Thursday 29 March 2012

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಸಕರ್ಾರಿ ಶಾಲೆ ವರ್ಸಸ್ ಖಾಸಗಿ ಶಾಲೆ!

ಇತ್ತೀಚೆಗಷ್ಟೇ ಧಾಮರ್ಿಕ ಗುರು ರವಿಶಂಕರ್ ಗುರೂಜಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ವಿವಾದಾದ್ಮಕ ಹೇಳಿಕೆ ನೀಡಿದ್ದರು. ಒಂದು ಹಂತಕ್ಕೆ ಈ ಹೇಳಿಕೆ ಕೆಲ ಸಕರ್ಾರಿ ಅಭಿಯೋಜಕರ ಟೀಕೆಗೂ ಗುರಿಯಾಗಿತ್ತು. ಈ ರೀತಿಯ ಹೇಳಿಕೆ ನೀಡಿದ ರವಿಶಂಕರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಕೊಂಡ ಸಾಚಾತನವಾದರೂ ಏನು ಎನ್ನುವುದನ್ನು ಅರಿಯಬೇಕಿದೆ. ತಾನು ಕೂಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದೇ ಇವರ ಈ ಹೇಳಿಕೆಗೆ ಕಾರಣವಾಗಿರಬಹುದು. ಸಕರ್ಾರಿ ಶಾಲೆಗಳು ಹಳ್ಳ ಹಿಡಿಯುತ್ತಿರುವ ಈ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹೆಸರನ್ನು ರಾರಾಜಿಸುವಂತೆ ಮಾಡುವುದೇ ಇವರ ಉದ್ದೇಶವಾಗಿರಲೂ ಬಹುದು.
ಸಕರ್ಾರಿ ಶಾಲೆಗಳನ್ನು ದೂರುವ ಬದಲು ಖಾಸಗಿ ಮತ್ತು ಸಕರ್ಾರಿ ಶಿಕ್ಷಣ  ಸಂಸ್ಥೆಗಳ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಲಿ. ಸಕರ್ಾರಿ ಶಾಲೆಗಳಲ್ಲಿ ಕಲಿತು ಎಷ್ಟು ಮಂದಿ ನಕ್ಸಲರಾಗಿದ್ದಾರೋ ಗೊತ್ತಿಲ್ಲ. ಆದರೆ ಸಕರ್ಾರಿ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ದೇಶದ ಮೂಲೆಮೂಲೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದು ಸತ್ಯ. ಅಷ್ಟೇ ಯಾಕೆ? 1999ರಲ್ಲಿ ಇದೇ ರವಿಶಂಕರ್ ಗುರೂಜಿಯಿಂದ ಸ್ಥಾಪನೆಯಾದ ಶ್ರೀರವಿಶಂಕರ ವಿದ್ಯಾಮಂದಿರದಲ್ಲಿ ವಿದ್ಯಾಥರ್ಿಗಳಿಗೆ ಕಲಿಸುತ್ತಿರುವ ಎಲ್ಲಾ ಶಿಕ್ಷಕರು ಖಾಸಗಿ ಶಾಲೆಗಳಲ್ಲಿಯೇ ಕಲಿತವರೇ? ಇವರಲ್ಲಿ ಯಾರೊಬ್ಬರೂ ಸಕರ್ಾರಿ ಶಾಲೆಗಳಲ್ಲಿ ಕಲಿತಿಲ್ಲವೇ? ನೆನಪಿರಲಿ. ಹಿಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳು ಸಕರ್ಾರಿ ಅಧೀನದಲ್ಲೇ ಇದ್ದವು. ಅಷ್ಟೇ ಯಾಕೆ? ಇಂದಿನ ಬಹುತೇಕ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಪದ್ದತಿಗೆ ಮೂಲ ಸಕರ್ಾರಿ ಶಿಕ್ಷಣವೇ. ಈಗಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಬಸ್ ಒದಗಿಸಬಹುದು, ಆಧುನಿಕ ಶಿಕ್ಷಣ ಪದ್ದತಿ ಕಾರ್ಯಕತಗೊಳಿಸಬಹುದು, ಇಲ್ಲವೇ ಪ್ರಯೋಗಗಳ ಮೂಲಕ ಮಕ್ಕಳ ಬುದ್ದಿಮತ್ತೆ ಹೆಚ್ಚಿಸುವ ಕೆಲಸ ಮಾಡಬಹುದು. ಇವುಗಳಲ್ಲಿ ಮಾತ್ರ ಸಕರ್ಾರಿ ಮತ್ತು ಖಾಸಗಿ ಶಾಲೆಗಳಿಗೆ ವ್ಯತ್ಯಾಸ ಇರುವುದನ್ನು ಬಿಟ್ಟರೆ, ಬೇರ್ಯಾವ ವಿಧದಲ್ಲೂ ಇವುಗಳನ್ನು ವಿಭಜಿಸಿ ನೋಡುವಂತಿಲ್ಲ. ಒಂದು ವಿಧದಲ್ಲಿ ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಂದ ನಮ್ಮ ದೇಶಕ್ಕೆ ಎಳ್ಳಷ್ಟೂ ಲಾಭವಿಲ್ಲ. ಡಾಕ್ಟರ್, ಎಂಜಿನಿಯರ್ ಮಾಡಿಕೊಂಡು ವಿದೇಶದ ವಿಮಾನ ಹತ್ತುವವರೇ ನಮ್ಮಲ್ಲಿ ಹೆಚ್ಚಿದ್ದಾರೆ. ಆದರೆ ಸಕರ್ಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರು ಐಎಎಸ್, ಐಪಿಎಸ್ ಮಾಡಿಕೊಂಡೋ ಅಥವಾ ಇಲ್ಲೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡೋ ದೇಶದಲ್ಲೇ ಉಳಿದು ದೇಶ ಸೇವೆ ಮಾಡುತ್ತಾರೆ. ಇದನ್ನು ಮೊದಲು ನಮ್ಮ ಧಾಮರ್ಿಕ ನಾಯಕರು ಅರಿತು ಕೊಳ್ಳಲಿ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾಥರ್ಿಗಳು ಬಾವಿಯೊಳಗಿನ ಕಪ್ಪೆ ಎನ್ನುವುದು ನೆನಪಿರಲಿ. ಇವರಿಗೆ ಅತಿಯಾಗಿ ವಿಧಿಸುವ ಇತಿಮಿತಿಗಳೇ ಇದಕ್ಕೆ ಕಾರಣ. ಆದರೆ ಸಕರ್ಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಒಂದು ರೀತಿ ಸ್ವಚ್ಚಂದ ಹಕ್ಕಿಗಳಿದ್ದಂತೆ. ಪುಸ್ತಕದ ವಿಚಾರಕ್ಕಿಂತ ಸಾಮಾನ್ಯ ಜ್ಞಾನವೇ ಇವರಲ್ಲಿ ಹೆಚ್ಚಿರುತ್ತದೆ. ಹಾಗಾಗಿಯೇ ಇಂದು ಬಹುತೇಕ ಆಡಳಿತಾತ್ಮಕ ಹುದ್ದೆಗಳಲ್ಲಿ ಸಕರ್ಾರಿ ಶಾಲೆಯಲ್ಲಿ ಕಲಿತವರೇ ಇರುವುದು. ಎಲ್ಲವನ್ನೂ ಶ್ರೀಮಂತಿಕೆಯ ಮೇಲೆ ಅಳೆಯುವ ಕೆಲವರಿಗೆ ಇದೆಲ್ಲಾ ಹೇಗೆ ತಾನೇ ಅರ್ಥವಾಗಬೇಕು.
ಇವರುಗಳ ದೃಷ್ಟಿಯಲ್ಲಿ ದೇಶದ ವಿಚಾರದಲ್ಲಿ ಮೂಗು ತೂರಿಸುವವರು ನಕ್ಸಲರು, ಉಗ್ರಗಾಮಿಗಳು! ಅದೇ ತಮ್ಮ ಸ್ವಹಿತಾಸಕ್ತಿಗಾಗಿ ಡಾಕ್ಟರ್, ಎಂಜಿನಿಯರ್ ಆಗುವವರು ಮಹಾ ಮೇಧಾವಿಗಳು. ಒಂದು ನೆನಪಿಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವವರು ತಮ್ಮ ಸ್ವಹಿತಾಸಕ್ತಿಯನ್ನೇ ಯೋಚಿಸುತ್ತಾರೆಯೇ ವಿನಃ ಅವರಿಗೆ ದೇಶದ ಬಗ್ಗೆಯಾಗಲೀ ಸಮಾಜದ ಬಗ್ಗೆಯಾಗಲೀ ಚಿಂತನೆಗಳಿರುವುದಿಲ್ಲ. ಎಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಿರುವುದರ ಪರಿಣಾಮ ಇಂದು ನಿಧಾನವಾಗಿ ನಮಗೆ ಗೋಚರವಾಗುತ್ತಿದೆ. ಇದರ ಪರಿಣಾಮವಾಗಿಯೇ ಇಂದು ದೇಶ ಕಾಯಲು ಸೈನಿಕರಿಲ್ಲ, ಪೊಲೀಸ್ ಆಧಿಕಾರಿಯಾಗಲೂ ನಿಷ್ಠಾವಂತರಿಲ್ಲ. ಎಲ್ಲರಿಗೂ ಡಾಕ್ಟರ್, ಎಂಜಿಯರ್ಗಳೇ ಆಗಬೇಕು. ಈಗ ಹೇಳಿ ಸಕರ್ಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆಯೇ ಅಥವಾ ದೇಶದ ಉತ್ತಮ ಪ್ರಜೆಯನ್ನು ಸೃಷ್ಟಿಸುತ್ತಿದೆಯೇ

Tuesday 27 March 2012

ರಾತ್ರೀ ದುಶ್ಮನ್ಗಳೂ ನೆನಪಾಗ್ತಾರೆ!

ರಾತ್ರೀ ದುಶ್ಮನ್ಗಳೂ ನೆನಪಾಗ್ತಾರೆ! 
ಒಬ್ಬ ವ್ಯಕ್ತಿ ಎಷ್ಟೇ ಪವರ್ಫುಲ್ ಇರಲಿ, ಕೋಪಿಷ್ಟ ಆಗಿರಲಿ, ಪಕ್ಕಾ 420 ಆಗಿರಲಿ. ಒಮ್ಮೆ ಒಂದು ಫೀಲಿಂಗ್ ಸಾಂಗ್ ಹಾಕೊಂಡು ಒಬ್ಬನೇ ಬೆಟ್ಟದ ತುದೀಲೋ, ಮರದ ಬುಡದಲ್ಲೋ ಅಥವಾ ಯಾರೂ ಇಲ್ಲದೇ ಇರೋ ಸೈಲೆಂಟ್ ಜಾಗದಲ್ಲೋ ಕೂತರೆ ಆತ ತನ್ನನ್ನೇ ತಾನು ಮರೆತು ಬಿಡ್ತಾನೆ. ಸ್ವಲ್ಪ ಸೆನ್ಸಿಟಿವ್ ಅಂತ ಇಟ್ಕೊಳ್ಳಿ, ಆತನ ಕಣ್ಣಿಂದ ಒಂದು ಹನಿ ನೀರು ಜಾರಿದರೂ ಆಶ್ಚರ್ಯ ಇಲ್ಲ ಬಿಡಿ. ಮನುಷ್ಯನ ಜೀವನವೇ ಹಾಗೆ ಕಣ್ರೀ. ನಾವು ಒಬ್ಬರನ್ನು ತುಂಬಾ ಹೊಗಳ್ತೀವಿ, ಇನ್ನು ಕೆಲವರನ್ನು ನಮ್ಮ ದ್ವೇಷಿ ಅಲ್ಲದೇ ಇದ್ದರೂ ಸುಮ್ ಸುಮ್ಮನೆ ತೆಗಳ್ತೀವಿ. ಅದೇ ರಾತ್ರಿ ಮಲಗೋವಾಗ ಒಮ್ಮೆ ನಮ್ಮ ಸೋಕಾಲ್ಡ್ ದ್ವೇಷಿಗಳನ್ನು ನೆನಪು ಮಾಡಿಕೊಳ್ಳಿ. ಒನ್ಟೈಮ್ ಅವರೂ ಕೂಡ ನಮಗೆ ತುಂಬಾ ಹತ್ತಿರ ಆಗ್ತಾರೆ. ಬೇಕಾದ್ರೆ ರಾತ್ರೀ ಮಲಗೋ ಮುಂಚೆ ಟ್ರೈ ಮಾಡಿ.
ನಮ್ಮ ಬಿಡುವಿಲ್ಲದ ಜೀವನದ ಮಧ್ಯೆ ಸಿಗೋರೆಲ್ಲಾ ನಮಗೆ ದುಷ್ಮನ್ಗಳೇ. ಆದ್ರೆ ರಾತ್ರೀ ಮಲಗೋವಾಗ ಜಸ್ಟ್ ರಿಲ್ಯಾಕ್ಸ್ ಆಗ್ತೀವಲ್ಲ. ಆವಾಗ ನಾವ್ ಯಾರನ್ನಾ ದುಶ್ಮನ್ ಅಂದುಕೊಳ್ತೀವೋ, ಅವರೂ ಕೂಡ ತುಂಬಾ ಹತ್ತಿರ ಆಗ್ತಾರೆ..........ಜಸ್ಟ್ ಫೀಲ್ ಇಟ್....
ಮತ್ತೆ ಕೆಲವೊಮ್ಮೆ, ನಾವು ತುಂಬಾ ಇಷ್ಟ ಪಟ್ಟವರು  ನಾವು ಮಲಗೋವಾಗ ನಮಗೆ ದುಶ್ಮನ್ ಥರ ಕಾಣ್ತಾರೆ...ಯಾಕ್ ಗೊತ್ತಾ? ಹಗಲೊತ್ತಲ್ಲಿ ಅವರು ನಮ್ ಜೊತೆ ಮಾತಾಡ್ಲಿಲ್ಲ ಅಂದ್ರೆ ಮಾತ್ರ! ಬಹುಶಃ ಇದೇ ಇರಬೇಕು ಮನುಷ್ಯ ಪ್ರೀತೀಲಿ ಅನುಭವಿಸೋ ಗೊಂದಲಗಳು.....!
ಮತ್ತೆ ಕೆಲವೊಂದು ವಿಚಾರಗಳೇ ಹಾಗೆ. ಯಾರಲ್ಲಿ ಹೇಳಬೇಕು ಅನಿಸುತ್ತೋ ಅವರಲ್ಲೇ ಹೇಳಬೇಕು. ಅಪ್ಪಿ ತಪ್ಪೀನೂ ಇನ್ನೊಬ್ಬರ ಹತ್ತಿರ ಹೇಳೋದಕ್ಕೆ ಸಾಧ್ಯನೇ ಇಲ್ಲ. ನಾವು ಯಾರನ್ನೂ ಹೆಚ್ಚು ಇಷ್ಟ ಪಡ್ತೀವೋ ಅವರ ಹತ್ತಿರ ಮಾತ್ರ ನಮ್ಮ ಮನದ ಭಾವನೆಗಳು ಪ್ರಕಟವಾಗೋದು. ಆದ್ರೆ ಒಮ್ಮೊಮ್ಮೆ ಅವರತ್ರಾನೂ ಸುಳ್ಳು ಹೇಳ್ತೀವಿ. ಯಾಕೆ ಅಂತೀರಾ? ಅದೇ ಕಣ್ರೀ, ಬಡ್ಡಿ ಮಗಂದೂ ಸ್ವಾಭಿಮಾನ....! ಇಷ್ಟ ಪಟ್ಟವರತ್ರ ಒಳ್ಳೆದನ್ನು...ಅವರು ನಮ್ಮ ಬಗ್ಗೆ ತಪ್ಪು ತಿಳ್ಕೋಳ್ಳದೇ ಇರೋ ವಿಚಾರಗಳನ್ನು ಮಾತ್ರ ಹೇಳ್ತೀವಿ. ಎಲ್ಲಾನೂ ಹೇಳ್ ಬಿಟ್ರೆ ಮನುಷ್ಯನಿಗೆ ಎಲ್ರೀ ಇರುತ್ತೆ ಸಮಸ್ಯೆ....ಹೌದಲ್ವಾ?
ನಾನ್ ಹೇಳಿದ್ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.....ಜಸ್ಟ್ ಫೀಲ್ ಇಟ್....ನಿಮಗೆ ಈ ಅನುಭವ ಆಗಿದ್ರೆ.....ಮನಸ್ಸಲ್ಲೇ ಒಂದ್ ಸ್ಮೈಲ್ ಕೊಟ್ ಬಿಡಿ ಸಾಕು....ಓಕೇನಾ...?
 

