Tuesday, 24 April 2012

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

`ನಾನ್ ಸಾಯ್ತೇನೆ ಅನ್ನುವವರಿಗೆ ಇದೊಂದು ಸಾಂತ್ವಾನ!

ಅಲ್ಲಿ ನೆರೆದಿದ್ದ ಯಾರೊಬ್ಬರಿಗೂ ಆತನ ಪರಿಚಯವೇ ಇರಲಿಲ್ಲ. ಆತ ಯಾರು? ಎಲ್ಲಿಂದ ಬಂದವನು? ಅನ್ನೋ ಯಾವ ಪ್ರಶ್ನೆಗೂ ಅಲ್ಲಿದ್ದ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಆದರೂ ಅಲ್ಲಿದ್ದ ಸಾವಿರಾರು ಮಂದಿ ಆತನ ಜೀವ ಉಳಿಸು ಅಂತ ದೇವರಲ್ಲಿ ಬೇಡ್ತಾ ಇದ್ರೂ. ಹೌದು. ಇದು ಮೊನ್ನೆಯಷ್ಟೇ ನನ್ನದೇ ಊರಿನ ಪಕ್ಕದಲ್ಲಿ ನಡೆದ ಒಂದು ಘಟನೆಯ ಥ್ರೀ ಲೈನ್ ಸ್ಟೋರಿ.
ಕೆಲಸ ಮಾಡ್ತಾ ಇದ್ದ ಕೂಲಿ ಕಾಮರ್ಿಕನೊಬ್ಬನ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಆತ ಅದರ ಅಡಿಯಲ್ಲಿ ಸಿಲುಕಿ ಬಿದ್ದಿದ್ದ. ಸರಿಸುಮಾರು ಏಳು ಘಂಟೆ ಪ್ರಯತ್ನ ಪಟ್ಟ ನಂತರ ಆ ಬಡ ಜೀವ ಬದುಕಿತು. ಆ ಏಳು ಘಂಟೆ ಅಲ್ಲಿ ನಡೆದ ಎಲ್ಲಾ ವಿದ್ಯಮಾನಗಳಿಗೂ ನಾನು ಸಾಕ್ಷಿಯಾಗಿದ್ದೆ. ಈ ವೇಳೆ ನನಗೆ ಅದೆಷ್ಟೋ ಮಾನವೀಯ ಸಂಬಂಧಗಳ ಪರಿಚಯವಾಯಿತು, ಕೆಲ ಜವಾಬ್ದಾರಿಗಳ ಪರಿಚಯವಾಯ್ತು ಇನ್ನೂ ಕೆಲ ಧೂರ್ತರ ಪರಿಚಯವಾಯ್ತು. ನಿಜಕ್ಕೂ ಆ ಏಳು ಘಂಟೆ ಮನುಷ್ಯನ ವಿಭಿನ್ನ ವರ್ತನೆಗಳ ನೇರ ದರ್ಶನ ನನಗೆ ಆಯಿತು ಅನ್ನೋದಂತೂ ಗ್ಯಾರಂಟಿ.
ಸಾವಿರಾರು ಜನ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬದುಕಲಿ ಬಡ ಜೀವ ಅಂತ ಪ್ರಾರ್ಥನೆ ಮಾಡ್ತಾ ಇದ್ರೂ. ಆದರೆ ಇವರ್ಯಾರಿಗೂ ಆ ಜೀವದ ಪರಿಚಯಾನೇ ಇಲ್ಲ. ಆದರೆ ಅದೂ ಒಂದು ಜೀವ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಿತ್ತು. ದೂರದ ಊರಿಂದ ಕೂಲಿಗಾಗಿ ಇಲ್ಲಿ ಬರುವ ಈ ಜೀವಗಳಿಗೆ ರಕ್ಷಣೆ ಅನ್ನೋದು ಮರೀಚಿಕೆ. ರಾತ್ರೀ ಹಗಲು ಅನ್ನದೇ ಕೆಲಸ ಮಾಡೋವಾಗ ಪ್ರತೀ ಸಲಾನೂ ಯಮನ ಕುಣಿಕೆ ತನ್ನ ಆಟಕ್ಕೆ ಸಜ್ಜಾಗಿ ಕಾಯ್ತಾ ಇರುತ್ತೆ, ಸ್ವಲ್ಪ ತಪ್ಪಿದರೂ ಅಪಾಯ ಗ್ಯಾರಂಟಿ. ಮೊನ್ನೆ ಇಲ್ಲಾಗಿದ್ದೂ ಅದೇ. ಆದರೆ ಆ ಜೀವ ಭಯ ಪಡಲಿಲ್ಲ. ಈ ಊರಿನ ಭಾಷೆಯೇ ಗೊತ್ತಿಲ್ಲದ ಆ ಅಮಾಯಕನ ಕಣ್ಣುಗಳಲ್ಲಿ ನಾನು ಬದುಕಬಲ್ಲೇ ಎಂಬ ಸಣ್ಣದೊಂದು ಆತ್ಮವಿಶ್ವಾಸ ಇತ್ತು. ಅಲ್ಲಿದ್ದ ಅಷ್ಟೂ ಜನರ ಪ್ರಾರ್ಥನೆಯೂ ಆತನ ಜತೆಗಿತ್ತು. ಅಂತಿಮವಾಗಿ ಆತ ಬದುಕಿಯೂ ಬಿಟ್ಟ. ಆದರೆ ಅಲ್ಲಿ ನಾ ಕಂಡ ಕೆಲ ವಿದ್ಯಮಾನಗಳು ..........ಮಾನವೀಯ ಸಂಬಂಧಗಳು......
ಹಿಂದೆ ಇದೇ ಸ್ಥಳದಲ್ಲಿ ಒಂದು ಚಿತ್ರಮಂದಿರವಿತ್ತು. ಆಗೆಲ್ಲಾ ಸಾವಿರಾರು ಜನರಿಗೆ ಮನೋರಂಜನೆ ಒದಗಿಸಿತ್ತು ಈ ಚಿತ್ರಮಂದಿರ. ದಿನಂಪ್ರತಿ ಮೂರು ಪ್ರದರ್ಶನಕ್ಕಾಗಿ ಹೆಚ್ಚೆಂದರೆ ಜನ ಇಲ್ಲಿ ಸರಿಸುಮಾರು ರಾತ್ರಿ ಹತ್ತರ ತನಕ ಇರ್ತಾ ಇದ್ದರೋ ಏನೋ? ಆದರೆ ಮೊನ್ನೆ ಇದೇ ಜಾಗದಲ್ಲಿ ನಡೆದ ಘಟನೆಗೆ ಸಾವಿರಾರು ಜನ ಬೆಳಗ್ಗಿನ ಜಾವದವರೆಗೂ ಸಾಕ್ಷಿಯಾಗಿದ್ದರು. ಇಲ್ಲಿ ನೆರೆದಿದ್ದ ಕೆಲವರಿಗೆ ಇದೊಂದು ಮಾನವೀಯತೆ, ಇನ್ನು ಕೆಲವರಿಗೆ ಪ್ರತಿಷ್ಟೆ, ಮತ್ತೂ ಕೆಲವರಿಗೆ ಜವಾಬ್ದಾರಿ, ಇನ್ನು ಕೆಲವರಿಗೆ ಕರ್ತವ್ಯ! ಹೌದು ಅಲ್ಲಿದ್ದ ಎಲ್ಲರಲ್ಲೂ ಮಾನವೀಯತೆ ಅನ್ನೋದು ಇತ್ತೇ ಆದ್ರೂ ಒಬ್ಬೊಬ್ಬರಿಗೆ ಅದು ಒಂದೊಂದು ಥರ. ಅಲ್ಲಿ ಬಂದಿದ್ದ ನೂರಾರು ಪೊಲೀಸರಿಗೆ ಅದೊಂದು ಜವಾಬ್ದಾರಿ. ಇನ್ನು ಕೆಲ ಊರಿನ ಗೌರವಾನ್ವಿತ ವ್ಯಕ್ತಿಗಳಿಗೆ ಅದೊಂದು ಪ್ರತಿಷ್ಠೆ, ಎಲ್ಲವನ್ನೂ ಕಣ್ನಲ್ಲಿ ಕಣ್ಣಿಟ್ಟು ಶೂಟ್ ಮಾಡ್ತಾ ಇದ್ದ ಕೆಲ ಮಾಧ್ಯಮದವರಿಗೆ ಅದೊಂದು ಕರ್ತವ್ಯ, ಆದರೆ ಎಲ್ಲರಲ್ಲೂ ಆ ಜೀವ ಬದುಕಲಿ ಅನ್ನೋ ಸಣ್ಣದೊಂದು ಮಾನವೀಯತೆ ಮಾತ್ರ ಖಂಡಿತಾ ಇತ್ತು.
ಈ ದುರಂತ ನಡೆದ ಪಕ್ಕದಲ್ಲೇ ಕುಡುಕರ ಅಡ್ಡೆಯಾದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದಿತ್ತು. ಬಹುಶಃ ಕುಡುಕರಿಗೆ ಇದೊಂದು ಮನೋರಂಜನೆಯಾಗಿ ಕಂಡಿರಲೂ ಬಹುದು. ಯಾಕೆಂದರೆ ಹಾಗಿತ್ತು ಕೆಲವರ ವರ್ತನೆ.
ಆವತ್ತು ಸುಮಾರು ಏಳು ಘಂಟೆ ಎಲ್ಲವನ್ನೂ ಸ್ತಬ್ಧನಾಗಿ ವೀಕ್ಷಿಸಿದ ನಾನು ಮನೆಗೆ ಬಂದ ನಂತರ ಒಂದೆರೆಡು ಘಂಟೆ ಮೌನವಾಗಿ ಯೋಚನೆ ಮಾಡಿದೆ. ಈ ಜಗತ್ತು ಎಷ್ಟೇ ಕ್ರೂರಿ ಆದ್ರೂ ಇಲ್ಲಿ ಜನರಿಗೆ ತಮ್ಮದೇ ಆದ ಭಾವನ ಇದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮಾನವೀಯತೆ ಇದೆ. ಪತ್ರಿಕೆಯಲ್ಲೇ ಕೆಲಸ ಮಾಡುವವನಾದ ಕಾರಣ ವಾರಕ್ಕೆ ಹತ್ತಿಪ್ಪತ್ತು ಕ್ರೈಂ ಘಟನೆಗಳನ್ನು ನೋಡ್ತೇನೆ.  ವಾರಕ್ಕೆರೆಡಾದರೂ ಮರ್ಡರ್ ಇದ್ದೇ ಇರುತ್ತೆ. ಆಗೆಲ್ಲಾ ಯೋಚಿಸ್ತೇನೆ `ಈ ಜಗತ್ತು ಎಷ್ಟು ಕ್ರೂರಿ ಅಲ್ವಾ? ಅಂತ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಇವೆಲ್ಲದಕ್ಕೂ ಕಂಪ್ಲೀಟ್ ವಿರೋಧಿ ಅನ್ನೋ ಹಾಗಿತ್ತು. ಯಾವತ್ತೂ ಕಡು ಕೋಪಿಗಳಾಗಿರುವ ಪೊಲೀಸರು ಕೂಡ ಅಂದು ಮೌನವಾಗಿ ಆತನ ರಕ್ಷಣಾ ಕಾರ್ಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇದ್ರೂ. ಬಹುಶಃ ಇದನ್ನೆಲ್ಲಾ ನೋಡೋವಾಗ ನನಗೆ ಜಗತ್ತೇ ಬೇಡವಾಗಿದೆ, ನನಗೇ ಅಂತ ಯಾರೂ ಇಲ್ಲ. ಅನ್ನೋ ಜೀವ ಕೂಡ ಬದುಕೋಕೆ ಆಸೆ ಪಡುತ್ತೆ. ಹೌದು ಖಂಡಿತವಾಗಲೂ ಆಸೆ ಪಡುತ್ತೆ.
ಫ್ರೆಂಡ್ಸ್, ನಾನು ಇಷ್ಟೆಲ್ಲಾ ಯಾಕ್ ಹೇಳ್ದೇ ಗೊತ್ತಾ? ನಮ್ಮಲ್ಲಿ ಸ್ವಲ್ಪ ನೋವಾದಾಗ, ತೊಂದರೆ ಬಂದಾಗ, ಅವಮಾನ ಆದಾಗ, ಕಷ್ಟ ಅನ್ನೋ ಬಿಸಿ ಸ್ವಲ್ಪ ತಟ್ಟಿದಾಗ ಅಷ್ಟೇ ಯಾಕೆ? ನಾವು ತುಂಬಾ ಇಷ್ಟ ಪಟ್ಟ ಜೀವವೊಂದು ದೂರ ಹೋದಾಗ ಆತ್ಮಹತ್ಯೆ ಎಂಬ ಜೀವನವನ್ನೇ ಅಂತ್ಯವನ್ನಾಗಿಸೋ ಕೆಟ್ಟ ಕೆಲಸಕ್ಕೆ ಕೈ ಹಾಕುವ ಅದೆಷ್ಟೂ ಜನರಿದ್ದಾರೆ. ಬಹುಶಃ ಇವರೆಲ್ಲರಿಗೂ ಈ ಘಟನೆ ಒಂದು ಪಾಠ, ಸಾಂತ್ವಾನ, ಧೈರ್ಯ ಇನ್ನೂ ಹೆಚ್ಚೆಂದರೆ ಜಗತ್ತು ವಿಶಾಲವಾಗಿದೆ, ನಾವಿನ್ನೂ ಬದುಕಬಹುದು ಅನ್ನೋ ಸ್ಪೂತರ್ಿ ಎನ್ನಬಹುದು. ಒಬ್ಬರ ಪ್ರೀತಿ ಸಿಗಲಿಲ್ಲ, ಈ ಜೀವನವೇ ಬೇಡ ಅಂದುಕೊಳ್ಳುವವರು ಒಮ್ಮೆ ರಸ್ತೆಯಲ್ಲಿ ಹೋಗೋ ವ್ಯಕ್ತಿಯನ್ನು, ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಯನ್ನು ನಿಲ್ಲಿಸಿ ಹೇಳಿ ನಾನ್ ಸಾಯ್ತೇನೆ ಅಂತ. ಆದರೆ ಆತ ಎಷ್ಟೆ ಕ್ರೂರಿ ಆಗಿದ್ರೂ ನಿಮ್ಮನ್ನು ಖಂಡಿತಾ ತಡಿದೇ ತಡೀತಾನೆ...ಯಾಕ್ ಗೊತ್ತಾ? ಅಲ್ಲೊಂದು ಸಣ್ಣ ಮಾನವೀಯತೆ ಕೆಲಸ ಮಾಡ್ತಾ ಇರುತ್ತೆ...ಆತ್ಮಹತ್ಯೆ ಅನ್ನೋದು ಜಸ್ಟ್ ಕೆಲವೇ ಕ್ಷಣಗಳ ಆತುರಾದ ನಿಧರ್ಾರವೇ ಹೊರತು, ಬೇರೇ ಏನೂ ಅಲ್ಲ.
ನೆನಪಿರಲಿ, ನಮಗಾಗಿ ಮಿಡಿಯುವ ಅದೆಷ್ಟೋ ಜೀವಗಳು ಈ ಭೂಮಿ ಮೇಲೆ ಇದ್ದೇ ಇರುತ್ತೆ. ಯಾರೋ ನಮ್ಮನ್ನು ದೂರ ಮಾಡಿದ್ರೂ ಅಂದತ ಎಲ್ಲರನ್ನೂ ದೂರ ಮಾಡೋ ಕೆಟ್ಟ ನಿಧರ್ಾರ ಖಂಡಿತಾ ಬೇಡ. ಎಲ್ಲರಿಗೂ ನಮ್ಮ ಅವಶ್ಯಕತೆ ಇದ್ದೇ ಇರುತ್ತೆ........ಜೀವನ ಅದೆಷ್ಟೋ ಮಾನವೀಯ ಸಂಬಂಧಗಳ ಬೆಸುಗೆ ಅನ್ನೋದು ಒಂದು ನಗ್ನ ಸತ್ಯ......!
ಧ್ವನಿ

