ್ ಗಲರ್್ಗಳಾಗಿ ದುಡಿ ಯುವವರ ವಾಸಸ್ಥಾನ ನಾಯಿಕೊಡೆಗಳಂತೆ ತಲೆಯೆತ್ತುವ ಪಿಜಿ ಸೆಂಟರ್ ಮತ್ತು ಹಾಸ್ಟೆಲ್ಗಳು. ಮೇಲ್ನೋಟಕ್ಕೆ ಇವೆಲ್ಲವೂ ಸುರಕ್ಷಿತ ತಾಣವಾಗಿ ಕಂಡರೂ ಇದರ ಒಳಗಿನ ಕಾಣದ ಲೋಕ ಮಾತ್ರ ತೀರಾ ಅಸಹ್ಯ ಹುಟ್ಟಿಸುತ್ತದೆ.
ಮಂಗಳೂರಿಗೆ ಬರುವ ಮುನ್ನ ತಮ್ಮ ತಮ್ಮ ಊರಿನಲ್ಲಿ ಸುಸಂಸ್ಕೃತರು, ಉತ್ತಮರು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಯುವತಿಯರು ಇಲ್ಲಿ ಬಂದ ಒಂದೇ ವರ್ಷದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ವಿದ್ಯಮಾನಗಳು ನಡೆದಿವೆ. ಪೊಲೀಸರು ಕೂಡ ಆತ್ಮಹತ್ಯೆ ಪ್ರಕರಣ ದಾಖಲಿಸಿ, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಎಂದು ಷರಾ ಬರೆದು ಫೈಲ್ ಕ್ಲೋಸ್ ಮಾಡಿದ್ದೂ ಆಗಿದೆ. ಆದರೆ ಯಾರೊಬ್ಬರೂ ಈ ಎಲ್ಲಾ ಆತ್ಮಹತ್ಯೆಗಳ ಬೆನ್ನು ಬಿದ್ದಿಲ್ಲ ಎನ್ನುವುದು ವಿಪಯರ್ಾಸ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನವರು ಪಿಜಿ ಮತ್ತು ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ಶಿಕ್ಷಣ ಇಲ್ಲವೇ ಕೆಲಸ ಮಾಡಿ ಕೊಂಡಿದ್ದವರು. ಮಂಗಳೂರಿನಲ್ಲಿ ನಾಯಿಕೊಡೆಗಳಂತೆ ನೂರಾರು ಪಿಜಿಗಳು ಹತ್ತಾರು ಹಾಸ್ಟೆಲ್ಗಳಿವೆ. ಆದರೆ ಈ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ಗಳು ಅಧಿಕೃತ ಅಲ್ಲ ಎನ್ನುವುದು ಇಲ್ಲಿರುವ ಮತ್ತೊಂದು ಆಘಾತಕಾರಿ ಸಂಗತಿ! ಅದರಲ್ಲೂ ಹೆಚ್ಚಿನ ಪಿಜಿ ಸೆಂಟರ್ಗಳು ವಾಸದ ಮನೆಯ ಉದ್ದೇಶದಿಂದ ನಿಮರ್ಿಸಿ ಕೊಂಡವಾಗಿದ್ದು, ಇವಕ್ಕೆಲ್ಲಾ ಪಾಲಿಕೆ ಪಿಜಿ ಸೆಂಟರ್ ನಡೆಸಲು ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದರೂ ಒಂದಷ್ಟು ಕಾಲೇಜು ಹುಡುಗಿಯರನ್ನು ಇಲ್ಲವೇ ಕೆಲಸಕ್ಕೆ ಹೋಗುವ ಯುವತಿಯರನ್ನು ಒಟ್ಟು ಸೇರಿಸಿ ಪಿಜಿ ಹೆಸರಿನಲ್ಲಿ ಹಣ ಮಾಡುವವರ ದೊಡ್ಡ ದಂಡೇ ಇದೆ. ಈ ಪಿಜಿಗಳಲ್ಲಿ ಉಳಿದುಕೊಳ್ಳುವ ಹೆಣ್ಣುಮಕ್ಕಳು ರಾತ್ರಿ ಎಷ್ಟು ಗಂಟೆಗೆ ಬಂದರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಈ ಮಧ್ಯೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಉಳಿಸಿಕೊಂಡಿದ್ದ ಲೇಡಿಸ್ ಹಾಸ್ಟೆಲ್ಗಳು ಕೂಡ ಅವ್ಯವಸ್ಥೆಯ ಅಡ್ಡೆಯಾಗಿ ಬದಲಾಗುತ್ತಿದೆ. ಬರೋಬ್ಬರಿ 300 ಜನರಿಗೆ ಒಬ್ಬಳೇ ಒಬ್ಬ ವಾರ್ಡನ್ ಇರುವ ಹಾಸ್ಟೆಲ್ಗಳೂ ಇವೆ. ಒಂದು ವೇಳೆ ಇಲ್ಲಿನ ವಾರ್ಡನ್ ರಜೆ ಹಾಕಿ ಊರಿಗೆ ಹೋದರೆ ಕೇಳುವವರೇ ಇಲ್ಲ ಎಂಬಂಥ ಪರಿಸ್ಥಿತಿ. ಇನ್ನು ಇಲ್ಲಿನ ಯುವತಿಯರ ಹಾಜರಾತಿ, ಸಂದರ್ಶಕರ ದಾಖಲಾತಿ ಎಲ್ಲವೂ ಅಪ್ಡೇಟ್ ಆಗುವುದೇ ಇಲ್ಲ. ಒಬ್ಬ ಯುವತಿಗೆ ತಿಂಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಶುಲ್ಕ ಪಡೆಯುವ ಈ ಖಾಸಗಿ ಹಾಸ್ಟೆಲ್ಗಳಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎನ್ನುವುದು ಇಲ್ಲಿನ ದುರಂತ ಬದುಕು ಅನುಭವಿಸಿ ಬಂದವರ ಮಾತು. ಊರು ಬಿಟ್ಟು ಬಂದ ತಪ್ಪಿಗೆ ಅನಿವಾರ್ಯವಾಗಿ ಇಲ್ಲಿನ ನರಕಸದೃಶ ಬದುಕಿಗೆ ಒಗ್ಗಿಕೊಳ್ಳಲೇ ಬೇಕಾಗಿದೆ.  
ಯುವತಿಯರು ದಾರಿ ತಪ್ಪಲು ಹಾಸ್ಟೆಲ್ ಮತ್ತು ಪಿಜಿಗಳ ಜೊತೆಗೆ ಅವರು ಕೆಲಸ ಮಾಡುವ ಕೇಂದ್ರಗಳು ಕೂಡ ಮುಖ್ಯ ಕಾರಣ ಎಂದರೆ ತಪ್ಪಿಲ್ಲ. ಅದರಲ್ಲೂ ನಗರದ ಬಹುತೇಕ ಬಟ್ಟೆ ಅಂಗಡಿಗಳು, ನಗರದ ಪ್ರಮುಖ ಮಾಲ್ಗಳಲ್ಲಿನ ಖಾಸಗಿ ಸಂಸ್ಥೆಗಳು ಯುವತಿಯರನ್ನು ರಾತ್ರಿಯವರೆಗೂ ದುಡಿಸಿಕೊಳ್ಳುತ್ತದೆ. ಈ ಮಧ್ಯೆ ಈ ಯುವತಿಯರ ಪ್ರತೀದಿನದ ಚಲನವಲನಗಳ ಮೇಲೆ ಕಣ್ಣಿಡುವ ಪೋಲಿಗಳ ವರ್ಗದ ಕಾಟ ಬೇರೆ. ಕೆಲವೊಂದು ಯುವತಿಯರು ಇವುಗಳಿಗೆ ಕೇರ್ ಅನ್ನದೇ ತಮ್ಮ ಸೋಕಾಲ್ಡ್ `ಗೂಡು ಸೇರಿದರೆ, ಇನ್ನು ಕೆಲವರು ದಾರಿ ತಪ್ಪುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು. ಈ ರೀತಿ ದಾರಿ ತಪ್ಪಿ ಆ ದಿನ ಬೇರೆಲ್ಲೋ ರಾತ್ರಿ ಕಳೆದರೂ  ಈ ಬಗ್ಗೆ ವಿಚಾರಿಸುವ ಗೋಜಿಗೆ ಯಾವೊಂದು ಹಾಸ್ಟೆಲ್ ಆಡಳಿತವೂ ಕೈ ಹಾಕುವುದಿಲ್ಲ. ಅಷ್ಟೇ ಯಾಕೆ? ಬಹುತೇಕ ಹಾಸ್ಟೆಲ್-ಪಿಜಿಗಳ ಆಡಳಿತದವರಲ್ಲಿ ಉಳಿದುಕೊಳ್ಳುವ ಯುವತಿಯರ ಮನೆ ವಿಳಾಸ ಇಲ್ಲವೇ ದೂರವಾಣಿ ಸಂಖ್ಯೆಯೂ ಇರುವುದಿಲ್ಲ. ದಿನನಿತ್ಯ ಬರುವವರು ಒಂದು ದಿನ ಬಾರದಿದ್ದರೂ ಕೇಳುವ ಅಗತ್ಯತೆ ಪಿಜಿ ಸೆಂಟರ್ ಇಲ್ಲವೇ ಹಾಸ್ಟೆಲ್ ವಾರ್ಡನ್ಗಳಿಗೆ ಇಲ್ಲ ಎನ್ನುವುದೇ ದುರಂತ.