Monday 26 March 2012

ಬೆಳಗುತ್ತಿದೆ ಮಾಧ್ಯಮ ಲೋಕ ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!


ಬೆಳಗುತ್ತಿದೆ ಮಾಧ್ಯಮ ಲೋಕ
ಹತ್ತಾರು ಚಾನೆಲ್, ಎರಡು ರುಪಾಯಿಗೂ ಪೇಪರ್!
ಹೌದು, ಮಾಧ್ಯಮ ಲೋಕ ಬೆಳಗುತ್ತಿದೆ. ಒಂದು ಕಾಲದಲ್ಲಿ ಪತ್ರಿಕೆಗಳನ್ನು ಬಿಟ್ಟರೆ ಜನರಿಗೆ ಸುದ್ದಿ ತಿಳಿದುಕೊಳ್ಳುವ ಸಾಧನ ಇನ್ನೊಂದಿರಲಿಲ್ಲ. ಅದರಲ್ಲೂ ಕನ್ನಡ ಮಾಧ್ಯಮ ವಲಯದಲ್ಲಿ ಸುದ್ದಿ ವಾಹಿನಿಗಳಿಗೆ ಬರವಿತ್ತು ಎಂದರೆ ಖಂಡಿತಾ ತಪ್ಪಿಲ್ಲ. ಸಕರ್ಾರಿ ಸ್ವಾಮ್ಯದ ದೂರದರ್ಶನವನ್ನು ಬಿಟ್ಟರೆ ಜನರ ಮನೋರಂಜನೆಗೆ ಆ ಕಾಲದಲ್ಲಿ ತುಂಬಾನೆ ಕೊರತೆಯಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಗಲ್ಲಿಗೊಂದರಂತೆ ಚಾನೆಲ್ಗಳು ಹುಟ್ಟಿಕೊಳ್ಳುತ್ತಿವೆ. ವಿನೂತನ ಪ್ರಯೋಗಗಳು ನಡೆಯುತ್ತಿವೆ. ಟಿಆರ್ಪಿಯ ಬಾಲ ಹಿಡಿದು `ನಾವೇನ್ ಬೇಕಾದ್ರೂ ಮಾಡ್ತೀವಿ ಅನ್ನೋ ಚಾನೆಲ್ಗಳೂ ಇವೆ.
ಕನ್ನಡ ಟೆಲಿವಿಷನ್ ಲೋಕದಲ್ಲಿ ಮೊಟ್ಟ ಮೊದಲನೆಯದಾಗಿ ಪ್ರಸಾರಗೊಂಡ ಧಾರವಾಹಿ `ಸಿಹಿಕಹಿ. ಎಚ್.ಎನ್.ಕೆ ಮೂತರ್ಿಯವರ ಸಾರಥ್ಯದಲ್ಲಿ ಬೆಂಗಳೂರು ದೂರದರ್ಶನ 1983ರಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. ಅಲ್ಲಿಂದ ಧಾರವಾಹಿಗಳ ಸಣ್ಣದೊಂದು ಪರ್ವ ಆರಂಭವಾಯಿತೇ ವಿನಃ, ಸುದ್ದಿ ಚಾನೆಲ್ಗಳನ್ನು ಸ್ಥಾಪಿಸುವ ಮನಸ್ಸನ್ನು ಯಾರೊಬ್ಬರೂ ಮಾಡಲಿಲ್ಲ. ತದನಂತರ ಹುಟ್ಟಿಕೊಂಡದ್ದೇ ತಮಿಳು ನಾಡಿನ ಕಲಾನಿಧಿ ಮಾರನ್ ಮಾಲಕತ್ವದ ಉದಯ ಟಿವಿ. ಈ ವಾಹಿನಿ ಕನ್ನಡ ಟೆಲಿವಿಷನ್ ಲೋಕದಲ್ಲಿ ತನ್ನದೇ ಆದ ಚಾಪು ಮೂಡಿಸಿತ್ತು. ವಿನೂತನ ಪ್ರಯೋಗಗಳ ಮೂಲಕ ಟೆಲಿವಿಷನ್ ಲೋಕದಲ್ಲಿ ಖ್ಯಾತಿ ಗಳಿಸಿತ್ತು. ಮುಂದೆ ಇದೇ ವಾಹಿನಿ ಪ್ರಥಮ ಕನ್ನಡ ಸುದ್ದಿ ವಾಹಿನಿಯನ್ನೂ ತೆರೆಗೆ ತರುವ ಮೂಲಕ ಮಾಧ್ಯಮ ಲೋಕದಲ್ಲಿ ಹೊಸ ಭಾಷ್ಯ ಬರೆಯಿತು. ಆದರೆ ಈ ವಾಹಿನಿ ಸುದ್ದಿ ಜಗತ್ತಿನಲ್ಲಿ ತನ್ನದೇ ಆದ ಧ್ಯೇಯಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಅಷ್ಟಾಗಿ ಜನತೆ ಇದರತ್ತ ಆಕಷರ್ಿತರಾಗಲಿಲ್ಲ. ನಂತರ ವರ್ಷಗಳೇ ಕಳೆದರೂ ಟಿವಿ ಮಾದ್ಯಮ ಲೋಕ ಬೆಳಗುವ ಯಾವುದೇ ಸುಳಿವುಗಳು ಲಭ್ಯವಾಗಲಿಲ್ಲ. ಕೆಲ ವರ್ಷಗಳ ನಂತರ ತನ್ನದೇ ಆದ ಪತ್ರಕೋದ್ಯಮದ ಧ್ಯೇಯಗಳೊಂದಿಗೆ ಆರಂಭವಾದದ್ದು ಟಿವಿ9 ಎಂಬ ಕನ್ನಡ ಸುದ್ದಿವಾಹಿನಿ. ತನ್ನದೇ ಆದ ಸ್ಪಷ್ಟ ನಿಲುವಿನೊಂದಿಗೆ ಅನ್ಯರಾಜ್ಯದ ಒಡೆತನದಲ್ಲಿದ್ದರೂ ಕನ್ನಡ ಮಾದ್ಯಮ ಲೋಕದಲ್ಲಿ ಈ ವಾಹಿನಿ ಸಾಕಷ್ಟು ಸದ್ದು ಮಾಡಿತು. ಒಂದು ಹಂತಕ್ಕೆ ಇಡೀ ಭಾರತ ದೇಶದಲ್ಲೇ ಟಿಆರ್ಪಿ ಟಾಪರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಯಾವುದೇ ರಾಜಕೀಯ ವ್ಯಕ್ತಿಗಳ ಒಡೆತನದಲ್ಲಿ ಈ ವಾಹಿನಿ ಇಲ್ಲ ಎನ್ನುವುದೇ ಇದರ ಪ್ರಖ್ಯಾತಿಗೆ ಕಾರಣ ಎಂದರೂ ತಪ್ಪಿಲ್ಲ.
ಟಿವಿ9 ಕನ್ನಡ ವಾಹಿನಿ ಕನ್ನಡ ಸುದ್ದಿ ಲೋಕದಲ್ಲಿ ಮಾಡಿದ ಕ್ರಾಂತಿ, ಅಳವಡಿಸಿಕೊಂಡ ಅತ್ಯಧ್ಬುತ ತಂತ್ರಜ್ಞಾನಗಳು ದೇಶದ ಬಹುತೇಕ ಮಾದ್ಯಮ ದಿಗ್ಗಜರನ್ನು ಬೆರಗುಗೊಳಿಸಿತು. ಒಂದು ಕಾಲದಲ್ಲಿ ಕೇವಲ ಮನೋರಂಜನಾ ವಾಹಿನಿಗಳಿಗೆ ಮಾತ್ರ ಸೀಮಿತವಾಗಿದ್ದ ಕೆಲವೊಂದು ಕಂಪೆನಿಗಳು ಕನರ್ಾಟಕದಲ್ಲಿ ತನ್ನ ಸುದ್ದಿ ವಾಹಿನಿಗಳ ಸ್ಥಾಪನೆಗೆ ಇಳಿದವು. ಪರಿಣಾಮ ಸುವರ್ಣ ನ್ಯೂಸ್,   ಈ ಹಿಂದೆ ಶ್ರೀರಾಮುಲು ಒಡೆತನದಲ್ಲಿದ್ದ ಜನಶ್ರೀ, ಸಮಯ, ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್, ಇತ್ತೀಚೆಗಷ್ಟೇ ಹಿರಿಯ ಪತ್ರಕರ್ತ ರಂಗನಾಥ್ರವರ ಪಬ್ಲಿಕ್ ಟಿವಿಯೂ ಕೂಡ ಕನರ್ಾಟಕದಲ್ಲಿ ತನ್ನ ಅದೃಷ್ಟ ಪರೀಕ್ಷೆಗಿಳಿದಿದೆ. ದಿನಕ್ಕೊಂದು ವಿಶೇಷತೆಗಳ ಜೊತೆಗೆ ಜನರ ಮುಂದೆ ಬರುವುದು ಈ ವಾಹಿನಿಗಳ ಉದ್ದೇಶವೇ ಆದರೂ ಜನರಿಗೆ 24*7 ಸುದ್ದಿ ನೀಡುವುದು ಇವುಗಳ ಕರ್ತವ್ಯ. ಒಂದು ಕಾಲದಲ್ಲಿ ದಿನದ ಹೆಚ್ಚಿನ ಸಮಯವನ್ನು ಟಿವಿ ಸೀರಿಯಲ್ಗಳನ್ನು ನೋಡಿಕೊಂಡು ಕಳೆಯುತ್ತಿದ್ದ ವೀಕ್ಷಕರ ಅಭಿರುಚಿ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಸುದ್ದಿವಾಹಿನಿಗಳು ಭಿತ್ತರಿಸುವ ಅರ್ಧಘಂಟೆಯ ಕಾರ್ಯಕ್ರಮಗಳೇ ಜನರ ಪಾಲಿನ ಟಿವಿ ಸೀರಿಯಲ್ಗಳಾಗಿದೆ. ಇಲ್ಲಿ ಟೀಕೆಯೂ ಇದೆ, ಬೆನ್ನು ತಟ್ಟುವ ಪ್ರೋತ್ಸಾಹವೂ ಇದೆ. ಇದಕ್ಕೇ ಹೇಳಿದ್ದು, ಮಾಧ್ಯಮ ಲೋಕ ಬೆಳಗುತ್ತಿದೆಯೆಂದು!

ಮಾರುಕಟ್ಟೆಗೆ ಬರುತ್ತಿದೆ ಎರಡು ರುಪಾಯಿ ಪತ್ರಿಕೆ!
ಸುದ್ದಿ ವಾಹಿನಿಗಳ ಟಿಆರ್ಪಿ ಸಮರದ ಮಧ್ಯೆ ಓದುಗರೇ ಜೀವಾಳವಾದ ಪತ್ರಿಕೆಗಳು ತನ್ನ ಪ್ರಸರಣ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಪತ್ರಿಕೆಗಳು ಅನಿವಾರ್ಯವಾಗಿ ದರ ಹೆಚ್ಚಳಕ್ಕೆ ಇಳಿದದ್ದೂ ಆಗಿದೆ. ಆದರೆ ಪತ್ರಿಕಾ ರಂಗದ ದರ ಸಮರದ ಮಧ್ಯೆಯೇ ಎರಡು ರುಪಾಯಿಗೆ ಕನ್ನಡದಲ್ಲೊಂದು ಪತ್ರಿಕೆ ಮಾರುಕಟ್ಟೆಗೆ ಬರಲು ಸಿದ್ದತೆ ನಡೆಸಿದೆ. ಈ ಪತ್ರಿಕೆಯ ಮುಂದೆ ತಮ್ಮ ಪತ್ರಿಕೆಗಳನ್ನು ಉಳಿಸುವುದಾದರೂ ಹೇಗೆ ಎಂಬ ಭಯ ಕೆಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಆರಂಭವಾಗಿದ್ದು, ಇದು ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಲಿದೆಯೇ ಎಂಬ ಮಾತು ಪತ್ರಿಕಾ ವಲಯದಲ್ಲಿ ಕೇಳಿ ಬಂದಿದೆ.
ಸುದ್ದಿ ಚಾನೆಲ್ಗಳು ವೈಭವೋಪೇತವಾಗಿ ಕಂಡರೂ ಪತ್ರಿಕೆಗಳ ಮುಂದೆ ಅದರ ಸಾಧನೆ ನಗಣ್ಯವೇ. ಸುದ್ದಿ ಚಾನೆಲ್ಗಳ ನಿರ್ವಹಣಾ ವೆಚ್ಚಕ್ಕಿಂತಲೂ ಹೆಚ್ಚಿನ ಖಚರ್ು ಪತ್ರಿಕೆಗಳನ್ನು ಉಳಿಸಿ ಬೆಳೆಸಲು ಬೇಕು ಎಂದರೆ ನಂಬಲೇ ಬೇಕು. ಇದರ ಮಧ್ಯೆ ಪತ್ರಿಕೆಗಳ ದರ ಸಮರ ಪತ್ರಿಕಾ ರಂಗದ ದೊಡ್ಡ ಸಮಸ್ಯೆಗಳಲ್ಲೊಂದು. ಒಂದು ಕಾಲದಲ್ಲಿ ಬೆರಳಣೆಕೆಯಷ್ಟಿದ್ದ ಪತ್ರಿಕೆಗಳ ಸಂಖ್ಯೆ ಇಂದು ಒಂದೇ ಸಮನೆ ಏರ ತೊಡಗಿದೆ. ಈ ಮಧ್ಯೆ ಕನ್ನಡದಲ್ಲೊಂದು ಪತ್ರಿಕೆ ನೂತನ ದರ ಸಮರಕ್ಕೆ ಸಜ್ಜಾಗಿದೆ. ಈ ಮೂಲಕ ದೊಡ್ಡ ಪತ್ರಿಕೆಗಳ ಆತ್ಮವಿಶ್ವಾಸಕ್ಕೆ ಧಕ್ಕೆ ಬರಲಿದೆಯೇ ಎಂಬ ಬಗ್ಗೆ ಪತ್ರಿಕಾ ವಲಯದಲ್ಲಿ ಬಿಸಿಬಿಸಿ ಚಚರ್ೆಗಳು ನಡೆಯುತ್ತಿವೆ. ಹದಿನಾರು ಪುಟಗಳನ್ನು ಕಲರ್ಫುಲ್ ಆಗಿ ಹೊರತರುವ ಯೋಜನೆಯೊಂದಿಗೆ ವಿಆರ್ಎಲ್ ಸಮೂಹದ ವಿಜಯ್ಸಂಕೇಶ್ವರ ಸಂಪೂರ್ಭ ಸಿದ್ದತೆ ನಡೆಸಿದ್ದಾರೆ. ಮುಂದಿನ ಎಪ್ರಿಲ್ಗೆ ಈ ಪತ್ರಿಕೆ ಕೈ ಸೇರುವುದು ನಿಶ್ಚಿತ!