Friday, 20 April 2012

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

ತ್ಯಾಗ, ನಂಬಿಕೆಗಳಿಲ್ಲದೆ ಪವಿತ್ರ ಪ್ರೀತಿ ಸಾಧ್ಯಾನಾ?

 

ಮೊನ್ನೆ ರವಿಬೆಳಗೆರೆಯವರ `ಅಮ್ಮ ಸಿಕ್ಕಿದ್ಲು ಪುಸ್ತಕ ಓದ್ತಾ ಕುಳಿತಿದ್ದೆ. ಬಹುಶಃ ಆ ವ್ಯಕ್ತಿಯ ಬರಹ ನಿಜಕ್ಕೂ ಗ್ರೇಟ್ ಅಂತ ಅನಿಸೋದೇ ಸೈಲಂಟಾಗಿ ಓದಿಸ್ತಾ ಹೋದಾಗ. ಬೆಳಗೆರೆ ಜನ ಸರಿಯಿಲ್ಲ ಅಂತಾರೆ ಕೆಲವರು. ಇದು ಸತ್ಯಾನೂ ಆಗಿರಬಹುದು, ಸುಳ್ಳೂ ಆಗಿರಬಹುದು. ಆದರೆ ಆ ವ್ಯಕ್ತಿಯ ಬರಹಗಳಲ್ಲಿ ಅಂತಹ ಸಣ್ಣದೊಂದು ಸುಳಿವು ಕೂಡ ಸಿಗೋದಿಲ್ಲ. `ಅಮ್ಮ ಸಿಕ್ಕಿದ್ಲು ಇದಕ್ಕೊಂದು ಸಣ್ಣ ಉದಾಹರಣೆ.
ಅವರೇ ಹೇಳಿದಂತೆ ನೀವು ಪ್ರೀತಿಯನ್ನು ಕಳೆದುಕೊಂಡವರಾಗಿದ್ದರೆ ಈ ಪುಸ್ತಕವನ್ನು ಒಮ್ಮೆ ಒದಲೇ ಬೇಕು. ಅದರಲ್ಲೂ ಅಮ್ಮ ಅಥವಾ ಅಮ್ಮ ಅನ್ನುವ ಸಂಬಂಧದ ಪ್ರೀತಿ ಸಿಗಲೇ ಇಲ್ಲ ಅಂದ್ರೆ ಅಥವಾ ಸಿಕ್ಕಿದರೂ ಕಳೆದುಕೊಂಡಿದ್ದರೆ ಖಂಡಿತಾ ಒಮ್ಮೆ ಓದಿ...ಯಾಕೆಂದರೆ ನಿಜಕ್ಕೂ ಈ ಪುಸ್ತಕ ಪಕ್ಕಾ ಸೆಂಟಿಮೆಂಟಲ್.
ಕೆಲ ದಿನಗಳ ಹಿಂದೆ ಇದೇ ಬ್ಲಾಗಿನಲ್ಲಿ ಅಮ್ಮ ಎನ್ನುವ ಸಂಬಂಧದ ಮಧ್ಯೆ ಮತ್ತೊಂದು ಅಮ್ಮ ಅನ್ನುವ ಒಂದು ವಿಚಾರವನ್ನು ಬರೆದಿದ್ದೆ. ಕೆಲವೊಮ್ಮೆ ನಾವು ತುಂಬಾ ಸ್ವಾಥರ್ಿಗಳಾಗ್ತೀವಿ. ಹೆತ್ತ ತಾಯಿ ಹತ್ತಿರ ಇದ್ರೂ ಯಾರ್ಯಾರನ್ನೋ ಇಷ್ಟ ಪಡ್ತೀವಿ. ಅದೆಷ್ಟೋ ಹೆಣ್ಣು ಮಕ್ಕಳು ಹೆತ್ತವರು ಇದ್ದರೂ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗ್ತಾರೆ. ಹುಡುಗ ಒಳ್ಳೆವನಾಗಿದ್ರೆ ಪರ್ವಾಗಿಲ್ಲ. ಇಲ್ಲಾಂದ್ರೆ ಖಂಡಿತಾ ಹುಡುಗಿ ಪಶ್ಚಾತ್ತಾಪ ಪಡೋದಂತೂ ಗ್ಯಾರಂಟಿ..
ಕೆಲವರಿಗೆ ಪ್ರೀತಿ ಅಂದ್ರೆ ಹದಿ ಹರೆಯದ ವಯಸ್ಸಲ್ಲಿ ಬರುವ ಸಣ್ಣ ಆಕರ್ಷಣೆಯಷ್ಟೇ. ಇನ್ನು ಕೆಲವರಿಗೆ ಪ್ರೀತಿ ಅಂದ್ರೆ ಜೀವ, ಜೀವನ ಇನ್ನೂ ಹೆಚ್ಚು ಅಂದ್ರೆ ಉಸಿರು. ಬಹುಶಃ ಇಂದಿಗೂ ಪ್ರೀತಿಗೋಸ್ಕರ ಈ ಜಗತ್ತನ್ನೇ ಬಿಟ್ಟು ಹೋಗುವವರು ಇದ್ದಾರೆ ಎಂದರೆ ಅದು ಅಂಥವರೇ. ಇವರ ಪ್ರೀತಿ ನೈಜ ಪ್ರೀತಿ. ಎಲ್ಲೂ ಕಲ್ಮಶಗಳೇ ಇರೋದಿಲ್ಲ. ಒಂದು ವೇಳೆ ಈ ಪ್ರೀತೀಲಿ ಅಪ್ಪಿ ತಪ್ಪಿ ಯಾರಾದರೂ ಒಬ್ಬರು ಕೈ ಬಿಟ್ಟರೆ ಅಲ್ಲೊಂದು ದುರಂತ ಖಂಡಿತಾ. ನಿಜವಾಗಲೂ ನಾನಿವತ್ತು ಬರೆಯೋಕೆ ಬಂದಿದ್ದು ಪ್ರೀತಿ ಬಗ್ಗೆ ಅಲ್ವೇ ಅಲ್ಲ. ನನ್ನ ಜೀವನದಲ್ಲಿ ಕಂಡ ತ್ಯಾಗ ಮತ್ತು ನಂಬಿಕೆಗಳ ಬಗ್ಗೆ.........
ತ್ಯಾಗ ಅಂದ್ರೆ ಏನು? ನಂಬಿಕೆ ಅಂದ್ರೆ ಏನು? ಮುಂಗಾರು ಮಳೆಯಲ್ಲಿ ಗಣೇಶ ತನ್ನ ಹುಡುಗಿಯನ್ನು ಇನ್ನೊಬ್ಬನಿಗೆ ಬಿಟ್ಟು ಕೊಟ್ಟಿದ್ದು ತ್ಯಾಗಾನಾ? ಆಕೆಯ ತಂದೆ ತಾಯಿ ಈತನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿದ್ದು ನಿಂಬಿಕೇನಾ? ಹೌದು, ಒಂದರ್ಥದಲ್ಲಿ ಇವೆರಡೇ ನಂಬಿಕೆ, ತ್ಯಾಗ. ಇಲ್ಲೊಂಥರ ಖುಷೀನೂ ಇದೆ. ದುಃಖಾನೂ ಇದೆ. ಬಹುಶಃ ಸಿನಿಮಾದ ಜನಗಳಿಗೂ ಈ ಟ್ರಿಕ್ಸ್ ತುಂಬಾನೇ ಉಪಯೋಗ ಆಗಿದೆ ಅನ್ನಬಹುದು. ಮೊನ್ನೆ ತಾನೆ ನನ್ನೊಬ್ಬ ಗೆಳೆಯ ತನ್ನ ಹುಡುಗೀನಾ ಇನ್ನೊಬ್ಬ ಲವ್ ಮಾಡ್ತಾ ಇದಾನೆ ಅಂದ. ಅದಕ್ಕೋಸ್ಕರ ನಾನವಳನ್ನು ಲವ್ ಮಾಡೋದನ್ನೇ ಬಿಟ್ ಬಿಟ್ಟೆ ಅಂದ. ಆಗ ನನಗೆ ಅವನ ಮೇಲೆ ತುಂಬಾ ಗೌರವ, ಖುಷಿ ಎಲ್ಲಾನೂ ಆಯ್ತು. ಯಾಕ್ ಗೊತ್ತಾ? ತನ್ನ ಪ್ರೀತಿನ ತ್ಯಾಗ ಮಾಡಿದ ಅಂತ. ಆದರೆ ಇಲ್ಲಿರೋ ವಿಷಯಾನೇ ಬೇರೆ. ಅವಳಿಗೂ ಅದು ನಾಲ್ಕನೇ ಲವ್, ಇವನಿಗೆ ಇದು ಆರನೇ ಲವ್. ಹೀಗಿರೋವಾಗ ಇವರಿಬ್ಬರ ಪ್ರೀತಿಗೆ ಹೇಗೆ ತಾನೇ ತ್ಯಾಗ ಅನ್ನೋ ಟ್ಯಾಗ್ಲೈನ್ ಕಟ್ಟೋಕೆ ಆಗುತ್ತೇ. ನೀವೇ ಹೇಳಿ? ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೇನೆ ಇವೆ. ಕೆಲವೊಮ್ಮೆ ಹುಡುಗ ಪಕ್ಕಾ ಸೆಂಟಿಮೆಂಟೋ, ಸೆನ್ಸಿಟಿವೋ ಆಗಿರ್ತಾನೆ. ಆದರೆ ಹುಡುಗಿ ಹಾಗಲ್ಲ. ಅವಳು ಇವನಿಗೆ ಪುಲ್ ಅಪೋಝಿಟ್. ಇವನಿಗೆ ಅವಳೇ ಪ್ರಪಂಚ ಆದ್ರೆ ಅವಳಿಗೆ ಇವನಂಥ ಅದೆಷ್ಟೋ ಪ್ರಪಂಚ! ಅದೆಷ್ಟೋ ಹುಡುಗರು. ತಪ್ಪು ತಿಳ್ಕೋಬೇಡಿ ಇಲ್ಲಿ ಹುಡುಗರು ಏನೂ ಕಮ್ಮಿ ಇಲ್ಲ. ತನ್ನ ಹುಡುಗೀನಾ ಹುಡುಗ ಎಷ್ಟೇ ಪುಟ್ಟ, ಚಿನ್ನ ಅಂತ ಕರೆದರೂ ಅದು ಜಸ್ಟ್ ಒಂದು ತಿಂಗಳು, ಅಬ್ಬಬ್ಬಾ ಅಂದ್ರೆ ಒಂದು ವರ್ಷ ಅಷ್ಟೇ. ಮತ್ತೆ ಎಲ್ಲಾ ಚಿನ್ನಾನೂ ಕಾಗೆ ಬಂಗಾರನೇ ಬಿಡಿ.
ಯಾವತ್ತೂ ಸೆಂಟಿಮೆಂಟ್, ತಾಯಿ, ಅಕ್ಕ ಅನ್ನೋ ಸಂಬಂಧಗಳ ಬಗ್ಗೆ ಬರೆಯೋ ನಾನು ಇವತ್ತು ಜೋಡಿಗಳ ಪ್ರೀತಿಯ ಬಗ್ಗೆ ಬರೆಯೋಕೆ ಕಾರಣ ಇದೆ. ಮೊನ್ನೆಯಷ್ಟೆ ಕುಂದಾಪುರದಲ್ಲಿ ಒಂದು ಘಟನೆ ನಡೀತು. ಮನೆಯವರು ಒಪ್ಪಲಾರರು ಅನ್ನೋ ಕಾರಣಕ್ಕೆ ಎರಡು ಜೋಡಿ ಈ ಜಗತ್ತನ್ನೇ ಬಿಟ್ಟು ದೂರ ಹೊರಟು ಹೋದವು. ಅವರು ಮಾಡಿದ್ದು ತ್ಯಾಗ. ಅವರಲ್ಲಿದ್ದಿದ್ದು ನಂಬಿಕೆ. ಯಾಕಂತ ಹೇಳ್ಬೇಕ? ಅವರಿಗೂ ಜಗತ್ತಲ್ಲಿ ಬದುಕೋಕೆ ಅದೆಷ್ಟೋ ಚಾಯ್ಸ್ಗಳಿದ್ದವು. ಎಲ್ಲರನ್ನೂ ಧಿಕ್ಕರಿಸಿ ಓಡಿ ಹೋಗ್ಬಹುದಿತ್ತು. ಆದರೆ ಅವರು ಹಾಗ್ ಮಾಡಲಿಲ್ಲ. ಜಗತ್ತಿಗೋಸ್ಕರ, ಮಾನವೀಯ ಸಂಬಂಧಕ್ಕೋಸ್ಕರ, ಅಷ್ಟೇ ಯಾಕೆ ಒಂದು ಸಣ್ಣ ಮಯರ್ಾದೆಗೋಸ್ಕರ ಪ್ರೀತೀನೇ ತ್ಯಾಗ ಮಾಡಿದ್ರೂ. ಇನ್ನು ಇವರ ಸಾವಿನಲ್ಲಿ ನಂಬಿಕೆಯ ಪಾಲೂ ಅಷ್ಟೇ ಇದೆ. ಸಾವಲ್ಲೂ ಇಬ್ಬರನ್ನಿಬ್ಬರೂ ನಂಬಿದ್ರೂ. ಸಾವಿನಲ್ಲೂ ಒಂದಾದರೂ. ಪ್ರೇಮಿಗಳು ಸತ್ತರೂ ನಂಬಿಕೆ ಸಾಯಲಿಲ್ಲ. ಎಂಥಾ ಹ್ಯಾಪಿ ಎಂಡಿಂಗ್ ಅಲ್ವಾ? ಹೌದು ಓಡಿ ಹೋಗಿ ಮದುವೆ ಆಗೋದಕ್ಕಿಂತ, ಎಲ್ಲರಿಂದಲೂ ಒಂದು ಪ್ರೀತಿಗೆ ವಿರೋಧ ಕಟ್ಟಿಸಿಕೊಳ್ಳೋದಕ್ಕಿಂತ ಇದು ನಿಜಕ್ಕೂ ಒಂದು ಹ್ಯಾಪಿ ಎಂಡಿಂಗೇ!
ಎಲ್ಲರೂ ಒಂದು ನೆನಪಲ್ಲಿಟ್ಟುಕೊಳ್ಳಬೇಕು. ಪ್ರೀತಿ ವಯಸ್ಸಿನ ಒಂದು ಹಂತದವರೆಗೆ ಜಸ್ಟ್ ಆಕರ್ಷಣೆ, ನಂತರ ಮಾನಸಿಕ ವೇದನೆ, ಅನಂತರ ಕೆಲವೊಂದು ಪ್ರಶ್ನೆ, ಇನ್ನು ಕೆಲವೊಮ್ಮೆ ಪ್ರಶ್ನೆಗಳೇ ಇಲ್ಲದ ಉತ್ತರ. ಅಂತಿಮವಾಗಿ ಅದೊಂದು ಜವಾಬ್ದಾರಿ. ಇವೆಲ್ಲವನ್ನೂ ಮೀರಿ ಬರೋದು ಅಷ್ಟು ಸುಲಭಾನೂ ಅಲ್ಲ. ಇಂದಿಗೂ ತಾಜ್ಮಹಲ್ ಪ್ರೀತಿಯ ಸಂಕೇತ ಆಗಿದ್ರೂ ಅದರ ಹಿಂದಿನ ಸ್ಟೋರಿ ಮಾತ್ರ ಇದು ಹೇಗೆ ಪ್ರೀತಿಗೆ ಸಂಕೇತವಾಯಿತು ಅಂಥ ಪ್ರಶ್ನಿಸುವ ಹಾಗೆ ಮಾಡುತ್ತೆ...ಯಾಕಂದ್ರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ಗಾಗಿ ಕಟ್ಟಿಸಿದ ಈ ಮಹಲ್ ಯಾವತ್ತೂ ಪ್ರೀತಿಗೆ ಸಂಕೇತ ಆಗೋದಕ್ಕೆ ಸಾಧ್ಯಾನೆ ಇಲ್ಲ. ಅಷ್ಟಕ್ಕೂ ಮುಮ್ತಾಜ್ ಈತನ ಮೊದಲನೇ ಪತ್ನಿ ಕೂಡ ಅಲ್ಲ. ಹೀಗಾದರೆ ತಾಜ್ಮಹಲ್ ಹೇಗೆ ತಾನೆ ಪ್ರೇಮದ ಸಂಕೇತ ಆಗುತ್ತೆ? ಆದರೆ ನಮ್ಮಲ್ಲಿ ಇತಿಹಾಸ ನೋಡೋದಕ್ಕಿಂತ ಸೌಂದರ್ಯ ನೋಡುವವರೇ ಹೆಚ್ಚಿದ್ದಾರೆ. ಆಗ ವಿಧಾನ ಸೌಧನೂ ಪ್ರೇಮಕ್ಕೆ ಸಂಕೇತ ಆಗಬಹುದು. ಜಸ್ಟ್ ಲವ್, ಟೈಮ್ ಪಾಸ್ ಲವ್ ಅನ್ನೋದರ ಮಧ್ಯೆ ಎಲ್ಲೋ ಒಂದು ಕಡೆ ರಿಯಲ್ ಲವ್ ಕೂಡ ಇರುತ್ತೆ. ಅಲ್ಲೆಲ್ಲಾ ತ್ಯಾಗ, ನಂಬಿಕೆ, ಪ್ರೀತಿ ಸದ್ದಿಲ್ಲದೇ ಕೆಲಸ ಮಾಡುತ್ತೆ ಕೂಡ....
ನೆನಪಿರಲಿ, ಲವ್ ಫ್ಯಾಶನ್ ಅಲ್ಲ. ಅದೊಂದು ಪವಿತ್ರ ಬಂಧ.......ಜಸ್ಟ್ ಒಂದು ದಿನಾನಾ ದರೂ ನಿಮ್ಮ ಪ್ರೀತಿಯನ್ನು ಪವಿತ್ರವಾಗಿ ಪ್ರೀತಿಸಿ.....ಒನ್ ಟೈಮ್ ನಿಮಗೂ ಗೊತ್ತಾಗಬಹುದು. ನೈಜ ಪ್ರೀತಿಲೀ ಇಷ್ಟೊಂದು ಸುಖ ಇದೆಯಾ ಅಂತ..........! 