ಈ ರೀತಿ ದಾರಿ ತಪ್ಪುವ ಯುವತಿಯರು ಕೆಲ ತಿಂಗಳು ತಮಗೇ ಗೊತ್ತಿಲ್ಲದಂತೆ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಂಡಿರುತ್ತಾರೆ. ಆದರೆ ಈ ಬಗ್ಗೆ ಜ್ಞಾನೋದಯವಾಗುವುದು ಮಾತ್ರ ಹಲವು ತಿಂಗಳುಗಳೇ ಕಳೆದ ನಂತರ. ಹೀಗಾಗಿ ಬದುಕಿನ ಅಂತಿಮ ಕ್ಷಣ ಆತ್ಮಹತ್ಯೆಯ ರೂಪದಲ್ಲಿ ದುರಂತ ಅಂತ್ಯ ಕಾಣುತ್ತದೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಎಲ್ಲೋ ಒಂದಿಬ್ಬರು ಸಾವಿಗೆ ಕಾರಣ ಕೊಟ್ಟುಹೋದರೆ, ನೂರರಲ್ಲಿ ತೊಂಬತ್ತು ಭಾಗದಷ್ಟು ಯುವತಿಯರು ಕಾರಣವನ್ನೇ ತಿಳಿಸದೆ ಇಹಲೋಕ ತ್ಯಜಿಸಿರುತ್ತಾರೆ. ಈ ಸಾವಿನ ದುಃಖ ತಡೆಯಲಾಗದೆ ಒಂದೇ ಸಮನೆ ಬೊಬ್ಬಿಡುವ ಈ ಹೆಣ್ಮಕ್ಕಳ ಕುಟುಂಬ ವರ್ಗವೂ ಸಾವಿನಲ್ಲಿ ಪಾಲುದಾರರು ಎಂಬುದು ನೆನಪಿರಲಿ. ವರ್ಷಗಟ್ಟಳೆ ಒಂಟಿಹೆಣ್ಣನ್ನು ಎಲ್ಲೋ ದೂರದಲ್ಲಿಟ್ಟು ಬೆಳೆಸಿದರೂ ಒಂದೇ ಒಂದು ಬಾರಿ ನೋಡಿಕೊಂಡು ಹೋಗುವ ಕನಿಷ್ಟ ಕಾಳಜಿಯೂ ಅವರಿಗಿರುವುದಿಲ್ಲ. ಹೀಗಾಗಿ ನಮಗೆ ಕೇಳುವವರೇ ಇಲ್ಲ ಅಂದುಕೊಂಡು ತಮ್ಮದೇ ಆದ ಸ್ವಾತಂತ್ರ್ಯ ಜೀವನ ನಡೆಸಿಕೊಂಡು ಯುವತಿಯರು ದಾರಿ ತಪ್ಪುವುದು ಸಾಮಾನ್ಯ ವಾಗಿದೆ. ಇಂದಿಗೂ ಬದುಕು ಕಳೆದುಕೊಳ್ಳುವ ಹೆಚ್ಚಿನ ಯುವತಿಯರು ಮುಗ್ಧರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ  ಇದೇ ಮುಗ್ಧತೆ ದಾರಿ ತಪ್ಪಿದಾಗ ಮಾತ್ರ ಸಾವಿನಲ್ಲಿ ಅಂತ್ಯ ಕಾಣುತ್ತದೆ. ಈ ವೇಳೆ ಸಾವಿಗೆ ಕಾರಣವಾದ ಕಾಣದ ಕೈಗಳು ವಿಜೃಂಭಿಸಿ ಮರೆಯಾಗುತ್ತದೆ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದರೆ ತಪ್ಪಿಲ್ಲ.
ಧ್ವ

No comments:

Post a Comment