ಎಲ್ಲರೂ ಇಂಗ್ಲೀಷ್ ಮೀಡಿಯಮ್! ಮುಂದಾ?
ಪ್ರತೀ ನಿಮಿಷಕ್ಕೂ ಬದಲಾವಣೆ ಕಂಡುಕೊಳ್ಳುವ ಈ ಸಮಾಜದಲ್ಲಿ ಶೈಕ್ಷಣಿಕವಾಗಿಯೂ ಬದಲಾವಣೆಗಳಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದರಿಂದ ನಮ್ಮ ಕನ್ನಡ ಪತ್ರಿಕೆಗಳಿಗೆ ಏಟು ಬೀಳುವುದಂತೂ ಗ್ಯಾರಂಟಿ! ಮುಂದೆ ಹತ್ತು ವರ್ಷ ಕಳೆದರೆ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಒಂದೇ ಸಮನೆ ಇಳಿಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಇಂದಿನ ಕನ್ನಡ ಪತ್ರಿಕೆಗಳ ಸಕ್ಯರ್ೂಲೇಶನ್ ಜಾಗವನ್ನು ಮುಂದೆ ಇಂಗ್ಲೀಷ್ ಪತ್ರಿಕೆಗಳು ಆಕ್ರಮಿಸಿದರೆ ಅಚ್ಚರಿ ಪಡಬೇಕಿಲ್ಲ. ಇಂಗ್ಲೀಷ್ ಮಾಧ್ಯಮದ ಅಬ್ಬರಕ್ಕೆ ಕನ್ನಡ ಮಾಧ್ಯಮ ಶಾಲೆಗಳೇ ಬಾಗಿಲು ಮುಚ್ಚುತ್ತಿದೆ. ಹೀಗಿರುವಾಗ ಮಂದಿನ ಪೀಳಿಗೆ ಕನ್ನಡ ಪತ್ರಿಕೆಗಳನ್ನು ಓದುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ. ಈಗಿನ ಎಲ್ಕೆಜಿ ಮಕ್ಕಳ ಕೈಯಲ್ಲೇ ಹಿಂದು, ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ರಾರಾಜಿಸುತ್ತಿರುವಾಗ ಮುಂದೆ ಕನ್ನಡ ಪತ್ರಿಕೆಗಳ ಉಳಿವು ಸಾಧ್ಯಾನಾ? ನೆನಪಿರಲಿ, ಇದು ಕನ್ನಡ ಪತ್ರಿಕೆಗಳಿಗೆ ಮಾತ್ರವಲ್ಲ. ಕನ್ನಡದ ಇಲೆಕ್ಟ್ರಾನಿಕ್ ಮೀಡಿಯಾಗಳಿಗೂ...!


ಪತ್ರಿಕೋದ್ಯಮಕ್ಕೆ ವಿಪುಲ ಅವಕಾಶ
ಇಂದು ಪತ್ರಕೋದ್ಯಮ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿಯೇ ಪತ್ರಿಕೋದ್ಯಮ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚಿದೆ. ಇವರ ಮುಖ್ಯ ಉದ್ದೇಶ ಪತ್ರಿಕೆಗಳನ್ನು ಸೇರುವುದು ಎನ್ನುವುದಕ್ಕಿಂತ ಸುದ್ದಿ ವಾಹಿನಿಗಳು ಎನ್ನುವುದು ಅಷ್ಟೇ ಸತ್ಯ. ಕೈಯಲ್ಲೊಂದು ಮೈಕ್ ಹಿಡಿದು ಬೀದಿಗಿಳಿದರೆ ನಮ್ಮ ಘನತೆ ಹೆಚ್ಚುತ್ತದೆ ಅಂದುಕೊಳ್ಳುವವರ ಸಂಖ್ಯೆ ಇದರಲ್ಲಿ ಸ್ವಲ್ಪ ಹೆಚ್ಚೇ ಇದೆ. ಇಂದು ಸಿನಿಮಾ ನಟರಷ್ಟೇ ಖ್ಯಾತಿ, ಹೆಸರನ್ನು ಸುದ್ದಿ ವಾಹಿನಿಗಳ ಆ್ಯಂಕರ್ಗಳು ಪಡೆದುಕೊಂಡಿರುತ್ತಾರೆ. ಹಾಗಾಗಿ ನೈಜ ಪತ್ರಿಕೋದ್ಯಮದ ಉದ್ದೇಶಗಳೇ ಇಲ್ಲದೆ ಕೆಲಸ ಗಿಟ್ಟಿಸಿಕೊಳ್ಳಲು ಈ ವಿಭಾಗವನ್ನು ಆರಿಸಿಕೊಳ್ಳುವವರೂ ಇದ್ದಾರೆ. ಏನೇ ಆದರೂ ಇಂದು ಮಾದ್ಯಮ ರಂಗ ಬೆಳೆಯುತ್ತಿದೆ ಎನ್ನುವುದು ಅಷ್ಟೇ ಸತ್ಯ.

Sunday 25 March 2012

ಇಷ್ಟ ಪಟ್ಟವರನ್ನು ಯಾವತ್ತೂ ಕಳೆದುಕೊಳ್ಳಬೇಡಿ!


ಇಷ್ಟ ಪಟ್ಟವರನ್ನು ಯಾವತ್ತೂ ಕಳೆದುಕೊಳ್ಳಬೇಡಿ!
ಕೆಲವೊಂದು ವಿಚಾರಗಳೇ ಹಾಗೆ. ಬೇಡ ಅಂದರೂ ಮತ್ತೆ ಮತ್ತೆ ನೆನಪಾಗುತ್ತದೆ.  ಅದೇ ರೀತಿ ಕೆಲವೊಂದು ನೆನಪುಗಳು ಕೂಡ... ಇಷ್ಟ ಪಟ್ಟವರು ದೂರ ಆದ ನಂತರ ಕೂಡ ಮತ್ತೆ ನೆನಪಾಗ್ತಾರೆ. ಅವರು ಹತ್ತಿರ ಇಲ್ಲ ಅಂತ ಯೋಚನೆ ಮಾಡಿಕೊಳ್ಳೋಕು ಸಾಧ್ಯ ಇಲ್ಲ ಅಂತ ಅನಿಸಿ ಬಿಡುತ್ತೆ. ಫ್ರೆಂಡ್ಸ್, ಇವತ್ತು ನಿಮಗೆಲ್ಲಾ ಒಂದು ಸಣ್ಣ ಕಥೆ ಹೇಳ್ತೀನಿ. ನಿಮಗೆ ಸಮಯ ಇದ್ದರೆ ಓದಿ.. ಇಲ್ಲಾಂದ್ರೆ ನಿಮ್ಮಷ್ಟ.....
LIFE IS SHORT.....................BUT MEMORIES  ARE.....................!?
ನನಗೆ ತುಂಬಾ ಹತ್ತಿರವಾದ ಜೀವದ ಕಥೆ ಇದು. ಆ ಜೀವ ಇನ್ನೊಂದು ಜೀವವನ್ನು ಇಷ್ಟ ಪಟ್ಟ ಕಥೆ ಇದು. ಆ ಪುಟ್ಟ ಜೀವ ಹುಟ್ಟಿದ್ದು ಒಂದು ಸಣ್ಣ ಬಡ ಕುಟುಂಬದಲ್ಲಿ. ಭೂಮಿಗೆ ಇಳಿದಿದ್ದೇ ತಡ, ಆ ಜೀವಕ್ಕೆ ಹತ್ತಿರವಾಗಬೇಕಿದ್ದ ಸಂಬಂಧಗಳು ದೂರ ಆದವು. ತಾಯಿ ಒಬ್ಬರನ್ನು ಬಿಟ್ಟರೆ ಜೀವಕ್ಕೆ ಇನ್ಯಾರು ಸಿಗಲೇ ಇಲ್ಲ. ಮಾನವೀಯ ಸಂಬಂಧಗಳು ಅಂದ್ರೆ ಏನು ಅಂತಾನೆ ತಿಳಿದುಕೊಳ್ಳುವ ಅವಕಾಶನೇ ಆ ದೇವರು ನೀಡಲಿಲ್ಲ. ಹುಟ್ಟು ಅನಿವಾರ್ಯ ಅನ್ನೋ ಹಾಗೆ ಹುಟ್ಟಿಬಿಡ್ತು ಆ ಜೀವ...ಮುಂದೆ... ಎಲ್ಲರ ಹಾಗೆ ಶಾಲೆ..ಕಾಲೇಜು...ಸಣ್ಣ ಆಸೆಗಳ ಮಧ್ಯೆ ಒಂದು ಜೀವನ... ಇವುಗಳ ಮಧ್ಯೆ ಕೊರತೆ ಇದ್ದದ್ದು ಮಾತ್ರ ಕೆಲವೊಂದು ಮಾನವೀಯ ಸಂಬಂಧಗಳಿಗೆ ಮಾತ್ರ....
ಹುಟ್ಟಿದ ಮೇಲೆ ಹೊಟ್ಟೆ ಪಾಡಿಗೆ ಕೆಲಸಾನೂ ಅನಿವಾರ್ಯ. ಈ ಜೀವಕ್ಕೂ ಒಂದೆರೆಡು ಕಡೆ ಕೆಲಸ ಸಿಕ್ತು. ಆದರೆ ಏನ್ ದುರಾದೃಷ್ಟಾನೋ ಎಲ್ಲಾ ಕಡೆಗಳಲ್ಲೂ ಮಾನವೀಯ ಸಂಬಂಧಗಳಿಗೆ ಬೆಲೇನೆ ಸಿಗಲಿಲ್ಲ. ಅಂತೂ ಇಂತೂ ದೇವರಿಗೆ ಈ ಜೀವದ ನೋವು ಅರ್ಥ ಆಯ್ತು. ಒಂದ್ ಕಡೇಲಿ ಮನಸ್ಸಿಗೆ ತುಂಬಾ ಹತ್ತಿರವಾಗೋ ಮಾನವೀಯ ಸಂಬಂಧದ ಪರಿಚಯ ಮಾಡಿಸಿದ. ಈ ಜೀವಾನೂ ಅಷ್ಟೇ, ಅವರನ್ನು ತುಂಬಾನೇ ಇಷ್ಟ ಪಟ್ಟಿತು. ಭಾವನೆಗಳ ಮಧ್ಯೆ `ಅಕ್ಕ ಅನ್ನೋ ಸಣ್ಣ ಪ್ರೀತಿ ಬೆಳೀತು. ಮುಂದೆ ನನಗೂ ಒಬ್ಬರೂ `ಅಕ್ಕ ಇದಾರೆ ಅನ್ನೋವಷ್ಟರ ಮಟ್ಟಿಗೆ ಈ ಸಂಬಂಧ ಬೆಳೀತಾ ಹೋಯ್ತು. ಆದರೆ ಎಷ್ಟು ದಿನ? ಜಸ್ಟ್ ಒಂದು ವರ್ಷ ಅಷ್ಟೇ. ಆ ದೇವರಿಗೂ ಇವೆಲ್ಲವುಗಳನ್ನು ಸಹಿಸೋಕೇ ಸಾಧ್ಯ ಆಗಲಿಲ್ಲವೋ ಏನೋ? ಸಂಬಂಧಗಳನ್ನು ಕಡಿದು ಬಿಟ್ಟ. ಅವರಿಗೆ ಇಂಥ ಅದೆಷ್ಟೂ ಜೀವಗಳು ಸಿಕ್ಕಿರಬಹುದು. ಹಾಗಾಗಿ ಅವರು ಈ ಬಗ್ಗೆ ಅಷ್ಟು ಯೋಚನೆ ಮಾಡಲಿಲ್ಲ. ಆದರೆ ಈ ಜೀವಕ್ಕೆ ಸಿಕ್ಕಿದ್ದು ಅದೊಂದೇ ಮಾನವೀಯ ಸಂಬಂಧ! ಪ್ರತೀ ದಿನ ಕೊರಗು, ಕಾರಣ ಇಷ್ಟೇ. ಹುಟ್ಟಿದಾಗಿನಿಂದ ಯಾರನ್ನೋ ದೂರ ಮಾಡ್ಕೋಳ್ಳೋಕೆ ಆ ಜೀವ ಇಷ್ಟ ಪಟ್ಟಿಲ್ಲ. ಹೀಗಿರೋವಾಗ ತುಂಬಾ ಪ್ರೀತಿ ಇಟ್ಟುಕೊಂಡ ಒಂದು ಮಾನವೀಯ ಸಂಬಂಧ ದೂರ ಆದಾಗ ನೋವು ಆಗದೇ ಇರುತ್ತಾ?........
ಇದಕ್ಕೆ ಕಾರಣನೂ ಇದೆ. ಈ ಜೀವಕ್ಕೆ ಸಿಕ್ಕಿದ ಮಾನವೀಯ ಸಂಬಂಧ ಕೊಡ್ತಾ ಇದ್ದ ಪ್ರೀತಿ ಅಲ್ಲಿ ತನಕ ಯಾರಿಂದಲೂ ಸಿಕ್ಕಿರಲಿಲ್ಲ. ಇನ್ನೊಬ್ಬರಿಂದ ಪ್ರೀತಿಯ ಮಾತು, ಬತರ್್ ಡೇ ವಿಶಶ್, ಹುಟ್ಟಿದ ಹಬ್ಬಕ್ಕೊಂದು ಗಿಫ್ಟ್, ನಾಲ್ಕು ಪ್ರೀತಿಯ ಎಸ್ಎಮ್ಎಸ್ಗಳು ಅಲ್ಲೀ ತನಕ ಸಿಕ್ಕಿರಲಿಲ್ಲ. ಆ ಜೀವ ಹಣ, ಆಸ್ತಿಗಿಂತಲೂ ಹೆಚ್ಚಾಗಿ ಮಾನವೀಯ ಸಂಬಂಧಗಳನ್ನು ಗೌರವಿಸುತ್ತಿತ್ತು. ಆದರೆ ಸಿಕ್ಕಿದ ಮಾನವೀಯ ಪ್ರೀತಿ ಅದರಿಂದ ತುಂಬಾ..ತುಂಬಾ ಅಂದ್ರೆ ತುಂಬಾನೇ ದೂರ ಆಯ್ತು......
ಆದ್ರೆ ಆ ಜೀವದ ಭಾವನೆಗಳು ಮಾತ್ರ ಯಾರಿಗೂ ಅರ್ಥ ಆಗಲೇ ಇಲ್ಲ. ಕೆಲವರಿಗೆ ಸಂಬಂಧಗಳೇ ಅನುಮಾನಗಳಾದವು.... ಇನ್ನು ಕೆಲವರಿಗೆ ಆ ಜೀವದ ನೋವು ಕೇಳೋದೇ ಒಂದು ದೊಡ್ಡ ಟಾರ್ಚರ್ ಆಗಿ ಹೋದವು... ಇನ್ನೂ ಕೆಲವರಿಗೆ ಆ ಜೀವದ ಮಾತುಗಳೇ `ಹುಚ್ಚು ಅಂತ ಅನಿಸಿ ಬಿಡ್ತು. ಆದರೆ ಏನ್ ಮಾಡೋದು? ಇವೆಲ್ಲದರ ಪರಿಚಯ ಅಲ್ಲಿ ತನಕ ಈ ಜೀವಕ್ಕೂ ಆಗಿರಲಿಲ್ಲ. ನಗು ಅಂದ್ರೇನೇ ಏನೂ ಅಂತ ಗೊತ್ತಾಗಿದ್ದು, ಪ್ರೀತಿ, ಸ್ನೇಹ, ಬಾಂಧವ್ಯಗಳ ಪರಿಚಯ ಆಗಿದ್ದು ಅವತ್ತಿಂದಲೇ....
ಇವೆಲ್ಲಾ ನಿಜಕ್ಕೂ ಸಮಸ್ಯೆಗಳೇ ಅಲ್ಲ....ಆದ್ರೂ ಆ ಜೀವಕ್ಕೆ ಇದೇ ದೊಡ್ಡ ಸಮಸ್ಯೆ....ಕೆಲವರಿಗೆ ಕೈಯಲ್ಲಿ ಹಣ ಇಲ್ದೆ ಇದ್ರೆ ಸಮಸ್ಯೆ..ಇನ್ನು ಕೆಲವರಿಗೆ ಮನೆಯಲ್ಲಿ ಫ್ರಾಬ್ಲಂ ಅನ್ನೋ ಸಮಸ್ಯೆ...ಆದ್ರೆ ಈ ಜೀವಕ್ಕೆ ಮಾತ್ರ ಇದೆಲ್ಲಾ ಸಮಸ್ಯೆಗಳೇ ಅಲ್ಲ. ಇಂತಹ ನೂರು ಸಮಸ್ಯೆ ಬಂದ್ರೂ ನಿಭಾಯಿಸೋ ತಾಕತ್ತು ಈ ಜೀವಕ್ಕಿದೆ......
ಇರೋದು ಒಂದೇ ಒಂದು ಸಮಸ್ಯೆ.....
       `ಮಾನವೀಯ ಸಂಬಂಧ.......!
ಫ್ರೆಂಡ್ಸ್, ಈ ಸಣ್ಣ ಕಥೆ ಕೆಲವರಿಗೆ ಅರ್ಥ ಆಗಿರಬಹುದು, ಇನ್ನು ಕೆಲವರಿಗೆ ಅರ್ಥ ಆಗ್ದೇನೂ ಇರಬಹುದು. ಆದರೆ ಇದು ಸತ್ಯ. ನಾನು ಹತ್ತಿರದಿಂದ ಕಂಡ ಜೀವವೊಂದರ ನೈಜ ಯಾತನೆ........ಸಮಸ್ಯೆ ಚಿಕ್ಕದೇ, ಆದರೆ ಒಬ್ಬೊಬ್ಬರ ಮನಸ್ಥಿತಿಗೆ ಇದೂ ದೊಡ್ಡದೇ ಅಲ್ವೇ? ನೆನಪಿರಲಿ....
ಒಬ್ಬರ ಪ್ರೀತಿ, ವಿಶ್ವಾಸ, ಸ್ನೇಹ, ಮಾನವೀಯ ಸಂಬಂಧ ಗಳಿಸಿಕೊಳ್ಳೋದು ಕಷ್ಟ......ಅದಕ್ಕಿಂತಲೂ ತುಂಬಾ ಕಷ್ಟ ಇದನ್ನು ಉಳಿಸಿಕೊಳ್ಳೋದು.....
ಅಕಸ್ಮಾತ್ ಅರ್ಥ ಆದ್ರೆ, ಯಾವತ್ತೂ ಯಾರನ್ನೂ ಹೆಚ್ಚು ಇಷ್ಟ ಪಡಬೇಡಿ....ಇಷ್ಟ ಪಟ್ಟರೂ ನಿಮ್ಮದೇ ತಪ್ಪುಗಳಿಂದ ಅವರನ್ನು ಕಳೆದುಕೊಳ್ಳಬೇಡಿ.....
ಯಾಕೆಂದರೆ ಮತ್ತೆ ಇದೇ ವಿಚಾರದಲ್ಲಿ ತುಂಬಾನೇ ಫೀಲ್ ಆಗೋರು ನೀವೇ......