Thursday, 19 April 2012

ವಿದೇಶಿ ಉದ್ಯೋಗ ಎಷ್ಟು ಸೇಫ್?

ವಿದೇಶಿ ಉದ್ಯೋಗ ಎಷ್ಟು ಸೇಫ್?

ಹೌದು, ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಪ್ರಶ್ನೆಯನ್ನು ಕೇಳುವ ಸಂದರ್ಭ ಬಂದಿದೆ. ಒಂದು ಕಾಲದಲ್ಲಿ ವಿದೇಶಿ ಉದ್ಯೋಗವೆಂದರೆ ಅದು ಭಾರತೀಯರ ಪಾಲಿಗೆ ಹೂವಿನ ಹಾಸಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗ ಹಾಗಿಲ್ಲ. ವಿದೇಶಕ್ಕೆ ಹೋದವರೆಲ್ಲರೂ ಅಲ್ಲಿ ಒಂದೊಳ್ಳೆ ಕೆಲಸ ಹಿಡಿದು ಬದುಕುತ್ತಿದ್ದಾರೆ, ನೆಮ್ಮದಿಯ ಜೀವನ ನಡೆಸಿ ಇಲ್ಲಿರುವ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದಾರೆ ಎಂದು ಅಂದುಕೊಳ್ಳುವಂತಿಲ್ಲ. ಯಾಕೆಂದರೆ ಇಂದಿನ ತಾಂತ್ರಿಕ ಯುಗದಲ್ಲಿ ವಿದೇಶಿ ಉದ್ಯೋಗದ ಚಿತ್ರಣವೇ ಬದಲಾಗಿದೆ. ವಿದೇಶದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ, ತಮ್ಮ ಆತಂಕದ ಜೀವನದ ಬಗ್ಗೆ ಈಗಾಗಲೇ ಅನೇಕ ಮಂದಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆದರೂ ಭಾರತೀಯರಿಗೆ ಅದರಲ್ಲೂ ಹೆಚ್ಚಾಗಿ ಮಂಗಳೂರಿಗರಿಗೆ ವಿದೇಶಿ ಉದ್ಯೋಗದ ಮೋಹ ಬಿಟ್ಟು ಹೋಗಿಲ್ಲ. ಬಹಳ ವರ್ಷಗಳ ಹಿಂದೆ ವಿದೇಶಿ ಉದ್ಯೋಗ ಎನ್ನುವ ಕಲ್ಪನೆ ಹಣ ಸಂಪಾದಿಸುವ ದೊಡ್ಡ ಹುದ್ದೆ ಎನ್ನುವಂತಾಗಿತ್ತು. ಆದರೆ ಇತ್ತೀಚೆಗೆ ಈ ಪರಿಕಲ್ಪನೆಯೇ ಬದಲಾಗಿದೆ.
 ಭಾರತದಂತಹ ರಾಷ್ಟದಲ್ಲೇ ತಾಂತ್ರಿಕತೆ ಸಾಕಷ್ಟು ಮುಂದುವರೆದಿದೆ. ಮನುಷ್ಯ ಮಾಡುವ ಹೆಚ್ಚಿನ ಕೆಲಸಗಳನ್ನು ಇಂದು ಯಂತ್ರಗಳು ನಿರ್ವಹಿಸುತ್ತಿವೆ. ಹಾಗಾಗಿಯೇ ಇಲ್ಲಿ ಇಂದು ಕೂಲಿಯಾಳುಗಳಿಗೆ ಅಷ್ಟಾಗಿ ಕೆಲಸವಿಲ್ಲ. ಇದು ಮುಂದುವರೆಯುತ್ತಿರುವ ರಾಷ್ಟ್ರ ಭಾರತದ ಚಿತ್ರಣ. ಹೀಗಿರುವಾಗ ಈಗಾಗಲೇ ಮುಂದುವರೆದ ಸೌದಿ ಅರೇಬಿಯಾ, ಕತಾರ್ ಮುಂತಾದ ರಾಷ್ಟ್ರಗಳಲ್ಲಿ ಮನುಷ್ಯ ತನ್ನ ಕೈಯಿಂದ ಮಾಡಬಹುದಾದ ಕೆಲಸಗಳು ಇರಬಹುದೇ? ಇದ್ದರೂ ಅವು ಯಾವ ರೀತಿಯ ಕೆಲಸಗಳಾಗಿರಬಹುದು? ಎಲ್ಲವನ್ನೂ ಯಂತ್ರದ ಕೈಗೆ ಕೊಟ್ಟು ಅಂದ ನೋಡುವ ವಿದೇಶಿಗರ ಕಣ್ಣಲ್ಲಿ ಭಾರತೀಯರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಇನ್ನು ಸೌದಿಯಂತಹ ಐಶಾರಮಿ ದೇಶದಲ್ಲಿ ಇಲ್ಲಿನ ಜನತೆಗೆ ಮೈಬಗ್ಗಿಸಿ ಕೆಲಸ ಮಾಡುವುದು ಗೊತ್ತಿಲ್ಲ. ಯಂತ್ರಗಳು ಮಾಡುವುದನ್ನು ಯಂತ್ರಗಳಿಂದ ಮಾಡಿಸಿದರೆ, ಅವುಗಳಿಂದ ಆಗದ ಕೆಲಸಗಳನ್ನು ವಿದೇಶಿ ಡಾಲರ್ನ ಆಸೆ ಹೊತ್ತು ಹೋಗುವ ನಮ್ಮವರಿಂದ ಮಾಡಿಸುತ್ತಾರೆ.
 ಇನ್ನು ನಮಗೆ ಬೇಕೇಂದಾಗ ಹೋಗಿ, ಬೇಡವೆಂದಾಗ ಹಿಂದೆ ಬರಲು ಅದು ನಮ್ಮ ದೇಶವೂ ಅಲ್ಲ. ಅಲ್ಲಿನ ನಿಯಮಗಳಿಗೆ ಕಟ್ಟುಬಿದ್ದು ಅನಿವಾರ್ಯವಾಗಿಯಾದರೂ ಇಂತಿಷ್ಟೇ ವರ್ಷ ಎಂದು ನಾವು ಅಲ್ಲಿ ಸೆಣೆಸಾಡಲೇ ಬೇಕು. ನಮ್ಮ ವಿದೇಶಿ ಉದ್ಯೋಗದ ಕಲ್ಪನೆಗೂ ಉತ್ತರಕನರ್ಾಟಕದ ಮಂದಿಯ ಮಂಗಳೂರು ನಂಟಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮಂಗಳೂರಿಗರು ಮಾಡಲಾಗದ ಕೆಲಸಕ್ಕೆ ಅಂದರೆ ಕಟ್ಟಡ ನಿಮರ್ಾಣ ಕೆಲಸಕ್ಕೆ ಇಲ್ಲಿಗೆ ಬರುವವರೇ ಉತ್ತರ ಕನರ್ಾಟಕದ ಮಂದಿ. ಅವರ ಪಾಲಿಗೆ ನಮ್ಮ ಮಂಗಳೂರೇ ವಿದೇಶ ಇದ್ದ ಹಾಗೆ. ಆದರೆ ಮಂಗಳೂರಿನ ಕೆಲವರಿಗೆ ವಿದೇಶಿ ಉದ್ಯೋಗದ ವ್ಯಾಮೋಹ. ಈಗ ಊಹಿಸಿ. ನೈಜ ವಿದೇಶಿ ಉದ್ಯೋಗದ ಕಲ್ಪನೆ ಜೀತ ಪದ್ದತಿಗೆ ಸಮನಾಗಿರಲು ಸಾಧ್ಯವಿಲ್ಲವೇ?
ಹಾಗಂತ ವಿದೇಶದ ವಿಮಾನ ಹತ್ತುವ ಎಲ್ಲರೂ ಅಲ್ಲಿ ಜೀತ ಮಾಡಿಯೇ ಬದುಕುತ್ತಿದ್ದಾರೆ ಎನ್ನುವುದು ನನ್ನ ವಾದವಲ್ಲ. ನೂರರಲ್ಲಿ ಹತ್ತು ಶೇಖಡಾ ಮಂದಿ ಉತ್ತಮ ಉದ್ಯೋಗದಲ್ಲಿದ್ದಾರೆ. ಬಹುಶಃ ಇವರಿಗೆಲ್ಲಾ ಇವರ ಶಿಕ್ಷಣ ಅಲ್ಲಿ ಉತ್ತಮ ಉದ್ಯೋಗ ದೊರಕಿಸಿ ಕೊಟ್ಟ್ಟಿರಬಹುದು. ಆದರೆ ಹೆಚ್ಚಿನವರು ಅಲ್ಲಿ ಬದುಕುತ್ತಿರುವುದು ಜೀತದಾಳುಗಳಾಗಿಯೇ. ನಮ್ಮೂರಿನಲ್ಲಾದರೆ ನಾವು ಮಾಡುವ ಕೆಲಸ ಇತರರಿಗೆ ಗೊತ್ತಾಗಬಹುದು. ಆದರೆ ವಿದೇಶದಲ್ಲಿ ಮಾಡುವ ಕೆಲಸ ಏನು ಎಂಬುದು ನಮಗೆ ಹೇಗೆ ತಾನೇ ತಿಳಿಯಲು ಸಾಧ್ಯ? ಉದಾಹರಣೆಗೆ ಇನ್ಪೋಸಿಸ್ನಂತಹ ಉತ್ತಮ ಸಂಸ್ಥೆಯನ್ನೆ ತೆಗೆದುಕೊಳ್ಳೋಣ. ಇದೊಂದು ಕೋಟೆಯಿದ್ದಂತೆ. ಅಪ್ಪಿ ತಪ್ಪಿಯೂ ಸಂಬಂಧ ಪಡದವರಿಗೆ ಇದರೊಳಗೆ ಪ್ರವೇಶವೇ ಇಲ್ಲ. ಇಲ್ಲಿ ಕೆಲಸ ಮಾಡುವುದೆಂದರೇನೆ ದೊಡ್ಡ ಪ್ರತಿಷ್ಟೆ ಇದ್ದ ಹಾಗೆ. ಮಂಗಳೂರಿನವನೇ ಇಲ್ಲಿ ಕೆಲಸ ಮಾಡಿದರೂ ಆತನ ಹುದ್ದೆ ಯಾವುದಿರಬಹುದೆಂದು ತಿಳಿಯಲು ನಮ್ಮಿಂದ ಸಾಧ್ಯವೇ ಇಲ್ಲ. ಅದೇ ರೀತಿ ವಿದೇಶಿ ಉದ್ಯೋಗ. ಅಲ್ಲಿನ ಕೋಟೆಯಲ್ಲಿ ನಾವೇನೆ ಕೆಲಸ ಮಾಡಿದರೂ ಅದು ಹೊರಜಗತ್ತಿಗೆ ಗೊತ್ತೇ ಆಗುವುದಿಲ್ಲ. ನಮ್ಮವರು ಅಲ್ಲಿ ಕಸ ಗುಡಿಸಿದರೂ ವಿದೇಶಿ ಉದ್ಯೋಗ ಎಂದು ಹೆಮ್ಮೆ ಪಟ್ಟುಕೊಳ್ಳುವವರು ನಾವು. ಅನೇಕ ಕಷ್ಟ, ತೊಡರುಗಳಿದ್ದರೂ ಇಂದಿಗೂ ವಿದೇಶಿ ಉದ್ಯೋಗದ ಮೇಲೆ ಕೆಲವರಿಗೆ ಎಲ್ಲಿಲ್ಲದ ವ್ಯಾಮೋಹ. ಈ ವ್ಯಾಮೋಹಕ್ಕೆ ಕೊನೆಯೆಂದು?
ಧ್ವನಿ