Monday 19 March 2012

ಬಜೆಟ್ಗಳಿಂದ ಜನಸಾಮಾನ್ಯ ಗಳಿಸಿಕೊಂಡಿದ್ದು ಏನೂ ಇಲ್ಲ!


ಬಜೆಟ್ಗಳಿಂದ ಜನಸಾಮಾನ್ಯ ಗಳಿಸಿಕೊಂಡಿದ್ದು ಏನೂ ಇಲ್ಲ!
ಮೊನ್ನೆಯಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಬಜೆಟ್ ಕೂಡ ಮಂಡ ನೆಯಾಗಲಿದೆ. ಆದರೆ ಮೊನ್ನೆಯ ಬಜೆಟ್ಗಿಂತಲೂ ಹೆಚ್ಚು ಚಚರ್ಿತವಾಗಿದ್ದು ಮಾತ್ರ ಸಚಿನ್ ಶತಕ ಎನ್ನುವುದು ವಿಪ ಯರ್ಾಸ. ದೇಶದ ಅಥರ್ಿಕ ಅಡಿಪಾಯಕ್ಕಿಂತಲೂ ತನ್ನದೇ ಜೋಳಿಗೆ ತುಂಬಿಸುವ ಸಚಿನ್ ಶತಕವೇ ನಮಗೆ ಮೇಲಾ ಯಿತು. ಹೀಗಿದ್ದರೂ ಈ ಬಜೆಟ್ಗಳಿಂದ ಜನತೆ ಗಳಿಸಿಕೊ ಳ್ಳುವುದಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಆದರೆ ನಮ್ಮ ಆಥರ್ಿಕ ವ್ಯವಸ್ಥೆಯ ಅಡಿಪಾಯದ ಬಿಸಿ ನಮಗೆ ತಟ್ಟುವ ಮುನ್ನ ಈ ಬಗ್ಗೆ ಚಿಂತಿಸುವ ಅಗತ್ಯವಿದೆ.
ಒಂದು ವರ್ಷದ ಆಥರ್ಿಕ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡು ರಚಿಸುವ ಈ ಬಜೆಟ್ಗಳಿಂದ ಆಗುವ ಪ್ರಯೋಜನ ಮಾತ್ರ ಅಷ್ಟಕ್ಕಷ್ಟೇ. ಒಂದು ಹಂತದಲ್ಲಿ ಈ ಬಜೆಟ್ಗಳು ಸಕರ್ಾರದ ವಿತ್ತ ಖಾತೆಗೆ ಆಥರ್ಿಕ ಲೆಕ್ಕಾಚಾರ ಒದಗಿಸುವ ಕೆಲಸ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡುವುದಿಲ್ಲ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾ ಗಿದ್ದ ಯಡಿಯೂರಪ್ಪ ಮಂಡಿಸಿದ ಬಜೆಟ್ನ ಯಾವೆಲ್ಲಾ ಅಂಶಗಳು ಜಾರಿಗೆ ಬಂದಿವೆ? ರಾಜ್ಯ ಸಕರ್ಾರದ ಬೊಕ್ಕಸ ತುಂಬಿಸುವ ಕೆಲವೊಂದು ಬೆಲೆಯೇರಿಕೆಯ ವಿಚಾರಗಳಲ್ಲಿ ಮಾತ್ರ ಈ ಬಜೆಟ್ ಸಹಕಾರಿಯಾಗುತ್ತದೆ. ಅದೂ ನಮ್ಮ ಮಂತ್ರಿ ಮಾಗಧರಿಗಷ್ಟೇ. ಬೆಲೆಯೇರಿಕೆಯಿಂದ ಜನರದ್ದೇ ಹೊರೆ ಹೆಚ್ಚುವುದು ಎಂಬ ವಿಚಾರ ಸ್ಪಷ್ಟ. ಇನ್ನು ಪುಟಗ ಟ್ಟಲೇ ಸಿದ್ದಗೊಳ್ಳುವ ಬಜೆಟ್ನಲ್ಲಿ ಮಂಡಿಸಲಾಗುವ ಅಭಿವೃ ದ್ದಿಯ ಕೆಲಸಗಳು ಸರಿಯಾಗಿ ಅನುಷ್ಠಾನಕ್ಕೆ ಬರುವುದೇ ಇಲ್ಲ. ರಾಜ್ಯದ ಆಥರ್ಿಕ ಲೆಕ್ಕಾಚಾರದ ಅಡಿಪಾಯದ ಮೇಲೆ ಈ ಬಜೆಟ್ ಮಂಡನೆಯಾದರೂ ಜನರ ಆಶೋತ್ತರಗಳತ್ತ ಇಲ್ಲಿಯ ತನಕ ಬಜೆಟ್ ಗಮನ ಹರಿಸಿದ್ದೇ ಇಲ್ಲ. ಕಳೆದ ಬಾರಿ ರೈತಪರ ಸಕರ್ಾರ ಎನ್ನುವ ಬಿಜೆಪಿ ಪ್ರತ್ಯೇಕ ಕೃಷಿ ಬಜೆಟ್ ಕೂಡ ಮಂಡಿಸಿತ್ತು. ಆದರೆ ಅಂದು ಮಂಡನೆಯಾದ ಎಷ್ಟು ವಿಚಾರ ಗಳು ಇಂದು ಅನುಷ್ಠಾನಕ್ಕೆ ಬಂದಿದೆ? ಆ ಅಭಿವೃದ್ದಿ ಕೆಲಸಗಳು ಅನುಷ್ಠಾನಗೊಳ್ಳುವ ಹೊತ್ತಿಗೆ ಸಕರ್ಾರ ತನ್ನ ಆಡಳಿತವನ್ನೇ ಮುಗಿ ಸಿರುತ್ತದೆ. ನಂತರ ಬಂದ ಸಕರ್ಾರ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ಸೆಣೆಸುತ್ತದೆಯೇ ಹೊರತು ಹಿಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಿದ ವಿಚಾರಗಳ ಕಡೆಗೆ ಗಮನ ಕೇಂದ್ರೀಕರಿಸುವುದಿಲ್ಲ.
ಇನ್ನು ನಮ್ಮ ಜನತೆಗೂ ಬಜೆಟ್ ಎನ್ನುವುದು ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಟಿವಿ ಮಾಧ್ಯಮಗಳಲ್ಲಿ ಬಜೆಟ್ ವಿಚಾರಗಳು ಬಂದರೆ ಚಾನೆಲ್ ತಿರುಗಿಸುವವರೇ ಹೆಚ್ಚು. ಮರುದಿನ ಪತ್ರಿಕೆ ಗಳು ಬಜೆಟ್ ಸಂಬಂಧಿ ವಿಚಾರಗಳ ಬಗ್ಗೆ ಪುಟಗಟ್ಟಲೇ ಬರೆ ದರೂ ಆದನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನ, ತಾಳ್ಮೆ ನಮ್ಮ ಜನರಿಗಿಲ್ಲ. ಹೀಗಾಗಿ ಸಕರ್ಾರ ಎನ್ನುವ ಸ್ವಹಿತಾಸಕ್ತಿಯ ರಾಜ ಕೀಯ ನಾಯಕರು ಮಂಡಿಸುವ ಬಜೆಟ್ನಲ್ಲಿನ ಅಂಶಗಳನ್ನು ನಾವು ಅರ್ಥವಾಗದೇ ವಿರೋಧಿಸಿದರೂ ನಂತರ ಒಪ್ಪಿಕೊಂಡು ಬಿಡುತ್ತೇವೆ. ನಾವು ಒಪ್ಪಿಕೊಳ್ಳಲಿ ಬಿಡಲಿ, ಅದನ್ನು ವಿರೋಧಿಸಿ ಬಜೆಟ್ನ್ನು ಮತ್ತೆ ಮಂಡಿಸುವಂತೆ ಮಾಡುವ ಕೆಲಸ ಮಾತ್ರ ನಮ್ಮಿಂದ ಸಾಧ್ಯವಿಲ್ಲ. ಬಂಗಾರದ ಮೇಲಿನ ತೆರಿಗೆ ಹೆಚ್ಚಳಕ್ಕೆ ಚಿನ್ನದ ವ್ಯಾಪಾರಿಗಳು ಪ್ರತಿಭಟಿಸಬಹುದು, ಕೆಲವೊಂದು    ವ್ಯಾಪಾರಿಗಳು ತಮಗೆ ಸಂಬಂಧಿಸಿದ ವಹಿವಾಟಿನ ಸುಂಕ ಹೆಚ್ಚ ಳಕ್ಕೆ ಒಂದೆರೆಡು ದಿನ ಹರತಾಳ ಮಾಡಬಹುದು. ಆದರೆ ಇದು ಕೇವಲ ಒಂದೆರೆಡು ದಿನವಷ್ಟೇ. ಮುಂದಿನದ್ದು ನಮ್ಮ(?) ಸಕರ್ಾ ರಕ್ಕೆ ಬಿಟ್ಟಿದ್ದು. ಜನರು ಸಕರ್ಾರದ ನೀತಿಯನ್ನು ವಿರೋಧಿಸಿ ದಾಗ ಎಷ್ಟು ಬಾರಿ ಸಕರ್ಾರ ತನ್ನ ನಿಲುವನ್ನು ಬದಲಿಸಿದೆ?
ಇನ್ನು ನಮ್ಮ ಜನರನ್ನೇ ತೆಗೆದುಕೊಳ್ಳಿ. ಕೇಂದ್ರ ಬಜೆಟ್ ಗಿಂತಲೂ ನಮಗೆ ಸಚಿನ್ ತೆಂಡೂಲ್ಕರ್ ಶತಕವೇ ಮೇಲೂ! ನಮ್ಮ ಸಮಾಜವೇ ದೇಶದ ಅಥರ್ಿಕತೆಯ ಬಗ್ಗೆ ಚಿಂತಿಸುವು ದಿಲ್ಲ ಎನ್ನುವಾಗ ನಾವೇ ಆರಿಸಿ ಕಳುಹಿಸಿದ ಜನನಾಯಕರ ಸ್ವಹಿತಾಸಕ್ತಿಯ ಬಜೆಟ್ನ್ನು ನಾವು ಒಪ್ಪಲೇ ಬೇಕಾಲ್ಲವೇ? ಬೆಲೆ ಯೇರಿಕೆಯಾಯಿತು, ಬಜೆಟ್ ಜನವಿರೋಧಿ ಎಂದು ಬೀದಿಗಿ ಳಿಯುವ ಎಡಪಂಥಿಯರದ್ದೂ ಸ್ವಹಿತಾಸಕ್ತಿ ಎನ್ನುವುದು ನೆನ ಪಿರಲಿ. ನಮಗೆಲ್ಲಾ ಗೊತ್ತಿರುವುದು ಬೆಲೆಯೇರಿಕೆಯ ಬಿಸಿ ಮುಟ್ಟಿ ಸುವ ಸಣ್ಣ ಅಂಗಡಿಯವನಲ್ಲಿ ಕಿತ್ತಾಡುವುದೇ ಹೊರತು ಇದ ಕ್ಕೆಲ್ಲಾ ಕಾರಣವಾಗುವ ನಮ್ಮ ಸಕರ್ಾರದ ಪ್ರತಿನಿಧಿಗಳಲ್ಲಲ್ಲ.    ಹೀಗಾಗಿಯೋ ಏನೋ ನಾವು ಸಚಿನ್ ಶತಕದ ಬಗ್ಗೆಯೇ ಹೆಚ್ಚು ಚಿಂತಿತರಾಗಿದ್ದು.  

Saturday 17 March 2012

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?