Monday, 16 April 2012

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಕೆಲವೊಮ್ಮೆ ಇಷ್ಟ ಆಗ್ತಾರೆ...ಇನ್ನು ಕೆಲವೊಮ್ಮೆ ದುಶ್ಮನ್ ಆಗ್ತಾರೆ!

ಫ್ರೆಂಡ್ಸ್, ಆವತ್ತೊಮ್ಮೆ ನಾನು ನನಗೊಬ್ಬ ಗುರು ಇದಾರೆ ಅಂತ ಹೇಳಿದ್ದೆ. ಅವರು ಪಕ್ಕಾ ಪ್ರೋಫೆಶನಲ್ ಅಲ್ಲ ಅಂತಾನೂ ಹೇಳಿದ್ದೆ. ಅವರ ಬಗ್ಗೆ ಹೇಳೋಕೆ ಇನ್ನೂ ಇದೆ. ಆ ವ್ಯಕ್ತಿ ನನ್ನ ಪಾಲಿಗೆ ಜೀವನದ ಕೆಲವೊಂದು ಮಹತ್ವದ ಘಟ್ಟಗಳನ್ನು ಪರಿಚಯಿಸಿದ ಮಹಾಶಯ. ಸ್ವಲ್ಪ ಎಡಪಂಥೀಯ ಧೋರಣೆಗಳೇ ಆ ಮನುಷ್ಯನಿಗೆ ಜೀವಾಳ. ಹಾಗಂತ ತೀರಾ ಕಮ್ಯುನಿಷ್ಟ್ ಅಂತಾನೂ ಹೇಳೋಕಾಗಲ್ಲ. ಆದರೆ ಆ ವ್ಯಕ್ತಿಯ ಕೆಲವೊಂದು ಮಾತುಗಳು ಮಾತ್ರ ಯಾವ ಕಮ್ಯುನಿಷ್ಟ್ ಸಿದ್ದಾಂತದ ಪ್ರತಿಪಾದಕನಿಗೂ ಕಮ್ಮಿ ಇಲ್ಲ. ಅಪ್ಪಿ ತಪ್ಪಿ ನಾವೇನಾದ್ರೂ ಅವರ ಜೊತೆ ಮಾನವೀಯ ಸಂಬಂಧದ ಬಗ್ಗೆ ಕೇಳಿದೆವು ಅಂತ ಇಟ್ಕೊಳ್ಳಿ. ಇವರ ಬಾಯಿಯಿಂದ ಬರೋ ಮಾತು ಒಮ್ಮೊಮ್ಮೆ ಇಷ್ಟ ಆದ್ರೂ ಕೆಲವೊಮ್ಮೆ ಕೇಳೋಕೆ ತುಂಬಾ ಕಷ್ಟ ಆಗುತ್ತೆ. ಇನ್ನು ಇವರಿಗೂ ನನಗೂ ಅಷ್ಟಕ್ಕಷ್ಟೇ. ಆದ್ರೂ ನನ್ನ ಪಾಲಿಗೆ ಇವರು ಗುರು!
ಇವರ ಜೊತೆ ತುಂಬಾ ಸಲ ಜಗಳ ಮಾಡಿದೀನಿ, ಇವರ ಮಾತಿಗೆ ಎದುರು ಮಾತಾಡಿದೀನಿ, ಅಷ್ಟೇ ಯಾಕೆ ಒಂದ್ಸಲ ಇವರ ಎಲ್ಲಾ ಸಿದ್ದಾಂತಗಳನ್ನು, ಧೋರಣೆಗಳನ್ನು ಸಾರಸಗಟಾಗಿ ತಳ್ಳಿ ಹಾಕಿದ್ದೀನಿ ಕೂಡ. ಆದ್ರೆ ಈ ಮೊದಲೇ ಹೇಳಿದ ಹಾಗೆ ಸ್ವಲ್ಪ ಲೇಟಾಗಿ ಈ ವ್ಯಕ್ತಿಯ ಪ್ರತೀ ಮಾತನ್ನು ಒಬ್ಬನೇ ಕೂತು ಯೋಚನೆ ಮಾಡಿದ್ದೀನಿ. ಆಗೆಲ್ಲಾ ಇವರ ಮಾತು ಒಂದು ಹಂತಕ್ಕೆ ಸರಿ ಅನಿಸೋದು. ದೈನಂದಿನ ಜೀವನದಲ್ಲಿ ನಾನು ಈ ವ್ಯಕ್ತಿಯನ್ನು ತುಂಬಾ ಅಂದ್ರೆ ತುಂಬಾ ದ್ವೇಷಿಸ್ತಾ ಇದ್ದೆ. ಇವರ ಮಾತಿಗೆ ಎಷ್ಟು ಚಚರ್ೆ ಮಾಡೋಕೆ ಆಗುತ್ತೋ ಅಷ್ಟು ಚಚರ್ೆ ಮಾಡ್ತಾ ಇದ್ದೆ. ಆದ್ರೆ ರಾತ್ರಿ ಮಲಗೋವಾಗ ದುಶ್ಮನ್ಗಳೂ ಹತ್ತಿರ ಆಗ್ತಾರೆ ಅನ್ನೋ ಹಾಗೆ ಇವರ ಮಾತು ಮತ್ತೆ ಮತ್ತೆ ಕಾಡ್ತಾ ಇತ್ತು. ನನ್ನ ವಯಸ್ಸಿನ ಎರಡರಷ್ಟು ವಯಸ್ಸು ಈ ವ್ಯಕ್ತಿಗಾಗಿತ್ತು. ಆದರೆ ವೈವಾಹಿಕ ಬಂಧನದ ಹಳ್ಳಕ್ಕೆ ಮಾತ್ರ ಇವರು ಬೀಳಲಿಲ್ಲ. ಈ ಬಗ್ಗೆ ಕೇಳಿದ್ರೆ ಸಂಸಾರಿಕ ಜೀವನದ ನೈಜ ಆಶಯ ಏನೂ ಅನ್ನೋದನ್ನು ಯಾವ ಕಟ್ಟರ್ ಸಂಸಾರಿಯೂ ವಿವರಿಸದಷ್ಟು ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿ ವಿವರಿಸ್ತಾರೆ. ನಮ್ಮಲ್ಲಿ ಸಂಸಾರ ಜೀವನದ ನೈಜ ಆಶಯ ಯಾರಿಗೂ ಗೊತ್ತಿಲ್ಲ, ಹಾಗಾಗಿ ನಾನು ಮದುವೆ ಆಗಿಲ್ಲ ಅಂತ ಹೇಳ್ತಾರೆ. ನಾವೇನಾದ್ರೂ ಮಧ್ಯೆ ಬಾಯಿ ಹಾಕಿದ್ರೆ ಆ ವ್ಯಕ್ತಿಯೊಂದಿಗೆ ಯುದ್ದ ಗೆದ್ದು ಬರೋದು ಅಷ್ಟು ಸಲೀಸಲ್ಲ ಬಿಡಿ.
ಅದೆಷ್ಟೂ ಸಲ ಬೆಳ್ಳಂಬೆಳಿಗ್ಗೆ ಇವರನ್ನು ಮಾತಿನಲ್ಲಿ ಸೋಲಿಸಬೇಕು ಅಂತಾನೆ ಸಿದ್ದವಾಗಿ ಬರ್ತಾ ಇದ್ದೆ. ಆದರೆ ಅದು ಅಷ್ಟು ಸುಲಭ ಅಲ್ಲ ಅನ್ನೋದು ಮತ್ತೆ ಗೊತ್ತಾಗ್ತಾ ಇತ್ತು! ಇಷ್ಟೆಲ್ಲಾ ಮಾತೋಡೋ ಈ ವ್ಯಕ್ತಿ ಡಿಗ್ರಿ ಬಿಡಿ ಪಿಯುಸಿನೂ ಮಾಡಿಲ್ಲ. ಆದ್ರೆ ಯಾವ  ಪ್ರೋಫೇಸರ್ಗೂ ಇರದ ತಲೆ ಈ ವ್ಯಕ್ತಿಗಿತ್ತೂ! ಬೆಳಿಗ್ಗಿನ ಪತ್ರಿಕೆ ಓದ್ತಾ ಇವರು ಕೋಡೋ ಅದೆಷ್ಟೋ ವರ್ಷಗಳ ಹಿಂದಿನ ಉದಾಹರಣೆಗಳನ್ನ ನೋಡ್ತಾ ಇದ್ರೆ ಇಪ್ಪತ್ತು ವರ್ಷಗಳ ಹಿಂದಿನ ಸುದ್ದಿ ಪತ್ರಿಕೆಯೇ ಕಣ್ಣ ಮುಂದೆ ಪ್ರತ್ಯಕ್ಷ ಆದ ಹಾಗೆ ಅನಿಸ್ತ್ತಾ ಇತ್ತು. ಲೆಕ್ಕಾಚಾರದಲ್ಲಿ, ಮೆಮೋರಿ ಪವರ್ನಲ್ಲಿ ಈ ವ್ಯಕ್ತಿ ತುಂಬಾನೇ ಪಕ್ಕಾ. ಒಮ್ಮೊಮ್ಮೆ ಇವರ ಮಾತು ಕೇಳ್ತಾ ಇದ್ರೆ ಇವರ್ ಯಾಕ್ ಇಷ್ಟು ಸಣ್ಣ ವ್ಯಕ್ತಿ ಆದ್ರೂ ಅಂತ ಅನಿಸುತ್ತೆ. ಇಂಥ ಬುಧ್ದಿವಂತಿಕೆ ಯಾಕ್ ಇವರನ್ನು ಎತ್ತರಕ್ಕೆ ಏರಿಸಲಿಲ್ಲ ಅಂತ ಅನಿಸುತ್ತೆ...ಆದರೆ ಅದಕ್ಕೂ ಈ ವ್ಯಕ್ತಿಯಲ್ಲೇ ಉತ್ತರ ಇದೆ...
ತಾನು ಬುದ್ದಿವಂತ, ಸಿದ್ದಾಂತವಾದಿ, ಎಡಪಂಥೀಯ ಅನ್ನೋ ಥರ ಈ ವ್ಯಕ್ತಿಯ ವರ್ತನೆ ಇರಲಿಲ್ಲ. ಆದರೆ ಇವರ ತನ್ನ ಮಾತುಗಳಿಂದಲೇ ಎಲ್ಲರಿಗೂ ದುಶ್ಮನ್ ಆಗ್ತಾ ಇದ್ರೂ! ಇನ್ನೊಬ್ಬರ ತಪ್ಪನ್ನು ಮುಖಕ್ಕೆ `ಪಟಾರ್! ಅಂತ ಒಡೆದ ಹಾಗೆ ಹೆಳ್ತಾ ಇದ್ರೂ...ಇದು ಸಹಜವಾಗಿಯೇ ಎಲ್ಲರಿಗೂ ಕೋಪ ತರಿಸುತ್ತೆ. ಬಹುಶಃ ನನಗೂ ಇವರ ಮೇಲೆ ಹೆಚ್ಚು ಕೋಪ ತರಿಸಿದ್ದು ಇದೇ ಇರಬೇಕು. ಇನ್ನು ಇವರಿಗೆ ಸೆಂಟಿಮೆಂಟ್ ಅಂದ್ರೇನೇ ಆಗೋದಿಲ್ಲ. ಆ ಬಗ್ಗೆ ನಾವೇನಾದ್ರೂ ಮಾತಿಗಿಳಿದರೆ ಪ್ರೀತಿ ಬಗ್ಗೆ ಒಂದ್ ಸಿನಿಮಾನೇ ತೆಗೆದು ಬಿಡಬಹುದು ಅಂತ ಕಥೆ ಹೇಳ್ತಾರೆ! ಈ ವ್ಯಕ್ತಿ ಒಂಥರಾ ವಿಚಿತ್ರ. ಇವರ ಕೌಟುಂಬಿಕ ಹಿನ್ನೆಲೆಯೇ ಒಮ್ಮೆಗೆ ಆಶ್ಚರ್ಯ ಹುಟ್ಟಿಸುತ್ತೆ. ಅವರು ಜೀವನದಲ್ಲಿ ಯಾರನ್ನೂ ಪ್ರೀತಿಸಲಿಲ್ವ್ವಂತೆ, ಪ್ರೀತಿಸಿದ್ದು ಅವರ ತಾಯಿ ಒಬ್ಬರನ್ನೇ, ಇನ್ನು ಕಣ್ಣೀರು ಹಾಕಿದ್ದು ಕೂಡ ಆ ತಾಯಿ ತೀರಿ ಕೊಂಡಗಳೇ ಅನ್ನೋದು ಅವರ ಮಾತು. ಕೆಲವೊಮ್ಮೆ ತೀರಾ ಸೆನ್ಸಿಟಿವ್ ಅನಿಸಿಬಿಡ್ತಾರೆ,...ತುಂಬಾ ಹತ್ತಿರ ಆಗ್ತಾರೆ...ನಮ್ಮ ಎಲ್ಲಾ ನೋವನ್ನೂ ಇವರ ಜೊತೆ ಹೇಳ್ಬೇಕು ಅನಿಸುತ್ತೆ...ಗೊತ್ತಿದ್ದೋ ಗೊತ್ತಿಲ್ದೇನೋ ಕೆಲವೊಮ್ಮೆ ಈ ವ್ಯಕ್ತಿ ಜೊತೆ ತೀರಾ ಪರ್ಸನಲ್ ವಿಚಾರಗಳನ್ನು ಶೇರ್ ಮಾಡಿದ್ದೀನಿ..ಆದ್ರೂ ಅವರು ನನ್ನ ಪಾಲಿಗೆ ದುಶ್ಮನ್!
ಯಾಕೆ ಅವರು ನನ್ನ ಪಾಲಿಗೆ ದುಶ್ಮನ್ ಆದ್ರೂ ಅಂತ ಯೋಚನೆ ಮಾಡಿದ್ರೆ ಉತ್ತರ ಸಿಗೋದೇ ಇಲ್ಲ. ಬಹುಶಃ ಆ ವ್ಯಕ್ತಿ ಯಾರ ಹಿತವನ್ನು ಬಯಸದೇ ಇರೋದೇ ಇದಕ್ಕೆ ಕಾರಣವಾ? ಅಥವಾ ಎಲ್ಲರ ತಪ್ಪನ್ನು ಎತ್ತಿ ಹಿಡಿಯೋದೇ ಇದಕ್ಕೆ ಕಾರಣವಾ? ಇದ್ರೂ ಇರಬಹುದು ಅಲ್ವಾ?
ಆದ್ರೆ ಒಂದಂತೂ ಸತ್ಯ. ನಾವೆಲ್ಲಾ ಇನ್ನೊಬ್ಬರೂ ತಪ್ಪು ಮಾಡಿದ್ರೂ ಅವರ ಎದುರಲ್ಲೇ ಹೇಳೋದಕ್ಕೆ ಹೋಗೋದಿಲ್ಲ. ಕಾರಣ ನಮ್ಮ ಸ್ವಾರ್ಥ ಇರಬಹುದು, ಅಥವಾ ಅವರ ಭಯ ಇರಬಹುದು, ಅಥವಾ ಸಂಬಂಧ ಹಾಳ್ ಮಾಡೋದು ಬೇಡ ಅನ್ನೋ ಮನಸ್ಥಿತಿ ಇರಬಹುದು. ಆದ್ರೆ ಈ ವ್ಯಕ್ತಿ ಅದಕ್ಕೂ ಉತ್ತರ ಆಗ್ತಾರೆ. ಇವರು ಯಾವತ್ತಿದ್ರೂ ಏಕಾಂಗಿ...ತಪ್ಪನ್ನು ಎತ್ತಿ ಹಿಡಿಯೋ ವ್ಯಕ್ತಿ..ಇಲ್ಲಿ ಎಲ್ಲರೊಂದಿಗೂ ದ್ವೇಷ ಕಟ್ಟಿಕೊಳ್ಳುವ ವ್ಯಕ್ತಿತ್ವ...ಕೆಲವೊಮ್ಮೆ ಇವರ ವ್ಯಕ್ತಿತ್ವ ನನಗೆ ತುಂಬಾನೇ ಅಂದ್ರೆ ತುಂಬಾನೇ ಇಷ್ಟ ಆಗಿದೆ....ಕೆಲವೊಮ್ಮೆ ನಾವಿಬ್ಬರೂ ಅಜನ್ಮ ದುಶ್ಮನ್ಗಳಾಗರ್ತೀವಿ...! ಆದ್ರೆ ಒಂದಂತೂ ಸತ್ಯ...ಈ ವ್ಯಕ್ತಿಯಿಂದ ನಾನು ಜೀವನದಲ್ಲಿ ಕಲಿತುಕೊಂಡ ಪಾಠ ಇದೆಯಲ್ಲ...ಬಹುಶಃ ಅದು ಯಾವ ಡಿಗ್ರೀನಲ್ಲೂ ಕಲಿಸೋಕೆ ಸಾಧ್ಯನೇ ಇಲ್ಲ.....
 