ಭಾವನೆಗಳೇ ಜೀವನ ಅಂದುಕೊಳ್ಳುವುದು ಯಾವಾಗ?
ಹೌದು, ಮನುಷ್ಯ ತುಂಬಾನೇ ಭಾವನಾತ್ಮಕ ಜೀವಿ ಅನ್ನುತ್ತಾರೆ ಕೆಲವರು. ಹೀಗೆನ್ನುವವರು ಕೂಡ ಮನುಷ್ಯರೇ. ಆದರೂ ಎಲ್ಲೋ ಕೆಲವೊಮ್ಮೆ ಮನುಷ್ಯನ ಭಾವನೆಗಳ ಸಂಬಂಧ ಹಳಿ ತಪ್ಪಿ ಬಿಡುತ್ತದೆ. ಸಂಬಂಧಗಳು ಇಷ್ಟ, ಕಷ್ಟಗಳ ಮಧ್ಯೆ ಸಿಲುಕಿ ಪುಟ್ಟ ಮನಸ್ಸಿಗೆ ನೋವು ಕೊಡುತ್ತದೆ. ಎಲ್ಲೋ ಒಂದೆರೆಡು ಜೀವಗಳು ಭಾವನೆಗಳನ್ನೇ ಜೀವನವನ್ನಾಗಿಸಲು ಹೋದರೆ ಸಮಾಜದ ಕೆಟ್ಟ ದೃಷ್ಟಿ ಕೋನ ಇಡೀ ಜೀವನವನ್ನೇ ಹಾಳು ಮಾಡಿದ್ದೂ ಇದೆ. ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟಿಗ ಶತಕಗಳ ಶತಕ ಹೊಡೆದಾಗ ಇಡೀ ದೇಶವೇ ಆತನ ಸಾಧನೆಗೆ ಸ್ಪಂದಿಸಿತು. ಕ್ರಿಕೆಟ್ ದೇವರಿಗೆ ಇನ್ನಿಲ್ಲದಂತೆ ಶುಭ ಕೋರಿತು. ಆದರೆ ನಮ್ಮಲ್ಲೇ ಇರುವ ಕೆಲ ಸಣ್ಣ ಪುಟ್ಟ ಸಾಧಕರುಗಳಿಗೆ ಇಂತಹ ಸ್ಪಂದನೆಗಳೇ ಸಿಗುತ್ತಿಲ್ಲ. ಭಾವನಾತ್ಮಕ ಜೀವಿ, ತೀರಾ ಸೆನ್ಸಿಟಿವ್ ಎನ್ನಬಹುದಾದ ಹೃದಯಗಳು ಪ್ರೀತಿ, ವಿಶ್ವಾಸ, ಮಾನವೀಯ ಸಂಬಂಧಗಳನ್ನು ಗಳಿಸಿಕೊಳ್ಳಲು ಹಾತೊರೆಯುತ್ತಿರುತ್ತವೆ. ಆದರೆ ತನ್ನದೇ ಕೆಲವೊಂದು ತಪ್ಪುಗಳು ಕೈ ಸೇರಿದ ಮಾನವೀಯ ಸಂಬಂಧಗಳನ್ನು ಕೂಡ ಬ್ರೇಕ್ ಮಾಡುತ್ತದೆ.  ಕೆಲವೊಂದು ಸಂಬಂಧಗಳೇ ಹಾಗೆ, ಅವುಗಳಿಗೆ ಜಾತಿ ಧರ್ಮದ ಹಂಗಿರುವುದಿಲ್ಲ.  ಕಟ್ಟರ್ ಸ್ವಧರ್ಮ ಹಿಂಬಾಲಕರೇ ಆಗಿದ್ದರೂ ನಮ್ಮ ಪಕ್ಕದ ಮನೆಯ ಪರಧಮರ್ೀಯರನ್ನು ಪ್ರೀತಿಯಿಂದ ಕಾಣುತ್ತೇವೆ, ಅವರೊಂದಿಗೆ ಬಿಡಿಸಲಾರದ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತೇವೆ. ಅಷ್ಟೇ ಯಾಕೆ ನಮ್ಮ ಜೊತೆ ಕೆಲಸ ಮಾಡುವ, ಕಲಿಯುವ ಯಾರೇ ಆಗಲಿ ನಮಗೆ ತುಂಬಾ ಹತ್ತಿರವಾದವರು ಯಾವ ಧರ್ಮದವರೇ ಆದರೂ ನಮ್ಮ ಸ್ವಧರ್ಮ ಸಂಬಂಧಕ್ಕೆ ಅಡ್ಡಿ ಬರುವುದಿಲ್ಲ. ನಮಗೆ ಸಿಗದ ವಸ್ತುಗಳನ್ನು ಯಾರು ಕೊಡುತ್ತಾರೋ ಅವರು ಮನುಷ್ಯನಿಗೆ ತುಂಬಾ ಹತ್ತಿರವಾಗುತ್ತಾರೆ. ಅದಕ್ಕೆ ಹೇಳಿದ್ದು, ಮನುಷ್ಯ ತುಂಬಾ ಭಾವನಾತ್ಮಕ ಜೀವಿ ಅಂತ. ಎಲ್ಲೋ ಒಂದೆರೆಡು ಸಲ ಆತ ಕೋಪಿಷ್ಟನಾಗಿ ವತರ್ಿಸಬಹುದು. ಆದರೆ ವರ್ತನೆಯನ್ನು ಕ್ಷಣಾರ್ಧದಲ್ಲೇ ತಿದ್ದುವವನು ಇದೇ ಭಾವ ಜೀವಿ! ನೆನಪಿರಲಿ ಪ್ರತೀ ವ್ಯಕ್ತಿಯ ವರ್ತನೆ ವಿಭಿನ್ನವಾಗಿರಬಹುದು. ಆದರೆ ಪ್ರೀತಿ, ವಿಶ್ವಾಸ, ಸಂಬಂಧ, ಮಾನವೀಯ ಮೌಲ್ಯಗಳ ಸರದಿ ಬಂದಾಗ ಎಂಥವರೂ ಒಂದು ಕ್ಷಣ ಯೋಚಿಸುತ್ತಾರೆ. ಇಷ್ಟೆಲ್ಲಾ ಹೇಳಿದ್ದು ಜಾತಿ ಸಂಘರ್ಷದ `ಮಯರ್ಾದ ಹತ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು.......!
ನಾಳೆ ಭಾನುವಾರ,
ವಾರದ ಬಿಡುವಿನ ದಿನದಲ್ಲಾದರೂ ಕಳೆದುಕೊಂಡ ಮಾನವೀಯ ಸಂಬಂಧಕ್ಕೆ ಒಂದು ಸಣ್ಣ ಫೋನಾಯಿಸಿ ಮಾತನಾಡಿ..... ಜಸ್ಟ್ ಮನಸ್ಸು ರಿಲೀಫ್ ಆದರೂ ಆಗಬಹುದು.
 

Thursday 15 March 2012

ಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ `ಆನ್ಲೈನ್ ಶಾಪಿಂಗ್



ಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ
`ಆನ್ಲೈನ್ ಶಾಪಿಂಗ್
ಇದು ಕಂಪ್ಯೂಟರ್ ಯುಗ. ಇಲ್ಲಿ ಎಲ್ಲವೂ ಅಂತಜರ್ಾಲದ ಬಳಕೆಯ ಮೇಲೆ ನಿಂತಿದೆ. ಸಾವಿರಾರು ಮೈಲಿ ಪ್ರಯಾಣಿಸಿಕೊಂಡು ಮಾಡುತ್ತಿದ್ದ ಕೆಲಸ ಇಂದು ಕೆಲವೇ ಸೆಕೆಂಡ್ಗಳಲ್ಲಿ ಮುಗಿಯುತ್ತದೆ. ಮನುಷ್ಯ ಬದುಕನ್ನು ಮತ್ತಷ್ಟು ಸುಲಭವಾಗಿಸುವಲ್ಲಿ ತಾಂತ್ರಿಕತೆಯ ಸಾಧನೆ ನಿಜಕ್ಕೂ ಅಧ್ಬುತ. ಮನುಷ್ಯನ ಬುದ್ದಿಮತ್ತೆ ಬೆಳೆಯುತ್ತಾ ಹೋದಂತೆ ತಾಂತ್ರಿಕತೆಗೆ ಸವಾಲು ಎಸೆಯಲು ಆತ ಸನ್ನದ್ದನಾದ. ಮನುಷ್ಯ ಮಾಡುವ ಪ್ರತೀ ಕೆಲಸವನ್ನು ತಂತ್ರಜ್ಞಾನದ ಕೈಗೆ ಕೊಟ್ಟು ಥಟ್ ಅಂತ ಮುಗಿಸಿ ಬಿಟ್ಟ. ಎಲ್ಲೆಲ್ಲಾ ತಾಂತಿಕತೆಯ ಸ್ಪರ್ಶ ನೀಡಲು ಸಾಧ್ಯವೋ ಅಲ್ಲೆಲ್ಲಾ ಟೆಕ್ನೋಲಜಿಯೆಂಬ ಧೈತ್ಯ ಭೂತ ಕಾಲಿಟ್ಟಿತು. ಒಬ್ಬರೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುವುದರಿಂದ ಹಿಡಿದು, ಜಗತ್ತಿನ ಮೂಲೆ ಮೂಲೆಯ ವಿಚಾರಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ತಿಳಿಯುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದು ನಿಂತಿತು. ಇದೇ ತಾಂತ್ರಿಕತೆಯ ಬುನಾದಿಯ ಮೇಲೆ ವ್ಯಾವಹಾರಿಕ ಕ್ಷೇತ್ರದ ಲ್ಲೊಂದು ಅಧ್ಬುತ ಎನಿಸುವಂತಹ ವ್ಯವಹಾರವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವ್ಯವಹಾರವನ್ನು ಆಂಗ್ಲ ಭಾಷೆಯಲ್ಲಿ `ಆನ್ಲೈನ್ ಶಾಪಿಂಗ್ ಎನ್ನುತ್ತಾರೆ. ಬಹುಶಃ ಈ ಬಗ್ಗೆ ಅಷ್ಟಾಗಿ ಸಾಮಾನ್ಯ ಜನರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದಲ್ಲಿ ಈ ವಿನೂತನ ಶಾಪಿಂಗ್ ಪದ್ದತಿ ಇನ್ನೂ ಅಷ್ಟಾಗಿ ಕ್ರಾಂತಿ ಮಾಡಿಲ್ಲ. ಆದರೆ ಮುಂದಿನ ಎರಡು ವರ್ಷಗಳಲ್ಲಿ ದೇಶದ ಶಾಪಿಂಗ್ ಕ್ಷೇತ್ರವನ್ನೇ ಹುಟ್ಟಡಗಿಸುವ ಸಾಮಥ್ರ್ಯ ಇದಕ್ಕಿದೆ ಎಂದರೆ ನೀವು ನಂಬಲೇ ಬೇಕು!
ಸರಿ ಸುಮಾರು ವರ್ಷಗಳ ಹಿಂದೆ ಅಗತ್ಯ ವಸ್ತುಗಳಿಗಾಗಿ ಮನೆಯ ಪಕ್ಕದ ಸಣ್ಣ ಸಣ್ಣ ಅಂಗಡಿಗಳನ್ನು ಅವಲಂಭಿಸುತ್ತಿದ್ದೆವು. ಒಂದು ಸಣ್ಣ ಟೇಪ್ ರೆಕಾರ್ಡರ್ ಖರೀದಿಸಲು ನಗರವನ್ನೆಲ್ಲಾ ರೌಂಡ್ ಹೊಡೆಯಬೇಕಾದ ಕಾಲವದು. ನಂತರ ಸ್ವಲ್ಪ ಪ್ರಗತಿ ಹೊಂದುತ್ತಾ ಹೋದಂತೆ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಆ ಕಾಲದಲ್ಲಿ ಮೊಬೈಲ್ ಇದ್ದವನು ಬಾಸ್ ಎನ್ನುವಷ್ಟರ ಮಟ್ಟಿಗೆ ಇದರ ಕ್ರೇಜ್ ಆರಂಭವಾ ಯಿತು. ತಾಂತ್ರಿಕತೆ ಬೆಳೆಯಿತು. ತಂತ್ರಜ್ಞಾನದ ಹಲವಾರು ಆವಿಷ್ಕಾರಗಳು ವ್ಯಾವಹಾರಿಕ ಮಾರುಕಟ್ಟೆಯನ್ನು ಪ್ರವೇಶಿಸಿದವು. ಜನರೂ ಈ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು! ಪರಿಣಾಮ ಜಗತ್ತಿನಾದ್ಯಂತ ತಾಂತ್ರಿಕ ಸಲಕರಣೆಗಳ ಬೃಹತ್ ಮಾರಾಟ ಮಳಿಗೆಗಳು ತಲೆಯೆತ್ತಿದವು. ತಾಂತ್ರಿಕತೆಯ ಪ್ರಯೋಗಳಿಗೆ ಜನ ಮುಗಿಬಿದ್ದ ಪರಿಣಾಮ ದಿನನಿತ್ಯ ಮಿಲಿಯನ್ ಗಟ್ಟಲೇ ವಹಿವಾಟು ಜಾಗತಿಕ ಮಾರುಕಟ್ಟೆಯಲ್ಲಿ ದಾಖಲಾಯಿತು. ಈ ಮೂಲಕ ತಾಂತ್ರಿಕತೆಯೇ ಜಗತ್ತನ್ನು ಆವರಿಸಿತು. ಜನಸಾಮಾನ್ಯರು ಇದರಿಂದ ಸಂತೃಪ್ತರಾದರು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಬೃಹತ್ ಮಳಿಗೆಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ಖರೀದಿಸುವುದರಲ್ಲೂ ಮನುಷ್ಯ ಉದಾಸೀನ ತೋರಿದ. ಹಾಗಾಗಿ ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತು. ಈ ವೇಳೆ ಜನರ ಉದಾಸೀನತೆಯ ಲಾಭ ಪಡೆದ ಅತೀ ಬುದ್ದಿವಂತರಿಂದ ಆರಂಭವಾದ ಶಾಪಿಂಗ್ ಕ್ರಾಂತಿಯೇ `ಆನ್ಲೈನ್ ಶಾಪಿಂಗ್. 90ರ ದಶಕದಲ್ಲೇ ಈ ಅನ್ಲೈನ್ ಶಾಪಿಂಗ್ನ ಆಲೋಚನೆಗಳು ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಹುಟ್ಟತೊಡಗಿದ್ದವು. ಆದರೆ ಈ ವಿಧಾನ ಆ ಕಾಲದಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನಾದ್ಯಂತ ಈ ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಪ್ರಗತಿಯತ್ತ ದಾಪುಗಾಲಿಡುತ್ತಿದೆ.
ಆನ್ಲೈನ್ ಶಾಪಿಂಗ್ ಹುಟ್ಟಿಕೊಂಡದ್ದು ಹೇಗೆ?
1995ರ ವೇಳೆಗೆ ತಾಂತ್ರಿಕತೆ ತಕ್ಕಮಟ್ಟಿಗೆ ಬೆಳೆದಿದ್ದ ಕಾರಣ ಇದೇ ವರ್ಷ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಆದರೆ ಇದು ಆನ್ಲೈನ್ ವ್ಯವಹಾರ ಆರಂಭಿಸಿದ್ದು ಮಾತ್ರ 1996ರ ವೇಳೆಗೆ. ಮೊಟ್ಟ ಮೊದಲನೆಯದಾಗಿ ಪುಸ್ತಕ ಮಾರಾಟವನ್ನು ಆನ್ಲೈನ್ ಶಾಪಿಂಗ್ನಲ್ಲಿ ಆರಂಭಿಸಿದ ಅಮೆಜಾನ್ ಕಂಪೆನಿ ತದನಂತರ ತಾಂತ್ರಿಕತೆಯ ಎಲ್ಲಾ ಸಲಕರಣೆಗಳನ್ನು ಅಂತಜರ್ಾಲದ ಮೂಲಕ ಮಾರಾಟಕ್ಕಿಟ್ಟಿತು. ಅಮೇರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರೆದ ರಾಷ್ಟ್ರಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. 2010ರ ವೇಳೆಗೆ 1.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್ಲೈನ್ ವ್ಯವಹಾರ ಸಂಸ್ಥೆಯಾಗಿ ಅಮೆಜಾನ್ ಗುರುತಿಸಿಕೊಂಡಿದೆ. ನಂತರ ಇದರ ಯಶಸ್ಸನ್ನು ಗಮನಿಸಿದ ಅನೇಕ ಕಂಪೆನಿಗಳು ಈ ಕೆಲಸಕ್ಕೆ ಕೈಹಾಕಿದವು. ಪರಿಣಾಮವಾಗಿ ಅಮೆಜಾನ್ ಸ್ಥಾಪನೆಯಾದ ಎರಡು ವರ್ಷಗಳ ನಂತರ ಇಬೇ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಧರ್ೆಗಿಳಿಯಿತು. ಆದರೆ ಅಮೆಜಾನ್ ಹುಟ್ಟುಹಾಕಿದ್ದ ಕ್ರಾಂತಿಯ ಮುಂದೆ ಇಬೇ ಅಷ್ಟಾಗಿ ಸದ್ದು ಮಾಡುವಲ್ಲಿ ವಿಫಲವಾಯಿತು. ಮುಂದೆ ಅನೇಕ ಅನ್ಲೈನ್ ಶಾಪಿಂಗ್ ಕಂಪೆನಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಇ-ಶಾಪಿಂಗ್ ನೂತನ ಅದ್ಯಾಯ ಬರೆಯಿತು. ಜಾಗತಿಕವಾಗಿ ಇಷ್ಟೆಲ್ಲಾ ಸಂಚಲನವಾಗಿದ್ದರೂ ಭಾರತದಲ್ಲಿ ಮಾತ್ರ ಈ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈ ವೇಳೆ ಅಮೆಜಾನ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಎಂಬ ಇಬ್ಬರು ಗೆಳೆಯರು ಫ್ಲಿಪ್ಕಾಟರ್್ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಗೆ 2007ರಲ್ಲಿ ಮುನ್ನುಡಿ ಬರೆದರು. ಮೊದಲಾಗಿ ಪುಸ್ತಕ ಮಾರಾಟಕ್ಕಿಳಿದ ಈ ಸಂಸ್ಥೆಯ ಆದಾಯ 2010-11ರ ಸಾಲಿಗೆ 75ಕೋಟಿ ರುಪಾಯಿಗೇರಿತು. ನಂತರ ಮೊಬೈಲ್, ಕಂಪ್ಯೂಟರ್, ಸೇರಿದಂತೆ ಅನೇಕ ವಸ್ತುಗಳ ಮಾರಾಟವನ್ನು ಆರಂಭಿಸಿತು. ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಅತೀ ದೊಡ್ಡ ಅನ್ಲೈನ್ ಶಾಪಿಂಗ್ ತಾಣವಾಗಿದೆ. ಈ ಮೂಲಕ ಭಾರತದಲ್ಲಿ ಈ ಸಂಸ್ಥೆ ನೂತನ ಶಾಪಿಂಗ್ ಶಕೆ ಆರಂಭಿಸುವತ್ತ ಹೆಜ್ಜೆ ಇಟ್ಟಿದೆ.
ಏನಿದು ಆನ್ಲೈನ್ ಶಾಪಿಂಗ್?
ಈ ಆನ್ಲೈನ್ ಶಾಪಿಂಗ್ ನಡೆಸಲು ತಕ್ಕ ಮಟ್ಟಿನ ಕಂಪ್ಯೂಟರ್ ಜ್ಞಾನವಿರಬೇಕು. ಅಂತಜರ್ಾಲದ ನೆರವಿನಿಂದ ದೇಶಾದ್ಯಂತ ಇರುವ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ವಿಳಾಸವನ್ನು ಕ್ಲಿಕ್ಕಿಸಿದರೆ ಕೂತಲ್ಲಿಯೇ ಅಧ್ಬುತ ವ್ಯವಹಾರ ಜಗತ್ತೊಂದು ತೆರೆದುಕೊಳ್ಳು ತ್ತದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿ ನಾವು ವಸ್ತುಗಳನ್ನು ಆಯ್ದುಕೊಳ್ಳಬಹುದು. ಪ್ರತಿಯೊಂದು ವಸ್ತುಗಳ ಮೌಲ್ಯವೂ ಆ ವಸ್ತುಗಳ ಸಂಪೂರ್ಣ ಮಾಹಿತಿಯೊಂದಿಗೆ ನಮಗೆ ಸಿಗುತ್ತದೆ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಇಡೀ ಮಾಲ್ ಸುತ್ತು ಹಾಕಿ ಖರೀದಿಸುವ ಬದಲು ಇಲ್ಲಿ ಕೂತಲ್ಲಿಯೇ ನಮಗೆ ಬೇಕಾದಷ್ಟು ಶಾಪಿಂಗ್ ನಡೆಸಬಹುದು. ನಮ್ಮ ಶಾಪಿಂಗ್ ಮುಗಿದ ಮೇಲೆ ಅಂತಿಮವಾಗಿ ನಾವು ಖರೀದಿಸಿ ವಸ್ತುಗಳ ಒಟ್ಟು ಮೊತ್ತವನ್ನು ತಿಳಿಸಲಾಗುತ್ತದೆ. ಈ ವೇಳೆ ಆ ಮೊತ್ತವನ್ನು ಪಾವತಿಸಲು ಕೂಡ ಅನೇಕ ವಿಧದ ಸೌಲಭ್ಯಗಳಿವೆ. ಇದರಲ್ಲಿ ಡೆಬಿಟ್ಕಾಡರ್್ಗಳ ಮೂಲಕ ಹಣ ಪಾವತಿ ವ್ಯವಸ್ಥೆಯು ಮೊದಲಿಗೆ ಚಾಲ್ತಿಗೆ ಬಂತು. ಇಲ್ಲಿ ಕಾಡರ್್ ಬಳಸಿ ಕೂತಲ್ಲಿಂದಲೇ ಹಣ ಪಾವತಿ ಮಾಡಬಹುದು. ಇದನ್ನು ಪ್ರೀಪೇಯ್ಡ್ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆಗೆ ಜನರು ಹೆಚ್ಚು ಸ್ಪಂದಿಸದ ಕಾರಣ ಕ್ಯಾಶ್ ಆನ್ ಡೆಲಿವರಿ ಎಂಬ ವಿನೂತನ ವಿಧಾನವನ್ನು ಪರಿಚಯಿಸಲಾಯಿತು. ಈ ವ್ಯವಸ್ಥೆಯು ಜನಸ್ನೇಹಿಯಾಗಿದ್ದು, ಖರೀದಿಸಿದ ವಸ್ತುಗಳು ನಮ್ಮ ಕೈಸೇರಿದ ಮೇಲೆಯೇ ಹಣ ಪಾವತಿ ಮಾಡಬಹುದಾಗಿದೆ. ಇಂದು ಹೆಚ್ಚಿನ ಆನ್ಲೈನ್ ಶಾಪಿಂಗ್ ಪಾವತಿ ವಿಧಾನವು ಈ ಮೂಲಕವೇ ನಡೆಯುತ್ತಿದೆ. ಈ ವಿಧಾನದಿಂದಾಗಿ ಆನ್ಲೈನ್ ಶಾಪಿಂಗ್ ವ್ಯವಸ್ಥೆ ಇನ್ನಷ್ಟು ಅಭಿವೃದ್ದಿಯಾಯಿತು. ಉಳಿದಂತೆ ಕಾಡರ್್ ಸ್ವೈಪ್, ಮನಿ ಆರ್ಡರ್ ಮುಂತಾದ ಪಾವತಿ ವಿಧಾನಗಳು ಚಾಲ್ತಿಯಲ್ಲಿವೆ.
ಆನ್ಲೈನ್ ಶಾಪಿಂಗ್ನ ಅನುಕೂಲತೆಗಳು
ಈ ವಿಧಾನ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದಾಗ ಜನರಿಗೆ ಇದರ ಕಾರ್ಯವಿಧಾನದ ಬಗ್ಗೆ ಅಷ್ಟಾಗಿ ನಂಬಿಜಾಗತಿಕ ಮಾರುಕಟ್ಟೆಯಲ್ಲೊಂದು ಕ್ರಾಂತಿ
`ಆನ್ಲೈನ್ ಶಾಪಿಂಗ್
ಇದು ಕಂಪ್ಯೂಟರ್ ಯುಗ. ಇಲ್ಲಿ ಎಲ್ಲವೂ ಅಂತಜರ್ಾಲದ ಬಳಕೆಯ ಮೇಲೆ ನಿಂತಿದೆ. ಸಾವಿರಾರು ಮೈಲಿ ಪ್ರಯಾಣಿಸಿಕೊಂಡು ಮಾಡುತ್ತಿದ್ದ ಕೆಲಸ ಇಂದು ಕೆಲವೇ ಸೆಕೆಂಡ್ಗಳಲ್ಲಿ ಮುಗಿಯುತ್ತದೆ. ಮನುಷ್ಯ ಬದುಕನ್ನು ಮತ್ತಷ್ಟು ಸುಲಭವಾಗಿಸುವಲ್ಲಿ ತಾಂತ್ರಿಕತೆಯ ಸಾಧನೆ ನಿಜಕ್ಕೂ ಅಧ್ಬುತ. ಮನುಷ್ಯನ ಬುದ್ದಿಮತ್ತೆ ಬೆಳೆಯುತ್ತಾ ಹೋದಂತೆ ತಾಂತ್ರಿಕತೆಗೆ ಸವಾಲು ಎಸೆಯಲು ಆತ ಸನ್ನದ್ದನಾದ. ಮನುಷ್ಯ ಮಾಡುವ ಪ್ರತೀ ಕೆಲಸವನ್ನು ತಂತ್ರಜ್ಞಾನದ ಕೈಗೆ ಕೊಟ್ಟು ಥಟ್ ಅಂತ ಮುಗಿಸಿ ಬಿಟ್ಟ. ಎಲ್ಲೆಲ್ಲಾ ತಾಂತಿಕತೆಯ ಸ್ಪರ್ಶ ನೀಡಲು ಸಾಧ್ಯವೋ ಅಲ್ಲೆಲ್ಲಾ ಟೆಕ್ನೋಲಜಿಯೆಂಬ ಧೈತ್ಯ ಭೂತ ಕಾಲಿಟ್ಟಿತು. ಒಬ್ಬರೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುವುದರಿಂದ ಹಿಡಿದು, ಜಗತ್ತಿನ ಮೂಲೆ ಮೂಲೆಯ ವಿಚಾರಗಳನ್ನು ಕೆಲವೇ ಸೆಕೆಂಡ್ಗಳಲ್ಲಿ ತಿಳಿಯುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದು ನಿಂತಿತು. ಇದೇ ತಾಂತ್ರಿಕತೆಯ ಬುನಾದಿಯ ಮೇಲೆ ವ್ಯಾವಹಾರಿಕ ಕ್ಷೇತ್ರದ ಲ್ಲೊಂದು ಅಧ್ಬುತ ಎನಿಸುವಂತಹ ವ್ಯವಹಾರವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈ ವ್ಯವಹಾರವನ್ನು ಆಂಗ್ಲ ಭಾಷೆಯಲ್ಲಿ `ಆನ್ಲೈನ್ ಶಾಪಿಂಗ್ ಎನ್ನುತ್ತಾರೆ. ಬಹುಶಃ ಈ ಬಗ್ಗೆ ಅಷ್ಟಾಗಿ ಸಾಮಾನ್ಯ ಜನರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲೂ ಭಾರತದಲ್ಲಿ ಈ ವಿನೂತನ ಶಾಪಿಂಗ್ ಪದ್ದತಿ ಇನ್ನೂ ಅಷ್ಟಾಗಿ ಕ್ರಾಂತಿ ಮಾಡಿಲ್ಲ. ಆದರೆ ಮುಂದಿನ ಎರಡು ವರ್ಷಗಳಲ್ಲಿ ದೇಶದ ಶಾಪಿಂಗ್ ಕ್ಷೇತ್ರವನ್ನೇ ಹುಟ್ಟಡಗಿಸುವ ಸಾಮಥ್ರ್ಯ ಇದಕ್ಕಿದೆ ಎಂದರೆ ನೀವು ನಂಬಲೇ ಬೇಕು!
ಸರಿ ಸುಮಾರು ವರ್ಷಗಳ ಹಿಂದೆ ಅಗತ್ಯ ವಸ್ತುಗಳಿಗಾಗಿ ಮನೆಯ ಪಕ್ಕದ ಸಣ್ಣ ಸಣ್ಣ ಅಂಗಡಿಗಳನ್ನು ಅವಲಂಭಿಸುತ್ತಿದ್ದೆವು. ಒಂದು ಸಣ್ಣ ಟೇಪ್ ರೆಕಾರ್ಡರ್ ಖರೀದಿಸಲು ನಗರವನ್ನೆಲ್ಲಾ ರೌಂಡ್ ಹೊಡೆಯಬೇಕಾದ ಕಾಲವದು. ನಂತರ ಸ್ವಲ್ಪ ಪ್ರಗತಿ ಹೊಂದುತ್ತಾ ಹೋದಂತೆ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಆ ಕಾಲದಲ್ಲಿ ಮೊಬೈಲ್ ಇದ್ದವನು ಬಾಸ್ ಎನ್ನುವಷ್ಟರ ಮಟ್ಟಿಗೆ ಇದರ ಕ್ರೇಜ್ ಆರಂಭವಾ ಯಿತು. ತಾಂತ್ರಿಕತೆ ಬೆಳೆಯಿತು. ತಂತ್ರಜ್ಞಾನದ ಹಲವಾರು ಆವಿಷ್ಕಾರಗಳು ವ್ಯಾವಹಾರಿಕ ಮಾರುಕಟ್ಟೆಯನ್ನು ಪ್ರವೇಶಿಸಿದವು. ಜನರೂ ಈ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು! ಪರಿಣಾಮ ಜಗತ್ತಿನಾದ್ಯಂತ ತಾಂತ್ರಿಕ ಸಲಕರಣೆಗಳ ಬೃಹತ್ ಮಾರಾಟ ಮಳಿಗೆಗಳು ತಲೆಯೆತ್ತಿದವು. ತಾಂತ್ರಿಕತೆಯ ಪ್ರಯೋಗಳಿಗೆ ಜನ ಮುಗಿಬಿದ್ದ ಪರಿಣಾಮ ದಿನನಿತ್ಯ ಮಿಲಿಯನ್ ಗಟ್ಟಲೇ ವಹಿವಾಟು ಜಾಗತಿಕ ಮಾರುಕಟ್ಟೆಯಲ್ಲಿ ದಾಖಲಾಯಿತು. ಈ ಮೂಲಕ ತಾಂತ್ರಿಕತೆಯೇ ಜಗತ್ತನ್ನು ಆವರಿಸಿತು. ಜನಸಾಮಾನ್ಯರು ಇದರಿಂದ ಸಂತೃಪ್ತರಾದರು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಬೃಹತ್ ಮಳಿಗೆಗಳಿಗೆ ಭೇಟಿ ಕೊಟ್ಟು ವಸ್ತುಗಳನ್ನು ಖರೀದಿಸುವುದರಲ್ಲೂ ಮನುಷ್ಯ ಉದಾಸೀನ ತೋರಿದ. ಹಾಗಾಗಿ  ಜಾಗತಿಕ ಮಾರುಕಟ್ಟೆ ಕುಸಿತ ಕಂಡಿತು. ಈ ವೇಳೆ ಜನರ ಉದಾಸೀನತೆಯ ಲಾಭ ಪಡೆದ ಅತೀ ಬುದ್ದಿವಂತರಿಂದ ಆರಂಭವಾದ ಶಾಪಿಂಗ್ ಕ್ರಾಂತಿಯೇ `ಆನ್ಲೈನ್ ಶಾಪಿಂಗ್. 90ರ ದಶಕದಲ್ಲೇ ಈ ಅನ್ಲೈನ್ ಶಾಪಿಂಗ್ನ ಆಲೋಚನೆಗಳು ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಹುಟ್ಟತೊಡಗಿದ್ದವು. ಆದರೆ ಈ ವಿಧಾನ ಆ ಕಾಲದಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಪ್ರಸ್ತುತ ಭಾರತ ಸೇರಿದಂತೆ ಜಗತ್ತಿನಾದ್ಯಂತ ಈ ಆನ್ ಲೈನ್ ಶಾಪಿಂಗ್ ವ್ಯವಸ್ಥೆ ಪ್ರಗತಿಯತ್ತ ದಾಪುಗಾಲಿಡುತ್ತಿದೆ.