Saturday, 14 April 2012

ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!

ಖುಷಿ ಪಡುವುದರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್!

ಫ್ರೆಂಡ್ಸ್ ನಿಜಕ್ಕೂ ನಾನು ಈ ಬ್ಲಾಗ್ ಆರಂಭಿಸಿದ್ದು ಹವ್ಯಾಸಕ್ಕಾಗಿಯಲ್ಲ, ಬದಲಾಗಿ ನನ್ನ ಮನಸ್ಸು ಯಾರ ಜೊತೇನೂ ಹೇಳಿಕೊಳ್ಳಲಾಗದ ವಿಚಾರಗಳನ್ನು ಈ ಮೂಲಕವಾದರೂ ವ್ಯಕ್ತಪಡಿಸೋಣ ಅಂತ. ಈಗಾಗಲೇ ಒಂದು ಹಂತಕ್ಕೆ ಕೆಲವೊಂದು ವಿಚಾರಗಳನ್ನು ಗೊತ್ತಿದ್ದೋ ಗೊತ್ತಿಲ್ಲದೇನೋ ಈ ಬ್ಲಾಗ್ನಲ್ಲಿ ದಾಖಲಿಸಿದ್ದೇನೆ. ಕೆಲವೊಮ್ಮೆ ಬರೀತಾ ಹೋದಂತೆ ನಾನ್ ಏನ್ ಬರೀತಾ ಇದೀನಿ ಅನ್ನೋದು ಕೂಡ ನನಗೆ ಗೊತ್ತಾಗೋದಿಲ್ಲ. ಎಲ್ಲಾ ಬರೆದು ಮುಗಿಸಿದ ಮೇಲೆ ಸುಮ್ನೆ ಒಮ್ಮೆ ಓದಿದರೆ ಇಷ್ಟೆಲ್ಲಾ ಬರೆದ್ನಾ ಅನಿಸಿ ಬಿಡುತ್ತೆ. ಕೆಲವೊಮ್ಮೆ ತೀರಾ ಖಾಸಗಿ ವಿಚಾರಗಳನ್ನು, ಯಾವುದನ್ನು ಬರೆಯ ಬಾರದು ಅಂದ್ಕೊಂಡಿರ್ತೀನೋ ಅದನ್ನು....ಒಟ್ಟಾರೆ ಎಲ್ಲನೂ ಈ ಬ್ಲಾಗ್ನಲ್ಲಿ ಗೀಚಿದ್ದೀನಿ..
ಈ ಜೀವನ ಅಂದ್ರೇನೆ ಹಾಗೆ..ಉತ್ತರವೇ ಇಲ್ಲದ ಪ್ರಶ್ನೆ..ಹಿಂದೆ ನನಗೂ ತುಂಬಾ ಆಸೆಗಳಿತ್ತು..ಆಕಾಂಕ್ಷೆಗಳಿತ್ತು, ಏನಾದರೂ ಸಾಧಿಸಬೇಕು ಅನ್ನೋ ಛಲ ಇತ್ತು..ಈಗಲೂ ಇದೆ. ಆದರೆ ಎಲ್ಲೋ ಒಂದು ಸಣ್ಣ ನೋವು ಆಗಾಗ ಬಿಡದೇ ಕಾಡುತ್ತೆ. ಬಹುಶಃ ಜೀವನ ಅಂದ್ರೆ ಇದೇ ಇರಬೇಕು. ಸಮಸ್ಯೆ ಮನುಷ್ಯನಿಗೆ ಸಾಮಾನ್ಯ ಅಂತಾರೆ, ಆದರೆ ನನ್ನ ವಿಚಾರದಲ್ಲಿ ನನ್ನ ನೋವು ಸಮಸ್ಯೇನೇ ಅಲ್ಲ...ಜಸ್ಟ್ ಒನ್ ಫೀಲ್ ಅಷ್ಟೇ...
ಆದರೆ ಆ ಫೀಲ್ ಅಂತಾರಲ್ಲ..ಅದೇ ಕಣ್ರೀ ತುಂಬಾ ಅಂದ್ರೆ ತುಂಬಾ ನೋವ್ ಕೊಡ್ತಾ ಇರೋದು. ಒಂದ್ ವರ್ಷ ಪ್ರೀತಿಯಿಂದ ನನ್ನ ಮೊಬೈಲ್ನ ಕದ ತಟ್ಟುತ್ತಿದ್ದ ಎಸ್ಎಮ್ಎಸ್ ಅಕಸ್ಮತ್ತಾಗಿ ನಿಂತ್ ಹೋದರೆ ಏನಾಗ್ಬೇಡ? ಏನಿಲ್ಲ...ಜಸ್ಟ್ ನೋವಷ್ಟೇ..!
ಕೆಲವೊಬ್ಬರ ಜೀವನ ನಮಗೆ ಮಾದರಿ, ಇನ್ನು ಕೆಲವರದ್ದು ವ್ಯಕ್ತಿತ್ವ...ನನಗೂ ಕೆಲವರು ಮಾದರಿ..ಯಾವ ರೀತಿ ಅಂತ ಮಾತ್ರ ಗೊತ್ತಾಗ್ತಾ ಇಲ್ಲ. ಒಂದು ತುಂಬು ಕುಟುಂಬದಲ್ಲಿ ದಿನಪೂತರ್ಿ ನಗು, ತಮಾಷೆ, ಒಟ್ಟಿಗೆ ಕೆಲಸ, ಹರಟೆ ಎಲ್ಲಾ ಇರುತ್ತೆ. ಇದೆಲ್ಲದರ ಪರಿಚಯಾನೇ ಇಲ್ದೇ ಇರೋವನಿಗೆ ಇವೆಲ್ಲಾನೂ ಸಿಕ್ಕಿ ಬಿಡುತ್ತೆ.. ಆದ್ರೆ ಎಷ್ಟು ದಿನ? ಜಸ್ಟ್ ಒಂದು ವರ್ಷ..ಮತ್ತೆ ಅದೇ ಏಕಾಂಗಿತನ..ಒಬ್ಬಂಟಿತನ...ಒಬ್ಬನೇ ಕೂತಾಗ ಕಣ್ಣಲ್ಲಿ ಒಂದ್ ಹನಿ ನೀರು...ಇನ್ನರ್ ಫೀಲಿಂಗ್ ಅಂದ್ರೆ ಇದೇನಾ? ಇದ್ರೂ ಇರಬಹುದು.
ನಿಮ್ಮನ್ನು ಒಬ್ಬರು ತುಂಬಾ ಇಷ್ಟ ಪಡ್ತಾರೆ. ಅವರ ಎಲ್ಲಾ ವಿಚಾರಗಳನ್ನೂ ನಿಮ್ ಜೊತೆ ಶೇರ್ ಮಾಡ್ತಾರೆ. ಅವರ ಬತರ್್ ಡೇಗೆ ಏನಿಲ್ಲಾ ಅಂದರೂ ಒಂದ್ ವಾರ ಮೊದಲೇ ನೀವು ಗಿಫ್ಟ್ ಕೊಡೋಕೆ ಪ್ಲಾನ್ ಮಾಡ್ತೀರಾ. ನೀವ್ ಮಾಡಿದ್ದೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾನಂತೂ ಮಾಡಿದ್ದೀನಿ....
ಫಸ್ಟ್ ವಿಶಸ್, ಬೆಸ್ಟ್ ವಿಶಸ್ ಅನ್ನೋ ಹಾಗೆ ಬೆಳಿಗ್ಗೆ ಏಳು ಘಂಟೇಗೇನೆ ವಿಶ್ ಮಾಡಿದ್ದೀನಿ...ಆದ್ರೆ ಎಷ್ಟು ವರ್ಷ? ಜಸ್ಟ್ ಒನ್.........! ಇನ್ನೊಂದು ವರ್ಷ ಅದೇ ದಿನ, ಅದೇ ಸಮಯ....ಈ ಮನಸ್ಸಿಗೆ ಆ ಅವಕಾಶನೇ ಸಿಗೋದಿಲ್ಲ ಅಂದ್ರೆ....ಜಸ್ಟ್ ಫೀಲ್ ಇಟ್...ಆದರೆ ತುಂಬಾ ಸೆನ್ಸಿಟಿವ್ ಮನಸ್ಸುಗಳಿಗೆ ಮಾತ್ರ ಅನ್ನೋದು ನೆನಪಿರಲಿ. ಯಾಕೆಂದರೆ ಇಷ್ಟ ಪಟ್ಟವರನ್ನು ಮರೆತು ಹೋಗುವ ಜೀವಗಳಿಗೆ ಈ ತರ ಫೀಲ್ ಆಗೋದಿಲ್ಲ. ಆ ಜೀವವೇ ನಮ್ಮ ಜೀವನ ಅಂದುಕೊಳ್ಳುವ ಜೀವಕ್ಕೆ ಮಾತ್ರ ಈ ಥರ ಫೀಲ್ ಆಗೋದು. ಒನ್ ಟೈಮ್ ನನಗೆ ನನ್ನದೇ ಪ್ರಪಂಚ. ಶಾಲೆ ಬಿಟ್ಟರೆ ಮನೆ...ಮನೆ ಬಿಟ್ಟರೆ ಶಾಲೆ..ಈ ಮಧ್ಯೆ ಸಿಗ್ತಾ ಇದ್ದ ಒಂದೆರೆಡು ಫ್ರೆಂಡ್ಸ್. ಫ್ರೆಂಡ್ಸ್ ಜೊತೆ ಸೇರಿ ಒಂದರ್ಧ ಘಂಟೆ ಖುಷಿಯಾಗಿ ನಗೋದನ್ನು ಬಿಟ್ಟರೆ ಬೇರೆ ಎಲ್ಲೂ ನನಗೆ ನಗೋ ಅವಕಾಶಗಳೇ ಸಿಗ್ತಾ ಇರಲಿಲ್ಲ. ಚೆನ್ನಾಗಿ ಓದ್ತಾ ಇದ್ದೆ. ಇಡೀ ಕ್ಲಾಸ್ಗೇ ನಾನೇ ಫಸ್ಟ್....ಆದರೆ ಖುಷಿಯಾಗಿರೋದ್ರಲ್ಲಿ ಆವತ್ತಿಗೂ ಇವತ್ತಿಗೂ ನಾನೇ ಲಾಸ್ಟ್....
ಸಂಬಂಧಗಳು ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಒಂದು ರೀತಿ ಬಾವಿಯೊಳಗಿರೋ ಕಪ್ಪೆ ಥರ ನನ್ನ ಜೀವನ. ಯಾರ್ ಜೊತೇಲೂ ಬೆರೀತಾ ಇರಲಿಲ್ಲ. ಯಾರ್ ಜೊತೇನೂ ಹೆಚ್ಚು ಮಾತಿಲ್ಲ. ನನ್ನಷ್ಟಕ್ಕೆ ನಾನು. ಇನ್ನೊಬ್ಬರ ಸಮಸ್ಯೆನಲ್ಲೂ ಪಾಲು ತೆಗೆದುಕೊಳ್ಳದಷ್ಟು ಸ್ವಾಥರ್ಿ ನಾನು! ಒಂದು ದೊಡ್ಡ ಗುಂಪು ಕಟ್ಟಿಕೊಂಡು ಇದ್ರೆ ಎಲ್ಲಿ ನನ್ನ ಶಿಕ್ಷಣಕ್ಕೆ ತೊಂದರೆ ಆಗುತ್ತೋ ಅನ್ನೋ ಜಾಯಮಾನ ನನ್ನದು. ಇನ್ನು ಶಾಲೆಯಲ್ಲೂ ಅಷ್ಟೇ. ಎಲ್ಲರ ಥರ ಡ್ಯಾನ್ಸ್, ಸ್ಪೋಟ್ಸರ್್ ನನಗೆ ಆಗಿ ಬರೋದೇ ಇಲ್ಲ. ನಂದೇನಿದ್ದರೂ ಕ್ವಿಜ್, ಪ್ರಬಂಧ....ಅಷ್ಟೇ..ಇಲ್ಲೂ ಅಷ್ಟೇ...ಗೆದ್ದಾಗ  ಒಬ್ಬನೇ ಖುಷಿ ಪಡ್ತಾ ಇದ್ದೆ..ಸೋತಾಗಲೂ ಒಬ್ಬನೇ ಫೀಲ್ ಆಗ್ತಾ ಇದ್ದೆ...ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳೋದು ಹೇಗೆ ಅಂತಾನೆ ಗೊತ್ತಿಲ್ಲ. ಒಂಥರಾ ವಿಚಿತ್ರ ಕ್ಯಾರೆಕ್ಟರ್ ನನ್ನದು. ಸರಿಯಾಗಿ ನಮ್ಮ ಶಾಲೆಯ ಹತ್ತಿರ ಫೋಸ್ಟ್ ಡಬ್ಬ ಎಲ್ಲಿದೆ ಅನ್ನೋದು ಕೂಡ ನನಗೆ ಗೊತ್ತೇ ಇರಲಿಲ್ಲ. ನನ್ನ ಜೀವನದ ಬಗ್ಗೆ ಇನ್ನೂ ಹೇಳ್ತೀನಿ....ಆದ್ರೆ ಒಂದೇ ಸಲ ಬೇಡ....ನಿಮಗೂ ಕೇಳಿಸಿಕೊಳ್ಳೋಕೆ ಕಷ್ಟ ಆಗಬಹುದು....