ಆನ್ಲೈನ್ ಶಾಪಿಂಗ್ ಹುಟ್ಟಿಕೊಂಡದ್ದು ಹೇಗೆ?
1995ರ ವೇಳೆಗೆ ತಾಂತ್ರಿಕತೆ ತಕ್ಕಮಟ್ಟಿಗೆ ಬೆಳೆದಿದ್ದ ಕಾರಣ ಇದೇ ವರ್ಷ ಜೆಫ್ ಬಿಝಾಸ್ ಎಂಬಾತ ಅಮೆಜಾನ್ ಎಂಬ ಆನ್ಲೈನ್ ಶಾಪಿಂಗ್ ಕಂಪೆನಿಯನ್ನು ಹುಟ್ಟುಹಾಕಿದ. ಆದರೆ ಇದು ಆನ್ಲೈನ್ ವ್ಯವಹಾರ ಆರಂಭಿಸಿದ್ದು ಮಾತ್ರ 1996ರ ವೇಳೆಗೆ. ಮೊಟ್ಟ ಮೊದಲನೆಯದಾಗಿ ಪುಸ್ತಕ ಮಾರಾಟವನ್ನು ಆನ್ಲೈನ್ ಶಾಪಿಂಗ್ನಲ್ಲಿ ಆರಂಭಿಸಿದ ಅಮೆಜಾನ್ ಕಂಪೆನಿ ತದನಂತರ ತಾಂತ್ರಿಕತೆಯ ಎಲ್ಲಾ ಸಲಕರಣೆಗಳನ್ನು ಅಂತಜರ್ಾಲದ ಮೂಲಕ ಮಾರಾಟಕ್ಕಿಟ್ಟಿತು. ಅಮೇರಿಕಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೆನಡಾ, ಇಟಲಿ, ಜರ್ಮನಿ, ಚೀನಾ ಸೇರಿದಂತೆ ಜಗತ್ತಿನ ಹಲವು ಮುಂದುವರೆದ ರಾಷ್ಟ್ರಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. 2010ರ ವೇಳೆಗೆ 1.152ಸಾವಿರ ಬಿಲಿಯನ್ ಡಾಲರ್ ವ್ಯವಹಾರ ನಡೆಸುವ  ಮೂಲಕ ಇಂದು ಜಗತ್ತಿನ ಅತೀ ದೊಡ್ಡ ಆನ್ಲೈನ್ ವ್ಯವಹಾರ ಸಂಸ್ಥೆಯಾಗಿ ಅಮೆಜಾನ್ ಗುರುತಿಸಿಕೊಂಡಿದೆ. ನಂತರ ಇದರ ಯಶಸ್ಸನ್ನು ಗಮನಿಸಿದ ಅನೇಕ ಕಂಪೆನಿಗಳು ಈ ಕೆಲಸಕ್ಕೆ ಕೈಹಾಕಿದವು. ಪರಿಣಾಮವಾಗಿ ಅಮೆಜಾನ್ ಸ್ಥಾಪನೆಯಾದ ಎರಡು ವರ್ಷಗಳ ನಂತರ ಇಬೇ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಧರ್ೆಗಿಳಿಯಿತು. ಆದರೆ ಅಮೆಜಾನ್ ಹುಟ್ಟುಹಾಕಿದ್ದ ಕ್ರಾಂತಿಯ ಮುಂದೆ ಇಬೇ ಅಷ್ಟಾಗಿ ಸದ್ದು ಮಾಡುವಲ್ಲಿ ವಿಫಲವಾಯಿತು. ಮುಂದೆ ಅನೇಕ ಅನ್ಲೈನ್ ಶಾಪಿಂಗ್ ಕಂಪೆನಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಇ-ಶಾಪಿಂಗ್ ನೂತನ ಅದ್ಯಾಯ ಬರೆಯಿತು. ಜಾಗತಿಕವಾಗಿ ಇಷ್ಟೆಲ್ಲಾ ಸಂಚಲನವಾಗಿದ್ದರೂ ಭಾರತದಲ್ಲಿ ಮಾತ್ರ ಈ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈ ವೇಳೆ ಅಮೆಜಾನ್ ಕಂಪೆನಿಯಲ್ಲಿ ಕೆಲಸಕ್ಕಿದ್ದ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ ಎಂಬ ಇಬ್ಬರು ಗೆಳೆಯರು ಫ್ಲಿಪ್ಕಾಟರ್್ ಎಂಬ ಆನ್ಲೈನ್ ಶಾಪಿಂಗ್ ಸಂಸ್ಥೆಗೆ 2007ರಲ್ಲಿ ಮುನ್ನುಡಿ ಬರೆದರು. ಮೊದಲಾಗಿ ಪುಸ್ತಕ ಮಾರಾಟಕ್ಕಿಳಿದ ಈ ಸಂಸ್ಥೆಯ ಆದಾಯ 2010-11ರ ಸಾಲಿಗೆ 75ಕೋಟಿ ರುಪಾಯಿಗೇರಿತು. ನಂತರ ಮೊಬೈಲ್, ಕಂಪ್ಯೂಟರ್, ಸೇರಿದಂತೆ ಅನೇಕ ವಸ್ತುಗಳ ಮಾರಾಟವನ್ನು ಆರಂಭಿಸಿತು. ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಅತೀ ದೊಡ್ಡ ಅನ್ಲೈನ್ ಶಾಪಿಂಗ್ ತಾಣವಾಗಿದೆ. ಈ ಮೂಲಕ ಭಾರತದಲ್ಲಿ ಈ ಸಂಸ್ಥೆ ನೂತನ ಶಾಪಿಂಗ್ ಶಕೆ ಆರಂಭಿಸುವತ್ತ ಹೆಜ್ಜೆ ಇಟ್ಟಿದೆ.
ಏನಿದು ಆನ್ಲೈನ್ ಶಾಪಿಂಗ್?
ಈ ಆನ್ಲೈನ್ ಶಾಪಿಂಗ್ ನಡೆಸಲು ತಕ್ಕ ಮಟ್ಟಿನ ಕಂಪ್ಯೂಟರ್ ಜ್ಞಾನವಿರಬೇಕು. ಅಂತಜರ್ಾಲದ ನೆರವಿನಿಂದ ದೇಶಾದ್ಯಂತ ಇರುವ ಆನ್ಲೈನ್ ಶಾಪಿಂಗ್ ವೆಬ್ ಸೈಟ್ ವಿಳಾಸವನ್ನು ಕ್ಲಿಕ್ಕಿಸಿದರೆ ಕೂತಲ್ಲಿಯೇ ಅಧ್ಬುತ ವ್ಯವಹಾರ ಜಗತ್ತೊಂದು ತೆರೆದುಕೊಳ್ಳು ತ್ತದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿ ನಾವು ವಸ್ತುಗಳನ್ನು ಆಯ್ದುಕೊಳ್ಳಬಹುದು. ಪ್ರತಿಯೊಂದು ವಸ್ತುಗಳ ಮೌಲ್ಯವೂ ಆ ವಸ್ತುಗಳ ಸಂಪೂರ್ಣ ಮಾಹಿತಿಯೊಂದಿಗೆ ನಮಗೆ ಸಿಗುತ್ತದೆ. ದೊಡ್ಡ ದೊಡ್ಡ ಮಾಲ್ಗಳಲ್ಲಿ ಇಡೀ ಮಾಲ್ ಸುತ್ತು ಹಾಕಿ ಖರೀದಿಸುವ ಬದಲು ಇಲ್ಲಿ ಕೂತಲ್ಲಿಯೇ ನಮಗೆ ಬೇಕಾದಷ್ಟು ಶಾಪಿಂಗ್ ನಡೆಸಬಹುದು. ನಮ್ಮ ಶಾಪಿಂಗ್ ಮುಗಿದ ಮೇಲೆ ಅಂತಿಮವಾಗಿ ನಾವು ಖರೀದಿಸಿ ವಸ್ತುಗಳ ಒಟ್ಟು ಮೊತ್ತವನ್ನು ತಿಳಿಸಲಾಗುತ್ತದೆ. ಈ ವೇಳೆ ಆ ಮೊತ್ತವನ್ನು ಪಾವತಿಸಲು ಕೂಡ ಅನೇಕ ವಿಧದ ಸೌಲಭ್ಯಗಳಿವೆ. ಇದರಲ್ಲಿ ಡೆಬಿಟ್ಕಾಡರ್್ಗಳ ಮೂಲಕ ಹಣ ಪಾವತಿ ವ್ಯವಸ್ಥೆಯು ಮೊದಲಿಗೆ ಚಾಲ್ತಿಗೆ ಬಂತು. ಇಲ್ಲಿ ಕಾಡರ್್ ಬಳಸಿ ಕೂತಲ್ಲಿಂದಲೇ ಹಣ ಪಾವತಿ ಮಾಡಬಹುದು. ಇದನ್ನು ಪ್ರೀಪೇಯ್ಡ್ ವ್ಯವಸ್ಥೆ ಎಂದೂ ಕರೆಯಲಾಗುತ್ತದೆ. ಆದರೆ ಈ ವ್ಯವಸ್ಥೆಗೆ ಜನರು ಹೆಚ್ಚು ಸ್ಪಂದಿಸದ ಕಾರಣ ಕ್ಯಾಶ್ ಆನ್ ಡೆಲಿವರಿ ಎಂಬ ವಿನೂತನ ವಿಧಾನವನ್ನು ಪರಿಚಯಿಸಲಾಯಿತು. ಈ ವ್ಯವಸ್ಥೆಯು ಜನಸ್ನೇಹಿಯಾಗಿದ್ದು, ಖರೀದಿಸಿದ ವಸ್ತುಗಳು ನಮ್ಮ ಕೈಸೇರಿದ ಮೇಲೆಯೇ ಹಣ ಪಾವತಿ ಮಾಡಬಹುದಾಗಿದೆ. ಇಂದು ಹೆಚ್ಚಿನ ಆನ್ಲೈನ್ ಶಾಪಿಂಗ್ ಪಾವತಿ ವಿಧಾನವು ಈ ಮೂಲಕವೇ ನಡೆಯುತ್ತಿದೆ. ಈ ವಿಧಾನದಿಂದಾಗಿ ಆನ್ಲೈನ್ ಶಾಪಿಂಗ್ ವ್ಯವಸ್ಥೆ ಇನ್ನಷ್ಟು ಅಭಿವೃದ್ದಿಯಾಯಿತು. ಉಳಿದಂತೆ ಕಾಡರ್್ ಸ್ವೈಪ್, ಮನಿ ಆರ್ಡರ್ ಮುಂತಾದ ಪಾವತಿ ವಿಧಾನಗಳು ಚಾಲ್ತಿಯಲ್ಲಿವೆ.
ಆನ್ಲೈನ್ ಶಾಪಿಂಗ್ನ ಅನುಕೂಲತೆಗಳು
ಈ ವಿಧಾನ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದಾಗ ಜನರಿಗೆ ಇದರ ಕಾರ್ಯವಿಧಾನದ ಬಗ್ಗೆ ಅಷ್ಟಾಗಿ ನಂಬಿಕೆ ಬರಲಿಲ್ಲ. ನಾವೇ ಖುದ್ದು ಹೋಗಿ ಖರೀದಿಸುವ ವಸ್ತುಗಳೇ ಗುಣಮಟ್ಟದಲ್ಲಿ ಕಳಪೆಯಾಗಿರುವಾಗ ಇಂಟರ್ನೆಟ್ನಲ್ಲಿ ಗುಣಮಟ್ಟ ಪರೀಕ್ಷಿಸದೆ ಹೇಗೆ ಖರೀದಿಸುವುದು ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿತು. ಆದರೆ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸದ ವಿದ್ಯಾಥರ್ಿ ಸಮೂಹ ಈ ವಿಧಾನವನ್ನು ನೆಚ್ಚಿಕೊಂಡಿತು. ಹಾಗಾಗಿಯೇ ಆನ್ಲೈನ್ ಶಾಪಿಂಗ್ ವ್ಯವಹಾರದಲ್ಲಿ ಶೇ.55ರಷ್ಟು ಪಾಲು ವಿದ್ಯಾಥರ್ಿಗಳದ್ದೇ. ಅಮೆಜಾನ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪುಗೊಂ ಡಿತು. ಇದರ ಮಾರಾಟದ ನಂತರದ ಸೇವೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಅಮೇರಿಕಾದ ಬಹುಪಾಲು ಗ್ರಾಹಕರು ಆನ್ಲೈನ್ ಶಾಪಿಂಗ್ನ ಮೊರೆ ಹೋದರು. ಈ ಮಧ್ಯೆ ಕೆಲವೊಂದು ಕಂಪೆನಿಗಳು ಈ ಜಾಗಕ್ಕೆ ಲಗ್ಗೆಯಿಟ್ಟು ಈ ವಿನೂತನ ಶಾಪಿಂಗ್ ವಿಧಾನದ ಮೌಲ್ಯ ಕುಸಿಯಲು ಪರೋಕ್ಷ ಕಾರಣವಾಯಿತು.
ಆನ್ಲೈನ್ ಶಾಪಿಂಗ್ನ್ನು ಗ್ರಾಹಕ ಹೆಚ್ಚು ಇಷ್ಟ ಪಡಲು ಕಾರಣ ಇದರ 24ಗಂಟೆಗಳ ಖರೀದಿ ವ್ಯವಸ್ಥೆ. ದಿನದ 24 ಗಂಟೆಯೂ ಇಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ.  ಮತ್ತು ಅನ್ಲೈನ್ ಶಾಪಿಂಗ್ ನಡೆಸಿದ ಒಂದೆರಡು ದಿನಗಳಲ್ಲಿ ನಮ್ಮ ವಿಳಾಸಕ್ಕೆ ನಾವು ಖರೀದಿಸಿದ ವಸ್ತುಗಳು ಬಂದು ತಲುಪುತ್ತವೆ. ಅಲ್ಲದೇ ಇಲ್ಲಿ ಕೊಂಡುಕೊಳ್ಳುವ ಪ್ರತೀ ವಸ್ತುಗಳ ಗುಣಮಟ್ಟ ಮತ್ತು ಗ್ಯಾರಂಟಿಗೆ ಕಂಪೆನಿಯೇ ಹೊಣೆಯಾಗಿರುತ್ತದೆ(ಇದು ಮಾತ್ರ ಕಂಪೆನಿಗಳನ್ನು ಅವಲಂಭಿಸಿರುತ್ತದೆ. ಫ್ಲಿಫ್ಕಾಟರ್್, ಅಮೆಜಾನ್, ಇಬೇ ಮುಂತಾದ ಕಂಪೆನಿಗಳಲ್ಲಿ ಈ ವ್ಯವಸ್ಥೆ ಇದೆ). ಕೆಲವೊಂದು ಆನ್ಲೈನ್ ಕಂಪೆನಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ ಹಾಗೂ ನೂರು ರುಪಾಯಿ ಮೇಲ್ಪಟ್ಟ ಖರೀದಿಗೆ ಉಚಿತ ಹೋಂ ಡೆಲಿವರಿ ವ್ಯವಸ್ಥೆಯಿದೆ. ಈ ಎಲ್ಲಾ ಅನುಕೂಲತೆಗಳಿಂದಾಗಿ ಈ ಆನ್ಲೈನ್ ಶಾಪಿಂಗ್ ವ್ಯವಸ್ಥೆಯು ಜಾಗತಿಕವಾಗಿ ಪ್ರಗತಿ ಹೊಂದುತ್ತಿದೆ. ಮುಂದೆ ಮನೆಮನೆಗಳನ್ನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆ ಆವರಿಸಿದರೆ ಈ ವಿಧಾನ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಭಾರತದಲ್ಲಿ ಈಗಷ್ಟೇ ಪ್ರಗತಿಯತ್ತ ಸಾಗುತ್ತಿರುವ ಈ ಪದ್ದತಿಯ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಜನರ ಜಂಜಾಟದ ಜೀವನದ ಮಧ್ಯೆ ಈ ವಿಧಾನ ಭಾರತದಲ್ಲಿ ಬಹುಬೇಗನೆ ಖ್ಯಾತಿ ಗಳಿಸುವ ಎಲ್ಲಾ ಸಾಧ್ಯತೆಗಳು ನಿಶ್ಚಲವಾಗಿದೆ. ಸಣ್ಣ ಪುಟ್ಟ ಅಂಗಡಿಗಳ ವ್ಯವಹಾರಕ್ಕೆ ಬೃಹತ್ ಶಾಪಿಂಗ್ ಮಾಲ್ಗಳು ಒಂದು ಹಂತದಲ್ಲಿ ಅಡ್ಡಗಾಲಿಟ್ಟವು. ಮುಂದೊಂದು ದಿನ ಈ ಬೃಹತ್ ಶಾಪಿಂಗ್ ಮಾಲ್ಗಳ ಅಟ್ಟಹಾಸಕ್ಕೆ `ಆನ್ಲೈನ್ ಶಾಪಿಂಗ್ ಎಂಬ ವ್ಯವಹಾರಿಕ ಕ್ರಾಂತಿ ಬ್ರೇಕ್ ಹಾಕಿದರೆ ಅಚ್ಚರಿ ಪಡಬೇಕಿಲ್ಲ. ಕೆ ಬರಲಿಲ್ಲ. ನಾವೇ ಖುದ್ದು ಹೋಗಿ ಖರೀದಿಸುವ ವಸ್ತುಗಳೇ ಗುಣಮಟ್ಟದಲ್ಲಿ ಕಳಪೆಯಾಗಿರುವಾಗ ಇಂಟರ್ನೆಟ್ನಲ್ಲಿ ಗುಣಮಟ್ಟ ಪರೀಕ್ಷಿಸದೆ ಹೇಗೆ ಖರೀದಿಸುವುದು ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿತು. ಆದರೆ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸದ ವಿದ್ಯಾಥರ್ಿ ಸಮೂಹ ಈ ವಿಧಾನವನ್ನು ನೆಚ್ಚಿಕೊಂಡಿತು. ಹಾಗಾಗಿಯೇ ಆನ್ಲೈನ್ ಶಾಪಿಂಗ್ ವ್ಯವಹಾರದಲ್ಲಿ ಶೇ.55ರಷ್ಟು ಪಾಲು ವಿದ್ಯಾಥರ್ಿಗಳದ್ದೇ. ಅಮೆಜಾನ್ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ವಿಶ್ವಾಸಾರ್ಹ ಸಂಸ್ಥೆಯಾಗಿ ರೂಪುಗೊಂ ಡಿತು. ಇದರ ಮಾರಾಟದ ನಂತರದ ಸೇವೆ ಗ್ರಾಹಕರ ಪ್ರಶಂಸೆಗೆ ಪಾತ್ರವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಅಮೇರಿಕಾದ ಬಹುಪಾಲು ಗ್ರಾಹಕರು ಆನ್ಲೈನ್ ಶಾಪಿಂಗ್ನ ಮೊರೆ ಹೋದರು. ಈ ಮಧ್ಯೆ ಕೆಲವೊಂದು ಕಂಪೆನಿಗಳು ಈ ಜಾಗಕ್ಕೆ ಲಗ್ಗೆಯಿಟ್ಟು ಈ ವಿನೂತನ ಶಾಪಿಂಗ್ ವಿಧಾನದ ಮೌಲ್ಯ ಕುಸಿಯಲು ಪರೋಕ್ಷ ಕಾರಣವಾಯಿತು.
ಆನ್ಲೈನ್ ಶಾಪಿಂಗ್ನ್ನು ಗ್ರಾಹಕ ಹೆಚ್ಚು ಇಷ್ಟ ಪಡಲು ಕಾರಣ ಇದರ 24ಗಂಟೆಗಳ ಖರೀದಿ ವ್ಯವಸ್ಥೆ. ದಿನದ 24 ಗಂಟೆಯೂ ಇಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಮತ್ತು ಅನ್ಲೈನ್ ಶಾಪಿಂಗ್ ನಡೆಸಿದ ಒಂದೆರಡು ದಿನಗಳಲ್ಲಿ ನಮ್ಮ ವಿಳಾಸಕ್ಕೆ ನಾವು ಖರೀದಿಸಿದ ವಸ್ತುಗಳು ಬಂದು ತಲುಪುತ್ತವೆ. ಅಲ್ಲದೇ ಇಲ್ಲಿ ಕೊಂಡುಕೊಳ್ಳುವ ಪ್ರತೀ ವಸ್ತುಗಳ ಗುಣಮಟ್ಟ ಮತ್ತು ಗ್ಯಾರಂಟಿಗೆ ಕಂಪೆನಿಯೇ ಹೊಣೆಯಾಗಿರುತ್ತದೆ(ಇದು ಮಾತ್ರ ಕಂಪೆನಿಗಳನ್ನು ಅವಲಂಭಿಸಿರುತ್ತದೆ. ಫ್ಲಿಫ್ಕಾಟರ್್, ಅಮೆಜಾನ್, ಇಬೇ ಮುಂತಾದ ಕಂಪೆನಿಗಳಲ್ಲಿ ಈ ವ್ಯವಸ್ಥೆ ಇದೆ). ಕೆಲವೊಂದು ಆನ್ಲೈನ್ ಕಂಪೆನಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ ಹಾಗೂ ನೂರು ರುಪಾಯಿ ಮೇಲ್ಪಟ್ಟ ಖರೀದಿಗೆ ಉಚಿತ ಹೋಂ ಡೆಲಿವರಿ ವ್ಯವಸ್ಥೆಯಿದೆ. ಈ ಎಲ್ಲಾ ಅನುಕೂಲತೆಗಳಿಂದಾಗಿ ಈ ಆನ್ಲೈನ್ ಶಾಪಿಂಗ್ ವ್ಯವಸ್ಥೆಯು ಜಾಗತಿಕವಾಗಿ ಪ್ರಗತಿ ಹೊಂದುತ್ತಿದೆ. ಮುಂದೆ ಮನೆಮನೆಗಳನ್ನು ಕಂಪ್ಯೂಟರ್ ಎಂಬ ಮಾಯಾ ಪೆಟ್ಟಿಗೆ ಆವರಿಸಿದರೆ ಈ ವಿಧಾನ ಇನ್ನಷ್ಟು ಖ್ಯಾತಿ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಭಾರತದಲ್ಲಿ ಈಗಷ್ಟೇ ಪ್ರಗತಿಯತ್ತ ಸಾಗುತ್ತಿರುವ ಈ ಪದ್ದತಿಯ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಜನರ ಜಂಜಾಟದ ಜೀವನದ ಮಧ್ಯೆ ಈ ವಿಧಾನ ಭಾರತದಲ್ಲಿ ಬಹುಬೇಗನೆ ಖ್ಯಾತಿ ಗಳಿಸುವ ಎಲ್ಲಾ ಸಾಧ್ಯತೆಗಳು ನಿಶ್ಚಲವಾಗಿದೆ. ಸಣ್ಣ ಪುಟ್ಟ ಅಂಗಡಿಗಳ ವ್ಯವಹಾರಕ್ಕೆ ಬೃಹತ್ ಶಾಪಿಂಗ್ ಮಾಲ್ಗಳು ಒಂದು ಹಂತದಲ್ಲಿ ಅಡ್ಡಗಾಲಿಟ್ಟವು. ಮುಂದೊಂದು ದಿನ ಈ ಬೃಹತ್ ಶಾಪಿಂಗ್ ಮಾಲ್ಗಳ ಅಟ್ಟಹಾಸಕ್ಕೆ `ಆನ್ಲೈನ್ ಶಾಪಿಂಗ್ ಎಂಬ ವ್ಯವಹಾರಿಕ ಕ್ರಾಂತಿ ಬ್ರೇಕ್ ಹಾಕಿದರೆ ಅಚ್ಚರಿ ಪಡಬೇಕಿಲ್ಲ.