ಧ್ವನಿ

Sunday, 8 April 2012

ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!


ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!


ನನ್ನನ್ನು ಹೆತ್ತವಳು, ಸಾಕಿದವಳು, ಬಿದ್ದಾಗ ಎತ್ತಿದವಳು, ನನ್ನನ್ನು ಸಮಾಜದಲ್ಲಿ ಒಂದು ಹಂತಕ್ಕೆ ತಂದು ನಿಲ್ಲಿಸಿದವಳು....ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಎಲ್ಲರಿಂದಲೂ ಬರುವ ಉತ್ತರ ಅಮ್ಮ.. ಆ ಸಂಬಂಧವೇ ಹಾಗೆ. ತನ್ನ ಕರುಳ ಕುಡಿಗಾಗಿ ಮಿಡಿಯುತ್ತೆ...ಹಾತೊರೆಯುತ್ತೆ.. ಜೀವನದ ಪ್ರತೀ ಕ್ಷಣದಲ್ಲೂ ತನ್ನ ಜೀವದ ಬಗ್ಗೆಯೇ ಚಿಂತಿಸುತ್ತೆ. ನನ್ನ ಅಮ್ಮನೂ ಹಾಗೆ. ಯಾರಿಗೂ ಸಿಗದ ಅಮ್ಮ..ನನಗೆ ಮಾತ್ರ ಸಿಕ್ಕ ಅಮ್ಮ. ಆಕೆ ಬಂಗಾರ ತೊಟ್ಟವಳಲ್ಲ. ಆದರೂ ಆಕೆ ಬಂಗಾರ. ಆಕೆ ಎಂದೂ ಸುಖವನ್ನು ಬಯಸಿದವಲಲ್ಲ. ಆದರೂ ಆಕೆ ಕಷ್ಟವನ್ನು ತೋರ್ಪಡಿಸಲಿಲ್ಲ. ಣಠಣಣಚಿಟಟಥಿ ಅವಳೇ ಬೇರೆ ಅವಳ  ಸ್ಟೈಲೇ ಬೇರೆ..
ಇದು ತನ್ನನ್ನು ಹೆತ್ತ ಅಮ್ಮನ ಬಗ್ಗೆ ಎಲ್ಲರೂ ಮನಸ್ಸಲ್ಲಿ ಅಂದುಕೊಳ್ಳುವ ಮಾತು. ಯಾಕೆಂದರೆ ತಾಯಿಯ ಮಹತ್ವವೇ ಅಂತದ್ದು. ಆಕೆಯನ್ನು ಮೀರಿಸುವವಳು ಇನ್ನೊಬ್ಬರು ಸಿಗಲಾರರು. ಆಕೆಯಷ್ಟು ಪ್ರೀತಿ ಅದು ಮರೀಚಿಕೆಯೇ ಸರಿ. ಒಂದು ಹಂತದವರೆಗೆ ಈ ಮೇಲಿನ ಪ್ರತೀ ವಿಚಾರದಲ್ಲಿ ನನ್ನ ಜೀವನ ಸ್ವಲ್ಪವೂ ವ್ಯತ್ಯಾಸ ಕಾಣಲಿಲ್ಲ. ಎಲ್ಲರಂತೆ ನನ್ನ ಅಮ್ಮ....ಆದರೆ
ಅಮ್ಮ ಎನ್ನುವ ಸಂಬಂಧದ ಮಧ್ಯೆ ಇನ್ನೊಂದು ಅಮ್ಮ!
ಆಶ್ಚರ್ಯವಾಯಿತಾ? ಹೌದು...ನನ್ನ ಅಮ್ಮನ ಮಧ್ಯೆ ಮತ್ತೊಂದು ಅಮ್ಮ..ಇನ್ನೊಂದು ಪ್ರೀತಿ...ಒಂದಷ್ಟು ಕಾಳಜಿ...ಜಸ್ಟ್ ಇಷ್ಟ-ಕಷ್ಟ, ಅಲ್ಪ-ಸ್ವಲ್ಪ ಭಾವನೆಗಳ ವಿನಿಮಯ....ಇದೆಲ್ಲಾ ಅಮ್ಮನನ್ನು ಬಿಟ್ಟರೆ ಯಾರ ಜೊತೆ ತಾನೇ ಮಾಡೋಕೆ ಸಾಧ್ಯ? ನೀವೇ ಹೇಳಿ. ಹೌದು, ಅಮ್ಮ ಬಿಟ್ಟರೆ ಬೇರೆ ಯಾರ ಜೊತೇಲೂ ಇದು ಸಾಧ್ಯಾನೇ ಇಲ್ಲ...ಹಾಗಾದರೆ ಅಮ್ಮನ ಬದಲು ಸಿಕ್ಕ ಇಂತಹ ಮತ್ತೊಂದು ಸಂಬಂಧ ಅಮ್ಮ ಆಗೋಕಾಗಲ್ವ? ಇನ್ನೊಂದು ಅಮ್ಮ ಜೀವನದಲ್ಲಿ ಇಲ್ವಾ? ಇಂತಹ ಪ್ರಶ್ನೆ ನನ್ನ ಮನಸ್ಸಿನ ಆಳಕ್ಕೆ ಇಳಿದು ಅಂತಿಮವಾಗಿ ಕಣ್ನೀರಿನ ಸಮುದ್ರವಾಗಿ ಹರಿದು ಹೋಯ್ತು....ಆದರೂ ಇಲ್ಲೀ ತನಕ ಇನ್ನೊಂದು ಸಂಬಂಧ ಅಮ್ಮ ಆಗಲೇ ಇಲ್ಲ...ಯಾಕೆ ಹೀಗೆ? ಯೋಚನೆ ಮಾಡ್ತಾನೇ ಇದೀನಿ...
ಕೆಲವೊಮ್ಮೆ ಈ ಸಂಬಂಧ ನನ್ನ ಹೆತ್ತ ಅಮ್ಮನಿಗಿಂತಲೂ ಹೆಚ್ಚಾ ಅಂತ ಅನಿಸಿದ್ದೂ ಇದೆ..,ಇನ್ನು ಕೆಲವೊಮ್ಮೆ ನನ್ನ ಹೆತ್ತಮ್ಮನ ಮುಂದೆ ಈ ಮತ್ತೊಂದು ಅಮ್ಮ ಯಾವತ್ತೂ ಅಮ್ಮ ಆಗೋಕೇ ಸಾಧ್ಯಾನೇ ಇಲ್ಲ ಅಂತ ಅನಿಸಿದ್ದೂ ಇದೆ....ಆದರೆ ಭಾವನೆಗಳು ಬಿಡೋದಿಲ್ಲ....ಮನಸ್ಸಿನ ಆಳಕ್ಕೆ ಜಿಗಿದು ಕೊರೆಯೋಕೆ ಫ್ರಾರಂಭಿಸಿದೆ...ಮತ್ತೊಂದು ಅಮ್ಮ ಪ್ರತೀ ಸಲಾನೂ ನೆನಪಾಗ್ತಾಳೆ. ಹತ್ತಿರ ಇಲ್ಲ ಅಂತ ಯೋಚನೆ ಮಾಡೋಕು ಸಾಧ್ಯ ಆಗ್ತಾ ಇಲ್ಲ. ಈ ಜೀವ ಒಂಟಿ ಆದ್ರೆ ಒಂದು ಹತ್ತೇ ನಿಮಿಷದಲ್ಲಿ ಈ ಕಣ್ಣು ಒದ್ದೆ ಆಗುತ್ತೆ...ಆ ಅಮ್ಮನ ನೆನಪಾಗುತ್ತೆ...ಇದು ಜಸ್ಟ್ ಸೆಂಟಿಮೆಂಟಾ ಅಂತ ನನ್ನನ್ನು ನಾನೇ ಕೇಳಿದ್ದೂ ಇದೆ...
ಇದೇ ಬ್ಲಾಗ್ನಲ್ಲಿ ಹಿಂದೊಮ್ಮೆ ಮಾನವೀಯ ಸಂಬಂಧಗಳ ಬಗ್ಗೆ ಬರೆದಿದ್ದೆ. ಒಂಟಿಯಾದಾಗ ಆ ಮತ್ತೊಂದು ಅಮ್ಮ ಮಾನವೀಯ ಸಂಬಂಧಾನಾ? ಅಂತ ಪ್ರಶ್ನೆ ಮಾಡಿಕೊಂಡಿದ್ದೆ. ಆದರೆ ಆ ಮತ್ತೊಂದು ಅಮ್ಮ ಈ ಪ್ರಶ್ನೆಗೆ ಉತ್ತರವಾಗಲೇ ಇಲ್ಲ. ಒಮ್ಮೊಮ್ಮೆ ತೀರಾ ನೆನಪಾಗ್ತಾಳೆ ಆ ಮತ್ತೊಂದು ಅಮ್ಮ...ಕೆಲವೊಮ್ಮೆ ಹತ್ತಿರ ಇರೋ ಅಮ್ಮಾನೇ ತುಂಬಾ ಹತ್ತಿರ ಆಗ್ತಾಳೆ....ಒಂಟಿಯಾದಾಗ ಮಾತ್ರ ಆ ಮತ್ತೊಂದು ಅಮ್ಮ ಬಿಡದೇ ಕಾಡ್ತಾಳೆ...ಯಾಕ್ ಹೀಗೆ...ಉತ್ತರ ಸಿಗ್ತಾ ಇಲ್ಲ.
ಸೆನ್ಸಿಟಿವ್, ಸೆಂಟಿಮೆಂಟ್, ತುಂಬಾ ಹಚ್ಕೋಳ್ಳೋದು ಅಂದ್ರೆ ಇದೇನಾ? ಒಂದು ವೇಳೆ ಇದೇ ಹಾಗಿದ್ರೆ ಆ ಮತ್ತೊಂದು ಅಮ್ಮ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯವಾ? ಇಲ್ಲ...ಖಂಡಿತಾ ಇಲ್ಲ...ಆಕೆ ಯಾವತ್ತೂ ನನ್ನ ಅಮ್ಮನ ಸಮಕ್ಕೆ ನಿಲ್ಲೋಕೆ ಸಾಧ್ಯಾನೆ ಇಲ್ಲ. ಆದರೂ...................
ಧ್ವನಿ

Friday, 6 April 2012

ನಮಗೆ ಗೊತ್ತಿರುವುದು ದೂಷಿಸುವುದು ಮಾತ್ರ, ಚಿಂತಿಸುವುದಲ್ಲ!

ನಮಗೆ ಗೊತ್ತಿರುವುದು ದೂಷಿಸುವುದು ಮಾತ್ರ, ಚಿಂತಿಸುವುದಲ್ಲ!

ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದರ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಭದ್ರತೆಗೆ ಸಂಬಂಧಿಸಿ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಭಾರತದ ರಕ್ಷಣಾ ವಿಭಾಗವನ್ನು ಇತರೆ ದೇಶಗಳ ರಕ್ಷಣಾ ವಿಭಾಗಗಳಿಗೆ ಹೋಲಿಸಿ ಈ ವಾಹಿನಿ ಉತ್ತಮವಾಗಿಯೇ ಕಾರ್ಯಕ್ರಮ ನೀಡಿತ್ತು. ಆದರೆ ಮರುದಿನ ಫೇಸ್ಬುಕ್ನಲ್ಲಿ ಈ ವಾಹಿನಿಯ ವಿರುದ್ದವೇ ಕೆಲವರು ಕಿಡಿಕಾರಿದ್ದರು. ಇದನ್ನು ಗಮನಿಸಿದಾಗ ನನಗೆ ಒಂದಂತೂ ಸ್ಪಷ್ಟವಾಯಿತು. ವೈಫಲ್ಯಗಳನ್ನು ಬಿಚ್ಚಿಟ್ಟರೆ ಸಾಮಾನ್ಯ ನಾಗರಿಕನಿಗೂ ಕೋಪ ಬರುತ್ತದೆ ಎನ್ನುವುದು. ಈ ವಾಹಿನಿಯ ಕಾರ್ಯಕ್ರಮವನ್ನು ನಾನೂ ವೀಕ್ಷಿಸಿದ್ದೇನೆ. ಇಲ್ಲಿ ಪ್ರಸಾರಗೊಂಡಿರುವ ಇಂಚಿಂಚು ವಿಚಾರವು ನಮ್ಮ ದೇಶವನ್ನು ಬೆಚ್ಚಿ ಬೀಳಿಸುವಂಥದ್ದು. ಈ ಬಗ್ಗೆ ಫೇಸ್ಬುಕ್ನಂತಹ ಸಾಮಾಜಿಕ ತಾಣದಲ್ಲಿ ಜಾಗೃತಿ ಮೂಡಿಸುವ ಬದಲು ಕೆಲ ವಿಕೃತ ಮನಸ್ಕರು ಅಲ್ಲೂ ಮಾಧ್ಯಮದ ದೂಷಣೆಗಿಳಿದಿದ್ದಾರೆ. ಬಹುಶಃ ಇದರಿಂದಲೋ ಏನೋ ನಮ್ಮ ದೇಶದಲ್ಲಿ ರಾಜಕಾರಣಿಗಳ `ಕೈ ಮೇಲಾಗಿರುವುದು.
ಮಾಧ್ಯಮವೊಂದು ಎಚ್ಚರಿಸುವ ಕೆಲಸ ಮಾಡಿದಾಗ ಈ ಬಗ್ಗೆ ದೇಶದ ನಾಗರಿ ಕರಾಗಿ ನಾವು ಯೋಚಿಸಬೇಕು. ಪ್ರತೀ ವರ್ಷ ಕೋಟ್ಯಂತರ ರುಪಾಯಿ ದೇಶದ ರಕ್ಷಣೆಗೆಂದೇ ಎತ್ತಿಡುವ ಸಕರ್ಾರ ಈ ಹಣವನ್ನು ಏನು ಮಾಡುತ್ತಿದೆ ಎಂದು ಪ್ರಶ್ನಿಸುವ ಬದಲು ಮಾಧ್ಯಮದ ಕಾರ್ಯಕ್ರಮಗಳನ್ನೇ ನಾವಿಂದು ಪ್ರಶ್ನಿಸುತ್ತಿದ್ದೇವೆ. ಹಾಗಂತ ಮಾಧ್ಯಮಗಳು ತಪ್ಪು ಮಾಡುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮೊನ್ನೆಯ ಕಾರ್ಯಕ್ರಮ ದೇಶದ ಜನತೆಯನ್ನು ಎಚ್ಚರಿಸುವ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮವೆನ್ನಬಹುದು. ಒಂದೆರೆಡು ಕಡೆಗಳಲ್ಲಿ ವಾಹಿನಿ  ಸ್ವಲ್ಪ ಅತಿರೇಖ ಎನ್ನುವಂತಹ ಪದಗಳನ್ನು ಬಳಸಿದ್ದನ್ನು ಬಿಟ್ಟರೆ ಭಾರತಕ್ಕೆ ಅವಮಾನವಾಗುವಂತಹ ವಿಚಾರಗಳು ಅಲ್ಲಿರಲಿಲ್ಲ. ಅಲ್ಲದೇ ಕೆಲವರು ಈ ಬಗ್ಗೆ ಚಚರ್ಿಸುವ ಬದಲು ನಮ್ಮಿಂದ ಮಾಧ್ಯಮವನ್ನೇ `ಚಿತ್ರಾನ್ನ ಮಾಡಲು ಸಾಧ್ಯವಿದೆ ಎನ್ನುವ ಮಾತನ್ನು ಈ ತಾಣದಲ್ಲಿ ದಾಖಲಿಸಿದ್ದರು. ನಮಗೆ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷವನ್ನೇ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದ ಮೇಲೆ ಮುಂದೆ ವಿದೇಶಿಯರು ದಾಳಿ ನಡೆಸಿದರೆ ನಮ್ಮಿಂದ ತಡೆಯಲು ಸಾಧ್ಯವೇ? ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಗಳ ಕೆಲ ಕಾರ್ಯಕ್ರಮಗಳು ಅತಿಯಾಗುತ್ತಿದೆ ಎನ್ನುವುದೇನೋ ಸತ್ಯ. ಆದರೆ ಎಲ್ಲವನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡುವುದನ್ನು ಬಿಡಬೇಕಷ್ಟೇ. ಅಷ್ಟಕ್ಕೂ ಮೊನ್ನೆ ಸುದ್ದಿವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮ ಅವರ ಖಾಸಗಿ ಮೂಲಗಳಿಂದ ಬಹಿರಂಗಗೊಂಡದ್ದಲ್ಲ. ಬದಲಾಗಿ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಮೂಲವೊಂದು ಬಿಚ್ಚಿಟ್ಟ ಸತ್ಯ! 
ಇಂದಿಗೂ ಚೀನ ನಮ್ಮ ದೇಶದ ಮೇಲೆ ಒಂದು ರೀತಿಯಲ್ಲಿ ಯುದ್ದ ನಡೆಸುತ್ತಿದೆ. ಚೀನಾದ ಎಲ್ಲಾ ವಸ್ತುಗಳು ಸದ್ದಿಲ್ಲದೆ ನಮ್ಮ ಕೈಗಳಲ್ಲಿ ರಾರಾಜಿಸುತ್ತಿದೆ. ವಿದೇಶಿಗರ ವಸ್ತುಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಅಷ್ಟೇ ಯಾಕೆ ಈ ಚೀನಾ ನಿಮರ್ಿತ ಮೊಬೈಲ್ ಬ್ಯಾಟರಿ ಸ್ಪೋಟಿಸಿ ಎಷ್ಟು ಜನ ಸತ್ತಿಲ್ಲ? ಇದೂ ಒಂದು ರೀತಿಯಲ್ಲಿ ಭಾರತದ ಮೇಲೆ ಚೀನಾ ಸಾರಿದ ಯುದ್ದವೇ ಅಲ್ಲವೇ?! ಚೀನಾ ಈ ವಸ್ತುಗಳನ್ನು ತನ್ನ ದೇಶದಲ್ಲಿ ಅಧಿಕೃತವಾಗಿ ಮಾರಾಟ ಮಾಡುವುದಿಲ್ಲ ಎನ್ನುವುದು ನೆನಪಿರಲಿ! ಆದರೆ ನಮಗೆ ಇದೆಲ್ಲಾ ಅರ್ಥವಾಗಬೇಕಲ್ಲ. ನಮಗೆ ದೂಷಿಸುವುದು ಗೊತ್ತೇ ವಿನಃ ಚಿಂತಿಸುವುದು ಗೊತ್ತಿಲ್ಲ. ಒಂದು ವೇಳೆ ಪ್ರತಿಯೊಬ್ಬ ಭಾರತೀಯನೂ ಚಿಂತಿಸಿದ್ದರೆ 2ಜಿ ಹಗರಣ, ಗಣಿ ಹಗರಣ, ಅಷ್ಟೇ ಯಾಕೆ ಒಂದೇ ಕುಟುಂಬಗಳ ಕೈಯಲ್ಲಿ ಈ ದೇಶದ, ರಾಜ್ಯದ ಆಡಳಿತವನ್ನು ನಾವು ಕೊಡುತ್ತಿರಲಿಲ್ಲ. ಮಾಧ್ಯಮಗಳು ಸತ್ಯ ವಿಚಾರ ಬಿಚ್ಚಿಟ್ಟಾಗ ಅದನ್ನು ವಿರೋಧಿಸಿ ಬುದ್ದಿವಂತರಾಗುವ ಕೆಲವರು ಇದನ್ನೇ ರಾಷ್ಟ್ರ ರಕ್ಷಣೆಯ ಜಾಗೃತಿ ಎಂದು ಯಾಕೆ ಅಂದುಕೊಳ್ಳಬಾರದು?
ಮೊನ್ನೆ ಶಾಸಕರ ಸೆಕ್ಸ್ ವೀಕ್ಷಣೆ ಹಗರಣವನ್ನೂ ಮಾಧ್ಯಮಗಳು ಬಯಲಿಗೆ ತಂದಾಗ ಮಾಧ್ಯಮವನ್ನೇ ದೂಷಿಸಿದವರು ಹೆಚ್ಚಾಗಿದ್ದರು. ಇಲ್ಲಿ ಕೆಲವೊಂದು ಮಾಧ್ಯಮಗಳು ಎಡವಿದೆ ಎನ್ನಬಹುದು. ಆದರೆ ಮೊನ್ನೆಯ ಕಾರ್ಯಕ್ರಮವನ್ನು ದೂಷಿಸಿ ಫೇಸ್ಬುಕ್ ಸಾಮಾಜಿಕ ತಾಣದಲ್ಲಿ (ಕು)ಖ್ಯಾತಿ ಗಳಿಸುವ ಅಗತ್ಯತೆ ಏನಿತ್ತು? ಯಾವುದೇ ಫಲಾಪೇಕ್ಷೆಯಿಲ್ಲದೆ ಅಣ್ಣಾ ಹಜಾರೆ ನಡೆಸಿದ ಸತ್ಯಾಗ್ರಹ ವನ್ನೇ ಟಿವಿಯಲ್ಲಿ ಕಂಡು `ಅಜ್ಜೆರೆಗ್ ಉಂದು ಪೂರಾ ಬೋಡಿತ್ತ್ಂಡಾ?(ಮುದುಕ ನಿಗೆ ಇದೆಲ್ಲಾ ಬೇಕಿತ್ತಾ?) ಎಂದು ಉದ್ಘರಿಸಿದ ನಮ್ಮ ಸಮಾಜ ಮಾಧ್ಯಮ ವರದಿಗೆ ಇನ್ನು ಹೇಗೆ ತಾನೇ ಸ್ಪಂದಿಸಲು ಸಾಧ್ಯ? ಸಕರ್ಾರಿ ಶಾಲೆ ನಕ್ಸಲರನ್ನು ಸೃಷ್ಟಿಸುತ್ತಿದೆ ಎಂಬ ರವಿಶಂಕರ್ ಗುರೂಜಿಯವರ ಮಾತು ಫೇಸ್ಬುಕ್ನಲ್ಲಿ ಟೀಕೆಗೆ ಒಳಪಡಲಿಲ್ಲ. ಅಷ್ಟೇ ಯಾಕೆ ಈ ಬಗ್ಗೆ ಚಚರ್ೆಯೂ ನಡೆಯಲಿಲ್ಲ. ಕಾರಣ ಇವರೊಬ್ಬ ಧಾಮರ್ಿಕ ನಾಯಕ ಎಂಬ ಹಣೆಪಟ್ಟಿ ಕಟ್ಟಿಕೊಂಡವರಲ್ಲವೇ? ಈ ಕಾರಣದಿಂದ ಇವರ ಉಸಾಬರಿಗೆ ಯಾರೊಬ್ಬರೂ ಕೈ ಹಾಕಿಲ್ಲ. ಬಹುಶಃ ಇದೇ ಇರಬೇಕು ವಿಪಯರ್ಾಸ.
ನಿತ್ಯಾನಂದರಂತಹ ಸ್ವಾಮೀಜಿಗಳು ಏನೇ ತಪ್ಪು ಮಾಡಿ ಸಿಕ್ಕಿ ಬಿದ್ದರೂ ಮತ್ತೆ ಅವರ ಪಾದಕ್ಕೆರಗುವ ಈ ಸಮಾಜದಲ್ಲಿ ಬಿಚ್ಚಿಡುವ ಸತ್ಯಕ್ಕೆ, ಪತ್ತೆ ಹಚ್ಚುವ ವೈಫಲ್ಯಗಳಿಗೆ ಬೆಲೆ ಎಲ್ಲಿರುತ್ತದೆ? ನಮ್ಮನ್ನು ನಾವು ತಿದ್ದಿಕೊಳ್ಳುವ ಬದಲು ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಇದು ಹೀಗೆಯೇ ಮುಂದುವರೆಯಲಿ!