ಬ್ಯಾರಿ ಚಿತ್ರದ ಅಸಲಿಯತ್ತು ನಮಗೇಕೇ ಇಷ್ಟವಾಗಲಿಲ್ಲ?

ಬ್ಯಾರಿ ಚಿತ್ರದ ಅಸಲಿಯತ್ತು ನಮಗೇಕೇ ಇಷ್ಟವಾಗಲಿಲ್ಲ?
ಬ್ಯಾರಿ ಭಾಷೆಯ `ಬ್ಯಾರಿ ಚಿತ್ರಕ್ಕೆ ಮೊನ್ನೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ಈ ಮೂಲಕ ಬ್ಯಾರಿ ಭಾಷೆಯಲ್ಲಿ ನಿಮರ್ಾಣಗೊಂಡ ಪ್ರಥಮ ಚಿತ್ರವೇ ರಾಷ್ಟ್ರೀಯ ಮನ್ನಣೆ ಗಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಬ್ಯಾರಿ ಚಿತ್ರದ ಬಗ್ಗೆ ಮತ್ತು ಇಂದಿನ ವೀಕ್ಷಕರ ಮನಸ್ಥಿತಿಯ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಬೇಕೆನಿಸುತ್ತಿದೆ. ಬ್ಯಾರಿ ಎನ್ನುವುದು ಬ್ಯಾರಿ ಭಾಷೆಯಲ್ಲಿ ಬಿಡುಗಡೆಯಾದ ಪ್ರಾದೇಶಿಕ ಚಲನಚಿತ್ರ. ಚಿತ್ರ ಬಿಡುಗಡೆಯಾಗಿ ಹದಿನೈದು ದಿನ ಪ್ರದರ್ಶನ ಕಂಡು ಸಿನಿಮಾ ಮಂದಿರದಿಂದ ಎತ್ತಂಗಡಿಯಾಯಿತು. ಚಿತ್ರಕ್ಕೆ ಜನರ ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಿನಿಮಾವನ್ನು ಪ್ರೇಕ್ಷಕ ಒಪ್ಪಲಿಲ್ಲ! ಚಿತ್ರ ಸದ್ದಿಲ್ಲದೆ ಹೋದ ನಂತರ ಈ ವಿಚಾರದ ಬಗ್ಗೆ ಮತ್ತೆ ಯಾಕೆ ಮಾತನಾಡುತ್ತಿದ್ದೀರಿ ಎಂದು ಕೆಲವರು ಕೇಳಬಹುದು. ಆದರೆ ಪ್ರೇಕ್ಷಕರು ಇಷ್ಟಪಡದ ಚಿತ್ರವೊಂದು ರಾಷ್ಟ್ರೀಯ ಸಾಧನೆ ಮಾಡಿದಾಗ ಸ್ವಲ್ಪವಾದರೂ ಈ ಬಗ್ಗೆ ಹೇಳಬೇಕೆನಿಸಿತಷ್ಟೇ. ಹಾಗಂತ ರಾಷ್ಟ್ರ ಪ್ರಶಸ್ತಿ ಗೆದ್ದ ಮಾತ್ರಕ್ಕೆ ಈ ಚಿತ್ರವನ್ನು ಹೊಗಳುತ್ತಿಲ್ಲ. ಬದಲಾಗಿ ಇಂದಿನ ಪ್ರೇಕ್ಷಕರ ವಿಭಿನ್ನ ಅಭಿರುಚಿಯ ಮಧ್ಯೆ ಮರೆಯಾದ ಬ್ಯಾರಿ ಚಿತ್ರದ ಬಗ್ಗೆ ಹೇಳಬೇಕಾದ ಅನಿವಾರ್ಯತೆಯಿದೆ.
ನಮ್ಮಲ್ಲಿ ಪ್ರೀತಿ, ಕಾಮಿಡಿ, ಟ್ರಾಜಿಡಿಗಳ ಮಧ್ಯೆ ಚಿತ್ರದ ಕಥೆ ತಳುಕು ಹಾಕಿಕೊಂಡಿದ್ದರೆ ಮಾತ್ರ ಜನರ ಮನಸ್ಸು ಗೆಲ್ಲುವುದು. ಇದು ಈಗಾಗಲೇ ಸಾಬೀತಾಗಿದೆ ಕೂಡ. ಅದೇ ರೀತಿ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು ನೆಲಕಚ್ಚಿದ ಇತಿಹಾಸ ಒಂದೇ ಎರಡೇ. ಪ್ರಶಸ್ತಿಗಾಗಿ ಚಿತ್ರ ಮಾಡುತ್ತಾರೆ ಎಂದು ದೂರುವವರು ಇದ್ದಾರೆಯೇ ವಿನಃ ಟೀಕಿಸುವ ಮುನ್ನ ಚಿತ್ರ ಮಂದಿರದ ಮೆಟ್ಟಿಲು ಹತ್ತಿ ಚಿತ್ರ ವೀಕ್ಷಿಸುವ ಮಹಾನುಭಾವಾರು ಯಾರು ಇಲ್ಲ. ಕಲರ್ಫುಲ್ ನಾಯಕಿ, ಅಶ್ಲೀಲ ಡೈಲಾಗ್ಗಳು, ಅತಿಯಾಯಿತು ಎನಿಸುವ ದೃಶ್ಯಗಳ ಮಧ್ಯೆ ಹಿಂದಿನ ಕಾಲದ ಕಾದಂಬರಿ ಆಧಾರಿತ ಚಿತ್ರಗಳು ಹೇಗೆ ತಾನೆ  ಮೇಲೆ ಬರಲು ಸಾಧ್ಯ. ನಮ್ಮ ಯುವ ಹೃದಯಗಳಿಗಂತೂ ಸಿನಿಮಾಗಳಲ್ಲಿ ಅಶ್ಲೀಲತೆ ಇಲ್ಲವಾದರೆ ಸಿನಿಮಾ ನೋಡುವುದೇ ಬೋರ್! ಪ್ರಾದೇಶಿಕ ಭಾಷಾ ಚಲನಚಿತ್ರ ರಂಗದ ಇತಿಹಾಸದಲ್ಲಿ ಕಾದಂಬರಿ ಆಧಾರಿತ ಚಿತ್ರಗಳೇ ಬಿಡುಗಡೆ ಕಾಣುತ್ತಿದ್ದವು. ಆದರೆ ತುಳು ರಂಗಭೂಮಿಯ ದಾಖಲೆಯ ನಾಟಕವೊಂದು ಸಿನಿಮಾವಾಗಿ ಮೂಡಿ ಬರುವ ಮೂಲಕ ಚಿತ್ರರಂಗದ ಇತಿಹಾಸಕ್ಕೆ ಅದ್ಭುತ ಎನಿಸುವಂಥ ಕಲಶವಿಟ್ಟಿತು. ಇನ್ನು ಇಲ್ಲಿ ಉಲ್ಲೇಖಿಸಿರುವ ಬ್ಯಾರಿ ಚಿತ್ರವನ್ನೇ ತೆಗೆದುಕೊಳ್ಳಿ. ಇಲ್ಲಿ ಅಶ್ಲೀಲತೆಯಿರಲಿಲ್ಲ, ಹಾಸ್ಯದ ರಸದೂಟವೂ ಇಲ್ಲ, ಅಂತಿಮವಾಗಿ ಇಂದಿನ ಯುವ ಜನತೆ ಬಯಸುವ ವಿಚಿತ್ರ ಪ್ರೀತಿಯ ಕಲ್ಪನೆಯಂತೂ ಇಲ್ಲವೇ ಇಲ್ಲ. ಈ ಎಲ್ಲಾ ಕಾರಣದಿಂದಲೋ ಏನೋ ಬ್ಯಾರಿ ಚಿತ್ರ ಮೂಲೆಗುಂಪಾದದ್ದು. ಇನ್ನು ತುಳು ಚಿತ್ರರಂಗದಲ್ಲಿ ದಾಖಲೆ ಬರೆದ `ಅಸಲ್ ನಲ್ಲಿ ಇವೆಲ್ಲವೂ ಇತ್ತು. ಈ ಕಾರಣದಿಂದ ಅಸಲ್ ಗೆದ್ದಿತು. ಆದರೆ ಬ್ಯಾರಿ ಮಾತ್ರ ಜನರ ಮನ ಗೆಲ್ಲುವಲ್ಲಿ ವಿಫಲವಾಯಿತು. ಬ್ಯಾರಿ ಸದ್ದಿಲ್ಲದೆ ಚಿತ್ರ ಮಂದಿರದಿಂದ ಹೋದಾಗ ಚಿತ್ರವನ್ನು ನೋಡದೆಯೇ ಕೆಟ್ಟದಾಗಿ ವಿಮಶರ್ಿಸಿದವರು ಎಷ್ಟೋ ಮಂದಿ. ಬ್ಯಾರಿ ಭಾಷೆಯ ಚಿತ್ರವನ್ನು ತುಳುನಾಡಿನಲ್ಲಿ ನೋಡುವುದಿಲ್ಲ ಎಂದವರೂ ಇದ್ದಾರೆ. ಆದರೆ ಚಿತ್ರವನ್ನು ವೀಕ್ಷಿಸುವ ಕೆಲಸವನ್ನು ಮಾತ್ರ ಇಂಥವರು ಮಾಡಲಿಲ್ಲ. ಇನ್ನು ಬ್ಯಾರಿ ಚಿತ್ರ ಅಸಲ್ನಷ್ಟು ಪ್ರಚಾರ ಗಿಟ್ಟಿಸುವುದರಲ್ಲೂ ವಿಫಲವಾಗಿತ್ತು. ಈ ಎಲ್ಲಾ ಕಾರಣಗಳಿಂದ ಬ್ಯಾರಿ ಜನರ ಬಳಿ ಸುಳಿಯುವ ಪ್ರಯತ್ನದಲ್ಲಿ ವಿಫಲವಾಯಿತು ಎಂದರೆ ಖಂಡಿತಾ ತಪ್ಪಿಲ್ಲ. ಆದರೆ ಇಂದು ಅದೇ ಚಿತ್ರ ರಾಷ್ಟ್ರೀಯ ಮನ್ನಣೆ ಗಳಿಸಿದೆ. ಪತ್ರಿಕೆಗಳು ಕೂಡ ಬ್ಯಾರಿಯ ಯಶಸ್ಸನ್ನು ಹಾಡಿ ಹೊಗಳುತ್ತಿವೆ. ಒಂದು ಹಂತದಲ್ಲಿ ಸೋತ ಚಿತ್ರ ಈಗ ಗೆದ್ದಿದೆ. ರಾಷ್ಟ್ರ ಮಟ್ಟದ ಸಾಧನೆ ಮಾಡಿದೆ. ಬಹುಶಃ ಈ ರೀತಿಯ ಕಾರಣಗಳಿಂದಲೋ ಏನೋ ಐಶ್ವರ್ಯ ರೈ, ಸುನೀಲ್ ಶೆಟ್ಟಿ, ಮುಂತಾದ ಕರಾವಳಿಯ ಪ್ರತಿಭೆಗಳು ನಮ್ಮ ಕೈ ಜಾರಿದ್ದು. ಇನ್ನಾದರೂ ಪ್ರಾದೇಶಿಕ ಭಾಷೆಯ ಚಿತ್ರಗಳು ಎಂಬ ಅಸಡ್ಡೆ ಬೇಡ. ರಾಷ್ಟ್ರ ಪ್ರಶಸ್ತಿ ಎನ್ನುವುದು ಫೈನಲ್ ಸಟರ್ಿಫಿಕೇಟ್ ಎಂದು ಭಾವಿಸಿ ಬ್ಯಾರಿ ಚಿತ್ರವನ್ನು ವೀಕ್ಷಿಸಬಹುದಾಗಿತ್ತು ಎನ್ನುವುದು ನನ್ನ ವಾದವಲ್ಲ. ಬದಲಾಗಿ ಅರ್ಥವಾಗದ ಭಾಷೆಯ ಚಿತ್ರಗಳಿಗೆ ವ್ಯಯಿಸುವ ಹಣ, ಸಮಯವನ್ನು ನಮ್ಮದೇ ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸುವುದರಲ್ಲೂ ವ್ಯಯಿಸಬಹುದಲ್ಲವೇ?

little heart tele film


social networks


hyper marketgalannu ashrayisuva munna.....