                                            ಧ್ವನಿ

Tuesday, 3 April 2012

ನಿಜಕ್ಕೂ ಜೀವನ ಅಂದ್ರೆ ಏನು?


ನಿಜಕ್ಕೂ ಜೀವನ ಅಂದ್ರೆ ಏನು?


`ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ.....ನಡುವೆಲ್ಲೊ ಮೆಲ್ಲಗೆ ಮಾಯವಾದೆಯಾ....  ಈ ಹಾಡಿನ ಟ್ರ್ಯಾಕ್ನ ನೀವೂ ಕೇಳಿರಬಹುದು. ಹುಡುಗರು ಚಿತ್ರದ ಈ ಹಾಡನ್ನು ಹಾಡಿದ್ದು ಸೋನು ನಿಗಮ್. ಆ ಕಂಠಸಿರಿಯೇ ಹಾಗೆ. ಒಮ್ಮೆಗೆ ಎಂಥವರನ್ನು ಆಳವಾದ ಚಿಂತನೆಗೆ ಹಚ್ಚುವಂಥದ್ದು. ಇನ್ನು ಈ ಮೇಲಿನ ಸಾಲು ಒಂದರ್ಥದಲ್ಲಿ ನಮ್ಮ ಜೀವನಕ್ಕೆ ತುಂಬಾ ಅಂದ್ರೆ ತುಂಬಾ ಹತ್ತಿರವಾಗುತ್ತೆ. ಬೇಕಾದ್ರೆ ಒನ್ ಸೆಕೆಂಡ್ ಈ ಹಾಡನ್ನು ಮತ್ತೆ ಕೇಳಿ....
ನಮ್ಮ ಜೀವನದಲ್ಲೂ ಹಾಗೇನೆ ಯಾರೂ ನಮ್ಮ ಜೊತೆ ಬರಲ್ಲ. ಎಲ್ಲೋ ಕೆಲವೊಬ್ಬರೂ ಒಂದೆರೆಡು ಹೆಜ್ಜೆ ಬರ್ತಾರೆ ಅಷ್ಟೇ. ನಮಗೆ ಇಷ್ಟಾನೂ ಆಗ್ತಾರೆ. ಆದರೆ ನಡುವಲ್ಲೆಲ್ಲೋ ಮೆಲ್ಲಗೆ ಮಾಯಾವಾಗ್ತಾರೆ.....
ಆಗೆಲ್ಲಾ ನಾನು ಒಬ್ಬನೇ ಕೂತ್ಕೊಂಡು ಯೋಚನೆ ಮಾಡ್ತೀನಿ.. ನಿಜಕ್ಕೂ ಜೀವನ ಅಂದ್ರೆ ಏನೂ ಅಂತ. ಆದರೆ ಇಲ್ಲೀ ತನಕ ನನ್ನ ಈ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕೇ ಇಲ್ಲ. ಆವಾಗೆಲ್ಲಾ ನಾನು ರವಿಬೆಳೆಗೆರೆಯವರ ಮನಸೇ ಸಿಡಿ ಹಿಡ್ಕೊಂಡು ಒಂದರ್ಧ ಘಂಟೆ ಕೇಳ್ತೀನಿ. ಒನ್ಟೈಮ್ ರಿಲ್ಯಾಕ್ಸ್ ಕೊಡೋಕೆ ಬೆಳಗೆರೆಯವರ ಆ ಸಣ್ಣದೊಂದು ವಾಯ್ಸ್ ಸಾಕು. ಆದ್ರೆ ಎಷ್ಟು ಹೊತ್ತು....ಜಸ್ಟ್ ಒನ್ ಅವರ್..ಟೂ ಅವರ್....ಅಬ್ಬಬ್ಬಾ ಅಂದ್ರೆ ಒಂದು ದಿನ ಅಷ್ಟೇ. ಮತ್ತೆ ದಿನನಿತ್ಯದ ಜಂಜಾಟ ಕಳೆದ ಮೇಲೆ ಮೂಡುವ ಪ್ರಶ್ನೆ ನಿಜಕ್ಕೂ ಜೀವನ ಅಂದ್ರೆ ಏನು?
ನನ್ನ ಜೀವನದಲ್ಲೂ ತುಂಬಾ ಜನ ಕೇರ್ಟೇಕರ್ಗಳು, ಜೀವನವನ್ನು ಅಥೈಸಿದವರು ಬಂದು ಹೋಗಿದ್ದಾರೆ. ಅದರಲ್ಲಿ ನನಗೂ ಒಬ್ಬರು ಗುರು ಅಂತ ಇದ್ದಾರೆ. ಅವರು ಪಕ್ಕಾ ಪ್ರೋಫೆಶನಲ್ ಅಂತ ನಾನ್ ಹೇಳೋದಿಲ್ಲ...ಆ ಥರಾನೂ ಅವ್ರಿಲ್ಲ...ಬಟ್ ಆ ಮನುಷ್ಯನ ಕೆಲವೊಂದು ಮಾತುಗಳು ಮಾತ್ರ ಜೀವನಕ್ಕೆ ತುಂಬಾ ಅಗತ್ಯ ಇದೆ ಅಂತ ಅನಿಸುತ್ತೆ...ಆದ್ರೆ ಅನಿಸೋವಾಗ ಮಾತ್ರ ತುಂಬಾ ಲೇಟಾಗುತ್ತೆ...ಸಮಯ ಬಂದಾಗ ಅವರು ಯಾರೂ ಅಂತ ಹೇಳ್ತೀನಿ....
ಹಾಗಂತ ಅವರ ಮಾತುಗಳನ್ನು ಕೇಳಿದ್ರೂ ಜೀವನ ಅಂದ್ರೆ ಏನೂ ಅನ್ನೋ ಪ್ರಶ್ನೆಗೆ ಕ್ಲೀನ್ ಆ್ಯ
ಂಡ್ ಕ್ಲಿಯರ್ ಉತ್ತರ ಸಿಗೋಲ್ಲ. ನಮ್ಮಲ್ಲೇ ನೋಡಿ.....ಜೀವನ ಅಂದ್ರೆ ಏನೂ ಅಂತ ತಿಳಿಕೊಡೋಕೆ ಅದೆಷ್ಟೂ ಪುಸ್ತಕಗಳಿವೆ, ಆಧ್ಯಾತ್ಮಿಕ ಕೇಂದ್ರಗಳಿವೆ, ಮಹಾನ್ ಮೇಧಾವಿಗಳಿದ್ದಾರೆ ಅಷ್ಟೇ ಯಾಕೆ ಜೀವನವನ್ನು ಅಥೈಸುವುದನ್ನೇ ವೃತ್ತಿಯಾಗಿಸಿದ ಆಪ್ತಸಮಾಲೋಚಕರಿದ್ದಾರೆ! ಇವರೆಲ್ಲಾ ಏನೇ ಹೇಳಿದರೂ ಜೀವನ ಅಂದ್ರೆ ಏನೂ ಅನ್ನೋ ಪ್ರಶ್ನೆಗೆ ಪರಿಪೂರ್ಣ ಉತ್ತರ ಮಾತ್ರ ಸಿಗೋದೇ ಇಲ್ಲ.....!
ಜೀವನದ ಬಗ್ಗೆ ತಿಳಿಸೋ ಪುಸ್ತಕ, ಸಿಡಿ ಏನಾದ್ರೂ ಮಾಕರ್ೆಟ್ಗೆ ಬಂದರೆ ಖರೀದಿಸೋದು ನನ್ನ ಹವ್ಯಾಸ. ಹಾಗಂತ ನಾನೊಬ್ಬನೇ ಓದೋದಿಲ್ಲ. ನನ್ನ ಫ್ರೆಂಡ್ಸ್ಗೂ ಈ ಬಗ್ಗೆ ಹೇಳ್ತೀನಿ. ಒಂದ್ ಸಲ ಬೆಳಗೆರೆಯವರ ಪುಸ್ತಕದ ಬಗ್ಗೆ ಹೇಳ್ತಾ ಹೋದಾಗ ನನ್ನೊಬ್ಬ ಗೆಳೆಯ ಏನಂದ ಗೊತ್ತಾ? ಅವರಿಗೇನೂ ಟೈಮ್ ಇದೆ, ಬೇಕಾದಷ್ಟು ದುಡ್ಡಿದೆ...ಏನ್ ಬೇಕಾದ್ರೂ ಬರೀಬಹುದು ಅಂತ ಕೇರ್ಲೆಸ್ ಆಗಿ ಮಾತನಾಡಿದ. ಒಂದೆರೆಡು ವಾರ ಬಿಟ್ಟು ಅದೇ ಬೆಳಗೆರೆಯವರದ್ದು `ಮನಸೇ ಸಿಡಿ ಹಾಕಿದಾಗ...ಅದೇ ನನ್ನ ಫ್ರೆಂಡ್ ತುಂಬಾ ಸೀರಿಯಸ್ಸಾಗಿ, ಸೈಲೆಂಟಾಗಿ ಕೇಳ್ದಾ ಇದ್ದ..ಈಗ ಪ್ರಶ್ನಿಸುವ ಸರದಿ ನನ್ನದು. ಈಗೇನ್ ಹೇಳ್ತೀಯಾ ಅಂದ್ರೆ.  ಅವನಿಂದ ಬಂದ ಉತ್ತರ `ಸುಮ್ಮನೆ ಕೂತ್ಕೊಂದು ಕೇಳೋದು ಕೆಲವೊಮ್ಮೆ ಅನಿವಾರ್ಯ..! ಆದ್ರೆ ಆತ ಕೊಟ್ಟ ಉತ್ತರವೇ ನನ್ನಲ್ಲಿ ಪ್ರಶ್ನೆ ಹುಟ್ಟಿಹಾಕಿತು. ಹಾಗಂತ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳೋಕೆ ಹೋಗ್ಲಿಲ್ಲ. ಅವರವರ ಅಭಿರುಚಿಗೆ ಬಿಟ್ಟಿದ್ದು ಅಂತ ಸುಮ್ಮನಾದೆ.....
ಆದ್ರೂ ಜೀನ ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಸಿಗಲೇ ಇಲ್ಲ.......!